Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಸಾಹಿತ್ಯಾಸಕ್ತರಿಗಾಗಿ ರಾಷ್ಟ್ರೋತ್ಥಾನ ಸಾಹಿತ್ಯವು ‘ಕನ್ನಡ ಪುಸ್ತಕ ಹಬ್ಬ’ದ 5ನೇ ಆವೃತ್ತಿಯು ಕೆಂಪೇಗೌಡ ನಗರದ `ಕೇಶವಶಿಲ್ಪ’ ಸಭಾಂಗಣದಲ್ಲಿ ದಿನಾಂಕ 01 ನವೆಂಬರ್ 2025ರಿಂದ 07 ಡಿಸೆಂಬರ್ 2025ರವರೆಗೆ 37 ದಿನಗಳ ಕಾಲ ನಡೆಯಲಿದೆ ಎಂದು ರಾಷ್ಟ್ರೋತ್ಥಾನ ಸಾಹಿತ್ಯದ ವಿಶ್ವಸ್ಥ ಕೆ.ಎಸ್. ನಾರಾಯಣ್ ತಿಳಿಸಿದ್ದಾರೆ. ದಿನಾಂಕ 01 ನವೆಂಬರ್ 2025ರಂದು ಬೆಳಗ್ಗೆ 11-00 ಗಂಟೆಗೆ ಮೈಸೂರು ರಾಜವಂಶಸ್ಥರು, ಕೊಡಗು-ಮೈಸೂರು ಕ್ಷೇತ್ರದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪುಸ್ತಕ ಹಬ್ಬವನ್ನು ಉದ್ಘಾಟಿಸಲಿದ್ದಾರೆ. ಈ ಬಾರಿಯ 37 ದಿನಗಳ ಪ್ರತಿದಿನ ಬೆಳಗ್ಗೆ 10-00 ಗಂಟೆಯಿಂದ ರಾತ್ರಿ 9-00 ಗಂಟೆವರೆಗೆ ನಡೆಯುವ ಪುಸ್ತಕ ಹಬ್ಬದಲ್ಲಿ ರಾಷ್ಟ್ರೋತ್ಥಾನ ಪ್ರಕಾಶನದ ಪುಸ್ತಕಗಳು ಮಾತ್ರವಲ್ಲದೇ, ಬೇರೆ ಬೇರೆ ಪ್ರಕಾಶಕರ ಪ್ರಮುಖ ಸಾಹಿತಿ-ಲೇಖಕರ ಪುಸ್ತಕಗಳು 10%ರಿಂದ 50% ವರೆಗಿನ ರಿಯಾಯಿತಿಯಲ್ಲಿ ದೊರೆಯಲಿವೆ. ಪ್ರತಿದಿನ ಸಂಜೆ ಸಂಗೀತ, ನೃತ್ಯ, ಜಾನಪದ, ಏಕವ್ಯಕ್ತಿ ತಾಳಮದ್ದಲೆ, ಯಕ್ಷಗಾನ, ಹಾಸ್ಯ, ಮ್ಯಾಜಿಕ್, ವಿವಿಧ ವಾದ್ಯಗೋಷ್ಠಿಗಳು, ಹರಿಕಥೆ, ಗಮಕ, ನಾಟಕ, ಅಷ್ಟಾವಧಾನ, ತಾಳವಾದ್ಯ ಕಚೇರಿ ಹೀಗೆ ವಿವಿಧ…
ಮಂಗಳೂರು : ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದು ಅಮೃತ ಪ್ರಕಾಶ ಪತ್ರಿಕೆಯ ಸರಣಿ ಕೃತಿ 45ನೇಯ ಕೃತಿ ಕೊಡಗಿನ ಚಿತ್ರಶಿಲ್ಪ ಕಲಾವಿದ ಬಿ.