Author: roovari

ಉಡುಪಿ : ರಾಜ್ಯದ ಹೆಸರಾಂತ ಹವ್ಯಾಸಿ ನಾಟಕ ಸಂಸ್ಥೆಯಾದ ‘ರಂಗಭೂಮಿ (ರಿ.) ಉಡುಪಿ’ ಇದರ ವತಿಯಿಂದ ಮೂರು ದಿನಗಳ ‘ರಂಗಭೂಮಿ ರಂಗೋತ್ಸವ’ವನ್ನು ದಿನಾಂಕ 01 ಫೆಬ್ರವರಿ 2025ರಿಂದ 03 ಫೆಬ್ರವರಿ 2025ರವರೆಗೆ ಪ್ರತಿದಿನ ಸಂಜೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 01 ಫೆಬ್ರವರಿ 2025ರಂದು ಸಂಜೆ ಗಂಟೆ 5-45ಕ್ಕೆ ‘ರಂಗಭೂಮಿ ರಂಗೋತ್ಸವ’ದ ಉದ್ಘಾಟನೆಯನ್ನು ರಂಗಭೂಮಿ ಇದರ ಗೌರವಾಧ್ಯಕ್ಷರಾದ ಡಾ. ಹೆಚ್.ಎಸ್. ಬಲ್ಲಾಳ್ ಇವರ ನೆರವೇರಿಸಲಿದ್ದು, ರಂಗಭೂಮಿ ಇದರ ಅಧ್ಯಕ್ಷರಾದ ಡಾ. ತಾಲ್ಲೂರು ಶಿವರಾಮ ಶೆಟ್ಟಿ ಇವರು ಅಧ್ಯಕ್ಷತೆಯನ್ನು ವಹಿಸಲಿರುವರು. ಸಭಾ ಕಾರ್ಯಕ್ರಮದಲ್ಲಿ 45ನೇ ರಾಜ್ಯ ಮಟ್ಟದ ಕನ್ನಡ ನಾಟಕೋತ್ಸವ ಸ್ಪರ್ಧೆಯ ಬಹುಮಾನ ವಿತರಣೆ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಪ್ರಥಮ ಪ್ರಶಸ್ತಿ ವಿಜೇತ ನಾಟಕದ ಮರು ಪ್ರದರ್ಶನಗೊಳ್ಳಲಿದೆ. ಬೆಂಗಳೂರಿನ ರಂಗರಥ ಟ್ರಸ್ಟ್ (ರಿ.) ತಂಡದವರು ಆಸಿಫ್ ಕ್ಷತ್ರಿಯ ಮತ್ತು ಶ್ವೇತಾ ಶ್ರೀನಿವಾಸ್ ನಿರ್ದೇಶನದಲ್ಲಿ ‘ಧರ್ಮನಟಿ’ ಐತಿಹಾಸಿಕ ನಾಟಕ ಪ್ರದರ್ಶನ ನೀಡಲಿದ್ದಾರೆ. ದಿನಾಂಕ 02 ಫೆಬ್ರವರಿ 2025ರಂದು ಸಂಜೆ…

