Author: roovari

ಮಂಗಳೂರು : ಶಿವರಾಮ ಕಾರಂತರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕೊಡಿಯಾಲ್ ಬೈಲಿನ ಪತ್ತುಮುಡಿ ಸೌಧದಲ್ಲಿ ದಿನಾಂಕ 10-10-2023ರಂದು ‘ಕಾರಂತ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ನಡೆಯಿತು. ಈ ಪ್ರಶಸ್ತಿಯನ್ನು ಸ್ವೀಕರಿಸಿದ ಚಂದನ ವಾಹಿನಿಯ ‘ಥಟ್ ಅಂತ ಹೇಳಿ’ ಕಾರ್ಯಕ್ರಮದ ಡಾ. ನಾ. ಸೋಮೇಶ್ವರ ಇವರು “ಶಿವರಾಮ ಕಾರಂತರ ಬದುಕು ಒಂದು ವಿರಾಟ್ ರೂಪ. ಅವರ ಜೀವನ ಅನುಕರಣೀಯ. ಹಾಗೆಂದು ಅವರನ್ನು ಅನುಕರಣೆ ಮಾಡುವುದೂ ಅಷ್ಟು ಸುಲಭ ಅಲ್ಲ. ಕಾರಂತರು ಸ್ವತಃ ಪರೀಕ್ಷಿಸದೆ ಅಂತಿಮ ತೀರ್ಮಾನ ಮಾಡುವವರಲ್ಲ. ರವೀಂದ್ರನಾಥ್ ಠಾಗೂರ್ ಮತ್ತು ಕಾರಂತರನ್ನು ಒಂದು ರೀತಿಯಲ್ಲಿ ನೋಡಿದರೂ ಕೂಡ ಕಾರಂತರು ಹೆಚ್ಚು ಸಾಹಸಮಯ ಕೆಲಸಗಳಿಂದ ಗಮನ ಸೆಳೆಯುತ್ತಾರೆ. ಕಳೆದ 21 ವರ್ಷಗಳನ್ನು ಪೂರೈಸಿಕೊಂಡು 22 ವರ್ಷಕ್ಕೆ ಕಾಲಿಡುತ್ತಿರುವ ದೂರದರ್ಶನದ ಥಟ್ ಅಂತ ಹೇಳಿ ಕಾರ್ಯಕ್ರಮವನ್ನು ಹಣಕ್ಕಾಗಿ ಮಾಡುತ್ತಿಲ್ಲ. ನನ್ನದು ವೈದ್ಯ ವೃತ್ತಿ. ಅಲ್ಲೇ ಕೈ ತುಂಬಾ ದುಡಿಯಬಹುದು. ಆದರೆ ನಾನು ನಂಬಿರುವ ನಾಲ್ಕು ಋಣಗಳಲ್ಲಿ ಆಚಾರ್ಯ ಋಣ ಹಾಗೂ ಸಮಾಜದ…

Read More

ಸುಳ್ಯ : ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ, ಸಾಂಸ್ಕೃತಿಕ ಸಂಘ ಐಕ್ಯೂಏಸಿ ವಿಭಾಗ ಮತ್ತು ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ ಇವರ ಜಂಟಿ ಆಶ್ರಯದಲ್ಲಿ ಖ್ಯಾತ ಸಾಹಿತಿ ಡಾ. ಕೆ. ಶಿವರಾಮ ಕಾರಂತರ ಜನ್ಮ ದಿನಾಚರಣೆ ಕಾರ್ಯಕ್ರಮವು ದಿನಾಂಕ 10-10-2023ರಂದು ಬೆಳ್ಳಾರೆಯ ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದಾಮೋದರ ಕಣಜಾಲು ಇವರು ಶಿವರಾಮ ಕಾರಂತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ “ಶಿವರಾಮ ಕಾರಂತರ ಬದುಕೇ ಯುವಜನರಿಗೆ ಸ್ಫೂರ್ತಿ. ಅವರು ನಿಷ್ಠುರವಾದಿ ನಿಲುವಿನ ಮೂಲಕ ಜೀವನ ಸಾಗಿಸಿ ಮಾದರಿಯಾದವರು” ಎಂದರು. ಡಾ.‌ಶಿವರಾಮ ಕಾರಂತರ ಬದುಕು ಬರಹದ ಕುರಿತು ವಿಶೇಷ ಉಪನ್ಯಾಸ ನೀಡಿದ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಇಲ್ಲಿಯ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಸುಬ್ರಹ್ಮಣ್ಯ ಕೆ. ಇವರು “ವ್ಯಕ್ತಿ ಹೇಗೆ ಬದುಕಬೇಕೆಂಬುದನ್ನು ಸಾಧಿಸಿ ತೋರಿಸಿದವರು ಶಿವರಾಮ ಕಾರಂತರು. ವ್ಯಕ್ತಿ ಹೇಗೆ…

