Author: roovari

ಬಂಟ್ವಾಳ : ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಪತ್ರಿಕೆಯಾದ ‘ಮಕ್ಕಳ ಜಗಲಿ’ ತನ್ನ ಮೂರನೇ ವರ್ಷದ ಸಂಭ್ರಮದಲ್ಲಿ ‘ಕವನ ಸಿರಿ’ ಮತ್ತು ‘ಕಥಾ ಸಿರಿ’-2023 ಪ್ರಶಸ್ತಿಗಾಗಿ ರಾಜ್ಯ ಮಟ್ಟದ ಕವನ ಮತ್ತು ಕಥಾ ಸ್ಪರ್ಧೆ ಆಯೋಜಿಸುತ್ತಿದ್ದು, ಮಕ್ಕಳಿಂದ ಕವನ ಮತ್ತು ಕಥೆಗಳನ್ನು ಆಹ್ವಾನಿಸುತ್ತಿದೆ. ಸ್ಪರ್ಧೆಗಳು ಎರಡು ವಿಭಾಗಗಳಲ್ಲಿ ನಡೆಯಲಿದ್ದು, ಕವನ ಸ್ಪರ್ಧೆಯ ಮೊದಲ ವಿಭಾಗ 5,6,7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಷಯವು ಐಚ್ಛಿಕ (ನಿಮ್ಮ ಆಯ್ಕೆ)ವಾಗಿದೆ. ಕವನವು ಕನಿಷ್ಠ 12 ಸಾಲುಗಳು ಹಾಗೂ ಗರಿಷ್ಠ 20 ಸಾಲುಗಳನ್ನು ಹೊಂದಿರಬೇಕು. ಎರಡನೇ ವಿಭಾಗವು 9,10,11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಷಯವು ಐಚ್ಛಿಕ (ನಿಮ್ಮ ಆಯ್ಕೆ)ವಾಗಿದೆ. ಕವನವು ಕನಿಷ್ಠ 16 ಸಾಲುಗಳು ಹಾಗೂ ಗರಿಷ್ಠ 24 ಸಾಲುಗಳನ್ನು ಹೊಂದಿರಬೇಕು. ಕಥಾಸ್ಪರ್ಧೆಯ ಮೊದಲ ವಿಭಾಗ 5,6,7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಷಯವು ಐಚ್ಛಿಕ (ನಿಮ್ಮ ಆಯ್ಕೆ)ವಾಗಿದೆ. A4 ಅಳತೆಯ ಕಾಗದದಲ್ಲಿ ಬರಹವು ಎರಡು ಪುಟಗಳನ್ನು ಮೀರಿರಬಾರದು. ಎರಡನೇ ವಿಭಾಗ 9,10,11 ಮತ್ತು 12ನೇ…

