Subscribe to Updates

    Get the latest creative news from FooBar about art, design and business.

    What's Hot

    ಪಿಲಿಕುಳದಲ್ಲಿ ಡಾ. ಹರಿಕೃಷ್ಣ ಪುನರೂರು ಅಭಿವಂದನ ಸಮಾರಂಭ

    May 12, 2025

    ಮಣಿ ಕೃಷ್ಣಸ್ವಾಮಿ ಅಕಾಡೆಮಿಯಿಂದ ಸಂಗೀತ ಕಾರ್ಯಾಗಾರ | ಮೇ 24 ಮತ್ತು 25

    May 12, 2025

    ಡಾ. ಸುಷ್ಮಾ ಎಸ್.ವಿ.ಯವರಿಗೆ ‘ಗೌರಿ ಸುಂದರ್’ ವಾರ್ಷಿಕ ಪ್ರಶಸ್ತಿ ಪ್ರದಾನ

    May 12, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ನೃತ್ಯಾಂತರಂಗ ಸರಣಿಗಳಲ್ಲಿ ರಂಜಿಸಿದ 2ನೇ ದಿನದ ‘ವರ್ಣಿಕ’
    Bharathanatya

    ನೃತ್ಯಾಂತರಂಗ ಸರಣಿಗಳಲ್ಲಿ ರಂಜಿಸಿದ 2ನೇ ದಿನದ ‘ವರ್ಣಿಕ’

    July 2, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಪುತ್ತೂರು : ಭರತನಾಟ್ಯದಲ್ಲಿ ಪ್ರಮುಖವಾದ ನೃತ್ಯಬಂಧವಾದ ಪದವರ್ಣಗಳ ಮೂಲ ಆಶಯವನ್ನು ಜಾಗೃತಗೊಳಿಸಲು ಹಾಗೂ ಪದವರ್ಣವನ್ನು ವೀಕ್ಷಿಸಲು ಬೇಕಾಗುವ ತಾಳ್ಮೆಯನ್ನು ಹೆಚ್ಚಿಸಲು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯು ತನ್ನ ಸರಣಿ ಕಾರ್ಯಕ್ರಮ ‘ನೃತ್ಯಾಂತರಂಗ’ದಲ್ಲಿ ಈ ಹೊಸ ಯೋಜನೆಯೊಂದಿಗೆ ‘ವರ್ಣಿಕ’ ಎಂಬ ಶೀರ್ಷಿಕೆಯಡಿ ಎರಡು ಸರಣಿಗಳಲ್ಲಿ ಐದು ಪದವರ್ಣಗಳನ್ನು ಪ್ರಸ್ತುತಪಡಿಸಿತು.

    ದಿನಾಂಕ 09-06-2024ರಂದು ಪ್ರಸ್ತುತಗೊಂಡ ‘ವರ್ಣಿಕ- 2’ರಲ್ಲಿ ಮೊದಲಿಗೆ ಸಂಸ್ಥೆಯ ವಿದ್ಯಾರ್ಥಿಗಳಾದ ಕ್ಷಮಾ ರೈ, ಸಾನ್ವಿ ಆನಂದ್, ಜೀವಿಕ ಕಜೆ, ಕ್ಷಮಾ ಕೆ., ಅಪೇಕ್ಷಾ, ಧ್ರುವಿ, ಶ್ರಾವಣಿ, ಸಾನ್ವಿ ಡಿ. ಇವರಿಂದ ಪ್ರಾರ್ಥನೆ ನಡೆಯಿತು. ಹಿರಿಯ ವಿದ್ಯಾರ್ಥಿನಿ ಶ್ರೀಮತಿ ತೇಜಸ್ವಿ ಅಂಬೆಗಲ್ಲು ನಿರೂಪಣೆ ಮತ್ತು ಗಿರೀಶ್ ಕುಮಾರ್ ಶಂಖನಾದ ಹಾಗೂ ಪ್ರೀತಿಕಲಾ ಓಂಕಾರ ನಾದ ಮಾಡಿದರು. ಅಭ್ಯಾಗತರಾದ ಡಾ. ನಿರೀಕ್ಷಾ ಶೆಟ್ಟಿ ದೀಪ ಬೆಳಗುವ ಮೂಲಕ ಉದ್ಘಾಟನೆಗೈದರು. ಕುಮಾರಿ ಮಾತಂಗಿ ಪಂಚಾಂಗ ಶ್ರವಣ ಮಾಡಿದರು. ಕುಮಾರಿ ನಿನಾದ ಎಂ.ಎನ್. ಕಲಾವಿದರನ್ನು ಹಾಗೂ ಕುಮಾರಿ ಮಂದಿರಾ ಕಜೆ ಅಭ್ಯಾಗತರನ್ನು ಪರಿಚಯಿಸಿದರು.

