Author: roovari

27 ಮಾರ್ಚ್ 2023, ಉಡುಪಿ: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಎಂ.ಜಿ.ಎಂ. ಕಾಲೇಜು, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿಯ ಆಶ್ರಯದಲ್ಲಿ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ದಿನಾಂಕ 25-03-2023 ಶನಿವಾರ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಯನ್ನು ಸ್ವೀಕರಿಸಿದ ಲೇಖಕಿ, ಸಂಶೋಧಕಿ ಬಿ.ಎಂ.ರೋಹಿಣಿಯವರು ಮಾತನಾಡಿ “ಪಂಡಿತ ಪರಂಪರೆಗೆ ಪ್ರಸಿದ್ದಿ ಪಡೆದ ಊರು ಅವಿಭಜಿತ ದ.ಕ. ಜಿಲ್ಲೆ. ಓದುವ ಹವ್ಯಾಸ ಬೆಳೆಸಿಕೊಂಡಾಗ ಮಾತ್ರ ಕಲೆ, ಜ್ಞಾನ ಸಿದ್ಧಿಸಲು ಸಾಧ್ಯವಿದೆ” ಎಂದು ಹೇಳಿದರು. ಮಾಹೆ ಸಹಕುಲಪತಿ ಡಾ. ನಾರಾಯಣ ಸಭಾಹಿತ್ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಸಮಿತಿಯ ಅಧ್ಯಕ್ಷ ಡಾ. ಬಿ.ಎ. ವಿವೇಕ ರೈ ಅಧ್ಯಕ್ಷತೆ ವಹಿಸಿ, “ವಯಸ್ಸು ಹಾಗೂ ಸಾಧನೆಯ ಹಿರಿತನ ಪ್ರತಿಯೊಬ್ಬರಿಗೂ ಇರಬೇಕು. ಹಿರಿಯರನ್ನು ಗೌರವಿಸಬೇಕು. ಇದು ಸಾಧನೆಗಷ್ಟೇ ಅಲ್ಲ, ಎಲ್ಲದಕ್ಕೂ ಅನ್ವಯ. ಬರವಣಿಗೆ, ಅಧ್ಯಾಪನ ನಿರಂತರ ಪ್ರಕ್ರಿಯೆ. ಬರವಣಿಗೆ ಬದುಕಿನ ಭಾಗವಾಗಬೇಕು. ಅಧ್ಯಯನವನ್ನೂ ಕಾಲಕ್ಕೆ ತಕ್ಕ ಹಾಗೆ ಬದಲಾಯಿಸುತ್ತಿರಬೇಕು. ಇದರಿಂದ ವಿವಿಧ ಕ್ಷೇತ್ರಗಳ ಬಗ್ಗೆ ನಮಗೆ ಜ್ಞಾನ ಸಿಗಲು ಸಾಧ್ಯ” ಎಂದರು. ಮುಳಿಯ ಗೋಪಾಲಕೃಷ್ಣ…

Read More

29 ಮಾರ್ಚ್ 2023, ಉಳ್ಳಾಲ: ‘ಶಾರದಾಮೃತ’ ಸ್ಮರಣಸಂಚಿಕೆ ಮುಂದಿನ ಪೀಳಿಗೆಗೆ ಮಾರ್ಗದರ್ಶಿ – ಯು.ಎಸ್.ಪ್ರಕಾಶ್ ಉಳ್ಳಾಲದ ಸಾರ್ವಜನಿಕ ನವರಾತ್ರಿ ಶ್ರೀ ಶಾರದಾ ಉತ್ಸವ ಸಮಿತಿಯು ತನ್ನ ಅಮೃತ ವರ್ಷಾಚರಣೆಯ ಸವಿನೆನಪಿಗಾಗಿ ಪ್ರಕಟಿಸಿದ ‘ ಶಾರದಾಮೃತ’ ಸ್ಮರಣಸಂಚಿಕೆಯ ಅನಾವರಣ ಸಮಾರಂಭ ಇತ್ತೀಚೆಗೆ ಉಳ್ಳಾಲದ ಮುಖ್ಯ ರಸ್ತೆಯಲ್ಲಿರುವ ಶ್ರೀ ಶಾರದಾ ನಿಕೇತನದಲ್ಲಿ ಜರಗಿತು. ಉತ್ಸವ ಸಮಿತಿಯ ಗೌರವಾಧ್ಯಕ್ಷ ಶ್ರೀ ಯು.ಎಸ್.ಪ್ರಕಾಶ್ ಸಂಚಿಕೆಯನ್ನು ಅನಾವರಣಗೊಳಿಸಿ ಮಾತನಾಡುತ್ತಾ, ಉಳ್ಳಾಲದಲ್ಲಿ ಕಳೆದ 75 ವರ್ಷಗಳಿಂದ ಸಮಸ್ತ ಹಿಂದು ಸಮಾಜ ಬಾಂಧವರು ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರುತ್ತಿರುವ ಶಾರದಾ ಉತ್ಸವವು,ಉಳ್ಳಾಲ ನರಸಿಂಹ ಮಲ್ಯ, ಉಳ್ಳಾಲ ದಯಾನಂದ ನಾಯಕ್ ರಂತಹ ಹಿರಿಯರ ದೂರದರ್ಶಿತ್ವದ ಫಲಸ್ವರೂಪವಾಗಿ ನಿರಂತರವಾಗಿ ನಡೆದುಬಂದಿದೆ. ಈ ಉತ್ಸವವು ಅನೂಚಾನವಾಗಿ ನಡೆದುಕೊಂಡು ಬಂದ ದಾರಿ ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡುವಲ್ಲಿ ‘ ಶಾರದಾಮೃತ ‘ ಸ್ಮರಣ ಸಂಚಿಕೆಯು ಖಂಡಿತವಾಗಿಯೂ ಸಹಕಾರಿಯಾಗಲಿದೆ. ಈ ಅಮೂಲ್ಯ ಸಂಚಿಕೆಯನ್ನು ರೂಪುಗೊಳಿಸಿದ ಪ್ರಧಾನ ಸಂಪಾದಕ ಎಂ.ವಾಸುದೇವ ರಾವ್ ಸಹಿತವಾಗಿ ಸಂಪಾದಕೀಯ ಮಂಡಳಿಯ ಸದಸ್ಯರೆಲ್ಲರೂ ಅಭಿನಂದನಾರ್ಹರು ಎಂದು ನುಡಿದರು.…

