Subscribe to Updates

    Get the latest creative news from FooBar about art, design and business.

    What's Hot

    ಕಾರ್ಕಳದ ಕೋಟಿ ಚೆನ್ನಯ ಥೀಂ ಪಾರ್ಕ್ ಆವರಣದಲ್ಲಿ ‘ಬಿ.ವಿ. ಕಾರಂತ ನೆನಪು’ | ಸೆಪ್ಟೆಂಬರ್ 18, 19 ಮತ್ತು 20

    September 15, 2025

    ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಕೊಡಗು ಜಿಲ್ಲಾ ಘಟಕದ ಪದಗ್ರಹಣ

    September 13, 2025

    ಮಲ್ಲೇಶ್ವರದ ಸೇವಾಸದನದಲ್ಲಿ ‘ಸಡನ್ನಾಗ್ ಸತ್ಹೋದ್ರೆ’ ನಾಟಕ ಪ್ರದರ್ಶನ | ಸೆಪ್ಟೆಂಬರ್ 14

    September 13, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಉಡುಪಿ-ದ.ಕ. ಜಿಲ್ಲಾಮಟ್ಟದ ಆಹ್ವಾನಿತ ತಂಡಗಳ ‘ಕುಣಿತ ಭಜನಾ ಸ್ಪರ್ಧೆ‘ಗೆ ತಂಡಗಳಿಗೆ ಆಹ್ವಾನ | ಸ್ಪರ್ಧೆ ಜುಲೈ 16ರಂದು
    Competition

    ಉಡುಪಿ-ದ.ಕ. ಜಿಲ್ಲಾಮಟ್ಟದ ಆಹ್ವಾನಿತ ತಂಡಗಳ ‘ಕುಣಿತ ಭಜನಾ ಸ್ಪರ್ಧೆ‘ಗೆ ತಂಡಗಳಿಗೆ ಆಹ್ವಾನ | ಸ್ಪರ್ಧೆ ಜುಲೈ 16ರಂದು

