Author: roovari

ಪುತ್ತೂರು : ಪುತ್ತೂರು ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ತುಳು ಕೂಟೊ ಪುತ್ತೂರು ತಾಲೂಕು ಇದರ ವತಿಯಿಂದ ‘ತುಳುವೆರೆ ಮೇಳೊ-2024’ ಕಾರ್ಯಕ್ರಮವು ದಿನಾಂಕ 03-03-2024ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರು “ತುಳು ಭಾಷೆ ರಾಜ್ಯದ 2ನೇ ಭಾಷೆ ಆಗದೇ ನಮಗೆ ಗೌರವ ಇಲ್ಲ. ಆಗ ತುಳು 8ನೇ ಪರಿಚ್ಛೇದಕ್ಕೆ ಸೇರ್ಪಡೆ ಆಗುತ್ತದೆ. ಈ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನ ಇರಬೇಕು. ತುಳುವರ ಮನಸ್ಸು, ದೊಡ್ಡದು. ತುಳು ಪ್ರಾದೇಶಿಕ ಮತ್ತು ವ್ಯವಹಾರಿಕ ಭಾಷೆ, ಜಾತಿ, ವರ್ಣ, ಪಂಗಡ ಬಿಟ್ಟು ತುಳು ಭಾಷೆ ಮಹತ್ವ ಪಡೆದಿದೆ. ತುಳು ಭಾಷೆಗೆ ಭಾವನಾತ್ಮಕ ಸಂಬಂಧವಿದೆ. ಈಗ ವಿಧಾನಸಭೆಯಲ್ಲೂ ತುಳು ಭಾಷೆ ಕೇಳಲು ಆರಂಭವಾಗಿದೆ. ಇದಕ್ಕೆ ಶಾಸಕರಿಗೆ ಅಭಿನಂದನೆ ಸಲ್ಲಿಸಬೇಕು ಎಂದರು. ತುಳು ಲಿಪಿ ನಮ್ಮಲ್ಲಿ ಇದೆ. ತುಳುವಿಗೆ ಅಂಕೆ ಸಂಖ್ಯೆಯೂ ಇದೆ. ಹಾಗಾಗಿ ಜಾತಿ ಮತ ಪಂಗಡ ಬಿಟ್ಟು ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನ…

