Subscribe to Updates

    Get the latest creative news from FooBar about art, design and business.

    What's Hot

    ತುಳು ಸಾಹಿತ್ಯ ಅಕಾಡೆಮಿಯಲ್ಲಿ ‘ಸಂಗೀತ ನೃತ್ಯ ವಿಚಾರ ಸಂಕಿರಣ’ ಸಂಭ್ರಮ -2026 | ಫೆಬ್ರವರಿ 14

    February 13, 2026

    ಹಿರಿಯ ಜಾದೂಗಾರ ಪ್ರೊ. ಮಾಧವ್ ಅಸ್ತಂಗತ

    February 13, 2026

    ಕರಾವಳಿ ಲೇಖಕಿಯರ ವಾಚಕಿಯರ ಸಂಘದ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ

    February 13, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಾರ್ಚ್ 12 – ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವದ ಸರಣಿ ಕಾರ್ಯಕ್ರಮ
    News

    ಮಾರ್ಚ್ 12 – ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವದ ಸರಣಿ ಕಾರ್ಯಕ್ರಮ

    March 14, 2023Updated:August 19, 20231 Comment1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    14-03-2023,ಮಂಗಳೂರು: ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವದ ಸರಣಿ ಕಾರ್ಯಕ್ರಮ ದಿನಾಂಕ 12-03-2023 ರಂದು ಶ್ರೀ ಮಹಾಮ್ಮಾಯ ದೇವಸ್ಥಾನದ ಆವರಣದಲ್ಲಿ ಜರಗಿತು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಯೋಗದಲ್ಲಿ ನಡೆದ ಕೆ. ದಿವಾಕರ ದಾಸ್ ಅವರ ಸಂಮಾನ ಕಾರ್ಯಕ್ರಮದಲ್ಲಿ ಸಿಎ. ಶಿವಾನಂದ ಪೈ ಅಧ್ಯಕ್ಷರಾಗಿದ್ದರು.ಹಿಂದಿನ ಕಾಲದಲ್ಲಿ ಇಲ್ಲಿನ ಜನರ ಮನೋರಂಜನೆಗೆ ಇದ್ದದ್ದು ಯಕ್ಷಗಾನ. ಇದರಿಂದ ಅಪಾರ ಪುರಾಣ ಜ್ಞಾನವನ್ನು ಕರಾವಳಿಯ ಜನತೆ ಹೊಂದಿದ್ದರು.ಈ ಸಂಘ ತಾಳಮದ್ದಳೆಯ ಮೂಲಕ ಜನರ ಮನರಂಜನೆಗೂ, ಮನೋವಿಕಾಸಕ್ಕೂ ಕಾರಣವಾಗಿ 100 ವರ್ಷ ಪೂರೈಸಿರುವುದು ಅತ್ಯಂತ ಸಂತೋಷ ಎಂದರು.
    ಕೆ. ದಿವಾಕರ ದಾಸ್ ಇವರ ಅಭಿನಂದನೆಯನ್ನು ಸಂಘದ ಪ್ರಧಾನ ಕಾರ್ಯದರ್ಶಿ ಸಂಜಯ ಕುಮಾರ್ ರಾವ್ ಗೈದರು.ವೇಷಧಾರಿಯಾಗಿ, ಪ್ರಸಾದನ ತಯಾರಿಕೆಯ ಉದ್ಯಮಿಯಾಗಿ, ಯಕ್ಷಗಾನ ಸಂಘಟಕನಾಗಿ ಕಲಾ ಸೇವೆಯನ್ನು ಮಾಡಿದವರು ದಿವಾಕರ ದಾಸ್. ಅವರು ವಾಗೀಶ್ವರಿ ಸಂಘದಲ್ಲಿ ಸಲ್ಲಿಸಿದ ಸೇವೆಗಾಗಿ ಅವರನ್ನು ಸಂಮಾನಿಸುತ್ತಿದ್ದೇವೆ ಎಂದರು.
    ಸಂಮಾನಕ್ಕೆ ಉತ್ತರವಾಗಿ ದಿವಾಕರ ದಾಸ್ ತಾನು ಇಲ್ಲಿ ಗೈದ ಅಳಿಲ ಸೇವೆಯನ್ನು ಗುರುತಿಸಿ ಸಂಮಾನಿಸಿದ್ದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು.
    ಸಂಮಾನ ಪತ್ರದ ವಾಚನವನ್ನು ಉಪಾಧ್ಯಕ್ಷೆ ಶೋಭಾ ಐತಾಳ್ ಗೈದರು. ಚೆಂಡೆ ಮದ್ದಳೆ ವಾದಕನಾಗಿ ಸಂಘದಲ್ಲಿ ಸೇವೆ ಸಲ್ಲಿಸಿದ್ದ ಕೀರ್ತಿಶೇಷ ಕೃಷ್ಣಪ್ಪ ಶೆಟ್ಟಿಗಾರರಿಗೆ ಸಂಘಟನಾ ಕಾರ್ಯದರ್ಶಿ ಅಶೋಕ ಬೋಳೂರು ನುಡಿ ನಮನ ಸಲ್ಲಿಸಿದರು. ಇನ್ನೋರ್ವ ಅತಿಥಿ ಕಾರ್ಪೋರೇಶನ್ ಬ್ಯಾಂಕ್ ನ ನಿವೃತ್ತ ಉದ್ಯೋಗಿ ಗಣೇಶ್ ಕಾಮತ್ ತನ್ನ ಬಾಲ್ಯದಲ್ಲಿ ಈ ಸಂಘದ ಕಾರ್ಯಕ್ರಮಗಳನ್ನು ಕಂಡದ್ದನ್ನು ಸ್ಮರಿಸಿಕೊಂಡರು. ಇನ್ನೂ ಹಲವು ಕಾಲ ಈ ಸಂಘ ಮುನ್ನಡೆಯಲೆಂದು ಹಾರೈಸಿದರು.
    ಸಭಾ ಕಾರ್ಯಕ್ರಮಗಳ ಛಾಯಾಗ್ರಹಣವನ್ನು ಅತ್ಯಂತ ಮುತುವರ್ಜಿಯಿಂದ ನಿರ್ವಹಿಸುತ್ತಿದ್ದ ರವಿಚಂದ್ರ ಭಟ್ ಅವರನ್ನು ಸಂಮಾನಿಸಲಾಯಿತು.
    ಸಂಘದ ಅಧ್ಯಕ್ಷ ಶ್ರೀನಾಥ್ ಪ್ರಭು, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಸಿ. ಎಸ್. ಭಂಡಾರಿ, ಪ್ರೊ. ಜಿ. ಕೆ. ಭಟ್,ಜಯಂತಿ ದಾಸ್ ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಪುತ್ತೂರು “ನಾಟ್ಯ ರಂಗ”ದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
    Next Article ಕೇಂದ್ರ ಸಾಹಿತ್ಯ ಅಕಾಡೆಮಿ ಕೊಂಕಣಿ ಸಲಹಾ ಮಂಡಳಿಯ ಸಂಚಾಲಕರಾಗಿ ಮೆಲ್ವಿನ್ ರೊಡ್ರಿಗಸ್ ಆಯ್ಕೆ
    roovari

