Author: roovari

ವಿರಾಜಪೇಟೆ : ಕೊಡಗು ಜಿಲ್ಲಾ ಕ್ರೀಡಾ ಮತ್ತು ಸಾಂಸ್ಕೃತಿಕ ಇಲಾಖೆ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ 3ನೇ ವರ್ಷದ ಶಾಸ್ತ್ರೀಯ, ಜನಪದ, ಫ್ರೀ ಸ್ಟೈಲ್ ಹಾಗೂ ಹಿಪ್ ಹೋಪ್ ಸ್ಪರ್ಧೆಯು ದಿನಾಂಕ 18 ನವೆಂಬರ್ 2024ರಂದು ಮಡಿಕೇರಿಯ ಮೈತ್ರಿ ಹಾಲ್‌ನಲ್ಲಿ ನಡೆಯಿತು. ಸ್ಪರ್ಧೆಯ ಶಾಸ್ತ್ರೀಯ ನೃತ್ಯ ಹಾಗೂ ಜಾನಪದ ನೃತ್ಯ ವಿಭಾಗಗಳಲ್ಲಿ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳು ಚಿನ್ನ, ಬೆಳ್ಳಿ ಹಾಗೂ ಕಂಚು ಸೇರಿದಂತೆ ಒಟ್ಟು 156 ಮೆಡಲ್‌ಗಳನ್ನು ಗೆದ್ದುಕೊಂಡಿದ್ದಾರೆ. ತಂಡದ ಗುರುಗಳಾದ ಹೇಮಾವತಿ ಕಾಂತ್‌ರಾಜ್ ಹಾಗೂ ಕಾವ್ಯಶ್ರೀ ಕಾಂತ್‌ ರಾಜ್ ವಿದ್ಯಾರ್ಥಿಗಳಿಗೆ ನೃತ್ಯ ಹಾಗೂ ಸಂಗೀತ ತರಬೇತಿಯನ್ನು ನೀಡಿದ್ದಾರೆ.

Read More

ಕುಂದಾಪುರ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ‘ಸಿನ್ಸ್ 1999 ಶ್ವೇತಯಾನ-80’ ಕಾರ್ಯಕ್ರಮದಡಿಯಲ್ಲಿ ಚಿಣ್ಣರ ತಾಳಮದ್ದಳೆ ಕಾರ್ಯಕ್ರಮವು ದಿನಾಂಕ 24 ನವೆಂಬರ್ 2024ರಂದು ಕುಂದಾಪುರ ಕೋಡಿಯ ಚಕ್ರಮ್ಮ ದೇಗುಲದಲ್ಲಿ ನಡೆಯಿತು. ಸಮಾರಂಭದ ಪ್ರಾಯೋಜಕರಾದ ಕೊಡುಗೈ ದಾನಿ ಬಾಂಬೆ ಸೇಫ್ ಕಂಪೆನಿಯ ಮುಖ್ಯಸ್ಥರಾದ ದತ್ತಾನಂದ ಗಂಗೊಳ್ಳಿ ಇವರನ್ನು ಅಭಿನಂದಿಸಿದ ಖ್ಯಾತ ವಕೀಲರಾದ ಎ. ಎಸ್. ಎನ್. ಹೆಬ್ಬಾರ್ ಮಾತನಾಡಿ “ಸಾಂಸ್ಕೃತಿಕ ಕಾರ್ಯಕ್ರಮಗಳು ಗತಕಾಲದಲ್ಲಿ ರಾಜಾಶ್ರಯದಲ್ಲಿ ನೆರವೇರುತ್ತಿತ್ತು. ಹಿಂದೆ ರಾಜರು ನೆರವೇರಿಸುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತ ಕಾಲಘಟ್ಟದಲ್ಲಿ ಪ್ರಾಯೋಜಕರು ನೆರವೇರಿಸುತ್ತಿದ್ದಾರೆ. ಇಂದು ಪ್ರಾಯೋಜಕರೇ ರಾಜರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿರುವ ಯಶಸ್ವಿ ಕಲಾವೃಂದದ ಮಕ್ಕಳ ಕಾರ್ಯಕ್ರಮವನ್ನು ದತ್ತಾನಂದ ಗಂಗೊಳ್ಳಿ ಪ್ರಯೋಜನೆ ನೀಡಿ ಅವಕಾಶ ಕೊಟ್ಟು ನಿಜಾರ್ಥದಲ್ಲಿ ರಾಜರಾದರು.” ಎಂದರು. ಗುರುಗಳಾದ ಲಂಬೋದರ ಹೆಗಡೆ ನಿಟ್ಟೂರು ಮಾತನಾಡಿ “ಕಲಾ ಚಟುವಟಿಕೆಗಳು ನಿರಂತರವಾಗಿ ಸಾಗಿ ಬಂದಾಗ ಒಂದಷ್ಟು ಕಲಾವಿದರುಗಳಿಗೆ ಅವಕಾಶ ಕಲ್ಪಿತವಾಗುತ್ತದೆ. ಪ್ರಾಯೋಜಕರ ನೆರವಿನಿಂದ ಸಾಧ್ಯವಾಗುವ ಅವಕಾಶವನ್ನು ಸಂಸ್ಥೆ ಸದಾ ಸ್ಮರಿಸುತ್ತದೆ.” ಎಂದರು. ಸಮಾರಂಭದಲ್ಲಿ ಉದ್ಯಮಿ ಗೋಪಾಲ ಪೂಜಾರಿ, ಸಭಾಭವನದ…

