Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ಟಾಗೋರ್ ಪಾರ್ಕಿನಲ್ಲಿ ಸೃಜನಾತ್ಮಕ ಕಲಾ ಪ್ರದರ್ಶನ | ಆಗಸ್ಟ್ 17

    August 16, 2025

    ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ‘ಉಮ್ಮಕ್ಕೆನ ನೆಂಪು’ | ಆಗಸ್ಟ್ 17

    August 16, 2025

    ಉಡುಪಿಯಲ್ಲಿ ದೇಶಭಕ್ತಿ ಗೀತೆ ಸಮೂಹ ಗಾಯನ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ

    August 16, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವೇಣೂರಿನ ವಿದ್ಯೋದಯ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಯಕ್ಷಗಾನ ತಾಳಮದ್ದಳೆ
    Yakshagana

    ವೇಣೂರಿನ ವಿದ್ಯೋದಯ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಯಕ್ಷಗಾನ ತಾಳಮದ್ದಳೆ

    October 24, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ವೇಣೂರು : ವೇಣೂರಿನ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಸಂಘದ ಸದಸ್ಯರಿಂದ ‘ಸುದರ್ಶನ ಚಕ್ರಗ್ರಹಣ’ ಪ್ರಸಂಗದ ಯಕ್ಷಗಾನ ತಾಳಮದ್ದಳೆಯು ದಿನಾಂಕ 19 ಅಕ್ಟೋಬರ್ 2024 ರಂದು ವೇಣೂರಿನ ವಿದ್ಯೋದಯ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ನಡೆಯಿತು.
    ಹಿಮ್ಮೇಳದಲ್ಲಿ ಭಾಗವತರಾಗಿ ಬಲಿಪ ಶಿವಶಂಕರ ಭಟ್, ಚೆಂಡೆ ಮದ್ದಳೆಗಳಲ್ಲಿ ಕೊಂಕಣಾಜೆ ಚಂದ್ರಶೇಖರ ಭಟ್ ಹಾಗೂ ಬೆಳಾಲು ಗಣೇಶ ಭಟ್, ಚಕ್ರತಾಳದಲ್ಲಿ ಇದೇ ಶಾಲೆಯ ನಾಲ್ಕನೇ ತರಗತಿಯ ವಿದ್ಯಾರ್ಥಿ ಸುಷೇಣ ಇವರು ಸಹಕರಿಸಿದರು. ಶಾಲಾ ವಿದ್ಯಾರ್ಥಿಗಳಾದ ಒಂಬತ್ತನೆಯ ತರಗತಿಯ ರಂಜನಿ ಹಾಗೂ ನಾಲ್ಕನೇ ತರಗತಿಯ ಸುಷೇಣರು ಆಸಕ್ತಿಯಿಂದ ಭಾಗವಹಿಸಿದ್ದು ವಿಶೇಷವಾಗಿತ್ತು.
    ಒಂಬತ್ತನೇ ತರಗತಿಯ ಕನ್ನಡ ಪಾಠದಲ್ಲಿ ಇರುವ ಈ ಭಾಗವನ್ನು ನಡೆಸಲು ಶಾಲಾ ಮುಖ್ಯ ಪ್ರಬಂಧಕರಾದ ಕೆ. ಶಿವರಾಮ ಹೆಗ್ಡೆಯವರು ಅವಕಾಶವನ್ನು ನೀಡಿದ್ದು, ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕಿ ಶ್ರೀಮತಿ ಶೀಲಾ ಕೆ. ಎಸ್ ಹೆಗ್ಡೆ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುಜಾತ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಖ್ಯಾತ ಯಕ್ಷಗಾನ ಭಾಗವತರಾಗಿದ್ದ ದಿ. ಬಲಿಪ ಪ್ರಸಾದ ಭಟ್ ಇವರ ಸ್ಮರಣೆಯನ್ನು ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು, ಪೋಷಕರು ಹಾಗೂ ಊರಿನ ಪ್ರಮುಖರು ನೆರೆದಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಲೇಖನ – ಪರಂಪರೆ ಮೀರದ, ಶುದ್ಧ ಹಾಸ್ಯ ಪ್ರಸ್ತುತಿ ನೀಡಬಲ್ಲ ಯಕ್ಷಗಾನ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ
    Next Article ಕ.ಸಾ.ಪ. ಪುತ್ತೂರು ಬಡಗನ್ನೂರು ‘ಗ್ರಾಮ ಸಾಹಿತ್ಯ ಸಂಭ್ರಮ’ ಸರಣಿ ಕಾರ್ಯಕ್ರಮ -17
    roovari

    Add Comment Cancel Reply


    Related Posts

    ಜವಾಬ್ ಆಶ್ರಯದಲ್ಲಿ ಯಕ್ಷಗಾನ ತಾಳಮದ್ದಳೆ

    August 14, 2025

    ಸಿರಿಬಾಗಿಲಿನಲ್ಲಿ ಭಜನೆ- ಹರಿಸಂಕೀರ್ತನೆ- ಗಮಕ– ತಾಳಮದ್ದಳೆ | ಆಗಸ್ಟ್ 15

    August 14, 2025

    ಗುಂಡ್ಮಿ-ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ‘ಬರ್ಬರೀಕ’ ಯಕ್ಷಗಾನ | ಆಗಸ್ಟ್ 17

    August 14, 2025

    ಶ್ರೀ ಮದವೂರ ವಿಘ್ನೇಶ ಕಲಾ ಸಂಘದ ತಾಳಮದ್ದಳೆ

    August 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.