Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಅಂತರಂಗದಿಂದ ಬಹಿರಂಗದೆಡೆಗೆ ‘ಕೊಬಾಲ್ಟ್ ಕಲಾ ಸಂಪರ್ಕ’ ಕಾರ್ಯಕ್ರಮ ಇಂತಹ ಒಂದು ಅಭೂತಪೂರ್ವ ಅನುಭವವನ್ನು ನೀಡಿತ್ತು. ಸ್ವಚ್ಛಂದ ಹಸಿರಿನ ನಡುವೆ ಕಲಾ ರಚನೆ ಮುದ ನೀಡುವಂತಹುದು. ಕಲಾ ಸಂಪರ್ಕ ಇಂತಹ ಒಂದು ಪರಿಸರದಲ್ಲಿ ನಡೆದಿತ್ತು. ಕಲಾವಿದರು ಮತ್ತು ಕಲಾಕೃತಿಗಳು ಸಾರ್ವಜನಿಕರನ್ನು ತಲುಪಿದಷ್ಟು ಕಲೆ ಬೆಳೆಯುತ್ತದೆ. ಕಲಾಕೃತಿಗಳನ್ನು ನೋಡಿ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದಾಗ ಕಲಾವಿದನಿಗೂ ಸಮಾಧಾನ. ಒಂದು ಕಲಾಕೃತಿ ರಚನೆ ಆಯ್ತು ಅಂದರೆ ಒಂದು ಸಂತಾನ ಆದ ಹಾಗೆ ಎಂಬ ಮಾತಿದೆ. ಹೆಣ್ಣು ಮಕ್ಕಳು ಹೇಗೆ ತವರು ಮನೆಯಿಂದ ಇನ್ನೊಂದು ಮನೆಗೆ ಹೋಗಿ ಆ ಮನೆಯ ಪ್ರೀತಿ ವಿಶ್ವಾಸ ಗಳಿಸಿ ಆ ಕುಟುಂಬದವರಲ್ಲಿ ಒಬ್ಬಳಾಗಿ ಆ ಮನೆಯನ್ನು ಬೆಳಗುವ ಹಾಗೆ ಕಲಾವಿದನ ಕಲಾಕೃತಿಗಳು ಕೂಡ ಕಲಾಪ್ರಿಯರ ಮನೆ, ಮನ ಬೆಳಗುತ್ತ ಅಲಂಕಾರಗೊಳಿಸುತ್ತದೆ. ಆ ಕಲಾಕೃತಿಗಳ ಬಗ್ಗೆ ಮನೆಗೆ ಬಂದ ಅತಿಥಿಗಳ ಜೊತೆ ಪರಸ್ಪರ ವಿಚಾರ ವಿನಿಮಯ ನಡೆಯುತ್ತದೆ. ಅಲ್ಲಿ ಸಕಾರಾತ್ಮಕ ಶಕ್ತಿ ನೆಲೆಗೊಂಡಿರುತ್ತದೆ. ಅದಕ್ಕೆ ಕಲಾವಿದ ಕಲಾಕೃತಿಗಳನ್ನು ರಚಿಸಿದ ಮೇಲೆ ತನ್ನದು…
ಮುಡಿಪು : ಮಂಗಳೂರು ವಿ.ವಿ.ಯ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಆವರಣದಲ್ಲಿ ಕರಾವಳಿ ಜಾನಪದ ಸಂಸ್ಕೃತಿಯನ್ನು ಅನಾವರಣಗೊಳಿಸುವ ‘ಸಂಸ್ಕೃತಿ ಸಿರಿ’ ಕಾರ್ಯಕ್ರಮವು ದಿನಾಂಕ 19-01-2024ರ ಶುಕ್ರವಾರದಂದು ನಡೆಯಿತು. ಕರಾವಳಿಯ ಕೃಷಿ ಪದ್ಧತಿಯನ್ನು ಪರಿಚಯಿಸುವ ಪುಟ್ಟ ಗದ್ದೆ ನಿರ್ಮಾಣ, ಅದರಲ್ಲಿ ನೇಜಿ, ಪಕ್ಕದಲ್ಲೇ ತುಳುನಾಡಿನ ಕ್ರೀಡೆ ಮೂಡಯಿ ಪಡ್ಡಾಯಿ ಎಂಬ ಕಂಬಳದ ಗದ್ದೆ, ಇನ್ನೊಂದೆಡೆ ಯಕ್ಷಗಾನದ ರಂಗಸ್ಥಳ, ಮತ್ತೊಂದೆಡೆ ತುಳುನಾಡಿನ ಆಚರಣೆಯನ್ನು ಪರಿಚಯಿಸುವ ದೈವದ ಕೊಡಿಯಡಿ, ನಾಗಬನದ ನಿರ್ಮಾಣ, ಮಧ್ಯದ ವೇದಿಕೆಗೆ ಹೆಣೆದ ಮಡಲು ಮತ್ತು ಮುಳಿ ಹುಲ್ಲು ಹಾಸಿ ಮಾಡಿದ ಮನೆ. ಅದರೊಳಗೆ ಒಲೆಯಲ್ಲಿ ಹಾಲು ಕಾಯಿಸಿ ವಿದ್ಯಾರ್ಥಿಗಳು ಸಂಭ್ರಮಿಸಿದರು. ಸ್ವತ: ವಿವಿಯ ಕುಲಪತಿಗಳೇ ಒಲೆಗೆ ಕಟ್ಟಿಗೆಯಿಟ್ಟು ಬೆಂಕಿ ಹಚ್ಚಿದರು. ಪುಟ್ಟ ಮೆರವಣಿಗೆಯಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಕುಲಪತಿ ಪ್ರೊ. ಜಯರಾಜ್ ಅಮೀನ್, ಸಿಂಡಿಕೇಟ್ ಸದಸ್ಯ ಅಚ್ಯುತ ಗಟ್ಟಿ, ಜಾನಪದ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್, ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ಸೋಮಣ್ಣ ಹೊಂಗಳ್ಳಿ, ಪ್ರಾಧ್ಯಾಪಕರುಗಳಾದ…
ಕೋಟ : ವಿಶ್ವ ವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳದ ಹಿರಿಯ ಕಲಾವಿದರಿಂದ ದಿನಾಂಕ 20-01-2024ರಂದು ಕೋಟೇಶ್ವರ ಬೀಜಾಡಿ ಸಮೀಪದ ಯುವ ಸ್ಯಾಂಡ್ಸ್ ಬೀಚ್ ರೆಸಾರ್ಟ್ನಲ್ಲಿ ಪಂಚಕರ್ಮ ಚಿಕಿತ್ಸೆಗಾಗಿ ಬಂದ ಅಮೇರಿಕಾದ ಪ್ರಜೆಗಳಿಗಾಗಿ ಕಲಾವಿದರೂ, ಉಪನ್ಯಾಸಕರೂ ಆದ ಸುಜಯೀಂದ್ರ ಹಂದೆ ಎಚ್. ನಿರ್ದೇಶನದಲ್ಲಿ ಇಂಗ್ಲಿಷ್ ಭಾಷಾ ಸಂವಹನದೊಂದಿಗೆ ಕರ್ನಾಟಕದ ಶ್ರೀಮಂತ ಕಲೆ ಯಕ್ಷಗಾನದ ಬಡಗುತಿಟ್ಟಿನ ಪ್ರಾತ್ಯಕ್ಷಿಕೆ ನಡೆಯಿತು. ತೆರೆಯ ಮರೆಯ ಚೌಕಿಯಲ್ಲಿ ನಡೆಯುವ ಸಾಂಪ್ರಾಯಿಕ ಮುಖವರ್ಣಿಕೆ, ವೇಷಕಟ್ಟುವ ಕ್ರಮ, ಕೇದಗೆಮುಂದಲೆ ಮತ್ತು ಕಿರೀಟ ವೇಷಗಳ ಸಿದ್ಧತೆಯನ್ನು ರಂಗದಲ್ಲೇ ತೋರಿಸುವುದರೊಂದಿಗೆ ವಿವಿಧ ತಾಳ, ಹಸ್ತಾಭಿನಯ ಮುದ್ರೆ, ರಸ ಭಾವಗಳ ಕುಣಿತ, ಯುದ್ಧ ಕುಣಿತಗಳ ಆಂಗಿಕಾಭಿನಯ, ಆಹಾರ್ಯಾಭಿನಯ, ವಾಚಿಕಾಭಿನಯ, ಸಾತ್ವಿಕಾಭಿನಯಗಳನ್ನು ಪ್ರದರ್ಶಿಸಲಾಯಿತು. ಕುಮಾರಿ ಕಾವ್ಯ ಹಂದೆ ಎಚ್. ನಿರೂಪಣೆಯಲ್ಲಿ ನವೀನ್ ಕೋಟ, ಮನೋಜ್ ಆಚಾರ್, ಆದಿತ್ಯ ಹೊಳ್ಳ, ಭಾಗವತ ದೇವರಾಜ ದಾಸ್, ಮದ್ದಳೆವಾದಕರಾದ ರಾಘವೇಂದ್ರ ಹೆಗಡೆ ಯಲ್ಲಾಪುರ, ಚಂಡೆವಾದಕರಾದ ಸುದೀಪ ಉರಾಳ ಮುಮ್ಮೇಳ ಹಿಮ್ಮೇಳ ಕಲಾವಿದರಾಗಿ ಭಾಗವಹಿಸಿದರು.