Read More

29 ಮಾರ್ಚ್ 2023, ಕಾಂತಾವರ: ಅನುಭಾವದಿಂದಲೇ ಸಮಾಜಕ್ಕೆ ಬೆಳಕಾದ ಅಲಕ್ಷಿತ ವಚನಕಾರರು 12ನೇ ಶತಮಾನದಲ್ಲಿ ಅಲಕ್ಷಿತ ವಚನಕಾರರೆಂದು ಗುರುತಿಸಲ್ಪಟ್ಟವರೆಲ್ಲರೂ ಅತ್ಯಂತ ಕೆಳಸ್ತರದಿಂದ ಬಂದವರಾಗಿದ್ದರು. ಇವರೆಲ್ಲ ನಿರಕ್ಷರಕುಕ್ಷಿಗಳಾಗಿದ್ದರೂ ತಮ್ಮ ಅನುಭವ ಅನುಭಾವದಿಂದಲೇ ಸಮಾಜಕ್ಕೆ ಬೆಳಕಾದರು. ದನಿ ಕಳೆದುಕೊಂಡ ತಳಸಮುದಾಯಗಳ ಜನರ ಸಾಮಾಜಿಕ ಮುಖವಾಣಿಯಾಗಿ ಕಾರ್ಯನಿರ್ವಹಿಸಿದ ಬಸವಣ್ಣನವರು ಆ ಸಮುದಾಯಗಳ ಆತ್ಮಸ್ವರೂಪ ಜಾಗೃತಿಗೆ ಶ್ರಮಿಸಿದರು. ಅದು ಒತ್ತಾಯದ ನೆಲೆಯಿಂದ ಆಗದೆ ಮನೋವಿಕಾಸದಿಂದಾಯಿತು ಎಂಬುದಾಗಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕನ್ನಡ ಉಪನ್ಯಾಸಕರಾಗಿರುವ ಡಾ. ಡಿ.ವಿ.ಪ್ರಕಾಶ್ ಅವರು ಇಲ್ಲಿ ಮಾತನಾಡುತ್ತಾ ತಿಳಿಸಿದರು. ಕನ್ನಡ ಸಂಘ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಇವರ ಜಂಟಿ ಸಹಯೋಗ ಹಾಗೂ ಕರ್ನಾಟಕ ಸರಕಾgದÀ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದೊಂದಿಗೆ ಕಾರ್ಕಳದ ಸುಂದರ ಪುರಾಣಿಕ ಸ್ಮಾರಕ ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ ಅರಿವು – ತಿಳಿವು ತಿಂಗಳ ಕಾರ್ಯಕ್ರಮದಲ್ಲಿ ಅವರು “ಅಲಕ್ಷಿತ ವಚನಕಾರರ ವಚನಗಳಲ್ಲಿ ಸಾಮಾಜಿಕ ಕಳಕಳಿ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಬಹುಸಂಖ್ಯಾತ ಉಪೇಕ್ಷಿತ ಜನಸಮುದಾಯ…

Read More

29 March 2023, Mangaluru: The poetry session began with the recitation of a few ghazals in Tulu and Kannada by Muhammad Baddoor while Deevith S.K. Peradi, Mahesh Nayak and Raghu Idkidu read poems in Kannada. Jayalakshmi R. Shetty and Lathish Paldane read out Tulu poems Mangaluru Chapter of the Indian National Trust for Art and Cultural Heritage (INTACH) and Art Kanara Trust organised “Kare Barita Kabitelu,” a multilingual poetry session to coincide with World Poetry Day (March 21), on Saturday, March 25 here. The poetry session began with the recitation of a few ghazals in Tulu and Kannada by Muhammad…

Read More

29 ಮಾರ್ಚ್ 2023, ಪುತ್ತೂರು: ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಮತ್ತು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇವರು ಪಾಕ್ಷಿಕ ತಾಳಮದ್ದಳೆಯ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದ್ದಾರೆ. ಒಂದೇ ದಿನದಲ್ಲಿ ಎರಡೆರದು ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದ ಖ್ಯಾತಿ ಇವರದ್ದು. ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಸದಸ್ಯರಿಂದ ದಿನಾಂಕ 25.03.2023ರಂದು ಸಂಜೆ ಶ್ರೀ ಆಂಜನೇಯ ಮಂತ್ರಾಲಯದಲ್ಲಿ “ಜಾಂಬವತಿ ಕಲ್ಯಾಣ” ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಕುಸುಮಾಕರ ಆಚಾರ್ಯ ಹಳೆನೇರೆಂಕಿ, ಚಂದ್ರಶೇಖರ್ ಹೆಗ್ಡೆ ನೆಲ್ಯಾಡಿ, ಪದ್ಯಾಣ ಶಂಕರನಾರಾಯಣ ಭಟ್, ಪ್ರೊ.ದಂಬೆ ಈಶ್ವರ ಶಾಸ್ತ್ರೀ ಸಹಕರಿಸಿದರು. ಮುಮ್ಮೇಳದಲ್ಲಿ  ದುಗ್ಗಪ್ಪ ಯನ್. (ಶ್ರೀಕೃಷ್ಣ), ಭಾಸ್ಕರ್ ಬಾರ್ಯ (ಬಲರಾಮ), ಕು೦ಬ್ಳೆ ಶ್ರೀಧರ್ ರಾವ್ (ನಾರದ), ಕಿಶೋರಿ ದುಗ್ಗಪ್ಪ ನಡುಗಲ್ಲು (ಜಾಂಬವ) ಸಹಕರಿಸಿದರು. ಟಿ.ರಂಗನಾಥ ರಾವ್ ಸ್ವಾಗತಿಸಿ, ವಂದಿಸಿದರು. ಪುತ್ತೂರು ಸಮೀಪದ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಳದ ಪುನ: ಪ್ರತಿಷ್ಟಾಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ದಿನಾಂಕ 27.03.2023ರಂದು ಶ್ರೀ ಆಂಜನೇಯ…