Read More

ಬೆಂಗಳೂರು : ಜಂಗಮ ಕಲೆಕ್ಟಿವ್ ಬೆಂಗಳೂರು ಆಯೋಜಿಸುವ ‘ವಿಚಾರಕ್ರಾಂತಿ ಆಹ್ವಾನ – ಕುವೆಂಪು ಸಾಹಿತ್ಯದ ಪ್ರಸ್ತುತತೆ’ ಕಾರ್ಯಕ್ರಮವು ದಿನಾಂಕ 08 ಡಿಸೆಂಬರ್ 2024ರಂದು ಬೆಂಗಳೂರಿನ ದೊಮ್ಮಲೂರಿನಲ್ಲಿರುವ ಬಿ. ಐ. ಸಿ. ಯಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ ಘಂಟೆ 11-00ರಿಂದ 11- 30ರ ವರೆಗೆ ಮೈಸೂರಿನ ಮಾಯ್ಕಾರ ತಂಡದಿಂದ ಕುವೆಂಪು ಕಾವ್ಯಗಾಯನ, 11- 45 ರಿಂದ 1-30ರ ವರೆಗೆ ಇಂಗ್ಲೀಷ್ ಪ್ರಾಧ್ಯಾಪಕರು ಹಾಗೂ ರಾಜಕೀಯ ಚಿಂತಕರಾದ ವಿ. ಎಲ್. ನರಸಿಂಹಮೂರ್ತಿ ಇವರ ಸಂಯೋಜನೆಯಲ್ಲಿ ಲೇಖಕರು ಹಾಗೂ ಕನ್ನಡ ಅಧ್ಯಾಪಕರಾದ ಡಾ: ರವಿಕುಮಾರ್ ಬಾಗಿ ಇವರಿಂದ ‘ಕುವೆಂಪು ವೈಚಾರಿಕತೆಯ ಕುರಿತು ಮಾತು’ ಹಾಗೂ ಕವಿ ಮತ್ತು ಪ್ರಕಾಶಕರಾದ ಅಕ್ಷತ ಹುಂಚದಕಟ್ಟೆ ಇವರಿಂದ ‘ಕುವೆಂಪು ಕವಿತೆ ಮತ್ತು ಆತ್ಮಕತೆ ಕುರಿತು ಮಾತು’ ಕಾರ್ಯಕ್ರಮಗಳು ನಡೆಯಲಿವೆ. ಅಪರಾಹ್ನ 2-30 ರಿಂದ 3-30ರ ವರೆಗೆ ಪ್ರಶಸ್ತಿ ವಿಜೇತ ನಟ ಮತ್ತು ಸಂಗೀತಗಾರರಾದ ಸಂತೋಷ್ ದಿಂಡಗೂರು ಇವರಿಂದ ‘ಮಲೆಗಳಲ್ಲಿ ಮದುಮಗಳು’ ಆಯ್ದಭಾಗಗಳ ಓದು, ಸಂಜೆ ಘಂಟೆ 3-30 ರಿಂದ 5-00ರ…

