ಕಿನ್ನಿಗೋಳಿ : ಕಿನ್ನಿಗೋಳಿಯ ಯಕ್ಷಲಹರಿ ಯುಗಪುರುಷ ಸಂಸ್ಥೆಯಲ್ಲಿ ಕಳೆದ 34 ವರ್ಷಗಳಿಂದ ಯಕ್ಷಗಾನದ ಕೈಕಂರ್ಯ ಕಲಾ ಮಾತೆಯ ಸೇವೆ ನಿರಂತರ ನಡೆಯುತ್ತ ಬಂದಿದೆ, ಇದೀಗ 34 ನೇ ವರ್ಷದ ಕಲಾ ಪರ್ವ ಕರ್ಣಾಟಕ ಬ್ಯಾಂಕ್ ಪ್ರಾಯೋಜಿತ ತಾಳಮದ್ದಲೆ ಸ್ಪರ್ಧೆ ಸಪ್ತಾಹ, ಹಾಗೂ ಯಕ್ಷಲ ಹರಿಯ ವಾರ್ಷಿಕೋತ್ಸವ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸಮ್ಮಾನ ಜು.27 ರಿಂದ ಅ. 3 ರತನಕ ನಡೆಯಲಿದೆ ಎಂದು ಯಕ್ಷಲಹರಿ ಸಂಸ್ಥೆಯ ಅಧ್ಯಕ್ಷ ರಘುನಾಥ ಕಾಮತ್ ಕೆಂಚನಕೆರೆ ತಿಳಿಸಿದರು.
ಅವರು ಕಿನ್ನಿಗೋಳಿಯ ದುರ್ಗಾ ರೆಸಿಡೆನ್ಸಿಯ ಸಭಾಭವನ ದಲ್ಲಿ ನಡೆದ ತಾಳಮದ್ದಳೆ ಸ್ಪರ್ಧೆ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿ, 7 ದಿನಗಳಲ್ಲಿ ಆಹ್ವಾನಿತ ಹವ್ಯಾಸಿ ತಂಡಗಳ ತಾಳಮದ್ದಳೆ ಸ್ಪರ್ಧೆ ನಡೆಯಲಿದ್ದು, ವಾರ್ಷಿಕೋತ್ಸವ ಸಂದರ್ಭದಲ್ಲಿ ಪ್ರತಿ ವರ್ಷ ಕಲಾವಿದರ ಸಮ್ಮಾನ ಜತೆಗೆ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಸಹಕಾರ ನೀಡುವ ಯೋಜನೆ ನಡೆಯಲಿದೆ ಎಂದರು.
ತಾಳಮದ್ದಳೆ ಸ್ಪರ್ಧಾ ಸಪ್ತಾಹದಲ್ಲಿ ಪ್ರತಿದಿನ ಸಭಾ ಕಾರ್ಯಕ್ರಮದಲ್ಲಿ ಹವ್ಯಾಸಿ ಹಿರಿಯ ಕಲಾವಿದರಿಗೆ ಗೌರವ, ಅಗಲಿದ ಹವ್ಯಾಸಿ ಯಕ್ಷಗಾನ ಕಲಾವಿದರ ಸಂಸ್ಮರಣೆ, ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಧಾನ ಕಾರ್ಯದರ್ಶಿ ವಸಂತ ದೇವಾಡಿಗೆ ತಿಳಿಸಿದರು. ಉಪಾಧ್ಯಕ್ಷ ಪಶುಪತಿ ಶಾಸ್ತ್ರಿ ದೇವಾಡಿಗ ಕಾರ್ಯಕ್ರಮದ ರೂಪುರೇಷೆ ತಿಳಿಸಿದರು.
ವಿನಯಾಚಾರ್ ಹೊಸಬೆಟ್ಟು, ಸುಧಾಕರ ಕುಲಾಲ್ ಮುಂಡೂರು. ಅಶ್ವಥ ರಾವ್, ಉಮೇಶ್ ನೀಲಾವರ ವಂದಿಸಿದರು. ಶ್ರೀವತ್ಸ ಭಟ್ ಕಾರ್ಯಕ್ರಮ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
ಯಕ್ಷಲಹರಿ ಆಯೋಜಿಸುವ ತಾಳಮದ್ದಳೆ ಸ್ಪರ್ಧೆ ಹಾಗೂ ಸಪ್ತಾಹದ ಪೂರ್ವಭಾವ ಸಭೆ
Previous Articleವಿಶೇಷ ಲೇಖನ – ಹಸ್ತಪ್ರತಿ ಶಾಸ್ತ್ರದ ಭೀಷ್ಮ – ಬಿ. ಎಸ್. ಸಣ್ಣಯ್ಯ