    June 13, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಪೆರ್ಡೂರು: ಇಲ್ಲಿನ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿಯು ನಡೆಸುತ್ತಿರುವ ಸಂಗೀತ ಶಾಲೆಯ ಹನ್ನೊಂದನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಉಡುಪಿ ಮತ್ತು ದ.ಕ ಜಿಲ್ಲಾಮಟ್ಟದ ಆಯ್ದ ತಂಡಗಳ ಕುಣಿತ ಭಜನಾ ಸ್ಪರ್ಧೆಯನ್ನು ಜುಲೈ 16ರಂದು ಪೆರ್ಡೂರಿನ ಸುಬ್ರಾಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಆಸಕ್ತ ಭಜನಾ ತಂಡಗಳು ಸಮಿತಿಯನ್ನು ಸಂಪರ್ಕಿಸಿ ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಪಡೆಯಬಹುದು.
    ಸಂಪರ್ಕ ಸಂಖ್ಯೆ :9900408243, 9743579059
    ಕುಣಿತ ಭಜನೆಯ ನಿಯಮಗಳು
    1. ಪಕ್ಕವಾದ್ಯದವರನ್ನು ಸೇರಿ ಕನಿಷ್ಟ 10 ಮಂದಿ, ಗರಿಷ್ಠ 16 ಮಂದಿ ಭಜಕರಿರಬೇಕು.
    2. ಯಾವುದೇ ದೇವರನಾಮಗಳನ್ನು ಹಾಡಬಹುದು.
    3. ಕುಣಿತದೊಂದಿಗೆ ಹಾಡುವ ಮೂಲ ಹಾಡುಗಾರರು ಕನಿಷ್ಠ 3 ಮಂದಿ ಹಾಡಬೇಕು.
    4. ಪಕ್ಕವಾದ್ಯವನ್ನು ತಂಡದವರೇ ತರಬೇಕು.
    5. ತಾಳ, ತಬಲಾ ಮತ್ತು ಹಾರ್ಮೋನಿಯಂ ಕಡ್ಡಾಯವಾಗಿದ್ದು ತಪ್ಪಿದಲ್ಲಿ ಅಂಕಗಳನ್ನು
    ಕಡಿತಗೊಳಿಸಲಾಗುವುದು. ಇವುಗಳೊಂದಿಗೆ ಇತರೆ ಪಕ್ಕವಾದ್ಯಗಳನ್ನು ಬಳಸಬಹುದು.
    6. ನಿಗದಿತ ಸಮಯಕ್ಕಿಂತ ಒಂದು ಗಂಟೆ ಮೊದಲು ಹಾಜರಿದ್ದು ನೋಂದಾಯಿಸಿಕೊಳ್ಳಬೇಕು.
    7. ವಯೋಮಿತಿ ಮತು ಲಿಂಗ ಭೇದವಿಲ್ಲ.
    8. ಪ್ರತಿ ತಂಡಕ್ಕೆ 20 ನಿಮಿಷಗಳ ಕಾಲಾವಧಿ ಮಾತ್ರ.
    9 . ಕುಣಿತ ಭಜನೆ ಆರಂಭವಾಗಿ 15 ನಿಮಿಷ ಆದ ಕೂಡಲೇ ಮೊದಲ ಕರೆಗಂಟೆ ಬಾರಿಸಲಾಗುವುದು. ಉಳಿದ ಐದು ನಿಮಿಷದ ಒಳಗೇ ಭಜನೆ ಮುಗಿಸಬೇಕು. 15 ನಿಮಿಷಗಳ ಒಳಗೆ ಮತ್ತು 20 ನಿಮಿಷಗಳನ್ನು ಮೀರಿದಲ್ಲಿ ಅಂಕಗಳಲ್ಲಿ ಕಡಿತಗೊಳಿಸಲಾಗುವುದು.
    10.ಎರಡನೇ ಕರೆಗಂಟೆ ಅಂದರೆ 20ನೇ ನಿಮಿಷದ ಬೆಲ್ ಹಾಡುತ್ತಿರುವ ತಂಡಕ್ಕೆ ಅಂತಿಮ ಕರೆಗಂಟೆ ಆಗಿರುತ್ತದೆ.
    11. ಸ್ಪರ್ಧಾವಧಿಯಲ್ಲಿ 15 ನಿಮಿಷವಾದ ಕೂಡಲೇ ಮೊದಲ ಕರೆಗಂಟೆ ಬಾರಿಸಲಾಗುವುದು. ಮುಂದಿನ ತಂಡದವರು ಸ್ಪರ್ಧೆಗಾಗಿ ತಯಾರಿರಬೇಕು.
    12.ತಂಡಗಳಿಗೆ ನೀಡಿರುವ ಕಾಲಾವಧಿಯನ್ನು ಉಪಯೋಗಿಸಬೇಕು.
    13.ತೀರ್ಪು ನೀಡುವಾಗ ಭಜನೆ ಆರಂಭ, ಭಜನಾ ಸಂಪ್ರದಾಯದ ಸಮವಸ್ತ್ರ, ಭಜನೆ
    ಹಾಡಿನ ಆಯ್ಕೆ, ರಾಗ-ತಾಳ-ಲಯ, ಕುಣಿತದ ಸಂಯೋಜನೆ, ತಂಡದ ಹೊಂದಾಣಿಕೆ, ತಂಡದ ಕ್ರಿಯಾಶೀಲತೆ ಹಾಗೂ ಭಜನೆಯ ಮುಕ್ತಾಯ ಇತ್ಯಾದಿ ಅಂಶಗಳನ್ನು ಗಮನಿಸಿ ಅಂಕಗಳನ್ನು ನೀಡಲಾಗುವುದು.
    14.ಎಲ್ಲ ಭಜನಾ ತಂಡಗಳಿಗೆ ಪ್ರಮಾಣ ಪತ್ರ ಹಾಗೂ ಗೌರವಧನವನ್ನು ಸಮಾರೋಪ ಸಮಾರಂಭದ ಸಂದರ್ಭದಲ್ಲಿ ನೀಡಲಾಗುವುದು.
    15.ತೀರ್ಪುಗಾರರ ತೀರ್ಮಾನವೇ ಅಂತಿಮ.

    Share. Facebook Twitter Pinterest LinkedIn Tumblr WhatsApp Email
    Previous Articleನಟನ ರಂಗ ಶಾಲೆಯಲ್ಲಿ ಮಕ್ಕಳಿಗಾಗಿ ‘ಅಭಿನಯ ಮತ್ತು ರಂಗ ತರಬೇತಿ’ | ಜೂನ್ 25ರಂದು ಆಡಿಶನ್
    Next Article ಸಂಗೀತ ಪ್ರಿಯರ ಮನಸೂರೆಗೊಂಡ ‘ಸುರ್ ಓ ಸಾಜ್’
    roovari

    Add Comment Cancel Reply


    Related Posts

    ಕಾರ್ಕಳದ ಕೋಟಿ ಚೆನ್ನಯ ಥೀಂ ಪಾರ್ಕ್ ಆವರಣದಲ್ಲಿ ‘ಬಿ.ವಿ. ಕಾರಂತ ನೆನಪು’ | ಸೆಪ್ಟೆಂಬರ್ 18, 19 ಮತ್ತು 20

    September 15, 2025

    ಕೆ.ಪಿ.ಎಸ್. ವಿದ್ಯಾರ್ಥಿಗಳಿಗೆ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಮೊದಲ ಸ್ಥಾನ

    September 12, 2025

    ಕಲಾಸೂರ್ಯ ನೃತ್ಯಾಲಯ ಪ್ರಸ್ತುತ ಪಡಿಸುವ ‘ಕಲಾಭವ -02’ | ಸೆಪ್ಟೆಂಬರ್ 13

    September 12, 2025

    ಉಡುಪಿ ತುಳು ಕೂಟದ ಹೊಸ ಕಾರ್ಯಕಾರಿ ಸಮಿತಿ ರಚನೆ

    September 12, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.