Subscribe to Updates

    Get the latest creative news from FooBar about art, design and business.

    What's Hot

    ಪರಿಷತ್ತಿನ ಚಾಮರಾಜೇಂದ್ರ ಸಭಾಭವನದಲ್ಲಿ ‘ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭ

    June 6, 2025

    ಡಾ. ಎಂ.ಮೋಹನ ಆಳ್ವ ಇವರಿಗೆ ‘ಡಾ. ಜಿ. ಪಿ. ರಾಜ ರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ’

    June 6, 2025

    ಡಾ. ರಾಗೌ ಸಾಹಿತ್ಯ ಪ್ರಶಸ್ತಿ’ ಹಾಗೂ ‘ಕೆ. ಸಿಂಗಾರಿಗೌಡ ಪುಸ್ತಕ ಪ್ರಶಸ್ತಿ’ ಪ್ರದಾನ ಸಮಾರಂಭ | ಜೂನ್ 08

    June 6, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ರಜಾರಂಗು-ರಂಗಮಂಚ’ ಮಕ್ಕಳ ಶಿಬಿರದ ಸಮಾರೋಪ ಹಾಗೂ ‘ಕಾಳಿಂಗ ನಾವುಡರ ಸಂಸ್ಮರಣೆ’
    Camp

    ‘ರಜಾರಂಗು-ರಂಗಮಂಚ’ ಮಕ್ಕಳ ಶಿಬಿರದ ಸಮಾರೋಪ ಹಾಗೂ ‘ಕಾಳಿಂಗ ನಾವುಡರ ಸಂಸ್ಮರಣೆ’

    June 5, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕುಂದಾಪುರ : ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ ಸಾರಥ್ಯದಲ್ಲಿ ಮೇ 27ರಂದು ‘ರಜಾರಂಗು-ರಂಗಮಂಚ’ ಮಕ್ಕಳ ಶಿಬಿರದ ಸಮಾರೋಪ ಸಮಾರಂಭ ಹಾಗೂ ‘ಕಾಳಿಂಗ ನಾವುಡರ ಸಂಸ್ಮರಣೆ’ ಕಾರ್ಯಕ್ರಮ ನಡೆಯಿತು.

    ಕಾರ್ಯಕ್ರಮದಲ್ಲಿ ಸಂಸ್ಮರಣಾ ಮಾತುಗಳನ್ನಾಡಿ ಹಿರಿಯ ಕಲಾವಿದ ಹೊಸಂಗಡಿ ರಾಜೀವ ಶೆಟ್ಟಿಯವರು “ಗಗನಂ ಗಗನಾಕಾರಂ. ಸಮುದ್ರಕ್ಕೆ ಸಮುದ್ರವೇ ಸಾಟಿ. ಹಾಗೆಯೇ ನಾವುಡರಿಗೆ ಸಾಟಿ ಮತ್ತೊಂದಿಲ್ಲ. ರಂಗದಲ್ಲಿ ಏನೂ ಅಲ್ಲದ ಕಲಾವಿದನನ್ನು ಮೇಲಕ್ಕೆತ್ತುವ ಸಾಮರ್ಥ್ಯ ಕಾಳಿಂಗ ನಾವುಡರಲ್ಲಿದೆ. ರಂಗದಲ್ಲಿ ರಾಜಿ ಇಲ್ಲದ ಮಹಾನ್ ಕಲಾವಿದ. ಅತೀ ಚಿಕ್ಕ ವಯಸ್ಸಿನಲ್ಲಿ ಸಾಹಿತ್ಯದ ಶಕ್ತಿ ದೈವದತ್ತವಾಗಿ ಅವರಿಗೆ ಅನುಗ್ರಹಿತವಾಗಿದೆ. ಅವರು ಯಕ್ಷಗಾನದಲ್ಲಿ ಅತ್ಯಂತ ಶ್ರೇಷ್ಠ ಸ್ಥಾನದಲ್ಲಿ ಸ್ಥಿತರಾದರು” ಎಂದು ಹೇಳಿದರು.

