Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಪ್ರೆಸ್ಟೀಜ್ ಪ್ರಿಮ್ ರೋಸ್ ಹಿಲ್ಸ್ ನಲ್ಲಿ ಯಕ್ಷಗಾನ ಪ್ರದರ್ಶನ | ನವೆಂಬರ್ 22

    November 21, 2025

    ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2025’ | ನವೆಂಬರ್ 23ರಿಂದ 29

    November 21, 2025

    ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ರಿಷಿಕಾ ದೇವಾಡಿಗ ಆಯ್ಕೆ

    November 21, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ರಂಗಶಂಕರದಲ್ಲಿ ಮಕ್ಕಳ ನಾಟಕ ‘ನರಿಗಳಿಗೇಕೆ ಕೋಡಿಲ್ಲ ?’ | ಜನವರಿ 7
    Kannada

    ರಂಗಶಂಕರದಲ್ಲಿ ಮಕ್ಕಳ ನಾಟಕ ‘ನರಿಗಳಿಗೇಕೆ ಕೋಡಿಲ್ಲ ?’ | ಜನವರಿ 7

    January 4, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಸಂಚಾರಿ ಥಿಯೇಟರ್ ಪ್ರಸ್ತುತ ಪಡಿಸುವ ‘ನರಿಗಳಿಗೇಕೆ ಕೋಡಿಲ್ಲ ?’ ಎಂಬ ಮಕ್ಕಳ ನಾಟಕವು ದಿನಾಂಕ 07-01-2023ರಂದು ಬೆಂಗಳೂರಿನ ರಂಗಶಂಕರದಲ್ಲಿ ಮಧ್ಯಾಹ್ನ ಗಂಟೆ 3.30ಕ್ಕೆ ಹಾಗೂ ಸಂಜೆ ಗಂಟೆ 7.30ಕ್ಕೆ ನಡೆಯಲಿದೆ.

    ಐವತ್ತು ಅರವತ್ತು ವರುಷಗಳ ಹಿಂದೆ ಮಕ್ಕಳ ಪುಸ್ತಕ ಎಂಬ ಹೆಸರಿನಲ್ಲಿ ಹೊರಡುತ್ತಿದ್ದ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದ್ದ, ಕುವೆಂಪು ಅವರು ರಚಿಸಿರುವ ಕಥೆ ನರಿಗಳೀಗೇಕೆ ಕೋಡಿಲ್ಲ ? ಎಲ್ಲಾ ಜೀವರಾಶಿಯನ್ನು ತನ್ನ ತೆಕ್ಕೆಯಲ್ಲಿಟ್ಟು ಲಾಲಿಸುವ, ಸಮತೋಲನದಿಂದ ಕಾಪಾಡುವ, ತನ್ನೊಳಗೆ ಕಾರುಣ್ಯ, ಕಾಠಿಣ್ಯ ಎರಡೂ ಇವೆ ಎಂಬುದನ್ನು ಮನದಟ್ಟು ಮಾಡುವ, ಕೊಲ್ಲುವುದಕ್ಕಿಂತಲೂ ಕಾಯುವುದು ಮುಖ್ಯ ಎಂದು ಪಿಸುಮಾತಿನಲ್ಲಿ ಹೇಳುವ ಕತೆ ಇದು. ನಮ್ಮ ಮೇಲೆ ಸವಾರಿ ಮಾಡುವ ಅಹಂಕಾರವನ್ನು ಮುರಿದು ಎಸೆಯಬೇಕಾದ ಬಗ್ಗೆಯೂ ಮಾತನಾಡುವ, ನಿಸರ್ಗದ ತೊಟ್ಟಿಲಲ್ಲಿ ಕ್ರೌರ್ಯ ಇರಬಹುದು. ಆದರೆ ಕುತಂತ್ರಕ್ಕೆ, ಅಹಂಕಾರಕ್ಕೆ ಜಾಗವಿಲ್ಲ ಎನ್ನುವುದನ್ನು ಮನದಟ್ಟು ಮಾಡುವ ಕತೆ ಇದು. ಇದನ್ನು ಮಂಗಳಾ ಎನ್. ಮತ್ತು ಶಾಂತಾ ನಾಗರಾಜ ರಂಗರೂಪಕ್ಕೆ ತಂದಿದ್ದಾರೆ. ಶಶಿಧರ್ ಅಡಪ ಅವರ ವಿನ್ಯಾಸವಿದೆ. ಗಜಾನನ ಟಿ. ನಾಯ್ಕ್ ಅವರ ಸಂಗೀತವಿದೆ. ಮಂಗಳಾ ಎನ್. ನಿರ್ದೇಶನ ಮಾಡಿದ್ದಾರೆ. ಟಿಕೇಟುಗಳು ರಂಗಶಂಕರದ ಕೌಂಟರ್ ನಲ್ಲಿ ಮತ್ತು ಬುಕ್ ಮೈ ಶೋ ನಲ್ಲಿ ಲಭ್ಯವಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಮುಲ್ಕಿಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ | ಜನವರಿ 6
    Next Article ಬಜ್ಪೆಯ ಶ್ರೀ ಶನೈಶ್ಚರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ತಾಳಮದ್ದಳೆ | ಜನವರಿ 6
    roovari

    Add Comment Cancel Reply


    Related Posts

    ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2025’ | ನವೆಂಬರ್ 23ರಿಂದ 29

    November 21, 2025

    ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ‘ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ

    November 18, 2025

    ವಿರಾಜಪೇಟೆಯಲ್ಲಿ ‘ನುಡಿ ಉತ್ಸವ 2025’ ಲಾಂಛನ ಬಿಡುಗಡೆ

    November 13, 2025

    ಬೆಸೆಂಟ್ ಹಿರಿಯ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ವಚನ ಸಂಭ್ರಮ

    November 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.