Author: roovari

ಮಂಗಳೂರು: ಮಂಗಳೂರಿನ ತುಳು ಸಾಹಿತ್ಯ ಅಕಾಡೆಮಿ ಇದರ ಸಿರಿಚಾವಡಿಯಲ್ಲಿ ವಿದ್ವಾಂಸರೊಂದಿಗೆ ಸಮಾಲೋಚನಾ ಗೋಷ್ಠಿ ಕಾರ್ಯಕ್ರಮವು 04 ಸೆಪ್ಟೆಂಬರ್ 2024ರ ಬುಧವಾರದಂದು ನಡೆಯಿತು. ಗೋಷ್ಠಿಯ ಅಧ್ಯಕ್ಷತೆ ವಹಿಸಿದ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಕಾ. ತ. ಚಿಕ್ಕಣ್ಣ ಮಾತನಾಡಿ “ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ನಿರಂತರವಾಗಿ ಕನಕದಾಸರ ಬಗ್ಗೆ ಚಿಂತನ ಜಾಗೃತಿ ಕಾರ್ಯ ನಡೆಯುತ್ತಿದೆ. ಈಗಾಗಲೇ ಬೀದರ್‌ನಿಂದ ಕಾಸರಗೋಡು ವರೆಗೆ 250 ಕಾಲೇಜುಗಳ 50 ಸಾವಿರ ಮಕ್ಕಳಲ್ಲಿ ಕನಕದಾಸರ ಬಗ್ಗೆ ಚಿಂತನ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ. ಕನಕದಾಸ ಹಾಗೂ ತತ್ವಪದಕಾರರ ಅಧ್ಯಯನದ ಭಾಗವಾಗಿ ರಾಜ್ಯಾದ್ಯಂತ ವರ್ಷವಿಡೀ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಾಮಾಜಿಕ ಸಂವೇದನೆ ರೂಪಿಸುವ ಭಾಗವಾಗಿ ‘ಕನಕ ಓದು’ ಎನ್ನುವ ಕಾರ್ಯಕ್ರಮ ನಡೆಸಲಾಗುತ್ತಿದೆ. ತತ್ವಪದಗಳ ಸಂಗ್ರಹ, ಪ್ರಕಾಶನ ನಡೆಯುತ್ತಿದೆ. 250 ತತ್ವಪದಕಾರರ ಪರಿಚಯ ಗ್ರಂಥ ಹೊರತರುವ ಯೋಜನೆ ಹಾಗೂ ಕನಕ ಸಾಹಿತ್ಯ, ಕೀರ್ತನೆ ಸಾಹಿತ್ಯಗಳ ತೌಲನಿಕ ಅಧ್ಯಯನ ಮಾಡುವುದಕ್ಕೂ ಯೋಜನೆ…

Read More

ಮೈಸೂರು : ಮೈಸೂರಿನ ಕ್ರಿಯಾಶೀಲ ತಂಡಗಳಲ್ಲಿ ಒಂದಾದ ‘ಪರಿವರ್ತನ ರಂಗ ಸಮಾಜ’ ಇವರು ಪ್ರಸ್ತುತ ಪಡಿಸುವ ‘ಗೆಲಿಲಿಯೋಸ್ ಡಾಟರ್’ ಎಂಬ ಇಂಗ್ಲೀಷ್ ನಾಟಕವು ದಿನಾಂಕ 08 ಸೆಪ್ಟೆಂಬರ್ 2024ರಂದು ಸಂಜೆ 6-30 ಗಂಟೆಗೆ ಮೈಸೂರಿನ ನಟನದಲ್ಲಿ ಪ್ರದರ್ಶನಗೊಳ್ಳಲಿದೆ. ಚಿಂತಕರು ಹಿರಿಯ ರಂಗ ನಿರ್ದೇಶಕರೂ ಆದ ಪ್ರೊಫೆಸರ್ ಎಸ್.ಆರ್. ರಮೇಶ್ ಇವರು ಇದನ್ನು ನಿರ್ದೇಶಿಸಿದ್ದಾರೆ.