Read More

ಮುಂಬೈ : ಕಲಾಸೇವೆಯಲ್ಲಿರುವಾಗಲೇ ಹವ್ಯಾಸಿ ಭಾಗವತ ಹೃದಯಘಾತಕ್ಕೊಳಗಾಗಿ ಕಲಾಲೀನವಾದ ಘಟನೆ ಮುಂಬಯಿಯಲ್ಲಿ ದಿನಾಂಕ 23 ನವೆಂಬರ್ 2024 ರಂದು ಸಂಭವಿಸಿದೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಬ್ರಹ್ಮಾವರ ಸಮೀಪದ ಕುಕ್ಕೆಹಳ್ಳಿ ಮುಂಗ್ರಿಬೈಲು ನಿವಾಸಿ ವಿಟ್ಠಲ ಪ್ರಭು ಅವರು ಭಾಗವತಿಕೆ ಮಂಚದಲ್ಲೇ ಹೃದಯಾಘಾತಕ್ಕೆ ಒಳಗಾದ ಹವ್ಯಾಸಿ ಭಾಗವತ. ಮುಂಬಯಿಯಲ್ಲಿ ಉದ್ಯಮ ನಡೆಸುತ್ತಿದ್ದ ಅವರು ಹವ್ಯಾಸಿ ಕಲಾವಿದರಾಗಿ ಯಕ್ಷಗಾನದಲ್ಲಿ ಭಾಗವಹಿಸುತ್ತಿದ್ದರು. ತನ್ನ ತಂಡದ ಮೂಲಕ ಹಲವಾರು ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿಯನ್ನೂ ನೀಡಿದ್ದರು. ಯಕ್ಷಗಾನ ತಾಳಮದ್ದಳೆ, ವೇಷಧಾರಿಕೆ ಮಾತ್ರವಲ್ಲದೆ ಯಕ್ಷಗಾನ ನಿರ್ದೇಶನ, ಮರಾಠಿ ಹಾಗೂ ಕೊಂಕಣಿ ಭಾಷೆಯಲ್ಲಿ ಯಕ್ಷಗಾನ ಪರಿಚಯಿಸಿದ್ದರು. ನವೆಂಬರ್ 23ರ ರಾತ್ರಿ ಮುಂಬಯಿಯ ದಹಿಸರ್‌ನ ಕಾಶಿಮಠದಲ್ಲಿ ಇವರದೇ ನಿರ್ದೆಶನದಲ್ಲಿ ‘ಶ್ರೀಕೃಷ್ಣ ಪಾರಿಜಾತ’ ಯಕ್ಷಗಾನದ ಪ್ರದರ್ಶನ ನಡೆಯುತ್ತಿದ್ದಾಗ ಭಾಗವತಿಕೆಯನ್ನು ಮಾಡುತ್ತಿರುವಾಗ ಎದೆನೋವು ಕಾಣಿಸಿಕೊಂಡಿದ್ದು, ತತ್‌ಕ್ಷಣ ಬೇರೊಬ್ಬರು ಭಾಗವತರನ್ನು ನೇಮಿಸಿ ಪ್ರಭು ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆಸ್ಪತ್ರೆ ಸಾಗಿಸುವಾಗ ದಾರಿ ಮಧ್ಯೆ ಅವರು ಕೊನೆಯುಸಿರೆಳೆದರು.

Read More

ಉಡುಪಿ : ಇತ್ತೀಚೆಗೆ ನಿಧನರಾದ ಜಾನಪದ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದ ಸಾಧಕರಾದ ಕುದಿ ವಸಂತ ಶೆಟ್ಟಿ ಇವರಿಗೆ ನುಡಿನಮನ ಕಾರ್ಯಕ್ರಮವು ದಿನಾಂಕ 24 ನವೆಂಬರ್ 2024ರ ರವಿವಾರದಂದು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಆಡಿಟೋರಿಯಂನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಧಾರ್ಮಿಕ ಮುಖಂಡ ನಟರಾಜ್ ಹೆಗ್ಡೆ ಮಾತನಾಡಿ “ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡುವ ಮೂಲಕ ಸಾವಿರಾರು ಸಂಸ್ಕಾರವಂತ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಕಾರಣೀಭೂತರಾಗಿದ್ದ ಕುದಿ ವಸಂತ ಶೆಟ್ಟಿಯವರು ಜಾನಪದ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಹೆಚ್ಚಿನ ಪರಿಣತಿ ಹೊಂದಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಅವರು ಎಲ್ಲರಿಗೂ ಬೇಕಾದವರಾಗಿದ್ದರು. ಹಾಗಾಗಿ ಅವರು ಒಬ್ಬ ವ್ಯಕ್ತಿಯಾಗಿರದೆ ಸಮಾಜದ ಶಕ್ತಿಯಾಗಿದ್ದರು.” ಎಂದು ಹೇಳಿದರು. ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಹರಿಪ್ರಸನ್ನ ಶೆಟ್ಟಿ, ಶಾಲಾಡಳಿತ ಮಂಡಳಿ ಅಧ್ಯಕ್ಷರಾದ ನ್ಯಾಯವಾದಿ ಸತೀಶ್ ಪೂಜಾರಿ, ನಿವೃತ್ತ ಮುಖ್ಯ ಶಿಕ್ಷಕ ರಾಮಕೃಷ್ಣ ನಾಯಕ್, ಡಯಟ್ ಇದರ ಪ್ರಾಂಶುಪಾಲ ಅಶೋಕ್ ಕಾಮತ್ ಮೊದಲಾದವರು ನುಡಿನಮನ ಸಲ್ಲಿಸಿದರು.…

