Subscribe to Updates
Get the latest creative news from FooBar about art, design and business.
Author: roovari
ಮಂಗಳೂರು: ಸಾಯಿಶಕ್ತಿ ಯಕ್ಷಕಲಾ ಬಳಗದಿಂದ ನಗರದ ಪುರಭವನದಲ್ಲಿ ದಿನಾಂಕ : 03-07-2023ರಂದು ಸೀನ್ ಸೀನರಿಯ ಯಕ್ಷನಾಟಕ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಉದ್ಘಾಟಿಸಿ ಮಾತನಾಡುತ್ತಾ “ಯಾವುದೇ ಕಲೆಯ ಮೂಲ ಆಶಯ ಮತ್ತು ಮೌಲ್ಯಕ್ಕೆ ಚ್ಯುತಿ ಬಾರದಂತೆ ವಿಭಿನ್ನ ರೀತಿಯ ಪ್ರಯೋಗಗಳು ಸ್ವಾಗತಾರ್ಹವಾಗಿರುವುದರೊಂದಿಗೆ, ಪ್ರಸ್ತುತ ಕಾಲಘಟಕ್ಕೆ ಅದರ ಅನಿವಾರ್ಯತೆಯೂ ಇದೆ. ಯಕ್ಷಗಾನದಲ್ಲೂ ಅನೇಕ ಪ್ರಯೋಗಗಳು ನಡೆಯುತ್ತಿದ್ದು, ಈ ಮೂಲಕ ಜಗತ್ತಿಗೆ ಕಲೆಯ ಹಿರಿಮೆಯನ್ನು ತೋರಿಸಿಕೊಟ್ಟಿದೆ. ಸೀನ್ ಸೀನರಿಯೂ ಕೂಡಾ ಅಂತಹ ಪ್ರಯೋಗಗಳಲ್ಲಿ ಒಂದಾಗಿದ್ದು ಯಶಸ್ವಿಯಾಗಲಿ” ಎಂದು ಶುಭ ಹಾರೈಸಿದರು. ಕಟೀಲು ಯಕ್ಷಗಾನ ಮೇಳಗಳ ಯಜಮಾನ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಸಾಲಿಗ್ರಾಮ ಮೇಳದ ಯಜಮಾನ ಪಳ್ಳಿ ಕಿಶನ್ ಹೆಗ್ಡೆ, ವಿದ್ವಾಂಸ ಡಾ.ಎಂ. ಪ್ರಭಾಕರ ಜೋಷಿ, ಸಾಯಿಶಕ್ತಿ ಕಲಾ ಬಳಗ ಮುಂಬಯಿ ಸಂಚಾಲಕ ಬಾಲಕೃಷ್ಣ ಶೆಟ್ಟಿ ಅಜೆಕಾರು, ಶಿರಡಿ ಸಾಯಿ ಮಂದಿರದ ಮುಖ್ಯಸ್ಥ ವಿಶ್ವಾಸ್ ಕುಮಾರ್ ದಾಸ್, ಯಕ್ಷನಾಟಕದ ನಿರ್ಮಾಪಕಿ ಲಾವಣ್ಯ ವಿಶ್ವಾಸ ಕುಮಾರ್,…
ಮಂಗಳೂರು: ಶ್ರೀ ಗುರುಪೂರ್ಣಿಮೆಯ ಪ್ರಯುಕ್ತ ಜೆಪ್ಪು ಭಿಕ್ಷು ಲಕ್ಷ್ಮಣಾನಂದ ಸಭಾಭವನದಲ್ಲಿ ಭಾಗವತ ಶ್ರೀ ಯೋಗೀಶ್ ಕುಮಾರ್ ಜೆಪ್ಪು ಹಾಗೂ ಯಕ್ಷಗುರು ವರ್ಕಾಡಿ ರವಿ ಅಲೆವೂರಾಯರನ್ನು ಗೌರವಿಸಿ ಗುರುವಂದನೆ ಮಾಡಲಾಯಿತು. ಶ್ರೀರಾಮ ಕ್ಷತ್ರಿಯ ಮಹಿಳಾ ಯಕ್ಷ ವೃಂದದ ವಾರಿಜಾ ಕೊರಗಪ್ಪ, ಶಾಲಿನಿ ರಾಮಚಂದ್ರ, ಕಲ್ಪನಾ ವೆಂಕಟೇಶ್, ಜಯಲಕ್ಷೀ ನರಸಿಂಹ, ಗಾಯತ್ರೀ ಯೋಗೀಶ್, ಗೌರಿ, ಮೀರಾ, ಸ್ವರ್ಣಲತಾ ಲಕ್ಷೀನಾರಾಯಣ, ಗಾಯತ್ರೀ ನಾಗೇಶ್ ಉಪಸ್ಥಿತರಿದ್ದರು. ದೇಶೀಯ ಗುರುಪರಂಪರೆ ಮತ್ತು ಗುರುಕುಲ ಶಿಕ್ಷಣದ ಬಗ್ಗೆ ಶ್ರೀ ಯೋಗೀಶ್ ಕುಮಾರ್ ಉಪನ್ಯಾಸವಿತ್ತರು.
