Subscribe to Updates

    Get the latest creative news from FooBar about art, design and business.

    What's Hot

    ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಶ್ರೀಮತಿ ಜಲಜಾ ಶೇಖರ್ ಆಯ್ಕೆ

    January 13, 2026

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಹೂ ದಂಡಿ’

    January 13, 2026

    ‘ಶ್ರೀಮತಿ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜನವರಿ 25

    January 13, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ
    Yakshagana

    ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ

    September 6, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸಾಣೇಹಳ್ಳಿ : ಸಾಣೇಹಳ್ಳಿ ಎಸ್.ಎಸ್. ರಂಗಮಂದಿರದಲ್ಲಿ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳು 2024ರ ಅಭ್ಯಾಸ ಮಾಲಿಕೆಯ ‘ಅಭಿಮನ್ಯು ಕಾಳಗ’ ಯಕ್ಷಗಾನ ಪ್ರಸಂಗವನ್ನು ದಿನಾಂಕ 05 ಸೆಪ್ಟೆಂಬರ್ 2024ರಂದು ಪ್ರದರ್ಶಿಸಿದರು.

    ಈ ಸಂದರ್ಭದಲ್ಲಿ ಯಕ್ಷಗಾನ ವೀಕ್ಷಿಸಿ ಮಾತನಾಡಿದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸ್ವಾಮಿಗಳು “ನಮ್ಮ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳು ಸಾಕಷ್ಟು ಶ್ರಮವಹಿಸಿ ಪ್ರೇಕ್ಷಕರ ಮನಸ್ಸನ್ನು ಅರಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಭಿಮನ್ಯು ಕಾಳಗ ಯಕ್ಷಗಾನವನ್ನು ಗಮನಿಸುವಾಗ ಇವತ್ತಿನ ರಾಜಕೀಯ, ಧಾರ್ಮಿಕ, ಸಾಮಾಜಿಕ, ಸನ್ನಿವೇಶಗಳನ್ನು ಕಲ್ಪನೆ ಮಾಡಿಕೊಳ್ತಾ ಇದ್ದೆವು. ಹೇಗೆ ದುಷ್ಟಶಕ್ತಿಗಳು ಶಿಷ್ಟಶಕ್ತಿಗಳನ್ನು ದಮನ ಮಾಡುತ್ತಿದ್ದವು ಎನ್ನುವುದನ್ನು ನೋಡಿದೆವು. ಕೊನೆಗೆ ಸೋಗಲಾಡಿತನವನ್ನು ತೋರಿಸುವುದನ್ನು ನೋಡಿ ನಮಗನಿಸಿದ್ದು ಈ ಜಗತ್ತು ಇರುವುದು ಹೀಗೇ. ಕೌರವರು ಐದು ಜನ ಪಾಂಡವರಿಂದ ಸೋಲನ್ನು ಅನುಭವಿಸುತ್ತಾ ಕೊನೆಗೆ ತಂತ್ರ ಮಾಡಿದ್ದು, ಚಕ್ರವ್ಯೂಹವನ್ನು ರಚಿಸುವಂಥದ್ದು. ಚಕ್ರವ್ಯೂಹವನ್ನು ಬೇಧಿಸುವಂಥ ಶಕ್ತಿ ಇರುವುದು ಅರ್ಜುನನಿಗೆ, ಶ್ರೀಕೃಷ್ಣನಿಗೆ. ಆದರೆ ಅಭಿಮನ್ಯುನಿಗೆ ಚಕ್ರವ್ಯೂಹದೊಳಗೆ ಹೋಗುವುದು ಗೊತ್ತು ಆದರೆ ಹೊರಗೆ ಬರೋದು ಗೊತ್ತಿಲ್ಲ. ಆದರೆ ಆತನ ಶೌರ್ಯ, ಸಾಹಸ, ಧೈರ್ಯ ಮೆಚ್ಚುವಂಥದ್ದು. ಕೊನೆಗೆ ಕೌರವರೆಲ್ಲರೂ ಆತನಿಗೆ ಗೌರವವನ್ನು ಸಲ್ಲಿಸುವರು. ಬದುಕಿದಾಗ ಕೊಲ್ಲುಬೇಕು ಎನ್ನುವಂಥದ್ದು. ಕೊಂದಾಗ ಅಯ್ಯೋ ಕೊಂದುಬಿಟ್ಟೇವಲ್ಲಾ ಎಂದು ಪರಿತಾಪ ಪಡುವುದು. ಕೊಲ್ಲುವುದಕ್ಕಿಂತ ಮುಂಚೆ ಕೊಲ್ಲುವ ಕ್ರಿಯೆಗೆ ಇತಿಶ್ರೀ ಹಾಡಿದರೆ ಜಗತ್ತು ಎಷ್ಟು ಸುಂದರವಾಗಿರುವುದು ಎನ್ನುವ ಅರಿವು ಮೂಡುವುದು. ಆದರೆ ಹೇಳುವುದು ಸುಲಭ. ಆಚರಣೆಗೆ ತರುವುದು ಕಷ್ಟ” ಎಂದು ಹೇಳಿದರು.

    ಈ ಸಂದರ್ಭದಲ್ಲಿ ಶಿವಮೊಗ್ಗ ರಂಗಾಯಣದ ನಿರ್ದೇಶಕ ಪ್ರಸನ್ನ ಮಾತನಾಡಿದರು. ರಂಗಶಾಲೆಯ ಪ್ರಾಚಾರ್ಯರು, ವಿದ್ಯಾರ್ಥಿಗಳು, ಶಿವಸಂಚಾರದ ಕಲಾವಿದರು, ಉಭಯ ಶಾಲಾ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಗ್ರಾಮಸ್ಥರು ಯಕ್ಷಗಾನ ಪ್ರಸಂಗವನ್ನು ವೀಕ್ಷಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleದಾಮೋದರ ನಿಸರ್ಗರವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ
    Next Article ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮದಲ್ಲಿ ನೃತ್ಯನಿಕೇತನದ ಕಲಾವಿದರ ನೃತ್ಯ ಪ್ರದರ್ಶನ | ಸೆಪ್ಟೆಂಬರ್ 9
    roovari

    Comments are closed.

    Related Posts

    ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ‘ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ’ದ ಸಮಾರೋಪ ಸಮಾರಂಭ

    January 12, 2026

    ಉಳಿಯ ಮನೆಯ ಸುಧಾ ಮಂದಿರದಲ್ಲಿ ವಾರದ ಕೂಟ ತಾಳಮದ್ದಳೆ

    January 12, 2026

    ಸಹ್ಯಾದ್ರಿ ಕಾಲೇಜಿನಲ್ಲಿ ಉದ್ಘಾಟನೆಗೊಂಡ ‘ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ 2025-26’

    January 12, 2026

    ಶ್ರೀ ಆಂಜನೇಯ ಮಂತ್ರಾಲಯದಲ್ಲಿ ಸಂಘದ ಪಾಕ್ಷಿಕ ತಾಳಮದ್ದಳೆ

    January 12, 2026

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.