Read More

ಮಡಿಕೇರಿ : ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಮಡಿಕೇರಿ ಹಾಗೂ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇವರ ಸಂಯುಕ್ತ ಆಶ್ರಯದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜನಪದ ನೃತ್ಯ ಸ್ಪರ್ಧೆ ಮತ್ತು 2023-24ನೇ ಸಾಲಿನ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗೆ ಟಿ. ಪಿ. ರಮೇಶ್ ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭವು ದಿನಾಂಕ 30 ನವೆಂಬರ್ 2024ರ ಶನಿವಾರ ಬೆಳಗ್ಗೆ  ಗಂಟೆ 10.00 ಕ್ಕೆ ಮಡಿಕೇರಿಯ ಲಯನ್ ಕ್ಲಬ್ ಸಭಾಂಗಣದಲ್ಲಿ ನಡೆಯಲಿದೆ. ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷರಾದ ಲೋಕನಾಥ ಅಮೆಚೂರು ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ  ಕಾರ್ಯಕ್ರಮದ ಉದ್ಘಾಟನೆಯನ್ನು ಕೊಡಗು ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಶ್ರೀಮತಿ ಐಶ್ವರ್ಯ ಆರ್ ನಡೆಸಲಿದ್ದಾರೆ.  ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್, ಶಿಕ್ಷಣ ಇಲಾಖೆ ಮಡಿಕೇರಿಯ ತಾಲೂಕು…

Read More

ಮುಳ್ಳೇರಿಯ : ಕನ್ನಡ ಭಾಷೆ, ಸಂಸ್ಕೃತಿಗೆ ಅಮೂಲ್ಯ ಕೊಡುಗೆ ನೀಡಿದ ಹಿರಿಯ ಸಾಧಕರನ್ನು ಅವರ ಮನೆಯಂಗಳದಲ್ಲಿ ಗೌರವಿಸುವ ಕನ್ನಡ ಸಾಹಿತ್ಯ ಪರಿಷತ್‌ ಇದರ ಕೇರಳ ಗಡಿನಾಡ ಘಟಕದ ‘ಸಾಹಿತ್ಯ ಪರಿಷತ್‌ ನಡಿಗೆ ಹಿರಿಯ ಸಾಧಕರ ಕಡೆಗೆ’ ಎಂಬ ಕಾರ್ಯಕ್ರಮದ ಅಂಗವಾಗಿ ಅಂತಾರಾಷ್ಟ್ರೀಯ ಖ್ಯಾತಿಯ ಹಿರಿಯ ಚಿತ್ರ ಕಲಾವಿದ ಹಾಗೂ ಜಲವರ್ಣ ಮಾಂತ್ರಿಕ ಪುಂಡೂರು ಶಂಕರನಾರಾಯಣ ಪುಣ್ಚಿತ್ತಾಯ (ಪಿ. ಎಸ್. ಪುಣಿಂಚತ್ತಾಯ) ಅವರನ್ನು ಕಾರಡ್ಕ ಬಳಿಯಲ್ಲಿರುವ ಅವರ ನಿವಾಸ ಕಾಂಚನಗಂಗಾದಲ್ಲಿ ದಿನಾಂಕ 23 ನವೆಂಬರ್ 2024ರ ಶನಿವಾರದಂದು ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್‌ ಇದರ ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ  ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಇವರು ಪಿ.ಎಸ್. ಪುಣಿಂಚತ್ತಾಯ ಮತ್ತು ಭಾರತಿ ಪುಣಿಂಚತ್ತಾಯ ದಂಪತಿಗೆ ಶಾಲು ಹೊದೆಸಿ ಫಲಪುಷ್ಪ ಸ್ಮರಣಿಕೆ ನೀಡಿ ಅಭಿನಂದಿಸಿದರು. ಅಭಿನಂದನಾ ಭಾಷಣ ಮಾಡಿದ ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷರಾದ ಪ್ರೊ. ಪಿ. ಎನ್. ಮುಡಿತ್ತಾಯ ಮಾತನಾಡಿ “ಜಲವರ್ಣ, ತೈಲವರ್ಣ ಎರಡರಲ್ಲೂ…

