Subscribe to Updates

    Get the latest creative news from FooBar about art, design and business.

    What's Hot

    ಕನ್ನಡ ಭವನದ ‘ರಜತ ಸಂಭ್ರಮ’ ನಾಡು ನುಡಿ ಹಬ್ಬ, ವಿವಿಧ ಪ್ರಶಸ್ತಿ ಪ್ರದಾನ | ಜನವರಿ 18

    January 16, 2026

    ಮಕರ ಸಂಕ್ರಮಣದ ಅಂಗವಾಗಿ ‘ಶಾಂಭವಿ ವಿಲಾಸ’ ತಾಳಮದ್ದಳೆ

    January 16, 2026

    ನಾರಿ ಚಿನ್ನಾರಿಯಿಂದ ಪದ್ಮಗಿರಿ ಕಲಾಕುಟೀರದಲ್ಲಿ ‘ಶ್ರುತಿ ಸುಗಂಧ’ ವಾದ್ಯ ಸಂಗೀತ | ಜನವರಿ 17    

    January 16, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಾಹಿತ್ಯ ಅಕಾಡೆಮಿಯಿಂದ ನಿರ್ಕಾಣ್‌ನಲ್ಲಿ ‘ಗ್ರಾಮಲೋಕ’ ಕಾರ್ಯಕ್ರಮ
    Literature

    ಸಾಹಿತ್ಯ ಅಕಾಡೆಮಿಯಿಂದ ನಿರ್ಕಾಣ್‌ನಲ್ಲಿ ‘ಗ್ರಾಮಲೋಕ’ ಕಾರ್ಯಕ್ರಮ

    August 16, 2023Updated:August 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ನಿರ್ಕಾಣ್‌: ಸಾಹಿತ್ಯ ಅಕಾಡೆಮಿ ನವದೆಹಲಿ ಮತ್ತು ಐಸಿವೈಎಂ ನಿರ್ಕಾಣ್ ಘಟಕ ವತಿಯಿಂದ ನಿರ್ಕಾಣ್ ಸಂತ ತೋಮಸರ ಶಾಲೆಯ ಸಭಾಂಗಣದಲ್ಲಿ ದಿನಾಂಕ 13-08-2023 ಭಾನುವಾರದಂದು ‘ಗ್ರಾಮ ಲೋಕ’ ಕಾರ್ಯಕ್ರಮ ನಡೆಯಿತು.

    ರಾಷ್ಟ್ರಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಾಹಿತ್ಯ ಅಕಾಡೆಮಿ ಸಲಹಾ ಮಂಡಳಿ ಸದಸ್ಯ ಎಚ್ಚೆಮ್, ಪೆರ್ನಾಲ್  –  ಸಾಹಿತ್ಯ ಆಕಾಡೆಮಿ ನಡೆದು ಬಂದ ದಾರಿ, ಕಾರ್ಯಚಟುವಟಿಕೆಗಳು ಹಾಗೂ ಪ್ರಸ್ತುತ ಕಾರ್ಯಕ್ರಮಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿ, ಕಾರ್ಯಕ್ರಮದ ಅಧ್ಯಕ್ಷರಾದ ಜಿಯೋ ಅಗ್ರಾರ್, ಕವಿ ಸುರೇಶ್ ಬಾಳಿಗ, ಕತೆಗಾರ ಪಂಚು ಬಂಟ್ವಾಳ್, ಜಾನಪದ ಕಲಾವಿದೆ  ರೋಸಲಿನ್ ಮೊರಾಸ್, ಕವಿ ಕಿರಣ್ ನಿರ್ಕಾಣ್ ಇವರನ್ನು ಪರಿಚಯಿಸಿದರು. ಸಾಹಿತ್ಯ ಅಕಾಡೆಮಿ ಕೊಂಕಣಿ ಭಾಷಾ ಮುಖ್ಯಸ್ಥ ಹಾಗೂ ಕಾರ್ಯಕಾರಿ ಮಂಡಳಿಯ ಸದಸ್ಯ ಕವಿ ಮೆಲ್ವಿನ್ ರೊಡ್ರಿಗಸ್, ಐಸಿವೈಎಂ ನಿರ್ಕಾಣ್ ಘಟಕದ ಅಧ್ಯಕ್ಷೆ ಸ್ವೀಡಲ್ ರೊಡ್ರಿಗಸ್ ಅವರೊಂದಿಗೆ, ಕವಿ- ಕಲಾವಿದರನ್ನು ವೇದಿಕೆಗೆ ಬರಮಾಡಿಕೊಂಡರು.

    ಕಾರ್ಯಕ್ರಮದ ಅಧ್ಯಕ್ಷರಾದ ಜಿಯೋ ಅಗ್ರಾರ್ ಅವರು ತಮ್ಮ ಪ್ರಸ್ತಾವಿಕ ಭಾಷಣದಲ್ಲಿ ಸಾಹಿತ್ಯದ ಅಗತ್ಯ, ನಾವು ಬದುಕುವ ಪರಿಸರ ಸಾಹಿತ್ಯದ ಮೇಲೆ ಬೀರುವ ಪರಿಣಾಮ ಹಾಗೂ ಇದರಿಂದ ಮನುಷ್ಯ ಸಂಬಂದಗಳಲ್ಲಾಗುವ ಬದಲಾವಣೆಯ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಿ, ತಾವು ರಚಿಸಿದ ಕೃತಿಗಳನ್ನು ಪುಸ್ತಕ ರೂಪದಲ್ಲಿ ಕಾಪಿಡುವ ಬಗ್ಗೆ ಕವಿ – ಸಾಹಿತಿಗಳಿಗೆ ಕಿವಿಮಾತು ಹೇಳಿದರು.

