Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ಚಿಂತನಶೀಲ ಬರಹಗಾರ ಎಂ. ಎಸ್. ಕೆ. ಪ್ರಭು

    July 15, 2025

    ಪುಸ್ತಕ ವಿಮರ್ಶೆ – ಪೀಳಿಗೆಯ ಯೋಚನೆಗಳನ್ನು ಬದಲು ಮಾಡಬಲ್ಲ ಕೃತಿ – ‘ಮಾತು ಎಂಬ ವಿಸ್ಮಯ’

    July 15, 2025

    ನಟನದಲ್ಲಿ ‘ಸುಬ್ಬಣ್ಣ ಸ್ಮರಣೆ 2025’ | ಜುಲೈ 16

    July 15, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ಸಂತೆಕಟ್ಟೆ ರಸ್ತೆ ಬಿಚ್ಚಿಟ್ಟ ಕತೆಗಳು….’ ಕಥಾ ಸ್ಪರ್ಧೆ | ಕೊನೆಯ ದಿನಾಂಕ ಸೆಪ್ಟೆಂಬರ್ 30
    Competition

    ‘ಸಂತೆಕಟ್ಟೆ ರಸ್ತೆ ಬಿಚ್ಚಿಟ್ಟ ಕತೆಗಳು….’ ಕಥಾ ಸ್ಪರ್ಧೆ | ಕೊನೆಯ ದಿನಾಂಕ ಸೆಪ್ಟೆಂಬರ್ 30

    September 23, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಹೋಂ ಡಾಕ್ಟರ್ ಫೌಂಡೇಶನ್ ಉಡುಪಿ ಇವರ ನೇತೃತ್ವದಲ್ಲಿ ಸುಮಾರು ಮೂರು ವರ್ಷಗಳಿಂದ ಉಡುಪಿಯ ಸಂತೆಕಟ್ಟೆ ಭಾಗದ ಜನರಿಗೆ ತಲೆನೋವಾಗಿರುವ ನಿತ್ಯ ಸಂಕಟ, ಅದೆಷ್ಟೋ ಜನರ ಪಾಲಿಗೆ ಪ್ರಾಣ ಸಂಕಟವಾಗಿರುವ ಈ ರಸ್ತೆ ನಿರ್ಮಾಣವನ್ನು ತಕ್ಷಣ ಮುಗಿಸುವಂತೆ… ಅಧಿಕಾರಿ ವರ್ಗವನ್ನು ಒತ್ತಾಯಿಸುವ ಒಂದು ವಿನೂತನ ಮಾದರಿಯ ಆಂದೋಲನಕ್ಕಾಗಿ ಹಮ್ಮಿಕೊಂಡ ಸ್ಪರ್ಧೆ ಇದಾಗಿದೆ. ಈ ರಸ್ತೆಯಲ್ಲಿ ನಿತ್ಯ ಸಂಚರಿಸುವ ವಿದ್ಯಾರ್ಥಿಗಳ, ಕೆಲಸಕ್ಕೆ ಹೋಗುವವವರ, ಗರ್ಭಿಣಿಯರ, ರೋಗಿಗಳ, ವೃದ್ಧರ ನಿತ್ಯ ಬವಣೆ ನಿಮ್ಮ ಬರವಣಿಗೆಯಲ್ಲಿ ಕತೆಯಾಗಿ ಮೂಡಿ ಬರಲಿ. ‘ಸಂತೆಕಟ್ಟೆ ರಸ್ತೆ ಬಿಚ್ಚಿಟ್ಟ ಕತೆಗಳು’ ಎನ್ನುವ ಹೆಸರಿನ ಮನ ಮುಟ್ಟುವ, ಮನ ಕಲಕುವ ಕಥೆಗಳಿಗಾಗಿ ಸಾರ್ವಜನಿಕರಿಗೆ ಆಹ್ವಾನ ನೀಡಲಾಗಿದೆ.