Read More

ಕಟಪಾಡಿ : ಶ್ರೀ ಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಶ್ರೀ ಕಾಳಹಸ್ತೇಂದ್ರ ಸ್ವಾಮಿಗಳವರ ಚಾತುರ್ಮಾಸ್ಯದ ವ್ರತಾಚರಣೆ ಪ್ರಯುಕ್ತ ಸುರತ್ಕಲ್ ತಡಂಬೈಲಿನ   ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯ ಸದಸ್ಯೆಯರಿಂದ ದಿನಾಂಕ 21-09-2023ರಂದು  ‘ಸುದರ್ಶನ ವಿಜಯ’ ತಾಳಮದ್ದಳೆ ನಡೆಯಿತು. ಶ್ರೀ ವಾಸುದೇವ ರಾವ್ ಸುರತ್ಕಲ್ ಇವರು ನಿರ್ದೇಶಿಸಿದ ಈ ಕಾರ್ಯಕ್ರಮದಲ್ಲಿ ಶ್ರೀಮತಿಯರಾದ ಸುಲೋಚನ ಮಹಾವಿಷ್ಣುವಾಗಿ, ಸುಮಿತ್ರ ಶಶಿಕಾಂತ ಕಲ್ಲೂರಾಯ ಸುದರ್ಶನನಾಗಿ, ಉಮಾ ದಿವಾಕರ ಲಕ್ಷ್ಮೀಯಾಗಿ ಹಾಗೂ ಅತಿಥಿ ಕಲಾವಿದರಾದ ವಿಶ್ವನಾಥ ಸಾಂತೂರು ದೇವೇಂದ್ರನಾಗಿ, ಜನಾರ್ದನ ಆಚಾರ್ ಮತ್ತು ಅಶೋಕ್ ನಾಯ್ಕ್ ಸಾಂತೂರು ಶತ್ರು ಪ್ರಸೂದನನಾಗಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಭಾಗವತರಾಗಿ ಸುರೇಶ್ ಭಟ್ ಮತ್ತು ರಾಘಣ್ಣ ಹಾಗೂ ಚಂಡೆ ಮದ್ದಳೆಯಲ್ಲಿ ವೆಂಕಟೇಶ್ ಮತ್ತು ಅಶೋಕ ಸಹಕರಿಸಿದರು.

Read More

ಕಾಸರಗೋಡು: ಕಾಸರಗೋಡಿನ ವಿದ್ಯಾನಗರದ ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ‘ಸ್ನೇಹರಂಗ’ ಆಯೋಜಿಸಿದ್ದ ಚಿಂತನ ಕಾರ್ಯಕ್ರಮವು ದಿನಾಂಕ 25-09-2023ರಂದು ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡ ಸಿನಿಮಾ ಸಂಗೀತ ನಿರ್ದೇಶಕ ವಿ. ಮನೋಹರ್ “ಪ್ರತೀಯೊಂದು ವಿಚಾರವನ್ನು ಪ್ರಶ್ನಿಸುವುದನ್ನು ರೂಢಿಸಿಕೊಳ್ಳಬೇಕು. ಅದು ನಮ್ಮನ್ನು ಬೆಳೆಸುತ್ತದೆ. ಪ್ರಶ್ನಿಸುವ ಸಂದರ್ಭಗಳಲ್ಲಿ ಸವಾಲುಗಳು ಎದುರಾಗುತ್ತವೆ. ಹಿಂದೆ ಕನ್ನಡದ ಚಾನಲ್ ಒಂದರಲ್ಲಿ ಪ್ರಶ್ನಿಸುವ ಹಾಸ್ಯಮಯ ಧಾರಾವಾಹಿ ಮಾಡಿ ಹೊರದಬ್ಬಿಸಿಕೊಂಡದ್ದೂ ಇದೆ. ಆದರೆ ಸಂಕಷ್ಟಗಳು ಬಂದಾಗ ಕಂಗೆಡಬಾರದು. ನಟ -ನಿರ್ದೇಶಕ ಉಪೇಂದ್ರ ಅವರು ಸಂಗೀತ ನಿರ್ದೇಶನದ ಮೊದಲ ಅವಕಾಶ ನೀಡಿದರು. ಆನಂತರ ಡಾ.ರಾಜ್ ಅವರೂ ಕೈಹಿಡಿದರು. ಜನುಮದ ಜೋಡಿ, ಚಿಗುರಿದ ಕನಸು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡುವ ಸಂದರ್ಭದಲ್ಲಿ ರಾಜ್ ಅವರ ಒಡನಾಟ ದೊರೆಯಿತು. ಎಳವೆಯಲ್ಲೇ ಚಿತ್ರಗೀತೆಯ ಹುಚ್ಚು ಹಚ್ಚಿಸಿಕೊಂಡವ ನಾನು. ಹುಚ್ಚು ಇರದಿದ್ದರೆ ಈ ಕ್ಷೇತ್ರದಲ್ಲಿ ಪಳಗಲು ಸಾಧ್ಯವಿಲ್ಲ. ಇದೊಂಥರಾ ಒಳ್ಳೆಯ ಹುಚ್ಚು. ಮೊದಲಿಗೆ ವ್ಯಂಗ್ಯ ಚಿತ್ರಕಾರ ಆಗಿದ್ದೆ. ಕ್ಯಾಸೆಟ್…

