Subscribe to Updates

    Get the latest creative news from FooBar about art, design and business.

    What's Hot

    ಆಳ್ವಾಸ್ ರಂಗ ತಂಡಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 10

    May 31, 2025

    ಮಂಗಳೂರಿನಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ‘ನೃತ್ಯ, ಗಾನ ವೈಭವ’

    May 31, 2025

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿಶ್ವ ಕಲಾ ದಿನ | ಬೆಂಗಳೂರಿನಲ್ಲಿ “ದಾಕಹವಿಸ” ಚಿತ್ರಕಲಾ ಪ್ರಾತ್ಯಕ್ಷಿಕೆ ಮತ್ತು ಸಂವಾದ
    Visual Arts

    ವಿಶ್ವ ಕಲಾ ದಿನ | ಬೆಂಗಳೂರಿನಲ್ಲಿ “ದಾಕಹವಿಸ” ಚಿತ್ರಕಲಾ ಪ್ರಾತ್ಯಕ್ಷಿಕೆ ಮತ್ತು ಸಂವಾದ

    April 25, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು: ದಿನಾಂಕ 15-04-2023ರಂದು ವಿಶ್ವ ಕಲಾ ದಿನ ಪ್ರಯುಕ್ತ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ “ದಾಕಹವಿಸ” ಎರ್ಪಡಿಸಿದ ಕಲಾ ಪ್ರಾತ್ಯಕ್ಷಿಕೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಶ್ರೀ ವಿ. ಹರಿರಾಮ ಅವರು ಮಾತನಾಡುತ್ತಾ “ನಭದ ನೀಲಿ ಅನಂತವನ್ನು ಸೂಚಿಸಿದರೆ, ಎಲ್ಲವನ್ನೂ ಮೀರಿ ಭಗವಂತ ಅಪ್ರಮೇಯನಾದ. ಹಾಗೆಯೇ ಎಲ್ಲ ಚೌಕಟ್ಟುಗಳನ್ನು ಮೀರಿ ರಚಿಸುವ ಕಲೆಯೇ ಅಮೂರ್ತ ಕಲೆ.” ಎಂದು ತಮ್ಮ ನಿರರ್ಗಳವಾದ ಮಾತಿನಿಂದ ಕಲೆಯ ಬಗ್ಗೆ ತಮಗಿರುವ ಆಳವಾದ ಅಧ್ಯಯನ, ಜ್ಞಾನವನ್ನು ತೆರೆದಿಟ್ಟರು.

    ಸೃಷ್ಟಿಯ ಜೊತೆ ಸದಾ ಸ್ಪಂದಿಸುತ್ತ ಜ್ಞಾನವನ್ನು ಬೆಳೆಸಿಕೊಂಡು ಸೃಜನಶೀಲತೆಯೊಂದಿಗೆ ಮನೋವಿಕಾಸದ ಹಾದಿಯೇ ಕಲೆ. ಮೊದಲು ಕ್ಯಾನ್ವಾಸಿನ ಮೇಲೆ ವಿವಿಧ ಬಣ್ಣಗಳನ್ನು ಹರಡಿ ನಂತರ, ನಿರಂತರ, ಅಂತ್ಯವಿಲ್ಲದ ಭಾವನೆಗಳನ್ನು ನೀಡುವ ನೀಲಿ Cobalt ಬಣ್ಣವನ್ನು ಹೆಚ್ಚಿನ ಭಾಗದಲ್ಲಿ ಹರಡಿದ್ದು ನಮ್ಮನ್ನು ವಿಶಾಲದೆಡೆಗೆ ಕರೆದೊಯ್ಯುವಂತೆ ಭಾಸವಾಗತ್ತಿತ್ತು. ಇಂತಹ ಚಿತ್ರಗಳೇ ಮನುಕುಲಕ್ಕೆ ಭಗವಂತನು ಕರುಣಿಸಿದ ಸಂಜೀವಿನಿ ಎಂಬಂತೆ ಗೋಚರವಾಗುತ್ತಿತ್ತು. ಲೌಕಿಕದ ಅನುಭವ ಮತ್ತು ಪಾರಮಾರ್ಥಿಕದಲ್ಲಿ ಅವರಿಗಿರುವ ಆಸಕ್ತಿ ಅವರ ಮಾತು ಮತ್ತು ಕಲೆಯಲ್ಲಿ ಪ್ರತಿಧ್ವನಿಸುತ್ತಿತ್ತು. ಕೇಳುಗರ ಪ್ರಶ್ನೆಗೆ ಸಮಂಜಸ ಉತ್ತರ ನೀಡುತ್ತಾ ಪ್ರಾತ್ಯಕ್ಷಿಕೆ ನೀಡಿದ್ದು ವಿಶೇಷವಾಗಿತ್ತು. 50 ವರ್ಷಗಳ ಅವರ ಕಲಾ ಅನುಭವ ಅವರನ್ನು ಒಬ್ಬ ದಾರ್ಶನಿಕರನ್ನಾಗಿಸಿತ್ತು. ಹಿರಿಯ ಕಲಾವಿದ ಶ್ರೀ ಕೃಷ್ಣ ಶೆಟ್ಟಿಯವರು ಉಪಸ್ಥಿತರಿದ್ದು ಅನೇಕ ಕಲಾವಿದರು ಕಲಾಭಿಮಾನಿಗಳು ಇದಕ್ಕೆ ಸಾಕ್ಷಿಯಾದರು. ವಿಶ್ವ ಕಲಾ ದಿನ ಸಾರ್ಥಕ್ಯದ ದಿನವಾಗಿತ್ತು.

     

    artist davangere drawing international painting worldartday
    Share. Facebook Twitter Pinterest LinkedIn Tumblr WhatsApp Email
    Previous Articleಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್, ಸರಪಾಡಿ ಘಟಕದ ವಾರ್ಷಿಕೋತ್ಸವ ಹಾಗೂ ಯಕ್ಷಗಾನ ಸಾಧಕರಿಗೆ ಸನ್ಮಾನ
    Next Article ಸಾಲಿಕೇರಿಯ ದಶಾವತಾರ ಯಕ್ಷಶಿಕ್ಷಣ ಕೇಂದ್ರ (ರಿ). ಆಯೋಜಿಸಿದ ಎರಡು ದಿನದ ಯಕ್ಷಗಾನ ಕಾರ್ಯಾಗಾರ | ಎಪ್ರಿಲ್ 22, 23
    roovari

    Add Comment Cancel Reply


    Related Posts

    ರಾಜೇಶ್ವರಿ ಕುಡುಪು ಇವರ ‘ಕಲಾಸಂಪದ’ ಪುಸ್ತಕ ಬಿಡುಗಡೆ

    May 17, 2025

    ಸಿಂಧನೂರು ಸತ್ಯಾ ಗಾರ್ಡನ್ ನಲ್ಲಿ 11ನೇ ‘ಮೇ ಸಾಹಿತ್ಯ ಮೇಳ’ | ಮೇ 17 ಮತ್ತು 18

    May 16, 2025

    ಕಯ್ಯಾರರ ಜನ್ಮದಿನ ಸಂಭ್ರಮದಲ್ಲಿ ಭಾಗವಹಿಸಲು ಆಸಕ್ತರಿಗೆ ಆಹ್ವಾನ

    May 16, 2025

    ಪರಿಚಯ ಲೇಖನ | ‘ಬೆಳೆಯುವ ಯಕ್ಷಸಿರಿ’ ಸಚಿನ್ ಶೆಟ್ಟಿ ನಾಗರಕೊಡಿಗೆ

    May 6, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.