Author: roovari

ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್  ಇದರ ವತಿಯಿಂದ ‘ಸೇಡಿಯಾಪು ಪ್ರಶಸ್ತಿ’ ಹಾಗೂ ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವು ದಿನಾಂಕ 16 ಆಗಸ್ಟ್ 2025 ಶನಿವಾರದಂದು ಬೆಳಿಗ್ಗೆ 10-00 ಗಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಆವರಣದಲ್ಲಿರುವ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಈ ವರ್ಷದ ಸೇಡಿಯಾಪು ಪ್ರಶಸ್ತಿಯನ್ನು ಸಂಸ್ಕೃತ ವ್ಯಾಕರಣಶಾಸ್ತ್ರದ ಹಿರಿಯ ವಿದ್ವಾಂಸರಾದ ಡಾ. ಎಚ್.ವಿ. ನಾಗರಾಜ ರಾವ್ ಇವರಿಗೆ ಪ್ರದಾನ ಮಾಡಲಾಗುವುದು. 2025ರ ಸಾಲಿನ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಯನ್ನು ಖ್ಯಾತ ಲೇಖಕಿ ಡಾ. ಪ್ರಜ್ಞಾ ಮತ್ತಿಹಳ್ಳಿ ಇವರ ‘ಬೆಳದಿಂಗಳ ಸೋನೆಮಳೆ’ ಕವನಸಂಕಲನಕ್ಕೆ ನೀಡಲಾಗುತ್ತದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಜಿ.ಎಂ. ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ಎಸ್. ನಾಯ್ಕ್ ಇವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಹಿರಿಯ ವಿದ್ವಾಂಸರಾದ ಡಾ. ಪಾದೇಕಲ್ಲು ವಿಷ್ಣು ಭಟ್ಟ, ಸೇಡಿಯಾಪು ಪ್ರಶಸ್ತಿ ಸಮಿತಿಯ ಪ್ರಾಯೋಜಕರಾದ ಡಾ. ಎಸ್.ಜೆ ಭಟ್ ಉಪಸ್ಥಿತರಿರುವರು. ಅಕಾಡೆಮಿ…

Read More

ಪುತ್ತೂರು : ಶಿವಳ್ಳಿ ಸಂಪದ ಪುತ್ತೂರು (ರಿ.) ಇದರ ಬೊಳುವಾರು ವಲಯದ ನೇತೃತ್ವದಲ್ಲಿ ‘ಶ್ರೀಮದ್ಭಾಗವತ ಸಪ್ತಾಹ’ ಕಾರ್ಯಕ್ರಮವನ್ನು ದಿನಾಂಕ 16 ಆಗಸ್ಟ್ 2025ರಿಂದ 22 ಆಗಸ್ಟ್ 2025ರವೆರೆಗೆ ಕೆಮ್ಮಾಯಿ ಶ್ರೀ ವಿಷ್ಣು ಮಂಟಪದಲ್ಲಿ ಆಯೋಜಿಸಲಾಗಿದೆ. ಮೈಸೂರಿನ ಡಾ. ಬೆ.ನಾ. ವಿಜಯೀಂದ್ರ ಆಚಾರ್ಯ ಇವರು ಭಾಗವತ ಪ್ರವಚನ ನೀಡಲಿದ್ದಾರೆ. ದಿನಾಂಕ 16 ಆಗಸ್ಟ್ 2025ರಂದು ಸಂಜೆ 4-30 ಗಂಟೆಗೆ ಜಿ.ಎಲ್. ಬಲರಾಮ ಆಚಾರ್ಯ ಇವರು ದೀಪ ಪ್ರಜ್ವಲನೆ ಮಾಡಿ ಈ ಸಪ್ತಾಹವನ್ನು ಉದ್ಘಾಟಿಸಲಿದ್ದು, ವಲಯ ಅಧ್ಯಕ್ಷರಾದ ಗಣೇಶ್ ಕೆದಿಲಾಯ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ದಿನಾಂಕ 22 ಆಗಸ್ಟ್ 2025ರಂದು ಸಮಾರೋಪ ಸಮಾರಂಭ ನಡೆಯಲಿದೆ.