Read More

ಹೂವಿನ‌ಹಡಗಲಿ : ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ‌ಹಡಗಲಿ ಇದರ ವತಿಯಿಂದ ಅಭೂತ ಪೂರ್ವ ನೂರು ಕೃತಿಗಳ ಲೋಕಾರ್ಪಣೆ ಎಂಬ ವಿಶಿಷ್ಟ ಗಿನ್ನೀಸ್ ದಾಖಲೆಯ ಸಮಾರಂಭವು ದಿನಾಂಕ 24-09-2023ರ ಭಾನುವಾರ ಹರಪನಹಳ್ಳಿಯ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ಜರಗಿತು. ಇದೇ ವೇಳೆ ಮಂಗಳೂರಿನ ವೈದ್ಯ ಹಾಗೂ ಬರಹಗಾರ ಡಾ.ಸುರೇಶ ನೆಗಳಗುಳಿ ಇವರ ನೂತನ ಕೃತಿ ‘ತನಗ ತರಂಗ’ ಎಂಬ ತನಗವೆಂಬ ಪಿಲಿಪ್ಪೈನ್ ಮೂಲದ ಸಾಹಿತ್ಯ ಪ್ರಕಾರದ ಕನ್ನಡ ತನಗಗಳ ಪುಸ್ತಕವು ಲೋಕಾರ್ಪಣೆಗೊಂಡಿತು. ಶಾಸಕ ಲತಾ ಮಲ್ಲಿಕಾರ್ಜುನರವರ  ಘನ‌ ಉಪಸ್ಥಿತಿಯಲ್ಲಿ ಉದ್ಘಾಟಿಸಲ್ಪಟ್ಟ ಈ ಸಮಾರಂಭದಲ್ಲಿ ನೂರ ಹದಿನೆಂಟು ಕೃತಿಗಳು ಲೋಕಾರ್ಪಣೆ ಗೊಂಡಿದ್ದು ವಿಶೇಷ.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕರು “ಇತಿಹಾಸದ ಚಿತ್ರಣಗಳು ಸಾಹಿತ್ಯದಿಂದ ಮಾತ್ರ ಲಭ್ಯ” ಎಂದು ಹೇಳಿದರು. ವೇದಿಕೆಯಲ್ಲಿ ಚಲನ‌ಚಿತ್ರ ನಟ ಮೈಸೂರು ರಮಾನಂದ, ಕ.ಸಾ.ಪ ಅಧ್ಯಕ್ಷ  ಕೆ.ಉಚ್ಚೆಂಗಪ್ಪ ಸಹಿತ ಹಲವಾರು ಗಣ್ಯರು ಉಪಸ್ಥಿತರಿದ್ದರು. ಹಿರಿಯ ಸಾಹಿತಿ ರಾಮನಮಲಿ ಅವರ ಅಧ್ಯಕ್ಷತೆಯಲ್ಲಿ ಬೃಹತ್ ಕವಿಗೋಷ್ಠಿ ಸಂಪನ್ನವಾಯಿತು. ಸಮಾರಂಭದ ಸಾರಥ್ಯವನ್ನು ಸಂಘಟಕ ಹಾಗೂ ಬಳಗ ಮುಖ್ಯಸ್ಥರಾದ…