Read More

28 ಮಾರ್ಚ್ 2023, ಮಂಗಳೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕವು ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ‘ಮನದನಿ’ – ಹೆಣ್ಣಿನ ಒಳದನಿ ಕಾರ್ಯಕ್ರಮವು ದಿನಾಂಕ 25-03-2023ರಂದು ಮಂಗಳೂರಿನ ಇಂದಿರಾ ಪ್ರಿಯದರ್ಶಿನಿ ಉದ್ಯಾನವನ ಹ್ಯಾಟ್ ಹಿಲ್, ಲಾಲ್ ಬಾಗ್ ಇಲ್ಲಿ ಮಂಗಳೂರು ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಸರಸ್ವತಿ ಎಸ್.ಕೆ. ಇವರ ಅಧ್ಯಕ್ಷತೆಯಲ್ಲಿ ಜರಗಿತು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ರಾಜೇಶ್ ಬಿ. ಇವರು ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ “ಯುವವಾಹಿನಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ‘ಮನದನಿ’ – ಹೆಣ್ಣಿನ ಒಳದನಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಂತೋಷವನ್ನು ತಂದಿದೆ. ಮಹಿಳೆಯರು ಎನನ್ನೂ ಬಯಸದವರು, ಗೌರವ, ಸಮಾನತೆ, ಪ್ರೀತಿ, ನಂಬಿಕೆ ಇದನ್ನು ಮಾತ್ರ ಬಯಸುತ್ತಾರೆ. ಈ ನಾಲ್ಕನ್ನು ತಮ್ಮ ಜೀವನದಲ್ಲಿ ಅರ್ಥಗರ್ಭಿತವಾಗಿ ಅಳವಡಿಸಿಕೊಂಡು ನೋವು, ನಲಿವು, ಕಷ್ಟ, ಸುಖಗಳೊಂದಿಗೆ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಈ ಮಹಿಳಾ ದಿನಾಚರಣೆಯು ಅರ್ಥಪೂರ್ಣವಾಗಿರಬೇಕು” ಎಂದರು. ಜಾನಪದ ವಿದ್ವಾಂಸರಾದ ಕೆ.ಕೆ. ಪೇಜಾವರ ಇವರು ಮಾತನಾಡಿ “ವಿಶ್ವ ಮಹಿಳಾ…

