Subscribe to Updates
Get the latest creative news from FooBar about art, design and business.
Author: roovari
ಉಡುಪಿ : ಹಿರಿಯ ಜಾನಪದ ವಿದ್ವಾಂಸ ಸಮಾಜ ಸೇವಕ ಬನ್ನಂಜೆ ಬಾಬು ಅಮೀನ್ ಅವರು 80ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಹಿನ್ನೆಲೆಯಲ್ಲಿ ಬನ್ನಂಜೆ ಬಾಬು ಅಮೀನ್ -80 ಅಭಿನಂದನಾ ಸಮಿತಿ ವತಿಯಿಂದ ಉಡುಪಿ ಬನ್ನಂಜೆಯ ನಾರಾಯಣ ಗುರು ಸಭಾಭವನದಲ್ಲಿ ಹಮ್ಮಿಕೊಂಡ ‘ಸಿರಿತುಪ್ಪ’ ಅಭಿನಂದನಾ ಕಾರ್ಯಕ್ರಮವು ದಿನಾಂಕ 17-12-2023ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಕುಲಪತಿ ಪ್ರೊ. ಕೆ. ಚಿನ್ನಪ್ಪ ಗೌಡ ಮಾತನಾಡಿ “ಸಂಶೋಧಕರು, ಮಾರ್ಗದರ್ಶಕರ ಸಹಾಯ ಸಹಕಾರವಿಲ್ಲದೆ ಬನ್ನಂಜೆ ಬಾಬು ಅಮೀನರು ಜಾನಪದ, ಸಾಂಸ್ಕೃತಿಕ ಸಾಹಿತ್ಯ ಲೋಕದಲ್ಲಿ ಮಾಡಿರುವ ಅಧ್ಯಯನದಿಂದ ನೀಡಿದ ಕೊಡುಗೆ ಅತ್ಯಮೂಲ್ಯವಾದುದು. ಅವರು ಸಂಗ್ರಹ ಮಾಡಿಕೊಟ್ಟಿರುವ ಆಕರ ಸಾಮಗ್ರಿಗೆ ಬೆಲೆ ಕಟ್ಟಲು ಅಸಾಧ್ಯ, ಜ್ಞಾನ ಭಂಡಾರವೆನಿಸಿದ ಅವರು ‘ಜಾನಪದ ಅಧ್ಯಯನ ವೀರ” ಎಂದು ಅಭಿಪ್ರಾಯಪಟ್ಟರು. “ಜಾನಪದ ಕಲಾವಿದರೇ ಜಾನಪದ ಬದುಕಿನ ನಿಜವಾದ ಒಡೆಯರು, ಅಮೀನರು ತುಳುನಾಡಿನ ಸಂಸ್ಕೃತಿ, ಸಂಸ್ಕಾರವನ್ನು ಮುಂದಿನ ತಲೆಮಾರಿಗೆ ದಾಟಿಸುವ ಕಾರ್ಯವನ್ನು ಮಾಡುವಲ್ಲಿ ಅನೇಕ ಸವಾಲುಗಳನ್ನು ಎದುರಿಸಿ ಪುಸ್ತಕ ರೂಪದಲ್ಲಿ ಸಾಧನೆ ಮಾಡಿ…
‘ನೆಲ್ಚಿ’ ಎಂಬ ಕಾವ್ಯನಾಮದಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುವ ಮಲ್ಲಂಡ ಶೃತಿಯ ಮುದ್ದಪ್ಪ ಇವರು ಮೂಲತಃ ಪೊನಂಪೇಟೆಯ ಬೇಗೂರಿನ ಮಲ್ಲಂಡ ಮುದ್ದಪ್ಪ ಮತ್ತು ದೇವಕಿ ದಂಪತಿಯ ಮಗಳು. ತಂದೆಯವರು ನೌಕರಿಯ ಸಲುವಾಗಿ ವಿರಾಜಪೇಟೆಯಲ್ಲಿ ಇದ್ದಾಗ ಜನಿಸಿದವರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸೋಮವಾರಪೇಟೆಯ ಸರಕಾರಿ ಶಾಲೆಯಲ್ಲಿ ಮುಗಿಸಿದ್ದಾರೆ. ಪ್ರೌಢಶಾಲಾ ಶಿಕ್ಷಣವನ್ನು ಹುದಿಕೇರಿ ಜನತಾ ಪ್ರೌಢಶಾಲೆಯಲ್ಲಿ ಕಲಿತಿದ್ದಾರೆ. ಪದವಿಪೂರ್ವ ಶಿಕ್ಷಣವನ್ನು ಮಾದಾಪುರದ ಚೆನ್ನಮ್ಮ ಕಾಲೇಜಿನಲ್ಲಿಯೂ, ಬಿ.ಕಾಂ. ಪದವಿಯನ್ನು ಸೋಮವಾರಪೇಟೆಯ ಬಿ.ಟಿ.ಸಿ.