Read More

ಉಡುಪಿ : ಯಶಸ್ ಪ್ರಕಾಶನ ಕಟಪಾಡಿ, ತುಳುಕೂಟ ಉಡುಪಿ (ರಿ.), ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಕಾಪು ವತಿಯಿಂದ ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ ಅವರು ಬರೆದ ‘ಅಪ್ಪೆಮ್ಮೆ’ ತುಳು ನಾಟಕದ ಕೃತಿ ಬಿಡುಗಡೆ ಮತ್ತು ಮಕ್ಕಳ ತುಳು ‘ಕವಿಗೋಷ್ಠಿ’ ಕಾರ್ಯಕ್ರಮವು ದಿನಾಂಕ 24-09-2023ರಂದು ಉಡುಪಿ ಕಿದಿಯೂರು ಹೊಟೇಲಿನ ಪವನ್ ರೂಫ್‌ಟಾಪ್ ಹಾಲ್‌ನಲ್ಲಿ ನಡೆಯಿತು. ಬ್ರಹ್ಮಾವರ ನ್ಯೂ ಕರ್ನಾಟಕ ಬಿಲ್ಡರ್ಸ್ ಸಂಸ್ಥೆಯ ಮಾಲಕರಾದ ಚೇತನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ತುಳುನಾಡಿನಲ್ಲಿ ಅವಿಭಕ್ತ ಕುಟುಂಬ ಪದ್ಧತಿ ಮರೆಯಾಗುತ್ತಿದೆ. ಮಕ್ಕಳ ಮತ್ತು ಹೆತ್ತವರ ನಡುವಿನ ಸಂಬಂಧಗಳು ದೂರವಾಗುತ್ತಿದ್ದು, ಕುಟುಂಬವನ್ನು ಜೋಡಿಸುವ ವ್ಯವಸ್ಥೆಯನ್ನು ವಿದ್ಯಾವಂತರಾದ ನಾವು ಮಾಡಬೇಕಾದುದು ಅನಿವಾರ್ಯ” ಎಂದರು. ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅಧ್ಯಕ್ಷತೆ ವಹಿಸಿ ಮಾತನಾಡಿ, “ಆಧುನಿಕ ಯುವಜನಾಂಗ ಕೂಡು ಕುಟುಂಬ ಬಿಟ್ಟು ಏಕ ಕುಟುಂಬ ಪದ್ಧತಿಯತ್ತ ಮನಸ್ಸು ಮಾಡುತ್ತಿರುವುದರಿಂದ ವೃದ್ಧಾಶ್ರಮಗಳ ಸಂಖ್ಯೆ ಅಧಿಕವಾಗುತ್ತಿದೆ. ಈ ನಿಟ್ಟಿನಲ್ಲಿ ‘ಅಪ್ಪೆಮ್ಮೆ’ ನಾಟಕ ಹೆತ್ತವರನ್ನು ಬೀದಿಗೆ ಅಟ್ಟಬೇಡಿ…