Read More

ಮಂಗಳೂರು : ಬಿಜೈಯಲ್ಲಿರುವ ನೃತ್ಯ ಸಂಸ್ಥೆ ನೃತ್ಯಾಂಗನ್ ಪ್ರಸ್ತುತ ಪಡಿಸುವ ಭಾರತೀಯ ಶಾಸ್ತ್ರೀಯ ನೃತ್ಯ ಸರಣಿಯ 12ನೇ ಆವೃತ್ತಿ ‘ಸಮರ್ಪಣ 2024’ ನೃತ್ಯೋತ್ಸವ ಕಾರ್ಯಕ್ರಮವನ್ನು ದಿನಾಂಕ 01 ಮತ್ತು 02 ಫೆಬ್ರವರಿ 2025ರಂದು ಸಂಜೆ ಗಂಟೆ 5-45ಕ್ಕೆ ಡಾನ್ ಬೋಸ್ಕೋ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 01 ಫೆಬ್ರವರಿ 2025ರಂದು ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಕಲಾ ನಿರ್ದೇಶಕರಾದ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ ದಂಪತಿಗಳು ದೀಪ ಪ್ರಜ್ವಲನೆ ಮಾಡಿ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಇಟಲಿಯ ಕಲಾವಿದೆ ಲುಕ್ರೆಜಿಯಾ ಮ್ಯಾನಸ್ಕೋಟಿ ಮತ್ತು ಬೆಂಗಳೂರಿನ ಸಂಜನಾ ರಾಜೇಶ್ ನೃತ್ಯ ಪ್ರದರ್ಶನ ನೀಡಲಿದ್ದಾರೆ. ದಿನಾಂಕ 02 ಫೆಬ್ರವರಿ 2025ರಂದು ಕೇರಳದ ಕಲಾಮಂಡಲಂ ಪ್ರಜೀಶಾ ಗೋಪಿನಾಥ್, ಬೆಂಗಳೂರಿನ ಕಾವ್ಯಾ ಕಾಶಿನಾಥನ್ ಹಾಗೂ ಮಂಗಳೂರಿನ ಅಂಕಿತಾ ರೈ ಇವರುಗಳು ಏಕವ್ಯಕ್ತಿ ಶಾಸ್ತ್ರೀಯ ಭರತನಾಟ್ಯ ಪ್ರಸ್ತುತ ಪಡಿಸಲಿದ್ದಾರೆ. ಕಲಾಸಕ್ತರಿಗೆ ಉಚಿತ ಪ್ರವೇಶ ಎಂದು ನೃತ್ಯಾಂಗನ್ ನಿರ್ದೇಶಕಿ ಕಲಾವಿದೆ ರಾಧಿಕಾ ಶೆಟ್ಟಿ ತಿಳಿಸಿದ್ದಾರೆ.

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಡಾ. ಜಿ. ಕೃಷ್ಣಪ್ಪನವರಿಗೆ ಶ್ರದ್ದಾಂಜಲಿ ಸಭೆಯು ದಿನಾಂಕ 28 ಜನವರಿ 2025ರಂದು ಆಯೋಜನೆಗೊಂಡಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ “ಮಂಡ್ಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಳ್ಳುವ ಕೆಲವು ದಿನಗಳ ಹಿಂದಷ್ಟೇ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಗೆ ಭೇಟಿ ನೀಡಿ ಸುದೀರ್ಘವಾಗಿ ನನ್ನೊಂದಿಗೆ ಬೇಂದ್ರೆ ಕಾವ್ಯದ ನೆಲೆಗಳನ್ನು ಚರ್ಚಿಸಿದ್ದ ‘ಬೇಂದ್ರೆ ಕೃಷ್ಣಪ್ಪ’ ಎಂದೇ ಹೆಸರಾಗಿದ್ದ ಡಾ. ಜಿ. ಕೃಷ್ಣಪ್ಪ ಇನ್ನಿಲ್ಲ ಎನ್ನುವ ಸುದ್ದಿ ನಿಜಕ್ಕೂ ಆಘಾತಕಾರಿಯಾಗಿದೆ. ಡಾ. ಜಿ. ಕೃಷ್ಣಪ್ಪನವರ ‘ನಾಕುತಂತಿ ಒಂದು ಟಿಪ್ಪಣಿ’ ಮತ್ತು ‘ಬೇಂದ್ರ ಕಂಡ ಬೆಳಗು’ ಎರಡೂ ಪುಸ್ತಕಗಳು ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾದವು. ‘ನಾಕುತಂತಿ-50’ರ ಕುರಿತು ಸಾಹಿತ್ಯ ಸಮ್ಮೇಳನದಲ್ಲಿ ಅವರೇ ಮಾತನಾಡಬೇಕು ಎನ್ನುವುದು ನಮ್ಮ ಆಸೆಯಾಗಿತ್ತು, ಆದರೆ ಆರೋಗ್ಯದ ಸಮಸ್ಯೆ ಅವರನ್ನು ಮಂಡ್ಯಕ್ಕೆ ಬರದಂತೆ ತಡೆಯಿತು. ‘ನಿಮ್ಮ ಮಾತುಗಳ ವಿಡಿಯೋ ಕಳುಹಿಸಿ’ ಎಂದು ವಿನಂತಿಸಿಕೊಂಡೆ. ಮಗನ ಸಹಾಯ…