Read More

ಕುಂದಾಪುರ : ಸಂಗೀತ ಅವಿನಾಶಿ ಪ್ರತಿಷ್ಠಾನ ಮತ್ತು ಹಂಗಾರಕಟ್ಟೆಯ ಯಕ್ಷಗಾನ ಕಲಾಕೇಂದ್ರ ಪ್ರಸ್ತುತ ಪಡಿಸುವ ಅವಿನಾಶ್ ಹೆಬ್ಬಾರ್ ಇವರ ನೆನಪಿನಲ್ಲಿ ‘ಅಜರಾಮರ’ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ದಿನಾಂಕ 14 ಸೆಪ್ಟೆಂಬರ್ 2024ರಂದು ಸಂಜೆ 5-00 ಗಂಟೆಗೆ ಸಾಲಿಗ್ರಾಮದ ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಉಸ್ತಾದ್ ಚೋಟೆ ರಹಿಮತ್ ಖಾನ್ ಇವರಿಂದ ಸಿತಾರ್ ವಾದನ ಮತ್ತು ಮಂಗಳೂರಿನ ಶ್ರೀಮತಿ ದೀಕ್ಷಾ ನಾಯಕ್ ಇವರಿಂದ ಹಾಡುಗಾರಿಕೆ ನಡೆಯಲಿದ್ದು, ಇವರಿಗೆ ಗೋವಾದ ಶ್ರೀ ಉದಯ್ ಕುಲಕರ್ಣಿ ಮತ್ತು ಶ್ರೀ ಪ್ರವೀಣ್ ನಾಯಕ್ ಇವರುಗಳು ತಬಲದಲ್ಲಿ ಮತ್ತು ಕೋಟದ ಶ್ರೀ ಶಂಭು ಭಟ್ ಇವರು ಹಾರ್ಮೋನಿಯಂನಲ್ಲಿ ಸಾಥ್ ನೀಡಲಿದ್ದಾರೆ.

Read More

ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 09-09-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ನೃತ್ಯನಿಕೇತನದ ಕಲಾವಿದರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಕಳೆದ 35 ವರುಷಗಳಿಂದ ಉಡುಪಿಯ ಕೊಡವೂರಿನಲ್ಲಿ ನೃತ್ಯನಿಕೇತನ ಕೊಡವೂರು ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಉಡುಪಿಯ ಸುತ್ತಮುತ್ತಲಿನ 7 ಶಾಖೆಗಳ ಮುಖಾಂತರ ಅನೇಕ ನೃತ್ಯ ವಿದ್ಯಾರ್ಥಿಗಳ ನೃತ್ಯತೃಷೆಯನ್ನು ನೀಗಿಸುತ್ತಿದೆ. ಈ ಸಂಸ್ಥೆಯ ಗುರುಗಳಾಗಿ ಕಲಾದಂಪತಿಗಳಾದ ವಿದ್ವಾನ್ ಸುಧೀರ್ ರಾವ್ ಕೊಡವೂರು ಮತ್ತು ವಿದುಷಿ ಮಾನಸಿ ಸುಧೀರ್ ಇವರುಗಳು ಕಾರ್ಯನಿರ್ವಹಿಸುತ್ತಿದ್ದಾರೆ. ವರ್ಷದ ಎಲ್ಲಾ ಋತುವಿನಲ್ಲಿ ಚಟುವಟಿಕೆಗಳಿಂದ ಇರುವ ಈ ಸಂಸ್ಥೆಯ ಕಲಾವಿದರು ಈಗಾಗಲೇ ದೇಶವಿದೇಶಗಳಲ್ಲಿ ಸುಮಾರು 3000ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅನೇಕ ಪ್ರಯೋಗಶೀಲ ನೃತ್ಯಗಳನ್ನು ನೃತ್ಯರೂಪಕಗಳನ್ನು ಕಲಾಭಿಮಾನಿಗಳಿಗೆ ನೀಡಿದ್ದಾರೆ. ಸಂಸ್ಥೆಯ ವತಿಯಿಂದ ಈಗಾಗಲೇ ರಾಜ್ಯದಾದ್ಯಂತದ…