Read More

ಉಳ್ಳಾಲ : ಬ್ಯಾರಿ ಭಾಷಾ ದಿನಾಚರಣೆ ಅಂಗವಾಗಿ ‘ಮೇಲ್ತೆನೆ’ಯು ಬ್ಯಾರಿ ‘ಆಶು ಕವನ ರಚನೆ’ ಮತ್ತು ‘ಒಗಟು ಸ್ಪರ್ಧೆ’ಯನ್ನು ಏರ್ಪಡಿಸಿದೆ. ದಿನಾಂಕ 03-10-2023ರಂದು ಮಧ್ಯಾಹ್ನ 2 ಗಂಟೆಗೆ ದೇರಳಕಟ್ಟೆಯಲ್ಲಿ ಸ್ಪರ್ಧೆ ನಡೆಯಲಿದೆ. ಬ್ಯಾರಿ ಸಾಹಿತ್ಯ, ಭಾಷೆ, ಸಂಸ್ಕೃತಿ, ಕಲೆಗೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿ ಆಶು ಕವನ ಸ್ಪರ್ಧೆ ನಡೆಯಲಿದೆ. ಸ್ಥಳದಲ್ಲೇ ವಿಷಯ ನೀಡಲಾಗುವುದು. ಕನಿಷ್ಠ 15 ಮತ್ತು ಗರಿಷ್ಠ 25 ಸಾಲಿನ ಮಿತಿಯೊಂದಿಗೆ ಕನ್ನಡ ಲಿಪಿ ಬಳಸಿ ಬ್ಯಾರಿ ಭಾಷೆಯಲ್ಲಿ ಕವನ ರಚಿಸಬೇಕು. ಬಳಿಕ ‘ಒಗಟು ಸ್ಪರ್ಧೆ’ ನಡೆಯಲಿದೆ. ಎರಡೂ ಸ್ಪರ್ಧೆಯು ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ. ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನ, ಪ್ರಮಾಣ ಪತ್ರ, ಸ್ಮರಣಿಕೆಗಳನ್ನು ಅದೇ ದಿನ ಸಂಜೆ 4ಕ್ಕೆ ನಡೆಯುವ ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮದಲ್ಲಿ ನೀಡಲಾಗುವುದು. ಆಸಕ್ತರು ದಿನಾಂಕ 28-09-2023ರೊಳಗೆ ‘ಮೇಲ್ತೆನೆ’ಯ ಮಾಜಿ ಅಧ್ಯಕ್ಷ ಇಸ್ಮಾಯೀಲ್‌ ಮಾಸ್ಟರ್ (ಮೊ. ಸಂ. 9449902192) ಅವರಲ್ಲಿ ಹೆಸರು ನೋಂದಾಯಿಸಬಹುದು.

Read More

ಬೆಂಗಳೂರು : ಬೆಂಗಳೂರಿನ ವೀರಲೋಕ ದೇಸೀ ಜಗಲಿ ಬಳಗ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಆಶ್ರಯದಲ್ಲಿ ಬಾಯಿಕಟ್ಟೆಯ ಶ್ರೀ ಲಕ್ಷ್ಮೀ ಮಿಲ್ಸ್ ಸಭಾ ಭವನದಲ್ಲಿ ಎರಡು ದಿನಗಳ ಜಿಲ್ಲಾ ಮಟ್ಟದ ಕಥಾ ಕಮ್ಮಟವು ದಿನಾಂಕ 23-09-2023 ಮತ್ತು 24-09-2023ರಂದು ಜರಗಿತು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಖ್ಯಾತ ಸಂಶೋಧಕ, ಅನುವಾದಕ ಡಾ. ಮೋಹನ ಕುಂಟಾರ್ ಇವರು “ಸಾಹಿತ್ಯದ ಬರವಣಿಗೆಗೆ ತೆರೆದ ಸಮಾಜವೇ ಪಠ್ಯ. ಸಾಹಿತ್ಯ ಅನುಭವ ಜನ್ಯ ಎಂಬುದು ನಿಜವಾದರೂ ಅನುಭವ ಇರುವವರೆಲ್ಲ ಲೇಖಕರಾಗುವುದಿಲ್ಲ. ಅನುಭವವನ್ನು ಅಭಿವ್ಯಕ್ತಿಸುವ ಕಲೆ ಸಿದ್ಧಿಸಿದವರು ಮಾತ್ರ ಸಾಹಿತಿ ಎನಿಸಿಕೊಳ್ಳುತ್ತಾರೆ. ಬದುಕಿನ ಗೊಂದಲಗಳ ನಡುವೆ ಹುಟ್ಟುವ ತೀಕ್ಷ್ಣ ಭಾವ ಬರಹಗಾರರನ್ನು ಸೃಷ್ಟಿಸುತ್ತದೆ. ಜೀವನದ ಸತ್ಯಗಳನ್ನು ಸೆರೆಹಿಡಿಯಲು ನೆರವಾಗುತ್ತದೆ. ಮನುಷ್ಯ ಮನಸ್ಸಿನ ಮೂಲ ರಾಗ ಭಾವಗಳನ್ನು ಹೊಂದಿದ ಸಾಹಿತ್ಯ ಎಂದಿಗೂ ಜೀವಂತವಾಗಿರುತ್ತದೆ” ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ಲೇಖಕಿ ಡಾ. ಪ್ರಮೀಳ ಮಾಧವ ಅವರು “ಲೇಖಕನಾದವನಿಗೆ ಪ್ರತಿಭೆಯ ಕಣ್ಣು ಇರಬೇಕು.…