Read More

ವಿರಾಜಪೇಟೆ : ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು ಸಮೂಹ ಮತ್ತು ಕಲಾ ಉತ್ಸವ ಕೊಡಗು 2024ರ ಸಾಧಿಕ್ ಹಂಸ ಇವರ ಪ್ರಾಯೋಜಕತ್ವದಲ್ಲಿ‌ ದಿನಾಂಕ 15 ಡಿಸೆಂಬರ್ 2024ರಂದು ಬೆಳಗ್ಗೆ 10-30 ಗಂಟೆಗೆ ವಿರಾಜಪೇಟೆ ನಗರದ ‘ಶಾನ್‌ಭಾಗ್‌ ಸೆಂಟರ್’ (ಕೆನರಾ ಬ್ಯಾಂಕ್ ಇರುವ ಕಟ್ಟಡದ ಎರಡನೆಯ ಮಹಡಿಯಲ್ಲಿ) ಚಿತ್ರಕಲಾ ಪ್ರದರ್ಶನ, ಗೀತಗಾಯನ ಮತ್ತು ಕಾವ್ಯಗೋಷ್ಠಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ಕೆಳಕಂಡ ಚರ ದೂರವಾಣಿ ಸಂಖ್ಯೆಗೆ ಸಂದೇಶಗಳನ್ನು ಕಳುಹಿಸುವ ಮೂಲಕ ನೋಂದಣಿ ಮಾಡಿಕೊಳ್ಳಬೇಕಿದೆ. 1) ಗಿರೀಶ್ ಕಿಗ್ಗಾಲು +91 91413 95426 (2) ವಿಮಲ ದಶರಥ +91 90086 13729 (3) ಸುಪ್ರೀತ ದಿಲೀಪ್ 96322 02820 (4) ಪುಷ್ಪ ಡಿ. ಹೆಚ್ 97410 00410 (5) ಭಾಗ್ಯವತಿ ಅಣ್ಣಪ್ಪ +91 98454 75153 (6) ವೈಲೇಶ ಪಿ.ಎಸ್. ಕೊಡಗು 8861405738 (7) ಸಾಧಿಕ್ ಹಂಸ +919845820257 ಇವರನ್ನು ಸಂಪರ್ಕಿಸಲು ಕೋರಲಾಗಿದೆ. ಕವಿಗೋಷ್ಠಿಗೆ ಹೆಸರು ನೀಡಿರುವ ಕವಿಗಳು:- 1) ಗಿರೀಶ್…