Read More

ಕಾಸರಗೋಡು : ಎಡನೀರು ಮಠದಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ‘ಲಾಂಛನ’ ಮತ್ತು ‘ಆಮಂತ್ರಣ ಪತ್ರಿಕೆ’ ಬಿಡುಗಡೆ ಕಾರ್ಯಕ್ರಮವು ದಿನಾಂಕ 27 ಜನವರಿ 2025ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ “ಚುಟುಕು ಸಾಹಿತ್ಯ ಪ್ರಕಾರವು ಲಲಿತವಾಗಿ, ಪ್ರಾಸಬದ್ಧವಾಗಿ ಆಕರ್ಷಣೀಯ. ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಎಳೆಯ ಮಕ್ಕಳಲ್ಲಿ ಕನ್ನಡ ಸಾಹಿತ್ಯ ಪ್ರಜ್ಞೆಯನ್ನು ಅರಳಿಸುವುದು ಅಗತ್ಯ ಹಾಗೂ ಅನಿವಾರ್ಯ. ಈ ನಿಟ್ಟಿನಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಯೋಜನೆಗಳು ಯಶಸ್ವಿಯಾಗಲಿ. ಸಂಘಟನೆಯ ಕನ್ನಡ ಪರ ಸೇವೆಗೆ ಶ್ರೀಮಠದ ಸಹಕಾರವಿದೆ. ಸಾಹಿತ್ಯದಿಂದ ಸಂಸ್ಕಾರ ವೃದ್ಧಿಯಾಗುತ್ತದೆ. ಸಾಹಿತ್ಯದ ಸಂಪರ್ಕದಿಂದ ಬೆಳೆಯುವ ಮಕ್ಕಳ ಮನೋವಿಕಾರಗಳು ನಾಶವಾಗುತ್ತದೆ. ಬೆಳೆಯುವ ಮಕ್ಕಳಲ್ಲಿ ಸಾಹಿತ್ಯ ಅಧ್ಯಯನ ಹಾಗೂ ರಚನಾ ಕೌಶಲವನ್ನು ಪ್ರೇರೇಪಿಸಬೇಕು” ಎಂದು ಹೇಳಿದರು. ಈ ಸಂದರ್ಭದಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಸ್ಥಾಪಕ ಸಂಚಾಲಕರಾದ ಡಾ. ವಾಮನ್…

Read More

ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ‘ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ.)’ ಮತ್ತು ಸಂತ ಮದರ್ ತೆರೆಸಾ ವಿಚಾರ ವೇದಿಕೆ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಕೃತಿ ಲೋಕಾರ್ಪಣೆ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮವನ್ನು ದಿನಾಂಕ 02 ಫೆಬ್ರವರಿ 2025ರಂದು ಮಂಗಳೂರಿನ ಉರ್ವಸ್ಟೋರ್ ಅಶೋಕ ನಗರ ಕಚೇರಿ ಬಳಿಯಿರುವ ಸಾಹಿತ್ಯ ಸದನದಲ್ಲಿ ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮದಲ್ಲಿ ಲೇಖಕಿಯರಾದ ಬಿ.ಎಂ. ರೋಹಿಣಿ ಮತ್ತು ಮೋಲಿ ಮೀರಾಂದ ಇವರು ರಚಿಸಿರುವ ‘ಧರ್ಮ ಭಗಿನಿಯರು’ ಕೃತಿ ಲೋಕಾರ್ಪಣೆಗೊಳ್ಳಲಿದೆ. ‘ಮಹಿಳೆ ಮತ್ತು ಸನ್ಯಾಸ’ ಎಂಬ ವಿಷಯದ ಬಗ್ಗೆ ನಡೆಯಲಿರುವ ವಿಚಾರ ಸಂಕಿರಣದಲ್ಲಿ ಸಾರನಾಥ ಬೌದ್ಧ ವಿಹಾರದ ಮಾತಾಜಿ ಬಿಕ್ಕುಣಿ ಗೌತಮಿ, ಶ್ರವಣಬೆಳಗೊಳದ ಪ್ರಾಕೃತ ಭಾಷಾ ವಿದ್ವಾಂಸರಾದ ಡಾ. ಕುಸುಮಾ ಸಿ.ಪಿ., ಮಂಗಳೂರಿನ ಬೆಥನಿ ಕನ್ಯಾಮಠದ ಭಗಿನಿ ಅನ್ನಾಮರಿಯಾ ಮತ್ತು ಮಂಗಳೂರಿನ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಸಂಯೋಜಕರಾದ ಭಗಿನಿ ವಿಶ್ವೇಶ್ವರಿ ಇವರುಗಳು ವಿಷಯ ಮಂಡನೆ ಮಾಡಲಿದ್ದಾರೆ.

