Subscribe to Updates

    Get the latest creative news from FooBar about art, design and business.

    What's Hot

    ಅಮೃತ ಸೋಮೇಶ್ವರರ ನಾಟಕಗಳ ಅನುವಾದ ಕೃತಿ ಬಿಡುಗಡೆ | ಜನವರಿ 14

    January 12, 2026

    ಉಳಿಯ ಮನೆಯ ಸುಧಾ ಮಂದಿರದಲ್ಲಿ ವಾರದ ಕೂಟ ತಾಳಮದ್ದಳೆ

    January 12, 2026

    ಸಹ್ಯಾದ್ರಿ ಕಾಲೇಜಿನಲ್ಲಿ ಉದ್ಘಾಟನೆಗೊಂಡ ‘ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ 2025-26’

    January 12, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಾಸರಗೋಡಿನ ಪದ್ಮಗಿರಿ ಕಲಾಕುಟೀರದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ‘ಶರದ್ವಿಲಾಸ’
    Cultural

    ಕಾಸರಗೋಡಿನ ಪದ್ಮಗಿರಿ ಕಲಾಕುಟೀರದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ‘ಶರದ್ವಿಲಾಸ’

    November 1, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ರಂಗಚಿನ್ನಾರಿಯ ಅಂಗ ಸಂಸ್ಥೆ ನಾರಿಚಿನ್ನಾರಿಯ 10ನೆಯ ಸರಣಿ ಕಾರ್ಯಕ್ರಮ ‘ಶರದ್ವಿಲಾಸ’ವು ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ದಿನಾಂಕ 29-10-2023ರಂದು ಸಾಧಕರಿಗೆ ಸನ್ಮಾನ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಪ್ರಸ್ತುತಿಗಳೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು.

    ಖ್ಯಾತ ಲೇಖಕಿ ವಿಜಯಾ ಸುಬ್ರಹ್ಮಣ್ಯ ಇವರು ದೀಪ ಬೆಳಗಿಸುವುದರ ಮೂಲಕ ಸಮಾರಂಭವನ್ನು ಉದ್ಘಾಟಿಸಿ ಮಾತೃ ಋಣವನ್ನು ತೀರಿಸಲು ಅಸಾಧ್ಯ ಎಂದು ಹೇಳಿ ಮಾತೃತ್ವದ ಮಹತ್ವವನ್ನು ಹೃದಯಸ್ಪರ್ಶಿಯಾಗಿ ನಿರೂಪಿಸಿದರು. ಮಾಬ೯ಲ್ ವ್ಯಾಪಾರದಲ್ಲಿ ಯಶಸ್ವೀ ಮಹಿಳಾ ಉದ್ಯಮಿಯಾಗಿ ಹೆಸರು ಪಡೆದ ಬಿಂದು ದಾಸ್ ಹಾಗೂ ಕೊರಗ ಸಮುದಾಯದ ಮೊದಲ ಮಹಿಳಾ ಸಾಧಕಿ ಮೀನಾಕ್ಷಿ ಬೊಡ್ಡೋಡಿ ಅವರನ್ನು ಈ ಸಂದರ್ಭದಲ್ಲಿ ಹಾರ, ಫಲಪುಷ್ಪ ಮತ್ತು ಸ್ಮರಣಿಕೆಗಳನ್ನಿತ್ತು ಸನ್ಮಾನಿಸಲಾಯಿತು. ಸರ್ವಮಂಗಳಾಜಯ್ ಪುಂಚಿತ್ತಾಯ ಹಾಗೂ ವನಜಾಕ್ಷಿ ಚಂಬ್ರಕಾನ ಇವರು ಸನ್ಮಾನಿತರ ಸಾಧನೆಗಳನ್ನು ಪರಿಚಯಿಸಿದರು. ನಾರಿಚಿನ್ನಾರಿಯ ಅಧ್ಯಕ್ಷೆ ಸವಿತಾ ಟೀಚರ್ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಬಿಂದು ದಾಸ್ ಅವರು ತಮಗೆ ನೀಡಿದ ಸನ್ಮಾನಕ್ಕೆ ಕೃತಜ್ಞತೆಯನ್ನು ಅಪಿ೯ಸಿದರು. ಮೀನಾಕ್ಷಿ ಬೊಡ್ಡೋಡಿಯವರು ಅಮ್ಮನ ಕುರಿತಾದ ಭಾವಪೂರ್ಣ ಕವನವನ್ನು ವಾಚಿಸುವುದರೊಂದಿಗೆ ಋಣಭಾರ ಸಲ್ಲಿಸಿದರು.

