Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ರಾಮಕೃಷ್ಣ ಮಠದಲ್ಲಿ ‘ಯುವ ಸಂಗೀತೋತ್ಸವ 2025’ | ಮೇ 25

    May 23, 2025

    ‘ಮಲೆಯಾಳದ ಆಧುನಿಕ ಸಣ್ಣ ಕಥೆಗಳು’ ಅನುವಾದಿತ ಕೃತಿ ಲೋಕಾರ್ಪಣೆ

    May 23, 2025

    ಬೆಂಗಳೂರಿನ ರಂಗಶಂಕರದಲ್ಲಿ ‘ಶಿವೋಹಂ’ ನಾಟಕ ಪ್ರದರ್ಶನ | ಮೇ 31

    May 23, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೈಲಹೊಂಗಲದಲ್ಲಿ ‘ರಂಗ ರಸಗ್ರಾಹಿ’ ಶಿಬಿರ
    Camp

    ಬೈಲಹೊಂಗಲದಲ್ಲಿ ‘ರಂಗ ರಸಗ್ರಾಹಿ’ ಶಿಬಿರ

    July 12, 2023Updated:August 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೈಲಹೊಂಗಲ: ರಂಗ ಚಿನ್ನಾರಿ ಕಾಸರಗೋಡು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರು ಅಕ್ಕಮಹಾದೇವಿ ವಿಮೆನ್ಸ್ ಆಂಡ್ ಕಾಮರ್ಸ್ ಪದವಿ ಕಾಲೇಜು ಸಹಕಾರದೊಂದಿಗೆ ಬೈಲಹೊಂಗಲದಲ್ಲಿ ಏರ್ಪಡಿಸಿದ ‘ರಂಗ ರಸಗ್ರಾಹಿ’ ಶಿಬಿರವು ದಿನಾಂಕ 08-07-2023 ಹಾಗೂ 09-07-2023 ರಂದು ನಡೆಯಿತು.
    ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ಬೇವಿನಕೊಪ್ಪದ ಆನಂದಾಶ್ರಮದ ಶ್ರೀ ಶ್ರೀ ವಿಜಯಾನಂದ ಸ್ವಾಮೀಜಿ “ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಒರೆಗೆ ಹಚ್ಚಿ ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಕೆಲಸವನ್ನು ರಂಗ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಮಾಡಿದ್ದಾರೆ. ಗಡಿನಾಡು ಕಾಸರಗೋಡಿನಿಂದ ‘ರಂಗ ಚಿನ್ನಾರಿ’ ತಂಡದ ನೇತೃತ್ವದಲ್ಲಿ ಬೆಳಗಾಂನ ಗಡಿಯಲ್ಲಿರುವ ಬೈಲಹೊಂಗಲದ ವಿದ್ಯಾರ್ಥಿಗಳಿಗೆ ‘ರಂಗ ರಸಗ್ರಾಹಿ’ ಶಿಬಿರವನ್ನು ಮಾಡುವ ಮೂಲಕ ಹೊಸ ಸಾಹಸದೊಂದಿಗೆ ರಂಗಭಾಷೆಯನ್ನು ಬರೆದಿದ್ದಾರೆ. ರಂಗಭೂಮಿ ಅನ್ನುವುದು ಜಾತಿ, ಮತ ಮತ್ತು ಧರ್ಮವನ್ನು ಮೀರಿದ ವೇದಿಕೆ. ಅಲ್ಲಿ ಸಿಗುವ ಅನುಭವ ಒಳ್ಳೆಯ ವ್ಯಕ್ತಿಯಾಗಿ ರೂಪುಗೊಳ್ಳಲು ಸಹಕಾರಿಯಾಗುತ್ತದೆ. ಪೂರ್ವಾಶ್ರಮದಲ್ಲಿ ದೇಶಪ್ರೇಮಿ ಎಂಬ ನಾಟಕವನ್ನು ರಚಿಸಿ ನಿರ್ದೇಶಿಸಿದ ಮೂಲತಃ ಗಡಿಪ್ರದೇಶವಾದ ಮಂಜೇಶ್ವರದ ನಿವಾಸಿಯಾಗಿದ್ದ ನಾನು ಕಾಸರಗೋಡು ಚಿನ್ನಾ ಅವರ ಬೆಳವಣಿಗೆಯನ್ನು ಕಂಡು ಸ್ವತಃ ಅವರ ಅಭಿಮಾನಿಯಾಗಿದ್ದೇನೆ.” ಎಂದರು.
    ಸುಮಾರು 175 ವಿದ್ಯಾರ್ಥಿನಿಯರು ಈ ಶಿಬಿರದಲ್ಲಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ಗಣಾದಾರಿಯವರು ಮಾತನಾಡಿ “ಗ್ರಾಮೀಣ ಪ್ರದೇಶದ ಮಕ್ಕಳಿಗೆ ಈ ರೀತಿಯ ಅನುಭವ ಹೊಸತು. ನಮ್ಮ ಕಾಲೇಜಿನ ನೇತೃತ್ವದಲ್ಲಿ ಮತ್ತಷ್ಟು ರಂಗಭೂಮಿ ಹಾಗೂ ಸಾಹಿತ್ಯಿಕ ಕೆಲಸಗಳನ್ನು ಮಾಡುತ್ತೇವೆ” ಎಂದರು.
    ರಂಗನಟ ಮತ್ತು ನಿರ್ದೇಶಕ ಕಾಸರಗೋಡು ಚಿನ್ನಾಅವರು ಮಾತನಾಡಿ “ರಂಗಭೂಮಿ ಅನ್ನೋದು ನನ್ನ ಪ್ರೀತಿಯ ಕ್ಷೇತ್ರ ಮತ್ತು ನನ್ನನ್ನು ಈ ಮಟ್ಟಕ್ಕೆ ಬೆಳೆಸಿರೋ ಕ್ಷೇತ್ರ. ನಾನು ಕಲಿತ ವಿದ್ಯೆಯನ್ನು ಮುಂದಿನ ಜನಾಂಗಕ್ಕೆ ಹಸ್ತಾಂತರಿಸುವ ಕೆಲಸವನ್ನು ಬಹಳ ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ.” ಎನ್ನುತ್ತಾ ‘ರಂಗ ಚಿನ್ನಾರಿ’ ಸಂಸ್ಥೆಯು ಕಾಸರಗೋಡಿನ 3000 ಮಕ್ಕಳಿಗೆ ‘ರಂಗ ಸಂಸ್ಕೃತಿ’ ಕಾರ್ಯಕ್ರಮವನ್ನು ಏರ್ಪಡಿಸಿದ ಕುರಿತು ಹೇಳಿದರು.
    ಮೂಕಾಭಿನಯ, ಮುಖವಾಡ ತಯಾರಿಕೆ, ಹಾಡುಗಳು, ಪ್ರಸಾಧನ, ಸೇರಿದಂತೆ ನಟನಾ ಶಿಬಿರವನ್ನು ನಡೆಸಲಾಯಿತು. ಚಲನಚಿತ್ರನಟ ಮತ್ತು ನಿರ್ದೇಶಕ ಪ್ರಕಾಶ್ ಬೋಸ್ನವರ್ಕರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ರಂಗನಟ ಮತ್ತು ನಿರ್ದೇಶಕ ಅರುಣ್ ಪ್ರಕಾಶ್ ನಾಯಕ್, ಕಾಶಿನಾಥ್ ಬಿರಾದಾರ್ ಎಂ.ಎಚ್.ಪೇಂಟೇಲ್ ವೇದಿಕೆಯಲ್ಲಿದ್ದರು.
    ವಿದ್ಯಾರ್ಥಿನಿ ಅನುರಾಧ ಯಮನಪ್ಪನವರ್ ಸ್ವಾಗತಿಸಿ ನಿರ್ವಹಿಸಿದರು. ರಂಗ ನಟ, ನಿರ್ದೇಶಕ ಮತ್ತು ಶಿಬಿರದ ನಿರ್ದೇಶಕರಾದ ಕಾಸರಗೋಡು ಚಿನ್ನಾ ಅವರನ್ನು ಕಾಲೇಜಿನ ಪರವಾಗಿ ಶಾಲು ಹೊದಿಸಿ, ಬಸವಣ್ಣನವರ ಭಾವಚಿತ್ರವನ್ನು ನೀಡಿ ಸನ್ಮಾನಿಸಲಾಯಿತು.
    ಶಿಬಿರಾರ್ಥಿಗಳಾದ ಕುಮಾರಿ ನಿಶಾ ಮುಕುಂದ ಮತ್ತು ನಂದಿತಾ ಅವರು ರಂಗಾನುಭವವನ್ನು ಹಂಚಿಕೊಂಡರು.

