Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ನಿಂಬೆಕಾಯಿಪುರದಲ್ಲಿ ಕಲಾರಸಿಕರನ್ನು ರಂಜಿಸಿದ ಎಲ್‌. ಎಸ್‌. ಡಿ. ನಾಟಕ

    July 14, 2025

    ತೆಕ್ಕಟ್ಟೆ ಹಯಗ್ರೀವದಲ್ಲಿ ಗುರುವಂದನೆ

    July 14, 2025

    ಯಶಸ್ವಿಯಾಗಿ ನಡೆದ ಮುಂಗಾರು ಕವಿಗೋಷ್ಠಿ – 2025

    July 14, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಏಳನೇ ವರ್ಷದ ಸಂಭ್ರಮದ ‘ಉದಯರಾಗ 60’ರಲ್ಲಿ ಭಕ್ತಿ ಗಾಯನ
    Felicitation

    ಏಳನೇ ವರ್ಷದ ಸಂಭ್ರಮದ ‘ಉದಯರಾಗ 60’ರಲ್ಲಿ ಭಕ್ತಿ ಗಾಯನ

    March 10, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಆಕಾಡೆಮಿ ಮತ್ತು ನಾಗರಿಕ ಸಲಹಾ ಸಮಿತಿ ಸಹಯೋಗದಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಸುರತ್ಕಲ್ ಮೇಲುಸೇತುವೆಯ ತಳಭಾಗದಲ್ಲಿ ಎಂ.ಸಿ.ಎಫ್. – ನಾಗರಿಕ ಸಲಹಾ ಸಮಿತಿ ಸಾಂಸ್ಕತಿಕ ವೇದಿಕೆಯಲ್ಲಿ ನಡೆಯುತ್ತಿರುವ ಸಂಗೀತ ಕಛೇರಿ ಸರಣಿ ಕಾರ್ಯಕ್ರಮದ ಏಳನೇ ವರ್ಷದ ಸಂಭ್ರಮ ‘ಉದಯರಾಗ 60’ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ದಿನಾಂಕ 09 ಮಾರ್ಚ್ 2025ರಂದು ನಡೆಯಿತು.

    ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು “ಯುವ ಜನತೆಯಲ್ಲಿ ಪುರಾಣ ಪಜ್ಞೆ ಬೆಳೆಸುವಲ್ಲಿ ಭಕ್ತಿ ಸಂಗೀತ ಪೂರಕವಾಗಿದೆ. ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಹಂತದಲ್ಲಿದ್ದು ಜನತೆ ಜಾಗೃತರಾಗಬೇಕಾಗಿದೆ” ಎಂದು ನುಡಿದರು.

    ಹಿರಿಯ ಗಮಕಿ ಎಚ್. ಯಜ್ಞೇಶ ಆಚಾರ್ಯ ಹೊಸಬೆಟ್ಟು ಇವರು ಭಕ್ತಿ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಸಹ ಗಾಯನದಲ್ಲಿ ಪವಿತ್ರಾ ಮಯ್ಯ ಸುರತ್ಕಲ್, ವಯಲಿನ್ ನಲ್ಲಿ ಪ್ರಸನ್ನ ಕುಮಾರ್ ಸುರತ್ಕಲ್, ಹಾರ್ಮೋನಿಯಂ ನಲ್ಲಿ ಸತೀಶ್ ಸುರತ್ಕಲ್ ಹಾಗೂ ತಬ್ಲಾದಲ್ಲಿ ಪ್ರಥಮ್ ಕುಮಾರ್ ಸುರತ್ಕಲ್ ಸಹಕರಿಸಿದರು. ಗಮಕ ಪ್ರಶಸ್ತಿ ಪುರಸ್ಕೃತ ಗಮಕಿ ಯಜ್ಞೇಶ್ ಆಚಾರ್ಯರನ್ನು ಸನ್ಮಾನಿಸಲಾಯಿತು. ಕೃಷ್ಣಮೂರ್ತಿ ಚಿತ್ರಾಪುರ ಮಾತನಾಡಿ “ಗಮಕ ಕಲೆ ಸಾಹಿತ್ಯ ಸಂಸ್ಕೃತಿ ಪ್ರಸರಣದ ಮಾಧ್ಯಮವಾಗಿದ್ದು, ಗಮಕ ಕಲೆಗೆ ಬೆಂಬಲ ನೀಡಬೇಕು” ಎಂದರು.

    ನಾಗರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಕೆ. ರಾಜಮೋಹನ ರಾವ್ ಶುಭ ಹಾರೈಸಿದರು. ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ನಿತ್ಯಾನಂದ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು. ನಾಗರಿಕ ಸಲಹಾ ಸಮಿತಿಯ ಸಂಯೋಜಕ ಸತೀಶ್ ಸದಾನಂದ ಉಪಸ್ಥಿತರಿದ್ದರು.

    felicitation Music
    Share. Facebook Twitter Pinterest LinkedIn Tumblr WhatsApp Email
    Previous Articleಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಪ್ರದಾನ ಹಾಗೂ ಸಣ್ಣಕತೆಗಳ ಗೌರಮ್ಮ ದತ್ತಿ ನಿಧಿ ಕಥಾ ಸ್ಪರ್ಧೆಯ ಬಹುಮಾನ ವಿತರಣೆ
    Next Article ಗ್ರಂಥಾಂಗಣದಲ್ಲಿ ಸಂತ ಕವಿ ಕನಕದಾಸರ ಅನನ್ಯ ಕಾವ್ಯ ಆಧಾರಿತ ‘ರಾಮಧಾನ್ಯ’ ನಾಟಕ ಪ್ರದರ್ಶನ | ಮಾರ್ಚ್ 11
    roovari

    Add Comment Cancel Reply


    Related Posts

    ಬೆಂಗಳೂರಿನ ಬಂಟರ ಸಂಘದಲ್ಲಿ ‘ಸಂಕಲ್ಪ’ | ಜುಲೈ 17

    July 14, 2025

    ಬೆಂಗಳೂರಿನ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ‘ಬಾನಿನಲ್ಲಿ ಬರೆದವರು’ ಸಂಗೀತ ಸಂಜೆ | ಜುಲೈ 19

    July 14, 2025

    ಮಂಗಳೂರಿನಲ್ಲಿ ವನಮಹೋತ್ಸವ ಮತ್ತು ಹನಿ ಇಬ್ಬನಿ-ಸಿಹಿ ಸಿಂಚನ ಬಹುಭಾಷಾ ಕವಿಗೋಷ್ಠಿ

    July 14, 2025

    ಗುರುವಂದನಾ ಕಾರ್ಯಕ್ರಮದಲ್ಲಿ ಯೋಗೀಶ್ ಕುಮಾರ್ ಮತ್ತು ರವಿ ಅಲೆವೂರಾಯರಿಗೆ ಸನ್ಮಾನ

    July 14, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.