Subscribe to Updates

    Get the latest creative news from FooBar about art, design and business.

    What's Hot

    ‘ಕೊ. ಅ. ಉಡುಪ ಪ್ರಶಸ್ತಿ’ಗೆ ಸಾಹಿತಿ, ಪತ್ರಕರ್ತ ಚಿದಂಬರ ಬೈಕಂಪಾಡಿ ಆಯ್ಕೆ

    July 11, 2026

    ಕ.ಸಾ.ಪ.ದ ‘ಶ್ರೀವಿಜಯ ಸಾಹಿತ್ಯ ದತ್ತಿ ಪ್ರಶಸ್ತಿ’ಗೆ ಲೇಖಕರ ಆಯ್ಕೆ

    July 11, 2026

    ಮಂಗಳೂರಿನ ಪುರಭವನದಲ್ಲಿ ‘ರಿಮ್ಜಿಮ್’ ಸಂಗೀತ ಕಾರ್ಯಕ್ರಮ | ಜುಲೈ 12

    July 11, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ‘ಪ್ರಶ್ನಾರ್ಥ’ ಪುಟಾಣಿ ಮಕ್ಕಳ ಚೊಟಾಣಿ ಪತ್ರಿಕಾಗೋಷ್ಠಿ
    Literature

    ‘ಪ್ರಶ್ನಾರ್ಥ’ ಪುಟಾಣಿ ಮಕ್ಕಳ ಚೊಟಾಣಿ ಪತ್ರಿಕಾಗೋಷ್ಠಿ

    April 30, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ವಿಜಯನಗರ ಬಿಂಬ ರಂಗಶಿಕ್ಷಣ ಕೇಂದ್ರ ಮಕ್ಕಳ ವಿಭಾಗ ಚಿಣ್ಣರ ಚಾವಡಿ -2024 ಅರ್ಪಿಸುವ ‘ಪ್ರಶ್ನಾರ್ಥ’ ಪುಟಾಣಿ ಮಕ್ಕಳ ಚೊಟಾಣಿ ಪತ್ರಿಕಾಗೋಷ್ಠಿಯ ಮೀಡಿಯಾ ಹಬ್ಬದ ಕಾರ್ಯಕ್ರಮವು ದಿನಾಂಕ 27-04-2024ರಂದು ಕಲಾಗ್ರಾಮದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಕಾರ್ಯಕ್ರಮಕ್ಕೆ ಮೆರುಗು ಕೊಟ್ಟವರು ಸುವರ್ಣ ವಾಹಿನಿಯ ಅಜಿತ್ ಹನುಮಕ್ಕನವರ್. ಪುಟಾಣಿ ಪತ್ರಕರ್ತರಿಂದ ಬಾಲ್ಯ, ವಿದ್ಯೆ, ಸಾಂಸಾರಿಕ, ವೃತ್ತಿ, ವೃತ್ತಿಯಲ್ಲಿನ ಇರಿಸುಮರಿಸು, ಸಂದಿಗ್ಧತೆ, ಸವಾಲು ಹೀಗೆ ಹತ್ತು ಹಲವು ಪ್ರಶ್ನೆಗಳ ಬಾಣ ಅಜಿತ್ ಅವರಿಗೆ. ಅಷ್ಟೇ ಸಂಯಮದಿಂದ ಚಾಚೂ ತಪ್ಪದೆ ಮಕ್ಕಳಲ್ಲಿ ಮಕ್ಕಳಾಗಿ ಮನವರಿಕೆಯ ಉತ್ತರ ಅವರ ವೃತ್ತಿಯಲ್ಲಿನ ಅನುಭವಕ್ಕೆ ಹಿಡಿದ ಕನ್ನಡಿ. ಪತ್ರಕರ್ತರ ಅನುಭವ ಮತ್ತು ಸವಾಲುಗಳಿಗೆ ಉತ್ತರ ನೀಡುವಾಗ ಇದ್ದ ಪ್ರೌಡಿಮೆ ಮತ್ತು ಅಲ್ಲಲ್ಲಿ ಹಾಸ್ಯಮಯವಾಗಿಯೆ ಉತ್ತರಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