Read More

29 ಮಾರ್ಚ್ 2023, ಪುತ್ತೂರು: ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಶಿವರಾಮ ಕಾರಂತ ಅಧ್ಯಯನ ಕೇಂದ್ರ ಕೊಡಮಾಡುವ ನಿರಂಜನ ಪ್ರಶಸ್ತಿಗೆ ಕತೆ ಹಾಗೂ ಕಾದಂಬರಿಗಾರ್ತಿ ಗಂಗಾ ಪಾದೇಕಲ್ಲು ಆಯ್ಕೆಯಾಗಿದ್ದಾರೆ. ಪ್ರಶಸ್ತಿಗೆ 15 ಸಾವಿರ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಮತಿ ಕಲ್ಲೂರಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 1948ರ ಸೆಪ್ಟೆಂಬರ್ 1ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಜನಿಸಿದ ಗಂಗಾ ಪಾದೇಕಲ್ಲು ಅವರ ಮೂಲ ಹೆಸರು ಗಂಗಾರತ್ನ. ತಂದೆ ಮುಳಿಯ ಕೇಶವ ಭಟ್ಟ, ತಾಯಿ ಸರಸ್ವತಿ ಅಮ್ಮ. ಏಳನೇ ತರಗತಿವರೆಗೆ ಓದಿದ ಗಂಗಾ ಅವರು 16ನೇ ವಯಸ್ಸಿನಲ್ಲಿ ಇವರ ವಿವಾಹ ಪಾದೇಕಲ್ಲು ಗೋವಿಂದ ಭಟ್ಟರೊಂದಿಗೆ ಆಯಿತು. ಈಗ ಇವರಿಗೆ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. 34ನೇ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡ ಗಂಗಾ, ಸಾಹಿತ್ಯ ಚಟುವಟಿಕೆ ಮೂಲಕ ಹೆಸರು ಗಳಿಸಿದರು. “ಪುಲಪೇಡಿ ಮತ್ತು ಇತರ ಕತೆಗಳು”, “ಹೆಜ್ಜೆ ಮೂಡದ ಹಾದಿಯಲ್ಲಿ”, “ಹೊಸ ಹೆಜ್ಜೆ”, “ವಾಸ್ತವ”, “ಕ್ಷಮಯಾ ಧರಿತ್ರಿ”, “ನೆಲೆ…

Read More

27 ಮಾರ್ಚ್ 2023, ಮಂಗಳೂರು: ಸಂಘಟಕ, ಕವಿ ಕಾ.ವೀ.ಕೃಷ್ಣದಾಸ್ ಅವರ 5ನೇ ಕೃತಿ, ಇಂಗ್ಲಿಷ್ ಹಾಯ್ಕುಗಳ ಸಂಕಲನ ‘ದಿ ಡಿವೋಷನ್’ ಭಾನುವಾರ ಕೊಂಚಾಡಿಯ ಶಿವಪ್ರಸಾದ್ ಗೋಲ್ಡ್ ವಸತಿ ಸಮುಚ್ಚಯದ ಆವರಣದಲ್ಲಿ ಏರ್ಪಡಿಸಿದ್ದ ಅವರ ಮಗಳು ‘ಭಕ್ತಿ’ ಯ ಪ್ರಥಮ ಹುಟ್ಟು ಹಬ್ಬದ ಸಂಭ್ರಮಾಚರಣೆಯಲ್ಲಿ ಲೋಕಾರ್ಪಣೆಗೊಂಡಿತು. ಕಾ.ವೀ.ಕೃಷ್ಣದಾಸ್ ಅವರ ಮಗಳು ಕುಮಾರಿ ಭಕ್ತಿ ಕೆ. ದಾಸ್ ಅವರು ಕೃತಿಯನ್ನು ಬಿಡುಗಡೆಗೊಳಿಸಿದರು. ಈ ವೇಳೆ ಹಿರಿಯ ಸಾಹಿತಿಗಳಾದ ಇರಾ ನೇಮು ಪೂಜಾರಿ, ಭಾಸ್ಕರ್ ರೈ ಕುಕ್ಕುವಳ್ಳಿ, ಹರೀಶ ಸುಲಾಯ ಒಡ್ಡಂಬೆಟ್ಟು, ರಘು ಇಡ್ಕಿದು, ಪತ್ರಕರ್ತ ಕವಿ ರಾಜೇಶ್ ಶೆಟ್ಟಿ ದೋಟ, ವ.ಉಮೇಶ್ ಕಾರಂತ್, ಲತಾ ಕೃಷ್ಣದಾಸ್, ರಜತ್ ಕೆ. ದಾಸ್, ಗಾಯಕ ಜಗದೀಶ್ ಶಿವಪುರ ಉಪಸ್ಥಿತರಿದ್ದರು. ಕವಯತ್ರಿ ಗೀತಾ ಲಕ್ಷ್ಮೀಶ್, ಹಿರಿಯ ಕವಯತ್ರಿ ಸುಧಾ ನಾಗೇಶ್, ರಾಜೇಶ್ವರಿ ಬಜ್ಪೆ, ಬದ್ರುದ್ದೀನ್ ಕೂಳೂರು ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಇದಕ್ಕೂ ಮುನ್ನ ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನದ ಸಹ ಸಂಸ್ಥೆ ಅಖಿಲ ಭಾರತ ಕವಿಗಳು ಮತ್ತು…