ಜಿ. ಕಾಲೇಜಿನಲ್ಲಿ ಮುಗಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಸಾಹಿತ್ಯದ ಕಥೆ, ಕವನ, ಶಾಯಿರಿ, ಬರವಣಿಗೆ, ಓದು, ಭಾಷಣ, ಮಕ್ಕಳಿಗೆ ಉಮ್ಮತಾಟ್ ಕಲಿಸುವುದು ಇತ್ಯಾದಿ ಗೀಳು ಅಂಟಿಸಿಕೊಂಡವರು. ಮುಂದುವರಿದು ಕಥೆ, ಕವನ ಮತ್ತು ಲೇಖನಗಳನ್ನು ಕೊಡವ ಭಾಷೆ ಮತ್ತು ಕನ್ನಡ ಭಾಷೆಯಲ್ಲಿ ಬರೆದಿದ್ದಾರೆ. ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಇಪ್ಪತೈದನೆಯ ವರ್ಷಾಚರಣೆಯ (ಬೊಳ್ಳಿನಮ್ಮೆ) ಸಂದರ್ಭದಲ್ಲಿ ಇವರ ‘ಪೊಣ್ಣ್ ಜನ್ಮ’ ಎಂಬ ಮೊದಲ ಕೃತಿಯು ಕೂಟದ ಜನಪ್ರಿಯ ಸಾಹಿತ್ಯ ಮಾಲೆಯ 181ನೆಯ ಪುಸ್ತಕವಾಗಿ ಕೂಟದ ಸಹಕಾರದೊಂದಿಗೆ ಲೋಕಾರ್ಪಣೆ ಮಾಡಲಾಗಿದೆ. ಇವರ…
ಮಂಗಳಗಂಗೋತ್ರಿ : ವಿವಿಯ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ‘ಬಿತ್ತಿ’ ಪತ್ರಿಕೆಯ ವತಿಯಿಂದ ಏರ್ಪಡಿಸಿದ್ದ ಕಥೆ ಮತ್ತು ಕಾವ್ಯ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಕವಿಗೋಷ್ಠಿಯು ದಿನಾಂಕ 29-12-2023ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿಯ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ಸೋಮಣ್ಣ ಇವರು ಮಾತನಾಡಿ “ಕಾವ್ಯ ಮೌನದಲ್ಲಿ ಹುಟ್ಟುತ್ತದೆ. ಆದರೆ ಕಾವ್ಯ ರಚನೆಗೆ ವಸ್ತು ನಿರ್ವಹಣೆ ಸಾಮರ್ಥ್ಯ ಮತ್ತು ಭಾಷಾ ಪ್ರೌಢಿಮೆ ಬೇಕು. ಭಾಷೆಯನ್ನು ಲೀಲಾಜಾಲವಾಗಿ ಬಳಸಬೇಕಾದರೆ ಕವಿಗೆ ಭಾಷಾ ಪದ ಸಂಪತ್ತು ಒಲಿದಿರಬೇಕು” ಎಂದು ಹೇಳಿದರು. ಅತಿಥಿಯಾಗಿ ಭಾಗವಹಿಸಿದ್ದ ಡಾ. ಧನಂಜಯ ಕುಂಬ್ಳೆ ಮಾತನಾಡಿ “ಕವಿಗಳು ತಮ್ಮ ಭಾವನೆಗೆ ತಕ್ಕುದಾದ ಪ್ರತಿಮೆಗಳನ್ನು ಕಂಡುಕೊಳ್ಳುವುದು ಮತ್ತು ಕಾವ್ಯ ಲಯ ಹಾಗೂ ಭಾಷೆಯ ಲಾಲಿತ್ಯವನ್ನು ಕರಗತ ಮಾಡಿಕೊಳ್ಳುವುದು ಮುಖ್ಯ” ಎಂದರು. ಉಪನ್ಯಾಸಕ ಡಾ. ಯಶು ಕುಮಾರ್ ಮಾತನಾಡಿ “ಕತೆ ಬರೆಯುವವರು ಘಟನೆಗಳನ್ನು ಸೃಷ್ಟಿಸುವ ಮತ್ತು ಪಾತ್ರನಿರ್ವಹಣೆಯ ಕೌಶಲವನ್ನು ಹೊಂದಬೇಕು. ನಿರಂತರವಾದ ಓದು ಈ ಕೌಶಲ್ಯವನ್ನು…