Read More

“ಪ್ರಪಂಚದೊಂದಿಗೆ ಸ್ಪರ್ಧಿಸು, ಆದರೆ ಓಡಿ ಸುಸ್ತಾಗಬೇಡ!” – ಈ ಮಾತು ನನ್ನನ್ನು ಆಕರ್ಷಿಸಿತು. “ಕೇವಲ ಒಂದು ಹೆಜ್ಜೆ, ‘ಜಾಯ್ ಅಂಡ್ ಎಂಜಾಯ್’ಗೆ ಹಾಕಿದರೆ, ಮತ್ತೊಂದು ಹೆಜ್ಜೆ ಎಲ್ಲಿಯೂ ಹಾಕಬೇಕಾಗಿಲ್ಲ” – ನಾನು ಮತ್ತು ನನ್ನ ಪತ್ನಿ ಹೇಳಿದಾಗ, ನನ್ನ ಭಾವಮೈದುನ “ಇದೇನು ಜೈಲಾ?” ಅಂದ. ನಾನು ಹಿಂದೆ ಸರಿಯಲಿಲ್ಲ, “ಅದಕ್ಕಿಂತ ಹೆಚ್ಚೇ” ಅಂದೆ. ‘ಜಾಯ್ ಅಂಡ್ ಎಂಜಾಯ್’ ಎಂಬ ಪ್ರತಿಷ್ಠಿತ ವೆಂಚರ್‌ನಲ್ಲಿ ನಾವು ಮನೆ ಖರೀದಿಸಿದೆವು. ನಾವು ಪ್ರವೇಶಿಸುವ ಮೊದಲೇ ಅದರ ಬೆಲೆ ತುಂಬಾ ಹೆಚ್ಚಾಗಿತ್ತು. ಲಾಭ ತೋರಿಸಿ, ಮಾರಾಟ ಮಾಡಿದವನೇ ಮತ್ತೆ ಮನೆಯನ್ನು ಖರೀದಿಸಲು ಆಫರ್ ನೀಡಿದ. ಆರ್ಥಿಕ ಲಾಭಗಳನ್ನು ಬದಿಗಿಟ್ಟರೆ, ನಿಜ ಹೇಳಬೇಕೆಂದರೆ ತುಂಬಾ ಹೆಮ್ಮೆಪಡುವ ತರಾ ಇದೆ. ಹದಿನಾರು ಎಕರೆಗಳಲ್ಲಿ ವಿಸ್ತರಿಸಿದ್ದಕ್ಕೆ ‘ಗೇಟೆಡ್ ಕಮ್ಯುನಿಟಿ’ ಎಂದು ಹೆಸರಿಡುವುದು ಅದನ್ನು ಕೀಳಾಗಿ ಕಂಡಂತೆ. ಬ್ರ್ಯಾಂಾಡ್ ಹೆಸರಿನಿಂದಲೇ ಕರೆಯಬೇಕು, ಆಗಲೇ ಸಮರ್ಥನೆ ಸಿಗುತ್ತದೆ. ಅದು ‘ಹೆವನ್ ಆನ್ ಅರ್ಥ್’. ನಲವತ್ತೈದು ಮಹಡಿಗಳು. ಈ ಟವರ್‌ಗಳ ಮಧ್ಯೆ ಸಂಪರ್ಕವೂ ಇದೆ. ಇನ್ನೂರು…

Read More

ಮಂಗಳೂರು : ಎಸ್.ಆರ್. ಹೆಗ್ದೆ ಚಾರಿಟೇಬಲ್ ಟ್ರಸ್ಟ್ (ರಿ.) ಸುರತ್ಕಲ್ ಇದರ ವತಿಯಿಂದ ಚೇಳ್ಯಾರು ಗುತ್ತಿನ ಮನೆಯಲ್ಲಿ ದಿನಾಂಕ 16 ಆಗಸ್ಟ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಸೋಣದ ಸಂಕ್ರಾಂತಿ, ಆಗೋಳಿ ಮಂಜಣ್ಣ ನೆಂಪು ಮತ್ತು ಚೇಲ್ಯಾರು ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವು ನಡೆಯಲಿದೆ. ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷೆ ಮತ್ತು ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಗೋವಿಂದ ದಾಸ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಕೃಷ್ಣ ಮೂರ್ತಿ ಪಿ. ಇವರು ಉಪನ್ಯಾಸ ನೀಡಲಿದ್ದಾರೆ. ಚೇಳ್ಯಾರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪಾಧ್ಯಕ್ಷರಾದ ವೆಂಕಟೇಶ್ ಶೆಟ್ಟಿ, ಸದಸ್ಯ ಪುಷ್ಪರಾಜ್ ಶೆಟ್ಟಿ ಮತ್ತು ಸರಕಾರಿ ಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ತೆರಸಾ ವೇಗಸ್ ಮುಖ್ಯ ಅತಿಥಿಗಳಾಗಿರುತ್ತಾರೆ. ಚೇಳ್ಯಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಜ್ಯೋತಿ ಚೇಳ್ಯಾರು ಹಾಗೂ ಚೇಳ್ಯಾರು ಗುತ್ತಿನ ಕಸ್ತೂರಿ ಇವರು…