    Share. Facebook Twitter Pinterest LinkedIn Tumblr WhatsApp Email
    Previous Articleವಿಪ್ರ ವೇದಿಕೆಯಿಂದ ಉಪನ್ಯಾಸ ಕಾರ್ಯಕ್ರಮ
    Next Article ಕಾಂಗರೂ ನಾಡಿನಲ್ಲಿ ಮೆಲ್ಬೋರ್ನಿನ ‘ಬಸವ ಸಮಿತಿ’ಯಿಂದ ವಿಶೇಷ ಸಂವಾದ
    roovari

    Add Comment Cancel Reply


    Related Posts

    ಬೆಂಗಳೂರಿನ ರಂಗಶಂಕರದಲ್ಲಿ ‘ಶಿವೋಹಂ’ ನಾಟಕ ಪ್ರದರ್ಶನ | ಮೇ 31

    May 23, 2025

    ಸಮಾರೋಪಗೊಂಡ ‘ಚಿಣ್ಣರ ಪ್ರತಿಭಾ ಕಲರವ’ ಶಿಬಿರ

    May 22, 2025

    ಕರ್ನಾಟಕ ನಾಟಕ ಅಕಾಡೆಮಿಯಿಂದ ತಿಂಗಳ ನಾಟಕ ಸಂಭ್ರಮ

    May 21, 2025

    ಹಾಸನದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಮುದಾಯ ಭವನದಲ್ಲಿ ‘ಚಿಣ್ಣರ ಪ್ರತಿಭಾ ಕಲರವ’ ಶಿಬಿರ

    May 21, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.