Read More

ಮುಡಿಪು : ಮಂಗಳೂರು ವಿಶ್ವವಿದ್ಯಾನಿಲಯದ ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠಕ್ಕೆ ಉಜಿರೆಯ ಡಾ.ಜಯಮಾಲಾ ಇವರು ಜಿನಸೇನಾಚಾರ್ಯ ಮತ್ತು ಗುಣಭದ್ರಾಚಾರ್ಯರು ರಚಿಸಿದ ಮಹಾಪುರಾಣದ ಎರ್ತೂರು ಶಾಂತಿರಾಜ ಶಾಸ್ತ್ರಿಗಳು ಮಾಡಿದ ಕನ್ನಡ ಅನುವಾದ ಕೃತಿಯನ್ನು ದಿನಾಂಕ 09-10-2023ರಂದು ಶಾಸ್ತ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಪ್ರೊ ಕೆ ಚಿನ್ನಪ್ಪ ಗೌಡ “ಗ್ರಂಥಾಲಯಗಳಿಗೆ ಪುಸ್ತಕದಾನ ಮಾಡುವುದು ದಾನಗಳಲ್ಲಿ ಶ್ರೇಷ್ಠವಾದದ್ದು. ಈ ದಾನವು ಅರಿವನ್ನು ವಿಸ್ತರಿಸುವ ಹಾಗೂ ಭವಿಷ್ಯದ ತಲೆಮಾರಿಗೆ ಜ್ಞಾನವನ್ನು ತಲುಪಿಸುವ ಪುಣ್ಯ ಕಾರ್ಯ. ಡಾ.ಜಯಮಾಲಾ ಅವರ ಈ ಕೊಡುಗೆ ಉಳಿದವರಿಗೂ ಪ್ರೇರಣೆಯಾಗಲಿ. ಗ್ರಂಥಾಲಯಗಳು ಸಮಾಜದ ದಾನಿಗಳ ಕೊಡುಗೆಯಿಂದ ಉತ್ತಮ ಕೃತಿಗಳ ತಾಣವಾಗಲಿ” ಎಂದು ಹಾರೈಸಿದರು. ಮಹಾಕವಿ ರತ್ನಾಕರವರ್ಣಿ ಪೀಠದ ಸಂಯೋಜಕ ಡಾ. ಸೋಮಣ್ಣ ಮಾತನಾಡಿ “ಪೀಠದಲ್ಲಿ ಮೌಲಿಕ ಕೃತಿಗಳ ಗ್ರಂಥಾಲಯವನ್ನು ವಿಸ್ತರಿಸುವ ಯೋಜನೆಯಿದೆ. ಅದಕ್ಕೆ ದಾನಿಗಳ ಸಹಕಾರ ಬೇಕು. ಡಾ.ಜಯಮಾಲಾ ಉಜಿರೆ ಅವರು ಅಪೂರ್ವ ಕೃತಿಯನ್ನು ನೀಡಿದ್ದಾರೆ” ಎಂದು ಹೇಳಿದರು. ಸಮಾರಂಭದಲ್ಲಿ ಡಾ. ಜಯಮಾಲಾ ಉಜಿರೆ, ಶ್ರೇಯಸ್ ಉಜಿರೆ,…