Read More

ತಮ್ಮ ಮೊದಲ ಕಥಾ ಸಂಕಲನ ‘ಅಜ್ಜ ನೆಟ್ಟ ಹಲಸಿನ ಮರ’ದ ಮೂಲಕ ಸಾಹಿತ್ಯ ಲೋಕಕ್ಕೆ ಪರಿಚಯಿಸಿಕೊಂಡ ಸತೀಶ್ ವಕ್ವಾಡಿಯವರು ಈಗ ತಮ್ಮ ಎರಡನೇ ಸಂಕಲನ ‘ಕೊನೆಯ ಎರಡು ಎಸೆತಗಳು’ ಮೂಲಕ ಭರವಸೆಯ ಕಥೆಗಾರರಾಗಿ ಬೆಳೆದಿದ್ದಾರೆ. ಬುಕ್ ಬ್ರಹ್ಮ ಪ್ರಕಟಿಸಿದ ಈ ಸಂಕಲನದಲ್ಲಿ ಗಮನ ಸೆಳೆಯುವ ಎಂಟು ಕಥೆಗಳಿವೆ. ಆಧುನಿಕ ಸಂದರ್ಭದಲ್ಲಿ ಗ್ರಾಮೀಣ ಮತ್ತು ನಗರ ಕೇಂದ್ರಿತ ಸಂಸ್ಕೃತಿಗಳು ಹೇಗೆ ಪಲ್ಲಟಗೊಳ್ಳುತ್ತಿವೆ ಎಂಬುದನ್ನು ಈ ಕಥೆಗಳು ತುಲನಾತ್ಮಕವಾಗಿ ಚಿತ್ರಿಸುತ್ತವೆ. ಗಾಳಿಯನ್ನಾಗಲಿ ನೆರಳನ್ನಾಗಲಿ ಕೊಡದ ‘ಗಾಳಿಮರ’ ಮೊದಲನೆಯ ಕಥೆಯ ಶೀರ್ಷಿಕೆ. ನಗರಕ್ಕೆ ಹೋಗಿ ಬಿಳಿ ಕಾಲರ್ ಉದ್ಯೋಗ ಸಂಪಾದಿಸಿ ಜೀವನ ನಡೆಸಬೇಕೆಂಬ ಆಸೆಯಿದ್ದರೂ ವಿದ್ಯೆ ಕಲಿಯುವುದರಲ್ಲಿ ದಡ್ಡನಾದ ಸದಾಶಿವ ಹಳ್ಳಿಯಲ್ಲೇ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿ ಮನೆಯಲ್ಲೂ ಊರಲ್ಲೂ ಎಲ್ಲರಿಗೂ ಬೇಕಾದವನಾಗುತ್ತಾನೆ. ಬಂದ ಗಂಡುಗಳನ್ನೆಲ್ಲ ಒಂದಿಲ್ಲೊಂದು ಕೊರತೆ ಹೇಳಿ ತಿರಸ್ಕರಿಸುವ ತಂಗಿಗೊಂದು ಗಂಡು ಹುಡುಕುವುದರಲ್ಲಿ ಅವನ ಯೌವನ ಸವೆಯುತ್ತದೆ. ಅವಳಿಗೆ ಮದುವೆ ನಿಶ್ಚಯವಾಗುವುದಕ್ಕೆ ಮೊದಲೇ ಅವನು ಪ್ರೀತಿಸಿದ ಹುಡುಗಿ ಅವನಿಗಾಗಿ ಕಾದು ಕೊನೆಗೆ ಹಿರಿಯರ ಒತ್ತಾಯಕ್ಕೆ…

Read More

ಉಡುಪಿ : ಅಂತರಾಷ್ಟ್ರೀಯ ‌ಮಹಿಳಾ ದಿನದ ಅಂಗವಾಗಿ ಕೊಡವೂರು ಬ್ರಾಹ್ಮಣ ಮಹಾ ಸಭಾದಿಂದ ಅಪರೂಪದ ಚುಕ್ಕಿ ಮಂಡಲ ಆರ್ಟ್ ಕಲಾವಿಭಾಗದಲ್ಲಿ ರಾಷ್ಟ್ರೀಯ ‌ಮಟ್ಟದಲ್ಲಿ ಸಾಧನೆಗೈದ ಕಲಾವಿದೆ ರಂಗವಲ್ಲಿ, ಸಂಗೀತ, ವರ್ಲಿ ಕಲೆ, ಫ್ಯಾಬ್ರಿಕ್ ಪೇಂಟಿಂಗ್, ಕಸೂತಿ ಹೀಗೆ ಲಲಿತ ಕಲೆಗಳ ವಿವಿಧ ಪ್ರಕಾರಗಳಲ್ಲಿ ಸಾಧನೆಗೈದ ಶ್ರೀಮತಿ ಅಶ್ವಿನಿ ಶ್ರೀನಿವಾಸ್ ಇವರನ್ನು ಅವರ ಸ್ವಗೃಹ ಶ್ರೀವಾಸದಲ್ಲಿ ದಿನಾಂಕ 10-03-2024ರಂದು ಅಭಿನಂದಿಸಲಾಯಿತು‌. ಬ್ರಾಹ್ಮಣ ಮಹಾ ಸಭಾ ಕೊಡವೂರು ಇದರ ಅಧ್ಯಕ್ಷರಾದ ಶ್ರೀನಿವಾಸ ಉಪಾಧ್ಯಾಯ, ಕೋಶಾಧಿಕಾರಿ ಶ್ರೀಧರ ಶರ್ಮ, ಸದಸ್ಯರಾದ ರೋಹಿಣಿ ಬಾಯರಿ, ಸೌಮ್ಯಾ ಗಣೇಶ್, ಕೌಸ್ತುಭ ಚಂದನ್, ಶೃತಿ ಸುಕುಮಾರ್, ಮುರಳೀಧರ ಭಟ್, ಸುಲೋಚನಾ ಉಪಾಧ್ಯಾಯ ಉಪಸ್ಥಿತಿತರಿದ್ದರು. ಜತೆ ಕಾರ್ಯದರ್ಶಿ ರಾಜಶ್ರೀ ಪ್ರಸನ್ನ ಸನ್ಮಾನ ಪತ್ರ ವಾಚಿಸಿ, ಪದಾಧಿಕಾರಿ ದೀಪಾ ರಾಮಕೃಷ್ಣ ಧನ್ಯವಾದವಿತ್ತರು. ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Read More