Read More

ಉಡುಪಿ : ಕೆಮ್ತೂರು ತುಳು ನಾಟಕ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 26 ಜನವರಿ 2025ರ ರವಿವಾರದಂದು ಉಡುಪಿಯ ಎಂ. ಜಿ. ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶಾಸಕ ಯಶ್ಪಾಲ್ ಸುವರ್ಣ, ನಗರಸಭೆ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿಯಾದ ಪೂರ್ಣಿಮಾ, ಉದ್ಯಮಿ ಪ್ರಸಾದ್‌ರಾಜ್ ಕಾಂಚನ್, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಪ್ರಥಮ ಅತ್ಯುತ್ತಮ ನಾಟಕ ಪ್ರಶಸ್ತಿ ವಿಜೇತ ಸುಮನಸಾ ಕೊಡವೂರು ತಂಡದ ‘ಈದಿ’ ನಾಟಕ ಸೇರಿದಂತೆ ವಿವಿಧ ವೈಯಕ್ತಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ರಂಗ ಕಲಾವಿದ ಭಾಸ್ಕರ ಮಣಿಪಾಲ ಅವರಿಗೆ ರಂಗ ಸನ್ಮಾನ ನೆರವೇರಿಸಲಾಯಿತು. ತೀರ್ಪುಗಾರರಾದ ಗಣನಾಥ ಎಕ್ಕಾರು, ಡಾ. ಸುಕನ್ಯಾ ಮೇರಿ ಇವರನ್ನು ಗೌರವಿಸಲಾಯಿತು.ವೇದಿಕೆಯಲ್ಲಿ ಉದ್ಯಮಿ ಯು. ವಿಶ್ವನಾಥ ಶೆಣೈ, ಕೆಮ್ತೂರು ದೊಡ್ಡಣ ಶೆಟ್ಟಿ ಕುಟುಂಬದ ವಿಜಯಕುಮಾ‌ರ್ ಶೆಟ್ಟಿ ಉಪಸ್ಥಿತರಿದ್ದರು. ನಾಟಕ ಹಬ್ಬದ ಸಂಚಾಲಕ ಬಿ. ಪ್ರಭಾಕರ ಭಂಡಾರಿ…

Read More

ಸಾಗರ : ಸಾಗರದ ಪರಸ್ಪರ ಸಾಹಿತ್ಯ ವೇದಿಕೆ ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 26 ಜನವರಿ 2025ರ ಭಾನುವಾರದಂದು ಸಾಗರದ ಬಿ. ಹೆಚ್. ರಸ್ತೆಯಲ್ಲಿರುವ ಪವಿತ್ರಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ರೆವರೆಂಡ್ ಎಫ್. ಕಿಟೆಲ್ ಪ್ರಶಸ್ತಿ ಸ್ವೀಕರಿಸಿದ ಚಿಂತಕ ಪ್ರೊ. ಎಸ್. ಜಿ. ಸಿದ್ದರಾಮಯ್ಯ ಮಾತನಾಡಿ “ಕಿಟೆಲ್ ಅವರನ್ನು ಕ್ರೈಸ್ತ ಧರ್ಮಿಯನ್ನಾಗಿ ನೋಡದಿರಿ, ಅವರೊಬ್ಬ ಮಾನವತಾವಾದಿ. ಕನ್ನಡಕ್ಕೆ ಅವರು ನೀಡಿದ ನಿಘಂಟು ಸಾರ್ವಕಾಲಿಕ ಬಹುದೊಡ್ಡ ಕೊಡುಗೆ. ಕಿಟೆಲ್ ಅವರು ನಡೆದಾಡುವ ವಿಶ್ವಕೋಶದಂತಿದ್ದರು. ತಂತ್ರಜ್ಞಾನ ಇಲ್ಲದ ಸಂದರ್ಭದಲ್ಲಿ 70 ಸಾವಿರ ಕನ್ನಡ ಪದಗಳಿಗೆ ನಿಘಂಟಿನ ಮೂಲಕ ಅರ್ಥ ನೀಡುವ ಮಹಾನ್ ಕೆಲಸ ಮಾಡಿದ್ದಾರೆ. ಕನ್ನಡದ ಮೇಲೆ ಕಿಟೆಲ್ ಅವರಿಗಿದ್ದ ಶ್ರದ್ದೆ ಹಾಗೂ ಅವರು ಪ್ರಕಟಿಸಿದ ಸಂಶೋಧನಾ ಗ್ರಂಥಗಳು ಅಪರೂಪದವು. 1875ರಲ್ಲಿ ಲಿಂಗಾಯತ ಧರ್ಮದ ಮೇಲೂ ಕೂಡ ಕರಾರುವಕ್ಕಾದ ಲೇಖನಗಳನ್ನು ಅವರು ಕಟ್ಟಿಕೊಟ್ಟಿದ್ದಾರೆ. ಕಿಟೆಲ್ ಅವರು ಕನ್ನಡಕ್ಕೆ ಕೊಟ್ಟ ಕೊಡುಗೆ ಅಪಾರ” ಎಂದರು. ಸಂತ ಶಿಶುನಾಳ ಶರೀಫ ಪ್ರಶಸ್ತಿ ಸ್ವೀಕರಿಸಿದ ತುಮಕೂರಿನ…

Read More

ಮಂಗಳೂರು : ಸುರತ್ಕಲ್ ಗೋವಿಂದದಾಸ ಕಾಲೇಜ್‌ನಲ್ಲಿ ‘ಯಕ್ಷ ದ್ಯುತಿ’ ಅಭಿನಂದನಾ ಸಮಿತಿ ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಆಶ್ರಯದಲ್ಲಿ ನಡೆದ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತೆ ಪೂರ್ಣಿಮಾ ಯತೀಶ್ ರೈಯವರ 35 ವರುಷಗಳ ಯಕ್ಷಯಾನದ ಸಂಭ್ರಮ ‘ಯಕ್ಷದ್ಯುತಿ’ ಕಾರ್ಯಕ್ರಮವು ದಿನಾಂಕ 12 ಜನವರಿ 2025 ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಗುರುದೇವದತ್ತ ಸಂಸ್ಥಾನಮ್ ಒಡಿಯೂರು ಕ್ಷೇತ್ರದ ಶ್ರೀಗುರುದೇವಾನಂದ ಸ್ವಾಮಿಜಿ ಮಾತನಾಡಿ “ಯಕ್ಷಗಾನ ದಕ್ಷಿಣ ಕನ್ನಡ ಜಿಲ್ಲೆಯ ಗಂಡುಕಲೆ. ಆದರೆ ಈಗ ಮಹಿಳೆಯರೂ ಯಕ್ಷಗಾನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಯಕ್ಷಗಾನವನ್ನು ಇನ್ನಷ್ಟು ಶ್ರೀಮಂತಗೊಳಿಸಿದ್ದಾರೆ. ಯಕ್ಷಗಾನದ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸ ನಡೆಯಬೇಕಾಗಿದೆ. ಯಕ್ಷಗಾನದಿಂದ ಸಂಸ್ಕೃತಿ ಆಚಾರ, ವಿಚಾರಗಳನ್ನು ತಿಳಿಯಬಹುದಾಗಿದೆ” ಎಂದರು. ಸಮಾರಂಭದಲ್ಲಿ ಹರಿನಾರಾಯಣದಾಸ ಅಸ್ರಣ್ಣ, ನಾಗೇಂದ್ರ ಭಾರದ್ವಾಜ್, ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಭುಜಬಲಿ ಧರ್ಮಸ್ಥಳ, ಪಟ್ಲ ಸತೀಶ್ ಶೆಟ್ಟಿ, ಶ್ರೀಪತಿ ಭಟ್ ಮೂಡಬಿದ್ರೆ, ಸುಧಾಕರ ಪೂಂಜ, ಉಲ್ಲಾಸ್ ಶೆಟ್ಟಿ…

Read More

ಕುತ್ತಾರು : ಉಳ್ಳಾಲದ ‘ಮಂತ್ರ ನಾಟ್ಯಕಲಾ ಗುರುಕುಲ’ದ 12ನೇ ವರ್ಷದ ಗುರುಕುಲ ಉತ್ಸವದಲ್ಲಿ “ಯಕ್ಷ ಮಂತ್ರ್ಯಕ” ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 14 ಜನವರಿ 2025 ರಂದು ಶ್ರೀ ರಾಜ ರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಮಾತನಾಡಿ “ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಹೊಣೆಗಾರಿಕೆ ಉಳ್ಳವನೇ ನಿಜವಾದ ಗುರು. ಭರತನಾಟ್ಯ, ಯಕ್ಷಗಾನದಂತಹ ಕಲೆಗಳು ಗುರು ಪರಂಪರೆಯಿಂದ ಬಂದಂತವು, ಸ್ವಸ್ಥ ಸಮಾಜದ ನಿರ್ಮಾಣ ಗುರುವಿನಿಂದಲೇ ಸಾಧ್ಯ” ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಗಣೇಶ್ ಶೆಣೈ ಮಾತನಾಡಿ “ಮಂತ್ರ ನಾಟ್ಯಕಲಾ ಗುರುಕುಲವು ಮಕ್ಕಳಲ್ಲಿ ಸಂಸ್ಕಾರವನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದೆ” ಎಂದರು. ಕುತ್ತಾರು ಶ್ರೀ ರಾಜ ರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ಅಧ್ಯಕ್ಷರಾದ ಶ್ರೀ ರಾಜೇಶ್ ಅತ್ತಾವರ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀ ಸೋಮನಾಥ ದೇವಸ್ಥಾನ ಸೋಮೇಶ್ವರ ಇದರ ಮಾಜಿ ಮುಕ್ತೇಸರರಾದ ಶ್ರೀ ಪವಿತ್ರ ಕುಮಾರ್ ಗಟ್ಟಿ, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ…

