Subscribe to Updates

    Get the latest creative news from FooBar about art, design and business.

    What's Hot

    ಶುಕೀ ರಾವ್ ಹಾಗೂ ಶಿವಾನಿ ಕೇಂದ್ರ ಸರಕಾರದ ಶಿಷ್ಯವೇತನಕ್ಕೆ ಆಯ್ಕೆ

    June 3, 2025

    ವಿಶೇಷ ಲೇಖನ – ಗಾಯಕ ರತ್ನ ಡಾ. ಬಿ. ದೇವೇಂದ್ರಪ್ಪ

    June 3, 2025

    ಕೊಡಗು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರಕಟ

    June 3, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕ.ಸಾ.ಪ.ದಿಂದ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ‘ಎದೆಯ ಹಣತೆ’ ಕೃತಿ ಕುರಿತು ಚರ್ಚೆ
    Book Release

    ಕ.ಸಾ.ಪ.ದಿಂದ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ‘ಎದೆಯ ಹಣತೆ’ ಕೃತಿ ಕುರಿತು ಚರ್ಚೆ

    June 2, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಶಿವಮೊಗ್ಗ : ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ತನ್ನ ಮೂರು ವರ್ಷದ ಕಾರ್ಯಚಟುವಟಿಕೆಗಳ ದಾಖಲೆಗಳಿರುವ ‘ಕ್ರಿಯಾಶೀಲತೆಯ ಒಳನೋಟ’ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಬಾನು ಮುಷ್ತಾಕ್ ಅವರ ‘ಎದೆಯ ಹಣತೆ’ ಕೃತಿ ಕುರಿತು ಚರ್ಚೆ ಕಾರ್ಯಕ್ರಮವು ದಿನಾಂಕ 28 ಮೇ 2025ರಂದು ನಡೆಯಿತು.

    ಈ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ 19ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು, ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಜೆ.ಕೆ. ರಮೇಶ್ “ಕ್ರಿಯಾಶೀಲತೆಯ ಒಳನೋಟಕ್ಕೆ ಹೊರನೋಟವು ಇದೆ. ಮಲೆನಾಡಿನ ಚಿತ್ರಣ, ಜಿಲ್ಲೆಯ ನಕ್ಷೆ, ರಾಷ್ಟ್ರಕವಿಯ ಚಿತ್ರ ಎಲ್ಲವನ್ನೂ ಒಳಗೊಂಡಿದೆ. ಪರಿಷತ್ತು ಚಟುವಟಿಕೆಗಳು, ಅತಿಥಿಗಳ ಮಾತು ಸಂಘಟಿಸಿದ ನಾಲ್ಕು ಸಮ್ಮೇಳನಗಳ ಭಾಷಣಗಳ ಸಂಗ್ರಹಗಳಲ್ಲಿ ನೂರ ಇಪ್ಪತೈದು ಜನರ ಭಾಷಣಗಳ ಟಿಪ್ಪಣಿಗಳಿವೆ. ಇಲ್ಲಿ ಎಲ್ಲಾ ಬಗೆಯ ಅಭಿಪ್ರಾಯಗಳಿವೆ. ಒಳಹೊಕ್ಕು ನೋಡಿದಾಗ ಒಳನೋಟದ ಅರಿವಾಗುತ್ತೆ. ಈ ಸಂಚಿಕೆಯಲ್ಲಿ ಕನ್ನಡ ಭಾಷೆ, ಅದರ ಸ್ವರೂಪ, ಸ್ಥಿತಿ, ಸ್ಥಾನಮಾನಗಳ ಕುರಿತು ಚಿಂತಿಸಿರುವ ಲೇಖನಗಳಿವೆ. ಸಾಹಿತ್ಯ ಕೃತಿಗಳು, ಅಭಿವೃಚಿ, ಓದುಗರ ದೃಷ್ಟಿ, ಓದುವ ಹಂಬಲವೇ ಕಡಿಮೆ ಆಗುತ್ತಿರುವ ವಿಚಾರವಾಗಿ, ಪುಸ್ತಕದ ಮಹತ್ವ ಕುರಿತು ಮಾತುಗಳಿವೆ. ದತ್ತಿ ಉಪನ್ಯಾಸದಲ್ಲಿ ಒಂದೇ ವಿಚಾರ ಬೇರೆ ಬೇರೆ ಮಾತುಗಳನ್ನು ದಾಖಲಿಸಲಾಗಿದೆ. ಅಸಮಾನತೆ ಅಸಹಿಷ್ಣುತೆ, ಕೋಮುವಾದ ವಿಚಾರಗಳು, ಪರಿಸರಕ್ಕೆ ಸಂಬಂಧಿಸಿದ ಲೇಖನಗಳು ಇಲ್ಲಿವೆ. ಮಡಿವಂತಿಕೆಯಿಲ್ಲದೆ ಎಲ್ಲವನ್ನೂ ಒಳಗೊಂಡಿದೆ” ಎಂದು ವಿಶ್ಲೇಷಣೆ ಮಾಡಿದವರು.

    ಹಿರಿಯ ಸಾಹಿತಿಗಳಾದ ಡಾ. ಜೆ.ಕೆ. ರಮೇಶ್ ಮಾತನಾಡಿ “ಸಾಹಿತ್ಯ ಗ್ರಾಮದಲ್ಲಿ ಗ್ರಂಥಾಲಯ ಆರಂಭವಾಗಿದೆ. ಬಂಗಾರಪ್ಪ ನವರ ಹೆಸರಲ್ಲಿ ಮಾಡಿದ್ದು ಸಂತೋಷ. ಗ್ರಂಥಾಲಯ ದೇಶದ ಸಂಪತ್ತು. ಯಾವ ದೇಶದಲ್ಲಿ ಗ್ರಂಥಾಲಯಗಳು ಹೆಚ್ಚಿವೆಯೋ ಅವೇ ಶ್ರೀಮಂತ ರಾಷ್ಟ್ರಗಳು. ಅಮೇರಿಕ, ಫ್ರಾನ್ಸ್, ಬ್ರಿಟನ್ ನಂತಹ ರಾಷ್ಟ್ರಗಳು ಆ ಸಾಲಿಗೆ ಸೇರಿವೆ. ನಮ್ಮ ದೇಶದ ಜನಸಂಖ್ಯೆ ಅನುಗುಣವಾಗಿ ಇಪ್ಪತ್ತೈದು ಸಾವಿರ ಜನರಿಗೆ ಒಂದು ಗ್ರಂಥಾಲಯವಿದೆ. ಶ್ರೀಮಂತ ರಾಷ್ಟ್ರಗಳಲ್ಲಿ 250 ಜನರಿಗೆ ಒಂದು ಗ್ರಂಥಾಲಯವಿದೆ. ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಹೆಚ್ಚಿವೆ. ಓದುಗರ ಸಂಖ್ಯೆ ಗಮನಿಸಿದರೆ ಶೇಕಡ 1.5 ಜನರು ಗ್ರಂಥಾಲಯಕ್ಕೆ ಹೋಗುತ್ತಾರೆ. ಓದುಗರನ್ನು ಬೆಳೆಸುವತ್ತ ಅಗತ್ಯ ಗಮನಹರಿಸುವುದು ಮುಖ್ಯ. ಪುಸ್ತಕ ಸಹವಾಸದಿಂದ ನಿಮ್ಮ ಜ್ಞಾನ ಹೆಚ್ಚುತ್ತದೆ. ಜ್ಞಾನಕ್ಕೆ ಶತ್ರುಗಳು ಹೆದರುತ್ತಾರೆ. ದೇವಾಲಯಕ್ಕೆ ಭೇಟಿ ಕೊಡಲು ಸಾಲು, ಸಾಲು ನಿಲ್ಲುತ್ತಾರೆ. ಅದೇ ಸಾಲು ಗ್ರಂಥಾಲಯದ ಮುಂದೆ ನಿಲ್ಲುವುದಾದರೆ ಆಗ ಭಾರತ ವಿಶ್ವ ಗುರುವಾಗಬಲ್ಲದು. ನೆಮ್ಮದಿಯ ಬದುಕಿಗೆ ಗ್ರಂಥಾಲಯ ಬೇಕು” ಎಂದರು.