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು 2023ನೇ ಸಾಲಿನ ʻಅಭಯಲಕ್ಷ್ಮೀ ದತ್ತಿನಿಧಿʼ ಪ್ರಶಸ್ತಿಗೆ ಡಾ. ಎಚ್.ಎ. ಪಾರ್ಶ್ವನಾಥ ಹಾಗೂ ಶ್ರೀಮತಿ ಪ್ರೇಮಾ ಭಟ್ ಅವರನ್ನು ಆಯ್ಕೆ ಮಾಡಲಾಗಿದೆ. ಶ್ರೀಮತಿ ಪಿ. ಅಭಯಕುಮಾರ್ ಅವರು ತಮ್ಮ ಪತಿ ದಿ. ಎಸ್.ಎ. ಅಭಯಕುಮಾರ್ ಅವರ ಪುಣ್ಯ ಸ್ಮರಣಾರ್ಥ ಕನ್ನಡಿಗರ ಸಾರ್ವಭೌಮ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ʻಅಭಯಲಕ್ಷ್ಮೀ ದತ್ತಿನಿಧಿʼ ಹೆಸರಿನಲ್ಲಿ ವಿಶೇಷ ದತ್ತಿ ನಿಧಿಯನ್ನು ಸ್ಥಾಪಿಸಿ, ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರದ ಮೂಲಕ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸುತ್ತಿರುವ ಇಬ್ಬರನ್ನು ಗುರುತಿಸಿ ಈ ಪ್ರಶಸ್ತಿ ಪ್ರದಾನ ಮಾಡಬೇಕು ಎನ್ನವುದು ದತ್ತಿ ದಾನಿಗಳ ಆಶಯವಾಗಿದೆ. ದತ್ತಿಯ ಆಶಯದಂತೆ ರಂಗಭೂಮಿ ಕ್ಷೇತ್ರದಲ್ಲಿ ಅಗಣಿತ ಸೇವೆ ಸಲ್ಲಿಸಿದ ಹಾಗೂ ಸಾಹಿತ್ಯ ಕ್ಷೇತ್ರದ ಮೂಲಕ ಕನ್ನಡ ನಾಡು ನುಡಿಯ ಸೇವೆಯಲ್ಲಿ ಗುರುತಿಸಿಕೊಂಡಿರುವ ಇಬ್ಬರನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿದ್ದು. ಪ್ರಶಸ್ತಿಯು ತಲಾ ರೂ10,000/-(ಹತ್ತು ಸಾವಿರ) ನಗದು, ಫಲ ತಾಂಬೂಲ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. 2023ನೇ ಸಾಲಿನ ಈ ಪ್ರಶಸ್ತಿಗಾಗಿ ರಂಗಭೂಮಿ…
ಬದಿಯಡ್ಕ : ರಂಗಸಿರಿ ಸಾಂಸ್ಕೃತಿಕ ವೇದಿಕೆ ಬದಿಯಡ್ಕ ಇದರ ನೇತೃತ್ವದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ ಸಹಯೋಗದೊಂದಿಗೆ ಬದಿಯಡ್ಕ ಗ್ರಾಮ ಪಂಚಾಯತಿನಾದ್ಯಂತ ನಡೆಯುತ್ತಿರುವ “ಗ್ರಾಮ ಪರ್ಯಟನೆ” ಅಭಿಯಾನದ 5ನೇ ಸರಣಿ ಕಾರ್ಯಕ್ರಮ ದಿನಾಂಕ 02-07-2023 ರಂದು ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ನಡೆಯಿತು. ಸಂಘಟನೆಯ ಅಧ್ಯಕ್ಷೆ ಶ್ರೀಮತಿ ಪ್ರಭಾವತಿ ಕೆದಿಲಾಯ ಪುಂಡೂರು ಇವರ ಅಧ್ಯಕ್ಷತೆಯಲ್ಲಿ ಜರಗಿದ ಸಭಾಕಾರ್ಯಕ್ರಮದಲ್ಲಿ ಪತ್ರಕರ್ತ ಜಯ ಮಣಿಯಂಪಾರೆಯವರು “ಗಡಿನಾಡಿನ ಕನ್ನಡ ಮಾಧ್ಯಮದ ಸವಾಲುಗಳು” ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದರು. ಈ ಸಂದರ್ಭದಲ್ಲಿ ಸಾಮಾಜಿಕ ಧಾರ್ಮಿಕ ಮುಂದಾಳು ಸುಬ್ರಹ್ಮಣ್ಯ ಭಟ್ ನೀರ್ಚಾಲು ಇವರನ್ನು ಸನ್ಮಾನಿಸಲಾಯಿತು. ಆಶ್ರಯ ಆಶ್ರಮದ ಜನಸೇವಾ ವಿಶ್ವಸ್ಥ ನಿಧಿ ಅಧ್ಯಕ್ಷರಾದ ಶ್ರೀ ಕೃಷ್ಣ ಭಟ್ ಪುದುಕೋಳಿ ಶುಭಾಶಂಸನೆಗೈದರು. ಯಕ್ಷ ಗುರು ಸೂರ್ಯನಾರಾಯಣ ಪದಕಣ್ಣಾಯ, ಕರಿಂಬಿಲ ಲಕ್ಷ್ಮಣ ಪ್ರಭು, ಗುಣಾಜೆ ಶಿವಶಂಕರ ಭಟ್, ರಮೇಶ್ ಕಳೇರಿ, ದಿನೇಶ್ ಬೊಳುಂಬು ಮೊದಲಾದವರು ಉಪಸ್ಥಿತರಿದ್ದರು. ಈಸಂದರ್ಭದಲ್ಲಿ ಭಾಗವತಿಕೆಯ ರಂಗಪ್ರವೇಶಗೈದ ಕು.ವರ್ಷಾ ಲಕ್ಷ್ಮಣ್ ಬದಿಯಡ್ಕ ಅವರನ್ನು ಗೌರವಿಸಲಾಯಿತು.…
“ಕಾಂತಾರ” ಸಿನಿಮಾದಲ್ಲಿ ‘ಕಾಡಿನಲ್ಲಿ ಒಂದು ಸೊಪ್ಪು ಸಿಗ್ತದೆ’ ಎಂಬ ಡೈಲಾಗ್ ನಿಂದ ಚಿಕ್ಕ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದುಕೊಂಡ ನಮ್ಮ ಕರಾವಳಿಯ ಹೆಮ್ಮೆಯ ನಟಿ ಚಂದ್ರಕಲಾ ರಾವ್ ಕದಿಕೆ. ಉಡುಪಿ ಜಿಲ್ಲೆಯ ಕದಿಕೆಯ ಬಡನಿಡಿಯೂರು ಗ್ರಾಮದ ದಿ. ಟಿ. ಕೇಶವ ರಾವ್ ಹಾಗೂ ಶಾರದರವರ ಸುಪುತ್ರಿಯಾದ ಚಂದ್ರಕಲಾ ರಾವ್ ಕದಿಕೆ ಇವರು ನೃತ್ಯದ ಮೂಲಕ ವೇದಿಕೆಗೆ ಪಾದಾರ್ಪಣೆ ಮಾಡಿದರು. ಎಂಟನೇ ತರಗತಿಯಲ್ಲಿ ನಾಟಕ ರಂಗವನ್ನು ಪ್ರವೇಶಿಸಿದ ಇವರ ಮೊದಲನೇ ನಾಟಕ ಬೈರನ ಬದುಕು. ನಾಟಕ ರಂಗಕ್ಕೆ ಇವರನ್ನು ಪರಿಚಯಿಸಿದವರು ವಾಸು ಮಾಸ್ಟರ್. 