Read More

ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ವತಿಯಿಂದ ಮನೆಯಂಗಳದಲ್ಲಿ ‘ಮಾತುಕತೆ -240’ ಕಾರ್ಯಕ್ರಮವನ್ನು ದಿನಾಂಕ 16 ಆಗಸ್ಟ್ 2025ರಂದು ಮಧ್ಯಾಹ್ನ 3-00 ಗಂಟೆಗೆ ಬೆಂಗಳೂರು ಜೆ.ಸಿ. ರಸ್ತೆಯಲ್ಲಿರುವ ನಯನ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಹಿರಿಯ ಸಾಹಿತಿ ಹಾಗೂ ಚಿಂತಕರಾದ ಪ್ರೊ. ಕಾಳೇಗೌಡ ನಾಗವಾರ ಇವರು ತಿಂಗಳ ಅತಿಥಿಯಾಗಿ ಭಾಗವಹಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಕೆ.ಎಂ. ಗಾಯತ್ರಿ ಇವರು ತಮಗೆಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.

Read More

ಬೆಂಗಳೂರು : ಬುಕ್‌ ಬ್ರಹ್ಮ ಸಂಸ್ಥೆಯ ವತಿಯಿಂದ ದಿನಾಂಕ 08ರಿಂದ 10 ಆಗಸ್ಟ್ 2025 ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಮಣಿಪಾಲ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್ ಪ್ರಸ್ತುತಪಡಿಸಿದ ʻಬುಕ್‌ ಬ್ರಹ್ಮ ಸಾಹಿತ್ಯ ಉತ್ಸವ-2025ʼರ ಕೊನೇಯ ದಿನದ ಕಾರ್ಯಕ್ರಮಗಳು ದಿನಾಂಕ 10 ಆಗಸ್ಟ್ 2025 ಭಾನುವಾರದಂದು‌ ಕೋರಮಂಗಲದ ಸೇಂಟ್‌ ಜಾನ್ಸ್‌ ಆಡಿಟೋರಿಯಂನಲ್ಲಿ ನಡೆದಿದ್ದು, ವಿವಿಧ ವಿಚಾರ ಗೋಷ್ಠಿಗಳು, ಸಾಹಿತ್ಯಿಕ ಕಾರ್ಯಕ್ರಮಗಳ ಕೂಡುವಿಕೆಯೊಂದಿಗೆ ಸಾಹಿತ್ಯ ದಿಗ್ಗಜರು, ಸಾಹಿತ್ಯ ಪ್ರಿಯರ ಉಪಸ್ಥಿತಿಯಲ್ಲಿ ಸಂಭ್ರಮದಿಂದ ಜರುಗಿತು. ಖ್ಯಾತ ಕರ್ನಾಟಕ ಹಿಂದೂಸ್ತಾನಿ ಗಾಯಕ ಪಿಟಿ ಗಣಪತಿ ಭಟ್‌ ಹಾಸನಗಿ ಅವರ ʻಮಾರ್ನಿಂಗ್‌ ಮೆಲೋಡಿʼಯೊಂದಿಗೆ ಉತ್ಸವದ ಮುಖ್ಯ ವೇದಿಕೆ ಮಂಟಪ ಸಭಾಂಗಣದಲ್ಲಿ ಮೂರನೇಯ ದಿನದ ಕಾರ್ಯಕ್ರಮವು ಆರಂಭವಾಯಿತು. ನಂತರದಲ್ಲಿ ಪೆರುಮಲ್‌ ಮುರುಗನ್‌ ಅವರೊಂದಿಗೆ ಟಿ.ಎಂ. ಕೃಷ್ಣ, ಪ್ರಶಾಂತ್‌ ಪ್ರಕಾಶ್‌, ಪ್ರತಿಭಾ ನಂದಕುಮಾರ್‌ ಇವರೊಂದಿಗೆ ಸುರೇಶ್‌ ನರಸಿಂಹ, ಶಾಜಿ ಚೇನ್‌, ಪ್ರಕಾಶ್‌ ಬರೆ, ವಿ.ಬಿ ತಾರಕೇಶ್ವರ್‌, ಎಂ.ಕೆ. ರಾಘವೇಂದ್ರ, ವಿಜಯ ಲಕ್ಷ್ಮಿ, ಪೂರ್ಣಿಮಾ ಮಾಳಗಿಮನಿ, ಕ್ಯಾ. ಸಜಿತ ನಾಯರ್‌, ಪಿ.ಎಂ…