Read More

ಸಾಣೇಹಳ್ಳಿ : ಸಾಣೇಹಳ್ಳಿ ಎಸ್.ಎಸ್. ರಂಗಮಂದಿರದಲ್ಲಿ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳು 2024ರ ಅಭ್ಯಾಸ ಮಾಲಿಕೆಯ ‘ಅಭಿಮನ್ಯು ಕಾಳಗ’ ಯಕ್ಷಗಾನ ಪ್ರಸಂಗವನ್ನು ದಿನಾಂಕ 05 ಸೆಪ್ಟೆಂಬರ್ 2024ರಂದು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಯಕ್ಷಗಾನ ವೀಕ್ಷಿಸಿ ಮಾತನಾಡಿದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸ್ವಾಮಿಗಳು “ನಮ್ಮ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳು ಸಾಕಷ್ಟು ಶ್ರಮವಹಿಸಿ ಪ್ರೇಕ್ಷಕರ ಮನಸ್ಸನ್ನು ಅರಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಭಿಮನ್ಯು ಕಾಳಗ ಯಕ್ಷಗಾನವನ್ನು ಗಮನಿಸುವಾಗ ಇವತ್ತಿನ ರಾಜಕೀಯ, ಧಾರ್ಮಿಕ, ಸಾಮಾಜಿಕ, ಸನ್ನಿವೇಶಗಳನ್ನು ಕಲ್ಪನೆ ಮಾಡಿಕೊಳ್ತಾ ಇದ್ದೆವು. ಹೇಗೆ ದುಷ್ಟಶಕ್ತಿಗಳು ಶಿಷ್ಟಶಕ್ತಿಗಳನ್ನು ದಮನ ಮಾಡುತ್ತಿದ್ದವು ಎನ್ನುವುದನ್ನು ನೋಡಿದೆವು. ಕೊನೆಗೆ ಸೋಗಲಾಡಿತನವನ್ನು ತೋರಿಸುವುದನ್ನು ನೋಡಿ ನಮಗನಿಸಿದ್ದು ಈ ಜಗತ್ತು ಇರುವುದು ಹೀಗೇ. ಕೌರವರು ಐದು ಜನ ಪಾಂಡವರಿಂದ ಸೋಲನ್ನು ಅನುಭವಿಸುತ್ತಾ ಕೊನೆಗೆ ತಂತ್ರ ಮಾಡಿದ್ದು, ಚಕ್ರವ್ಯೂಹವನ್ನು ರಚಿಸುವಂಥದ್ದು. ಚಕ್ರವ್ಯೂಹವನ್ನು ಬೇಧಿಸುವಂಥ ಶಕ್ತಿ ಇರುವುದು ಅರ್ಜುನನಿಗೆ, ಶ್ರೀಕೃಷ್ಣನಿಗೆ. ಆದರೆ ಅಭಿಮನ್ಯುನಿಗೆ ಚಕ್ರವ್ಯೂಹದೊಳಗೆ ಹೋಗುವುದು ಗೊತ್ತು ಆದರೆ ಹೊರಗೆ ಬರೋದು ಗೊತ್ತಿಲ್ಲ. ಆದರೆ ಆತನ ಶೌರ್ಯ, ಸಾಹಸ,…

Read More

ಮಂಗಳೂರು : ಕಲ್ಕೂರ ಪ್ರತಿಷ್ಠಾನದ ವತಿಯಿಂದ 4 ಸೆಪ್ಟೆಂಬರ್ 2024ರಂದು ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ದಾಮೋದರ ನಿಸರ್ಗರವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಇವರು ಮಾತನಾಡಿ “ದಾಮೋದರ ನಿಸರ್ಗ ಅವರು ತುಳು ಸಾಹಿತ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದವರು. ಅವರು ತುಳು ಜೀವನದ ದರ್ಪಣವಿದ್ದಂತೆ. ಸಾಮಾಜಿಕ, ಸಾಂಸ್ಕೃತಿಕ ಮುಖಂಡ ದಿ. ದಾಮೋದರ ನಿಸರ್ಗ ಅವರು ತುಳುಕೂಟದ ಮೂಲಕ ಸಾಕಷ್ಟು ತುಳು ಭಾಷೆಗೆ ದುಡಿದವರು. ತುಳು ಸಂಸ್ಕೃತಿಯನ್ನು ಕಟ್ಟಿಕೊಂಡು ದೃಢವಾಗಿ ಮುಂದೆ ಸಾಗಿದವರು. ತುಳು ಭಾಷೆಯ ಅಭಿವೃದ್ಧಿಗೆ ಬದುಕಿನ ಕೊನೆಯ ತನಕವೂ ದುಡಿದವರು” ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ಮಾತನಾಡಿ “ತುಳುವಿನ ಪ್ರತಿಯೊಂದು ಕಾರ್ಯಕ್ರಮದಲ್ಲಿ ನಿಸರ್ಗ ಬರುತ್ತಿದ್ದರು. ತುಳು ಸಂಘಟನೆಯಲ್ಲೂ ಅವರು ತೊಡಗಿಸಿಕೊಂಡು ತುಳುಕೂಟದ ಮೂಲಕ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡುತ್ತಾ ಸಾಗಿದವರು. ಅವರ ಕೊಡುಗೆ ಮರೆಯಲಾಗದ್ದು” ಎಂದರು. ರಂಗಭೂಮಿ ನಿರ್ದೇಶಕ ವಿಜಯ…