Read More

ಮೈಸೂರು : ವಿಜಯನಗರದ ಹೆಬ್ಬಾಳು ಇಲ್ಲಿರುವ ಬಸವ ಸಮಿತಿ (ರಿ.) ಇವರ ವತಿಯಿಂದ ‘ಶರಣ ಸಂಗಮ -286’ ದಿನಾಂಕ 01-10-2023ರಂದು ಬೆಳಿಗ್ಗೆ ಗಂಟೆ 10-30ರಿಂದ ಬಸವ ಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವೀರು ಥಿಯೇಟರ್ ಟ್ರಸ್ಟ್ ಹಾಗೂ ದೇಚಿ ಕ್ರಿಯೆಷನ್ಸ್ ಅರ್ಪಿಸುವ ಶ್ರೀ ವೀರು ಅಣ್ಣಿಗೇರಿ ರಚನೆ, ವಿನ್ಯಾಸ ಹಾಗೂ ನಿರ್ದೇಶನದ ಶ್ರೇಯಸ್ ಪಿ. ಅಭಿನಯದ ‘ಕಲಾವಿದ’ ಏಕಪಾತ್ರಾಭಿನಯ ಪ್ರದರ್ಶನಗೊಳ್ಳಲಿದೆ. ಬಸವ ಸಮಿತಿಯ ಅಧ್ಯಕ್ಷರಾದ ಶ್ರೀ ಹೆಚ್.ವಿ. ಬಸವರಾಜು ಹಿನಕಲ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪಂಡಿತ್ಸ್ ದಿ. ಆರ್ಕಿಡ್ಸ್ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಸಾಹಿತಿಯಾದ ಶರಣ ದೇವರಾಜು ಪಿ. ಚಿಕ್ಕಹಳ್ಳಿಯವರು ಭಾಗವಹಿಸಲಿರುವರು. ಶ್ರೀ ಚಿಕ್ಕವೀರಪ್ಪನವರು ಮತ್ತು ಕುಟುಂಬ ವರ್ಗದವರು ಈ ಕಾರ್ಯಕ್ರಮದ ಸೇವಾರ್ಥದಾರರಾಗಿರುತ್ತಾರೆ. ಬಸವ ಸಮಿತಿ ಇದರ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿಯವರು ಈ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಆದರದ ಸ್ವಾಗತ ಕೋರಿದ್ದಾರೆ.