ಮಂಗಳೂರು : ಉರ್ವಮಾರ್ಕೆಟ್ ನಲ್ಲಿರುವ ನಾಟ್ಯಾರಾಧನಾ ಕಲಾ ಕೇಂದ್ರದ 30ನೇ ವರ್ಷಾಚರಣೆಯ ಸಂಭ್ರಮದ ಹಿನ್ನೆಲೆಯಲ್ಲಿ ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ ಮತ್ತು ನಾಟ್ಯಾರಾಧನಾ ವಿದ್ಯಾರ್ಥಿ ಸಮಿತಿಯ ಸಹಯೋಗದಲ್ಲಿ ‘ನಾಟ್ಯಾರಾಧನಾ ತ್ರಿಂಶೋತ್ಸವ ಸಂಭ್ರಮ ಉದ್ಘಾಟನಾ ಸಮಾರಂಭ’ವು ದಿನಾಂಕ 18-01-2024ರಂದು ಪುರಭವನದಲ್ಲಿ ಜರುಗಿತು. ಈ ಸಮಾರಂಭದ ಉದ್ಘಾಟನೆ ಮಾಡಿ ಆಶೀರ್ವಚನ ನೀಡಿದ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ “ಭಾರತೀಯತೆ ನಿಂತಿರುವುದು ಧರ್ಮ ಮತ್ತು ಸಂಸ್ಕೃತಿಯ ನೆಲೆಯಲ್ಲಿ. ಅವೆರಡೂ ಬೆರೆತರೆ ಮಾನವ ಆಸ್ತಿಕನಾಗುತ್ತಾನೆ. ಪೂಜೆ ದೇವರನ್ನು ಸಂತೃಪ್ತಿಗೊಳಿಸಿದರೆ ಗಾಯನ ನರ್ತನಗಳು ದೇವರನ್ನು ಪ್ರಸನ್ನಗೊಳಿಸುತ್ತದೆ. ನಾಟ್ಯಾರಾಧನಾ ಕಲಾ ಕೇಂದ್ರದ ಗುರು ವಿದುಷಿ ಸುಮಂಗಲಾ ರತ್ನಾಕರ್ ರಾವ್ 30 ವರ್ಷಗಳ ಹಿಂದೆ ಆರಂಭಿಸಿದ ಸಂಸ್ಥೆಯ ನೆರಳಲ್ಲಿ ಭರತನಾಟ್ಯ ಕಲಿಸುವ ಮೂಲಕ ಭಾರತೀಯ ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸಿದ್ದಾರೆ. ಅವರು ಭರತನಾಟ್ಯದ ಜತೆಗೆ ಯಕ್ಷಗಾನದಲ್ಲೂ ಗುರುತಿಸಿಕೊಂಡಿರುವುದು ಸ್ತುತ್ಯರ್ಹ” ಎಂದು ಶುಭ ಹಾರೈಸಿದರು. ಮಧ್ಯಂತರದಲ್ಲಿ ಮಾತನಾಡಿದ ಮಹಾಗುರು ಶ್ರೀ ಮೋಹನ್ ಕುಮಾರ್ ಉಳ್ಳಾಲ್ ಅವರು ವಿದ್ಯಾರ್ಥಿಗಳ ರೇಖಾಬದ್ಧ ಅಂಗಶುದ್ಧಿ ಭಾವಶುದ್ಧಿಯಿಂದ…
ಮುಡಿಪು : ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ ಮತ್ತು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಳ್ಳಾಲ ತಾಲೂಕು ಘಟಕದ ವತಿಯಿಂದ ವಿ.ವಿ.