Subscribe to Updates

    Get the latest creative news from FooBar about art, design and business.

    What's Hot

    ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ಮತ್ತು ಸಂಗೀತ ದಿನಾಚರಣೆ

    June 23, 2025

    ಮಂಗಳೂರಿನ ಅಮೃತ ಕಾಲೇಜಿನಲ್ಲಿ ತುಳು ನಾಟಕ ಕಾರ್ಯಾಗಾರ | ಜೂನ್ 24

    June 23, 2025

    ‘ಬನ್ನಂಜೆ 90 – ಉಡುಪಿ ನಮನ’ ಕಾರ್ಯಕ್ರಮದ ಪೂರ್ವಭಾವಿ ಸಭೆ

    June 23, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ನಾಟ್ಯಾರಾಧನಾ ತ್ರಿಂಶೋತ್ಸವ – 1994-2024’ | 10 ಫೆಬ್ರವರಿ
    Bharathanatya

    ‘ನಾಟ್ಯಾರಾಧನಾ ತ್ರಿಂಶೋತ್ಸವ – 1994-2024’ | 10 ಫೆಬ್ರವರಿ

    February 8, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ನಾಟ್ಯಾರಾಧನಾ ಕಲಾ ಕೇಂದ್ರ (ರಿ) ಉರ್ವ, ಮಂಗಳೂರು ಇದರ ಸುರತ್ಕಲ್ ಗೋವಿಂದದಾಸ ಕಾಲೇಜು ಶಾಖೆ, ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ ಮತ್ತು ನಾಟ್ಯಾರಾಧನಾ ತ್ರಿಂಶೋತ್ಸವ ವಿದ್ಯಾರ್ಥಿ ಸಮಿತಿ ಪ್ರಸ್ತುತಪಡಿಸುವ ‘ನಾಟ್ಯಾರಾಧನಾ ತ್ರಿಂಶೋತ್ಸವ – 1994-2024’ ಸರಣಿ ನೃತ್ಯ ಕಾರ್ಯಕ್ರಮಗಳು ದಿನಾಂಕ 10-02-2024ರ ಶನಿವಾರ ಸಂಜೆ ಘಂಟೆ 5.00ರಿಂದ ಸುರತ್ಕಲ್ ಗೋವಿಂದದಾಸ ಕಾಲೇಜಿನ ಕಲಾ ಮಂದಿರದಲ್ಲಿ ನಡೆಯಲಿದೆ.

    ಲಲಿತ ಕಲಾ ಸಂಘ, ಗೋವಿಂದದಾಸ ಕಾಲೇಜು, ಸುರತ್ಕಲ್ ಇವರ ಸಹಯೋಗದೊಂದಿಗೆ ನಡೆಯಲಿರುವ ಈ ಸರಣಿ ನೃತ್ಯ ಕಾರ್ಯಕ್ರಮದಲ್ಲಿ ನೃತ್ಯಾಮೃತ-1 ‘ಭರತನಾಟ್ಯ ರಸಗ್ರಹಣ’ ಈ ಅವಧಿಯಲ್ಲಿ ಭರತನಾಟ್ಯ ಕಲೆಯ ಅರ್ಥೈಸುವಿಕೆ ಮತ್ತು ಪ್ರೇಕ್ಷಕ ದೃಷ್ಟಿಯೆಂಬ ವಿಷಯದ ಬಗ್ಗೆ ನೃತ್ಯ ಪ್ರಾತ್ಯಕ್ಷಿಕೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ಕಲಾವಿದರಾಗಿ ಪುತ್ತೂರಿನ ಶ್ರೀ ಮೂಕಾಂಬಿಕ ಕಲ್ಬರಲ್ ಅಕಾಡೆಮಿ ರಿ. ಇದರ ನಿರ್ದೇಶಕರಾದ ವಿದ್ವಾನ್ ದೀಪಕ್ ಕುಮಾರ್ ಪುತ್ತೂರು, ಮಂಗಳೂರಿನ ಗಾನ ನೃತ್ಯ ಅಕಾಡೆಮಿ ಇದರ ನಿರ್ದೇಶಕರಾದ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಹಾಗೂ ಮಂಗಳೂರಿನ ನಾಟ್ಯಾರಾಧನಾ ಕಲಾ ಕೇಂದ್ರ ರಿ. ಉರ್ವ ಇದರ ನಿರ್ದೇಶಕರಾದ ವಿದುಷಿ ಸುಮಂಗಲಾ ರತ್ನಾಕರ್ ರಾವ್ ಭಾಗವಹಿಸಲಿದ್ದಾರೆ.

