Subscribe to Updates

    Get the latest creative news from FooBar about art, design and business.

    What's Hot

    ಕಾಸರಗೋಡಿನ ಕನ್ನಡ ಭವನದಲ್ಲಿ ‘ವಾಚನ ವಾರಾಚರಣೆ ಸಮಾರಂಭ’ | ಜೂನ್ 27

    June 25, 2025

    ಧಾರವಾಡದ ಮನೋಹರ ಗ್ರಂಥ ಮಾಲಾದಲ್ಲಿ ದತ್ತಿ ಉಪನ್ಯಾಸ | ಜೂನ್ 26

    June 25, 2025

    ಬೆಂಗಳೂರಿನಲ್ಲಿ ಉದ್ಘಾಟನೆಗೊಂಡ ‘ಮೂಡಲಪಾಯ ಯಕ್ಷೋತ್ಸವ’

    June 25, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿಶೇಷ ಲೇಖನ – ಗ್ರಂಥಾಲಯ ವಿಜ್ಞಾನದ ಸಾಧಕ ಡಾ. ಎಸ್. ಆರ್. ಗುಂಜಾಳ
    Article

    ವಿಶೇಷ ಲೇಖನ – ಗ್ರಂಥಾಲಯ ವಿಜ್ಞಾನದ ಸಾಧಕ ಡಾ. ಎಸ್. ಆರ್. ಗುಂಜಾಳ

    June 25, 2025Updated:June 24, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    1932ರ ಜೂನ್ 25ರಂದು ಜನಿಸಿದ ಡಾ. ಶಿವಪುತ್ರಪ್ಪ ರಾಯಪ್ಪ ಗುಂಜಾಳ್ ಇವರದು ಪ್ರಾಧ್ಯಾಪಕ, ಸಂಶೋಧಕ ಹಾಗೂ ಆಡಳಿತಗಾರರಾಗಿ ಬಹುಮುಖ ವ್ಯಕ್ತಿತ್ವ. ಧಾರವಾಡ ಜಿಲ್ಲೆಯ ಕೋಳಿವಾಡದಲ್ಲಿ ಜನಿಸಿದ ಇವರ ತಂದೆ ರಾಯಪ್ಪ, ತಾಯಿ ರುದ್ರಮ್ಮ. ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು 1979ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ವಿಭಾಗದ ಮುಖ್ಯಸ್ಥರಾಗಿದ್ದರು. ‘ಉತ್ತಂಗಿ ಚನ್ನಪ್ಪನವರ ಜೀವನ ಮತ್ತು ಕೃತಿಗಳು : ಒಂದು ಅಧ್ಯಯನ’ ಪ್ರಬಂಧಕ್ಕೆ ಬಂಗಾರದ ಪದಕದೊಡನೆ ಪಿ.ಎಚ್.ಡಿ. ಪದವಿಯನ್ನು ಗಳಿಸಿಕೊಂಡರು. ಅಧ್ಯಾಪನದ ಜೊತೆಗೆ ಸಂಶೋಧನೆ, ಬರವಣಿಗೆ, ಗ್ರಂಥಾಲಯ ವಿಜ್ಞಾನ ಗ್ರಂಥಗಳು ಸೇರಿದಂತೆ 72 ಕೃತಿಗಳು 150 ಲೇಖನಗಳನ್ನು ರಚಿಸಿದರು. ಇಪ್ಪತ್ತು ವಿಶ್ವ ವಿದ್ಯಾಲಯಗಳ ಅಭ್ಯಾಸ ಮಂಡಳಿಯ ಸದಸ್ಯರಾಗಿ, ಗುಲ್ಬರ್ಗ ವಿಶ್ವ ವಿದ್ಯಾಲಯದ ಸಮಾಜ ವಿಜ್ಞಾನ ವಿಭಾಗದ ಡೀನ್ ಆಗಿ ಅಪ್ರತಿಮ ಶೈಕ್ಷಣಿಕ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶರಣ ಸಾಹಿತ್ಯ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳಿಂದ ಭೂಷಿತರಾದ ಗುಂಜಾಳ್ ನಿಯತಕಾಲಿಕೆಗಳ ಸಂಪಾದಕರು ಹಾಗೂ ಪಿ.ಎಚ್.ಡಿ. ವಿದ್ಯಾರ್ಥಿಗಳ ಮಾರ್ಗದರ್ಶಕರಾಗಿ ಸೇವೆಗೈದ ಸಾಧಕಮಣಿ. ಎಸ್.ಆರ್. ಗುಂಜಾಳ ಇವರು ಗ್ರಂಥಾಲಯ ವಿಜ್ಞಾನ ಮತ್ತು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಅವರು ಬಸವ ತತ್ವಗಳ ಪ್ರಸಾರ ಮತ್ತು ವಚನ ಸಾಹಿತ್ಯದ ಸಂಶೋಧನೆಯಲ್ಲಿ ನೀಡಿರುವ ಸೇವೆ ಅಮೋಘವಾದದ್ದು.

         -ಅಕ್ಷರೀ 

    article baikady Birthday roovari specialarticle
    Share. Facebook Twitter Pinterest LinkedIn Tumblr WhatsApp Email
    Previous Article‘ಕರ್ನಾಟಕದ ಶತಾಯುಷಿಗಳು’ ಕೃತಿ ಲೋಕಾರ್ಪಣೆ ಸಮಾರಂಭ | ಜೂನ್ 25
    Next Article ವಿಶೇಷ ಲೇಖನ – ಅನನ್ಯ ರಂಗಕರ್ಮಿ ಜಿ. ಕೆ. ಐತಾಳ್
    roovari

    Add Comment Cancel Reply


    Related Posts

    ಕಾಸರಗೋಡಿನ ಕನ್ನಡ ಭವನದಲ್ಲಿ ‘ವಾಚನ ವಾರಾಚರಣೆ ಸಮಾರಂಭ’ | ಜೂನ್ 27

    June 25, 2025

    ಧಾರವಾಡದ ಮನೋಹರ ಗ್ರಂಥ ಮಾಲಾದಲ್ಲಿ ದತ್ತಿ ಉಪನ್ಯಾಸ | ಜೂನ್ 26

    June 25, 2025

    ಬೆಂಗಳೂರಿನಲ್ಲಿ ಉದ್ಘಾಟನೆಗೊಂಡ ‘ಮೂಡಲಪಾಯ ಯಕ್ಷೋತ್ಸವ’

    June 25, 2025

    ಕುಕ್ಕುಂದೂರು ಅಯ್ಯಪ್ಪ ನಗರ ಸರಕಾರಿ ಶಾಲೆಯಲ್ಲಿ ಯಕ್ಷಗಾನ ಶಿಕ್ಷಣ ಆರಂಭ

    June 25, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.