ಬೆಂಗಳೂರು : ‘ಮಂಟಪ’ ತಂಡ ಇದರ ವತಿಯಿಂದ ‘ವಚನಗಳ ಸಂಯೋಜನೆ’ ಕಾರ್ಯಕ್ರಮವನ್ನು ದಿನಾಂಕ 28 ಮೇ 2025ರಂದು ಸಂಜೆ 6-00 ಗಂಟೆಗೆ ಆರ್.ವಿ. ದಂತ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಜಯನಗರದ ಶೈಕ್ಷಣಿಕ ಸಾಧನೆ ಮೆರೆದ ಯುವ ಸಾಧಕರನ್ನು ಗೌರವಿಸುವ ಒಂದು ವಿಶೇಷ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಬಸವಣ್ಣ, ಅಕ್ಕ ಮಹಾದೇವಿ ಮತ್ತು ಅಲ್ಲಮ ಪ್ರಭುಗಳ ಗಹನ ಕಾವ್ಯ ಪ್ರಸ್ತುತಿ ನಡೆಯಲಿದ್ದು, ಎಂ.ಡಿ. ಪಲ್ಲವಿ ಇವರ ಗಾಯನಕ್ಕೆ ಎಸ್.ಆರ್. ರಾಮಕೃಷ್ಣ ಹಾರ್ಮೋನಿಯಂನಲ್ಲಿ, ರೋಹಿತ್ ಪಿ.ಎಸ್. ಡ್ರಮ್ಮರ್, ಕೃಷ್ಣ ಕುಮಾರ್ ಜೆಂಬೇ, ಕ್ಯಾಲೆಬ್ ಅಲೆಕ್ಸಾಂಡರ್ ಬೇಯ್ಸ್ ಗಿಟಾರ್ ಮತ್ತು ಅಕ್ಷತಾ ಕೃಷ್ಣನ್ ಎಲೆಕ್ಟ್ರಿಕ್ ಪಿಯಾನೋದಲ್ಲಿ ಸಾಥ್ ನೀಡಲಿದ್ದಾರೆ.