Subscribe to Updates

    Get the latest creative news from FooBar about art, design and business.

    What's Hot

    ಕಾಸರಗೋಡಿನ ಕರಂದಕ್ಕಾಡಿನಲ್ಲಿ ‘ಸಂವಾದ ಕಾರ್ಯಕ್ರಮ’ | ಜನವರಿ 16

    January 13, 2026

    ಅರೆಹೊಳೆ ಪ್ರತಿಷ್ಠಾನದಿಂದ ಕನ್ನಡ ಕಥಾ ಸ್ಪರ್ಧೆಗೆ ಆಹ್ವಾನ | ಕೊನೆಯ ದಿನಾಂಕ ಜನವರಿ 30

    January 12, 2026

    ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ‘ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ’ದ ಸಮಾರೋಪ ಸಮಾರಂಭ

    January 12, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರಿಗರನ್ನು ರಂಜಿಸಿದ ರಂಗಾಯಣ ಮೈಸೂರಿನ ‘ನಾಂದಿ’ ನಾಟಕೋತ್ಸವ
    Drama

    ಮಂಗಳೂರಿಗರನ್ನು ರಂಜಿಸಿದ ರಂಗಾಯಣ ಮೈಸೂರಿನ ‘ನಾಂದಿ’ ನಾಟಕೋತ್ಸವ

    May 27, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಅರೆಹೊಳೆ ಪ್ರತಿಷ್ಠಾನವು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ, ಕಲಾಭಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಕಾರದಿಂದ ಆಯೋಜಿಸಿದ್ದ ರಂಗಾಯಣ ಮೈಸೂರಿನ ‘ನಾಂದಿ’ ನಾಟಕೋತ್ಸವವು ದಿನಾಂಕ 24-05-2024 ರಿಂದ 26-05-2024ರ ವರೆಗೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಆಡಿಟೋರಿಯಂನಲ್ಲಿ ನಡೆಯಿತು.

    ನಾಟಕೋತ್ಸವದ ಎರಡನೇ ದಿನ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮೈಸೂರು ರಂಗಾಯಣದ ಪ್ರಿನ್ಸಿಪಾಲ್ ಎಸ್. ರಾಮನಾಥ “ರಂಗಭೂಮಿಯ ಕೋರ್ಸ್ ಗಳ ಮೂಲಕ ನಾಟಕಗಳನ್ನು ಕಟ್ಟುವುದು ಅಥವಾ ಅಭಿನಯಿಸುವುದಕ್ಕಿಂತಲೂ ಮಿಗಿಲಾಗಿ ಅದು ಬದುಕಲು ಕಲಿಸುತ್ತದೆ. ಈ ಹಿನ್ನೆಲೆಯಲ್ಲಿ ಹೆಚ್ಚೆಚ್ಚು ಯುವ ಜನತೆ ರಂಗಶಿಕ್ಷಣದಲ್ಲಿ ತೊಡಗಿಕೊಳ್ಳಬೇಕು.” ಎಂದು ಕರೆ ನೀಡಿದರು. ದಿನಾಂಕ 31-05-2024ರಂದು ಸೇವಾ ನಿವೃತ್ತಿ ಹೊಂದಲಿರುವ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರು ರಂಗಾಸಕ್ತರ ಪರವಾಗಿ ಅಭಿನಂದಿಸಲಾಯಿತು.

    ಅರೆಹೊಳೆ ಪ್ರತಿಷ್ಠಾನದ ಅಧ್ಯಕ್ಷ ಅರೆಹೊಳೆ ಸದಾಶಿವ ರಾವ್, ಜಾದೂಗಾರ ಕುದ್ರೋಳಿ ಗಣೇಶ್, ಸಂತ ಅಲೋಶಿಯಸ್ ಕಾಲೇಜಿನ ಕ್ರಿಸ್ಟೋಫರ್ ನೀನಾಸಂ, ಡಾ. ದಿನೇಶ್ ನಾಯ್ಕ್, ನಂದಗೋಕುಲ ನಿರ್ದೇಶಕಿ ಶ್ವೇತಾ ಅರೆಹೊಳೆ, ಕಲಾಭಿಯ ಉಜ್ವಲ್ ಯು. ವಿ., ರಂಗಾಯಣದ ಶಿಕ್ಷಕ ಅಮಿತ್ ರೆಡ್ಡಿ ಉಪಸ್ಥಿತರಿದ್ದರು. ನಂತರ ರಂಗಾಯಣ ವಿದ್ಯಾರ್ಥಿಗಳಿಂದ ಕೀರ್ತಿನಾಥ ಕುರ್ತುಕೋಟಿ ರಚನೆಯ ‘ಆ ಮನಿ’ ನಾಟಕ ಪ್ರದರ್ಶನಗೊಂಡಿತು. ನಾಟಕವನ್ನು ಮಂಜುನಾಥ ಬಡಿಗೇರ ನಿರ್ದೇಶಿಸಿದ್ದರು. ನಾಟಕೋತ್ಸವದ ಮೊದಲ ದಿನ ಹೈಸ್ನಾಂ ತೋಂಬ ನಿರ್ದೇಶನದ ‘ವೃಕ್ಷರಾಜ’ ಹಾಗೂ ಕಡೆಯದಿನ ಮೂಲ ವಿಲಿಯಂ ಶೇಕ್ಸ್ ಪಿಯರ್ ಅವರ ‘ವೆನಿಸಿನ ವ್ಯಪಾರ’ ನಿರ್ದೇಶಕ ಅಮಿತ್ ಜೆ. ರೆಡ್ಡಿ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು.

    Share. Facebook Twitter Pinterest LinkedIn Tumblr WhatsApp Email
    Previous Articleಮೇಟಿ ಮುದಿಯಪ್ಪ ನೆನಪಿನ ಯುವ ಕಥಾ ಸ್ಪರ್ಧೆಯ ವಿಜೇತರರಿಗೆ ಬಹುಮಾನ ವಿತರಣೆ
    Next Article ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳಿಗೆ ಗೌರವಾರ್ಪಣೆ
    roovari

    Add Comment Cancel Reply


    Related Posts

    ನಾಟಕ ವಿಮರ್ಶೆ | ಡಾ. ಚಂದ್ರಶೇಖರ ಕಂಬಾರರ ‘ಜೋಕುಮಾರ ಸ್ವಾಮಿ’ ನಾಟಕದ ಅದ್ಬುತ ಪ್ರದರ್ಶನ

    January 12, 2026

    ಮೈಸೂರಿನಲ್ಲಿ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ -2026’ | ಜನವರಿ 11ರಿಂದ 18

    January 9, 2026

    ಸಂಭ್ರಮದಿಂದ ಸಂಪನ್ನಗೊಂಡ ಮಂಗಳೂರು ತಾಲೂಕು ‘ಬ್ಯಾರಿ ಸಾಹಿತ್ಯ ಸಮ್ಮೇಳನ’

    January 7, 2026

    ಶಿವಮೊಗ್ಗ ಜಿಲ್ಲಾ ಇಪ್ಪತ್ತೊಂದನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ | ಜನವರಿ 08

    January 7, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.