Subscribe to Updates

    Get the latest creative news from FooBar about art, design and business.

    What's Hot

    ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗೆ ‘ಶೇಣಿ ಪ್ರಶಸ್ತಿ 2025’ ಪ್ರದಾನ

    December 24, 2025

    ಬಳ್ಳಪದವು ನಾರಾಯಣೀಯಂ ಆವರಣದಲ್ಲಿ ‘ವೇದ ನಾದ ಯೋಗ ತರಂಗಿಣಿ’ | ಡಿಸೆಂಬರ್ 25ರಿಂದ 28

    December 24, 2025

    ಪುತ್ತೂರಿನಲ್ಲಿ ಸಾಹಿತ್ಯ ಮತ್ತು ಚಿತ್ರಕಲೆಯ ಸಂಗಮ ‘ಚಿತ್ರಕಲಾ ಸ್ಪರ್ಧೆ’ | ಡಿಸೆಂಬರ್ 28

    December 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬಳ್ಳಪದವು ನಾರಾಯಣೀಯಂ ಆವರಣದಲ್ಲಿ ‘ವೇದ ನಾದ ಯೋಗ ತರಂಗಿಣಿ’ | ಡಿಸೆಂಬರ್ 25ರಿಂದ 28
    Awards

    ಬಳ್ಳಪದವು ನಾರಾಯಣೀಯಂ ಆವರಣದಲ್ಲಿ ‘ವೇದ ನಾದ ಯೋಗ ತರಂಗಿಣಿ’ | ಡಿಸೆಂಬರ್ 25ರಿಂದ 28

    December 24, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಕಾಸರಗೋಡಿನ ಬದಿಯಡ್ಕ ಬಳಿಯ ವೀಣಾವಾದಿನಿ ಸಂಗೀತ ಹಾಗೂ ವೈದಿಕ – ತಾಂತ್ರಿಕ ವಿದ್ಯಾಪೀಠದ ವಾರ್ಷಿಕೋತ್ಸವ ‘ವೇದ ನಾದ ಯೋಗ ತರಂಗಿಣಿ’ ಸಾಂಸ್ಕೃತಿಕ ವೈಭವವು ದಿನಾಂಕ 25ರಿಂದ 28 ಡಿಸೆಂಬರ್ 2025ರವರೆಗೆ ವೈದಿಕ, ತಾಂತ್ರಿಕ, ಯೋಗ, ಸಂಗೀತ, ನೃತ್ಯ ಮುಂತಾದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಳ್ಳಪದವು ನಾರಾಯಣೀಯಂ ಆವರಣದಲ್ಲಿ ನಡೆಯಲಿದೆ.

    ದಿನಾಂಕ 25 ಡಿಸೆಂಬರ್ 2025ರಂದು ಬೆಳಗ್ಗೆ 5-00 ಗಂಟೆಗೆ ಮಹಾಗಣಪತಿ ಹೋಮ, ಲಕ್ಷಾರ್ಚನೆ, ಚಕ್ರಾಬ್ಬಪೂಜೆ ಮತ್ತು ಸಂಜೆ 6-30ಕ್ಕೆ ನವಗ್ರಹಪೂಜೆ ಹಾಗೂ ಪೂಜೆಯ ಜೊತೆ ವೀಣಾವಾದಿನಿಯ ವಿದ್ಯಾರ್ಥಿ ಕಲಾವಿದರಿಂದ ನವಗ್ರಹ ಕೃತಿಗಳ ಹಾಡುಗಾರಿಕೆ ಇರುತ್ತದೆ.

    ದಿನಾಂಕ 26 ಡಿಸೆಂಬರ್ 2025ರಂದು ಬೆಳಗ್ಗೆ ಗಂಟೆ 9-30ಕ್ಕೆ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಇವರ ಉಪಸ್ಥಿತಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ಜರಗಲಿದೆ. ಬಳಿಕ ವಿವಿಧ ವಾದ್ಯವಾದನಗಳ ಸಾಂಗತ್ಯದಲ್ಲಿ, ‘ಸಮನ್ವಯ’ ಎಂಬ ವಿಶೇಷ ಕಾರ್ಯಕ್ರಮ ಜರಗಲಿದ್ದು, ಮಹಾಶ್ರೀಚಕ್ರ ನವಾವರಣ ಪೂಜೆ, ತತ್ಸಂಬಂ ನವಾವರಣ ಕೃತಿಗಳ ಆಲಾಪನೆ, ವಿದ್ವಾನ್ ಯೋಗೀಶ ಶರ್ಮಾ ಬಳ್ಳಪದವು ಇವರಿಂದ ‘ನಾದಮಾಧುರಿ’ ಎಂಬ ಸಂಗೀತಸೇವೆ ಏರ್ಪಡಲಿದೆ. ಇದಕ್ಕೂ ಎಡನೀರು ಮಠಾಧೀಶರು ಹಾಗೂ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರ ಉಪಸ್ಥಿತಿ ಇರಲಿದೆ.