2000ನೇ ಇಸವಿಯಲ್ಲಿ ನಾಟಕ ರಂಗಕ್ಕೆ ಪ್ರವೇಶ ಮಾಡಿದ ನಂತರ ಉಡುಪಿ ರಂಗಭೂಮಿಯಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿ, ನಂತರದ ದಿನಗಳಲ್ಲಿ ನಾಟಕ ರಂಗವನ್ನೇ ತನ್ನ ಕಾಯಕ ವೃತ್ತಿಯಾಗಿಸಿಕೊಂಡು ಸುಮಾರು 500ಕ್ಕಿಂತಲೂ ಮೇಲ್ಪಟ್ಟು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಒಂದು ಪಾತ್ರದ ಬಗ್ಗೆ ನಟನೆ ಮಾಡುವ ಮೊದಲು ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರ ? ಪಾತ್ರದ ಬಗ್ಗೆ ಮೊದಲೇ ಯಾರಾದರೂ ತಿಳಿಸಿ…
ಮಂಗಳಾದೇವಿ : ಮಂಗಳೂರು ರಾಮಕೃಷ್ಣ ಮಠದ ನೂತನ ಯೋಜನೆ ‘ಭಜನ್ ಸಂಧ್ಯಾ’ ಕಾರ್ಯಕ್ರಮಕ್ಕೆ ದಿನಾಂಕ : 02-07-2023ರಂದು ಚಾಲನೆ ನೀಡಲಾಯಿತು. ಮಠದ ಪ್ರಾರ್ಥನಾ ಮಂದಿರದಲ್ಲಿ ವಿವಿಧ ಭಜನಾ ಮಂಡಳಿಗಳು ಪ್ರತಿ ತಿಂಗಳ ಮೊದಲ ಮತ್ತು ಎರಡನೇ ರವಿವಾರ ಭಜನಾ ಸೇವೆ ನೀಡಲಿವೆ. ಕಾರ್ಯಕ್ರಮವನ್ನು ಮಂಗಳೂರಿನ ಎಸ್.ಸಿ.ಎಸ್. ಆಸ್ಪತ್ರೆಯ ಮುಖ್ಯಸ್ಥ ಡಾ. ಜೀವರಾಜ್ ಸೊರಕೆ ಅವರು ಉದ್ಘಾಟಿಸಿದರು, ಈ ಸಂದರ್ಭ ಮಾತನಾಡಿದ ಅವರು “ರಾಮಕೃಷ್ಣ ಮಠದ ಈ ಸಾನ್ನಿಧ್ಯದಲ್ಲಿ ಭಜನೆ ಸಲ್ಲಿಸುವುದು ಒಂದು ಸುಕೃತವೇ ಸರಿ. ಇದಕ್ಕೆ ಅನುವು ಮಾಡಿಕೊಟ್ಟ ಸ್ವಾಮೀಜಿ ಶ್ಲಾಘನೆಗೆ ಪಾತ್ರರು, ಭಜನಾ ಸೇವೆ ನಿರತರವಾಗಿ ಮುಂದುವರಿಯಲಿ” ಎಂದರು. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಜಿತಕಾಮಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಸೀತಾರಾಮ ಎ. ಉಪಸ್ಥಿತರಿದ್ದರು. ಕ್ಯಾ. ಗಣೇಶ್ ಕಾರ್ಣಿಕ್ ಸ್ವಾಗತಿಸಿ ಪ್ರಸ್ತಾಪಿಸಿದರು. ರಾಮಕೃಷ್ಣ ಮಿಷನ್ನ ಮೌಲ್ಯ ಶಿಕ್ಷಣ ಕಾರ್ಯಕ್ರಮಗಳ ಸಂಯೋಜಕ ರಂಜನ್ ಬೆಳ್ಳರ್ಪಾಡಿ ಅವರು ವಂದಿಸಿ, ಮಂಜುಳಾ ನಿರೂಪಿಸಿದರು. ಭಜನ್ ಸಂಧ್ಯಾದ ಮೊದಲ ಕಾರ್ಯಕ್ರಮದಲ್ಲಿ…
