Subscribe to Updates

    Get the latest creative news from FooBar about art, design and business.

    What's Hot

    NCPA Invites Arunodaya Kala Niketan for ‘Nritya Parichaya’ Session at City School, Mumbai

    November 20, 2025

    ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ನವೆಂಬರ್ 24

    November 19, 2025

    ಹೊಸಳ್ಳಿಯಲ್ಲಿ ಪ್ರಶಸ್ತಿ ಪ್ರದಾನ ಮತ್ತು ಯಕ್ಷಗಾನ ಪ್ರದರ್ಶನ | ನವೆಂಬರ್ 21

    November 19, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರಿನಲ್ಲಿ ತುಳು ಹರಿಕಥಾ ಉಚ್ಚಯ -2023
    Harikathe

    ಮಂಗಳೂರಿನಲ್ಲಿ ತುಳು ಹರಿಕಥಾ ಉಚ್ಚಯ -2023

    April 6, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    06 ಏಪ್ರಿಲ್ 2023, ಮಂಗಳೂರು: ತುಳುವ ಸಿರಿ ಟ್ರಸ್ಟ್ (ರಿ.) ಕುಡ್ಲ ಮತ್ತು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನ ಕುತ್ತಾರು ಇವರ ಸಹಯೋಗದಲ್ಲಿ “ತುಳು ಹರಿಕಥಾ ಉಚ್ಚಯ -2023” ಏಪ್ರಿಲ್ 7 ರಿಂದ 11 ತಾರೀಕಿನವರೆಗೆ 5 ದಿನಗಳ ಕಾಲ ಕುತ್ತಾರು ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.

    ತಾ. 07-04-2023 ಶುಕ್ರವಾರ ಸಂಜೆ ಗಂಟೆ 7-30 ಕ್ಕೆ ಶ್ರೀ ರಾಮಕೃಷ್ಣ ಪ್ರೌಢ ಶಾಲೆ ಹರೇಕಳದ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಕೆ. ರವೀಂದ್ರ ರೈ ಕಲ್ಲಿಮಾರ್ ಇವರಿಂದ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಮೂಕಾಂಬಿಕಾ ಕನ್ ಸ್ಟ್ರಕ್ಷನ್ ನ ಮಾಲಕರಾದ ಶ್ರೀ ಹರಿದಾಸ ಮಾಡೂರು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಾರೆ. ತದನಂತರ “ಅಮರ್ ಬೊಳ್ಳಿಲು” ಎಂಬ ಕಥಾ ಕೀರ್ತನೆಯನ್ನು ಕಲಾಸಾರಥಿ ತೋನ್ಸೆ ಪುಷ್ಕಳ ಕುಮಾರ್ ನಡೆಸಿ ಕೊಡುತ್ತಾರೆ.

    ತಾ. 08-04-2023 ಶನಿವಾರ ಸಂಜೆ ಗಂಟೆ 7-30ಕ್ಕೆ ಶ್ರೀ ವೈದ್ಯನಾಥೇಶ್ವರ ಭಜನಾ ಮಂದಿರದ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಅಂಚನ್ ಮುಖ್ಯ ಅತಿಥಿಯಾಗಿ ಆಗಮಿಸುತ್ತಾರೆ. “ಭಕುತೆ ದಾಮಾಜಿ ಪಂತೆ” ಎಂಬ ಕಥಾ ಕೀರ್ತನೆಯನ್ನು ಡಾ. ಎಸ್.ಪಿ. ಗುರುದಾಸ್ ನಡೆಸಿ ಕೊಡುವವರಿದ್ದಾರೆ.

    ತಾ. 09-04-2023 ಭಾನುವಾರ ಸಂಜೆ ಗಂಟೆ 7-30ಕ್ಕೆ ಮುಖ್ಯ ಅತಿಥಿಯಾಗಿ ಆಳ್ವಾಸ್ ಸ್ವೀಟ್ಸ್ ನ ಮಾಲಕರಾದ ಶ್ರೀ ಗಿರೀಶ್ ಆಳ್ವ ಮೋರ್ಲ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಹರಿದಾಸರಾದ ದೇವಕೀತನಯ ಕೂಡ್ಲು ಇವರಿಂದ “ಸಿರಿದೇವಿ ಮೈಮೆ” ಎಂಬ ಕಥಾ ಕೀರ್ತನೆ ನಡೆಯಲಿದೆ.