ಉಡುಪಿ : ಉಡುಪಿ ಬನ್ನಂಜೆಯ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಪೆರ್ಡೂರಿನ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ ವತಿಯಿಂದ ಮತ್ಸ್ಯರಾಜ್ ಗ್ರೂಪ್ ಮಲ್ಪೆ ಇವರ ಸಹಯೋಗದಲ್ಲಿ ಅವಿಭಜಿತ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಭಜನಾ ಸ್ಪರ್ಧೆಯ ಸಮಾರೋಪ ಸಮಾರಂಭವು ದಿನಾಂಕ 10-03-2024ರಂದು ಸಂಜೆ ನಡೆಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ದೇವರ ಭಜನೆಯಿಂದ ಮನಸ್ಸಿಗೆ ನೆಮ್ಮದಿ, ಸಂತೋಷ ಪ್ರಾಪ್ತಿಯಾಗುತ್ತದೆ. ಭಜನೆ ಭಗವಂತನ ಸಾಕ್ಷಾತ್ಕಾರಕ್ಕಿರುವ ಸುಲಭ ಮಾರ್ಗ. ಭಜನೆಗೆ ಅದ್ಭುತ ಶಕ್ತಿಯಿದೆ. ಅದರಲ್ಲಿ ಸಿಗುವ ಆನಂದ ಬೇರೆಲ್ಲೂ ಸಿಗದು. ಎಂತಹ ಸಂಕಷ್ಟ ಕಾಲದಲ್ಲಿಯೂ ಭಗವಂತನ ನಾಮಸ್ಮರಣೆ ನಮ್ಮನ್ನು ಪಾರುಮಾಡುತ್ತದೆ. ನಮ್ಮ ಸಂಸ್ಕೃತಿಯಿಂದ ವಿಮುಖರಾದ ಯುವ ಪೀಳಿಗೆಯನ್ನು ಸರಿದಾರಿಗೆ ತರಲು ಭಜನೆಯಂತಹ ಕಾರ್ಯಕ್ರಮಗಳು ಇಂದು ಅನಿವಾರ್ಯವಾಗಿವೆ. ಭಜನೆಯಿಂದ ಒಳಿತೇ ಆಗುತ್ತದೆಯೇ ಹೊರತು ಕೆಡುಕಾಗದು. ನಾವು ಮಕ್ಕಳಿಗೆ ಬಾಲ್ಯದಲ್ಲಿಯೇ ಅಧ್ಯಾತ್ಮದ ಅರಿವು ಮೂಡಿಸಿದಾಗ ಅವರೂ ಸತ್ಯ ಮಾರ್ಗದಲ್ಲಿಯೇ…

Read More

ಬೆಂಗಳೂರು : 2023ನೆಯ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತಿನ ‘ಪ್ರೊ. ಸಿ.ಎಚ್. ಮರಿದೇವರು ದತ್ತಿ ಪ್ರಶಸ್ತಿ’ಗೆ ಕುಷ್ಟಗಿಯ ನಿಸರ್ಗ ಸಂಗೀತ ವಿದ್ಯಾಲಯ, ಚಾಮರಾಜನಗರದ ಹಿರಿಯ ಬರಹಗಾರ ಕೆ.ಸಿ. ಶಿವಪ್ಪ, ರಾಯಚೂರಿನ ಕೃಷಿತಜ್ಞರಾದ ಕವಿತಾ ಮಿಶ್ರ, ತುಮಕೂರಿನ ಕನ್ನಡ ಸೇವಕ ಡಾ. ಬಿ. ನಂಜುಂಡ ಸ್ವಾಮಿ ಮತ್ತು ತುಮಕೂರಿನ ಸಂಗೀತ ಸಾಧಕರಾದ ಮಲ್ಲಿಕಾರ್ಜುನ ಕೆಂಕೆರೆ ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯು ದತ್ತಿಯ ನಿಯಮಗಳನ್ನು ಪರಿಶೀಲಿಸಿ ಈ ಆಯ್ಕೆಯನ್ನು ಮಾಡಿದೆ. ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಕೃಷಿ, ನೀರಾವರಿ, ಕನ್ನಡ ಸೇವೆಯ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆಯನ್ನು ಸಲ್ಲಿಸಿದರಿಗೆ ಈ ದತ್ತಿ ಪುರಸ್ಕಾರವನ್ನು ನೀಡಲಾಗುತ್ತದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನಮಸಾಗರದಲ್ಲಿರುವ ನಿಸರ್ಗ ಸಂಗೀತ ವಿದ್ಯಾಲಯ ಮತ್ತು ರಂಗ ಕಲಾವಿದರ ಸಂಘ (ರಿ) ಸಂಪತ್ತಿಗೆ ಸವಾಲ್ ಖ್ಯಾತಿಯ ನಾಟಕಕಾರ ಮತ್ತು ನಿರ್ದೇಶಕ ಪಿ.ಬಿ. ಧತ್ತರಗಿ ಮತ್ತು ರಂಗ ನಿರ್ದೇಶಕಿ ಸರೊಜಮ್ಮ ಧತ್ತರಗಿಯವರಿಂದ ಸ್ಥಾಪಿತವಾಗಿದ್ದು ಮರೆಯಾಗುತ್ತಿರುವ…

