Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಯಕ್ಷ ಭಾವ ಸಂಗಮ’ | ಡಿಸೆಂಬರ್ 13

    December 13, 2025

    ಅಭಿನಯ ತರಂಗ ರಂಗಶಾಲೆಯಿಂದ ‘ತಾರ’ ಎರಡು ಅಂಕಗಳ ನಾಟಕ ಪ್ರದರ್ಶನ | ಡಿಸೆಂಬರ್ 15

    December 13, 2025

    ಬೆಂಗಳೂರಿನ ನಯನ ರಂಗಮಂದಿರದಲ್ಲಿ ಅನುವಾದ ಕವಿಗೋಷ್ಠಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ | ಡಿಸೆಂಬರ್ 14

    December 13, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ತುಳು ತಾಳಮದ್ದಳೆ ಸಪ್ತಾಹದಲ್ಲಿ ಯಕ್ಷ ಮಂಜುಳಾ ಮಹಿಳಾ ತಾಳಮದ್ದಳೆ ಬಳಗದಿಂದ ತಾಳಮದ್ದಳೆ  
    Commemoration

    ತುಳು ತಾಳಮದ್ದಳೆ ಸಪ್ತಾಹದಲ್ಲಿ ಯಕ್ಷ ಮಂಜುಳಾ ಮಹಿಳಾ ತಾಳಮದ್ದಳೆ ಬಳಗದಿಂದ ತಾಳಮದ್ದಳೆ  

    December 11, 2025Updated:December 13, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ತುಳುಕೂಟ ಕುಡ್ಲ ಮತ್ತು ಸರಯೂ ಬಾಲ ಯಕ್ಷವೃಂದ ಕೋಡಿಕಲ್ ಇವರ ವತಿಯಿಂದ ನಡೆಯುತ್ತಿರುವ ಮರೋಳಿ ಬಿ. ದಾಮೋದರ ನಿಸರ್ಗ ಸಂಸ್ಮರಣೆ-ತುಳು ತಾಳಮದ್ದಳೆ ಸಪ್ತಾಹದ ನಾಲ್ಕನೇ ದಿನದ ಕಾರ್ಯಕ್ರಮ ದಿನಾಂಕ 10 ಡಿಸೆಂಬರ್ 2025ರಂದು ಮಂಗಳೂರಿನ ಕಂಕನಾಡಿ ಗರೋಡಿಯ ದೇವಿ ಬೈದೆತಿ ಬಾವಡಿಯಲ್ಲಿ ನಡೆಯಿತು. 

    ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಿ.ಸಿ. ರೋಡಿನ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಂಸ್ಥಾಪಕ, ನಿರ್ದೇಶಕ ಡಾ. ತುಕಾರಾಂ ಪೂಜಾರಿ “ತುಳುವಿಗೂ ಯಕ್ಷಗಾನಕ್ಕೂ ಅವಿನಾಭಾವ ಸಂಬಂಧ ಇದೆ. ಯಾಕೆಂದರೆ ಹಿಂದಿನ ಕಲಾವಿದರ್ಯಾರೂ ವಿದ್ಯಾಸಂಪನ್ನರಾಗಿರದಿದ್ದರೂ ಕಲೆಯನ್ನು, ಧರ್ಮವನ್ನು ಪಸರಿಸಿದರು. ಬಣ್ಣದ ಮನೆಯಲ್ಲಿ ತುಳುವಿನಲ್ಲೇ ಮಾತನಾಡಿದರೂ ನಾಲ್ಕು ಹೆಜ್ಜೆ ನಡೆದು ರಂಗ ಪ್ರವೇಶ ಮಾಡುತ್ತಾ ಶುದ್ಧ ಕನ್ನಡದಲ್ಲೇ ಸಂಭಾಷಿಸುತ್ತಾ ಕಲೆಯನ್ನು ಶ್ರೀಮಂತಗೊಳಿಸಿದರು. ಹಾಗಾಗಿ ತುಳುವಿನ ಪಂಚಾಂಗದಲ್ಲಿ ಯಕ್ಷ ವೈಭವ ಮೆರೆದು ಪ್ರೇಕ್ಷಕರಿಗೂ ದಿವ್ಯ ಸಂದೇಶವನ್ನು ಪಸರಿಸುತ್ತಾರೆ. ಈಗಲೂ ಈ ಕಾರ್ಯವನ್ನು ತುಳುಕೂಟ ನಡೆಸಿಕೊಂಡು ಬರುತ್ತಿದೆ. ದಾಮೋದರ ನಿಸರ್ಗರ ಪಥದರ್ಶನದ ಈ ಹೊತ್ತು ಈ ತಾಳಮದ್ದಳೆ ಸಪ್ತಾಹ ತುಳುವಿನಲ್ಲೇ ನಡೆಯುತ್ತಿರುವುದು ಶುಭದ ಕಾರ್ಯ” ಎಂದು ಹೇಳಿದರು.  

    ತುಳು ಕೂಟದ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ ಪ್ರಸ್ತಾವಿಸಿದರು. ಬಂಟ್ಟಾಳದ ಎಸ್.ವಿ.ಎಸ್. ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪಾಂಡುರಂಗ ನಾಯಕ್, ಡಾ. ಮೇಘಾ ತ್ರಿದೇವ್, ಕದ್ರಿ ನಾಗೇಶ ದೇವಾಡಿಗ ಉಪಸ್ಥಿತರಿದ್ದರು. ಕದ್ರಿಯ ಯಕ್ಷ ಮಂಜುಳಾ ಮಹಿಳಾ ತಾಳಮದ್ದಳೆ ಬಳಗದ ಅಧ್ಯಕ್ಷೆ ಪೂರ್ಣಿಮಾ ಪ್ರಭಾಕರ ಪೇಜಾವರರನ್ನು ಅಭಿನಂದಿಸಲಾಯಿತು. ಬಳಿಕ ಅವರಿಂದ ‘ಯಕ್ಷಮಣಿ’ ತುಳು ತಾಳಮದ್ದಳೆ ನಡೆಯಿತು.

    baikady commemoration felicitation roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನೃತ್ಯಾಭಿಮಾನಿಗಳನ್ನು ರಂಜಿಸಿದ ನೃತ್ಯೋತ್ಸವ
    Next Article ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ತುಳು ಪರ್ಬ ಸಂಭ್ರಮ
    roovari

    Add Comment Cancel Reply


    Related Posts

    ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಯಕ್ಷ ಭಾವ ಸಂಗಮ’ | ಡಿಸೆಂಬರ್ 13

    December 13, 2025

    ಅಭಿನಯ ತರಂಗ ರಂಗಶಾಲೆಯಿಂದ ‘ತಾರ’ ಎರಡು ಅಂಕಗಳ ನಾಟಕ ಪ್ರದರ್ಶನ | ಡಿಸೆಂಬರ್ 15

    December 13, 2025

    ಬಹುವಚನಂನ ಪದ್ಮಿನೀ ಸಭಾಭವನದಲ್ಲಿ ‘ಶಾಸ್ತ್ರೀಯ ಸಂಗೀತ ಕಛೇರಿ’ | ಡಿಸೆಂಬರ್ 14

    December 13, 2025

    ಸಾಧಕರಿಗೆ ‘ಅಜಿತ್ ಕುಮಾರ್ ಸ್ಮಾರಕ ಪ್ರಶಸ್ತಿ’ ಪ್ರದಾನ | ಡಿಸೆಂಬರ್ 14

    December 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.