    ತಾ. 10-04-2023 ಸೋಮವಾರ ಸಂಜೆ ಗಂಟೆ 7-30ಕ್ಕೆ ದೇರಳಕಟ್ಟೆಯ ಹೊಟೇಲ್ ದಿ ಕಂಫರ್ಟ್ ಇನ್ ಇದರ ಮಾಲಕರಾದ ಲಯನ್ ಚಂದ್ರಹಾಸ ಶೆಟ್ಟಿ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಾರೆ. ಆ ದಿನದ “ಗೋರ ಕುಂಬಾರೆ” ಕಥಾ ಕೀರ್ತನೆಯನ್ನು ಹರಿದಾಸರಾದ ಶ್ರೀಮತಿ ಮಂಜುಳಾ ಇರಾ ಕಾರ್ಯಕ್ರಮ ನಡೆಸಿಕೊಡುತ್ತಾರೆ.

    ತಾ. 11-04-2023 ಮಂಗಳವಾರ ಸಂಜೆ ಗಂಟೆ 7-30ಕ್ಕೆ ಸಮಾರೋಪ ಭಾಷಣ ಮಾಡುತ್ತಾರೆ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ (ರಿ.)ದ ಅಧ್ಯಕ್ಷರಾದ ಪ್ರೊ ಭಾಸ್ಕರ್ ರೈ ಕುಕ್ಕುವಳ್ಳಿ ಮತ್ತು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ನಿರ್ದೇಶಕರಾದ ಶ್ರೀ ಕೆ.ಟಿ. ಸುವರ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಆ ದಿನ “ತಪ್ಪುಗು ತರೆದಂಡ” ಎಂಬ ಕಥಾ ಕೀರ್ತನೆಯನ್ನು ಶ್ರೀ ಯಜ್ಞೇಶ್ ಹೊಸಬೆಟ್ಟು ನಡೆಸಿಕೊಡುತ್ತಾರೆ.

    ಶ್ರೀ ವಿವೇಕಾನಂದ ಸನಿಲ್, ಅಧ್ಯಕ್ಷರು ಶ್ರೀ ರಾಜರಾಜೇಶ್ವರಿ ಸಿದ್ದಿವಿನಾಯಕ ದೇವಸ್ಥಾನ ಮತ್ತು ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಅಧ್ಯಕ್ಷರು ತುಳುವ ಸಿರಿ ಟ್ರಸ್ಟ್ (ರಿ.) ಕುಡ್ಲ ಹಾಗೂ ಸರ್ವ ಸದಸ್ಯರು ಈ ಕಾರ್ಯಕ್ರಮಕ್ಕೆ ಸರ್ವರಿಗೂ ಪ್ರೀತ್ಯಾದರದ ಸ್ವಾಗತ ಕೋರಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಪಾವಂಜೆಯಲ್ಲಿ ಸಂತ ಸತ್ವ – ನಂದಿನಿಗೊಂದು ಸುತ್ತು
    Next Article ಮಂದಾರ ‘ರಂಗೋತ್ಸವ-2023’ ದಿನ -3
    roovari

    Add Comment Cancel Reply


    Related Posts

    NCPA Invites Arunodaya Kala Niketan for ‘Nritya Parichaya’ Session at City School, Mumbai

    November 20, 2025

    ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ನವೆಂಬರ್ 24

    November 19, 2025

    ಬೆಂಗಳೂರಿನ ಪುರಂದರ ಭವನದಲ್ಲಿ ‘ಆಕಾಶವಾಣಿ ಸಂಗೀತ್ ಸಮ್ಮೇಳನ 2025’ | ನವೆಂಬರ್ 22

    November 19, 2025

    ಪುತ್ತೂರಿನ ಶಶಿಶಂಕರ ಸಭಾಂಗಣದಲ್ಲಿ ‘ನೃತ್ಯಾಂತರಂಗ 137’ | ನವೆಂಬರ್ 21

    November 19, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.