Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ಶಾಸ್ತ್ರೀಯ ಶೈಲಿಯ ವಿಶೇಷ ಕಲಾವಿದ ರಥ ಶಿಲ್ಪಿ ಪರಮೇಶ್ವರಾಚಾರ್ಯ

    June 24, 2025

    ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ಮತ್ತು ಸಂಗೀತ ದಿನಾಚರಣೆ

    June 23, 2025

    ಮಂಗಳೂರಿನ ಅಮೃತ ಕಾಲೇಜಿನಲ್ಲಿ ತುಳು ನಾಟಕ ಕಾರ್ಯಾಗಾರ | ಜೂನ್ 24

    June 23, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ನಿದ್ರಾನಗರಿ’ ನಾಟಕದ ಲೇಖಕಿ ಶ್ರೀಮತಿ ಕಾತ್ಯಾಯಿನಿ ಕುಂಜಿಬೆಟ್ಟು ನಾಟಕದ ಬಗ್ಗೆ ಇವರ ಅನಿಸಿಕೆ
    Article

    ನಿದ್ರಾನಗರಿ’ ನಾಟಕದ ಲೇಖಕಿ ಶ್ರೀಮತಿ ಕಾತ್ಯಾಯಿನಿ ಕುಂಜಿಬೆಟ್ಟು ನಾಟಕದ ಬಗ್ಗೆ ಇವರ ಅನಿಸಿಕೆ

    May 7, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಲಾವಣ್ಯ (ರಿ) ಬೈಂದೂರು ಮಕ್ಕಳ ತಂಡದ ಮುದ್ದು ಮಕ್ಕಳು ನಾನು ಬರೆದಿರುವ ‘ನಿದ್ರಾನಗರಿ’ ನಾಟಕವನ್ನು ದಿನಾಂಕ 01-05-2024ರಂದು ಬೈಂದೂರಲ್ಲಿ ಅತ್ಯುತ್ತಮವಾಗಿ ಅಭಿನಯಿಸಿದರು. ಲಾವಣ್ಯ ಬೈಂದೂರು ತಂಡದ ಗಣೇಶ್ ಕಾರಂತರ ಸಮರ್ಥ ನಿರ್ದೇಶನದಲ್ಲಿ ಪುಟಾಣಿ ಮಕ್ಕಳು ವಿಶಿಷ್ಟ ಪ್ರತಿಭೆಯಿಂದ ಅಭಿನಯಿಸಿ ಪ್ರೇಕ್ಷಕರ ಮನೆಗೆದ್ದರು. ಪುಟ್ಟ ಚಿಕುಣಿ ಮಗುವಿಂದ ಹಿಡಿದು 13-14 ವರ್ಷದ ಮಕ್ಕಳ ತಂಡ ಇದಾಗಿದ್ದು, ಪ್ರತಿಯೊಂದು ಮಗುವಿನ ಸ್ಪಷ್ಟ ಕನ್ನಡ ಮಾತು, ತುಂಟತನದ ಜೀವಜೀವ ಆಂಗಿಕ ಅಭಿನಯ, ಅತ್ಯುತ್ತಮ ಬೆಳಕನ್ನು ಬಳಸಿಕೊಂಡ ರೀತಿ ವಿಶೇಷವಾದದ್ದು. ನಾಟಕಕ್ಕೆ ಪೂರಕವಾದ ರಂಗಸಂಗೀತ ಹಾಗೂ ಮಕ್ಕಳಿಗೆ ಇಷ್ಟವಾಗುವ ಬಣ್ಣ ಬಣ್ಣದ ವೇಷಭೂಷಣ, ರಂಗಪರಿಕರ ಚಂದಮಾಮದ ಬಣ್ಣದ ಚಿತ್ರಗಳಂತೆ ಅದ್ಭುತ ಮಾಂತ್ರಿಕ ಲೋಕದಲ್ಲಿ ಹಿರಿಯರೂ ಮಕ್ಕಳಾಗಿ ಮೈಮರೆಯುವಂತೆ ಮಾಡಿತು. ಮಾಟಗಾತಿ, ಕಾಕಿ, ಕಿನ್ನರಿಯರು, ರಾಜ-ರಾಣಿ, ರಾಜಕುಮಾರ ಮುಂತಾದ ಕೇಂದ್ರ ಪಾತ್ರಗಳು ಮಾತ್ರವಲ್ಲ ಪ್ರತಿಯೊಂದು ಚಿಕ್ಕ ಪಾತ್ರವೂ ಮನದಲ್ಲಿ ನಿಂತು ನಾಟಕದ ಯಶಸ್ಸಿಗೆ ಕಾರಣವಾಯಿತು.