    ದಿನಾಂಕ 27 ಡಿಸೆಂಬರ್ 2025ರಂದು ಸಂಸ್ಥೆಯ ವಿದ್ಯಾರ್ಥಿ ಕಲಾವಿದರಿಂದ ‘ರಸಿಕಪ್ರಿಯ’ ಎಂಬ ಹೆಸರಿನಲ್ಲಿ ಹಾಡುಗಾರಿಕೆಯ ಕಛೇರಿಗಳು, ತಂತ್ರಿವರ್ಯರಾದ ಬ್ರಹ್ಮಶ್ರೀ ಬಾಲಕೃಷ್ಣ ಭಟ್ ಪೈರುವುಣಿ ಇವರಿಗೆ ಗುರುಪೂಜೆ, ದೆಹಲಿಯ ಸ್ವರಾಂಜಲಿ ಸಂಸ್ಥೆಯ ನಿವೇದಿತಾ ಭಟ್ಟಾಚಾರ್ಜಿ ಹಾಗೂ ತಂಡದಿಂದ ಹಿಂದೂಸ್ವಾನೀ ಸಂಗೀತ ಕಛೇರಿ ಹಾಗೂ ಬೆಂಗಳೂರಿನ ವಿದುಷಿ ಅನುಷಾ ಇವರಿಂದ ಭರತನಾಟ್ಯ ಕಾರ್ಯಕ್ರಮ ಜರಗಲಿದೆ.

    ದಿನಾಂಕ 28 ಡಿಸೆಂಬರ್ 2025ರಂದು ಮುಂಜಾನೆ ಯೋಗ ಕಾರ್ಯಕ್ರಮ, ತ್ಯಾಗರಾಜರ ಪಂಚರತ್ನ ಕೃತಿಗಳ ಹಾಡುಗಾರಿಕೆ, ವಿದ್ಯಾರ್ಥಿಗಳಿಂದ ನಾದೋಪಾಸನಾ ಸಂಗೀತಾರ್ಚನೆ ಮತ್ತು ವಾಗ್ಗೇಯಕಾರ ಡಾ. ಎಂ. ಬಾಲಮುರಳಿಕೃಷ್ಣ ಇವರಿಗೆ ಗೌರವಪೂರ್ವಕವಾಗಿ ‘ಮುರಳೀರವಂ’ ಎಂಬ ಸಂಗೀತ ಕಾರ್ಯಕ್ರಮ ನಡೆಯಲಿವೆ. ಸಂಜೆ 4-30ಕ್ಕೆ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ವರ್ಷದ ‘ವೀಣಾವಾದಿನಿ ಪುರಸ್ಕಾರ’ವನ್ನು ವಯಲಿನ್ ಕಲಾವಿದ ಎಡಪಳ್ಳಿ ಅಜಿತ್ ಕುಮಾರ್ ಮತ್ತು ಹಿರಿಯ ಮೃದಂಗ ಕಲಾವಿದ ಬಾಲಕೃಷ್ಣ ಕಾಮತ್ ಇವರಿಗೆ ನೀಡಲಾಗುತ್ತಿದೆ. ಬಳಿಕ ಮಧುರೈ ಟಿ.ಎನ್.ಎಸ್. ಕೃಷ್ಣ ಇವರಿಂದ ಸಂಗೀತ ಕಛೇರಿಯೊಂದಿಗೆ ಉತ್ಸವಕ್ಕೆ ತೆರೆ ಬೀಳಲಿದೆ.

     

    award baikady felicitation Music roovari
    Share. Facebook Twitter Pinterest LinkedIn Tumblr WhatsApp Email
    Previous Articleಪುತ್ತೂರಿನಲ್ಲಿ ಸಾಹಿತ್ಯ ಮತ್ತು ಚಿತ್ರಕಲೆಯ ಸಂಗಮ ‘ಚಿತ್ರಕಲಾ ಸ್ಪರ್ಧೆ’ | ಡಿಸೆಂಬರ್ 28
    Next Article ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗೆ ‘ಶೇಣಿ ಪ್ರಶಸ್ತಿ 2025’ ಪ್ರದಾನ
    roovari

    Add Comment Cancel Reply


    Related Posts

    ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗೆ ‘ಶೇಣಿ ಪ್ರಶಸ್ತಿ 2025’ ಪ್ರದಾನ

    December 24, 2025

    ಪುತ್ತೂರಿನಲ್ಲಿ ಸಾಹಿತ್ಯ ಮತ್ತು ಚಿತ್ರಕಲೆಯ ಸಂಗಮ ‘ಚಿತ್ರಕಲಾ ಸ್ಪರ್ಧೆ’ | ಡಿಸೆಂಬರ್ 28

    December 24, 2025

    ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ‘ಅಖಿಲ ಕರ್ನಾಟಕ ಐದನೆಯ ಕವಿಕಾವ್ಯ ಸಮ್ಮೇಳನ’

    December 24, 2025

    ಸಾಧನಕೇರಿಯಲ್ಲಿ ‘ಆನಂದಕಂದರ ಐತಿಹಾಸಿಕ ಕಾದಂಬರಿ’ಗಳ ಒಂದು ಅವಲೋಕನ

    December 24, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.