Read More

ಮೈಸೂರು : ಆತ್ಮೀಯ ಗೆಳೆಯರೇ, ಪೋಷಕರೇ, ಪುಟಾಣಿಗಳೇ ನಿಮ್ಮೆಲ್ಲರ ತುಂಬು ಹೃದಯದ ಸಹಕಾರ, ಪ್ರೀತಿ, ರಂಗ ಕಾಳಜಿ ಮತ್ತು ಎಲ್ಲಕ್ಕಿಂತ ಮುಖ್ಯ ನೀವು ನಮ್ಮ ‘ಶ್ರೀಗುರು ಕಲಾ ಶಾಲೆ’ಯ ಮೇಲಿಟ್ಟಿದ್ದ ನಂಬಿಕೆ ಮತ್ತು ವಿಶ್ವಾಸಗಳಿಂದ ಕಳೆದ ವರ್ಷ ನಾವು ಆರಂಭಿಸಿದ ಮಕ್ಕಳ ಬೇಸಿಗೆ ಶಿಬಿರ “ಪುಟಾಣಿ ಪರ್ ಪಂಚ” ನಿಮ್ಮನ್ನು ತಲುಪುವಲ್ಲಿ ಯಶಸ್ವಿಯಾಗಿದೆ ಎಂಬ ಹೆಮ್ಮೆಯ ಭಾವನೆ ನಮ್ಮಲ್ಲಿ ಮೂಡಿದೆ. ಅದಕ್ಕೆಲ್ಲ ಕಾರಣ ನೀವು…. ನೀವು ಮತ್ತು ನೀವು. ನಮ್ಮ ಶ್ರೀಗುರು ಕಲಾ ಶಾಲೆಯ ಉದ್ದೇಶವಾದರೂ ಅಷ್ಟೇ….ಮುಖ್ಯವಾಗಿ ರಂಗಭೂಮಿಯ ಮೂಲಕ ಮಕ್ಕಳನ್ನು ತಲುಪುವುದು. ಆ ನಿಟ್ಟಿನಲ್ಲಿ ನಮ್ಮ ರಂಗ ಚಟುವಟಿಕೆಗಳು ಮತ್ತು ವಿವಿಧ ಕಾರ್ಯಕ್ರಮಗಳು ನಮಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿವೆ. ನಾವು ನಮ್ಮ ಹಿರಿಯರಿಂದ ಕಲಿತದ್ದನ್ನು ಮಕ್ಕಳಿಗೆ ಕಲಿಸುವ ಒಂದು ಸಣ್ಣ ಪ್ರಯತ್ನ ಅಷ್ಟೇ ಇದೆಲ್ಲ. ನಮ್ಮ ಕಲಾ ಶಾಲೆ ನಡೆಸುವ ರಂಗ ತರಬೇತಿ ಶಿಬಿರಗಳಿಗೆ ಮತ್ತು ಸಂಗೀತ ಕಲಿಕೆಗೆ ಕೊಡುವಷ್ಟೇ ಪ್ರಾಮುಖ್ಯತೆಯನ್ನು ನಮ್ಮ ‘ಪುಟಾಣಿ ಪರ್ ಪಂಚ’ಕ್ಕೂ ನೀಡಿ ನಮ್ಮ ಜವಾಬ್ದಾರಿಯನ್ನು…

Read More

ಆಧುನಿಕ ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಹೊಸ ರೀತಿಯ ಬರವಣಿಗೆಗಳಿಂದ ಓದುಗ ವೃಂದಕ್ಕೆ ಚಿರಪರಿಚಿತರಾದ ಗಿರಿಮನೆ ಶ್ಯಾಮರಾವ್ ಇವರು ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕೌತುಕ ಹೊಂದಿದವರು. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿರುವ ಇವರು ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಮುಂತಾದ ಕ್ಷೇತ್ರಗಳಲ್ಲಿ 26ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ಗ್ರಾಮದವರಾದ ಇವರು ಗಿರಿಮನೆ ಪ್ರಕಾಶನದ ಮೂಲಕ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ‘ದುಷ್ಕೃತ್ಯ’ ಎಂಬುದು ಗಿರಿಮನೆ ಶ್ಯಾಮರಾವ್ ಅವರ ಮನೋವೈಜ್ಞಾನಿಕ ಕಾದಂಬರಿ ಸರಣಿಯ ಮೂರನೇ ಕೃತಿಯಾಗಿದೆ. ಸಮಾಜದಲ್ಲಿ ಘಟಿಸುವ ಅಪರಾಧವು ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ಬದಲಾವಣೆಗಳಿಗೆ ಕಾರಣವಾಗುವ ಸಾಧ್ಯತೆಗಳ ಕುರಿತು ಕಾದಂಬರಿ ಚರ್ಚಿಸುತ್ತದೆ. ಬಡತನವು ಎಲ್ಲಾ ಬಗೆಯ ಹಸಿವುಗಳಿಗೆ ಕಾರಣವಾಗುತ್ತದೆ. ಹಾಗೆಯೇ ಬಡತನದಿಂದ ಹುಟ್ಟುವ ಛಲ, ಉತ್ಸಾಹ ಹಾಗೂ ಪ್ರಾಮಾಣಿಕ ಪ್ರಯತ್ನ ಗೆಲುವಿನ ಹಾದಿಯ ಕಡೆಗೆ ಕರೆದೊಯ್ಯುತ್ತದೆ ಎಂಬುದಕ್ಕೆ ಪ್ರಸ್ತುತ ಕೃತಿಯಲ್ಲಿ ಬರುವ…

Read More

ಮಡಿಕೇರಿ : ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಹಾಗೂ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಸಂಯುಕ್ತಾಶ್ರಯದಲ್ಲಿ ನಡೆದ ಸುವರ್ಣ ಕರ್ನಾಟಕ- 50ರ ಸಂಭ್ರಮದ ನಿಮಿತ್ತ ಪ್ರಾಥಮಿಕ ಶಾಲಾ ಕನ್ನಡ ಮಾಧ್ಯಮ ಶಿಕ್ಷಕರಿಗೆ ಭಾಷಣ ಸ್ಪರ್ಧೆಯನ್ನು ದಿನಾಂಕ 25-02-2024ರಂದು ಏರ್ಪಡಿಸಲಾಗಿತ್ತು. ಲೇಖಕರ ಮತ್ತು ಕಲಾವಿದರ ಬಳಗದ ವತಿಯಿಂದ ನಡೆದ ವಾರ್ಷಿಕ ಕಾರ್ಯಕ್ರಮದಲ್ಲಿ 2022-23ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಐಗೂರು ಸರಕಾರಿ ಪ್ರೌಢಶಾಲೆಯ ಕು. ಬೇಸಿಲ್‌ ಸಿ.ಬಿ. ಇವರಿಗೆ ಟಿ.ಪಿ. ರಮೇಶ್ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಕಲೆ ಮತ್ತು ಸಾಹಿತ್ಯ ಬೆಳವಣಿಗೆ ಕುರಿತು ಮುಖ್ಯ ಭಾಷಣ ಮಾಡಿದ ಸಾಹಿತಿ ಡಾ. ಜೆ. ಸೋಮಣ್ಣ “ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಸಾಹಿತಿ ಭಾರತೀಸುತ ಅವರು ತಮ್ಮ ಕಥೆ, ಕವನ, ಕಾದಂಬರಿ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಮಕ್ಕಳಲ್ಲಿ ಪ್ರಾಥಮಿಕ…

Read More

ಬೆಂಗಳೂರು ದೂರದರ್ಶನದ ಪ್ರಸಾದನ ಕಲಾವಿದ, ರಂಗ ಭೂಮಿಯ ಕ್ರಿಯಾಶೀಲ ಉಮೇಶ್ ದಿನಾಂಕ 08-03-2024ರಂದು ನಿಧನರಾದರು. ನಮ್ಮ ದೂರದರ್ಶನ ಉಮೇಶ್ ಎಂದೇ ಖ್ಯಾತಿಯ, ಸಮುದಾಯ ಮತ್ತು ರಂಗನಿರಂತರ, ರಂಗ ಸಂಪದ ತಂಡಗಳೊಟ್ಟಿಗೆ ಗುರುತಿಸಿಕೊಂಡು ರಂಗ ಚಟುವಟಿಕೆಗಳನ್ನು ನಡೆಸಿ, ದೂರದರ್ಶನದಲ್ಲಿ ಪ್ರಸಾದನ ಕಲಾವಿದ ಎಂಬ ಹುದ್ದೆಗೆ ಸೇರಿ, ಹಲವು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ, ಸೇತೂರಾಂ ಅವರ ನಿರ್ದೇಶನದ ಹಲವಾರು ದಾರವಾಹಿಗಳಿಗೆ ಹಲವು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ, ಬಹು ಜನರ ಶೋತೃವಾಗಿದ್ದ ಉಮೇಶ ಇನ್ನಿಲ್ಲ ಎಂಬ ದಾರುಣ ಸುದ್ದಿ ಗೆಳೆಯ ನಂದಕುಮಾರನಿಂದ ತಲುಪಿದೆ. ಇತ್ತೀಚಿನ ವರುಷಗಳಲ್ಲಿ ಅವನಿಗೆ ಅನಾರೋಗ್ಯ ತೀವ್ರವಾಗಿ ಕಾಡಿತ್ತು. ಫೆಬ್ರವರಿ 23ರಂದು ನಾನು ನನ್ನ ಮನೆಯವರನ್ನು ಆಸ್ಟ್ರೋ ಆರ್.ವಿ. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗ, ಮಧ್ಯಾನ್ಹ 3-4ರ ಸುಮಾರಿಗೆ ಉಮೇಶನೂ ತನ್ನ ಆರೋಗ್ಯ ತಪಾಸಣೆಗೆ ಬಂದಿದ್ದ. ಅಸ್ಪಷ್ಟ ಮಾತುಗಳು ಮತ್ತು ಅಸಹಜ ದೈಹಿಕ ಕ್ರಿಯೆಗಳಿಂದ ಬಳಲುತಿದ್ದ ಉಮೇಶನ ಮುಂದೆ ನಿಲ್ಲಲು ನನಗೆ ಮನಸ್ಸಾಗಲಿಲ್ಲ. ಏನಾದರೂ ಸಹಾಯ ಬೇಕಾ ಎಂದಾಗ ಅವನ ಜೊತೆ ಇದ್ದವರು ಇಲ್ಲ…