Read More

27 ಮಾರ್ಚ್ 2023, ಮಂಗಳೂರು: ಕದಂಡಲೆ ನಾರಾಯಣರವರು 1955ರಲ್ಲಿ ಮಂಗಳೂರಿನ ರಥಬೀದಿಯಲ್ಲಿ “ಕೆ.ಎನ್.ಟೈಲರ್” ಹೆಸರಿನ ಟೈಲರಿಂಗ್ ಅಂಗಡಿ ತೆರೆದು ತನ್ನ ವೃತ್ತಿ ಜೀವನವನ್ನು ಆರಂಭಿಸಿದರು. ಇದು ಮಂಗಳೂರಿನ ನಾಟಕಾಸಕ್ತರಿಗೆ ಸೇರುವ ತಾಣವಾಯಿತು. ಕೆಮ್ತೂರು ದೊಡ್ಡಣ್ಣ ಶೆಟ್ಟಿ, ರಮಾನಂದ ಚೂರ್ಯ ಮುಂತಾದವರ ನಾಟಕಗಳಿಂದ ಪ್ರಭಾವಿತರಾಗಿ ನಾಟಕಾಸಕ್ತಿ ಬೆಳೆಸಿ ಮುಂದೆ 14-04-1958ರಲ್ಲಿ ಯುಗಾದಿ ಸಂದರ್ಭದಲ್ಲಿ “ಶ್ರೀ ಗಣೇಶ್ ನಾಟಕ ಸಭಾ” ಎಂಬ ನಾಟಕ ಸಂಸ್ಥೆಯನ್ನು ಸ್ಥಾಪಿಸಿ, ಆ ಮೂಲಕ ತುಳು ನಾಟಕ ರಂಗದ ಇತಿಹಾಸವನ್ನೇ ಬದಲಿಸಿದರು. ತನ್ನ ವಿಭಿನ್ನ ನಾಟಕಗಳಿಂದ “ಕೆ.ಎನ್.ಟೈಲರ್” ಎಂಬ ನಾಟಕಗಾರ, ನಿರ್ದೇಶಕ, ನಟ, ಸಂಘಟಕರಾಗಿ ಪ್ರಸಿದ್ಧಿ ಪಡೆದರು. ಕರಾವಳಿ ಭಾಗದಲ್ಲಿ ಕಾಸರಗೋಡಿನಿಂದ ಕುಂದಾಪುರದವರೆಗೆ ತನ್ನ ತುಳು ನಾಟಕಗಳ ಪ್ರದರ್ಶನವಿತ್ತು ಜನ ಮೆಚ್ಚುಗೆ ಗಳಿಸಿದರು. ಕರಾವಳಿ ಭಾಗದಲ್ಲಿ ಮಾತ್ರವಲ್ಲದೆ, ದೂರದ ಮುಂಬೈ, ಡೆಲ್ಲಿ, ಚೆನ್ನೈ, ಪುಣೆ, ಬೆಂಗಳೂರು, ಧಾರವಾಡ, ಮೈಸೂರು ಮುಂತಾದ ಪಟ್ಟಣಗಳಲ್ಲಿ ತುಳು ನಾಟಕಗಳ ಕಂಪನ್ನು ಪಸರಿಸಿ ಜನ ಮನ್ನಣೆ ಗಳಿಸಿದವರು ಕೆ.ಎನ್.ಟೈಲರ್ ಇವರು ಹಲವಾರು ನಾಟಕಗಳನ್ನು ರಚಿಸಿ, ನಾಟಕದ ಹೆಸರಲ್ಲೇ…