ಯ ಹಳೆಸೆನೆಟ್ ಸಭಾಂಗಣದಲ್ಲಿ ‘ಮಹಾಭಾರತದಲ್ಲಿ ದಾರ್ಶನಿಕತೆ’ ಎಂಬ ವಿಷಯದಲ್ಲಿ ಉಪನ್ಯಾಸ ಕಾರ್ಯಕ್ರಮ ದಿನಾಂಕ 17-01-2024ರಂದು ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶ್ರೀ ಲಕ್ಷ್ಮೀಶ ತೋಳ್ಪಾಡಿಯವರು ಮಾತನಾಡಿ “ಶಾಂತಿ ನಿಜವಾಗಿ ಯಾರಿಗೂ ಬೇಡ. ಎಲ್ಲರಿಗೂ ಅವರವರ ಧ್ವಜ ಹಾರಬೇಕು ಅಷ್ಟೇ. ಇದು ನಮ್ಮ ಸಾಮಾಜಿಕ, ರಾಜಕೀಯ, ಧಾರ್ಮಿಕ ಕ್ಷೇತ್ರಗಳ ಸ್ಥಿತಿಗತಿ. ಎಲ್ಲ ಜಾತಿ ಧರ್ಮಗಳಲ್ಲೂ ಇಂದು ಕ್ಷತ್ರಿಯರೇ ಹೆಚ್ಚಾಗಿದ್ದಾರೆ. ಅವರಿಗೆ ಮಹಾಭಾರತದ ಕೊನೆಯಲ್ಲಿ ಬರುವ ಧರ್ಮರಾಯನ ಪಶ್ಚಾತ್ತಾಪದ ಅರಿವು ಒದಗಬೇಕಿದೆ. ದೇವರಿಗೆ ನಟಿಸಲಾಗುವುದಿಲ್ಲ. ಮನುಷ್ಯನಿಗೆ ನಟಿಸದೇ ಇರಲಾಗುವುದಿಲ್ಲ. ನಟನೆ ತರುವ ಸಂಕಟ ವಿಷಾದಕ್ಕೆ ದಾರಿ ಮಾಡುತ್ತದೆ. ನರನಿಗೆ ವಿಷಾದ ಉಂಟಾಗದೇ ದೇವರ ಪ್ರಸಾದವಿಲ್ಲ. ಸಂಸ್ಕೃತಿಗೆ ಬಾಲ್ಯವನ್ನು ವಿಸ್ತಾರಗೊಳಿಸುವ ಹಂಬಲ ನಾಗರಿಕತೆಗೆ ಬಾಲ್ಯವನ್ನು ನಾಶ ಮಾಡುವ ಧಾವಂತ. ಕವಿ ಯಾವ ಪೂರ್ವಾಗ್ರಹವೂ…
ಮಂಗಳೂರು : ಕುಳಾಯಿ ಹೊಸಬೆಟ್ಟಿನ ಶ್ರೀ ಶಾರದಾ ನಾಟ್ಯಾಲಯ ಮತ್ತು ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಲಲಿತಕಲಾ ಸಂಘ ಇವರ ಸಹಯೋಗದಲ್ಲಿ ಶೀಲಾ ದಿವಾಕರ್ ಇವರಿಗೆ ಅರ್ಪಿಸುವ ಗುರುವಿಗೊಂದು ನಾಟ್ಯ ನಮನ ‘ಗಾನ ಶಾರದೆಗೆ ನಮನ’ ಕಾರ್ಯಕ್ರಮವು ದಿನಾಂಕ 26-01-2024ರಂದು ಸುರತ್ಕಲ್ಲಿನ ಗೋವಿಂದ ದಾಸ ಕಾಲೇಜಿನ ರಂಗ ಮಂದಿರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವು ಸುರತ್ಕಲ್ಲಿನ ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೃಷ್ಣಮೂರ್ತಿ ಪಿ. ಇವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ವಿದುಷಿ ಶ್ರೀಮತಿ ಪ್ರಣತಿ ಸತೀಶ್, ವಿದುಷಿ ಶ್ರೀಮತಿ ಪೂರ್ಣಿಮಾ ತೇಜಸ್ ರಾನಡೆ, ವಿದುಷಿ ಕುಮಾರಿ ವೈಷ್ಣವಿ ಡಿ., ವಿದುಷಿ ಕುಮಾರಿ ದೀಪಾಲಿ ಡಿ.ಕೆ., ಕುಮಾರಿ ಶ್ರದ್ಧಾ ಎಮ್., ಕುಮಾರಿ ಅಮೃತಾ ರಾವ್, ಕುಮಾರಿ ಚಿನ್ಮಯೀ ಎಸ್. ರಾವ್ ಮತ್ತು ಮಾಸ್ಟರ್ ತನ್ಮಯ್ ಸುರೇಶ್ ಇವರುಗಳು ನೃತ್ಯ ನಮನ ನಡೆಸಿಕೊಡಲಿದ್ದು, ನಟುವಾಂಗ ಹಾಗೂ…
