Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ
    Yakshagana

    ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ

    September 6, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸಾಣೇಹಳ್ಳಿ : ಸಾಣೇಹಳ್ಳಿ ಎಸ್.ಎಸ್. ರಂಗಮಂದಿರದಲ್ಲಿ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳು 2024ರ ಅಭ್ಯಾಸ ಮಾಲಿಕೆಯ ‘ಅಭಿಮನ್ಯು ಕಾಳಗ’ ಯಕ್ಷಗಾನ ಪ್ರಸಂಗವನ್ನು ದಿನಾಂಕ 05 ಸೆಪ್ಟೆಂಬರ್ 2024ರಂದು ಪ್ರದರ್ಶಿಸಿದರು.

    ಈ ಸಂದರ್ಭದಲ್ಲಿ ಯಕ್ಷಗಾನ ವೀಕ್ಷಿಸಿ ಮಾತನಾಡಿದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸ್ವಾಮಿಗಳು “ನಮ್ಮ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳು ಸಾಕಷ್ಟು ಶ್ರಮವಹಿಸಿ ಪ್ರೇಕ್ಷಕರ ಮನಸ್ಸನ್ನು ಅರಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಭಿಮನ್ಯು ಕಾಳಗ ಯಕ್ಷಗಾನವನ್ನು ಗಮನಿಸುವಾಗ ಇವತ್ತಿನ ರಾಜಕೀಯ, ಧಾರ್ಮಿಕ, ಸಾಮಾಜಿಕ, ಸನ್ನಿವೇಶಗಳನ್ನು ಕಲ್ಪನೆ ಮಾಡಿಕೊಳ್ತಾ ಇದ್ದೆವು. ಹೇಗೆ ದುಷ್ಟಶಕ್ತಿಗಳು ಶಿಷ್ಟಶಕ್ತಿಗಳನ್ನು ದಮನ ಮಾಡುತ್ತಿದ್ದವು ಎನ್ನುವುದನ್ನು ನೋಡಿದೆವು. ಕೊನೆಗೆ ಸೋಗಲಾಡಿತನವನ್ನು ತೋರಿಸುವುದನ್ನು ನೋಡಿ ನಮಗನಿಸಿದ್ದು ಈ ಜಗತ್ತು ಇರುವುದು ಹೀಗೇ. ಕೌರವರು ಐದು ಜನ ಪಾಂಡವರಿಂದ ಸೋಲನ್ನು ಅನುಭವಿಸುತ್ತಾ ಕೊನೆಗೆ ತಂತ್ರ ಮಾಡಿದ್ದು, ಚಕ್ರವ್ಯೂಹವನ್ನು ರಚಿಸುವಂಥದ್ದು. ಚಕ್ರವ್ಯೂಹವನ್ನು ಬೇಧಿಸುವಂಥ ಶಕ್ತಿ ಇರುವುದು ಅರ್ಜುನನಿಗೆ, ಶ್ರೀಕೃಷ್ಣನಿಗೆ. ಆದರೆ ಅಭಿಮನ್ಯುನಿಗೆ ಚಕ್ರವ್ಯೂಹದೊಳಗೆ ಹೋಗುವುದು ಗೊತ್ತು ಆದರೆ ಹೊರಗೆ ಬರೋದು ಗೊತ್ತಿಲ್ಲ. ಆದರೆ ಆತನ ಶೌರ್ಯ, ಸಾಹಸ, ಧೈರ್ಯ ಮೆಚ್ಚುವಂಥದ್ದು. ಕೊನೆಗೆ ಕೌರವರೆಲ್ಲರೂ ಆತನಿಗೆ ಗೌರವವನ್ನು ಸಲ್ಲಿಸುವರು. ಬದುಕಿದಾಗ ಕೊಲ್ಲುಬೇಕು ಎನ್ನುವಂಥದ್ದು. ಕೊಂದಾಗ ಅಯ್ಯೋ ಕೊಂದುಬಿಟ್ಟೇವಲ್ಲಾ ಎಂದು ಪರಿತಾಪ ಪಡುವುದು. ಕೊಲ್ಲುವುದಕ್ಕಿಂತ ಮುಂಚೆ ಕೊಲ್ಲುವ ಕ್ರಿಯೆಗೆ ಇತಿಶ್ರೀ ಹಾಡಿದರೆ ಜಗತ್ತು ಎಷ್ಟು ಸುಂದರವಾಗಿರುವುದು ಎನ್ನುವ ಅರಿವು ಮೂಡುವುದು. ಆದರೆ ಹೇಳುವುದು ಸುಲಭ. ಆಚರಣೆಗೆ ತರುವುದು ಕಷ್ಟ” ಎಂದು ಹೇಳಿದರು.

    ಈ ಸಂದರ್ಭದಲ್ಲಿ ಶಿವಮೊಗ್ಗ ರಂಗಾಯಣದ ನಿರ್ದೇಶಕ ಪ್ರಸನ್ನ ಮಾತನಾಡಿದರು. ರಂಗಶಾಲೆಯ ಪ್ರಾಚಾರ್ಯರು, ವಿದ್ಯಾರ್ಥಿಗಳು, ಶಿವಸಂಚಾರದ ಕಲಾವಿದರು, ಉಭಯ ಶಾಲಾ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಗ್ರಾಮಸ್ಥರು ಯಕ್ಷಗಾನ ಪ್ರಸಂಗವನ್ನು ವೀಕ್ಷಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleದಾಮೋದರ ನಿಸರ್ಗರವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ
    Next Article ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮದಲ್ಲಿ ನೃತ್ಯನಿಕೇತನದ ಕಲಾವಿದರ ನೃತ್ಯ ಪ್ರದರ್ಶನ | ಸೆಪ್ಟೆಂಬರ್ 9
    roovari

    Comments are closed.

    Related Posts

    ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರದಲ್ಲಿ ತಾಳಮದ್ದಳೆ

    May 7, 2025

    ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಪಾರ್ತಿಸುಬ್ಬ ವಿರಚಿತ ‘ಪಂಚವಟಿ’ ಯಕ್ಷಗಾನ ತಾಳಮದ್ದಳೆ

    May 7, 2025

    ಕನ್ನರ್ಪಾಡಿಯಲ್ಲಿ ನೂತನ ‘ಶ್ರೀ ಜಯದುರ್ಗಾ ಪರಮೇಶ್ವರಿ ಯಕ್ಷಗಾನ ಕಲಾಮಂಡಳಿ’ ಉದ್ಘಾಟನೆ

    May 6, 2025

    ಪರಿಚಯ ಲೇಖನ | ‘ಬೆಳೆಯುವ ಯಕ್ಷಸಿರಿ’ ಸಚಿನ್ ಶೆಟ್ಟಿ ನಾಗರಕೊಡಿಗೆ

    May 6, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.