Subscribe to Updates
Get the latest creative news from FooBar about art, design and business.
Author: roovari
ಕಾರ್ಕಳ : ಕಾರ್ಕಳ ತಾಲೂಕಿನ ಅಜೆಕಾರು ಗ್ರಾಮದ ನಿವಾಸಿ ಲೇಖಕ, ಸಾಹಿತಿ, ಪತ್ರಕರ್ತ ಶೇಖರ್ ಅಜೆಕಾರು ಹೃದಯಾಘಾತದಿಂದ ದಿನಾಂಕ 31-10-2023ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ಶೇಖರ್ ಅಜೆಕಾರ್ ಇವರಿಗೆ ಮಕ್ಕಳ ಸಾಹಿತ್ಯದ ಬಗ್ಗೆ ಆಸಕ್ತಿ ಇದ್ದು, ಮಕ್ಕಳ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದರು. ಇವರು ಪತ್ನಿ, ಓರ್ವ ಮಗ, ಓರ್ವ ಮಗಳನ್ನು ಅಗಲಿದ್ದಾರೆ. ಅಜೆಕಾರಿನಂತಹ ಸಣ್ಣ ಗ್ರಾಮದಲ್ಲಿ ಜನಿಸಿ ಮುಂಬಯಿಯಂತಹ ಬೃಹತ್ ನಗರದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೋಮಾವನ್ನು ಪೂರೈಸಿ ‘ಹರಿಕೃಷ್ಣ ಪುನರೂರು-ಕನ್ನಡದ ಕೆಲಸಗಳು ಒಂದು ಅಧ್ಯಯನ’ ಎಂಬ ವಿಷಯದಲ್ಲಿ ಎಂ.ಫಿಲ್ ಪದವಿ ಮುಗಿಸಿ, ಅಲ್ಲಿಯೇ ಪತ್ರಕರ್ತರಾಗಿ ಕಾರ್ಯಾರಂಭಿಸಿ, ಕರ್ನಾಟಕ ಮಲ್ಲ ಪತ್ರಿಕೆಯಲ್ಲಿ ಉಪ ಸಂಪಾದಕರಾಗಿದ್ದರು. ಇವರ ಆಸಕ್ತಿಯ ಕ್ಷೇತ್ರಗಳು ಹಲವು. ವೃತ್ತಿಯಲ್ಲಿ ಪತ್ರಿಕೋದ್ಯಮಿಯಾಗಿ ಕನ್ನಡದ ಹಲವು ಪತ್ರಿಕೆಗಳ ಹಲವು ಮಜಲುಗಳಲ್ಲಿ ದುಡಿದು ಸೈಯೆನಿಸಿಕೊಂಡಿದ್ದಾರೆ. ಹವ್ಯಾಸಿ ಛಾಯಾಚಿತ್ರಕಾರರಾದ ಅವರ ಹಲವು ಉತ್ತಮ ಚಿತ್ರಗಳು ಪತ್ರಿಕೆಗಳ ಮುಖಪುಟವನ್ನು ಅಲಂಕರಿಸಿವೆ.…
ಪುತ್ತೂರು : ನಮ್ಮೆಲ್ಲರ ಆರಾಧ್ಯ ಶಕ್ತಿಯಾದ ಶ್ರೀ ದೇಯಿ ಬೈದೆತಿ ಅಮ್ಮನವರ ಬೆಳಕಿನ ಗೆಜ್ಜೆ ಸೇವೆಯ ತೇರು, ಬಲಿಷ್ಠ ಶ್ರೀ ಗೆಜ್ಜೆಗಿರಿ ಮೇಳ ಇದೇ ಬರುವ ದಿನಾಂಕ 16-11-2023ನೇ ಗುರುವಾರದಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನಡೆಯುವ ಶ್ರೀ ದೇವರ ಪ್ರಥಮ ಸೇವೆಯಾಟದೊಂದಿಗೆ ಎರಡನೇ ವರ್ಷದ ತಿರುಗಾಟಕ್ಕೆ ಹೊರಡಲಿದೆ. ಅನೇಕ ವಿಶೇಷತೆಗಳೊಂದಿಗೆ ಎರಡನೇ ವರ್ಷದ ತಿರುಗಾಟಕ್ಕೆ ಸಕಲ ಸಿದ್ದತೆ ನಡೆಸುತ್ತಿದ್ದು, ತೆಂಕುತಿಟ್ಟಿನ ಬಲಿಷ್ಠ ಯಕ್ಷಗಾನ ಮೇಳಗಳಲ್ಲಿ ಒಂದಾಗಿ ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ಪ್ರಸಂಗಗಳ ಸಮರ್ಥ ಪ್ರದರ್ಶನ ನೀಡುವರೇ ಗೆಜ್ಜೆಗಿರಿ ಮೇಳ ಸಾಮರ್ಥ್ಯಯುತ ಪ್ರತಿಭಾವಂತ ವೃತ್ತಿಪರ ಯುವ ಕಲಾವಿದರ ದಂಡನ್ನೆ ಹೊಂದಿದೆ. ಮೇಳದ ಕಲಾವಿದರ ಪಾತ್ರಾಭಿನಯ ಸಾಮರ್ಥ್ಯಕ್ಕನುಸಾರ ಎಲ್ಲಾ ಮೂರು ವಿಭಾಗದಲ್ಲೂ ಪ್ರಸಂಗ ರಚಿಸುತ್ತಿದ್ದು, ಅದರಲ್ಲೂ ಈ ಮೇಳ ಪ್ರಸ್ತುತ ಪ್ರಮುಖವಾಗಿ ‘ಗರೋಡಿದ ಸತ್ಯೊಲು’ (ಸಮಗ್ರ ಕೋಟಿ-ಚೆನ್ನಯ) ಎಂಬ ಐತಿಹಾಸಿಕ ಪ್ರಸಂಗವೊಂದು ರಚನೆ ಮಾಡುತ್ತಿದೆ. ಇದರಲ್ಲಿ ತುಳುನಾಡಿನ ಮೂಲಜನಾಂಗದ ಕುಲದೇವರಾದ ಶ್ರೀ ನಾಗಬ್ರಹ್ಮರ ಮೂಲಕಥೆ ಆಧಾರ ಸಹಿತ…
ಮಂಗಳೂರು : ಅವಿಭಜಿತ ದ.ಕ. ಜಿಲ್ಲೆಯ ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ‘ನೃತ್ಯೋತ್ಕರ್ಷ 2023’ ನೃತ್ಯ ಸಮ್ಮೇಳನವನ್ನು ದಿನಾಂಕ 24-12-2023 ಮತ್ತು 25-12-2023ರಂದು ಉಡುಪಿಯ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಾಲಯದ ಭವಾನಿ ಮಂಟಪದಲ್ಲಿ ಹಮ್ಮಿಕೊಂಡಿದ್ದು ಈ ತತ್ಸಂಬಂಧ ಯುವ ಜನಾಂಗಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ವಿಶೇಷವಾಗಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯು 18 ವರ್ಷ ಪ್ರಾಯದ ಒಳಗಿನವರಿಗೆ ಮತ್ತು 18 ವರ್ಷ ಪ್ರಾಯದ ಮೇಲಿನವರಿಗೆ ಮೊದಲ ವಿಭಾಗದಲ್ಲಿ ವಿಷಯ ‘ವ್ಯಕ್ತಿತ್ವ ವಿಕಸನದಲ್ಲಿ ಶಾಸ್ತ್ರೀಯ ನೃತ್ಯ ಕಲಾಭ್ಯಾಸದ ಪಾತ್ರ’ ಎಂಬ ವಿಷಯದಲ್ಲಿ 1000 ಮಿತಿಗಳ ಪದಗಳೊಂದಿಗೆ, ಎರಡನೇ ವಿಭಾಗದಲ್ಲಿ ‘ಭರತನಾಟ್ಯದಲ್ಲಿ ಭಾರತೀಯ ತತ್ವಶಾಸ್ತ್ರ (ಮಹತ್ವ ಮತ್ತು ಮಿತಿ)’ ವಿಷಯವಾಗಿದ್ದು 1,500 ಪದ ಮಿತಿಗಳ ವಾಕ್ಯಗಳೊಂದಿಗೆ ಬರೆದು ದಿನಾಂಕ 25-11-2023ರ ಒಳಗೆ ಕಳುಹಿಸುವಂತೆ ಕೋರಲಾಗಿದೆ. ಪ್ರಬಂಧ ಸ್ಪರ್ಧೆಯ ನಿಯಮಾವಳಿಗಳು- 1. ಪ್ರಬಂಧ ಸ್ಪರ್ಧೆಯಲ್ಲಿ ವಿಶ್ವಾದ್ಯಂತ ಯಾರೂ ಭಾಗವಹಿಸಬಹುದು ಮತ್ತು ಯಾವುದೇ ಪ್ರವೇಶ ಶುಲ್ಕ ಇಲ್ಲ. 2. ದಿನಾಂಕ 01-10-2023ಗೆ ಅನ್ವಯ ಆಗುವಂತೆ…
ಕಟೀಲು : ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕದಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕಿನ ಪ್ರೌಢಶಾಲೆ, ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ ‘ಕವನ ರಚನೆ ಕಾರ್ಯಾಗಾರ’ವು ದಿನಾಂಕ 28-10-2023ರಂದು ನಡೆಯಿತು. ಈ ಕಾರ್ಯಾಗಾರವನ್ನು ನಡೆಸಿಕೊಟ್ಟ ಬರಹಗಾರ್ತಿ ವಿಜಯಲಕ್ಷ್ಮೀ ಕಟೀಲು ಇವರು ಮಾತನಾಡುತ್ತಾ “ಸಾಹಿತ್ಯದಾಸಕ್ತಿ ಬೆಳೆಸುವ ಮೂಲಕ ಸಹೃದಯರಾಗಬೇಕು. ನಮ್ಮ ಕವಿತೆ ನಮ್ಮ ಕೈಯೊಳಗಿರುವ ಕೂಸು. ಅದು ನಮಗೂ ಖುಷಿಕೊಟ್ಟಂತೆ ಇನ್ನೊಬ್ಬರಿಗೂ ಖುಷಿಕೊಡಬೇಕು. ಲಯ, ಪ್ರಾಸ, ಛಂದಸ್ಸುಬದ್ಧವಾಗಿ ಅರ್ಥಪೂರ್ಣವಾಗಿ, ಹೊಸ ಚಿಂತನೆ ಮೂಡಿಸುವ, ನಾನಾ ಅರ್ಥಗಳನ್ನು ಸ್ಫುರಿಸುವ ಕವನಗಳನ್ನು ಬರೆಯಬೇಕು. ತಾಳಬದ್ಧವಾಗಿ ಹಾಡಲು ಸಾಧ್ಯವಾಗುವ ಕವನ ರಚನೆಯ ಪ್ರಯತ್ನದ ಜೊತೆಗೆ ಸತತ ಓದುವಿಕೆ, ಬರೆಯುವಿಕೆಯೂ ಮುಖ್ಯವಾಗುತ್ತದೆ. ಮಕ್ಕಳ ಕವನ, ಹನಿಗವನ, ಚುಟುಕು, ಹಾಯ್ಕು, ಭಾವಗೀತೆ, ಭಕ್ತಿಗೀತೆ, ರಂಗಗೀತೆ ಹೀಗೆ ನಾನಾ ಕಾವ್ಯಪ್ರಕಾರಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಹಳೆ, ನಡು, ಹೊಸಗನ್ನಡ ಕಾವ್ಯಗಳ ಓದುವಿಕೆ ಪೂರಕ” ಎಂದು ಹೇಳಿದರು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ, ಕವನ…