Read More

ಮಂಗಳೂರು : ನವಕರ್ನಾಟಕ ಪ್ರಕಾಶನ ಬೆಂಗಳೂರು ಪ್ರಕಟಿತ ಡಾ. ರೇಶ್ಮಾ ಉಳ್ಳಾಲ್ ಇವರ ಸಂಶೋಧನಾ ಕೃತಿ ‘ಬಿಂಬದೊಳಗೊಂದು ಬಿಂಬ’ ಇದರ ಬಿಡುಗಡೆ ಸಮಾರಂಭವು ದಿನಾಂಕ 19-10-2023ರ ಬೆಳಿಗ್ಗೆ ಘಂಟೆ 9.30ಕ್ಕೆ ನಡೆಯಲಿದೆ. ಮಂಗಳೂರಿನ ವೆಲೆನ್ಸಿಯದ ರೋಶನಿ ನಿಲಯ ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್ ಇದರ ಮರಿಯಾ ಪೈವ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಹಾಗೂ ಕರ್ನಾಟಕ ಜನಪದ ಅಕಾಡೆಮಿ ಮಾಜಿ ಅಧ್ಯಕ್ಷರಾದ ಡಾ. ಮಾತಾ ಬಿ. ಮಂಜಮ್ಮ ಜೋಗತಿ ಕೃತಿ ಬಿಡುಗಡೆಗೊಳಿಸಲಿರುವರು. ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಗಳಾದ ಶ್ರೀ ಮುಲ್ಲೈ ಮುಹಿಲನ್ ಐ.ಎ.ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕರಾದ ಶ್ರೀ ಬಿ.ಎಸ್.ಲಿಂಗದೇವರು, ಸುಯೆಝ್ ಇಂಡಿಯಾ ಇದರ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಉಪಾಧ್ಯಕ್ಷರು ಹಾಗೂ ಮುಖ್ಯಸ್ಥರಾದ ಶ್ರೀಮತಿ ಸುನಿತಾ ಕೊಹ್ಲಿ, ಸುಯೆಝ್ ಇಂಡಿಯಾ ಇದರ ಕಾರ್ಪೊರೇಟ್ ಕಮ್ಯೂನಿಕೇಶನ್ ವಿಭಾಗದ ಮುಖ್ಯಸ್ಥರಾದ ಶ್ರೀ ಸೃಜನ್ ಪ್ರಭಾಕರ್ ಹಾಗೂ ಮಂಗಳೂರಿನ ರೋಶನಿ ನಿಲಯ ಸ್ಕೂಲ್ ಆಫ್…

Read More

ಯಕ್ಷಗಾನ ಕರ್ನಾಟಕದ ಒಂದು ಸಾಂಪ್ರದಾಯಿಕ ಅನನ್ಯ ಕಲೆ. ಸಾಹಿತ್ಯ, ಸಂಗೀತ, ಅಭಿನಯ, ನೃತ್ಯ, ಸಂಭಾಷಣೆ ಇತ್ಯಾದಿ ಎಲ್ಲ ಕಲೆಗಳನ್ನು ಒಳಗೊಂಡಿರುವ ‘ಸಮಗ್ರ ರಂಗಭೂಮಿ’ ಎಂದು ಪರಿಗಣಿಸಲ್ಪಟ್ಟಿದೆ. ಮೂಲತಃ ಮಂಗಳೂರು, ಕರಾವಳಿ, ಉಡುಪಿ ನೆಲೆಯಲ್ಲಿ ಸೀಮಿತವಾಗಿ ಪ್ರದರ್ಶನಗೊಳ್ಳುತ್ತಿದ್ದ ಈ ಪ್ರಾದೇಶಿಕ ಕಲೆ ಕಾಲಕ್ರಮೇಣ ರಾಜ್ಯದ ಹಲವಾರು ಜಿಲ್ಲೆಗಳಲ್ಲೂ ವ್ಯಾಪಿಸಿ ತನ್ನ ಕ್ಷೇತ್ರವನ್ನು ವಿಸ್ತರಿಸಿಕೊಂಡು ಇಂದು ಜಾಗತಿಕಮಟ್ಟದವರೆಗೂ ಬೆಳವಣಿಗೆ ಕಂಡಿದೆ. ಈ ಶ್ರೀಮಂತ ಕಲೆಯಲ್ಲಿ ಇಂದು ತಮ್ಮ ಪ್ರತಿಭೆಯನ್ನು ಪ್ರದರ್ಶನ ನೀಡುತ್ತಿರುವ ಕಲಾವಿದರು ಗೋಪಾಲಕೃಷ್ಣ ಭಟ್. ಶ್ರೀಮತಿ ವಿಜಯಲಕ್ಷ್ಮಿ ಹಾಗೂ ಶ್ರೀಯುತ ತಿರುಮಲೇಶ್ವರ ಭಟ್ ಇವರ ಮಗನಾಗಿ 13.10.1976 ರಂದು ಜನನ. ಬೆಂಗಳೂರು ವಿಶ್ವವಿದ್ಯಾಲಯದಿಂದ B.A ಪದವಿಯನ್ನು ಪಡೆದಿರುತ್ತಾರೆ. ಮೋಹನ ಶೆಟ್ಟಿ ಬಾಯಾರು ಹಾಗೂ ರಮೇಶ ಶೆಟ್ಟಿ ಬಾಯಾರು ಇವರ ಯಕ್ಷಗಾನ ಗುರುಗಳು. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಮಾಹಿತಿಯನ್ನು ಪ್ರಸಂಗ ಪುಸ್ತಕದಿಂದ, ಹಿರಿಯ ಕಲಾವಿದರಿಂದ, ಅಣ್ಣ ನಿಡುವಜೆ ಶಂಕರ ಭಟ್ ರಿಂದ, ಬಣ್ಣಗಾರಿಕೆಯ ಬಗ್ಗೆ ವಿಶ್ವಣ್ಣರಿಂದ ಕೇಳಿ ತಿಳಿದು ತಯಾರಿಯನ್ನು ಮಾಡಿಕೊಳ್ಳುತ್ತೇನೆ ಎಂದು…

