Subscribe to Updates

    Get the latest creative news from FooBar about art, design and business.

    What's Hot

    ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ತಿನ ಅವಿಭಜಿತ ದ. ಕ. ಜಿಲ್ಲಾ ಅಧ್ಯಕ್ಷರಾಗಿ ಕಲಾಶ್ರೀ ರಾಜಶ್ರೀ ಉಳ್ಳಾಲ್ ಆಯ್ಕೆ

    July 5, 2025

    ಶತಾವಧಾನಿ ಡಾ. ಆರ್. ಗಣೇಶ್ ಇವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

    July 5, 2025

    ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಾಚನ ವ್ಯಾಖ್ಯಾನ ಕಾರ್ಯಕ್ರಮ

    July 5, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಉಜಿರೆಯಲ್ಲಿ ದಕ್ಷಿಣ ಕನ್ನಡ ಕರ್ನಾಟಕ ಸಾಹಿತ್ಯ ಪರಿಷತ್ತಿನ 25ನೇ ಕನ್ನಡ ಸಾಹಿತ್ಯ ಸಮ್ಮೇಳನ
    Literature

    ಉಜಿರೆಯಲ್ಲಿ ದಕ್ಷಿಣ ಕನ್ನಡ ಕರ್ನಾಟಕ ಸಾಹಿತ್ಯ ಪರಿಷತ್ತಿನ 25ನೇ ಕನ್ನಡ ಸಾಹಿತ್ಯ ಸಮ್ಮೇಳನ

    February 7, 2023Updated:August 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸರಳ ಸುಂದರತೆಯಿಂದ ಸಮೃದ್ಧಿಗೊಂಡ ರಜತ ಸಮ್ಮೇಳನ

    05 ಫೆಬ್ರವರಿ 2023, ಉಜಿರೆ: ದಕ ಕಸಾಪದ 25ನೇಯ ಕನ್ನಡ ಸಾಹಿತ್ಯ ಸಮ್ಮೇಳನ ಉಜಿರೆಯಲ್ಲಿ ಡಾ. ಹೇಮಾವತಿ ವೀ. ಹೆಗ್ಗಡೆಯವರ ಸರ್ವಧ್ಯಕ್ಷತೆಯಲ್ಲಿ ಇದೀಗ ಸಂಪನ್ನಗೊಂಡಿದೆ. ಇದೊಂದು ದಕ ಕಸಾಪಕ್ಕೆ ನಿಜಕ್ಕೂ ಹೆಮ್ಮೆಯ ಕ್ಷಣ, ಇದನ್ನು ಸಾರ್ಥಕಗೊಳಿಸುವ ನಿಟ್ಟಿನಲ್ಲಿ ಕಳೆದೊಂದು ವರ್ಷದಿಂದ ದಕ ಕಸಾಪದ ಅಧ್ಯಕ್ಷರಾಗಿರುವ ಡಾ. ಎಂ ಪಿ ಶ್ರೀನಾಥ್ ಮತ್ತು ಅವರ ತಂಡ ಪಟ್ಟ ಪ್ರಾಮಾಣಿಕ ಪ್ರಯತ್ನಕ್ಕೆ ಮೊತ್ತ ಮೊದಲು ಅಭಿನಂದನೆಗಳು.

    ದಕ ಕಸಾಪ ಕಳೆದೊಂದು ವರ್ಷದಿಂದ ಒಂದಿಷ್ಟು ಹೊಸ ಚಿಂತನೆಗಳೊಂದಿಗೆ ಬಹುತೇಕ ಎಲ್ಲರನ್ನೂ ಒಳಗೊಳ್ಳುವ ದೃಷ್ಟಿಯಿಂದ ಹೆಜ್ಜೆ ಹಾಕಲು ಆರಂಭ ಮಾಡಿದ್ದೆ ಒಂದು ಆಶಾದಾಯಕ ಬೆಳವಣಿಗೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಉಜಿರೆಯ ರಜತ ಸಮ್ಮೇಳನದ ಬಗ್ಗೆ ಸಹಜವಾಗಿಯೇ ಅನೇಕ ನಿರೀಕ್ಷೆಗಳಿದ್ಥವು. ಅವುಗಳನ್ನೆಲ್ಲ ಹೆಚ್ಚು ಕಡಿಮೆ ಪೊರೈಸಿ ಒಂದು ಯಶಸ್ವೀ ದಾಖಲೆ ಬರೆದ ಕೀರ್ತಿಯೂ ಈ ಸಮ್ಮೇಳನಕ್ಕೆ ಖಂಡಿತ ಲಭಿಸಿದೆ ಒಂದಿಷ್ಟು ಪ್ರೇಕ್ಷಕರ ಕೊರತೆಯ ನಡುವೆ.