Read More

ಮಂಗಳೂರು : ವಿಶ್ವ ಪರಂಪರೆಯ ಸಪ್ತಾಹದ ಅಂಗವಾಗಿ ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ದಿನಾಂಕ 20 ನವೆಂಬರ್ 2024ರಂದು ಇಂಟಾಕ್ ಮಂಗಳೂರು ವಿಭಾಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಮೌಖಿಕ ಮಹಾಕಾವ್ಯಗಳ ರಚನೆಯಲ್ಲಿ ಸ್ಥಳೀಯ ಜ್ಞಾನದ ಪಾತ್ರ” ಕುರಿತು ಸಂವಾದ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಇವರು ಮಾತನಾಡಿ “ಜಾನಪದವು ಸಂಸ್ಕೃತಿಯ ಅಮೂರ್ತವಾದ ಆದರೆ ಪ್ರಮುಖ ಭಾಗವಾಗಿದೆ. ಅದು ಸಾಮಾನ್ಯ ಜನರ ಅನುಭವಗಳು ಮತ್ತು ಬುದ್ಧಿವಂತಿಕೆಯನ್ನು ವ್ಯಕ್ತಪಡಿಸುತ್ತದೆ. ಅದನ್ನು ವಿಶೇಷ ಗಮನದಿಂದ ನೋಡಬೇಕಾಗಿದೆ. ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವಲ್ಲಿ ಜಾನಪದದ ಮಹತ್ವವನ್ನು ಹಾಗೂ ಜನಪದ ಸಾಹಿತ್ಯವು ಇತಿಹಾಸದಿಂದ ಹೇಗೆ ವಿಭಿನ್ನವಾಗಿದೆ ಎಂಬುದನ್ನು ವಿವರಿಸಿದರು. ಇತಿಹಾಸವು ಸಾಮಾನ್ಯವಾಗಿ ರಾಜರು ಮತ್ತು ಪ್ರಮುಖ ವ್ಯಕ್ತಿಗಳ ಸಾಧನೆಗಳನ್ನು ದಾಖಲಿಸಿದರೆ, ಜನಪದ ಸಾಹಿತ್ಯವು ಸಾಮಾನ್ಯ ಜನರ ಜೀವನವನ್ನು ಆವರಿಸುತ್ತದೆ ಮತ್ತು ಮೌಖಿಕ ಪರಂಪರೆಯ ಮೂಲಕ ಶ್ರಾವಣೀಯವಾಗಿ ಮುಂದುವರೆಯುತ್ತದೆ. ಜನಪದ ಸಾಹಿತ್ಯದಲ್ಲಿ ಗಾದೆಗಳು, ಹಾಡುಗಳು, ವಸ್ತು ಸಂಸ್ಕೃತಿ, ಆಚರಣೆಗಳು ಮತ್ತು…

Read More

ಕೋಟ : ಕೋಟದ ಸಾಲಿಗ್ರಾಮ ಮಕ್ಕಳ ಮೇಳವು ತನ್ನ ಐವತ್ತರ ಸಂಭ್ರಮಾಚರಣೆಯ ಸುವರ್ಣ ಪರ್ವದ ಮೂರನೆಯ ಕಾರ್ಯಕ್ರಮವು ಗಿರಿಜಾ ಶಂಕರನಾರಾಯಣ ಮಧ್ಯಸ್ಥ ಚಾರಿಟೇಬಲ್ ಟ್ರಸ್ಟ್ (ರಿ.) ಪಾರಂಪಳ್ಳಿ, ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಕಾರ್ಕಡ ಗೆಳೆಯರ ಬಳಗದ ಜಂಟಿ ನೆರವಿನೊಂದಿಗೆ ದಿನಾಂಕ 23 ನವಂಬರ್ 2024 ಶನಿವಾರದಂದು ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಪ್ರಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಚಂಡೆ ಬಾರಿಸುವ ಮೂಲಕ ಉದ್ಘಾಟಿಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಮಾತನಾಡಿ “ಯಕ್ಷಗಾನದ ಪರಂಪರೆ ಮತ್ತು ಶಿಸ್ತನ್ನು ಕಾಪಿಡುವಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ ಯಕ್ಷ ಪಯಣವು ಸಾರ್ಥಕವಾದುದು. ಹಾರಾಡಿ ಮಟಪಾಡಿ ತಿಟ್ಟುಗಳ ಪರಂಪರೆಗೆ ಸುವರ್ಣ ಸ್ಪರ್ಶದ ಮೆರುಗನ್ನು ಈ ತಂಡ ಕೊಟ್ಟಿದೆ. ಉಡುಪ ಮತ್ತು ಹಂದೆಯವರ ಜೋಡಿ ಯಕ್ಷಗಾನ ಪರಂಪರೆಯಲ್ಲಿ ಐತಿಹಾಸಿಕ ದಾಖಲೆಯನ್ನು ಮೆರದಿದೆ. ಯಕ್ಷಗಾನದ ಕುಣಿತ ಮತ್ತು ವೇಷಭೂಷಣಗಳ ನಿಜವಾದ ಚೆಲುವು ಮಕ್ಕಳ ಮೇಳದಲ್ಲಿ ಮಾತ್ರ ಕಾಣಲು ಸಾಧ್ಯ” ಎಂದು ಹೇಳಿದರು. ಗುರುನರಸಿಂಹ ದೇವಳದ…

Read More