ನಾಪೋಕ್ಲು : ಕೊಡಗು ಜಿಲ್ಲೆಯ ಯವಕಪಾಡಿ ನಿವಾಸಿ ಆದಿವಾಸಿ ಹೋರಾಟಗಾರ ಕುಡಿಯರ ಮುತ್ತಪ್ಪ ಅವರಿಗೆ ದಿನಾಂಕ 28-12-2023ರಂದು ರಾಜ್ಯಮಟ್ಟದ ‘ಕೊರವಂಜಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಮಂಡ್ಯ ಜಿಲ್ಲಾ ಕುಳುವ ಸಮಾಜ ಹಾಗೂ ಡ್ರೀಮ್ ಫೌಂಡೇಶನ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಮಂಡ್ಯದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಕೊರವಂಜಿ ಸಂಸ್ಕೃತಿ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಂಡ್ಯ ಜಿಲ್ಲಾ ಕುಳುವ ಸಮಾಜದ ಅಧ್ಯಕ್ಷ ಕೃಷ್ಣ ಕುಮಾರು ಗಂಗೂರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭಾ ಉಪಾಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಂಬಾಣಿ, ಶ್ರೀರಂಗ ಪಟ್ಟಣದ ಚಂದ್ರವನ ಆಶ್ರಮದ ಡಾ. ತ್ರಿನೇತ್ರ ಮಹಂತ ಶಿವಯೋಗಿ ಮಹಾಸ್ವಾಮಿ, ಸಾಂಸ್ಕೃತಿಕ ಚಿಂತಕರಾದ ಜಿ.ಸಿದ್ದರಾಮಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು. ಕುಡಿಯರ ಮುತ್ತಪ್ಪ ಕುಡಿಯ ಜನಾಂಗಕ್ಕೆ ಸರ್ಕಾರದಿಂದ ಇರುವ ಸೌಲಭ್ಯಗಳನ್ನು ತಲುಪಿಸುವ ವ್ಯವಸ್ಥೆಯನ್ನು ಕೈಗೊಂಡಿದ್ದರು. ಕೊಡಗು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕ್ರೀಡೆ, ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಇವರ ಸೇವೆಯನ್ನು ಪರಿಗಣಿಸಿ ವಿವೇಕಾನಂದ ಸೇವಾ ಪ್ರಶಸ್ತಿ…
ಶಿರಸಿ : ಸಾಹಿತ್ಯ ಸಂಚಲನ ಶಿರಸಿ (ಉ.ಕ.) ಹಾಗೂ ನಯನಾ ಫೌಂಡೇಶನ್ ಶಿರಸಿ (ಉ.ಕ.) ಇವರ ಸಹಯೋಗದೊಂದಿಗೆ ಆಯೋಜಯಿಸಿದ ಡಾ.ಎಚ್. ಆರ್. ವಿಶ್ವಾಸ ಅವರ ‘ಸಂಗಮ’ ಕಾದಂಬರಿ ಲೋಕಾರ್ಪಣಾ ಕಾರ್ಯಕ್ರಮವು ದಿನಾಂಕ 14-01-2024ರ ಭಾನುವಾರದಂದು ಶಿರಸಿ ದೇವಿಕೆರೆಯ ಗಣೇಶ ನೇತ್ರಾಲಯದಲ್ಲಿರುವ ನಯನ ಸಭಾಂಗಣದಲ್ಲಿ ನಡೆಯಲಿದೆ. ಸಾಹಿತಿಗಳಾದ ಶ್ರೀ ಗಣಪತಿ ಭಟ್ಟ, ವರ್ಗಾಸರ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಸಂಸ್ಕೃತ ವಿದ್ವಾಂಸರಾದ ವಿ. ಶ್ರೀ ರವಿಶಂಕರ ಹೆಗಡೆ ದೊಡ್ಡಳ್ಳಿ ಉದ್ಘಾಟಿಸಲಿದ್ದು, ಪರಿಸರ ತಜ್ಞರಾದ ಶ್ರೀ ಶಿವಾನಂದ ಕಳವೆ ಪುಸ್ತಕ ಲೋಕಾರ್ಪಣೆಗೊಳಿಸಲಿರುವರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಂಸ್ಕೃತ ಸಾಹಿತಿಗಳಾದ ಡಾ. ಎಚ್.ಆರ್.ವಿಶ್ವಾಸ, ಶಿರಸಿಯ ಗಣೇಶ ನೇತ್ರಾಲಯದ ನೇತ್ರತಜ್ಞರಾದ ಡಾ. ಶಿವರಾಮ ಕೆ.ವಿ. ಹಾಗೂ ಸಾಹಿತ್ಯ ಸಂಚಲನದ ಸಂಚಾಲಕರಾದ ಶ್ರೀ ಕೃಷ್ಣ ಪದಕಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಆಮಂತ್ರಿತ ಕವಿಗಳಿಂದ ‘ರಾಮೋಪಾಸನೆ’ ಕವಿಗೋಷ್ಠಿ ನಡೆಯಲಿದ್ದು, ಕವಿಗಳಾದ ದಾಕ್ಷಾಯಿಣಿ ಪಿ.ಸಿ. ಶಿರಸಿ, ಶೋಭಾ ವಿ. ಭಟ್ ಶಿರಸಿ, ರಾಜಲಕ್ಷ್ಮಿ ಭಟ್ ಬೊಮ್ಮನಳ್ಳಿ, ದಿನೇಶ ಭಾಗ್ವತ ಶಿರಸಿ,…