    ಒಂದು ಸಮ್ಮೇಳನ ಸಂಪೂರ್ಣ ಸಫಲ ಆಗಬೇಕಾದರೆ ಬರೀ ಆಡಂಬರವೇ ಬೇಕು ಎಂಬ ಮಿಥ್ಯೆಯನ್ನು ಹೋಗಲಾಡಿಸಿ ಎಲ್ಲ ಹಂತದ ಸರಳತೆಯಲ್ಲೂ ಸುಂದರತೆ ಸಾಧ್ಯ ಎಂಬ ಆಲೋಚನೆಯನ್ನು ನೀಡಿದ್ದಾರೆ. ಸ್ವತಹ ಸಮ್ಮೇಳನದ ಅಧ್ಯಕ್ಷೆಯಾಗಿದ್ದ ಹೇಮಾವತಿ ಹೆಗ್ಗಡೆ ಅವರು ಬಹಳ ಪ್ರಾಂಜಲವಾಗಿ ” ಈ ಸ್ಥಾನಕ್ಕೆ ನನಗಿಂತ ಶ್ರೇಷ್ಠರಿದ್ದರು ಎಂಬ ಅರಿವು ತಾನಗಿದೆ, ಕೆಲವು ವಿಶೇಷ ಸಂದರ್ಭಗಳ ಹಿನ್ನೆಲೆಯಲ್ಲಿ ನನ್ನನ್ನು ಆಯ್ಕೆ ಮಾಡಿರಬಹುದು ” ಎಂದು ಅಧ್ಯಕ್ಷ ಭಾಷಣದಲ್ಲಿ ಸೃಷ್ಟವಾಗಿ ಹೇಳಿದ್ದು ಮತ್ತು ಮಹಿಳಾ ಸುರಕ್ಷತೆ ಬಗ್ಗೆ, ಅದರಲ್ಲೂ ನಿರ್ಭಯ ಕೇಸ್ ಉಲ್ಲೇಖಿಸಿ ಕಳವಳ ವ್ಯಕ್ತಪಡಿಸಿದ್ದು, ( ಇತರ ಕೆಲವು ಕನ್ನಡ ಭಾಷೆಯ ಕಾಳಜಿಗಳ ಜತೆಗೆ) ಕಸಾಪದ ಕೆಲವು ಅನಿವಾರ್ಯತೆಗಳಿಗೂ ನೇರಾ ಸಾಕ್ಷಿ.

    ಅದೂ ಯಾವುದೇ ಎಲ್ಲೇ ಇರಲಿ, ಸಮ್ಮೇಳನಗಳ ಗೋಷ್ಠಿಯ ಸಾರ್ಥಕತೆ ಅಷ್ಟಕಷ್ಟೆ. ಇಲ್ಲೂ ನಡೆದ ಹಲವು ಗೋಷ್ಠಿಗಳು ಒಟ್ಟು ದೃಷ್ಟಿಯಿಂದ ಓ. ಕೆ ಅನ್ನಿಸಿದರೂ ಬಹುತೇಕ ಗೋಷ್ಠಿಗಳು ಪುರುಷ ಪ್ರಧಾನ ಆದದ್ದು ಸರಿಯಲ್ಲ. ಉಳಿದಂತೆ ಈ ಬಾರಿ ಎಲ್ಲ ಜಾತಿ ಮತ ಧರ್ಮಗಳ ಪ್ರಾತಿನಿಧ್ಯ ಒಂದು ಸ್ವಾಗತಾರ್ಹ ಬೆಳವಣಿಗೆ. ಎಲ್ಲೂ ದುಂದು ವೆಚ್ಚ ಮಾಡದ ಕ್ರಮವೂ ಅತ್ಯಂತ ಶ್ಲಾಘನೀಯ. ಈ ಎಲ್ಲ ಉತ್ತಮತೆಯನ್ನೂ ಬಿಡದೇ ಮುಂದುವರಿದು ದಕ ಕಸಾಪ ಮುಂದಿನ ದಿನಗಳಲ್ಲಿ ಮತ್ತಷ್ಟು ಜನರಿಗೆ ಹತ್ತಿರವಾಗಲಿ ಕುವೆಂಪು ಸಾರಿದ ಮಾನವತೆಯ, ಸಾರದೊಂದಿಗೆ ಎಂಬ ಆಶಯ ಸಮಸ್ತ ಕರಾವಳಿ ಕನ್ನಡಿಗರದ್ದು.

    – ಕಲ್ಲಚ್ಚು ಮಹೇಶ ಆರ್ ನಾಯಕ್

    Share. Facebook Twitter Pinterest LinkedIn Tumblr WhatsApp Email
    Previous Articleಮಣಿ ಕೃಷ್ಣಸ್ವಾಮಿ ಅಕಾಡೆಮಿ ಮತ್ತು ನಾಗರಿಕ ಸಲಹಾ ಸಮಿತಿಯ – 40ನೇ ಉದಯರಾಗ ಸಂಗೀತ ಕಛೇರಿ
    Next Article ರಂಗ ತರಬೇತಿ ಸರಣಿ ಶಿಬಿರ – ಪೆಬ್ರವರಿ18 ಮತ್ತು 19 (ಪ್ರತಿ ತಿಂಗಳೂ 2 ದಿನ)
    roovari

    Add Comment Cancel Reply


    Related Posts

    ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಾಚನ ವ್ಯಾಖ್ಯಾನ ಕಾರ್ಯಕ್ರಮ

    July 5, 2025

    Book review | The Gory Account of Genocide in the Heaven of India

    July 5, 2025

    ಕೆನರಾ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ 108ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮ

    July 5, 2025

    ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ

    July 5, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.