Subscribe to Updates

    Get the latest creative news from FooBar about art, design and business.

    What's Hot

    ಕಲಾಕುಲ್ ಕೊಂಕಣಿ ನಾಟಕ ರೆಪರ್ಟರಿಗೆ ಅರ್ಜಿ ಆಹ್ವಾನ

    May 10, 2025

    ಮಾಣಿಕ್ಯ ಪ್ರಕಾಶನದ 2025ನೇ ಸಾಲಿನ ರಾಜ್ಯಮಟ್ಟದ ವಿವಿಧ ದತ್ತಿ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನ

    May 10, 2025

    ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಸಿರಿಪರ್ಬ- 2025’ ತುಳು ಸಾಂಸ್ಕೃತಿಕ ಉತ್ಸವ

    May 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಯಕ್ಷಗಾನ ಕಲಿಯಲು ಬಂದ ಕಾಶಿಯ ತಂಡ
    Yakshagana

    ಯಕ್ಷಗಾನ ಕಲಿಯಲು ಬಂದ ಕಾಶಿಯ ತಂಡ

    June 23, 2024Updated:June 22, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ)ಯ ವಾರಣಾಸಿ ಕೇಂದ್ರದ 20 ಮಂದಿಯ ತಂಡವು ಯಕ್ಷಗಾನ ಕಲಿಕೆಗಾಗಿ ಉಡುಪಿಗೆ ಆಗಮಿಸಿದ್ದಾರೆ. ತಂಡದಲ್ಲಿ 11 ಮಂದಿ ಹುಡುಗರು ಮತ್ತು 9 ಮಂದಿ ಹುಡುಗಿಯರಿದ್ದಾರೆ. ಡೆಲ್ಲಿ, ಮಣಿಪುರ, ಬಿಹಾರ, ನಾಗಾಲ್ಯಾಂಡ್, ಜಾರ್ಖಂಡ್, ಛತ್ತೀಸ್‌ಗಡ, ಉತ್ತರ ಪ್ರದೇಶ ಮೊದಲಾದ ರಾಜ್ಯಗಳ ವಿದ್ಯಾರ್ಥಿಗಳು ಈ ತಂಡದಲ್ಲಿದ್ದಾರೆ.


    ಇವರು ಉಡುಪಿಯ ಅದಮಾರು ಮಠದ ಅತಿಥಿಗೃಹದಲ್ಲಿ ತಂಗಿದ್ದು, 04-06-2024ರಿಂದ ಯಕ್ಷಗಾನದ ವಿವಿಧ ಮಟ್ಟು, ತಿಟ್ಟುಗಳನ್ನು ಕಲಿಯುತ್ತಿದ್ದಾರೆ. ಯಕ್ಷಗುರು ಉಡುಪಿಯ ಯಕ್ಷಸಂಜೀವ ಯಕ್ಷಗಾನ ಕೇಂದ್ರದ ಬನ್ನಂಜೆ ಸಂಜೀವ ಸುವರ್ಣ ಇವರಿಗೆ ಯಕ್ಷ ತರಬೇತಿ ನೀಡುತ್ತಿದ್ದಾರೆ. ಪೂರ್ಣಪ್ರಜ್ಞ ಯಕ್ಷಗಾನ ಕೇಂದ್ರ ಪೂರಕ ಸಹಕಾರ ನೀಡುತ್ತಿದೆ.
    ಯಕ್ಷಗಾನ ಮಟ್ಟುಗಳನ್ನು ಅಭ್ಯಸಿಸಿರುವ ಇವರು ಪೂರ್ವರಂಗ, ತಾಳಗಳು, ಕುಣಿತ ಇತ್ಯಾದಿಗಳನ್ನು ಕಲಿಯುತ್ತಿದ್ದಾರೆ. ಯಕ್ಷಗಾನದ ಸುಮಾರು 15 ರಾಗಗಳನ್ನು ಕಲಿತಿದ್ದಾರೆ. ಸಂಗೀತ, ನೃತ್ಯ ಇತ್ಯಾದಿಗಳ ತಳಸ್ಪರ್ಷಿ ಜ್ಞಾನ ಹೊಂದಿದ್ದು ಈ ವಿದ್ಯಾರ್ಥಿಗಳು ಯಕ್ಷಗಾನವನ್ನು ಚೆನ್ನಾಗಿ ಅಭ್ಯಸಿಸುವ ಈ ವಿದ್ಯಾರ್ಥಿಗಳ ಜೊತೆಗೆ ಕೇಂದ್ರದ ನಿರ್ದೇಶಕ ಪ್ರವೀಣ್ ಗುಂಜನ್ ಇದ್ದಾರೆ.


    ಯಕ್ಷಗಾನ ತರಬೇತಿಯಲ್ಲಿ ‘ಏಕಲವ್ಯ’ ಹಿಂದಿ ಯಕ್ಷಗಾನವನ್ನು ಅಭ್ಯಸಿಸಿದ್ದು, ಮೂಲತಃ ಹೊಸ್ತೋಟ ಮಂಜುನಾಥ ಭಾಗವತರ ಪ್ರಸಂಗವನ್ನು ಶೋಭಾ ಆ‌ರ್. ತಂತ್ರಿ ಮತ್ತು ಪ್ರಭಾತಾ ಪಾಟೀಲ್ ಹಿಂದಿಗೆ ಅನುವಾದಿಸಿದ್ದಾರೆ. ಭಾಗವತಿಕೆ ಮತ್ತು ಅರ್ಥಗಾರಿಕೆ ಎಲ್ಲವೂ ಹಿಂದಿಯಲ್ಲೇ ಇದೆ. ಇದರ ಪ್ರದರ್ಶನವನ್ನು ದಿನಾಂಕ 25-06-2024 ರಂದು ಉಡುಪಿಯ ಪೂರ್ಣಪ್ರಜ್ಞ ಸಭಾಂಗಣದಲ್ಲಿ ಹಾಗೂ 26-06-2024 ರಂದು ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಮೂರು ಜಿಲ್ಲೆಗಳ ಜನಪದ ನೃತ್ಯ ಸ್ಪರ್ಧೆ | ಆಗಸ್ಟ್ 15
    Next Article ಧಾರವಾಡದ ಗಾಯತ್ರಿ ಸಭಾ ಭವನದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ
    roovari

    Add Comment Cancel Reply


    Related Posts

    ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರದಲ್ಲಿ ತಾಳಮದ್ದಳೆ

    May 7, 2025

    ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಪಾರ್ತಿಸುಬ್ಬ ವಿರಚಿತ ‘ಪಂಚವಟಿ’ ಯಕ್ಷಗಾನ ತಾಳಮದ್ದಳೆ

    May 7, 2025

    ಕನ್ನರ್ಪಾಡಿಯಲ್ಲಿ ನೂತನ ‘ಶ್ರೀ ಜಯದುರ್ಗಾ ಪರಮೇಶ್ವರಿ ಯಕ್ಷಗಾನ ಕಲಾಮಂಡಳಿ’ ಉದ್ಘಾಟನೆ

    May 6, 2025

    ಪರಿಚಯ ಲೇಖನ | ‘ಬೆಳೆಯುವ ಯಕ್ಷಸಿರಿ’ ಸಚಿನ್ ಶೆಟ್ಟಿ ನಾಗರಕೊಡಿಗೆ

    May 6, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.