Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಾಹಿತ್ಯ ಸದನದಲ್ಲಿ ಡಾ. ಕೆ.ವಿ. ಜಲಜಾಕ್ಷಿ ಸಂಸ್ಮರಣ ಕಾರ್ಯಕ್ರಮ 
    Competition

    ಸಾಹಿತ್ಯ ಸದನದಲ್ಲಿ ಡಾ. ಕೆ.ವಿ. ಜಲಜಾಕ್ಷಿ ಸಂಸ್ಮರಣ ಕಾರ್ಯಕ್ರಮ 

    September 2, 2024Updated:September 3, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಮಂಗಳೂರು : ಕರಾವಳಿ ಲೇಖಕಿಯರ ವಾಚಕಿಯರ ಸಂಘದ ವತಿಯಿಂದ ಡಾ. ಕೆ.ವಿ. ಜಲಜಾಕ್ಷಿ ಸಂಸ್ಮರಣ ಕಾರ್ಯಕ್ರಮವು ಉರ್ವಸ್ಟೋರ್ ನ ಸಾಹಿತ್ಯ ಸದನದಲ್ಲಿ ದಿನಾಂಕ 24 ಆಗಸ್ಟ್ 2024ರಂದು ನಡೆಯಿತು.
    ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಶೆಟ್ಟಿಯವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮನುಷ್ಯ ಜನ್ಮದ ಕ್ಷಣಿಕತೆ ಹಾಗೂ ನಶ್ವರತೆಗಳನ್ನು ತಿಳಿಸುತ್ತಾ ಇಂತಹ ಸಂಸ್ಮರಣ ಕಾರ್ಯಕ್ರಮಗಳು ದೇಹ ಅಳಿದರೂ ಖ್ಯಾತಿ ಅಮರವೆಂಬಂತೆ ಮಾನವರಿಗೆ ಮರುಜನ್ಮ ನೀಡುತ್ತವೆ ಎಂದು ಹೇಳಿದರು.
    ಡಾ. ಕೆ.ವಿ. ಜಲಜಾಕ್ಷಿಯವರ ಪತಿ ಹಾಗೂ ಕಾರ್ಯಕ್ರಮದ ಪ್ರಮುಖ ರೂವಾರಿ ಡಾ. ವಿ.ಜಿ. ಭಟ್ ಇವರು ಪ್ರಾಸ್ತಾವಿಕ ಭಾಷಣ ಮಾಡಿ ಜಲಜಾಕ್ಷಿಯವರ ಬಹುಮುಖ ಪ್ರತಿಭೆಯ ಜೀವನವನ್ನು ಕೊಂಡಾಡಿದರು. ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಡಾ. ಸೋಮಣ್ಣರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಡಾ. ಜಲಜಾಕ್ಷಿಯವರ ಸಾಹಿತ್ಯ ಸೇವೆ ಹಾಗೂ ವೃತ್ತಿ ನಿಷ್ಠೆಯನ್ನು ಶ್ಲಾಘಿಸಿದರು. “ಪ್ರಸ್ತುತ ಸಾಮಾಜಿಕ ಪರಿಸ್ಥಿತಿಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಅತೀ ಅಗತ್ಯ. ಡಾ. ಜಲಜಾಕ್ಷಿಯವರು ಕೆಲವು ವರ್ಷಗಳ ಹಿಂದೆಯೇ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದರು.” ಎಂದು ಹೇಳಿದರು.
    ಸುರತ್ಕಲ್ ನ ಪ್ರಗತಿಪರ ಉದ್ಯಮಿ ಶ್ರೀಮತಿ ಸುಪ್ರಭಾ ರಾವ್ ಇವರು ಸಂಸ್ಮರಣ ಭಾಷಣ ಮಾಡಿದರು. ಈ ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಕಥಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಡಾ. ಜ್ಯೋತಿ ಚೇಳ್ಯಾಯ್ರ, ಶ್ರೀಮತಿ ದೇವಿಕಾ ನಾಗೇಶ್, ಶ್ರೀ ಮುಸ್ತಾಫಾರವರು ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದರು. ಲೇಖಕಿ ಶ್ರೀಮತಿ ದೇವಿಕಾ ನಾಗೇಶ್ ರವರು ತೀರ್ಪುಗಾರರ ಅನಿಸಿಕೆಗಳನ್ನು  ವ್ಯಕ್ತಪಡಿಸಿದರು. ಜಲಜಾಕ್ಷಿಯವರ ಸಂಬಂಧಿಕರಾದ ಶ್ರೀ ಜಗನ್ನಾಥ್ ರವರು ಮಾತನಾಡಿ “ಜಲಜಾಕ್ಷಿಯವರ ಜೀವನಾದರ್ಶಗಳೇ ಅವರನ್ನು ಬಹು ಎತ್ತರಕ್ಕೆ ಕೊಂಡೊಯ್ಯುತ್ತದೆ.” ಎಂದರು.
