Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕುಂದಾಪುರದ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ‘ಪರಂಪರಾ’ ಕಲಾಕೃತಿಗಳ ಕಲಾ ಪ್ರದರ್ಶನ | ಜನವರಿ 12ರಿಂದ 14
    Artist

    ಕುಂದಾಪುರದ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ‘ಪರಂಪರಾ’ ಕಲಾಕೃತಿಗಳ ಕಲಾ ಪ್ರದರ್ಶನ | ಜನವರಿ 12ರಿಂದ 14

    January 10, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕುಂದಾಪುರ : ತ್ರಿವರ್ಣ ಕಲಾ ತರಗತಿ ಕುಂದಾಪುರ ಮತ್ತು ಮಣಿಪಾಲ ಇದರ ವತಿಯಿಂದ ದಿನಾಂಕ 12 ಜನವರಿ 2025ರ ಆದಿತ್ಯವಾರ ಬೆಳಿಗ್ಗೆ 10-00 ಗಂಟೆಗೆ ಕುಂದಾಪುರದ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ‘ಪರಂಪರಾ’ ಕಲಾಕೃತಿಗಳ ಕಲಾ ಪ್ರದರ್ಶನವನ್ನು ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ವಾಸುದೇವ ಯಡಿಯಾಳರವರು ಉದ್ಘಾಟಿಸಲಿದ್ದಾರೆ. ಅತಿಥಿ ಅಭ್ಯಾಗತರಾಗಿ ಉಡುಪಿಯ ಚಿತ್ರಕಲಾ ಮಂದಿರ ಕಲಾ ವಿದ್ಯಾಲಯದ ನಿರ್ದೇಶಕರಾದ ಡಾ. ಯು. ಸಿ. ನಿರಂಜನ್, ಕುಂದಾಪುರದ ನಿವೃತ್ತ ಪ್ರಾಂಶುಪಾಲರಾದ ಡಾ. ಜಿ.ಹೆಚ್. ಪ್ರಭಾಕರ್ ಶೆಟ್ಟಿ ಮತ್ತು ಶ್ರೀ ವೆಂಕಟರಮಣ ಪಿ.ಯು. ಕಾಲೇಜಿನ ಸಂಸ್ಕೃತ ಉಪನ್ಯಾಸಕಿ ಶ್ರೀಮತಿ ಮಮತಾ ರೈ ಉಪಸ್ಥಿತರಿರುವರು.

    ಕುಂದಾಪುರ ಮತ್ತು ಮಣಿಪಾಲ ತ್ರಿವರ್ಣ ಕಲಾ ತರಗತಿಯ ಡಾ. ಜಿ.ಎಸ್.ಕೆ. ಭಟ್, ವಿಧು ಶಂಕರ್ ಬಾಬು, ಡಾ. ಸುಮೀತ್ ಕೌರ್, ರೇವತಿ ಡಿ., ಲತಾ ಭಾಸ್ಕರ್, ಮೀತಾ ಪೈ, ಅಶ್ವಿನ್ ಶೆಟ್ಟಿ, ಅರುಣಾ ನಾಯರ್ ಟಿ., ಸುಷ್ಮಾ ಪೂಜಾರಿ, ಸಂತೋಷ್ ಎಂ. ಭಟ್, ಯಶಾ ಭಟ್, ಪ್ರಸಾದ್ ಆರ್. ಆಚಾರ್ಯ, ಅನುಷಾ ಆಚಾರ್ಯ, ರಕ್ಷಿತಾ ಶೆಟ್ಟಿ, ಹರ್ಷಿತ್ ಶೆಟ್ಟಿ. ಸಂಜನಾ ಶ್ರೀನಿವಾಸ್, ರಕ್ಷತಾ ಬಿ., ಪ್ರಜ್ಞಾ. ಆರ್. ಭಟ್, ಉಜ್ವಲ್, ಸುಷ್ಮಾ ಪ್ರಭು, ಅನಿರುದ್ಧ್ ಆನಂದ್, ಮನ್ವಿ ಪೈ , ಶರಣ್ ಆರ್. ಕುಮಾರ್ ಮೊದಲಾದ ವಿದ್ಯಾರ್ಥಿ ಕಲಾವಿದರು ಭಾಗವಹಿಸಲಿರುವರು.