ಪುತ್ತೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಗ್ರಾಮ ಪಂಚಾಯತ್ ಹಿರೇಬಂಡಾಡಿ ಹಾಗೂ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಹಕಾರದಲ್ಲಿ ಮಿತ್ರಂಪಾಡಿ ಜಯರಾಮ ರೈ ಅವರ ಮಹಾ ಪೋಷಕತ್ವದಲ್ಲಿ ‘ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ’ ಎಂಬ ಘೋಷವಾಕ್ಯದಲ್ಲಿ ದಿನಾಂಕ 23-12-2023ರಂದು ‘ಗ್ರಾಮ ಸಾಹಿತ್ಯ ಸಂಭ್ರಮ’ದ 11ನೇ ಸರಣಿ ಕಾರ್ಯಕ್ರಮವು ಹಿರೇಬಂಡಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಾಧಕರನ್ನು ಅಭಿನಂದಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದ ಗ್ರಾಮ ಸಾಹಿತ್ಯ ಸಂಭ್ರಮದ ಮಹಾ ಪೋಷಕರಾಗಿರುವ ಮಿತ್ರಂಪಾಡಿ ಜಯರಾಮ್ ರೈ ಅಬುದಾಬಿಯವರು “ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಸಲ್ಪಡುವ ಗ್ರಾಮ ಸಾಹಿತ್ಯ ಸಂಭ್ರಮವು ಅಂತರ್ಜಾಲಗಳ ಮೂಲಕ ವಿದೇಶಗಳಲ್ಲೂ ವ್ಯಾಪಕ ಪ್ರಚಾರವನ್ನು ಪಡೆಯುತ್ತಿದೆ ಹಾಗೂ ಹೊರನಾಡ ಕನ್ನಡಿಗರಿಂದ ಮುಕ್ತ ಕಂಠದ ಪ್ರಶಂಸನೆಗೆ ಪಾತ್ರವಾಗುತ್ತಿದೆ’ ಎಂದು ಹೇಳಿದರು. ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದ ಪಂಚಾಯತ್ ಅಧ್ಯಕ್ಷರಾದ ಸದಾನಂದ ಶೆಟ್ಟಿ ಅವರು “ಇಂದು ಸಾಹಿತ್ಯದ ಮೂಲಕ ಮತ್ತೊಮ್ಮೆ ಮಕ್ಕಳನ್ನ…
ಬೆಂಗಳೂರು : ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘಟನೆಗಳಾದ ರಂಗಚಂದಿರ ಟ್ರಸ್ಟ್ ಮತ್ತು ರಂಗನಾಯಕ ಟ್ರಸ್ಟ್ ಆಯೋಜಿಸಿರುವ ರಂಗಜಂಗಮ ಸಿ.ಜಿ.ಕೆ. ಮತ್ತು ಟೆಲಿಕಾಂ ದತ್ತಾತ್ರೇಯರವರ ನೆನಪಿನ ಅಂಗವಾಗಿ ರಂಗಸಂಗೀತ, ಅಭಿನಂದನೆ ಮತ್ತು ನಾಟಕಗಳ ಪ್ರದರ್ಶನವು ದಿನಾಂಕ 11-01-2024ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ತಂಡದ ಜಿಲ್ಲಾಧ್ಯಕ್ಷರಾದ ಶ್ರೀ ಎನ್.