    ಮಹೇಶ್ವರಿ ಯು. ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಭಾ ಕಾರ್ಯಕ್ರಮವು ತೇಜಕುಮಾರಿಯವರ ಸ್ವಾಗತದೊಂದಿಗೆ ಮುಂದುವರಿದು ಉಷಾ ರಾಮ್ ಅವರ ಧನ್ಯವಾದ ಸಮರ್ಪಣೆಯೊಂದಿಗೆ ಮುಕ್ತಾಯಗೊಂಡಿತು. ರಂಗ ಚಿನ್ನಾರಿಯ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಮುಂದಿನ ಕಾರ್ಯಕ್ರಮದ ರೂಪರೇಷೆಗಳನ್ನು ಮುಂದಿಟ್ಟು ಮತ್ತಷ್ಟು ಪ್ರತಿಭೆಗಳು ಪಾಲ್ಗೊಳ್ಳಲು ಕರೆಯಿತ್ತರು. ಮಾಂಡೊಲಿನ್ ಮಾಂತ್ರಿಕ ಪ್ರಸಾದ್ ಹಾಗೂ ರಂಗ ಚಿನ್ನಾರಿಯ ಕೋಳಾರು ಸತೀಶ್ ಚಂದ್ರ ಭಂಡಾರಿಯವರು ಉಪಸ್ಥಿತರಿದ್ದರು. ನಾರಿಚಿನ್ನಾರಿಯ ಕಾರ್ಯದರ್ಶಿ ದಿವ್ಯಾ ಗಟ್ಟಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.

    ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಪಣ೯ಶೆಟ್ಟಿ ಮತ್ತು ನಂದನ (ಭರತನಾಟ್ಯ), ಧನ್ಯಾ ಕೃಷ್ಣ ಪ್ರಸಾದ್ (ಮೋಹಿನಿಯಾಟ್ಟಂ), ಕಾವ್ಯ ಎನ್. (ಭಾವಗೀತೆ), ಸರೋಜ ಸುಬ್ರಹ್ಮಣ್ಯ ಭಟ್ (ಶಾಸ್ತ್ರೀಯ ಸಂಗೀತ), ಅನ್ವಿತಾ ಕಾಮತ್ (ವೀಣಾ ವಾದನ), ಸುಜಾತ ಕನಿಯಾಲ (ತುಳು ಜನಪದ ಗೀತೆ), ಶೀನಾಶಿವದಾಸ್ (ಮಲಯಾಳಂ ಜನಪದ ಹಾಡು) ಹಾಗೂ ಶ್ರೀ ಲಕ್ಷ್ಮೀ ಶೆಣೈ (ಹರಿಕಥೆ) ಇವುಗಳನ್ನು ಪ್ರಸ್ತುತ ಪಡಿಸಿ ಪ್ರೇಕ್ಷಕರ ಮನಸೂರೆಗೊಂಡರು.

    Share. Facebook Twitter Pinterest LinkedIn Tumblr WhatsApp Email
    Previous Articleಕುಡ್ಲ ತುಳು ಕೂಟ ಇದರ ಬಂಗಾರ್ ಪರ್ಬ ಸರಣಿ ಕಾರ್ಯಕ್ರಮದ ಅಂಗವಾಗಿ ‘ಮಾರ್ನೆಮಿದ ಮಿನದನ’
    Next Article ಸ್ವರ ಚಿನ್ನಾರಿಯಿಂದ ಯಶಸ್ವಿಯಾಗಿ ನಡೆದ ‘ಸ್ವರ ಸಂಚಾರ’ ಸಂಗೀತ ಶಿಬಿರ
    roovari

    Add Comment Cancel Reply


    Related Posts

    ಕುಂಜತ್ತೂರಿನ ಶ್ರೀ ಮಾತಾ ಕಲಾಲಯ ಸಭಾಂಗಣದಲ್ಲಿ ಕಲಾಕುಂಚದ ವಾರ್ಷಿಕೋತ್ಸವ

    January 10, 2026

    ಮಂಗಳೂರಿನ ‘ಡಾ. ಟಿ.ಎಂ.ಎ. ಪೈ ಸೆಂಟರ್’ನಲ್ಲಿ ‘ಮಂಗಳೂರು ಲಿಟ್ ಫೆಸ್ಟ್’ | ಜನವರಿ 10 ಮತ್ತು 11

    January 8, 2026

    ವಿಮರ್ಶೆ | ಗಾನ ಮೋಡಿ- ‘ಸಂಭ್ರಮ’ ಪ್ರಶಸ್ತಿ – ಸಾರ್ಥಕ ‘ನಿರಂತರ’ ಕಲಾಸಾಧನೆ

    January 8, 2026

    ಕದ್ರಿ ಪಾರ್ಕ್ ನಲ್ಲಿ ‘ಕಲಾಪರ್ಬ’ ಚಿತ್ರ-ಶಿಲ್ಪ-ಸಾಂಸ್ಕೃತಿಕ ಮೇಳ | ಜನವರಿ 09ರಿಂದ 11ರವರೆಗೆ

    January 7, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.