ಉಡುಪಿ : ರಂಗಭೂಮಿ (ರಿ.) ಉಡುಪಿ ಇದರ ವತಿಯಿಂದ ಮೂರು ದಿನಗಳ ‘ರಂಗಭೂಮಿ ರಂಗೋತ್ಸವ’ ಮತ್ತು ‘ರಂಗಭೂಮಿ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವನ್ನು ದಿನಾಂಕ 25-01-2024ರಿಂದ 27-01-2024ರವರೆಗೆ ಉಡುಪಿ, ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್, ಮಣಿಪಾಲ ಫೌಂಡೇಶನ್, ಉಡುಪಿಯ ಎಂ.ಜಿ.ಎಂ. ಕಾಲೇಜು, ಮಂಗಳೂರಿನ ಪಿ.ವಿ.ಎಸ್. ಸಮೂಹ ಸಂಸ್ಥೆಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ-ಬೆಂಗಳೂರು ಮತ್ತು ಉಡುಪಿಯ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ (ರಿ.) ಇವರ ಸಹಕಾರದೊಂದಿಗೆ ನಡೆಯಲಿದೆ. ದಿನಾಂಕ 25-01-2024ರಂದು ‘ರಂಗಭೂಮಿ ರಂಗೋತ್ಸವ’ ಉದ್ಘಾಟನಾ ಸಮಾರಂಭ ಹಾಗೂ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಇವರ ಸಹಯೋಗದಲ್ಲಿ ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಕೆ. ಜಿನ್ನಪ್ಪ ಗೌಡ ಇವರಿಗೆ ‘ಜಾನಪದ ಪ್ರತಿಭಾ ಪ್ರಶಸ್ತಿ’ ಪ್ರದಾನ ನಡೆಯಲಿದೆ. ರಂಗಭೂಮಿಯ ಗೌರವಾಧ್ಯಕ್ಷರಾದ ಡಾ. ಹೆಚ್.ಎಸ್. ಬಲ್ಲಾಳ್ ಇವರು ಸಭಾಧ್ಯಕ್ಷತೆ ವಹಿಸಲಿದ್ದು, ಉಡುಪಿ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಡಾ. ಕೆ. ವಿದ್ಯಾ…
ಬೆಂಗಳೂರು : ಕರ್ಣಾನಂದ ಮಧುರಗಾನಕ್ಕೆ ಭಾಷೆ -ಎಲ್ಲೆಗಳ ಹಂಗಿಲ್ಲ. ಸುಸ್ವರ ಗಾನಾಮೃತ ಪ್ರತಿ ಹೃದಯಗಳ ತಂತಿ ಮೀಟಿ ರಸಾಸ್ವಾದನೆಗೆ ಅನುವು ಮಾಡಿಕೊಡುತ್ತದೆ, ಮಧುರಾನುಭೂತಿಯನ್ನು ಉಂಟು ಮಾಡುತ್ತದೆ. ಸಂಗೀತ ಎಂದೂ ನವನವೋನ್ಮೇಷಶಾಲಿನಿಯಾದ್ದರಿಂದ ಕಲ್ಲನ್ನೂ ಕರಗಿಸಿಬಿಡುವ ಅಗಾಧ ಶಕ್ತಿಯನ್ನು ಹೊಂದಿರುವುದರಿಂದ ಸಂಗೀತಕ್ಕೆ ಸೋಲದ ಮನಸ್ಸಿಲ್ಲ. ಇಂಥ ನಿತ್ಯ ನೂತನ ಉಲ್ಲಾಸಿತ ಸಂಗೀತ ಕಾರ್ಯಕ್ರಮವೊಂದು ಈ ಉದ್ಯಾನ ನಗರಿಯ ಕಲಾರಸಿಕರ ಮನತಣಿಸಲು ಬಹು ಅಚ್ಚುಕಟ್ಟಾಗಿ ರೂಪುಗೊಂಡಿದೆ. ದಿನಾಂಕ 25-01-2024ರ ಗುರುವಾರದಂದು ಸಂಜೆ ಘಂಟೆ 6.00ರಿಂದ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ‘ಅಶ್ವಗಾನ’ ಸಂಸ್ಥೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಯುವ ಗಾಯಕರಾದ ಭಾರ್ಗವ್ ಹೆಚ್.