    ಕೆಲವರು ಕೇಳುವುದುಂಟು ! ಕೇವಲ 15 ದಿನದಲ್ಲಿ ಮಕ್ಕಳಿಗೆ ಏನು ಹೇಳಿ ಕೊಡುತ್ತಾರೆ ? ಇಂತಹ ಶಿಬಿರದಿಂದ ಏನು ಪ್ರಯೋಜನ? ಇಂತೆಲ್ಲಾ ಪ್ರಶ್ನೆಗಳಿಗೆ ಖಂಡಿತವಾಗಿಯೂ ಉತ್ತರ ಇಂತಹ ಕಾರ್ಯಕ್ರಮ. ಮಕ್ಕಳಿಗೆ ‌ವಿವಿಧ ವಿಷಯದಲ್ಲಿ ಕುತೂಹಲ ಹುಟ್ಟು ಹಾಕಿದರೆ ಭವಿಷ್ಯದ ಹಾದಿ ಸುಗಮವೆಂದೇ ಅರ್ಥ. ಅದಕ್ಕಾಗಿಯೆ ವಿಜಯನಗರ ಬಿಂಬದಂತಹ ಸಂಸ್ಥೆ 28 ವರುಷದ ನಂತರವೂ ತನ್ನ ಇರುವನ್ನು ಉಳಿಸಿಕೊಂಡಿರುವುದು. ಹತ್ತಾರು ಸಂಸ್ಥೆಗಳು ಬರಬಹುದು ಅಲ್ಲದೆ ಹೋಗಬಹುದು. ಆದರೆ ಸ್ಥಿರವಾಗಿ ಇರಬೇಕಾದರೆ ಅದಕ್ಕೆ ಬೇಕಾದ ಪೂರಕ ಅಂಶ ಮತ್ತು ಮಕ್ಕಳಿಗೆ ಹತ್ತಿರವಾದ ಅಲ್ಲದೇ ಅವರ ವಿಕಸನಕ್ಕೆ ಬೇಕಾದ ವಿಷಯ ಅಧ್ಯಯನ ಮಾಡಿ ಕಾಲಕ್ರಮಕ್ಕೆ ಸರಿಯಾಗಿ ಅಷ್ಟೆ ಪರಿಣಾಮಕಾರಿಯಾಗಿ, ವ್ಯವಸ್ಥಿತವಾಗಿ ಜಾರಿಗೆ ತರುವ ಗುಣ ಇರುವುದು ವಿಜಯನಗರ ಬಿಂಬಕ್ಕೆ. ಕಾರಣ ಅಲ್ಲಿನ ಸಂಪನ್ನ್ಮೂಲ ವ್ಯಕ್ತಿಗಳಾದ ಡಾ. ಕಶ್ಯಪ್, ಡಾ. ಸುಷ್ಮಾ ಮತ್ತು ಡಾ. ವೃಂದ ಇವರಂತಹ ವಿಷಯ ತಜ್ಙರಿಂದ ಮಾತ್ರ ಸಾಧ್ಯ. ಒಂದು ಉತ್ತಮ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು ಬದುಕಿನ‌ ಉತ್ತಮ ಕ್ಷಣ.

     

    Share. Facebook Twitter Pinterest LinkedIn Tumblr WhatsApp Email
    Previous Articleಕುಂದಾಪುರ ಕೋಡಿಯ ಲೈಟ್ ಹೌಸ್ ಬಳಿ ರಜಾರಂಗು ಶಿಬಿರ
    Next Article ಕೊಪ್ಪಳದಲ್ಲಿ ನಡೆಯಲಿರುವ ‘ಮೇ ಸಾಹಿತ್ಯ ಮೇಳ’ ನಿಮಿತ್ಯ ಪ್ರಬಂಧ ಸ್ಪರ್ಧೆ | ಕೊನೆಯ ದಿನಾಂಕ ಮೇ 15
    roovari

    Add Comment Cancel Reply


    Related Posts

    ‘ಕೊ. ಅ. ಉಡುಪ ಪ್ರಶಸ್ತಿ’ಗೆ ಸಾಹಿತಿ, ಪತ್ರಕರ್ತ ಚಿದಂಬರ ಬೈಕಂಪಾಡಿ ಆಯ್ಕೆ

    July 11, 2026

    ಕ.ಸಾ.ಪ.ದ ‘ಶ್ರೀವಿಜಯ ಸಾಹಿತ್ಯ ದತ್ತಿ ಪ್ರಶಸ್ತಿ’ಗೆ ಲೇಖಕರ ಆಯ್ಕೆ

    July 11, 2026

    ‘ಜನಪ್ರಿಯ ವಿಜ್ಞಾನ ಪುಸ್ತಕ ಪ್ರಶಸ್ತಿ’ಗೆ ಕನ್ನಡ ಪುಸ್ತಕಗಳ ಆಹ್ವಾನ | ಕೊನೆಯ ದಿನಾಂಕ ನವೆಂಬರ್ 2026

    July 11, 2026

    ಕನಕ ಕಾವ್ಯ ಗಮಕ ಸ್ಪರ್ಧೆಗೆ ಅರ್ಜಿ ಆಹ್ವಾನ

    July 10, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.