Read More

ಮೈಸೂರು : ನಿರಂತರ ಫೌಂಡೇಷನ್ (ರಿ.) ಮೈಸೂರು ಆಯೋಜಿಸಿರುವ ಸಹಜರಂಗ 2023 ಇದರ ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ ದಿನಾಂಕ 14-10-2023 ಶನಿವಾರ ಸಂಜೆ 6-30ಕ್ಕೆ ಮೈಸೂರಿನ ರಾಮಕೃಷ್ಣ ನಗರದ ರಮಾಗೋವಿಂದ ರಂಗ ಮಂದಿರದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳಿಂದ ಸಾದತ್ ಹಸನ್ ಮಾಂಟೋರವರ ಕಥೆಗಳ ಆಧಾರಿತ ಜೀವನ್ ಕುಮಾರ್ ಬಿ. ಹೆಗ್ಗೋಡು ಇವರ ನಿರ್ದೇಶನದಲ್ಲಿ ‘ಜಸ್ಟ್ ಎ ಮಿಸ್ಟೇಕ್’ ನಾಟಕ ಪ್ರದರ್ಶನಗೊಳ್ಳಲಿದೆ. ಮತ್ತೆ ಬರುತ್ತಿದೆ ಸಹಜರಂಗ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವೈವಿಧ್ಯಮಯ ಚಟುವಟಿಕೆಗಳಿಗೇನು ಕೊರತೆ ಇಲ್ಲ. ವರ್ಷ ಪೂರ್ತಿ ಒಂದಲ್ಲಾ ಒಂದು ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಈ ನಿಟ್ಟಿನಲ್ಲಿ ಹಲವಾರು ಸಂಸ್ಥೆಗಳು ಶ್ರಮಿಸುತ್ತಿವೆ. ಕಳೆದ ಎರಡುವರೆ ದಶಕಗಳಿಂದ ಸಮಾಜದ ನಾನಾ ಕ್ಷೇತ್ರಗಳಲ್ಲಿ ಬದ್ಧತೆಯೊಂದಿಗೆ ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಮುಂಚೂಣಿ ಸಂಸ್ಥೆಗಳಲ್ಲಿ ನಗರದ ‘ನಿರಂತರ ಫೌಂಡೇಷನ್’ ಒಂದು. ನಿರಂತರ ಸಂಸ್ಥೆಯು ರಂಗಭೂಮಿ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಪರಿಸರ ಹಾಗೂ ಯುವ ಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಲವಾರು ಚಟುವಟಿಕೆಗಳನ್ನು ರೂಪಿಸುತ್ತಿದೆ. ಕಳೆದ ಎರಡು ದಶಕಗಳಿಂದಲೂ…

