Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪರಿಚಯ ಲೇಖನ | ‘ಪ್ರತಿಭಾ ಖನಿ’ – ಸತ್ಯಜಿತ್ ಹೆಚ್. ರಾವ್
    Article

    ಪರಿಚಯ ಲೇಖನ | ‘ಪ್ರತಿಭಾ ಖನಿ’ – ಸತ್ಯಜಿತ್ ಹೆಚ್. ರಾವ್

    February 6, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕರಾವಳಿಯ ಪ್ರಸಿದ್ಧ ಸ್ಥಾನವನ್ನು ಪಡೆದ ಕಲೆ “ಯಕ್ಷಗಾನ”. ಕರ್ನಾಟಕದ ಗಂಡು ಕಲೆಯಾಗಿರುವ ಯಕ್ಷಗಾನ ಪಾರ್ತಿ ಸುಬ್ಬರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜೃಂಭಿಸುತ್ತಿದೆ. ಇಂತಹ ಕಲೆಯಲ್ಲಿ ರಾರಾಜಿಸುತ್ತಿರುವ ಕಲಾವಿದ ಸತ್ಯಜಿತ್ ಹೆಚ್ ರಾವ್.

    27.03.2001ರಂದು ಹರಿಪ್ರಸಾದ್ ರಾವ್ ವಿ ಹಾಗೂ ಹೇಮಾ ಹೆಚ್ ರಾವ್ ಇವರ ಮಗನಾಗಿ ಜನನ. ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನಲ್ಲಿ ಪೂರ್ಣಗೊಳಿಸಿ, ಶ್ರೀ ಸತ್ಯಸಾಯಿ ಸೇವಾ ಲೋಕ ಅಳಿಕೆ (ಹೈಸೂಲ್ ಮತ್ತು ಪಿ.ಯು.ಸಿ) ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಹಾಗೂ ಉನ್ನತ ಶಿಕ್ಷಣ ಎಮ್.ಬಿ.ಎ ಪದವಿಯನ್ನು ಪಡೆದಿರುತ್ತಾರೆ.

    ಯಕ್ಷಗಾನವು ಇವರ ಮನೆಯಲ್ಲಿ ಹಿರಿಯರಿಂದ ರಕ್ತಗತವಾಗಿ ಬಂದ ಕಲೆ. ಅಜ್ಜ, ಮುತ್ತಜ್ಜ, ತಂದೆ ಮತ್ತು ಅಣ್ಣನವರೆಲ್ಲರೂ ಯಕ್ಷಗಾನದ ಒಂದೊಂದು ಕ್ಷೇತ್ರದಲ್ಲಿ ತೊಡಗಿಸಿಕೊಂಡವರು. ಬಾಲ್ಯದಲ್ಲಿ ಮೈಸೂರಿನ ರಮೇಶ್ ಧಾನೂರ್ ಇವರಿಂದ ತಬಲಾ ವಾದನದ ಶಿಕ್ಷಣವನ್ನು ಪಡೆದು ಬಳಿಕ ಶ್ರೀ ಸತ್ಯಸಾಯಿ ಲೋಕ ಸೇವಾ ಕೇಂದ್ರದಲ್ಲಿ ನಿತ್ಯ ಭಜನೆಗೆ ತಬಲಾ ವಾದನದ ಅವಕಾಶ ನಿತ್ಯವೂ ಲಭಿಸಿತು. ಅಲ್ಲಿಯೇ ಇದ್ದ ಯಕ್ಷಗಾನದ ಮಕ್ಕಳ ತಂಡದಲ್ಲಿ ಅಭ್ಯಾಸಕ್ಕಾಗಿ ಮದ್ದಳೆ ನುಡಿಸುವ ಅವಕಾಶವನ್ನು ಯಕ್ಷಗಾನದ ಭಾಗವತರಾದ ಶ್ರೀ ಗಿರೀಶ್ ರೈ ಕಕ್ಕೆಪದವು ಹಾಗೂ ಪ್ರಸಿದ್ಧ ವೇಷಧಾರಿ ಶ್ರೀ ಉಮೇಶ್ ಶೆಟ್ಟಿ ಉಬರಡ್ಕರಿಂದ ಲಭಿಸಿತು. ಜೊತೆಗೆ ಯಕ್ಷಗಾನದ ನಾಟ್ಯಾಭ್ಯಾಸವನ್ನು ಕಲಿಯುವ ಅವಕಾಶ ಸಿಕ್ಕಿತು. ಹೀಗೆ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು. ಶ್ರೀಯುತ ಮೋಹನ್ ಬೈಪಾಡಿತ್ತಾಯರು ಉಜಿರೆ ಚೆಂಡೆ ಮದ್ದಲೆ ಗುರುಗಳು.