    23 x 33 ಇಂಚು ಅಳತೆಯ ಕಪ್ಪು ಬಿಳುಪಿನ ಮಿಶ್ರ ಮಾಧ್ಯಮದ ಶೇಡಿಂಗ್ಸ್ ನ ಒಟ್ಟು 27 ಕಲಾಕೃತಿಗಳ ಅನಾವರಣದಲ್ಲಿ ಬೃಂದಾವನ, ಭಗವಾನ್ ವಿಷ್ಣು, ನಾಗಯಕ್ಷಿ , ವೀಲ್ಸ್ ಆಫ್ ಕೋನಾರ್ಕ್, ನಟರಾಜ, ಸರಸ್ವತಿ, ವಿಷ್ಣು ದೇವ, ಗುರುವಾಯೂರ್ ಕಥಕ್ಕಳಿ, ವರಹಾ ರೂಪಿ, ದರ್ಪಣ ಸುಂದರಿ, ಪೆರ್ಣಂಕಿಲ ಗಣಪತಿ, ಲಕ್ಷ್ಮಿ, ನರಸಿಂಹ, ಗಣೇಶ, ಪಿಲ್ಲರ್ ಆಫ್ ಟೆಂಪಲ್, ಮಾರಿ ಜಾತ್ರೆ, ರಾಮ ಮಂದಿರ, ಗಜಾಸುರ ಸಂಹಾರ, ಸಂದೇಶಾನುಗ್ರಹ, ಶಿವ ಪಾರ್ವತಿ, ಲಕ್ಷ್ಮಿ ನಾರಾಯಣ, ಕಾಳಿಂಗ ಮರ್ಧನ, ನರಸಿಂಹ ಅವತಾರ, ವಿಷ್ಣು, ಜೈ ಭಜರಂಗಿ ಎಂಬ ಕಲಾಕೃತಿಗಳು ರಚಿಸಲ್ಪಟ್ಟಿವೆ. ದಿನಾಂಕ 12 ಜನವರಿ 2025ರಿಂದ 14 ಜನವರಿ 2025ರವರೆಗೆ ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 7-30ರ ತನಕ ಸಾರ್ವಜನಿಕ ವೀಕ್ಷಣೆಗೆ ಮುಕ್ತ ಅವಕಾಶವಿದೆ.