ಕೆ. ಗಣೇಶ್ ರೈ ಇವರ ಸಾಹಿತ್ಯ ಮತ್ತು ಡಿಜಿಟಲ್ ಗ್ರಾಫಿಕ್ ನ ಪರಿಕಲ್ಪನೆ ಮತ್ತು ವಿನ್ಯಾಸದಲ್ಲಿ ಮೂಡಿ ಬಂದಿರುವ ಕೊಡಗಿನ ಕುಲದೇವತೆ ಕಾವೇರಿ ಎಂಬ ಕೃತಿಯು ಮಂಗಳೂರಿನ ಪತ್ರಿಕಾ ಭವನದಲ್ಲಿ ದಿನಾಂಕ 27 ಅಕ್ಟೋಬರ್ 2025ರಂದು ಬಿಡುಗಡೆಗೊಂಡಿತು. ಮಂಗಳೂರಿನ ಕೊಡವ ಸಮಾಜದ ಉಪಾಧ್ಯಕ್ಷೆ ಬೊಳ್ಳಿಯಾಂಡ ಕೃತಿ ಸೋಮಯ್ಯ ಇವರು ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿ “ಕಾವೇರಿ ಮಾತೆಯ ಆದಿಯನ್ನು ವಿವರಣೆ ಮತ್ತು ವರ್ಣಚಿತ್ರದ ಮೂಲಕ ಕಣ್ಣಿಗೆ ಬಿ.ಕೆ. ಗಣೇಶ್ ರೈಯವರು ಕಟ್ಟಿಕೊಟ್ಟಿದ್ದಾರೆ. ಹೆಚ್ಚಿನ ಎಲ್ಲರಿಗೂ ಕಾವೇರಿ ಮಾತೆಯ ಪುರಾಣ ಕಥೆಗಳ ಪರಿಚಯ ಇರುವುದಿಲ್ಲ. ಈ ಕೃತಿಯ ಓದುಗರ ಮೂಲಕ ಕಥೆಯ ಸಾಕ್ಷಾತ್ಕಾರವಾಗಲಿದೆ” ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಅರೇಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ…
ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಯ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ದಿನಾಂಕ 26 ಅಕ್ಟೋಬರ್ 2025ರಂದು ಸದಸ್ಯ ಸಮಾವೇಶ ಜರಗಿತು. ಈ ಸಮಾವೇಶದ ಉದ್ಘಾಟನೆ ಆಶೀರ್ಚವನವನ್ನು ನೆರವೇರಿಸಿದ ಒಡಿಯೂರು ಶ್ರೀಗಳು “ಇದು ಸಿರಿಬಾಗಿಲು ಮಾತ್ರವಲ್ಲ ಧರ್ಮ ಸಂಸ್ಕೃತಿಗೆ ಹೆಬ್ಬಾಗಿಲು. ಆರಾಧನಾ ಕಲೆಯಾದ ಯಕ್ಷಗಾನವನ್ನು ಇಂದು ವಿದ್ವಾಂಸರುಗಳು ಸೇರಿ ಅದರ ಸಿರಿವಂತಿಕೆಯನ್ನು ಹೆಚ್ಚಿಸಿದ್ದಾರೆ. ನವರಸ ಕಲೆ ಎಂದೇ ಹೇಳಬಲ್ಲ ಯಕ್ಷಗಾನದಲ್ಲಿ ಭಾವ -ಭಾಷಾಶುದ್ದಿಗೆ ಆದ್ಯತೆ ಹಾಗೂ ಸಮಾಜಕ್ಕೆ ಪುರಾಣ ಕಥೆಗಳ ಪರಿಚಯವು ಉಂಟಾಗುತ್ತದೆ. ಪ್ರತಿಯೊಬ್ಬರ ಬದುಕಿಗೆ ಪ್ರತಿ ಪ್ರಸಂಗದಲ್ಲಿ ಬರುವ ಸಂದೇಶಗಳು ಮಾರ್ಗದರ್ಶನವಾಗುತ್ತದೆ. ಒಬ್ಬ ವ್ಯಕ್ತಿಯ ನಿಸ್ವಾರ್ಥ ಸೇವೆಗೆ ದಾನಿಗಳ ಸಹಕಾರ ಸಿಗುತ್ತದೆ ಎಂಬುದಕ್ಕೆ ಪ್ರತಿಷ್ಠಾನ ಮುಖೇನ ಸಿರಿಬಾಗಿಲು ಮಯ್ಯರು ಅವರು ನಡೆಸುವ ಯಶಸ್ವಿ ಚಟುವಟಿಕೆ ಉದಾಹರಣೆ. ಯಕ್ಷಗಾನ ಕಲೆ ಅದರ ಶ್ರೇಷ್ಠತೆ ಅದನ್ನು ಉಳಿಸುವಲ್ಲಿ ಮಯ್ಯರು ಹಾಗೂ ಮನೆಯವರ, ಸದಸ್ಯರ ಶತ ಪ್ರಯತ್ನ ಮೆಚ್ಚುವಂತದ್ದು” ಎಂದರು. ಅಧ್ಯಕ್ಷತೆ ವಹಿಸಿದ ಪ್ರತಿಷ್ಠಾನದ ಅಧ್ಯಕ್ಷರಾದ ರಾಮಕೃಷ್ಣ ಮಯ್ಯರವರು ಪ್ರತಿಷ್ಠಾನದ ಇದುವರೆಗಿನ ಚಟುವಟಿಕೆ, ಮುಂದಿನ ಹಲವು…
ಮೈಸೂರು : ಸಮುದಾಯ ಮೈಸೂರು ರಂಗೋತ್ಸವವನ್ನು ದಿನಾಂಕ 31 ಅಕ್ಟೋಬರ್, 01 ಮತ್ತು 02 ನವೆಂಬರ್ 2025ರಂದು ಮೈಸೂರು ಕಲಾ ಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಚಿತ್ರಕಲಾ ರಚನಾ ಕಮ್ಮಟ, ರಂಗ ಗೀತೆಗಳು, ಬೀದಿ ನಾಟಕಗಳು, ರಂಗ ಪ್ರಸ್ತುತಿಗಳು, ರಂಗ ಗೌರವ, ವಿಚಾರ ಸಂಕಿರಣಗಳು ನಡೆಯಲಿದೆ. ದಿನಾಂಕ 31 ಅಕ್ಟೋಬರ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಮನುಷ್ಯತ್ವದೆಡೆಗೆ ಸಮುದಾಯ ಕಲಾ ಶಿಬಿರದ ಉದ್ಘಾಟನೆಯನ್ನು ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷರಾದ ಡಾ. ಎಮ್.ಎಸ್. ಮೂರ್ತಿ ಇವರು ನೆರವೇರಿಸಲಿದ್ದಾರೆ. ಸಂಜೆ 5-00 ಗಂಟೆಗೆ ದೇವಾನಂದ ವರಪ್ರಸಾದ್ ಮತ್ತು ತಂಡದವರಿಂದ ಜನಪದ – ಜನಪರ ಗೀತ ಗಾಯನ ಪ್ರಸ್ತುತಿ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷರಾದ ಡಾ. ಕೆ. ಮರುಳಸಿದ್ಧಪ್ಪ ಇವರು ಉದ್ಘಾಟನೆ ಮಾಡಲಿದ್ದು, ಹೆಚ್. ಜನಾರ್ದನ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಶ್ರೀಮತಿ ರಾಮೇಶ್ವರಿ ವರ್ಮ, ಅಬ್ದುಲ್ ರೆಹಮಾನ್ ಪಾಷ, ರವೀಶ್ ಮತ್ತು ಪ್ರಕಾಶ್ ಶೆಣೈ ಇವರಿಗೆ ರಂಗ ಗೌರವ,…
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹೊಸದಾಗಿ ಸ್ಥಾಪಿತವಾಗಿರುವ “ಸಂತ ಶಿಶುನಾಳ ಶರೀಫ ಮತ್ತು ಅವರ ಗುರುಗಳಾದ ಕಳಸದ ಗೋವಿಂದ ಭಟ್ಟರ ದತ್ತಿ” ಪುರಸ್ಕಾರಕ್ಕೆ ಯಜಮಾನ್ ಎಂಟರ್ ಪ್ರೈಸಸ್-ಶ್ರೀಹರಿ ಖೋಡೆಯವರನ್ನು ಆಯ್ಕೆ ಮಾಡಲಾಗಿದೆ. ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗೆ ಸಮ್ಮೇಳನಾಧ್ಯಕ್ಷರಾದ ಡಾ. ದೊಡ್ಡರಂಗೇಗೌಡರ ಹೆಸರಿನಲ್ಲಿ ಒಂದು ದತ್ತಿ ಮತ್ತು ಜಾತಿಮತಗಳ ಮೀರಿ ಭಾವೈಕ್ಯತೆಯನ್ನು ಸಾರಿದ ಸಂತ ಶಿಶುನಾಳ ಶರೀಫರ ಗುದ್ದುಗೆ ಹಾವೇರಿ ಜಿಲ್ಲೆಯಲ್ಲಿಯೇ ಇರುವುದರಿಂದ ಸಂತ ಶಶಿನಾಳ ಶರೀಫರು ಮತ್ತು ಅವರ ಗುರುಗಳಾದ ಗುರು ಗೋವಿಂದ ಭಟ್ಟರನ್ನು ಜೊತೆಯಾಗಿ ನೆನಪಿಸಿಕೊಳ್ಳುವ ವಾಡಿಕೆಯ ಜೊತೆಗೆ ಅದೊಂದು ಪರಂಪರೆ ಕೂಡ ಆಗಿರುವುದರಿಂದ “ಸಂತ ಶಿಶುನಾಳ ಶರೀಫ ಮತ್ತು ಅವರ ಗುರುಗಳಾದ ಕಳಸದ ಗೋವಿಂದ ಭಟ್ಟರ ದತ್ತಿ” ಪ್ರಶಸ್ತಿಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ‘ಯಜಮಾನ್’ ಎಂದೇ ಪ್ರಖ್ಯಾತರಾದ ಶ್ರೀಹರಿ ಖೋಡೆ ಮತ್ತು ‘ಯಜಮಾನ್ ಎಂಟರ್ ಪ್ರೈಸಸ್’ ಎರಡನ್ನು ಪ್ರತ್ಯೇಕವಾಗಿ ನೋಡುವುದೇ ಅಸಾಧ್ಯ. ದೇಶ-ವಿದೇಶಗಳಲ್ಲಿ ಮನ್ನಣೆ ಪಡೆದ ಉದ್ಯಮಿಯಾದ ಶ್ರೀಹರಿ ಖೋಡೆ…
ಉಡುಪಿ ಕುಕ್ಕಿಕಟ್ಟೆಯ ಉಪಾಧ್ಯಾಯ ಕುಟುಂಬದ ನೃತ್ಯಾಂಗನೆ ‘ಭಾವ-ಯೋಗ-ನೃತ್ಯ’ ತಂಡದ ಅನಲಾ ಉಪಾಧ್ಯಾಯ ಎಂಬ ಕಲಾವಿದೆ, ವಿವಾಹದ ಬಳಿಕ, ಚೆನ್ನೈಯಲ್ಲಿ ನೆಲೆಸಿದ್ದು, ನೃತ್ಯಕಲಿಕೆಯನ್ನು ಮುಂದುವರಿಸುತ್ತಾ, ಚೆನ್ನೈಯ ನೃತ್ಯ ಪ್ರದರ್ಶನಗಳನ್ನು ಕಂಡು ಪ್ರಭಾವಿತಳಾಗಿ, ತಾನು ಕುಣಿದು ನಲಿದ ತನ್ನ ತವರಿನಲ್ಲಿ, ಚೆನ್ನೈ ಮಾದರಿಯಲ್ಲಿ ಒಂದು ಚಿಕ್ಕದಾದ, ಪರಂಪರೆಯ ನೃತ್ಯ ಉತ್ಸವ ತಾನು ನಡೆಸಬೇಕೆಂಬ ಆಶಯದಿಂದ, ಊರಪರವೂರಿನ ಹಿರಿಕಿರಿಯ ಕಲಾವಿದರನ್ನು ಒಟ್ಟುಗೂಡಿಸಿ, ಅವಕಾಶ ನೀಡಿ ‘ನೃತ್ಯಮಾರ್ಗಂ’ ಮೂಲಕ ಮೋಕ್ಷವನ್ನು ಸಂಪಾದಿಸೋಣ ಎಂಬ ಪರಿಕಲ್ಪನೆಯಿಂದ, ಇತ್ತೀಚೆಗೆ ಉಡುಪಿಯ ಐವೈಸಿ ಕಲಾರಂಗದ ಸಭಾಂಗಣದಲ್ಲಿ ಕೆಲವು ಹಿರಿಯ ಕಲಾವಿದರೊಂದಿಗೆ ತಾನೂ ನರ್ತಿಸಿ ಈ ಉತ್ಸವಕ್ಕೆ ನಾಂದಿ ಹಾಡಿ, ರಸಿಕರ ಅಪಾರ ಮೆಚ್ಚುಗೆ ಗಳಿಸುವಲ್ಲಿ ಸಫಲರಾದರು. ಸರಳವಾಗಿ ತನ್ನ ತಂದೆಯವರಿಂದಲೇ ದೀಪ ಬೆಳಗಿಸಿ ಉದ್ಘಾಟಿಸಲ್ಪಟ್ಟ ಈ ಉತ್ಸವವು, ಸುಮಾರು 2 ಗಂಟೆಗಳ ಕಾಲ ಸೊಗಸಾಗಿ ಪ್ರದರ್ಶಿಸಲ್ಪಟ್ಟಿತು. ಮೊದಲ ಭಾಗದಲ್ಲಿ ಹಿರಿಯ ನೃತ್ಯಗುರುಗಳಾದ ಮಂಗಳೂರಿನ ವಿದುಷಿ ರಾಧಿಕಾ ಶೆಟ್ಟಿಯವರ ಅಷ್ಟಪದಿ, ಪುತ್ತೂರಿನ ನೃತ್ಯ ದಂಪತಿಗಳಾದ ವಿದ್ವಾನ್ ದೀಪಕ್ ಹಾಗೂ ವಿದುಷಿ ಪ್ರೀತಿಕಲಾರವರ ಹಿಂದಿ…
ಮಂಗಳೂರು : ಸುರತ್ಕಲ್ನ ಮಣಿ ಕೃಷ್ಣಸ್ವಾಮಿ ಅಕಾಡೆಮಿ ವತಿಯಿಂದ 2024-25ನೇ ಸಾಲಿನ ಪ್ರಶಸ್ತಿಗೆ ಐವರು ಆಯ್ಕೆಯಾಗಿದ್ದಾರೆ. ಆತ್ರೇಯಿ ಕೃಷ್ಣ ಕಾರ್ಕಳ ಇವರು ‘ಯುವ ಕಲಾಮಣಿ’, ದಿವ್ಯಶ್ರೀ ಮಣಿಪಾಲ ಇವರು ‘ಮಣಿ ಮತ್ತು ಎಂ.ಕೆ. ವಾರ್ಷಿಕ ಪ್ರಶಸ್ತಿ’, ವಿದ್ವಾನ್ ವಿಠಲ ರಾಮ ಮೂರ್ತಿ ಇವರು ‘ಲಲಿತ ಕಲಾ ಪೋಷಕ ಮಣಿ ಪ್ರಶಸ್ತಿ’, ಉಮಾ ಉದಯ ಶಂಕರ್ ಪರ್ಕಳ ಇವರು ‘ಎ.ಈಶ್ವರಯ್ಯ ಸ್ಮಾರಕ ಪ್ರಶಸ್ತಿ’, ಜೇನುಮೂಲೆ ಕೃಷ್ಣ ಭಟ್ ಇವರು ‘ಹಿರಿಯ ಸಾಧಕ ಸನ್ಮಾನ’ಕ್ಕೆ ಆಯ್ಕೆಯಾಗಿದ್ದು, ಇವರುಗಳಿಗೆ ದಿನಾಂಕ 13ರಿಂದ 20 ಡಿಸೆಂಬರ್ 2025ರ ತನಕ ನಡೆಯುವ ‘ರಾಗ ಸುಧಾರಸ ಸಂಗೀತೋತ್ಸವ’ ಸಂದರ್ಭ ಪ್ರಶಸ್ತಿ ವಿತರಿಸಲಾಗುವುದು ಎಂದು ಮಣಿ ಕೃಷ್ಣಸ್ವಾಮಿ ಆಕಾಡೆಮಿಯ ಕಾರ್ಯದರ್ಶಿಯಾದ ನಿತ್ಯಾನಂದ ರಾವ್ ತಿಳಿಸಿದ್ದಾರೆ.