    ಕವಿ ಬಂಟ್ವಾಳ ಸುರೇಶ್ ಬಾಳಿಗ ಅವರು ಪೋಸ್ಟರ್ ಹಚ್ಚುವ ಮನುಷ್ಯ, ಕವಿತೆಯ ಹುಡುಕಾಟ ಮತ್ತು ಗುರುತು ಕಾರ್ಡು – ಮೂರು ಕವಿತೆಗಳನ್ನು ಪ್ರಸ್ತುತಪಡಿಸಿದರು. ಪಂಚು ಬಂಟ್ವಾಳ ‘ಕೊಬಾಚೊ ಗಾದೊ’ ಎಂಬ ಸಣ್ಣಕತೆ ವಾಚಿಸಿದರು. ರೋಸಲಿನ್ ಮತ್ತು ವೀಣಾ ಮೋರಾಸ್  ಶಿಶುಗೀತೆಗಳನ್ನು ಹಾಡಿ ಪ್ರಾತ್ಯಕ್ಷಿಕೆ ನೀಡಿದರು. ಕವಿ ಕಿರಣ್ ನಿರ್ಕಾಣ್ ಅಮ್ಮ, ಬೀಡಿ ಸುಪ್ ಮತ್ತು ಗೃಹಲಕ್ಷ್ಮಿ ಯ – ಮೂರು ಕವಿತೆಗಳನ್ನು ಓದಿದರು.

    ಅಧ್ಯಕ್ಷ ಜಿಯೋ ಆಗ್ರಾರ್ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಿದ ಕವಿತೆ, ಸಣ್ಣಕತೆ ಮತ್ತು ಶಿಶುಗೀತೆಗಳ ಟಿಪ್ಪಣಿಯ ಜೊತೆಗೆ ತಮ್ಮ ‘ಊಟದ ಕೋಣೆ’ ಕವಿತೆ ಪ್ರಸ್ತುತ ಪಡಿಸಿ ಸಮಾರೋಪಗೈದರು. ಸಾಹಿತ್ಯ ಅಕಾಡೆಮಿ ಭಾಷಾ ಸಲಹಾ ಮಂಡಳಿಯ ಸದಸ್ಯ ಸ್ಟ್ಯಾನಿ ಬೇಳ ಉಪಸ್ಥಿತರಿದ್ದರು.

    ಐಸಿವೈಎಂ ನಿರ್ಕಾಣ್ ಘಟಕದ ಅಧ್ಯಕ್ಷೆ ಸ್ವೀಡಲ್ ರೊಡ್ರಿಗಸ್ ವಂದಿಸಿದರು. ಭಾಗವಹಿಸಿದ ಅತಿಥಿಗಳಿಗೆ ನೆನಪಿನ ಕಾಣಿಕೆಯಾಗಿ ಕೊಂಕಣಿ ಪುಸ್ತಕಗಳನ್ನು ನೀಡಿ ಸಾಹಿತ್ಯ ಅಕಾಡೆಮಿ ಕಾರ್ಯಕಾರಿ ಮಂಡಳದ ಸದಸ್ಯ ಕವಿ ಮೆಲ್ವಿನ್ ರೊಡ್ರಿಗಸ್ ಗೌರವಿಸಿದರು. ನಿರ್ಕಾಣ್ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಸುಮಾರು ನೂರಕ್ಕೂ ಅಧಿಕ ಮಂದಿ ಸಾಹಿತ್ಯಾಸಕ್ತರು, ಗ್ರಾಮೀಣ ಪ್ರದೇಶಗಳಿಗಾಗಿಯೇ ಮೀಸಲಿರುವ ಸಾಹಿತ್ಯ ಅಕಾಡೆಮಿಯ ಗ್ರಾಮಲೋಕ ವಿಶೇಷ ಕಾರ್ಯಕ್ರಮ ಆಸ್ವಾದಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಡಾ.ಎಚ್.ಗಿರಿಜಮ್ಮ ಸಾಹಿತ್ಯ ಪ್ರಶಸ್ತಿಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಆಗಸ್ಟ್ 30
    Next Article ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಅಧಿಕ ಶ್ರಾವಣ ಮಾಸ ಪ್ರಯುಕ್ತ ವಿಶೇಷ ತಾಳಮದ್ದಳೆ – ‘ಮಯೂರಧ್ವಜ’  
    roovari

    Add Comment Cancel Reply


    Related Posts

    ಕನ್ನಡ ಭವನದ ‘ರಜತ ಸಂಭ್ರಮ’ ನಾಡು ನುಡಿ ಹಬ್ಬ, ವಿವಿಧ ಪ್ರಶಸ್ತಿ ಪ್ರದಾನ | ಜನವರಿ 18

    January 16, 2026

    ಕವಿ ಮಿತ್ರರು ಸಂಪದ ಸಾಲು ಪತ್ರಿಕೆ ವತಿಯಿಂದ ‘ಕವಿ ಗೋಷ್ಠಿ’ ಕಾರ್ಯಕ್ರಮ | ಜನವರಿ 18

    January 15, 2026

    ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದ ‘ಕಥಾಬಿಂದು ಪ್ರಕಾಶನ’

    January 15, 2026

    ಬೆಂಗಳೂರಿನಲ್ಲಿ ಕರ್ನಾಟಕ ಗಜಲ್ ಅಕಾಡೆಮಿಯಿಂದ ‘ಕನ್ನಡ ಗಜಲ್ ಕಮ್ಮಟ’ | ಜನವರಿ 18  

    January 15, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.