Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ಗಾಂಧಿವಾದಿ, ಕನ್ನಡದ ಶಕ್ತಿ ಸಿದ್ದವನಹಳ್ಳಿ ಕೃಷ್ಣಶರ್ಮ

    July 4, 2025

    ಆನ್ಲೈನ್ ರಾಜ್ಯಮಟ್ಟದ ಹಿಂದೂಸ್ತಾನಿ ಸಂಗೀತ ಸ್ಪರ್ಧೆ | 03 ಆಗಸ್ಟ್

    July 4, 2025

    ಕೊಪ್ಪಳದಲ್ಲಿ ‘ವಚನ ಸಂರಕ್ಷಣಾ ದಿನಾಚರಣೆ’

    July 4, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸರಯೂ ಸಪ್ತಾಹ ಆರಂಭ
    Yakshagana

    ಸರಯೂ ಸಪ್ತಾಹ ಆರಂಭ

    May 27, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು: ‘ಸರಯೂ ಬಾಲ ಯಕ್ಷ ವೃಂದ ಕೋಡಿಕಲ್’ ಇವರು ಕದ್ರಿ ದೇವಸ್ಥಾನ ಸಹಕಾರದೊಂದಿಗೆ ನಡೆಯುವ ಸರಯೂ ಬಾಲ ಯಕ್ಷ ವೃಂದದ 23ನೇ ವರ್ಷದ ಸಪ್ತಾಹವನ್ನು ದಿನಾಂಕ 25-05-2023ರಂದು ವೇದಮೂರ್ತಿ ನರಸಿಂಹ ತಂತ್ರಿಗಳು ಶ್ರೀ ಕ್ಷೇತ್ರ ಕದ್ರಿ ದೇವಳದ ರಾಜಾಂಗಣದಲ್ಲಿ ಉದ್ಘಾಟಿಸುತ್ತಾ “ಯಕ್ಷಗಾನವು ಸರ್ವರನ್ನೂ ತಲಪುವ ರಂಗ ಕಲೆ, ಹಿರಿಯರಿಂದಾರಂಭಿಸಿ ಕಿರಿಯರವರೆಗೂ ಅದು ಸರ್ವವ್ಯಾಪಿಯಾಗಿ ಆಕರ್ಷಿಸುತ್ತಿದೆ. ಹೊಸ ಚಿಗುರು ಚಿಣ್ಣರು ಸರಯೂ ಸಂಸ್ಥೆಯ ಮೂಲಕ ಜಗತ್ತಿಗೇ ಪರಿಚಯಿಸಲ್ಪಡುತ್ತಾರೆ. 23 ವರ್ಷಗಳಿಂದ ಅನೇಕ ವಿದ್ಯಾರ್ಥಿಗಳು ರಂಗಕ್ಕೆ ಪರಿಚಯಿಸಲ್ಪಟ್ಟಿದ್ದಾರೆ. ಮೇಳಗಳಲ್ಲೂ ಕಲಾವಿದರಾಗಿ ಕಲಾಸೇವೆ ನಡೆಸುತ್ತಿದ್ದಾರೆ. ಪತ್ತನಾಜೆಯ ಈ ದಿನದಿಂದಾರಂಭವಾಗುವ ಈ ಮಕ್ಕಳ ಮೇಳಕ್ಕೆ ಸಪ್ತಾಹಕ್ಕೆ ಶುಭ ಕೋರುತ್ತೇನೆ” ಎಂದು ಕಿಶೋರರಿಗೆ ಶುಭವನ್ನು ಕೋರಿದರು.

    ಸಂಸ್ಥೆಯ ಗೌರವ ಸಂಚಾಲಕರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರು “ಸಂಸ್ಥೆಯ ಏಳು-ಬೀಳುಗಳನ್ನು ವಿವರಿಸುತ್ತಾ ಕಲೆಗೆ ರಾಜಾಶ್ರಯ ಬೇಕು. ಆ ಕಾರ್ಯವನ್ನು ಸಜ್ಜನ ಕಲಾಪೋಷಕರು ಮಾಡಬೇಕು. ಸರಯೂ ಸಂಸ್ಥೆಯನ್ನು ಎಲ್ಲರೂ ಸೇರಿ ಬೆಳೆಸೋಣ” ಎಂದರು.