Read More

ಮಂಗಳೂರು : ಮಂಗಳೂರು ವಿವಿಯ ಬ್ಯಾರಿ ಅಧ್ಯಯನ ಪೀಠದ ವತಿಯಿಂದ ‘ಬ್ಯಾರಿ ಜನಾಂಗ- ಬ್ಯಾರಿ ಬದುಕು- ಸಂಶೋಧನಾತ್ಮಕ ಅಧ್ಯಯನ’ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣವು ದಿನಾಂಕ 05-03-2024ರ ಮಂಗಳವಾರದಂದು ಮಂಗಳೂರಿನ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿ ಕುಲಪತಿ ಪ್ರೊ. ಜಯರಾಜ್ ಅಮೀನ್ ಮಾತನಾಡಿ “ತುಳುನಾಡಿನ ಬ್ಯಾರಿಗಳು ಕೇವಲ ‘ಬ್ಯಾರ’ಕ್ಕೆ ಮಾತ್ರ ಸೀಮಿತವಾಗಿಲ್ಲ. ಬೇರೆ ಬೇರೆ ಕ್ಷೇತ್ರದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ನಾಡಿನ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಭಿನ್ನ ಸಂಸ್ಕೃತಿಯ ಮಧ್ಯೆಯೂ ಏಕತೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಬ್ಯಾರಿ ಜನಾಂಗದ ಹಿರಿಮೆಯಾಗಿದೆ. ಬ್ಯಾರಿಗಳು ಮನೆಯಲ್ಲಿ ಬ್ಯಾರಿ ಭಾಷೆಯಲ್ಲಿ ಮಾತನಾಡಿದರೂ ಕೂಡ ಹೊರಗಡೆ ವ್ಯವಹಾರಿಕವಾಗಿ ತುಳು, ಕನ್ನಡ ಮಾತನಾಡುತ್ತಾರೆ. ಸಾಮರಸ್ಯಕ್ಕೆ ಒತ್ತು ನೀಡುತ್ತಾರೆ. ಇದು ಬ್ಯಾರಿಗಳ ವೈಶಿಷ್ಟವಾಗಿದೆ. ಇಂತಹ ಜನಾಂಗದ ಸಂಸ್ಕೃತಿಯ ಬಗ್ಗೆ ವಿಸ್ತ್ರತ ಅಧ್ಯಯನದ ಅಗತ್ಯವಿದೆ.” ಎಂದು ಹೇಳಿದರು. ಕಣಚೂರು ಇಸ್ಲಾಮಿಕ್ ಏಜುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ. ಹಾಜಿ ಯು. ಕೆ.…

Read More