ಸಿ. ಮತ್ತು ಮೋಹಿತ್ ಪಿ. ಹಾಗೂ ಇನಿದನಿಯ ಸಾಕ್ಷಿ ಜಗದೀಶಳ ರೋಮಾಂಚಕ ನಾದಲೀಲೆಯ ‘ಆರಂಭ’ ಸಂಗೀತ ಕಾರ್ಯಕ್ರಮ ಅನಾವರಣಗೊಳ್ಳಲಿದೆ. ಯುವಕದ್ವಯರಾದ ಭಾರ್ಗವ್ ಹೆಚ್.ಸಿ. ಮತ್ತು ಮೋಹಿತ್ ಪಿ. ಹಾಗೂ ತರುಣಿ ಸಾಕ್ಷಿ ಈ ಮೂವರೂ ಪ್ರತಿಭಾನ್ವಿತ ಗಾಯಕರು. ಇನಿದನಿಯ ನಿನಾದವನ್ನು ಹೊರಹೊಮ್ಮಿಸುವ ತಾಜಾ ಪ್ರತಿಭೆ ಕು. ಸಾಕ್ಷೀ ಜಗದೀಶ್, ಗೀತೆಯ ಅಂತರಾಳದ ಭಾವವನ್ನು ಆವಿರ್ಭವಿಸಿಕೊಂಡು…
ಬೆಂಗಳೂರು : ನಾಟಕ ಬೆಂಗಳೂರು 16ನೇ ವರ್ಷದ ರಂಗ ಸಂಭ್ರಮದ ಹಿನ್ನೆಲೆಯಲ್ಲಿ ಕಲಾಗಂಗೋತ್ರಿ ತಂಡ ರಾಜ್ಯಮಟ್ಟದ ನಾಟಕ ರಚನಾ ಸ್ಪರ್ಧೆ ಏರ್ಪಡಿಸಿದ್ದು ನಾಟಕಗಳನ್ನು ಆಹ್ವಾನಿಸಿದೆ. ಸಾಮಾನ್ಯ ವಿಭಾಗದಲ್ಲಿ ಮೂರು ನಾಟಕಗಳು ಹಾಗೂ ವಿದ್ಯಾರ್ಥಿ ವಿಭಾಗದಲ್ಲಿ ಮೂರು ನಾಟಕಗಳಿಗೆ ಪ್ರಶಸ್ತಿ ಹಾಗೂ ನಗದು ಪುರಸ್ಕಾರಗಳನ್ನು ನೀಡಲಾಗುವುದು. ಸಾಮಾನ್ಯ ವಿಭಾಗದಲ್ಲಿ ಮೂರು ನಾಟಕಗಳು ಸ್ವರಚಿತ ನಾಟಕಗಳಾಗಿರಬೇಕು. ವಿದ್ಯಾರ್ಥಿ ವಿಭಾಗದಲ್ಲಿ ಎರಡು ಸ್ವರಚಿತ ಹಾಗೂ ಒಂದು ಕನ್ನಡಕ್ಕೆ ರೂಪಾಂತರವಾಗಿರಬೇಕು. ನಾಟಕಗಳನ್ನು ಕಳುಹಿಸಲು 2024 ಫೆಬ್ರವರಿ 27 ಕಡೆಯ ದಿನಾಂಕವಾಗಿದೆ. ಆಸಕ್ತರು ಡಿಟಿಪಿ ಮಾಡಿದ ಇಲ್ಲವೇ ಸ್ಪಷ್ಟವಾಗಿ ಹಸ್ತಾಕ್ಷರದಲ್ಲಿ ಬರೆದ ಮೂರು ಪ್ರತಿಗಳನ್ನು ನಂ.263, 12ನೇ ಎ ಮೇನ್, 6ನೇ ಬ್ಲಾಕ್, ರಾಜಾಜಿನಗರ-560010 ಇಲ್ಲಿಗೆ ಕಳುಹಿಸಬೇಕು. ಆಯ್ಕೆಯಾದ ನಾಟಕಗಳಿಗೆ 2024ರ ಮಾರ್ಚ್ 27ರಂದು ವಿಶ್ವರಂಗಭೂಮಿ ದಿನಾಚರಣೆಯಂದು ಪ್ರಶಸ್ತಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಮೊ. 9620623344 ಅಥವಾ 8217735669ಗೆ ಕರೆ ಮಾಡಬಹುದು.