    ಕಥಾ ಸ್ಪರ್ಧೆಯಲ್ಲಿ ಉಜಿರೆ ಎಸ್.ಡಿ.ಎಮ್. ಸ್ನಾತಕೋತ್ತರ ಕಾಲೇಜಿನ ವಿದ್ಯಾರ್ಥಿ ಸಂಜಯ್ ಪ್ರಥಮ ಬಹುಮಾನ, ಕಾಸರಗೋಡಿನ ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಜ್ಯೋತಿ ಲಕ್ಷ್ಮೀ ದ್ವಿತೀಯ ಬಹುಮಾನ ಹಾಗೂ ಸಾಗರ ಗಂಗೋತ್ರಿ ಶಿಕ್ಷಣ ಮಹಾವಿದ್ಯಾನಿಲಯ ಎಳ್ಳೂರು ಇಲ್ಲಿಯ ಪ್ರಥಮ ಬಿ.ಎಡ್. ವಿದ್ಯಾರ್ಥಿನಿ ಅನುಷಾ ತೃತೀಯ ಬಹುಮಾನವನ್ನು ಪಡೆದರು. ಮಂಗಳೂರಿನ ಮ್ಯಾಪ್ಸ್ ಕಾಲೇಜಿನ ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ತನಿಷ್ಕಾ ವಿಶೇಷ ಬಹುಮಾನ ಹಾಗೂ ಇನ್ನಿತರ ಏಳು ಮಂದಿಗೆ ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು.
    ಕಾರ್ಯಕ್ರಮದ ಆರಂಭದಲ್ಲಿ ಸಂಘದ ಜೊತೆ ಕಾರ್ಯದರ್ಶಿ ಶ್ರೀಮತಿ ಕೃಷ್ಣವೇಣಿಯವರು ಆಶಯಗೀತೆ ಹಾಡಿದರು. ಸಂಘದ ಉಪಾಧ್ಯಕ್ಷೆ ಡಾ. ಅರುಣಾ ನಾಗರಾಜ್ ಸ್ವಾಗತಿಸಿ, ಸಂಘದ ಕಾರ್ಯದರ್ಶಿ ಶ್ರೀಮತಿ ಯಶೋದಾ ಮೋಹನ್ ಕಾರ್ಯಕ್ರಮವನ್ನು ನಿರೂಪಿಸಿ, ಕೋಶಾಧ್ಯಕ್ಷೆ ಶ್ರೀಮತಿ ಮೋಲಿ ಮಿರಾಂದಾ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಡಾ. ವಿ.ಜಿ. ಭಟ್ ಇವರ ಅನೇಕ ಬಂಧುಗಳು ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಜನಮನ ರಂಜಿಸಿದ ‘ಉದಯರಾಗ – 55’ ಕಾರ್ಯಕ್ರಮ  
    Next Article ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಸರಣಿ ತಾಳಮದ್ದಳೆ
    roovari

    Comments are closed.

    Related Posts

    ವಿವೇಕಾನಂದ ಕಾಲೇಜಿನಲ್ಲಿ ವಿಚಾರಗೋಷ್ಠಿ ಮತ್ತು ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ

    May 2, 2025

    ನಿಟ್ಟೆ (ಪರಿಗಣಿತ ವಿಶ್ವವಿದ್ಯಾಲಯ)ದಲ್ಲಿ ಯಶಸ್ವಿಯಾಗಿ ನಡೆದ ‘ಯಕ್ಷಗವಿಷ್ಟಿ’

    April 30, 2025

    ಮಡಿಕೇರಿಯಲ್ಲಿ ‘ಕಲೋತ್ಸವ 2025’ ಜಿಲ್ಲಾ ಮಟ್ಟದ ಅಂತ‌ರ್ ಕಾಲೇಜು ಸ್ಪರ್ಧಾ ಕಾರ್ಯಕ್ರಮ

    April 29, 2025

    ಪುಸ್ತಕ ಬಹುಮಾನಕ್ಕಾಗಿ ಜಾನಪದ ಕೃತಿ ಆಹ್ವಾನ | ಕೊನೆಯ ದಿನಾಂಕ ಮೇ 05

    April 28, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.