Read More

ಬಂಟ್ವಾಳ : ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ಶ್ರಾವಣ ಮಾಸದ ಯಕ್ಷಗಾನ ತಾಳಮದ್ದಳೆ ಸೇವೆಯಲ್ಲಿ ದಿನಾಂಕ 02 ಆಗಸ್ಟ್ 2025ರಂದು ಶ್ರೀ ಮದವೂರ ವಿಘ್ನೇಶ ಕಲಾ ಸಂಘ, ಗೇರುಕಟ್ಟೆ, ಬೆಳ್ತಂಗಡಿ ಇದರ ಸದಸ್ಯರಿಂದ ‘ಸೀತಾಪಹಾರ’, ‘ವಾಲಿಮೋಕ್ಷ’ ಎಂಬ ಪ್ರಸಂಗದ ತಾಳಮದ್ದಳೆಯು ನಡೆಯಿತು. ಹಿಮ್ಮೇಳದಲ್ಲಿ ಮಧೂರು ರಾಮಪ್ರಕಾಶ್ ಕಲ್ಲೂರಾಯ, ಶ್ರೀ ನಿತೀಶ್ ಮನೋಳಿತ್ತಾಯ, ಶ್ರೀ ಮಹೇಶ, ಶ್ರೀ ಅನಿಮೇಶ ಭಾಗವಹಿಸಿದರು. ಮುಮ್ಮೇಳದಲ್ಲಿ ಮಧೂರು ಸುಂದರ ಕೃಷ್ಣ, ಬಾಸಮೆ ನಾರಾಯಣ ಭಟ್, ಶ್ರೀ ದಿನೇಶ ಭಟ್ ಬಳೆಂಜ, ಶ್ರೀ ರಾಮಕೃಷ್ಣ ಭಟ್, ಶ್ರೀಮತಿ ಜಯಂತಿ ಸುರೇಶ ಹೆಬ್ಬಾರ್, ಶ್ರೀಮತಿ ಕೆ.ಆರ್. ಸುವರ್ಣ ಕುಮಾರಿ, ಮಧೂರು ಮೋಹನ ಕಲ್ಲೂರಾಯ ಪಾಲ್ಗೊಂಡರು. ಮಧೂರು ಮೋಹನ ಕಲ್ಲೂರಾಯರು ಸಂಯೋಜಿಸಿದ್ದರು. ಶ್ರೀ ನಾಗೇಂದ್ರ ಪೈ ಸ್ವಾಗತಿಸಿ. ವಂದಿಸಿದರು.

Read More

ಎಡನೀರು : ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದಭಾರತೀ ಶ್ರೀಪಾದಂಗಳವರ ಪಂಚಮ ಚಾತುರ್ಮಾಸ್ಯ ವೃತಾಚರಣೆ ಪ್ರಯುಕ್ತ ದಿನಾಂಕ 15 ಆಗಸ್ಟ್ 2025ರಂದು ‘ನೃತ್ಯ ದ್ವಯ’ ಮತ್ತು ನೃತ್ಯ ಸಿರಿ’ ಭರತನಾಟ್ಯ ಪ್ರದರ್ಶನವನ್ನು ಸಂಜೆ 7-30 ಗಂಟೆಗೆ ಶ್ರೀ ಎಡನೀರು ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ವಿದುಷಿ ಮಂಜುಳಾ ಸುಬ್ರಹ್ಮಣ್ಯ ಹಾಗೂ ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಇವರಿಂದ ‘ನೃತ್ಯ ದ್ವಯ’ ಮತ್ತು ಪುತ್ತೂರು ನಾಟ್ಯರಂಗ ಕಲಾವಿದೆಯರಿಂದ ‘ನೃತ್ಯ ಸಿರಿ’ ಭರತನಾಟ್ಯ ಪ್ರದರ್ಶನ ಪ್ರಸ್ತುತಗೊಳ್ಳಲಿದ್ದು, ವಿದ್ವಾನ್ ಸ್ವರಾಗ್ ಮಾಹೆ ಇವರ ಹಾಡುಗಾರಿಕೆಗೆ, ಎನ್. ದೆಬಾಶಿಶ್ ಕೊಲ್ಕತಾ ಇವರ ನಟುವಾಂಗ, ಬೆಂಗಳೂರಿನ ಗೌತಮ್ ಗೋಪಾಲಕೃಷ್ಣ ಮೃದಂಗದಲ್ಲಿ ಮತ್ತು ಕುಮಾರಿ ತನ್ಮಯಿ ಉಪ್ಪಂಗಳ ವಯಲಿನ್ ನಲ್ಲಿ ಸಹಕರಿಸಲಿದ್ದಾರೆ.

