Subscribe to Updates

    Get the latest creative news from FooBar about art, design and business.

    What's Hot

    ಆಳ್ವಾಸ್ ರಂಗ ತಂಡಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 10

    May 31, 2025

    ಮಂಗಳೂರಿನಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ‘ನೃತ್ಯ, ಗಾನ ವೈಭವ’

    May 31, 2025

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಾಸರಗೋಡಿನ ಶ್ರೀ ಎಡನೀರು ಮಠದಲ್ಲಿ ಸಂಪನ್ನಗೊಂಡ ‘ನಾಟ್ಯದಾಸೋಹಂ’
    Bharathanatya

    ಕಾಸರಗೋಡಿನ ಶ್ರೀ ಎಡನೀರು ಮಠದಲ್ಲಿ ಸಂಪನ್ನಗೊಂಡ ‘ನಾಟ್ಯದಾಸೋಹಂ’

    September 4, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಕಾಸರಗೋಡು : ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠ ಕಾಸರಗೋಡು ಇಲ್ಲಿನ ಸ್ವಾಮೀಜಿಯವರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ  ಚತುರ್ಥ ಚಾತುರ್ಮಾಸ್ಯದ ಅಂಗವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕರ್ನಾಟಕದ ಪ್ರತಿಷ್ಟಿತ ನೃತ್ಯ ಗುರುಗಳು ಹಾಗೂ ನೃತ್ಯಕಲಾವಿದರ ಒಗ್ಗೂಡುವಿಕೆಯ ‘ನಾಟ್ಯದಾಸೋಹಂ’ ಭರತನಾಟ್ಯ ಕಾರ್ಯಕ್ರಮ ದಿನಾಂಕ 29 ಆಗಸ್ಟ್ 2024ರ ಗುರುವಾರದಂದು ನಡೆಯಿತು.
    ಹರಿದಾಸರ ರಚನೆಯನ್ನು ಆಧರಿಸಿದ ವಿಶೇಷ ಆಯೋಜನೆಯ ಪ್ರದರ್ಶನ ಇದಾಗಿದ್ದು, ಶ್ರೀಪಾದರಾಯರು,ವ್ಯಾಸತೀರ್ಥರು, ವಾದಿರಾಜರು, ರಾಘವೇಂದ್ರ ಸ್ವಾಮಿ, ಪುರಂದರದಾಸರು, ಕನಕದಾಸರು, ವಿಜಯದಾಸರು ಹಾಗೂ ಜಗನ್ನಾಥದಾಸರುಗಳ ಕೃತಿಯನ್ನು ಆಯ್ಕೆ ಮಾಡಿಕೊಂಡು ಅವರ ಕಾಲಘಟ್ಟಕ್ಕೇ ಅನುಕ್ರಮವಾಗಿಯೇ ಇಲ್ಲಿ  ಪ್ರದರ್ಶಿಸಲಾಯಿತು. ನೃತ್ಯ ಪ್ರದರ್ಶನದಲ್ಲಿ ಕಲಾವಿದರುಗಳಾಗಿ ಕರ್ನಾಟಕ ಕಲಾಶ್ರೀ ಶ್ರೀಮತಿ ವಿದುಷಿ ಶಾರದಾಮಣಿಶೇಖರ್, ಕರ್ನಾಟಕ ಕಲಾಶ್ರೀ  ರಾಜಶ್ರೀ ಉಳ್ಳಾಲ, ವಿದ್ಯಾಶ್ರೀ ರಾಧಾಕೃಷ್ಣ, ಮುಂಜುಳಾ ಸುಬ್ರಹ್ಮಣ್ಯ, ಸಾಗರ್ ತುಮಕೂರು, ರಾಧಿಕಾ ಶೆಟ್ಟಿ,  ಉನ್ನತ್ ಜೈನ್ ಹಾಸನ ಹಾಗೂ ಮಂಜರೀ ಚಂದ್ರ ಪುಷ್ಪರಾಜ್ ಇವರುಗಳು ಭಾಗವಹಿಸಿದ್ದರು. ಮಂಗಳೂರಿನ ‘ನೃತ್ಯಾಂಗನ್’ ಸಂಸ್ಥೆಯ ನಿರ್ದೇಶಕಿಯಾದಂತಹ ರಾಧಿಕಾ ಶೆಟ್ಟಿಯವರ ಪರಿಕಲ್ಪನೆಯಲ್ಲಿ ಮೂಡಿಬಂದ ಈ ‘ನಾಟ್ಯದಾಸೋಹಂ‌’ ಪ್ರಾಯೋಜಿಸಿದವರು ಪುತ್ತೂರು ‘ನಾಟ್ಯರಂಗ’ದ ನಿರ್ದೇಶಕಿಯಾದ ಮಂಜುಳಾ ಸುಬ್ರಹ್ಮಣ್ಯ.  ವಿವಿಧ ನೃತ್ಯ ಗುರುಗಳ, ನೃತ್ಯಕಲಾವಿದರ ಈ ಅಪರೂಪದ ಸಂಯೋಜನೆಯ ನೃತ್ಯ ಪ್ರದರ್ಶನ ನೋಡುಗರಿಗೆ ವಿಶೇಷ ಅನುಭವವನ್ನು ನೀಡಿತ್ತು. ಕಾರ್ಯಕ್ರಮದ ಬಳಿಕ  ಸಚ್ಚಿದಾನಂದ ಭಾರತೀ ಶ್ರೀಗಳು ಕಲಾವಿದರುಗಳಿಗೆ ಅನುಗ್ರಹ ಫಲ ಮಂತ್ರಾಕ್ಷತೆಯನ್ನು ನೀಡಿ ಆಶೀರ್ವದಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಡಾ.ತಲ್ಲೂರು ಶಿವರಾಮ ಶೆಟ್ಟರಿಗೆ ‘ಬಂಟ ಕುಲ ರತ್ನ’ ಬಿರುದು ಪ್ರದಾನ ಹಾಗೂ ಸನ್ಮಾನ
    Next Article ಗೋವಿಂದದಾಸ ಕಾಲೇಜಿನ ಪುಸ್ತಕ ಪ್ರೀತಿ ಪರಿಚಯ ಕಾರ್ಯಕ್ರಮದಲ್ಲಿ ‘ಜಪಾನೀ ಪ್ಲೇಟ್’
    roovari

    Comments are closed.

    Related Posts

    ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ‘ಯಕ್ಷಧ್ರುವ ಪಟ್ಲ ದಶಮ ಸಂಭ್ರಮ 2025’ | ಜೂನ್ 01

    May 28, 2025

    ಕೊಲ್ಯದ ನಾಟ್ಯನಿಕೇತನದ ನೃತ್ಯಾಂಗಣದಲ್ಲಿ ಸರಣಿ-ಮಾಲಿಕೆ 16 ‘ನಾಟ್ಯ ಮೋಹನ ನವತ್ಯುತ್ಸಹ’ | ಮೇ 28

    May 27, 2025

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025

    ನೃತ್ಯ ವಿಮರ್ಶೆ | ನಯನ ಮನೋಹರ ನೃತ್ತಾಭಿನಯ ಸಂವೃತಳ ರಮ್ಯ ನರ್ತನ

    May 22, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.

    Notifications