ತೆಕ್ಕಟ್ಟೆ : ಧಮನಿ (ರಿ.) ತೆಕ್ಕಟ್ಟೆ ಆಶ್ರಯದಲ್ಲಿ ನಡೆದ ‘ಚಿಗುರು’ ಮಕ್ಕಳ ವೃತ್ತಿಪರ ರಂಗ ತರಬೇತಿ ಶಿಬಿರದಲ್ಲಿ ಕೋಟ ಶಿವರಾಮ ಕಾರಂತರ ಮಕ್ಕಳ ನಾಟಕ “ಸೂರ್ಯ ಚಂದ್ರ” ಕುಂದಾಪುರ(ಕೋಟ) ಕನ್ನಡದಲ್ಲಿ ಸಿದ್ಧಗೊಂಡು 31 ಮೇ 2025ರ ಶನಿವಾರದಂದು ಪ್ರದರ್ಶನಗೊಂಡಿತು.
ಈ ಪ್ರಯೋಗಕ್ಕೆ ಶುಭಕರ್ ಪುತ್ತೂರು ಸಂಗೀತ ನೀಡಿದ್ದು, ಬೆಳಕಿನಲ್ಲಿ ಶ್ರೀಶ ತೆಕ್ಕಟ್ಟೆ, ರಂಗಸಜ್ಜಿಕೆಯಲ್ಲಿ ಪ್ರಸಾದ್ ಬ್ರಹ್ಮಾವರ, ವಸ್ತ್ರ ವಿನ್ಯಾಸದಲ್ಲಿ ರಕ್ಷಿತಾ ಎಸ್. ಬೈಕಾಡಿ, ಪ್ರಸಾಧನದಲ್ಲಿ ರಮೇಶ್ ಕಪಿಲೇಶ್ವರ ಸಹಕರಿಸಿದರು. ರೋಹಿತ್ ಎಸ್. ಬೈಕಾಡಿ. ಈ ನಾಟಕವನ್ನು ಕುಂದಾಪ್ರ ಕನ್ನಡಕ್ಕೆ ಅನುವಾದಿಸಿ, ವಿನ್ಯಾಸ ಮಾಡಿ ನಿರ್ದೇಶಿಸಿದ್ದಾರೆ. ಶ್ರೀಶ ತೆಕ್ಕಟ್ಟೆ ನಿರ್ವಹಣೆ ಮಾಡಿದರು.