Read More

ಮೈಸೂರು : ಅರಳಿ ಅಭಿನಯಿಸುವ ನಾಟಕ ‘ಉರುವಿ’ ಇದರ 4ನೇ ಪ್ರದರ್ಶನವನ್ನು ದಿನಾಂಕ 17 ಆಗಸ್ಟ್ 2025ರಂದು ಸಂಜೆ 6-30 ಗಂಟೆಗೆ ಮೈಸೂರಿನ ನಟನ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಡಾ. ಸಿ. ರವೀಂದ್ರನಾಥ್ ಇವರು ರಚಿಸಿರುವ ನಾಟಕವನ್ನು ರಮ್ಯ ಶೇಕರ್ – ಪಾವನ ಧನರಾಜ್ ಇವರ ನಿರ್ದೇಶನ ಮಾಡಿರುತ್ತಾರೆ.

Read More

ಉಡುಪಿ : ತುಳುನಾಡು, ತುಳುಭಾಷೆ, ಸಾಹಿತ್ಯ, ಸಂಸ್ಕೃತಿ ಇತ್ಯಾದಿಗಳ ಉನ್ನತಿಗಾಗಿ ಕಳೆದ 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ಉಡುಪಿಯ ‘ತುಳು ಕೂಟ (ರಿ)’. ತುಳುನಾಡಿನಲ್ಲಿ ತುಳು ಚಳುವಳಿಯನ್ನು ಪ್ರಾರಂಭಿಸಿದವರು, ತುಳು ಸಾಹಿತ್ಯವನ್ನು ಬೆಳೆಸಲು ಪ್ರೋತ್ಸಾಹ ನೀಡಿದವರು – ತುಳುನಾಡ್ ಪ್ರೆಸ್, ತುಳು ಸಾಹಿತ್ಯಮಾಲೆ, ತುಳು ಕಾದಂಬರಿ, ತುಳು ವ್ಯಾಕರಣ ರಚನೆ ಮೊದಲಾದ ಅನೇಕ ಕೆಲಸಗಳನ್ನು ಮಾಡಿದವರು, ಸ್ವದೇಶಿ ಚಳುವಳಿಯಲ್ಲಿ ಭಾಗವಹಿಸಿ – ತುಳುನಾಡ್ ಬ್ಯಾಂಕ್ ಹಾಗೂ ತುಳು ಚಳುವಳಿ ಪ್ರಾರಂಭಿಸಿದವರು, ದಕ್ಷಿಣ ಕನ್ನಡ ಜಿಲ್ಲೆಯನ್ನು ತುಳುನಾಡು ಅಂತ ಕರೀಬೇಕು. ಅಲ್ಲಿ ತುಳು ಭಾಷೆಯನ್ನು ಕಲಿಸುವ ಶಾಲೆ ಆರಂಭ ಆಗಬೇಕು ಹಾಗೂ ತುಳು ಭಾಷೆಯಲ್ಲಿಯೇ ಪುಸ್ತಕಗಳನ್ನು ಪ್ರಕಟವಾಗಬೇಕು, ತುಳುವನ್ನು ಆಡಳಿತ ಭಾಷೆಯಾಗಿ ಪರಿಗಣಿಸಬೇಕು ಎಂದು 1923ರಲ್ಲೇ ಕನಸ ಕಟ್ಟಿದವರು – ಪಣಿಯಾಡಿ ಶ್ರೀನಿವಾಸ ಉಪಾಧ್ಯಾಯರು. ಉಡುಪಿಯ ತುಳು ಕೂಟವು ಕಳೆದ 30 ವರ್ಷಗಳಿಂದ ತುಳು ಕಾದಂಬರಿ ಸ್ಪರ್ಧೆಗಳನ್ನು ನಡೆಸಿ, ಅದರಲ್ಲಿ ಶ್ರೇಷ್ಠ ಸ್ಥಾನ ಪಡೆದವರಿಗೆ ‘ಪಣಿಯಾಡಿ ಪ್ರಶಸ್ತಿ’ ನೀಡುವ ಮೂಲಕ ಎಸ್.ಯು. ಪಣಿಯಾಡಿಯವರ…

Read More