    ಈ ಕಾರ್ಯಕ್ರಮದಲ್ಲಿ ಬಾನು ಮುಷ್ತಾಕ್ ಅವರ ‘ಎದೆಯ ಹಣತೆ’ ಕೃತಿಯ ಕುರಿತು ಮಾತನಾಡಿದ ಲೇಖಕಿ, ಪ್ರಕಾಶಕರಾದ ಅಕ್ಷತಾ ಹುಂಚದಕಟ್ಟೆ “ಕನ್ನಡದ ಲೇಖಕಿಗೆ ಬೂಕರ್ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಜಗತ್ತು ಕನ್ನಡ, ಕರ್ನಾಟಕ ವಿಶೇಷ ಆಸಕ್ತಿಯಿಂದ ನೋಡುವ ಕಾಲ ಬಂದಿದೆ. ಹೆಜ್ಜೆಮೂಡದ ಹಾದಿ ಆರು ಕಥೆಗಳಿರುವ ಸಂಕಲನವನ್ನು ಆಂಗ್ಲ ಭಾಷೆಗೆ ಭಾಷಾಂತರ ಮಾಡಿ ‘ಹಾರ್ಟ್ ಲ್ಯಾಂಪ್’ ಕೃತಿಗೆ ವಿಶ್ವ ಪ್ರಶಸ್ತಿ ಬಂದಿದೆ. ಮಹಿಳೆಯರ ಬರಹವೆಂದರೆ ಅಡಿಗೆಮನೆ ಸಾಹಿತ್ಯ ಎಂದು ನಿರ್ಲಕ್ಷ್ಯ ಮಾಡುತ್ತಿದ್ದ ಕಾಲದಲ್ಲಿ ಅದೇ ಮಹಿಳಾ ಸಾಹಿತ್ಯ ವಿಶ್ವ ಮನ್ನಣೆ ತಂದುಕೊಟ್ಟಿದ್ದು ಮಹಿಳಾ ಸಾಹಿತ್ಯಕ್ಕೆ ಸಿಕ್ಕ ಮಾನ್ಯತೆ. ಪುರುಷರು ಬರೆದ ಸಾಹಿತ್ಯಕ್ಕೆ ಇರುವ ಮಾನ್ಯತೆ ಹೆಣ್ಣುಮಕ್ಕಳು ಬರೆದ ಸಾಹಿತ್ಯಕ್ಕೂ ದೊರೆಯಬೇಕು. ಪ್ರತ್ಯೇಕಿಸದೆ ಒಗ್ಗಟ್ಟಿನಿಂದ ಒಳಗೊಳ್ಳುವಿಕೆಯಲ್ಲಿ ಜಗತ್ತು ಬೆಳಗಬೇಕು. ಜನಪರ ವಾದಿಗಳಿಗೆ ಮೂಲಭೂತ ವಾದಿಗಳ ಭಯ, ಆತಂಕ, ದಾಳಿ ಮಾಡುವುದು, ಬಹಿಷ್ಕಾರದ ನೋವುಂಟು ಮಾಡುವ ಸಂದರ್ಭದ ತಲ್ಲಣಗಳನ್ನು ಕುರಿತು ಬಾನು ಮುಷ್ತಾಕ್ ಅವರು ತಮ್ಮ ಕೃತಿಯಲ್ಲಿ ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದಾರೆ” ಎಂಬುದನ್ನು ವಿವರಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಕೆ.ಎಸ್. ಮಂಜಪ್ಪ ನಿರೂಪಿಸಿದರು. ಡಾ. ವಿಜಯಾದೇವಿ, ಎಂ. ನವೀನ್ ಕುಮಾರ್, ಕೆ.ಎಸ್. ಹುಚ್ಚರಾಯಪ್ಪ, ಮಂಜುನಾಥ ಕಾಮತ್, ಎಚ್.ಎಸ್. ರಘು, ಮಹಾದೇವಿ, ಎಚ್. ತಿಮ್ಮಪ್ಪ ಭದ್ರಾವತಿ, ಎಂ.ಇ. ಜಗದೀಶ್, ಮೋಹನ್ ಕುಮಾರ್, ಡಿ. ಗಣೇಶ್ ಇತರರು ವೇದಿಕೆಯಲ್ಲಿದ್ದರು.

    Book release kannada Literature
    Share. Facebook Twitter Pinterest LinkedIn Tumblr WhatsApp Email
    Previous Articleಕಾಸರಗೋಡಿನಲ್ಲಿ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಜನ್ಮದಿನೋತ್ಸವ ಸಂಭ್ರಮ | ಜೂನ್ 08
    Next Article ತೆಕ್ಕಟ್ಟೆ ಹಯಗ್ರೀವದಲ್ಲಿ ಬಡಗು ಹಿಮ್ಮೇಳ ಮುಮ್ಮೇಳ ತರಗತಿ ಉದ್ಘಾಟನೆ
    roovari

    Add Comment Cancel Reply


    Related Posts

    ಕೊಡಗು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರಕಟ

    June 3, 2025

    ಕೊಂಡೆವೂರಿನಲ್ಲಿ ತುಲುವೆರೆ ಕಲ ಸಂಘಟನೆಯ ಎರಡನೇ ‘ವರ್ಸೋಚ್ಚಯ’

    June 3, 2025

    ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ದೀಪಾಭಾಸ್ತಿಯವರಿಗೆ ಗೃಹ ಸನ್ಮಾನ

    June 3, 2025

    ‘ವಿಭಾ’ ಸಾಹಿತ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

    June 3, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.