Read More

ಬೆಳಗಾವಿ : ರಂಗ ಸಂಪದ (ರಿ.) ಬೆಳಗಾವಿ ಪ್ರಸ್ತುತ ಪಡಿಸುವ ‘ಹೆರಿಟೇಜ್ ಕಿಚನ್ ನಾಟಕೋತ್ಸವ’ವು ದಿನಾಂಕ 30-09-2023ರಿಂದ 02-10-2023ರವರೆಗೆ ಬೆಳಗಾವಿಯ ಟಿಳಕ ಚೌಕ್ ಹತ್ತಿರದ ಕೊನವಾಳ ಗಲ್ಲಿಯ ಲೋಕಮಾನ್ಯ ರಂಗ ಮಂದಿರ (ಹಳೆಯ ರೀಝ ಟಾಕೀಜ್)ದಲ್ಲಿ ನಡೆಯಲಿದೆ. ದಿನಾಂಕ 30-09-2023 ಶನಿವಾರ ಸಂಜೆ ಗಂಟೆ 6.30ಕ್ಕೆ ನಾಟಕ ‘ಮರಣ ಮೃದಂಗ’  ತಂದೆ ಹಾಗೂ ಮಗನ ಮಧ್ಯೆ ನಡೆಯುವ ರಾಜಕೀಯ ವಿಡಂಬನಾತ್ಮಕ ಈ ನಾಟಕವನ್ನು ಬೆಳಗಾವಿಯ ರಂಗ ಸಂಪದ ತಂಡದವರು ಪ್ರಸ್ತುತ ಪಡಿಸಲಿದ್ದಾರೆ. ಶ್ರೀ ರಾಜೇಂದ್ರ ಕಾರಂತ ರಚಿಸಿರುವ ಈ ನಾಟಕದ ನಿರ್ದೇಶನವನ್ನು ಡಾ. ಅರವಿಂದ ಕುಲಕರ್ಣಿ ಮಾಡಿದ್ದು, ಸಂಗೀತ ಶ್ರೀ ಶ್ರೀಪತಿ ಮಂಜನಬೈಲು ಹಾಗೂ ಅಂತರಾ ಅವರದ್ದು. ದಿನಾಂಕ 01-10-2023 ರವಿವಾರ ಸಂಜೆ ಗಂಟೆ 6.30ಕ್ಕೆ ನಾಟಕ ‘ಪ್ರಭಾಸ’  ಮೇಡಂ ಮೇರಿ ಕ್ಯೂರಿ ಜೀವನಾಧಾರಿತ ಈ ವೈಜ್ಞಾನಿಕ ನಾಟಕವನ್ನು ಸಾಲಿಯಾನ್ ಉಮೇಶ್ ನಾರಾಯಣ ಇವರ ನಿರ್ದೇಶನದಲ್ಲಿ ಧಾರವಾಡದ ಅಭಿನಯ ಭಾರತಿ ಪ್ರಸ್ತುತ ಪಡಿಸಲಿದೆ. ದಿನಾಂಕ 02-10-2023 ಸೋಮವಾರ ಸಂಜೆ ಗಂಟೆ 6.30ಕ್ಕೆ…

Read More

ಮೂಡಬಿದಿರೆ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕ ಹಾಗೂ ಜೈನ ಪದವಿಪೂರ್ವ ಕಾಲೇಜು, ಮೂಡುಬಿದಿರೆ ಇವರ ಸಂಯುಕ್ತ ಆಶ್ರಯದಲ್ಲಿ ‘ಕವಿ ನಾಗಚಂದ್ರ’ ಉಪನ್ಯಾಸ ಕಾರ್ಯಕ್ರಮವು ದಿನಾಂಕ 25-09-2023ರ ಅಪರಾಹ್ನ 2.30ಕ್ಕೆ ಮೂಡಬಿದಿರೆಯ ಜೈನ ಪದವಿಪೂರ್ವ ಕಾಲೇಜಿನ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮೂಡುಬಿದಿರೆಯ ಜೈನ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರಭಾತ್ ಬಲ್ನಾಡ್ ಭಾಗವಹಿಸಲಿದ್ದು, ಉಪನ್ಯಾಸಕರು ಹಾಗೂ ಸಾಹಿತಿಗಳಾದ ಶ್ರೀ ಟಿ.ಎ.ಎನ್. ಖಂಡಿಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಮೂಡುಬಿದಿರೆಯ ಜೈನ ಪ.ಪೂ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೆ. ಉದಯ ಕುಮಾರ ಉಪಸ್ಥಿತರಿದ್ದು, ಕ.ಸಾ.ಪ. ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ವೇಣುಗೋಪಾಲ ಶೆಟ್ಟಿ.ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕಸಾಪ ಜಿಲ್ಲಾ ಹಾಗೂ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಸದಸ್ಯರು, ಸರ್ವರಿಗೂ ಸ್ವಾಗತ ಬಯಸಿದ್ದಾರೆ.

Read More