    ಶತಶತಮಾನಗಳಿಂದ ಸಂಪದ್ಭರಿತ ಸುಧೀರ್ಘ ಇತಿಹಾಸಗಳುಳ್ಳ ದೇಶ ನಮ್ಮದು. ರೂಪಬೇಧ, ಪ್ರಮಾಣ, ಭಾವ, ಲಾವಣ್ಯ ಯೋಜನೆ, ಸಾದೃಶ್ಯ, ವರ್ಣಿಕಾಭಂಗದಂತಹ ಬದ್ಧತೆ ಮತ್ತು ಆಚರಣೆಗಳ ಮೂಲಕ ಪ್ರಾಚೀನ ಶಿಲ್ಪ ಮತ್ತು ವಾಸ್ತುಶಿಲ್ಪದಂತಹ ಗತಕಾಲದ ವೈಭವಗಳು ಮೂರ್ತಿ ರೂಪದ ಸಂಸ್ಕೃತಿಯನ್ನು ಎತ್ತಿಹಿಡಿದಿದಲ್ಲದೆ, ಇಂದಿಗೂ ಪ್ರಬುದ್ಧತೆಗೆ ಮತ್ತು ಆಚರಣೆಗೆ ಪ್ರೇರಣಾ ಶಕ್ತಿಯಾಗಿದೆ. ಈ ಕಲಾತ್ಮಕತೆಯನ್ನು ಒಂದೇ ಚೌಕಟ್ಟಿನ ಮೂಲಕ ಬಿಂಬಿಸಿ, ಹಿರಿಯರ ತ್ಯಾಗದ ಪ್ರತೀಕವಾಗಿ ಕೇಸರಿ ಮಿಶ್ರಿತ ಬಣ್ಣ ಮತ್ತು ಗತಕಾಲದ ಕುರುಹುವಿಗಾಗಿ ಕಪ್ಪು ಬಿಳುಪಿನ ಛಾಯೆಯನ್ನು ತೆರೆದಿಡಲು ಪ್ರಯತ್ನಿಸಲಾಗಿದೆ. ತ್ರಿವರ್ಣ ಕಲಾ ತರಗತಿ ಹಿರಿಯರ ವಿಭಾಗದ 19ರಿಂದ 75 ವಯೋಮಿತಿಯ ಆಯ್ದ 23 ವಿದ್ಯಾರ್ಥಿಗಳಿಂದ 27 ಕಲಾಕೃತಿಗಳು ಮಿಶ್ರ ಮಾಧ್ಯಮದೊಂದಿಗೆ ವ್ಯಕ್ತಪಡಿಸಲ್ಪಟ್ಟ ಈ ಬಾರಿಯ ಕಲಾಪ್ರದರ್ಶನವು ಕಲಾತ್ಮಕವಾಗಿ ಮತ್ತು ಪ್ರತಿಭಾನ್ವಿತರಿಗೆ ಸ್ಫೂರ್ತಿಯಾಗಬಹುದೆಂಬ ನಿರೀಕ್ಷೆಯಲ್ಲಿದ್ದೇವೆ. ಹಿರಿಯರಿಂದ ಪರಂಪರಾನುಗತವಾಗಿರುವ ಶಿಲ್ಪ, ವಾಸ್ತುಶಿಲ್ಪ ಆಚರಣೆಯಡಿಯಲ್ಲಿ ವ್ಯಕ್ತ ಪಡಿಸಲ್ಪಟ್ಟ ಕಲಾ ಪ್ರದರ್ಶನ. ಕಲಾವಿದ ಮಾರ್ಗದರ್ಶಕ ಹರೀಶ್ ಸಾಗಾ ಇವರ ಮಾರ್ಗದರ್ಶನದಲ್ಲಿ ತ್ರಿವರ್ಣ ಕಲಾ ಕೇಂದ್ರದ ವಿದ್ಯಾರ್ಥಿಯರ 29ನೇ ಕಲಾಪ್ರದರ್ಶನ ಇದಾಗಿದ್ದು, ಕಲಾ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಅತ್ತುತ್ತಮ ಕಲಾಕೃತಿಯನ್ನುಆಯ್ಕೆ ಮಾಡಿಸಿ, ವಿದ್ಯಾರ್ಥಿಯರಿಗೆ ‘ಅತ್ತುತ್ತಮ ಸಾರ್ವಜನಿಕರ ಆಯ್ಕೆಯ ಪ್ರಶಸ್ತಿ’ ಮತ್ತು ‘ಅತ್ಯುತ್ತಮ ಕಲಾಕೃತಿ ಪ್ರಶಸ್ತಿ’ಯನ್ನು ಗೆಲ್ಲಿಸುವ ಅವಕಾಶ.

    Share. Facebook Twitter Pinterest LinkedIn Tumblr WhatsApp Email
    Previous Articleವಿಶೇಷ ಲೇಖನ | ಹಾಸ್ಯ ಸಾಹಿತ್ಯದ ಮೂಲಕ ಮನೆಮಾತಾದ ಎಂ.ಎಸ್. ಸುಂಕಾಪುರ
    Next Article ‘ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ’ದಲ್ಲಿ ಮಕ್ಕಳ ಅದ್ಭುತ ಯಕ್ಷಗಾನ ಪ್ರದರ್ಶನ
    roovari

    Add Comment Cancel Reply


    Related Posts

    ಉಡುಪಿ ತಾಲೂಕು 15ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗೆ ಅವಕಾಶ

    May 5, 2025

    ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಚಿತ್ರಕಲೆ ಮತ್ತು ರೇಖಾಚಿತ್ರಗಳ ಪ್ರದರ್ಶನ | ಮೇ 04ರಿಂದ 14

    May 2, 2025

    ಪುಸ್ತಕ ವಿಮರ್ಶೆ – “ಸುಜ್ಞಾನದ ರೆಕ್ಕೆ ಹಚ್ಚಿ ಗಗನಕ್ಕೆ ಹಾರುವ ಹಕ್ಕಿ”

    April 30, 2025

    ಉಡುಪಿಯಲ್ಲಿ ಹದಿನೇಳನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ‘ಸುಕೃತಿ – 2025’ | ಏಪ್ರಿಲ್ 30 ಮತ್ತು ಮೇ 01

    April 29, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.