    ಮುಖ್ಯ ಅತಿಥಿಗಳಾಗಿ ಎಸ್.ಸಿ ಎಸ್. ಕಾಲೇಜಿನ ಪ್ರಾಂಶುಪಾಲ ಡಾ. ಡಿ.ಶ್ರೀಪತಿ ರಾವ್, ಯಕ್ಷ ಮಂಜುಳಾದ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ ”ಕೇಶವ ಕೋಡಿಕಲ್, ಸಂಸ್ಥೆಯ ಅಧ್ಯಕ್ಷ ಮಧುಸೂದನ ಅಲೆವೂರಾಯ ಭಾಗವಹಿಸಿದರು.

    ಕಾರ್ಯಕ್ರಮದಲ್ಲಿ ತಂತ್ರಿವರೇಣ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು. ಸಂಸ್ಥೆಯ ಸದಸ್ಯ ವೃಷಭ್ ಜಿ.ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ವರ್ಕಾಡಿ ರವಿ ಅಲೆವೂರಾಯ ಸ್ವಾಗತ-ಪ್ರಸ್ತಾವನೆ ನಡೆಸಿ, ಸುಧಾಕರ ರಾವ್ ಪೇಜಾವರ ನಿರ್ವಹಿಸಿ, ವರ್ಕಾಡಿ ಶ್ರೀ ಮಾಧವ ನಾವಡ ಧನ್ಯವಾದವಿತ್ತರು. ಬಳಿಕ ಪ್ರಸಿದ್ಧ ಕಲಾವಿದರು ಮತ್ತು ಸಂಸ್ಥೆಯ ಛಾತ್ರರಿಂದ ವಿಜಯದ್ವಯ ಪ್ರಸಂಗ ಪ್ರದರ್ಶಿಸಲ್ಪಟ್ಟಿತು.

     

    Share. Facebook Twitter Pinterest LinkedIn Tumblr WhatsApp Email
    Previous Articleಡಾ. ವಿಜಯಾ ದಬ್ಬೆ ನೆನಪಿನ ಕವನ ಮತ್ತು ಕಥಾ ಸ್ಪರ್ಧೆಯ ಫಲಿತಾಂಶ
    Next Article ಧಾರವಾಡದಲ್ಲಿ ಅಭಿನಯ ಭಾರತಿಯಿಂದ ‘ಚಾವುಂಡರಾಯ’ಪ್ರದರ್ಶನ | ಮೇ 28ಕ್ಕೆ
    roovari

    Add Comment Cancel Reply


    Related Posts

    ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಕಮ್ಮಟ ಮತ್ತು ಪ್ರಶಸ್ತಿ ಪ್ರದಾನ | ಜುಲೈ 06

    July 4, 2025

    ಕಾಳಿಂಗ ನಾವಡ ಪ್ರಶಸ್ತಿಗೆ ಹಾಲಾಡಿ ರಾಘವೇಂದ್ರ ಮಯ್ಯ ಆಯ್ಕೆ

    July 4, 2025

    ಕಾರ್ಕಳದ ಪೆರ್ವಾಜೆ ಹೈಸ್ಕೂಲಿನಲ್ಲಿ ‌ಯಕ್ಷಗಾನ ಶಿಕ್ಷಣ ಆರಂಭ

    July 4, 2025

    ತೆಕ್ಕಟ್ಟೆಯ ಹಯಗ್ರೀವದಲ್ಲಿ ಕೇಂದ್ರದ ಗುರುಗಳಾದ ಕೃಷ್ಣಯ್ಯ ಆಚಾರ್ ಬಿದ್ಕಲ್‌ಕಟ್ಟೆ ಇವರಿಗೆ ಅಭಿನಂದನೆ

    July 4, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.