    ಕೃಷ್ಣ, ಸುಧಾಮ ಮತ್ತು ಮಾನಿಷಾದ ನೆಚ್ಚಿನ ಪ್ರಸಂಗಗಳು.
    ಯಕ್ಷ ಕಣ್ಮಣಿ ಬಲಿಪ ಪ್ರಸಾದ್ ಭಟ್ ಮತ್ತು ರಂಗದಲ್ಲಿ ಇರುವ ಎಲ್ಲರೂ ನೆಚ್ಚಿನ ಭಾಗವತರು.
    ಗುರುಗಳು ಮತ್ತು ಈಗಿನ ಹೆಚ್ಚಿನ ಕಲಾವಿದರು ಇವರ ನೆಚ್ಚಿನ ಚೆಂಡೆ ಹಾಗೂ ಮದ್ದಲೆ ವಾದಕರು.
    ಸತ್ಯಜಿತ್ ಅವರಿಗೆ ರಂಗದಲ್ಲಿ ಬಣ್ಣದ ವೇಷ ಮತ್ತು ಹಾಸ್ಯ ವೇಷವನ್ನು ಕೂಡ ಮಾಡಿದ ಅನುಭವವಿದೆ.

    ಯಕ್ಷಗಾನದ ಇಂದಿನ ಸ್ಥಿತಿ ಗತಿ:
    ಬಹು ಬೇಡಿಕೆಯಿರುವ ಕಲೆ ಯಕ್ಷಗಾನ. ಆದರೆ ಆರ್ಥಿಕವಾಗಿ ಜೀವನದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಕಷ್ಟಸಾಧ್ಯ.

    ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:
    ಇವತ್ತಿನ ಪ್ರೇಕ್ಷಕರ ಹೊಸತನಗಳ  ನಿರೀಕ್ಷೆಯಂತೆ ಕರ್ತವ್ಯ ನಿರ್ವಹಣೆ ಅಗತ್ಯ. ಆದರೆ ಜೊತೆಗೆ ಕಲೆಯ ಪರಂಪರೆಯನ್ನು ಉಳಿಸುವುದು ಕಲಾವಿದರೆಲ್ಲರ ಆದ್ಯ ಕರ್ತವ್ಯ.

    ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:
    ಪರಂಪರೆಯನ್ನು ಉಳಿಸಿಕೊಂಡು ಹೊಸತನವನ್ನು ನೀಡಿ ಯಕ್ಷಗಾನವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳುತ್ತಾರೆ ಸತ್ಯಜಿತ್.

    ಮೇಳಗಳ ಹಿಮ್ಮೇಳ ಕಲಾವಿದರ ರಜೆಗೆ ಹೋದಾಗ ಹೆಚ್ಚಿನ ಎಲ್ಲಾ ಮೇಳಗಳಲ್ಲಿ ಸೇವಾರೂಪದ ಕರ್ತವ್ಯ ನಿರ್ವಹಿಸಿರುತ್ತಾರೆ. ಹವ್ಯಾಸಿ ಕಲಾವಿದರು, ಸಂಘ ಸಂಸ್ಥೆಗಳ ಕಲಾವಿದರು,  ಶಾಲೆ – ಕಾಲೇಜುಗಳ ಮಕ್ಕಳ ತಂಡಗಳಲ್ಲಿ ಮತ್ತು ಮಹಿಳಾ ಕಲಾವಿದರ ಆಟ ಕೂಟಗಳಲ್ಲಿ ಕರ್ತವ್ಯ ನಿರ್ವಹಿಸಿ ಯಕ್ಷರಂಗದಲ್ಲಿ ಒಟ್ಟು ಸುಮಾರು 9 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