Read More

ಉಡುಪಿ : ಉಡುಪಿಯ ಭಾವನಾ ಫೌಂಡೇಷನ್ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಇವರು ವೆಂಟನ ಫೌಂಡೇಷನ್ ಇದರ ಸಹಕಾರದೊಂದಿಗೆ ಆಯೋಜಿಸುವ ಸ್ಥಳೀಯ ಜಾನಪದ ಕಲೆಗಳ ಸರಣಿ ಕಾರ್ಯಗಾರವಾದ ‘ಜಾನಪದ’ ದಿನಾಂಕ 14-10-2023 ಹಾಗೂ 15-10-2023ರಂದು ಉಡುಪಿಯ ಬಡಗುಪೇಟೆಯಲ್ಲಿ ನಡೆಯಲಿದೆ. ಭಾವನಾ ಸ್ಕೂಲ್ ಆಫ್ ಆರ್ಟ್ ಇದರ 20ನೇ ವರ್ಷದ ಸಂಭ್ರಮಾಚರಣೆಯ ಸಲುವಾಗು ಆಯೋಜಿಸಲಾಗುತ್ತಿರುವ ಸರಣಿಯ 7ನೇ ಭಾಗವಾಗಿ ಕೇರಳದ ಭಿತ್ತಿ ಚಿತ್ರಗಳ ಈ ಕಾರ್ಯಗಾರವನ್ನು ಖ್ಯಾತ ಕಲಾವಿದ ಕೇರಳದ ವೇಣುಗೋಪಾಲ್ ಟಿ.ಕೆ ನಡೆಸಿಕೊಡಲಿದ್ದಾರೆ. ಕೇರಳದ ಭಿತ್ತಿ ಚಿತ್ರಗಳ ಬೇರುಗಳು ಕ್ರಿ.ಶ 9ನೇ ಶತಮಾನಗಳ ಹಿಂದೆಯೇ ಇದ್ದು, ಇದು ಕೇರಳದ ಶ್ರೀಮಂತ ಕಲಾತ್ಮಕ ಪರಂಪರೆಗೆ ಸಾಕ್ಷಿಯಾಗಿದೆ. ಈ ಪುರಾತನ ಸಂಪ್ರದಾಯ ಕಳೆಯು ಕೇರಳದ ರಾಜಮನೆತನದಿಂದ ಪೋಷಣೆಗೊಂಡಿತು. ಇದು ದೈವಿಕ ಚಿತ್ರಣ ಮತ್ತು ವಿಶಿಷ್ಟವಾದ ಪ್ರಾದೇಶಿಕ ಶೈಲಿಯೊಂದಿಗೆ ಆಕರ್ಷಿಸುತ್ತದೆ. ಐದು ನೈರ‍್ಗಿಕ ಬಣ್ಣಗಳ ಬಳಕೆಯಿಂದ ಈ ಚಿತ್ರಗಳನ್ನು ರಚಿಸಲಾಗುತ್ತದೆ. ಕೇರಳದ ಭಿತ್ತಿ ಚಿತ್ರಗಳು ಅದ್ಭುತವಾದ ಕಲಾತ್ಮಕ ಪರಂಪರೆಯನ್ನು ಒಳಗೊಂಡಿದೆ. ವೇಣುಗೋಪಾಲ್ ಟಿ.ಕೆ :…