    ಕ.ಸಾ.ಪ. ಬೆಂಗಳೂರು ಇದರ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾಕಾರ್ಯಕ್ರಮದಲ್ಲಿ ಶ್ರೀ ಧನಲಕ್ಷ್ಮೀ ಕನ್ಸ್‌ಟ್ರಕ್ಷನ್ಸ್, ಎಂ.ಆರ್.ಪಿ.ಎಲ್ ಇದರ ಮಾಲಕರಾದ ಶ್ರೀ ರಾಜಾರಾಮ್ ಸಾಲ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸುರತ್ಕಲ್ಲಿನ ಹಿಂದೂ ವಿದ್ಯಾದಾಯಿನೀ ಸಂಘ ಇದರ ಅಧ್ಯಕ್ಷರಾದ ಶ್ರೀ ಎಚ್. ಜಯಚಂದ್ರ ಹತ್ವಾರ್, ಸುರತ್ಕಲ್ಲಿನ ವಿದ್ಯಾದಾಯಿನೀ ಪ್ರೌಢ ಶಾಲೆ ಇದರ ನಿವೃತ್ತ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಐ. ಉಮಾದೇವಿ, ಇಡ್ಯದ ಶ್ರೀ ಕ್ಷೇತ್ರ ಇಡ್ಕ ಇಲ್ಲಿನ ಕಲಾಪೋಷಕಿಯಾದ ಶ್ರೀಮತಿ ಶಕುಂತಲಾ ರಮಾನಂದ ಭಟ್, ಖಂಡಿಗೆ-ಚೇಳ್ಯಾರಿನ ನಾಟ್ಯಾಂಜಲಿ ಕಲಾ ಅಕಾಡೆಮಿ ಸುರತ್ಕಲ್ ಇದರ ನಿರ್ದೇಶಕರಾದ ವಿದ್ವಾನ್ ಚಂದ್ರಶೇಖರ ನಾವಡ, ಸುರತ್ಕಲ್ಲಿನ ಗೋವಿಂದದಾಸ ಕಾಲೇಜು ಇದರ ಪ್ರಾಂಶುಪಾಲರಾದ ಪ್ರೊ. ಕೃಷ್ಣಮೂರ್ತಿ, ಓರಿಯಂಟಲ್ ಇನ್ಸೂರೆನ್ಸ್ ಕಂಪೆನಿ ಲಿ. ಇದರ ಹಿರಿಯ ವಲಯ ಪ್ರಬಂಧಕರಾದ ಲಯನ್ ಯಾದವ ದೇವಾಡಿಗ, ಸುರತ್ಕಲ್ಲಿನ ಕಲಾನಿಧಿ ನೃತ್ಯನಿಲಯ ಇದರ ನಿರ್ದೇಶಕಿಯಾದ ವಿ. ಶೈಲಜಾ ಶಿವಶಂಕರ್ ಹಾಗೂ ನಾಟ್ಯಾರಾಧನಾ ಕಲಾಕೇಂದ್ರದ ಹಿರಿಯ ವಿದ್ಯಾರ್ಥಿನಿಯಾದ ವಿದುಷಿ ಶ್ರೀಮತಿ ಅನು ಧೀರಜ್ ಭಾಗವಹಿಸಲಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleವ್ಯಕ್ತಿ ಪರಿಚಯ | ಶತಾಯುಷಿ ಮೃದಂಗ ಮಾಂತ್ರಿಕ ಟಿ.ಕೆ. ಮೂರ್ತಿ  
    Next Article ವರ್ಕಾಡಿ ಶ್ರೀ ರವಿ ಅಲೆವೂರಾಯರ ಷಷ್ಠ್ಯಬ್ದಿ ಪ್ರಯುಕ್ತ ‘ಅಭಿನಂದನಾ ಕಾರ್ಯಕ್ರಮ’ | ಫೆಬ್ರವರಿ 11
    roovari

    Add Comment Cancel Reply


    Related Posts

    ದುಬೈಯ ಶೇಖ್‌ ರಷೀದ್‌ ಆಡಿಟೋರಿಯಂನಲ್ಲಿ ‘ದಶಮಾನೋತ್ಸವ ಸಂಭ್ರಮ’ | ಜೂನ್ 29

    June 20, 2025

    ಬೆಂಗಳೂರಿನ ನಯನ ಸಭಾಂಗಣದಲ್ಲಿ ‘ಮೂಡಲಪಾಯ ಯಕ್ಷೋತ್ಸವ’ | ಜೂನ್ 24 ಮತ್ತು 25

    June 19, 2025

    ಇಳಕಲ್ ಸ್ನೇಹರಂಗ ಸಾಂಸ್ಕೃತಿಕ ಭವನದಲ್ಲಿ ‘ಮೇಘರತ್ನ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ | ಜೂನ್ 21

    June 19, 2025

    ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ‘ಯಕ್ಷ ಸಿಂಧೂರ’ | ಜೂನ್ 21 

    June 18, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.