    ಮೊದಲ ವರ್ಣ ವಿದುಷಿ ಅಕ್ಷತಾ ಕೆ. ಇವರು ಪೂರ್ವಿಕಲ್ಯಾಣಿರಾಗದ ಪದವರ್ಣ, ಕಲಾವಿದೆ ವಿದುಷಿ ಅಪೂರ್ವಗೌರಿ ದೇವಸ್ಯ ಭೈರವಿರಾಗದ ಪದವರ್ಣ ಮತ್ತು ಗುರು ವಿದ್ವಾನ್ ದೀಪಕ್ ಕುಮಾರ್ ನಾಟಕುರುಂಜಿರಾಗದ ಪದವರ್ಣ ಪ್ರಸ್ತುತಪಡಿಸಿದರು. ಹಿಮ್ಮೇಳದಲ್ಲಿ ನಟುವಾಂಗದಲ್ಲಿ ಗುರು ವಿದ್ವಾನ್ ದೀಪಕ್ ಕುಮಾರ್, ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ, ಮೃದಂಗದಲ್ಲಿ ಶ್ರೀ ಚಂದ್ರಶೇಖರ ಗುರುವಾಯನಕೆರೆ ಹಾಗೂ ಪಿಟೀಲಿನಲ್ಲಿ ಕುಮಾರಿ ತನ್ಮಯಿ ಉಪ್ಪಂಗಳ ಸಹಕರಿಸಿದ್ದರು.

    ಅಭ್ಯಾಗತರಾದ ಮಂಗಳೂರಿನ ದೇರಳೆಕಟ್ಟೆಯ ಕೆ.ಎಸ್. ಹೆಗ್ಡೆ ಇನ್ಟಿಟ್ಯೂಟಿನ ಉಪನ್ಯಾಸಕಿ ಹಾಗೂ ಬಿ.ಸಿ. ರೋಡಿನ ಶ್ರೀ ದುರ್ಗಾ ಡೆಂಟಲ್ ಕ್ಲಿನಿಕ್ ನ ಡಾ. ನಿರೀಕ್ಷಾ ಶೆಟ್ಟಿಯವರು ನೃತ್ಯವು ಯಾವ ರೀತಿಯಲ್ಲಿ ಜೀವನದಲ್ಲಿ ಶಿಸ್ತು ನೀಡುತ್ತದೆ ಹಾಗೂ ಇಂದಿನ ಒತ್ತಡದ ಯುಗದಲ್ಲಿ ಮಾನಸಿಕ ಹಾಗೂ ಶಾರೀರಿಕ ಸ್ವಾಸ್ಥ್ಯ ಉಳಿಸುವಲ್ಲಿ ಸಹಾಯಕವಾಗುತ್ತದೆ ಎಂಬುದಾಗಿ ಕಲೆಯ ಮಹತ್ವವನ್ನು ತಿಳಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಅರ್ಕುಳದ ಶ್ರೀ ರಾಮ ಪ್ರೌಢ ಶಾಲೆಯಲ್ಲಿ ಯಕ್ಷಗಾನ ತರಬೇತಿಯ ಉದ್ಘಾಟನಾ ಕಾರ್ಯಕ್ರಮ
    Next Article ಯಕ್ಷಧ್ರುವ ಪಟ್ಲ ಫೌಂಡೇಶನ್ ಕಲಾವಿದರಿಂದ ಅಮೇರಿಕಾದಲ್ಲಿ ಯಕ್ಷಗಾನ ಅಭಿಯಾನ | ಜುಲೈ 9ರಿಂದ
    roovari

    Add Comment Cancel Reply


    Related Posts

    ಮಣಿ ಕೃಷ್ಣಸ್ವಾಮಿ ಅಕಾಡೆಮಿಯಿಂದ ಸಂಗೀತ ಕಾರ್ಯಾಗಾರ | ಮೇ 24 ಮತ್ತು 25

    May 12, 2025

    ಡಾ. ಸುಷ್ಮಾ ಎಸ್.ವಿ.ಯವರಿಗೆ ‘ಗೌರಿ ಸುಂದರ್’ ವಾರ್ಷಿಕ ಪ್ರಶಸ್ತಿ ಪ್ರದಾನ

    May 12, 2025

    ಶ್ರೀ ನಾಟ್ಯಾಂಜಲಿ ಕಲಾ ಮಂದಿರದಲ್ಲಿ ‘ನಲ್ವತ್ತರ ನಲಿವು -11’ | ಮೇ 13

    May 12, 2025

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.