Read More

ಮಂಗಳೂರು : ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ) ಮಂಗಳೂರು ಇವರಿಂದ ಕಲೇವಾ ಸಂಘದ ಹಿರಿಯ ಸದಸ್ಯೆ, ಸಮಾಜಪರ ಚಿಂತಕಿ ಶ್ರೀಮತಿ ಬಿ.ಎಂ. ರೋಹಿಣಿಯವರ ತಾಯಿಯ ಸ್ಮರಣಾರ್ಥ ‘ದೇವಕಿಯಮ್ಮ ದತ್ತಿನಿಧಿ’ ಕಾರ್ಯಕ್ರಮದ ಅಂಗವಾಗಿ ‘ಜೀವ ಭಾವಕೆ ಗಾನ ಸಮ್ಮಿಲನ’ವು ದಿನಾಂಕ 07-10-2023ರಂದು ಮಂಗಳೂರಿನ ಆಸೈಗೋಳಿಯಲ್ಲಿರುವ ಅಭಯ ಆಶ್ರಮದ ಧ್ಯಾನಮಂದಿರದಲ್ಲಿ ನಡೆಯಿತು. ಅಲ್ಲಿಯ ಪ್ರಶಾಂತ ವಾತಾವರಣದಲ್ಲಿ, ಆಶ್ರಮದ ಹಿರಿಯ ಜೀವಗಳ ಮನಸ್ಸಿಗೆ ಮುದನೀಡುವ, ಉಲ್ಲಾಸ ತುಂಬುವ ಉದ್ದೇಶದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕು.ಮೇಧಾ ಉಡುಪ ಇವರು ಕೊಳಲುವಾದನ ಪ್ರಸ್ತುತ ಪಡಿಸಿದರು. ಇವರಿಗೆ ವಿದ್ವಾನ್ ಸುನಾದ ಕೃಷ್ಣ ಮೃದಂಗದಲ್ಲಿ ಸಹಕಾರ ನೀಡಿದರು. ಬಳಿಕ ಕಲೇವಾ ಸಂಘದ ಸದಸ್ಯೆಯರಾದ ಶ್ರೀಮತಿಯರಾದ ಆಶಾ ಶೆಣೈ, ರತ್ನಾವತಿ ಜೆ. ಬೈಕಾಡಿ, ಉಷಾ ಎಂ., ವನಜಾಕ್ಷಿ ಉಳ್ಳಾಲ, ಸುಮಂಗಲಾ ಕೃಷ್ಣಾಪುರ, ಅ.ನಾ. ಪೂರ್ಣಿಮಾ, ಶಶಿಕಲಾ, ಕುಮಾರಿಯರಾದ ಆದಿ ಸ್ವರೂಪ, ಲಗ್ಮ ಇವರುಗಳು ಭಾವಗಾನ ಕಾರ್ಯಕ್ರಮ ನಡೆಸಿಕೊಟ್ಟರು. ಇದರಿಂದ ಸ್ಫೂರ್ತಿಗೊಂಡು ಆಶ್ರಮದ 90 ವರ್ಷದ ಹಿರಿಯರಾದ ವಾಣಿಯಮ್ಮ ಲಯಬದ್ಧವಾಗಿ ಎರಡು ಹಾಡುಗಳನ್ನು ಹಾಡಿ…

Read More

ಮಂಗಳೂರು : ಕ.ಸಾ.ಪ. ಮಂಗಳೂರು ತಾಲೂಕು ಘಟಕ ಇದರ ವತಿಯಿಂದ ದಿನಾಂಕ 10-10-2023ನೇ ಮಂಗಳವಾರದಂದು ಡಾ. ಕೆ.ಶಿವರಾಮ ಕಾರಂತರ 122ನೇ ಜನ್ಮ ದಿನಾಚರಣೆಯನ್ನು ನಗರದ ಶಾರದಾ ವಿದ್ಯಾಲಯದಲ್ಲಿ ಆಚರಿಸಿ ಸಂಭ್ರಮಿಸಲಾಯಿತು. ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ. ಮೀನಾಕ್ಷಿ ರಾಮಚಂದ್ರ ಅವರು ಕಾರಂತರ ಬಗ್ಗೆ ಉಪನ್ಯಾಸ ನೀಡಿದರು. “ಕಾದಂಬರಿಕಾರ, ನಾಟಕಕಾರ, ಯಕ್ಷಗಾನ ಪಂಡಿತ, ಪರಿಸರ ತಜ್ಞ, ಕವಿ, ಕಲಾವಿದ, ಕುಶಲಕರ್ಮಿ ಹೀಗೆ ನೂರಾರು ಮುಖಗಳನ್ನು ಹೊಂದಿದ್ದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರದು ಪದಗಳಲ್ಲಿ ಹಿಡಿದಿಡಲಾಗದ ಅದ್ಭುತ ವ್ಯಕ್ತಿತ್ವ ಎಂದು ವಿಶ್ಲೇಷಿಸಿದರು. ಒಳಗೊಂದು ಹೊರಗೊಂದು ಇಲ್ಲದ, ಪ್ರತಿಯೊಂದರಲ್ಲೂ ತಮ್ಮದೇ ಆದ ಚಿಂತನಾತ್ಮಕ ಧೋರಣೆಯ, ಕೇವಲ ಇಂಟರ್ ಮೀಡಿಯೆಟ್ ವರೆಗೆ ಮಾತ್ರ ಓದಿ ಆ ಬಳಿಕ ತಮ್ಮ ಸ್ವಂತ ಅನುಭವದ ಮೂಲಕ ಸತ್ಯಾನ್ವೇಷಣೆಯನ್ನು ಮಾಡಿದ, ವಿಶಿಷ್ಟ ವ್ಯಕ್ತಿತ್ವದ ಕಾರಂತರಿಗೆ ಗೊತ್ತಿಲ್ಲದ ವಿಷಯಗಳೇ ಇರಲಿಲ್ಲ. ಕಾರಂತರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದ ದಿನಗಳನ್ನೂ ಸ್ಮರಿಸಿ, ಯಾವ ಪಂಥಕ್ಕೂ ಸೇರದ ಅವರದು ಕಾರಂತ…