ಉಡುಪಿ : ನರಸಿಂಹ ಪ್ರತಿಷ್ಠಾನ, ಬೆಳ್ಳಂಪಳ್ಳಿ ಇದರ ವತಿಯಿಂದ ಪೆರ್ಡೂರು ರೋಟರಿ ಕ್ಲಬ್ ಸಹಯೋಗದೊಂದಿಗೆ ನಡೆಯುವ ‘ವರ್ಣಾನನ’ ತೆಂಕುತಿಟ್ಟು ಯಕ್ಷಗಾನ ಮುಖವರ್ಣಿಕೆ ಕಾರ್ಯಾಗಾರವು ಉಚಿತವಾಗಿ ದಿನಾಂಕ 01-11-2023ರಂದು ಬೆಳಗ್ಗೆ 10ರಿಂದ 5ರವರೆಗೆ ಕುಕ್ಕಿಕಟ್ಟೆ ಬೆಳ್ಳಂಪಳ್ಳಿ, ಜೈ ಹಿಂದ್ ಶಾಲೆಯ ಎದುರು ಇರುವ ನರಸಿಂಹ ಪ್ರತಿಷ್ಠಾನದಲ್ಲಿ ನಡೆಯಲಿದೆ. ಪೃಥ್ವೀಶ್ ಮತ್ತು ಸಾತ್ವಿಕ್ ನೆಲ್ಲಿತೀರ್ಥ ಇವರುಗಳು ಈ ಕಾರ್ಯಾಗಾರದಲ್ಲಿ ಅಭ್ಯಾಗತರಾಗಿ ತಿದ್ದಿ ತೀಡುವವರು. ಆಸಕ್ತರು ಹೆಸರು ನೊಂದಾಯಿಸಿಕೊಳ್ಳಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಿ 7353144990 8217054775 ಅಗತ್ಯ ಸೂಚನೆಗಳು 1. ಕನ್ನಡಿ, ಬಣ್ಣದ ಬಟ್ಟೆಯನ್ನು (ಬಣ್ಣವನ್ನು ಒರೆಸಿಕೊಳ್ಳಲು) ತರತಕ್ಕದ್ದು. 2. ಕಣ್ಣಿಗೆ ಕಾಡಿಗೆ (eye liner), ತಲೆಗೆ ಎಣ್ಣೆ ಇತ್ಯಾದಿಗಳನ್ನು ಹಾಕಿಕೊಂಡು ಬರಬಾರದು. 3. ಸಂಸ್ಥೆಯ ವತಿಯಿಂದ ಊಟ, ಉಪಹಾರದ ವ್ಯವಸ್ಥೆಗಳಿರುವುದಿಲ್ಲ. ನೀವು ಮನೆಯಿಂದ ತಂದುಕೊಳ್ಳಬಹುದು. 4. ಸಮಯಕ್ಕೆ ಸರಿಯಾಗಿ ಬರತಕ್ಕದ್ದು. ಮಧ್ಯೆ ಮಧ್ಯೆ ಸೇರಿಕೊಳ್ಳುವಂತಿಲ್ಲ. 5. ಬಣ್ಣ ಒರೆಸಿಕೊಳ್ಳಲು ಎಣ್ಣೆ, ಸಾಬೂನು ಇತ್ಯಾದಿ ಅಗತ್ಯ ಸಾಮಾಗ್ರಿಗಳನ್ನು ತರಬಹುದು. 6.…
ಉಡುಪಿ : ರಜನಿ ಮೆಮೋರಿಯಲ್ ಟ್ರಸ್ಟ್ (ರಿ.) ಉಡುಪಿ ಪ್ರಸ್ತುತ ಪಡಿಸುವ ವಸಂತಲಕ್ಷ್ಮೀ ಹೆಬ್ಬಾರ್ ಸ್ಮರಣಾರ್ಥ ಸಂಗೀತ, ನೃತ್ಯ ಮತ್ತು ಕಲಾ ಉತ್ಸವವಾದ ‘ವಸಂತಲಕ್ಷ್ಮೀ ಸಂಸ್ಮರಣೆ’ಯು ದಿನಾಂಕ 01-11-2023ರಿಂದ 05-11-2023ರವರೆಗೆ ಉಡುಪಿಯ ಅದಿತಿ ಆರ್ಟ್ ಗ್ಯಾಲರಿ, ಇಂದ್ರಾಳಿಯ ಹಯಗ್ರೀವ ನಗರದ ಲತಾಂಗಿ ಮತ್ತು ಉಡುಪಿ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪಗಳಲ್ಲಿ ನಡೆಯಲಿದೆ. ದಿನಾಂಕ 01-11-2023ರಂದು ಬೆಳಿಗ್ಗೆ 10 ಗಂಟೆಗೆ ಉಡುಪಿಯ ಅದಿತಿ ಆರ್ಟ್ ಗ್ಯಾಲರಿಯಲ್ಲಿ ‘ವಸಂತ ಕಲಾ’ ವಸಂತಲಕ್ಷ್ಮೀ ಹೆಬ್ಬಾರ್ ಇವರ ಕಲಾಕೃತಿಗಳ ಪ್ರದರ್ಶನ ನಡೆಯಲಿದೆ. ದಿನಾಂಕ 02-11-2023ರಂದು ಸಂಜೆ ಗಂಟೆ 5-30ಕ್ಕೆ ಇಂದ್ರಾಳಿಯ ಹಯಗ್ರೀವ ನಗರದ ಲತಾಂಗಿಯಲ್ಲಿ ಚಾರುಲತಾ ಚಂದ್ರಶೇಕರ್ ಇವರಿಂದ ವೀಣಾ ವಾದನ ನಡೆಯಲಿದೆ. ದಿನಾಂಕ 03-11-2023ರಂದು ಸಂಜೆ ಗಂಟೆ 5-30ಕ್ಕೆ ಉಡುಪಿ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಪ್ರಾರ್ಥನಾ ಬಿ. ಇವರಿಂದ ‘ಕರ್ನಾಟಕ ಶಾಸ್ತ್ರೀಯ ಸಂಗೀತ’ ನಡೆಯಲಿದ್ದು, ವಯೋಲಿನ್ ನಲ್ಲಿ ಅನನ್ಯ ಸುರೇಶ್ ಹಾಗೂ ಮೃದಂಗದಲ್ಲಿ ಅಚಿಂತ್ಯ ಕೃಷ್ಣ ಸಾಥ್ ನೀಡಲಿದ್ದಾರೆ. ರಶ್ಮಿ ಉಡುಪರವರಿಂದ…
ಬೆಂಗಳೂರು: 67ನೇ ಕನ್ನಡ ರಾಜ್ಯೋತ್ಸವದ ಹಿನ್ನೆಲೆ ಹಾಗೂ ಸುವರ್ಣ ಕರ್ನಾಟಕ -50ರ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತು ವಿಶೇಷ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಹಮ್ಮಿಕೊಂಡಿದೆ. ಆಕರ್ಷಕ ರಿಯಾಯತಿಯ ದರದಲ್ಲಿ ಪರಿಷತ್ತಿನ ಪ್ರಕಟಣೆಯ ಪುಸ್ತಕಗಳನ್ನು ಮಾರಾಟಮಾಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ. ನವೆಂಬರ್ 1 ರಿಂದ 30ರವರೆಗೆ ಪ್ರತಿದಿನ ಬೆಳಗ್ಗೆ 9.00 ಗಂಟೆಯಿಂದ ಸಂಜೆ ಘಂಟೆ 7.00ರ ವರೆಗೆ ರಜಾ ದಿನಗಳಲ್ಲಿಯೂ ನಗರದ ಚಾಮರಾಜ ಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿ ಆವರಣದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯಿದೆ. ಶೇ.10 ರಿಂದ ಶೇ.75ರಷ್ಟು ರಿಯಾಯಿತಿ ದರದಲ್ಲಿ ಅಮೂಲ್ಯವಾದ ಪುಸ್ತಕಗಳ ಮಾರಾಟದ ವ್ಯವಸ್ಥೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಇತಿಹಾಸದಲ್ಲಿ ತೀರಾ ಅಪರೂಪವೆನಿಸಿದ ಪುಸ್ತಕಗಳ ಪ್ರಕಟಣೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಾ ಬಂದಿದ್ದು, ಪರಿಷತ್ತು ಪ್ರಕಟಿಸಿರುವ ಎಲ್ಲಾ ಪ್ರಕಟಣೆಗಳು ಮಾರಾಟಕ್ಕೆ ಲಭ್ಯವಾಗಿವೆ. ಕನ್ನಡ ರತ್ನಕೋಶ ಮತ್ತು ಸಂಕ್ಷಿಪ್ತ ಕನ್ನಡ ನಿಘಂಟು, ಸಂಕ್ಷಿಪ್ತ…
