Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025

    ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ

    May 24, 2025

    ‘ಭಾಷಾಂತರ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 20

    May 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪೆರ್ಮುದೆ ಶಾಲೆಯಲ್ಲಿ ‘ಚಿತ್ತಾರ’ – ದಿನ 2
    Camp

    ಪೆರ್ಮುದೆ ಶಾಲೆಯಲ್ಲಿ ‘ಚಿತ್ತಾರ’ – ದಿನ 2

    April 12, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    12 ಏಪ್ರಿಲ್ 2023, ಕಾಸರಗೋಡು : ರಂಗ ಚೇತನ (ರಿ) ಕಾಸರಗೋಡು ಇದರ ನೇತೃತ್ವದಲ್ಲಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘಟನೆಯ ಸಹಾಬಾಗಿತ್ವದಲ್ಲಿ ದಿನಾಂಕ 11-04-2023ರಂದು ಪೆರ್ಮುದೆ ಶಾಲೆಯಲ್ಲಿ ಜರಗುತ್ತಿರುವ ‘ಚಿತ್ತಾರ’ ರಂಗದ ರಂಗೋಲಿ ತ್ರಿದಿನ ಸಹವಾಸ ಶಿಬಿರದ ಎರಡನೇ ದಿನ ಸಂಪನ್ಮೂಲ ವ್ಯಕ್ತಿಯಾಗಿ ಬಾಗವಹಿಸಿ ಮಾತನಾಡಿದ ಚಲನಚಿತ್ರ ನಟ, ನೀನಾಸಂ ಕಲಾವಿದರಾದ ಬಾಸುಮ ಕೊಡಗುರವರು,”ರಂಗಭೂಮಿ ಚಟುವಟಿಕೆಗಳು ನಿರಂತರವಾಗಿ ಜರಗಬೇಕು. ಆ ಮೂಲಕ ಮಕ್ಕಳ ರಂಗಭೂಮಿ ಬೆಳೆಯಬೇಕು. ಇದಕ್ಕೆ ಸಹವಾಸ ಶಿಬಿರಗಳು ವೇದಿಕೆಯಾಗಲಿ” ಎಂದು ತಿಳಿಸಿದರು. ತದನಂತರ ಅಭಿನಯದ ವಿವಿಧ ಮಜಲುಗಳ ಬಗ್ಗೆ ಪರಿಚಯಿಸಿದರು. ಕಾವ್ಯ ವಾಣಿಶ್ರೀ ಕೊಡಗುರವರಿಂದ ರಂಗ ಗೀತೆಗಳ ಗಾಯನ ಶಿಬಿರಾರ್ಥಿಗಳಿಗೆ ಮುದವನ್ನು ನೀಡಿತು. ಶಿಬಿರದ ಎರಡನೇ ದಿನ ಪ್ರಾರಂಭದಲ್ಲಿ ಶ್ರೀಮತಿ ಗಾಯತ್ರಿ ಟೀಚರ್ ಪೆರ್ಮುದೆಯವರ ನೇತೃತ್ವದಲ್ಲಿ ಸರಳ ವ್ಯಾಯಾಮ ಹಾಗೂ ಯೋಗಾಭ್ಯಾಸ ಜರಗಿತು. ನಂತರ ಮಂಗಳೂರು ಆಕಾಶವಾಣಿಯ ಶ್ರೀಮತಿ ಅಕ್ಷತರಾಜ್ ಪೆರ್ಲ ರವರಿಂದ ಬಾನುಲಿ ರೇಡಿಯೋ ನಾಟಕದ ಬಗ್ಗೆ ಮಾಹಿತಿಯನ್ನು ನೀಡಿದರು. ಮಧ್ಯಾಹ್ನದ ಊಟದ ವಿರಾಮದ ಬಳಿಕ ಯುವ ಸಾಹಿತಿ, ರಂಗ ಕರ್ಮಿ ದಿವಾಕರ ಬಲ್ಲಾಳ್ ಮಂಗಳೂರು “ಹನಿ ಹನಿ ನೀರ ಹನಿ” ಅಭಿನಯ ಸಂಭಾಷಣೆ, ರಂಗ ನಡೆ ಇತ್ಯಾದಿಗಳ ಮೂಲಕ ರಂಗಾಟ ಹಾಗೂ ಪ್ರಾತ್ಯಕ್ಷಿಕೆಗಳ ಮೂಲಕ ತರಗತಿ ನಡೆಸಿಕೊಟ್ಟರು. ಚಾ ವಿರಾಮದ ಬಳಿಕ ಖ್ಯಾತ ಪಕ್ಷಿ ತಜ್ಞ, ಶಿಕ್ಷಕ ರಾಜು ಕಿದೂರುರವರಿಂದ ಪಕ್ಷಿಲೋಕದ ಕುರಿತು ತರಗತಿ ನಡೆಯಿತು. ಬಳಿಕ ಸಂಪನ್ಮೂಲ ವ್ಯಕ್ತಿ ಹಾಗೂ ಸಂಘದ ಸದಸ್ಯರ ನೇತೃತ್ವದಲ್ಲಿ ಪೊಸಡಿ ಗುಂಪೆಗೆ ಚಾರಣ ಯಾತ್ರೆಯನ್ನು ಕೈಗೊಂಡಿತು. ಚಾರಣ ಹಾದಿ ಮಧ್ಯೆ ವಿವಿಧ ರೀತಿಯ ಪಕ್ಷಿಗಳ ಕುರಿತು ಸಸ್ಯ ಸಂಪತ್ತಿನ ಕುರಿತು ರಾಜು ಕಿದೂರುರವರು ಮಾಹಿತಿ ನೀಡಿದರು. ಶಿಬಿರಾರ್ಥಿಗಳು ಸೂರ್ಯಾಸ್ತಮಾನವನ್ನು ವೀಕ್ಷಿಸಿ, ಗಾಳಿಪಟ ಹಾರಿಸಿ ತಂಡವು ಹಿಂತಿರುಗಿತು. ಹಾದಿ ಮಧ್ಯೆ ಹಸೀನಾ ಟೀಚರ್ ಪೆರ್ಮುದೆ ಹಾಗೂ ಕುಟುಂಬದವರು ಇಫ್ತಾರ್ ಉಪಹಾರ ನೀಡಿ ಸತ್ಕರಿಸಿದರು. ಊಟದ ವಿರಾಮದ ಬಳಿಕ ನಡೆದ ಶಿಬಿರಾಗ್ನಿ ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು BRCಯ ಸಂಪನ್ಮೂಲ ವ್ಯಕ್ತಿ, ರಂಗ ಕರ್ಮಿ ಶ್ರೀಯುತ ಹರೀಶ್ ಮಾಸ್ಟರ್ ಅಂಗಡಿಪದವುರವರು ನೆರವೇರಿಸಿ ಮಾತನಾಡಿ,”ನಮ್ಮಲ್ಲಿರುವ ಕೆಟ್ಟ ಚಿಂತೆಗಳು ತೊಲಗಿ, ಉತ್ತಮ ಪೌರರಾಗಿ ಸಮಾಜಮುಖಿ ಕೆಲಸಕಾರ್ಯಗಳಲ್ಲಿ ತೊಡಗೋಣ” ಎಂದು ಕರೆನೀಡಿದರು. ಬಳಿಕ ಶಿಬಿರಾಗ್ನಿಯ ಅಂಗವಾಗಿ ಮಕ್ಕಳು ಹಾಗೂ ಅಧ್ಯಾಪಕರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು. ಶಿಬಿರದ ನೇತೃತ್ವವನ್ನು ಸಂಘದ ಪದಾಧಿಕಾರಿಗಳಾದ ಯತೀಶ್ ಕುಮಾರ್ ರೈ, ಸದಾಶಿವ ಬಾಲಮಿತ್ರ, ಅಶೋಕ್ ಕೊಡ್ಲಮೊಗರು, ಶಿವರಾಮ್ ಕಾಟುಕುಕ್ಕೆ, ಗೋಪಾಲ ಮಾಸ್ಟರ್ ಕಾಟುಕುಕ್ಕೆ, ವಸಂತ ಮೂಡಂಬೈಲ್, ಶಿವ ಚೆರುಗೋಳಿ, ಪ್ರಸಾದ್ ಮುಗು, ಮೆಲ್ವಿನ್ ಪೆರ್ಮುದೆ, ದೇವಾನಂದ ಮಾಸ್ಟರ್, ಹರಿನಾಥ್ ಕುಬಣೂರು, ಜಯ ಪ್ರಸಾದ್, ಜಯಪ್ರಕಾಶ್ ಬೇಳ, ಚಂದ್ರಿಕಾ ಟೀಚರ್ ಮೊದಲಾದವರು ವಹಿಸಿದರು. ಶ್ರೀಮತಿ ಕುಸುಮ ಮತ್ತು ರಾಧಿಕಾರವರ ಶುಚಿ ರುಚಿಯಾದ ಅಡುಗೆ ಶಿಬಿರದ ಮೆರುಗನ್ನು ಹೆಚ್ಚಿಸಿತು.

    Share. Facebook Twitter Pinterest LinkedIn Tumblr WhatsApp Email
    Previous Articleಸುರತ್ಕಲ್ ಗೋವಿಂದ ದಾಸ ಕಾಲೇಜಿನ ‘ಯಕ್ಷಯಾನ’ ಸಮಾರೋಪ ಸಮಾರಂಭ
    Next Article “ತುಳು ಹರಿಕಥೆ ಉಚ್ಚಯ-2023” ಸಮಾರೋಪ
    roovari

    Add Comment Cancel Reply


    Related Posts

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025

    ರಾಜ್ಯ ಮಟ್ಟದ ಸಂಶೋಧನಾ ಕಮ್ಮಟ ‘ಕನ್ನಡ ನಾಟಕಗಳ ವಿಭಿನ್ನ ನೆಲೆಗಳು’ | ಮೇ 27

    May 23, 2025

    ಮಂಡ್ಯದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕ | ಮೇ 24

    May 23, 2025

    ಬೆಂಗಳೂರಿನ ರಂಗಶಂಕರದಲ್ಲಿ ‘ಶಿವೋಹಂ’ ನಾಟಕ ಪ್ರದರ್ಶನ | ಮೇ 31

    May 23, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.