    ಕತೆ ಸಣ್ಣ ಕತೆಯಾಗಿರಲಿ, ಕೊನೆಗೊಂದು ಸಂದೇಶವಿರಲಿ, ವ್ಯಕ್ತಿ ನಿಂದನೆ, ಪಕ್ಷ ನಿಂದನೆ, ಜಾತಿ ನಿಂದನೆ ಇರುವಂತಿಲ್ಲ, ಮನ ಮುಟ್ಟುವ ಮೂರು ಕಥೆಗಳಿಗೆ ತಲಾ ರೂ.1,000/- ದಂತೆ ನಗದು ಬಹುಮಾನಗಳಿವೆ. ಮನಸ್ಸಿಗೆ ನಾಟುವ 10 ಕಥೆಗಳಿಗೆ ಸಮಾಧಾನಕರ ಬಹುಮಾನವಾಗಿ ಪುಸ್ತಕವೊಂದು ಸಿಗಲಿದೆ. ಬೇರೆಯವರನ್ನು ದೂರದೆ, ನಮ್ಮ ಸಮಸ್ಯೆಗಳನ್ನಷ್ಟೇ ಸಂಬಂಧಪಟ್ಟವರ ಮನಮುಟ್ಟುವಂತೆ ವಿವರಿಸುವುದಷ್ಟೇ ನಮ್ಮ ಉದ್ದೇಶ. ‘ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ಕೋಲಿನ ಪೆಟ್ಟು’. ಹಾಗಾಗಿ ನಮ್ಮ ಜಾಣ ಅಧಿಕಾರಿ ವರ್ಗದವರಿಗೆ ಮನಮುಟ್ಟುವ –ವ- ಮಾತುಕತೆಯಾಗಿ ಅವರ ಮನ ಮುಟ್ಟಲಿ ಎಂಬ ಆಶಯ ನಮ್ಮದು.

    ಕತೆ ಕಳಿಸಲು ಕೊನೆಯ ದಿನಾಂಕ 30 ಸೆಪ್ಟೆಂಬರ್ 2024
    ಕಳಿಸಬೇಕಾದ ವಾಟ್ಸಪ್ ನಂಬರ್ 9945130630 ಡಾ. ಶಶಿಕಿರಣ್ ಶೆಟ್ಟಿ, ಹೋಂ ಡಾಕ್ಟರ್ ಫೌಂಡೇಶನ್, ಉಡುಪಿ.
    ವಿಶೇಷ ಸೂಚನೆ : ಉತ್ತಮ ಬರಹಗಳನ್ನು ನಿಮ್ಮ ಹೆಸರು, ಫೋನ್ ನಂಬರಿನೊಂದಿಗೆ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಡಲಾಗುವುದು.

    Share. Facebook Twitter Pinterest LinkedIn Tumblr WhatsApp Email
    Previous Articleಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೋಟ ಶಿವರಾಮ ಕಾರಂತರ ಬಗ್ಗೆ ಪ್ರಬಂಧ ಸ್ಪರ್ಧೆ| 6 ಅಕ್ಟೋಬರ್
    Next Article ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಸಂಸ್ಕೃತ ಭಾಷಾ ಉಪನ್ಯಾಸಕರ ಕಾರ್ಯಾಗಾರ
    roovari

    Comments are closed.

    Related Posts

    ವಿಶೇಷ ಲೇಖನ – ಚಿಂತನಶೀಲ ಬರಹಗಾರ ಎಂ. ಎಸ್. ಕೆ. ಪ್ರಭು

    July 15, 2025

    ಪುಸ್ತಕ ವಿಮರ್ಶೆ – ಪೀಳಿಗೆಯ ಯೋಚನೆಗಳನ್ನು ಬದಲು ಮಾಡಬಲ್ಲ ಕೃತಿ – ‘ಮಾತು ಎಂಬ ವಿಸ್ಮಯ’

    July 15, 2025

    ಬೆಳಾಲು ಶಾಲೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕುರಿತ ಉಪನ್ಯಾಸ ಮಾಲೆ

    July 15, 2025

    ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ‘ವಿವೇಕ ಸ್ಮೃತಿ – 18’

    July 15, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.