Read More

ಮಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ. ಹಾಗೂ ಸ್ವಸ್ತಿಕ್ ಕಲಾ ಕೇಂದ್ರ ಜಲ್ಲಿಗುಡ್ಡೆ ಬಜಾಲ್ ಪ್ರಾಯೋಜಕತ್ವದಲ್ಲಿ, ಪುಟ್ಟಣ್ಣ ಕುಲಾಲ್‌’ ಪ್ರತಿಷ್ಠಾನ ಪಡೀಲ್ ಸಹಕಾರದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ದಿನಾಂಕ 08-10-2023ರಂದು ನಡೆದ ಸಮಾರಂಭದಲ್ಲಿ ತೆಂಕುತಿಟ್ಟಿನ ಹೆಸರಾಂತ ಯಕ್ಷಗಾನ ಕಲಾವಿದ ವೇಣೂರು ಸದಾಶಿವ ಕುಲಾಲ್‌ ಇವರಿಗೆ 2023-24ನೇ ಸಾಲಿನ ‘ದಿ. ಬಾಬು ಕುಡ್ತಡ್ಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, “ಇಂದಿನ ಯುವಕರು ಮೊಬೈಲ್ ಯುಗದಲ್ಲಿದ್ದು, ಅವರಿಗೆ ಯಕ್ಷಗಾನ ಅಷ್ಟೊಂದು ಆಕರ್ಷಿತವಾಗುತ್ತಿಲ್ಲ. ಆದರೆ ಸ್ವಸ್ತಿಕ್ ಕಲಾ ಕೇಂದ್ರವು ಯಕ್ಷಗಾನವನ್ನು ಉಳಿಸಿ, ಬೆಳೆಸುವ ಕೆಲಸ ಮಾಡುತ್ತಿದೆ. ನನಗೂ ಯಕ್ಷಗಾನ ತುಂಬಾ ಇಷ್ಟ. ಬಾಲ್ಯದಲ್ಲಿ ನೆಲದಲ್ಲಿ ಕುಳಿತು ಯಕ್ಷಗಾನ ನೋಡುತ್ತಿದ್ದೆ. ಹಲವು ಯಕ್ಷಗಾನ ಪ್ರಸಂಗ ವೀಕ್ಷಿಸುವ ಹವ್ಯಾಸ ನನ್ನಲ್ಲಿತ್ತು” ಎಂದರು. ಮಾಜಿ ಶಾಸಕ ಜೆ.ಆರ್. ಲೋಬೋ ಮಾತನಾಡಿ, “ವೇಣೂರು ಸದಾಶಿವ ಕುಲಾಲ್ ಅವರು ಸಮಾಜಕ್ಕೆ ನೀಡಿದ ಸೇವೆ ಅನನ್ಯ. ಅವರ ಸಾಧನೆ…

Read More