    1 Comment

    1. ಪಕಳಕುಂಜ ಗೋಪಾಲಕೃಷ್ಣ ಭಟ್ on March 14, 2023 1:14 pm

      ಯಶಸ್ವೀ ಶತಮಾನಗಳಾಚರಣೆ!
      ಯಶಸ್ವೀ ಶತಾಧಿಕ ಸನ್ಮಾನ ಸಂಸ್ಮರಣೆ ಜೋಡಿ!
      ಯಶಸ್ವೀ ಸಂಘಟಿತ ಕಲಾರಾಧನೆ!!
      ಯಶಸ್ಸಿಗಾಗಿಯೇ ಹಾರಕೆ ಹಾರೈಕೆಗಳೈ!!

      Reply

    Add Comment Cancel Reply


    Related Posts

    ಕಲಾವಿದ ಲಕ್ಷ್ಮಣ ಶೆಟ್ಟಿ ತಾರೆಮಾರ್ ಇವರಿಗೆ ‘ಬೊಂಡಾಲ ಪ್ರಶಸ್ತಿ’ ಪ್ರದಾನ | ಫೆಬ್ರವರಿ 19 ಮತ್ತು 20

    February 13, 2026

    ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕೃತಿ ಲೋಕಾರ್ಪಣೆ, ಸಂವಾದ, ವಿನೂತನ ಯಕ್ಷಪ್ರಸ್ತುತಿ | ಫೆಬ್ರವರಿ 13

    February 12, 2026

    ತೊಕ್ಕೊಟ್ಟು ಒಳಪೇಟೆಯಲ್ಲಿ ‘ವೀರರಾಣಿ ಅಬ್ಬಕ್ಕ ಉತ್ಸವ 2025-2026’ | ಫೆಬ್ರವರಿ 14

    February 12, 2026

    ಮಿತ್ತಬೈಲು ಶ್ರೀ ರಾಮ ಭಜನಾ ಮಂದಿರದಲ್ಲಿ ‘ಶ್ರೀಮದ್ ಭಾಗವತ ಪುರಾಣ’ ಪ್ರವಚನ | ಫೆಬ್ರವರಿ 13ರಿಂದ 19

    February 12, 2026

    1 Comment

    1. ಪಕಳಕುಂಜ ಗೋಪಾಲಕೃಷ್ಣ ಭಟ್ on March 14, 2023 1:14 pm

      ಯಶಸ್ವೀ ಶತಮಾನಗಳಾಚರಣೆ!
      ಯಶಸ್ವೀ ಶತಾಧಿಕ ಸನ್ಮಾನ ಸಂಸ್ಮರಣೆ ಜೋಡಿ!
      ಯಶಸ್ವೀ ಸಂಘಟಿತ ಕಲಾರಾಧನೆ!!
      ಯಶಸ್ಸಿಗಾಗಿಯೇ ಹಾರಕೆ ಹಾರೈಕೆಗಳೈ!!

      Reply

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.