    ಬೆಳೆಯುವ ಮಕ್ಕಳಿಗೆ ಕಲೆಯ ಪರಿಚಯವನ್ನು ಮಾಡಿಸಿದರೆ, ಅವರಿಗೆ ಭಾಗವಹಿಸುವುದಕ್ಕೆ ಅವಕಾಶವನ್ನು ಕೊಟ್ಟರೆ, ಒಂದು ತಲೆಮಾರಿಗೆ ನಾವೊಂದು ಕಾಣಿಕೆ ಕೊಟ್ಟ ಹಾಗೆ. ಇಂತಹ ಕೆಲಸವನ್ನು ಮಾಡಿದ ಸಂಸ್ಥೆಯನ್ನು ಶ್ಲಾಘಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ನನ್ನನ್ನೂ ಸೇರಿದಂತೆ ಅನೇಕ ಕಲಾವಿದರನ್ನು ಬೆಳಕಿಗೆ ತಂದು ಕಲಾ ಪ್ರಪಂಚಕ್ಕೆ ತೋರಿಸಿಕೊಟ್ಟವರು ಕಾಳಿಂಗ ನಾವುಡರು. ಕಲಾವಿದರ ಸಾಮರ್ಥ್ಯವನ್ನು ತಿಳಿದೂ, ಅಳೆದು ಕಲಾವಿದನಲ್ಲಿರುವ ಕೊರತೆಯನ್ನು ಕಾಣದೇ ಇದ್ದ ಹಾಗೆ ಮಾಡಿ, ಅವನನ್ನು ವಿಜೃಂಭಿಸುವ ಹಾಗೆ ಮಾಡುವುದೇ ನಿಜವಾದ ಭಾಗವತನ ಲಕ್ಷಣ. ಇದನ್ನು ಕಾಳಿಂಗ ನಾವುಡರು ಮಾಡುತ್ತಿದ್ದರು ಎಂದು ಹಿರಿಯ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಮಾತನ್ನಾಡಿದರು.

    ಮುಖ್ಯ ಅತಿಥಿಗಳಾಗಿ ಪ್ರಸಿದ್ಧ ನ್ಯಾಯವಾದಿ ಶ್ರೀಧರ್ ಪಿ.ಎಸ್. ಕುಂದಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮ, ಗುರುಗಳಾದ ಸೀತಾರಾಮ ಶೆಟ್ಟಿ ಕೊಯಿಕೂರು, ರಂಗ ನಿರ್ದೇಶಕ ರೋಹಿತ್ ಎಸ್. ಬೈಕಾಡಿ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ರಂಗದಲ್ಲಿ ಸೀತಾರಾಮ ಶೆಟ್ಟಿ ನಿರ್ದೇಶನದ ತಾಳಮದ್ದಳೆ ‘ದ್ರೌಪದಿ ಪ್ರತಾಪ’ ರೋಹಿತ್ ಎಸ್. ಬೈಕಾಡಿ ನಿರ್ದೇಶನದ ನಾಟಕ ‘ಹಕ್ಕಿ ಮಕ್ಕಳು’ ರಂಗದಲ್ಲಿ ಪ್ರಸ್ತುತಿಗೊಂಡಿತು.

    Share. Facebook Twitter Pinterest LinkedIn Tumblr WhatsApp Email
    Previous Articleಕಟೀಲು ಯಕ್ಷಗಾನ ಸ್ಪರ್ಧೆ – ‘ಭ್ರಾಮರೀ ಯಕ್ಷ ಝೇಂಕಾರ’ದ ಸಮಾರೋಪ ಮತ್ತು ಬಹುಮಾನ ವಿತರಣೆ
    Next Article ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದಿಂದ ‘ಮೇಧಿನಿರ್ಮಾಣ‌’ ಮತ್ತು ‘ಜಾಂಬವತಿ ಕಲ್ಯಾಣ’
    roovari

    Add Comment Cancel Reply


    Related Posts

    ಸಮಾರೋಪಗೊಂಡ ‘ವಸಂತ ಚಿಟ್ಟೆಗಳು – 2025’ ಮಕ್ಕಳ ಬೇಸಿಗೆ ಶಿಬಿರ

    May 30, 2025

    ಕರುಂಬಿತ್ತಿಲ್ ಸಂಗೀತ ಶಿಬಿರದ ಸಮಾರೋಪ ಸಮಾರಂಭ

    May 30, 2025

    ರಾಷ್ಟ್ರೀಯ ನಾಟ್ಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ಶಿಬಿರ

    May 27, 2025

    ಉದ್ಘಾಟನೆಗೊಂಡ ‘ಚಿಗುರು’ ಮಕ್ಕಳ ವೃತ್ತಿಪರ ರಂಗಭೂಮಿ ಕಾರ್ಯಗಾರ

    May 27, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.