ಆರ್. ಹೆಗಡೆ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಲೋಕದಲ್ಲಿ ವಿವಿಧ ಪ್ರಶಸ್ತಿ ಪಡೆದ ಪುರಸ್ಕೃತರಿಗೆ ಸನ್ಮಾನ ನಡೆಯಲಿದೆ. ಇದೇ ಸಂದರ್ಭದಲ್ಲಿ ಬೇಲೂರು ಕೃಷ್ಣಮೂರ್ತಿ ರಚನೆಯ ಜಿ.ಪಿ.ಒ. ಚಂದ್ರು ನಿರ್ದೇಶನದ ‘ಕುದುರೆ ಮೊಟ್ಟೆ’ ಎಂಬ ಕಿರುನಾಟಕ ಮತ್ತು ಡಾ. ಬೇಲೂರು ರಘುನಂದನ್ ರಚನೆ, ಗೀತೆ ರಚನೆಯ ಹಾಗೂ ಕೃಷ್ಣಮೂರ್ತಿ ಕವತ್ತಾರ್ ರಂಗವಿನ್ಯಾಸ, ಸಂಗೀತ ನಿರ್ದೇಶನದ ಸವಿಗಾನ ಸವಿತಕ್ಕ ಅಭಿನಯಿಸುವ ‘ಉಧೋ ಉಧೋ ಎಲ್ಲವ್ವ’ ಏಕವ್ಯಕ್ತಿ ರಂಗಪ್ರಯೋಗ ಪ್ರದರ್ಶನಗೊಳ್ಳಲಿದೆ.
ಮಂಗಳೂರು : ಮಾತಾ ಅಮೃತಾನಂದಮಯಿ ಮಠ ಬೋಳೂರು ಮತ್ತು ಅಮೃತ ಸಂಸ್ಕೃತಿ ಮತ್ತು ಶ್ರೇಷ್ಠತಾ ಕೇಂದ್ರ ಇದರ ಆಶ್ರಯದಲ್ಲಿ ಮಠದ 25ನೇ ವರ್ಷದ ಸಂಭ್ರಮಾಚರಣೆ ಮತ್ತು ರಾಷ್ಟ್ರೀಯ ಯುವದಿನದ ಅಂಗವಾಗಿ ‘ಯುವ ಸಾಹಿತ್ಯ ಸಮ್ಮೇಳನ 2024’ ಕಾರ್ಯಕ್ರಮವು ದಿನಾಂಕ 13-01-2024ರ ಶನಿವಾರದಂದು ಮಂಗಳೂರಿನ ಬೋಳೂರಿನಲ್ಲಿರುವ ಅಮೃತ ವಿದ್ಯಾಲಯಂ ಆವರಣದಲ್ಲಿ ನಡೆಯಲಿದೆ. ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಅಧ್ಯಕ್ಷರಾದ ಡಾ. ವಸಂತಕುಮಾರ್ ಪೆರ್ಲ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಮಾತಾ ಅಮೃತಾನಂದಮಯಿ ಮಠ ಮಂಗಳೂರಿನ ಮುಖ್ಯಸ್ಥರಾದ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್, ಮಂಗಳೂರಿನ ಶಾರದಾ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಪ್ರೊ. ಎಂ.ಬಿ. ಪುರಾಣಿಕ್ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಪೂರ್ವಾಹ್ನ 11 ಗಂಟೆಗೆ ವೀಣಾ ಟಿ. ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಪ್ರಬಂಧಗೋಷ್ಠಿ ನಡೆಯಲಿದ್ದು, ಶ್ವೇತಾ ಕಾರ್ಕಳ, ಪ್ರಜ್ಞಾ ಕೆ. ವೈ.,…
ಮಂಗಳೂರು : ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಆಯೋಜಿಸಿದ 9ನೇ ವಚನ ಸಂಭ್ರಮ ಕಾರ್ಯಕ್ರಮ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ಮಕ್ಕಳಿಗೆ ವಚನಕಾರರು ಸಮಾಜಕ್ಕೆ ನೀಡಿದ ಕೊಡುಗೆ’ ಎಂಬ ವಿಷಯದಲ್ಲಿ ನಡೆದ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮವು ದಿನಾಂಕ 30-12-2023 ರಂದು ಮಂಗಳೂರಿನ ಕೊಡಿಯಲ್ ಬೈಲಿನಲ್ಲಿರುವ ಶಾರದಾ ವಿದ್ಯಾಲಯದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಸಾಹಿತಿ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆಯವರು ಮಾತನಾಡಿ “ವಚನಗಳು ಮನುಷ್ಯನ ಮನಸ್ಸನ್ನು ಶುದ್ಧಿಗೊಳಿಸುವ ಸರಳ ನುಡಿಗಳು ಇದರ ಸಾರ ಸರ್ವರಲ್ಲಿ ಬೆರೆಯಲಿ. ಎಂದು ಆಶಿಸಿದರು. ಇದೇ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರ ಮತ್ತು ತುಳು ಪರಂಪರೆಯ ಸಂಶೋಧನೆಗೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರನ್ನು ಗೌರವಪೂರ್ಣವಾಗಿ ಸನ್ಮಾನಿಸಲಾಯಿತು. ಬೆಸೆಂಟ್ ಕಾಲೇಜಿನ ಪ್ರಾಧ್ಯಾಪಕರಾದ ಶ್ರಿ ರವಿರಾಜ್ ಇವರು ವಚನಕಾರರು ಸಮಾಜಕ್ಕೆ ಕೊಟ್ಟಿರುವ ಕೊಡುಗೆಗಳ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು. “ಜಾತಿಭೇದಗಳನ್ನು ತೊಡೆದು ಹಾಕಲು ಮತ್ತು ಸ್ತ್ರೀ ಪುರುಷ ಸಮಾನತೆ…
ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ 34ನೇ ವರ್ಷದ ವಾರ್ಷಿಕೋತ್ಸವ ಮತ್ತು ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ನಗರದ ವಿಶ್ವವಿದ್ಯಾಲಯ ದೃಶ್ಯಕಲಾ ಮಹಾವಿದ್ಯಾಲಯ ಯಕ್ಷರಂಗ ಯಕ್ಷಗಾನ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ 14-01-2024ನೇ ಭಾನುವಾರ ಬೆಳಿಗ್ಗೆ 9-30ಕ್ಕೆ ದೃಶ್ಯಕಲಾ ಮಹಾವಿದ್ಯಾಲಯ ಸಭಾಂಗಣದಲ್ಲಿ ಯಕ್ಷಗಾನ ಚಿತ್ರ ವೀಕ್ಷಿಸಿ ಸ್ಥಳದಲ್ಲಿಯೇ ಚಿತ್ರ ಬರೆಯುವ ಉಚಿತ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ವಯೋಮಾನಕ್ಕೆ ಅನುಗುಣವಾಗಿ ವಿವಿಧ ವಿಭಾಗಗಳಾಗಿ ವಿಂಗಡಿಸುತ್ತಿದ್ದು, ಚಿತ್ರ ಬರೆಯುವ ಹಾಳೆ (ಡ್ರಾಯಿಂಗ್ ಶೀಟ್) ಉಚಿತವಾಗಿ ವಿತರಿಸಲಾಗುವುದು. ಇನ್ನುಳಿದಂತೆ ಚಿತ್ರ ಬರೆಯುವ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು. ಯಕ್ಷಗಾನ ಚಿತ್ರ ಬರೆಯಲು ಕೇವಲ ಒಂದು ಗಂಟೆ ಕಾಲಾವಕಾಶವಿದ್ದು 10-01-2024ರೊಳಗೆ ಈ ಕೆಳಗಿನ ಜಂಗಮವಾಣಿಗೆ ಸಂಪರ್ಕಿಸಿ ಹೆಸರು ನೊ೦ದಾಯಿಸಬಹುದು. ಹೆಸರು ನೊಂದಾಯಿಸುವ ಜಂಗಮವಾಣಿ 9731062936. ಹೆಚ್ಚಿನ ಮಾಹಿತಿಗೆ 9538732777 ಈ ಸಂಖ್ಯೆಯನ್ನು ಸಂಪರ್ಕಿಸಬಹುದು.