ಉಡುಪಿ: ಯಕ್ಷಗಾನ ಕಲಾರಂಗ (ರಿ) ಆಯೋಜಿಸಿದ ‘ಯವಕ್ರೀತೋಪಾಖ್ಯಾನ’ ಬಡಗುತಿಟ್ಟು ಯಕ್ಷಗಾನ ಪ್ರದರ್ಶನವು 2 ಜುಲೈ, 2023ರ ಭಾನುವಾರ ಉಡುಪಿಯ ಪೂರ್ಣಪ್ರಜ್ಞ ಸಭಾಭವನದಲ್ಲಿ ನೆರವೇರಿತು. ಈ ಯಕ್ಷಗಾನದ ಪದ್ಯ ರಚನೆ ಐ. ಡಿ. ಗಣಪತಿ ಅವರು ಮಾಡಿದ್ದು ಹಿಮ್ಮೇಳದಲ್ಲಿ ಭಾಗವತರಾಗಿ ರಾಮಕೃಷ್ಣ ಹೆಗಡೆ ಹಿಲ್ಲೂರು ಮತ್ತು ಪ್ರಸನ್ನ ಭಟ್ ಬಾಳ್ಕಲ್, ಮದ್ದಳೆಗಾರರಾಗಿ ಸುನೀಲ್ ಭಂಡಾರಿ ಕಡತೋಕ ಮತ್ತು ರಾಘವೇಂದ್ರ ಹೆಗಡೆ ಯಲ್ಲಾಪುರ, ಚೆಂಡೆಯಲ್ಲಿ ಪ್ರಜ್ವಲ್ ಮುಂಡಾಡಿ ಮತ್ತು ಸೃಜನ್ ಹಾಲಾಡಿ ಸಹಕರಿಸಿದರು. ಮುಮ್ಮೇಳದಲ್ಲಿ ವಿಶ್ವರಥನಾಗಿ ಪ್ರಸನ್ನ ಶೆಟ್ಟಿಗಾರ್, ಹೇಮಾವತಿಯಾಗಿ ಗೋವಿಂದ ವಂಡಾರು, ಇಂದ್ರನಾಗಿ ಗಣಪತಿ ಗುಂಡಿಬೈಲ್ ವಿಶ್ವಾಮಿತ್ರನಾಗಿ ಥಂಡಿಮನೆ ಶ್ರೀಪಾದ ಭಟ್, ನಾರದನಾಗಿ ಅಶೋಕ ಭಟ್ ಸಿದ್ಧಾಪುರ, ವಸಿಷ್ಠನಾಗಿ ಸುಬ್ರಹ್ಮಣ್ಯ ಕೋಣಿ , ಬ್ರಹ್ಮನಾಗಿ ಚಂದ್ರಕುಮಾರ್ ನೀರ್ಜಡ್ಡು, ವಿಶಾಖೆಯಾಗಿ ಸುಧೀರ್ ಉಪ್ಪೂರು, ಚಿತ್ರಲೇಖೆಯಾಗಿ ಶ್ರೀಕಾಂತ ರಟ್ಟಾಡಿ, ರೈಭ್ಯನಾಗಿ ಕೃಷ್ಣಯಾಜಿ ಬಳ್ಕೂರು, ಯವಕ್ರೀತನಾಗಿ ವಿದ್ಯಾಧರ ಜಲವಳ್ಳಿ, ಭಾರದ್ವಾಜನಾಗಿ ಆನಂದ ಭಟ್ ಕೆಕ್ಕಾರು, ವಟು ಇಂದ್ರನಾಗಿ ಹಾಗೂ ಶೂದ್ರಕನಾಗಿ ಶ್ರೀಧರ ಭಟ್ ಕಾಸರಕೋಡು, ಪರಾವಸುವಾಗಿ ಈಶ್ವರ…