ಉಡುಪಿ : ಭಾರತೀಯ ಸನಾತನ ದಿವ್ಯಾತಿದಿವ್ಯ ಕ್ಷೇತ್ರವಾದ ಉಡುಪಿಯಲ್ಲಿ ದಿನಾಂಕ 15-01-2024ರಂದು ನವ ನೂತನ ಸಂಕೀರ್ತನ ಮಂದಿರ ‘ಅಭಿರಾಮ ಧಾಮ’ ಲೋಕಾರ್ಪಣೆಗೊಂಡಿದೆ. ಬೆಂಗಳೂರಿನ ಹಿರಿಯ ಪತ್ರಕರ್ತರೂ, ಸಾಂಸ್ಕ್ರತಿಕ ಚಿಂತಕರೂ ಆದ ಪರ್ಲತ್ತಾಯ ಡಾ. ಸುದರ್ಶನ ಭಾರತೀಯ ಉರುಫ್ ವೆಂಕಟ ವಿಠ್ಠಲ ಸುಗುಣದಾಸರು ತಮ್ಮ ಸುಪುತ್ರ ಸ್ವರಸಾಮ್ರಾಟ್ – ವಿದ್ವಾನ್ ಅಭಿರಾಮ್ ಭರತವಂಶಿಯವರ ಸಂಗೀತ ಸಾಧನೆಯನ್ನು ಅಮರಗೊಳಿಸುವಲ್ಲಿ ಇದು ಮಹತ್ತರ ಹೆಜ್ಜೆ ಎಂದು ‘ಅಭಿರಾಮಧಾಮ’ವನ್ನು ಜ್ಯೋತಿ ಪ್ರಜ್ವಲಿಸಿ ಉದ್ಘಾಟಿಸಿದ ಕಾಣಿಯೂರು ಮಠದ ಸ್ವಾಮೀಜಿ ಶ್ರೀ ಶ್ರೀ ಶ್ರೀ ವಿದ್ಯಾ ವಲ್ಲಭ ತೀರ್ಥರು ಅಶೀರ್ವದಿಸಿದರು. ಸುಮಾರು ಇನ್ನೂರು -ಮುನ್ನೂರು ಮಂದಿ ಭಗವದ್ಭಕ್ತರು, ಭಜನಾಕಾರರು ಈ ಸುಸಂಧರ್ಭದಲ್ಲಿ ಪಾರಾಯಣ, ಭಜನೆಗಳಲ್ಲಿ ‘ಅಭಿರಾಮಧಾಮ’ದಲ್ಲಿ ತೊಡಗಿಕೊಂಡರು. ಸಮಾಜದ ಎಲ್ಲಾ ವರ್ಗದ 8-18 ವರ್ಷದ ಮಕ್ಕಳಿಗೆ ಸಂಗೀತ, ನೃತ್ಯ, ಗಮಕ, ಭಜನೆ, ಯೋಗ, ಧ್ಯಾನ, ಗೀತಾಭಿಯಾನ ಸುಜ್ಞಾನ ದೊರಕಿಸಿ ಕೊಡುವುದೇ ಅಭಿರಾಮ ಧಾಮದ ಧ್ಯೇಯೋದ್ದೇಶ ಎಂದು ಸಂಸ್ಥಾಪಕ – ಕಾರ್ಯದರ್ಶಿ ವಿದುಷಿ ಸುಶ್ಮಾ ಸುದರ್ಶನ್ ವಿವರಿಸಿದರು. ಸಂಜೆಗೆ ನೂರಾರು ಭಕ್ತರಿಂದ…