Read More

27 ಮಾರ್ಚ್ 2023, ಮಂಗಳೂರು: ಕಲಾಭಿ ಮಂಗಳೂರು ಪ್ರಸ್ತುತ ಪಡಿಸುವ ಬುನ್ರಾಕು ಗೊಂಬೆಯಾಟ ಕಾರ್ಯಾಗಾರದ ಕಲಿಕಾ ಪ್ರಸ್ತುತಿ ‘’ಪುರ್ಸನ ಪುಗ್ಗೆ‘’ ಇದೇ ಬರುವ ದಿನಾಂಕ 28-03-2023ರಂದು ಸಂಜೆ 6.30ಕ್ಕೆ ಕಲಾಭಿ ಥಿಯೇಟರ್, ಮಾಲೆಮಾರ್, ಮಂಗಳೂರು ಇಲ್ಲಿ ನಡೆಯಲಿದೆ. ಬುನ್ರಾಕು ಗೊಂಬೆಯಾಟ ಮೂಲತಃ ಜಪಾನಿನ ಜಾನಪದ ಕಲೆಯಾಗಿದ್ದು, ಜಪಾನಿನ ಅತ್ಯಂತ ಪ್ರಾಚೀನ ಹಾಗೂ ಪ್ರಸಿದ್ಧ ಕಲಾ ಪ್ರಕಾರವಾಗಿದೆ. ತನ್ನ ಉತ್ಕೃಷ್ಟ ಕಲಾತ್ಮಕ ತಂತ್ರಗಾರಿಕೆ ಹಾಗೂ ಸೂತ್ರಗಳು ಇಲ್ಲದೆಯೇ ನೇರ ಕೈಗಳ ಬಳಕೆಯಿಂದ ಗೊಂಬೆಗಳಿಗೆ ಜೀವ ತುಂಬುವ ಕ್ರಮದಿಂದಾಗಿ ರಂಗದ ಮೇಲೆ ನಮ್ಮ ವಾಸ್ತವಕ್ಕೆ ತೀರಾ ಹತ್ತಿರ ಎಂಬುವಷ್ಟು ಭಾವನೆ, ಚಲನವಲನಗಳ ಸಾದ್ಯತೆಗಳನ್ನು ಕಲ್ಪಿಸಿ ಬೇರೆ ಎಲ್ಲ ಮಾದರಿಯ ಗೊಂಬೆಗಳಿಂದ ಭಿನ್ನವಾಗಿ ನಿಲ್ಲುವುದು ಇದರ ವಿಶೇಷತೆ. ಇಲ್ಲಿ ಮೂರು ಜನ ಸೇರಿ ಒಂದು ಬೊಂಬೆಯನ್ನು ಅಡಿಸುತ್ತಿರುತ್ತಾರೆ. ಪ್ರಸ್ತುತ ನಾಟಕದಲ್ಲಿ ಬರುವ ಗೊಂಬೆಗಳು ಈ ಬುನ್ರಾಕು ಕಲಾಪ್ರಕಾರದ ಪ್ರಭಾವದಿಂದ ಹುಟ್ಟಿ ಕಥಾವಸ್ತುವಿಗನುಸಾರ ತನ್ನ ಕೆಲವು ಮೂಲ ಜಾನಪದ ಅಂಶಗಳನ್ನು ತೊರೆದು ಸಮಕಾಲೀನ ಶೈಲಿಯಲ್ಲಿ ವಿನ್ಯಾಸಗೊಂಡಿದೆ. ನಿರ್ದೇಶಕರು: ಶ್ರವಣ…

Read More