ಉಡುಪಿ : ರಾಗ ಧನ ಸಂಸ್ಥೆಯು ದಿನಾಂಕ : 26-06-2022ರಂದು ಹಮ್ಮಿಕೊಂಡ ಗೃಹ ಸಂಗೀತ ಕಾರ್ಯಕ್ರಮ ರಾಗ ರತ್ನ ಮಾಲಿಕೆ -1 ಶ್ರೀಮತಿ ನಯನ ಮತ್ತು ಶ್ರೀ ನರಸಿಂಹ ನಾಯಕ್ ಇವರ ಆತಿಥ್ಯ ಮತ್ತು ಸಹ ಪ್ರಯೋಜತ್ವದಲ್ಲಿ ನಡೆಯಿತು. ಮಣಿಪಾಲದ ಇವರ ನಿವಾಸ “ಶ್ರೀ ನಿಕೇತನ”ದಲ್ಲಿ ಬೆಂಗಳೂರಿನ ಗಾಯಕರಾದ ಶ್ರೀ ಹರಿಹರನ್ ಎಂ.ಬಿ. ಮತ್ತು ಶ್ರೀ ಎಸ್. ಅಶೋಕ್ ಹಾಡುಗಾರಿಕೆಯಲ್ಲಿ ಶ್ರೀ ವಿಶ್ವಜಿತ್ ವಯೊಲಿನ್ ನಲ್ಲಿ, ಶ್ರೀ ಅನಿರುದ್ಧ್ ಎಸ್. ಭಟ್ ಮೃದಂಗದಲ್ಲಿ ಮೋರ್ಸಿಂಗ್ ನಲ್ಲಿ ಶ್ರೀ ಡಿ.ವಿ. ಪ್ರಸನ್ನ ಸಹಕರಿಸಿದರು. ದಿನಾಂಕ : 14-07-2023ರಂದು ರಾಗ ರತ್ನ ಮಾಲಿಕೆ -2 ಕಾರ್ಯಕ್ರಮವು ನಡೆಯಿತು. ಶ್ರೀಮತಿ ಉಷಾ ಕೆಂಬ್ಬಾರ್ ಇವರ ಆತಿಥ್ಯದಲ್ಲಿ ಮಣಿಪಾಲದ ಇವರ ನಿವಾಸ ‘ಜಲದರ್ಶಿನಿ’ಯಲ್ಲಿ ಶ್ರೀ ಮುಡಿಕೊಂಡಾನ್ ರಮೇಶ್, ಚೆನ್ನೈ – ಇವರ ವೀಣಾ ವಾದನ ಕಛೇರಿ ನಡೆಯಿತು. ಮೃದಂಗದಲ್ಲಿ ಡಾ. ಬಾಲಚಂದ್ರ ಆಚಾರ್ ಮತ್ತು ಶ್ರೀ ಶಿಸುಪಾದಕೃಷ್ಣ ಸಹಕರಿಸಿದರು. ಪೂರ್ವಭಾವಿಯಾಗಿ ‘ನಾಮ ಸಂಕೀರ್ತನೆ – ಶ್ರೀಮತಿ ಉಷಾ…
ಹವ್ಯಾಸಿ ಯಕ್ಷಗಾನ ರಂಗದಲ್ಲಿ ಎಲ್ಲಾ ರೀತಿಯ ವೇಷಗಳನ್ನು ಮಾಡುವವರ ಸಂಖ್ಯೆ ಬಹಳಷ್ಟು ಕಡಿಮೆ ಇದೆ. ಅದರಲ್ಲಿಯೂ ಇತ್ತಿಚಿನ ದಿನಗಳಲ್ಲಿ ಸ್ತ್ರೀ ವೇಷ ಮಾಡುವವರ ಸಂಖ್ಯೆ ಬಹಳಷ್ಟು ಕಡಿಮೆ ಇದೆ. ಇಂತಹ ಸಮಯದಲ್ಲಿ ಅನೇಕ ವರ್ಷಗಳಿಂದ ಅನೇಕ ಸಂಘ ಸಂಸ್ಥೆಗಳಲ್ಲಿ ಸಂಪ್ರದಾಯ ಶೈಲಿಯಲ್ಲಿಯೇ ನಾಟ್ಯ, ಅಭಿನಯ, ಮಾತು ಹೀಗೆ ಯಕ್ಷಗಾನದ ಎಲ್ಲಾ ವಿಭಾಗಗಲ್ಲಿಯೂ ಕಲಾಭಿಮಾನಿಗಳ ಮನದಲ್ಲಿ ಸಂತಸವನ್ನುಂಟು ಮಾಡಿದ ಹವ್ಯಾಸಿ ಯಕ್ಷ ಕಲಾವಿದ ಕೆ ಶಂಕರ ದೇವಾಡಿಗ. 10.05.1967ರಂದು ಉಡುಪಿ ಜಿಲ್ಲೆಯ ಸಾಲಿಗ್ರಾಮದ ಕಾರ್ಕಡದ ಗೋವಿಂದ ದೇವಾಡಿಗ ಹಾಗೂ ಪದ್ದು ದೇವಾಡಿಗ ಮಗನಾಗಿ ಜನನ. ಆರನೇ ತರಗತಿವರೆಗೆ ವಿದ್ಯಾಭ್ಯಾಸ. ಕಾರ್ಕಡದಲ್ಲಿ ಯಕ್ಷಗಾನ ತರಬೇತಿ ನಡೆಯುತಿತ್ತು, ಕುಟುಂಬದಲ್ಲಿ ಯಕ್ಷಗಾನ ಹಿನ್ನಲೆ ಇಲ್ಲದೇ ಇದ್ದರೂ ಯಕ್ಷಗಾನದ ಆಸಕ್ತಿ ತುಂಬಾ ಇತ್ತು. ಹಾಗಾಗಿ ಯಕ್ಷಗಾನ ಕಲಿಯಲು ಪ್ರಾರಂಭಿಸಿದರು. ಯಕ್ಷಗಾನದ ಪ್ರಥಮ ಗುರುಗಳು ಸುಬ್ರಾಯ ಮಲ್ಯ ಹಳ್ಳಾಡಿಯವರು. ಯಕ್ಷಗಾನ ರಂಗದ ಎಲ್ಲಾ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು. ಅಂಬೆ, ದ್ರೌಪದಿ, ಸುಭದ್ರೆ, ಸುರುಚಿ ನೆಚ್ಚಿನ ವೇಷಗಳು. ಯಕ್ಷಗಾನದ…
ಮಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾ ಘಟಕ ಮತ್ತು ಮಂಗಳೂರಿನ ಸಪ್ನ ಬುಕ್ ಹೌಸ್ ಆಶ್ರಯದಲ್ಲಿ ದಿನಾಂಕ : 02-07-2023ರಂದು ಸತೀಶ್ ಚಪ್ಪರಿಕೆ ಅವರ ‘ಘಾಂದ್ರುಕ್’ ಕಾದಂಬರಿ ಹಾಗೂ ಲೇಖಕರ ಜತೆ ಸಂವಾದ ಕಾರ್ಯಕ್ರಮವು ಕೆ. ಎಸ್. ರಾವ್ ರಸ್ತೆಯ ಸಪ್ನ ಬುಕ್ ಹೌಸ್ನಲ್ಲಿ ನಡೆಯಿತು. ‘ಘಾಂದ್ರುಕ್’ ಕಾದಂಬರಿ ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಕವಿ, ಸಾಹಿತಿ ಡಾ. ವಸಂತಕುಮಾರ್ ಪೆರ್ಲ “ಲೇಖಕ ಸತೀಶ್ ಚಪ್ಪರಿಕೆ ಅವರು ‘ಘಾಂದ್ರುಕ್’ ಕನ್ನಡ ಕಾದಂಬರಿಯನ್ನು ವಿಶಿಷ್ಟ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರವಾಸ ಕಥನದಂತಿರುವ ಕೃತಿಯು ಓದುಗನ ಮನಗೆಲ್ಲುತ್ತದೆ. ‘ಘಾಂದ್ರುಕ್’ ಅಂದರೆ ಹಿಮಾಲಯದ ತಪ್ಪಲಿನ ಟಿಬೆಟ್ನಲ್ಲಿ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಒಂದು ಹಳ್ಳಿಯ ಹೆಸರು. ಹಳ್ಳಿಯೊಂದರಿಂದ ನಗರಕ್ಕೆ ಬಂದು ಐಟಿ ಕಂಪನಿಯ ಸಿಇಒ ಆಗುವ ಹಂತಕ್ಕೆ ಬೆಳೆದ ಯುವಕನಿಗೆ ಹಣ, ಬೌದ್ಧಿಕ ಸುಖಕ್ಕೆ ಒಂದು ಮಿತಿ ಇದೆ ಅನಿಸುತ್ತದೆ ಮತ್ತು ಇದರ ಆಚೆಗೂ ಒಂದು ಬದುಕಿದೆ ಎಂಬ ಒಳಅರಿವು ಮೂಡುತ್ತದೆ. ನಂತರ ಆತ ಹೊರ ಜಗತ್ತಿನ…