Read More

ರಂಗ ಕರ್ಮಿ ಮ್ಯಾಥ್ಯೂ ಸುರಾನಿ ಅವರ ಸುರಾನಿಯ ನಿವಾಸದ ಆವರಣದಲ್ಲಿ ದಿನಾಂಕ 24 ಜನವರಿ 2025ರ ಸಂಜೆ ಅಡುಗೆಯ ಘಮ ಘಮ ಮತ್ತು ಅಡುಗೆಯದ್ದೇ ಮಾತುಗಳು !! ಇದನ್ನು ಆಸ್ವಾದಿಸಲು ಮತ್ತು ಮಾತುಗಳನ್ನು ಕೇಳಿಸಿಕೊಳ್ಳಲು ರಂಗಾಸಕ್ತರು ಮತ್ತು ಗ್ರಾಮಸ್ಥರು ಕುತೂಹಲದಿಂದ ಬಂದು ಸೇರಿದ್ದರು. ಇದೇನು ಅಡುಗೆ ಮಾತಿರಬಹುದು ಎಂದು ಆಗಮಿಸಿದ್ದ ರಂಗಾಸಕ್ತರಿಗೆ ನಿರಾಶೆಯಂತೂ ಖಂಡಿತಾ ಆಗಲಿಲ್ಲ. ಏಕೆಂದರೆ ಅಡುಗೆ ಮನೆಯಲ್ಲಿ ಹೆಣ್ಣೊಬ್ಬಳು ಅಡುಗೆ ಮಾಡುವಾಗ ಪಡುವ ಪಡಿಪಾಟಲುಗಳು ಅನಾವರಣಗೊಂಡಿದ್ದು ಮಾತ್ರವಲ್ಲ, ಅಡುಗೆ ಮಾಡಿ ಬಳಸುವುದರಲ್ಲಿಯೇ ಸುಖ ಕಾಣುವ ಅವಳ ಸಹನಾಶೀಲ ಗುಣವೂ ಅಭಿವ್ಯಕ್ತವಾಯಿತು. ಲಕ್ಷಾಧೀಶ್ವರ, ಕೋಟ್ಯಾಧೀಶರಾದರೂ ಬದುಕಲು ಹಣ ತಿನ್ನಲಾಗುತ್ತದೆಯೇ ?? ಹಸಿವ ನೀಗಿಸಿಕೊಳ್ಳಲು ಅಡುಗೆ ಮಾಡಲೇಬೇಕು. ಈ ಅಡುಗೆ ತಯಾರಿಗೆ ಬೇಕಲ್ಲವೆ ಅಕ್ಕಿ, ಜೋಳ, ರಾಗಿ, ಧಾನ್ಯಗಳು, ತರಕಾರಿಗಳು. ಇದೇನು ಯಾವುದಾದರೂ ಕಾರ್ಖಾನೆಯಲ್ಲಿ ತಯಾರಾಗಿ ಬರುತ್ತವೆಯೇ?! ಅಡುಗೆಗೆ ಪದಾರ್ಥಗಳು ಬರುವುದೇ ರೈತರಿಂದ ತಾನೆ ? ಅಂದ ಹಾಗೆ ಎಲ್ಲರ ಹಸಿವ ನೀಗಿಸುವ ಈ ರೈತ ಸುಖವಾಗಿದ್ದಾನೆಯೇ ?? ಇದೆಲ್ಲವನ್ನೂ ಪ್ರಸಿದ್ದ…

Read More