Subscribe to Updates

    Get the latest creative news from FooBar about art, design and business.

    What's Hot

    ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಸುಪ್ತದೀಪ್ತಿಯವರ ನೂತನ ಕೃತಿಗಳ ಅನಾವರಣ | ಜೂನ್ 21

    June 16, 2025

    ಮಂಗಳೂರಿನ ಪುರಭವನದಲ್ಲಿ ಸ್ವರುಣ್ ಸ್ಮರಣಾಂಜಲಿ

    June 16, 2025

    ಕಯ್ಯಾರಿನಲ್ಲಿ ಡಾ. ಕಯ್ಯಾರ ಕಿಞಣ್ಣ ರೈಯವರ ಜನ್ಮದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ | ಜೂನ್ 18

    June 16, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಹಿಳೆಯರ ಸಾಹಿತ್ಯ ಕೃತಿಗಳಿಗೆ ಬಹುಮಾನ | ಕೃತಿಗಳಿಗೆ ಆಹ್ವಾನ
    Competition

    ಮಹಿಳೆಯರ ಸಾಹಿತ್ಯ ಕೃತಿಗಳಿಗೆ ಬಹುಮಾನ | ಕೃತಿಗಳಿಗೆ ಆಹ್ವಾನ

    May 31, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ ಮಹಿಳೆಯರ ಕನ್ನಡದ ಶ್ರೇಷ್ಠ ಕೃತಿಗಳಿಗೆ 2022 ನೇ ಸಾಲಿನ “ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ”ಕ್ಕೆ ಕೃತಿಗಳನ್ನು ಆಹ್ವಾನಿಸಲಾಗಿದೆ.
    ಮೂರು ಅತ್ಯುತ್ತಮ ಕೃತಿಗಳನ್ನು ಆಯ್ಕೆಮಾಡಿ, ಪ್ರತಿಯೊಂದು ಕೃತಿಗೂ ರೂ. 15,000(ಹದಿನೈದು ಸಾವಿರ)ವನ್ನು ಬಹುಮಾನ ನೀಡಿ ಗೌರವಿಸಲಾಗುವುದು.