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಉತ್ತಂಗಿ ಚೆನ್ನಪ್ಪನವರ ಜನ್ಮದಿನೋತ್ಸವವನ್ನು ದಿನಾಂಕ 28-10-2023ರ ಶನಿವಾರದಂದು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ “ಅಭಿನವ ಸರ್ವಜ್ಞ ಎಂದೇ ಖ್ಯಾತರಾಗಿರುವ ರೆವರೆಂಡ್ ಉತ್ತಂಗಿ ಚೆನ್ನಪ್ಪನವರು ದೀರ್ಘಕಾಲ ಅಜ್ಞಾತ ಕವಿಯಾಗಿಯೇ ಇದ್ದ ಸರ್ವಜ್ಞನ ಕುರಿತು ಸಂಶೋಧನೆ ಮಾಡಿ ‘ಸರ್ವಜ್ಞನ ವಚನಗಳು’ ಕೃತಿಯನ್ನು ಹೊರ ತಂದರು. ಈ ಮೂಲಕ ಕನ್ನಡ ಸಾಹಿತ್ಯದಲ್ಲಿ ಸರ್ವಜ್ಞನ ಕುರಿತು ಚರ್ಚೆಗಳು ಆರಂಭವಾಗಲು ಕಾರಣವಾಯಿತು. 1881ರ ಅಕ್ಟೋಬರ್ 28ರಂದು ಧಾರವಾಡದಲ್ಲಿ ಜನಿಸಿದ ಚೆನ್ನಪ್ಪನವರು ಕ್ರೈಸ್ತ ಧರ್ಮೋಪದೇಶಕರಾಗಿದ್ದರೂ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಪ್ರೀತಿಯನ್ನು ಇಟ್ಟುಕೊಂಡವರು. ಬೈಬಲ್ ಪರಿಷ್ಕರಣ ಸಮಿತಿ ಅಧ್ಯಕ್ಷರಾಗಿ ಗ್ರೀಕ್ ಮತ್ತು ಹಿಬ್ರೂ ಭಾಷೆಗಳನ್ನು ಕಲಿತು ಅವುಗಳ ಮೂಲ ಪಾಠಗಳನ್ನು ಇಟ್ಟು ಕೊಂಡು ಕನ್ನಡ ಬೈಬಲ್ ಸಿದ್ದಗೊಳಿಸಿದ ಹೆಗ್ಗಳಿಕೆ ಅವರದು. ಸ್ವಾತಂತ್ರ್ಯ ಚಳುವಳಿಯಲ್ಲಿಯೂ ಸಕ್ರಿಯವಾಗಿ ಭಾಗವಹಿಸಿದ್ದ ಇವರು ಬಸವೇಶ್ವರರೂ ಅಸ್ಪೃಶ್ಯರ ಉದ್ದಾರ, ಸಿದ್ಧರಾಮ ಸಾಹಿತ್ಯ ಸಂಗ್ರಹ,…
ಮಂಗಳೂರು : ವರ್ಣ ಕಲಾವಿದ ಪಣಂಬೂರು ರಾಘವರಾಯರ ಜನ್ಮ ಶತಮಾನೋತ್ಸವ 2022 – 23ರ ಅಗರಿ ಸಂಸ್ಮರಣೆ ಹಾಗೂ ಸಮಾರೋಪ ಕಾರ್ಯಕ್ರಮವು ದಿನಾಂಕ 09-10-2023ರಂದು ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಯಕ್ಷಗಾನ ಅರ್ಥಧಾರಿ, ವಿದ್ವಾಂಸ ಸೇರಾಜೆ ಸೀತಾರಾಮ ಭಟ್ “ ಅಗರಿ ಶ್ರೀನಿವಾಸ ಭಾಗವತರು ಬರೆದಿದ್ದ ಯಕ್ಷಗಾನ ಪ್ರಸಂಗಳು ಎಂದೂ ಸೋತಿಲ್ಲ. ಅಗರಿ ಅವರು ಬರೆದ ಪ್ರಸಂಗಗಳು ಕಾಲಾತೀತ. ಅವರು ಅದ್ಭುತ ಮೇಧಾಶಕ್ತಿ ಹೊಂದಿದ್ದು ಉತ್ತಮ ರಂಗ ನಿರ್ದೇಶಕ, ಪಾತ್ರಗಳ ಒಕ್ಕೂಟ ಉತ್ತಮವಾಗಿ ರೂಪಿಸಿಕೊಂಡಿರುವುದು ಇತಿಹಾಸವಾಗಿದೆ” ಎಂದು ಸ್ಮರಿಸಿದರು. ಕಟೀಲು ಮೇಳಗಳ ಸಂಚಾಲಕ ದೇವಿ ಪ್ರಸಾದ್ ಶೆಟ್ಟಿ ಕಲ್ಲಾಡಿ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ರಾಘವ ರಾಯರ ಜನ್ಮ ಶತಮಾನೋತ್ಸವ ಸಮಿತಿ ಸಂಚಾಲಕ, ಅವರ ಪುತ್ರ ಪಿ. ಮಧುಕರ್ ಭಾಗವತ್ ಪ್ರಾಸ್ತಾವಿಕ ಮಾತನ್ನಾಡಿದರು. ಜಿ.ಕೆ. ಭಟ್ ಸೇರಾಜೆಯವರು ರಾಘವ ರಾಯರನ್ನು ಸಂಸ್ಮರಿಸಿ ಮುಖವರ್ಣಿಕೆ, ಕಿರೀಟ ಇತ್ಯಾದಿಗಳ ಮೂಲಕ ಯಕ್ಷಗಾನ ಮಾತೆಯ ಸೇವೆಯನ್ನು ಶ್ರದ್ಧಾ ಭಕ್ತಿಯಿಂದ ಗೈದಿದ್ದಾರೆ ಎಂದರು. ಈ…
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ, ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ಕವನ ರಚನಾ ಕಮ್ಮಟವು ದಿನಾಂಕ 01-11-2023ನೇ ಬುಧವಾರ ಪೂರ್ವಾಹ್ನ ಗಂಟೆ 10.00ಕ್ಕೆ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ನಡೆಯಲಿದೆ. ಮಂಗಳೂರಿನ ಶ್ರೀ ಧ. ಮಂ. ಕಾನೂನು ಕಾಲೇಜು ಇದರ ಪ್ರಾಂಶುಪಾಲರಾದ ಡಾ. ತಾರನಾಥ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರಿನ ಬಂಟ್ಸ್ ಹಾಸ್ಟೇಲಿನಲ್ಲಿರುವ ಶ್ರೀ ರಾಮಕೃಷ್ಣ ಕಾಲೇಜು ಇದರ ಪ್ರಾಂಶುಪಾಲರುರಾದ ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ ರಾಜ್ಯೋತ್ಸವ ಸಂದೇಶ ನೀಡಲಿದ್ದು, ಸಂಪನ್ಮೂಲ ವ್ಯಕ್ತಿಯಾಗಿ ಲೇಖಕಿ ಶ್ರೀಮತಿ ಅಕ್ಷತಾರಾಜ್ ಪೆರ್ಲ ಭಾಗವಹಿಸಲಿದ್ದಾರೆ. ಕ. ಸಾ. ಪ ಬೆಂಗಳೂರಿನ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ. ಮಾಧವ ಎಂ. ಕೆ. ಕಾರ್ಯಕ್ರಮದಲ್ಲಿ …