ಯಡಾಡಿ, ಮತ್ಯಾಡಿ: ಕೊಮೆ ತೆಕ್ಕಟ್ಟೆಯ ಯಶಸ್ವೀ ಕಲಾವೃಂದ ಆಯೋಜಿಸಿದ ಪ್ರಸಂಗ- ಪ್ರಯೋಗ – ಪ್ರಾತ್ಯಕ್ಷಿಕೆ’ ಕಾರ್ಯಕ್ರಮವು 25 ಅಕ್ಟೋಬರ್ 2025ರಂದು ಮೊರಾರ್ಜಿ ದೇಸಾಯಿ ರೆಸಿಡೆನ್ಷಿಯಲ್ ಸ್ಕೂಲ್ ಯಡಾಡಿ, ಮತ್ಯಾಡಿ ಇಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ದೀವಟಿಕೆ ಬೆಳಗುವ ಮೂಲಕ ಚಾಲನೆ ನೀಡಿದ ಮೊರಾರ್ಜಿ ದೇಸಾಯಿ ರೆಸಿಡೆನ್ಷಿಯಲ್ ಸ್ಕೂಲಿನ ಪ್ರಾಂಶುಪಾಲರಾದ ಶ್ರೀಮತಿ ಶೈಲಾ ಎಮ್. ಶೇಟ್ ಮಾತನಾಡಿ “ಸರಕಾರಿ ವ್ಯವಸ್ಥೆಯ ವಸತಿ ನೆಲೆಯಲ್ಲಿನ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಯಕ್ಷಗಾನದ ಮೂಲ ಸ್ವರೂಪವನ್ನು ಬಿತ್ತರಿಸುವ ಕಾರ್ಯ ಅತ್ಯಮೂಲ್ಯವಾದದ್ದು. ದಿನವಿಡೀ ಓದು ಹಾಗೂ ಇನ್ನಿತರ ಚಟುವಟಿಕೆಯಲ್ಲಿ ನಿರತರಾದ ಮಕ್ಕಳಿಗೆ ಮಕ್ಕಳಿಂದಲೇ ಯಕ್ಷಗಾನದ ಪರಂಪರೆಯನ್ನು ತಿಳಿಸುವ ಪ್ರಯತ್ನ ಯಶಸ್ಸು ಪಡೆಯುತ್ತದೆ. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಯತ್ನ ಮಾನಿತವಾದದ್ದು. ಇಂತಹ ಮಾನಿತವಾದ ಸದ್ಗುಣವನ್ನು ಸರ್ವರೂ ಬೆಳೆಸಿಕೊಳ್ಳಬೇಕು” ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಪನ್ಯಾಸಕ ಶಂಕರನಾರಾಯಣ ಉಪಾಧ್ಯಾಯ ಮಾತನಾಡಿ “ರಂಗದಲ್ಲಿ ಕಳೆದು ಹೋದ ಯಕ್ಷಗಾನದ ಯುದ್ಧ ಕುಣಿತ, ಪ್ರಯಾಣ ಕುಣಿತ, ಕಿರಾತನ ಒಡ್ಡೋಲಗವನ್ನು ಬಳಸಿಕೊಂಡು ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸುವ ಬಗೆಯನ್ನು…
ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ ) ಮತ್ತು ಸುರತ್ಕಲ್ ನ ನಾಗರಿಕ ಸಲಹಾ ಸಮಿತಿ(ರಿ ) ಸಹಭಾಗಿತ್ವದಲ್ಲಿ ಉದಯ ರಾಗ- 62 ಕಾರ್ಯಕ್ರಮ ಸುರತ್ಕಲ್ ನ ಅನುಪಲ್ಲವಿಯ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ದಿನಾಂಕ 26 ಅಕ್ಟೋಬರ್ 2025ರಂದು ನಡೆಯಿತು. ದೀಪಾವಳಿ ವಿಶೇಷವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರಿನ ಭರತಾಂಜಲಿ (ರಿ ) ಸಂಸ್ಥೆಯ ಸ್ಥಾಪಕ ಹಾಗೂ ಗುರು ಶ್ರೀಧರ ಹೊಳ್ಳ ಮಾತನಾಡಿ “ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣದಲ್ಲಿ ಶಾಸ್ತ್ರೀಯ ಸಂಗೀತ ಮಹತ್ತರ ಪಾತ್ರವನ್ನು ನಿರ್ವಹಿಸುತ್ತದೆ. ಭಾವಪೂರ್ಣವಾಗಿ ಹಾಡಿದಾಗ ಸಂಗೀತದ ಅನುಸಂಧಾನ ಸಾಧ್ಯವಾಗುತ್ತದೆ” ಎಂದು ನುಡಿದರು. ಕಾರ್ಯಕ್ರಮದಲ್ಲಿ ಗಣೇಶ್ ಐತಾಳ್, ಕೃಷ್ಣಾಪುರ ಹಾಡುಗಾರಿಕೆ ಸಂಗೀತ ಕಛೇರಿ ನಡೆಸಿದರು. ಇವರಿಗೆ ಕೊಳಲಿನಲ್ಲಿ ಪ್ರಣವ್ ಅಡಿಗ ಉಡುಪಿ ಮತ್ತು ತಬಲಾದಲ್ಲಿ ಕಾರ್ತಿಕ್ ಭಟ್ ಇನ್ನಂಜೆ ಸಹಕರಿಸಿದರು. ಹಿರಿಯ ಯಕ್ಷಗಾನ ಭಾಗವತ ವೆಂಕಟರಮಣ ಐತಾಳ್ ಕೃಷ್ಣಾಪುರ ಹಾಗೂ ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷ. ಕೆ. ರಾಜಮೋಹನ್ ರಾವ್ ಉಪಸ್ಥಿತರಿದ್ದರು. ಸುರತ್ಕಲ್ ರೋಟರಿಯ…
ಯಡಾಡಿ ಮತ್ಯಾಡಿ : ಕೊಮೆ ತೆಕ್ಕಟ್ಟೆಯ ಯಶಸ್ವೀ ಕಲಾವೃಂದ ಆಯೋಜಿಸಿದ ಪ್ರಸಂಗ-ಪ್ರಯೋಗ-ಪ್ರಾತ್ಯಕ್ಷಿಕೆ ಕಾರ್ಯಕ್ರಮ ದಿನಾಂಕ 25 ಅಕ್ಟೋಬರ್ 2025ರಂದು ಯಡಾಡಿ ಮತ್ಯಾಡಿಯ ಸುಜ್ಙಾನ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀವಟಿಗೆಯ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಹಿರಿಯ ಯಕ್ಷ ಗುರು ಕೃಷ್ಣಯ್ಯ ಆಚಾರ್ ಬಿದ್ಕಲ್ಕಟ್ಟೆ ಮಾತನಾಡಿ “ಪರಂಪರೆಯನ್ನು ಮುಂದಿನ ಜನಾಂಗಕ್ಕೆ ದಾಟಿಸುವ ಸಂಸ್ಥೆಯ ಕಾರ್ಯ ಶ್ಲಾಘನೀಯ. ಕಳೆದ ಹಲವಾರು ವರ್ಷಗಳಿಂದ ತಾವು ಕಂಡ ಪರಿಶುದ್ಧ ಕಲೆಯನ್ನು ಮಕ್ಕಳಿಗೆ ಕಲಿಸಿ ಭವಿಷ್ಯಕ್ಕೆ ದಾಟಿಸುವುದಕ್ಕಾಗಿ ಶಾಲೆ ಶಾಲೆಗಳಲ್ಲಿ ಯಶಸ್ವೀ ಕಲಾವೃಂದ ಪ್ರದರ್ಶನ ನೀಡುತ್ತಿರುವುದು ಹೆಮ್ಮೆಯ ವಿಷಯ. ಕಲೆ ಉಳಿಯಬೇಕಾದರೆ ಮೂಲ ಸತ್ವದ ಅರಿವು ಅತೀ ಅಗತ್ಯ. ಯಕ್ಷಗಾನದಲ್ಲಿನ ಪ್ರಸಂಗ-ಪ್ರಯೋಗದ ಮಿತಿಯನ್ನು ಪ್ರಾತ್ಯಕ್ಷಿಕೆ ರೂಪದಲ್ಲಿ ನೀಡುತ್ತಿರುವುದು ಪ್ರಶಂಸನೀಯ” ಎಂದರು. ಸುಜ್ಞಾನ ಎಜ್ಯುಕೇಶನಲ್ ಟ್ರಸ್ಟ್ ಇದರ ಮುಖ್ಯಸ್ಥರಾದ ಡಾ. ರಮೇಶ್ ಶೆಟ್ಟಿ ಮಾತನಾಡಿ “ಪುರಾತನ ಕಾಲದಲ್ಲಿ ಮನೋರಂಜನೆಗಾಗಿ ಅನೇಕ ಕಲೆಗಳು ಹುಟ್ಟಿಕೊಂಡವು. ಆ ಕಾಲಘಟ್ಟದಲ್ಲಿ ಪೂರ್ಣಾವಧಿಯಲ್ಲಿ ಪೂರ್ಣಕಾಲಿಕವಾಗಿ ಕಲೆಯನ್ನು ಆಸ್ವಾದಿಸುತ್ತಿದ್ದರು. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಇಂತಹ…