Subscribe to Updates

    Get the latest creative news from FooBar about art, design and business.

    What's Hot

    ಕರ್ನಾಟಕ ಲೇಖಕಿಯರ ಸಂಘದ 2025ನೆಯ ಸಾಲಿನ ಪುಸ್ತಕ ಬಹುಮಾನಕ್ಕೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಫೆಬ್ರುವರಿ 10

    January 14, 2026

    ಮಂಗಳೂರಿನ ಪುರಭವನದಲ್ಲಿ ‘ಅನುಪಮ’ ಮಾಸಿಕದ ರಜತ ಮಹೋತ್ಸಹ ವರ್ಷಾಚರಣೆ | ಜನವರಿ 15

    January 14, 2026

    ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಶ್ರೀಮತಿ ಜಲಜಾ ಶೇಖರ್ ಆಯ್ಕೆ

    January 13, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಯಶಸ್ವಿಯಾಗಿ ಸಂಪನ್ನಗೊಂಡ ಯಕ್ಷಪಲ್ಲವಿ ಟ್ರಸ್ಟಿನ 5ನೇ ವರ್ಷದ ಸಂಭ್ರಮೋತ್ಸವ
    Awards

    ಯಶಸ್ವಿಯಾಗಿ ಸಂಪನ್ನಗೊಂಡ ಯಕ್ಷಪಲ್ಲವಿ ಟ್ರಸ್ಟಿನ 5ನೇ ವರ್ಷದ ಸಂಭ್ರಮೋತ್ಸವ

    May 2, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಹೊನ್ನಾವರ : ಯಕ್ಷಮಾಣಿಕ್ಯ ಚಿಂತನಾ ಹೆಗಡೆ ಮಾಳಕೋಡ್ ಇವರ ಜನುಮದಿನದಂದು ಯಕ್ಷಪಲ್ಲವಿ ಟ್ರಸ್ಟ್ (ರಿ.) ಯಕ್ಷಗಾನ ಮಂಡಳಿ ಮಾಳಕೋಡ್ ಇದರ 5ನೇ ವರ್ಷದ ಸಂಭ್ರಮೋತ್ಸವ ‘ಮಾಳಕೋಡ್ ಯಕ್ಷವೈಭವ’ ಕಾರ್ಯಕ್ರಮವು ಮಂಕಿಯ ಜಡ್ಡಿ ಶಾಲೆಯಲ್ಲಿ ಯಶಸ್ವಿಯಾಗಿ ದಿನಾಂಕ 30 ಏಪ್ರಿಲ್ 2025ರಂದು ಸಂಪನ್ನಗೊಂಡಿತು.

    ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಶ್ರೀ ಮಂಕಾಳ ವೈದ್ಯ, ಶ್ರೀ ಸತೀಶ್ ಸೈಲ್, ಕು. ಬೀನಾ ಮಂಕಾಳ ವೈದ್ಯ ಇವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕು. ಬೀನಾ ಮಂಕಾಳ ವೈದ್ಯ, ಅಧ್ಯಕ್ಷತೆಯನ್ನು ಶ್ರೀ ವಿಷ್ಣು ಭಟ್ ಇಡಗುಂಜಿ ಇವರು ನಿರ್ವಹಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಎಲ್.ವಿ. ರಘುನಾಥ ಭಟ್ ಆಗಮಿಸಿದ್ದರು. ಶ್ರೀ ಶ್ರೀನಿವಾಸ ರಾವ್, ಶ್ರೀ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಹಾಗೂ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಉದಯ ಹೆಗಡೆ ಮಾಳಕೋಡ್ ಅವರು ಸಹ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಈ ವರ್ಷದ ‘ಯಕ್ಷಪಲ್ಲವಿ’ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಹಾಸ್ಯ ಕಲಾವಿದರಾದ ಶ್ರೀ ರಮೇಶ್ ಭಂಡಾರಿ ಮೂರೂರು ಇವರಿಗೆ ಪ್ರದಾನ ಮಾಡಲಾಯಿತು. ಯಕ್ಷಗಾನದ ಹಿರಿಯ ಮದ್ದಲೆ ವಾದಕರಾದ ಶ್ರೀ ನರಸಿಂಹ ಹೆಗಡೆ ಮೂರೂರು, ಯಕ್ಷಗಾನದ ಸ್ತ್ರೀ ಪಾತ್ರಧಾರಿ ಶ್ರೀ ಸದಾಶಿವ ಭಟ್ಟ ಮಲವಳ್ಳಿ, ಯಕ್ಷಗಾನದ ವೇಷಭೂಷಣ ತಯಾರಕರಾದ ಶ್ರೀ ಲಕ್ಷ್ಮಣ ನಾಯ್ಕ ಚಿತ್ತಾರ, ಶ್ರೀ ದುರ್ಗಾ ಪರಮೇಶ್ವರಿ ವುಡ್ ವರ್ಕ್ಸ್ ಇದರ ಮಾಲಕರಾದ ಶ್ರೀ ಉದಯ ನಾಯ್ಕ ಜಡ್ಡಿ ಇವರುಗಳಿಗೆ ಸಭಾ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

    ಸಭಾ ಕಾರ್ಯಕ್ರಮದ ಕೊನೆಯಲ್ಲಿ ಚಿಂತನಾ ಹೆಗಡೆ ಅಭಿಮಾನಿ ಬಳಗ ಜಡ್ಡಿ ಮಂಕಿ ಇವರಿಂದ ಯಕ್ಷಮಾಣಿಕ್ಯ ಚಿಂತನಾ ಹೆಗಡೆ ಮಾಳಕೋಡ್ ಇವರಿಗೆ ಅದ್ದೂರಿಯಾಗಿ ಸನ್ಮಾನಿಸಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಮೊದಲನೇ ಪ್ರಸಂಗವಾಗಿ ಶ್ರೀ ಸುರೇಶ ಶೆಟ್ಟಿ ಶಂಕರನಾರಾಯಣ ಅವರ ಗಾನಸಾರಥ್ಯದಲ್ಲಿ ‘ಭಕ್ತ ಸುಧನ್ವ’ ಎಂಬ ಯಕ್ಷಗಾನವು ಸಂಪನ್ನಗೊಂಡಿತು. ಸುಧನ್ವನಾಗಿ ತೀರ್ಥಹಳ್ಳಿ, ಅರ್ಜುನನಾಗಿ ಯಾಜಿ, ಪ್ರಭಾವತಿಯಾಗಿ ಸದಾಶಿವ ಭಟ್ಟ ಮಲವಳ್ಳಿ, ಪ್ರದ್ಯುಮ್ನನಾಗಿ ಗೌರೀಶ ಗುಣವಂತೆ ಇವರು ರಂಗದಲ್ಲಿ ಕಾಣಿಸಿಕೊಂಡರು. ಎರಡನೇ ಪ್ರಸಂಗವಾಗಿ ಯಕ್ಷಮಾಣಿಕ್ಯ ಚಿಂತನಾ ಹೆಗಡೆ ಮಾಳಕೋಡ್ ಅವರ ಗಾನಸಾರಥ್ಯದಲ್ಲಿ ‘ವೀರ ಅಭಿಮನ್ಯು’ ಎಂಬ ಯಕ್ಷಗಾನವು ಪ್ರೇಕ್ಷಕರನ್ನು ಆಕರ್ಷಿಸಿತು. ಇದರಲ್ಲಿ ದ್ರೋಣನಾಗಿ ಉಜಿರೆ ಅಶೋಕ ಭಟ್, ಅಭಿಮನ್ಯುವಾಗಿ ಕಿರಾಡಿ, ದುಶ್ಯಾಸನನಾಗಿ ಮೂರೂರು ರಮೇಶ್ ಭಂಡಾರಿ, ಕೌರವನಾಗಿ ಕೆಕ್ಕಾರ ಆನಂದ ಭಟ್, ಜಯದೃತನಾಗಿ ಬಂಗಾರಮಕ್ಕಿ ರಾಮಚಂದ್ರ ಭಟ್, ಸುಭದ್ರೆಯಾಗಿ ಮಲವಳ್ಳಿ ಇವರು ರಂಗದಲ್ಲಿ ವಿಜೃಂಭಿಸಿದರು. ಸಾವಿರಾರು ಕಲಾಪ್ರೇಕ್ಷಕರು ಟ್ರಸ್ಟಿನ ಕಾರ್ಯಕ್ರಮಕ್ಕೆ ಬಂದಿರುವುದು ಕಾರ್ಯಕ್ರಮದ ಯಶಸ್ವಿಗೆ ಕಾರಣವಾಯಿತು.

    award baikady felicitation roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಧಾರವಾಡ ರಂಗಾಯಣದಲ್ಲಿ ‘ಚಿಣ್ಣರಮೇಳ 2025’ ಸಮಾರೋಪ ಸಮಾರಂಭ | ಮೇ 03ರಿಂದ 05
    Next Article ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಚಿತ್ರಕಲೆ ಮತ್ತು ರೇಖಾಚಿತ್ರಗಳ ಪ್ರದರ್ಶನ | ಮೇ 04ರಿಂದ 14
    roovari

    Add Comment Cancel Reply


    Related Posts

    ಕರ್ನಾಟಕ ಲೇಖಕಿಯರ ಸಂಘದ 2025ನೆಯ ಸಾಲಿನ ಪುಸ್ತಕ ಬಹುಮಾನಕ್ಕೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಫೆಬ್ರುವರಿ 10

    January 14, 2026

    ಮಂಗಳೂರಿನ ಪುರಭವನದಲ್ಲಿ ‘ಅನುಪಮ’ ಮಾಸಿಕದ ರಜತ ಮಹೋತ್ಸಹ ವರ್ಷಾಚರಣೆ | ಜನವರಿ 15

    January 14, 2026

    ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಶ್ರೀಮತಿ ಜಲಜಾ ಶೇಖರ್ ಆಯ್ಕೆ

    January 13, 2026

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಹೂ ದಂಡಿ’

    January 13, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.