    ನಿಯಮಗಳು
    1. ಈ ಬಹುಮಾನಕ್ಕೆ ಮಸ್ತಕಗಳನ್ನು ಲೇಖಕಿಯರು ಮಾತ್ರ ಕಳುಹಿಸಬೇಕು.
    2. ಕನ್ನಡ ಕೃತಿಗಳಿಗೆ ಮಾತ್ರ ಬಹುಮಾನ ಇರುವುದು.
    3. ಅನುವಾದ ಕೃತಿಗಳಿಗೆ ಅವಕಾಶ ಇರುವುದಿಲ್ಲ.
    4. ಬಹುಮಾನಕ್ಕೆ ಕಳುಹಿಸುವ ಕೃತಿಯು 01.01.2022 ರಿಂದ 31.12.2022 ರ ಒಳಗೆ ಪ್ರಕಟವಾದದ್ದಾಗಿರಬೇಕು.
    5. ಪ್ರತಿಯೊಂದು ಕೃತಿಯ 9 ಪ್ರತಿಗಳನ್ನು ಕಳುಹಿಸಬೇಕು.
    6. ಒಬ್ಬರು ಒಂದಕ್ಕಿಂತ ಹೆಚ್ಚು ಕೃತಿಗಳನ್ನುಕಳುಹಿಸಬಹುದಾದರೂ ಅವರ ಒಂದು ಕೃತಿಗೆ ಮಾತ್ರ ಬಹುಮಾನ ಕೊಡಲಾಗುವುದು.
    7. ಲೇಖಕಿಯರು ತಮ್ಮ ಪರಿಚಯವನ್ನು ಸಂಕ್ಷಿಪ್ತವಾಗಿ ಸ್ವಹಸ್ತಾಕ್ಷರದಲ್ಲಿ ಬರೆದು, ಭಾವಚಿತ್ರದೊಂದಿಗೆ ಸಂಪರ್ಕ ಸಂಖ್ಯೆ ಸಮೇತ ಕಳುಹಿಸಬೇಕು.
    8. ಪ್ರಕಾಶಕರು ಪುಸ್ತಕಗಳನ್ನು ಸಲ್ಲಿಸಿದರೂ, ಬಹುಮಾನ ಬಂದಲ್ಲಿ ಅದನ್ನು ಲೇಖಕಿಯರಿಗೇ ನೀಡಲಾಗುವುದು.
    9. ಕರ್ನಾಟಕ ವಿದ್ಯಾವರ್ಧಕ ಸಂಘದ ಕಚೇರಿ ವೇಳೆಯಲ್ಲಿ ಸ್ವತಃ ಬಂದು ಅಥವಾ ಅಂಚೆಯ ಮೂಲಕ ಪುಸ್ತಕಗಳನ್ನು ಪ್ರಧಾನ ಕಾರ್ಯದರ್ಶಿ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ – 580001 ವಿಳಾಸಕ್ಕೆ ಸಲ್ಲಿಸಲು 30.06.2023 ಕೊನೆಯ ದಿನವಾಗಿರುತ್ತದೆ.
    10. ಬಹುಮಾನ ನೀಡುವಲ್ಲಿ ಸಂಘದ ನಿರ್ಣಯವೇ ಅಂತಿಮ.
    11. ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು ಇದರಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.
    12. ಈಗಾಗಲೇ ಈ ಬಹುಮಾನವನ್ನು ಎರಡು ಬಾರಿ ಪಡೆದುಕೊಂಡವರಿದ್ದರೆ ಅಂಥವರ ಕೃತಿಗಳಿಗೆ ಅವಕಾಶವಿರುವುದಿಲ್ಲ.
    13. ಈ ವಿಷಯಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿಗಾಗಿ ಪ್ರಧಾನ ಕಾರ್ಯದರ್ಶಿಗಳು, ‘ಕರ್ನಾಟಕ ವಿದ್ಯಾವರ್ಧಕಸಂಘ’ ಇವರನ್ನು ಸಂಪರ್ಕಿಸಬಹುದು.
    ಶಂಕರ ಹಲಗತ್ತಿ ಪ್ರಧಾನ ಕಾರ್ಯದರ್ಶಿ,
    ಸಂಪರ್ಕ ಸಂಖ್ಯೆ :9448022950

    Share. Facebook Twitter Pinterest LinkedIn Tumblr WhatsApp Email
    Previous Articleಕಾದಂಬರಿ ಪ್ರಶಸ್ತಿಗೆ ಆಹ್ವಾನ
    Next Article ಪುತ್ತೂರು ‘ಮಧು ಶ್ರೀ’ಯಲ್ಲಿ ‘ಶರಘಾತ’
    roovari

    Add Comment Cancel Reply


    Related Posts

    ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಸುಪ್ತದೀಪ್ತಿಯವರ ನೂತನ ಕೃತಿಗಳ ಅನಾವರಣ | ಜೂನ್ 21

    June 16, 2025

    ಪಾರ್ವತಿ ಜಿ. ಐತಾಳರ ‘ಮಲೆಯಾಳ ಸಾಹಿತ್ಯದಲ್ಲಿ ಮಹಿಳಾ ಧ್ವನಿಗಳು’ ಕೃತಿ ಲೋಕಾರ್ಪಣೆ

    June 16, 2025

    ಯಶಸ್ವಿಯಾಗಿ ಜರಗಿದ ಭಾವಗೀತೆಗಳ ಹರಿಕಾರ ಎಚ್.ಎಸ್.ವಿ. ನುಡಿನಮನ ಮತ್ತು ಮುಂಗಾರು ಕಾವ್ಯೋತ್ಸವ

    June 16, 2025

    ಮನೆಮನೆ ಕನ್ನಡ ಜಾಗೃತಿ ಅಭಿಯಾನ ಉದ್ಘಾಟನೆ | ಜೂನ್ 22

    June 16, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.