    ಇಂಟರ್ ಕಾಲೇಜು ಮಟ್ಟದ ಯಕ್ಷಗಾನ ಸ್ಪರ್ಧೆಯಲ್ಲಿ ಹಾಸ್ಯ ವೇಷಕ್ಕೆ ಎರಡು ಪ್ರಥಮ ಮತ್ತು ಒಂದು ದ್ವಿತೀಯ ಬಹುಮಾನ, ಕಾಲೇಜು ಮಟ್ಟದಲ್ಲಿ ಅನೇಕ ಸನ್ಮಾನಗಳು, ಭಾರತ ಸಾಂಸ್ಕತಿಕ ಕಲಾ ಕೇಂದ್ರದಿಂದ ಸನ್ಮಾನ, ವಿವೇಕಾನಂದ ಚಾರಿಟೇಬಲ್ ಟ್ರಸ್ಟ್ (ರಿ) ರಾಯಿ ಕಲಾವಿದ ಸನ್ಮಾನ.

    ಸಂಗೀತ, ಭಜನೆ,  ಹಾರ್ಮೋನಿಯಮ್, ತಬಲಾ, ಕೀಬೋರ್ಡ್, ನಾಟಕದ ಹಿನ್ನೆಲೆ ಗಾಯನ‌ (ಮ್ಯೂಸಿಕ್), ಚಿತ್ರಕಲೆ ಮುಂತಾದವು ಇವರ ಹವ್ಯಾಸಗಳು.

    ತಂದೆ, ತಾಯಿ, ಅಣ್ಣನ ಪ್ರೋತ್ಸಾಹ ಹಾಗೂ ಪ್ರೇರಣೆ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಸತ್ಯಜಿತ್ ಹೆಚ್ ರಾವ್.

    ಶ್ರವಣ್ ಕಾರಂತ್ ಕೆ.,
    ಶಕ್ತಿನಗರ ಮಂಗಳೂರು.

    artist introduction sathyajit shravankaranth talented yakshagana
    Share. Facebook Twitter Pinterest LinkedIn Tumblr WhatsApp Email
    Previous Articleಮಲ್ಲೇಶ್ವರದ ಸೇವಾ ಸದನದಲ್ಲಿ ‘ಸಡನ್ನಾಗ್ ಸತ್ಹೋದ್ರೆ’ ನಾಟಕ ಪ್ರದರ್ಶನ | ಫೆಬ್ರವರಿ 08
    Next Article ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಯಶಸ್ವೀ ಕಲಾವೃಂದದ ‘ಸಿನ್ಸ್ 1999 ಶ್ವೇತಯಾನ-108’ ಕಾರ್ಯಕ್ರಮ | ಫೆಬ್ರವರಿ 08
    roovari

    Add Comment Cancel Reply


    Related Posts

    ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರದಲ್ಲಿ ತಾಳಮದ್ದಳೆ

    May 7, 2025

    ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಪಾರ್ತಿಸುಬ್ಬ ವಿರಚಿತ ‘ಪಂಚವಟಿ’ ಯಕ್ಷಗಾನ ತಾಳಮದ್ದಳೆ

    May 7, 2025

    ಕನ್ನರ್ಪಾಡಿಯಲ್ಲಿ ನೂತನ ‘ಶ್ರೀ ಜಯದುರ್ಗಾ ಪರಮೇಶ್ವರಿ ಯಕ್ಷಗಾನ ಕಲಾಮಂಡಳಿ’ ಉದ್ಘಾಟನೆ

    May 6, 2025

    ಪರಿಚಯ ಲೇಖನ | ‘ಬೆಳೆಯುವ ಯಕ್ಷಸಿರಿ’ ಸಚಿನ್ ಶೆಟ್ಟಿ ನಾಗರಕೊಡಿಗೆ

    May 6, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.