    ಸುಮಾರು 14 ವರ್ಷಗಳ ಹಿಂದೆ ನಾನು ಬರೆದ ನಾಟಕ ‘ನಿದ್ರಾನಗರಿ’. ಈ ಮಕ್ಕಳ ನಾಟಕವನ್ನು ಕನ್ನಡದ ಹಲವು ಶ್ರೇಷ್ಠ ನಿರ್ದೇಶಕರು ನಿರ್ದೇಶಿಸಿದ್ದಾರೆ. ಅಮೇರಿಕಾದಲ್ಲಿ ನೆಲೆಸಿರುವ ಕನ್ನಡಿಗ ಮಕ್ಕಳು ಕೂಡ ಅಭಿನಯಿಸಿದ್ದಾರೆ. ದಿನಾಂಕ 05-05-2024ರಂದು ಮೈಸೂರು ರಂಗಾಯಣದ ಶಿಬಿರದ ಮಕ್ಕಳು ‘ನಿದ್ರಾನಗರಿ’ ಎಂಬ ನಾಟಕವನ್ನು ಅಭಿವ್ಯಕ್ತಿಸಲಿದ್ದಾರೆ. ಮಕ್ಕಳ ಚೈತನ್ಯ, ಲವಲವಿಕೆ, ಜೀವಂತಿಕೆ, ತುಂಟತನ, ಪ್ರತಿಭೆ ನಾಟಕ ಬರೆದದ್ದು ಸಾರ್ಥಕವೆನಿಸುವಂತೆ ಮಾಡುತ್ತದೆ. ಬರೆದ ನಾಟಕ ಪ್ರದರ್ಶನವಾದರೆ ಮಾತ್ರ ಅದಕ್ಕೆ ಜೀವ. ನಾಟಕ ನಿರ್ದೇಶಕರಿಗೆ, ರಂಗದ ಹಿಂದೆ ಮುಂದೆ ಪರಿಶ್ರಮಿಸುವ ಕಲಾವಿದರಿಗೆ, ಅಭಿನಯಿಸುವ ರಂಗದ ಪುಟಾಣಿ ದೇವತೆಗಳಿಗೆ ಅಭಿನಂದನೆಗಳು.

    Share. Facebook Twitter Pinterest LinkedIn Tumblr WhatsApp Email
    Previous Article‘ರಂಗೋತ್ಸವ’ದ ಸಮಾರೋಪ ಸಮಾರಂಭ ಮತ್ತು ‘ರಂಗ ಸ್ವರೂಪ ಪ್ರಶಸ್ತಿ’ ಪ್ರದಾನ
    Next Article ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನ – ಮೇ 5
    roovari

    Add Comment Cancel Reply


    Related Posts

    ವಿಶೇಷ ಲೇಖನ – ಶಾಸ್ತ್ರೀಯ ಶೈಲಿಯ ವಿಶೇಷ ಕಲಾವಿದ ರಥ ಶಿಲ್ಪಿ ಪರಮೇಶ್ವರಾಚಾರ್ಯ

    June 24, 2025

    ಮಂಗಳೂರಿನ ಅಮೃತ ಕಾಲೇಜಿನಲ್ಲಿ ತುಳು ನಾಟಕ ಕಾರ್ಯಾಗಾರ | ಜೂನ್ 24

    June 23, 2025

    ಬೆಂಗಳೂರಿನಲ್ಲಿ ರಂಗ ನಟನಾ ಶಿಬಿರ ಮತ್ತು ಸಂಸ್ಕೃತಿ ನೆಲೆಯ ಕಾರ್ಯಾಗಾರ | ಜುಲೈ 1ರಿಂದ 17

    June 23, 2025

    Book review | ‘The Black Eagle’

    June 23, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.