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗಳಿಗೆ ನೀಡುವ ‘ಶ್ರೀಮತಿ ಎಸ್. ರಮಾದೇವಿ ವಿಶ್ವೇಶ್ವರಯ್ಯ ದತ್ತಿ ಪ್ರಶಸ್ತಿ’ಗೆ ದಯಾನಂದ ಮೂರ್ತಿಯವರನ್ನು ಮತ್ತು ‘ಶ್ರೀಮತಿ ವಿ. ಗೌರಮ್ಮ ಗಂಗಾಧರಯ್ಯ ಮಕ್ಕಳ ಸಿಬ್ಬಂದಿ ಸೇವಾ ಪ್ರಶಸ್ತಿ’ಗೆ ಎಂ.ಎನ್. ಸತೀಶ್ ಕುಮಾರ್ ಇವರನ್ನೂ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿದ್ದಾರೆ. ಎಸ್. ರಮಾದೇವಿ ವಿಶ್ವೇಶ್ವರಯ್ಯನವರು ಕನಿಷ್ಟ ಹತ್ತು ವರ್ಷ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲು ‘ಶ್ರೀಮತಿ ಎಸ್.ರಮಾದೇವಿ ವಿಶ್ವೇಶ್ವರಯ್ಯ ಪ್ರಶಸ್ತಿ’ ಸ್ಥಾಪಿಸಿರುತ್ತಾರೆ. ಅದರಂತೆ ಡಾ. ಎಂ.ಜಿ. ನಾಗರಾಜ್ ಇವರು ಕನಿಷ್ಟ ಹತ್ತು ವರ್ಷ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಿಷ್ಟೆಯಿಂದ ಸೇವೆ ಸಲ್ಲಿಸಿದ ಪ್ರಾಮಾಣಿಕ ಸಿಬ್ಬಂದಿಯೊಬ್ಬರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಬೇಕೆಂದು ‘ಶ್ರೀಮತಿ ವಿ. ಗೌರಮ್ಮ ಗಂಗಾಧರಯ್ಯ ಮಕ್ಕಳ ಸಿಬ್ಬಂದಿ ಸೇವಾ ಪ್ರಶಸ್ತಿ’ಯನ್ನು ಸ್ಥಾಪಿಸಿರುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಕನ್ನಡ…

Read More

ಮುಂಬೈ : ಮುಲುಂಡ್ ಪಶ್ಚಿಮದ ಆರ್ಟ್ ಆಫ್ ಲಿವಿಂಗ್ ಸಭಾಂಗಣದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ 23ನೇ ವರ್ಷದ ಸರಣಿ ತಾಳಮದ್ದಳೆಯ ಸಮಾರೋಪ ಸಮಾರಂಭವು 01 ಸೆಪ್ಟೆಂಬರ್ 2024ರಂದು ಜರಗಿತು. ಕಾರ್ಯಕ್ರಮದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಮತ್ತು ತಂಡದ ಎಲ್ಲಾ ಕಲಾವಿದರನ್ನು ಮುಲುಂಡ್ ಬಂಟ್ಸ್ ವತಿಯಿಂದ ಗೌರವಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಲುಂಡ್ ಬಂಟ್ಸ್ ಇದರ ಅಧ್ಯಕ್ಷರಾದ ಸಿ.ಎ. ಕರುಣಾಕರ ಶೆಟ್ಟಿ ಮಾತನಾಡಿ “ಕರಾವಳಿಯ ಶ್ರೀಮಂತ ಕಲೆ ಯಕ್ಷಗಾನವಿಂದು ಮಹಾನಗರ ಮುಂಬೈಯಲ್ಲಿ ಅತ್ಯಂತ ಜನಪ್ರಿಯತೆಯನ್ನು ಗಳಿಸಿದೆ. ಇದಕ್ಕೆ ಪ್ರತಿವರ್ಷವೂ ತವರೂರಿಂದ ಬಂದು ಬಯಲಾಟ ಮತ್ತು ತಾಳಮದ್ದಳೆಗಳ ಮೂಲಕ ನಮ್ಮನ್ನು ರಂಜಿಸುವ ಹೆಸರಾಂತ ಯಕ್ಷಗಾನ ಕಲಾವಿದರೇ ಮುಖ್ಯ ಕಾರಣವಾಗಿದ್ದಾರೆ. ಆದರೆ ಅವರನ್ನು ಕರೆತಂದು ಮುಂಬೈಯಲ್ಲಿ ಯಕ್ಷಗಾನ ಹವಾ ಮೂಡಿಸಿದ ಬಲುದೊಡ್ಡ ಕೀರ್ತಿ ಅಜೆಕಾರು ಬಾಲಕೃಷ್ಣ ಶೆಟ್ಟರಂತಹ ಕಲಾಸಂಘಟಕರಿಗೆ ಸಲ್ಲುತ್ತದೆ” ಎಂದು ಹೇಳಿದರು. ತವರೂರ ಹಿರಿಯ ಅರ್ಥಧಾರಿ ಮತ್ತು ಸಾಹಿತಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ “ಕಳೆದ…

Read More

ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ನೀಡಲಾಗುವ 2022 ಮತ್ತು 2023ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 6 ಸೆಪ್ಟೆಂಬರ್ 2024ರಂದು ಸಂಜೆ 4-30ಕ್ಕೆ ನಗರದ ಪುರಭವನದಲ್ಲಿ ನಡೆಯಲಿದೆ. ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಫರೀದ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪದಶ್ರೀ ಹರೇಕಳ ಹಾಜಬ್ಬ ‘ಗೌರವ ಪ್ರಶಸ್ತಿ’ ಪ್ರದಾನ ಮಾಡಲಿದ್ದಾರೆ. 2022ನೇ ಸಾಲಿನ ‘ಗೌರವ ಪ್ರಶಸ್ತಿ’ಯನ್ನು ಹಂಝತುಲ್ಲಾ ವೈ ಕುವೇಂಡ ಬೆಂಗಳೂರು, ಮರಿಯಮ್ ಇಸ್ಮಾಈಲ್ ಉಳ್ಳಾಲ, ಎಂ.ಜಿ. ಶಾಹುಲ್ ಹಮೀದ್ ಗುರುಪುರ ಹಾಗೂ 2023ನೇ ಸಾಲಿನ ‘ಗೌರವ ಪ್ರಶಸ್ತಿ’ಯನ್ನು ಹಾಜಿ ಟಿ.ಎ. ಆಲಿಯಬ್ಬ ಜೋಕಟ್ಟೆ, ಮುಹಮ್ಮದ್ ಶರೀಫ್ ನಿರ್ಮುಂಜೆ, ಅಶ್ರಫ್‌ ಅಪೋಲೊ ಕಲ್ಲಡ್ಕ ಸ್ವೀಕರಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯ ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕ್ಕರ್ ಸಿದ್ದೀಕ್ ಬೆಲ್ಕಿರಿ ದ್ವೈಮಾಸಿಕ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದು, ಬಂಟ್ವಾಳ ಮೂಡದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಅಭಿನಂದನಾ ಭಾಷಣ ಮಾಡಲಿದ್ದಾರೆ. ಕರ್ನಾಟಕ ಬ್ಯಾರಿ…

Read More

ಉಡುಪಿ : ತಾಳ್ತಜೆ ಕೇಶವ ಭಟ್ಟರ ಹೆಸರಿನಲ್ಲಿ ನೀಡುವ ಕೇಶವ ಪ್ರಶಸ್ತಿ ಹಾಗೂ ಕಡೆಂಗೋಡ್ಲು ಶಂಕರಭಟ್ಟರ ನೆನಪಿನಲ್ಲಿ ನೀಡುವ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭವು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಆಶ್ರಯದಲ್ಲಿ ದಿನಾಂಕ 31 ಆಗಸ್ಟ್ 2024ರಂದು ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು. ಎಂ.ಜಿ.ಎಂ. ಕಾಲೇಜಿನ ವಿದ್ಯಾರ್ಥಿನಿ ಅನನ್ಯ ಪ್ರಾರ್ಥನೆಯಿಂದ ಆರಂಭವಾದ ಈ ಸಮಾರಂಭದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಅತಿಥಿಗಳಿಗೆ ಪುಷ್ಪ ನೀಡಿ ಸ್ವಾಗತಿಸಿದರು. ತಾಳ್ತಜೆ ವಸಂತ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಂತರ ಡಾ. ಯು. ಮಹೇಶ್ವರಿ ಹಾಗೂ ಡಾ. ಶೈಲೇಶ್ ಕುಮಾರ್ ಶಿವಕುಮಾರ್ ಇವರಿಗೆ ಕ್ರಮವಾಗಿ ‘ಕೇಶವ ಪ್ರಶಸ್ತಿ’ ಹಾಗೂ ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಡಾ. ಯು. ಮಹೇಶ್ವರಿಯವರ ಕುರಿತು ಶಂಕರನಾರಾಯಣ ಸರಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಉದಯಕುಮಾರ್ ಶೆಟ್ಟಿ ಹಾಗೂ ಶೈಲೇಶ್…

Read More