Subscribe to Updates
Get the latest creative news from FooBar about art, design and business.
Author: roovari
ಕಾಸರಗೋಡು : ಸಂಶೋಧಕ ಶಿಕ್ಷಕ, ಸಂಘಟಕ, ಜನಾನುರಾಗಿ ಕನ್ನಡ ಕಟ್ಟಾಳು, ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ಮನಗುತ್ತಿ ಇವರನ್ನು ಕೇರಳ ರಾಜ್ಯ ಕಾಸರಗೋಡು ಕನ್ನಡ ಭವನದ ಬೆಳಗಾವಿ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಕನ್ನಡ ಭವನದ “ರಜತ ಸಂಭ್ರಮ” ವರ್ಷವಾದ 2025ರಲ್ಲಿ ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸದುದ್ದೇಶದಿಂದ ಎಲ್ಲಾ ಜಿಲ್ಲೆಗಳಲ್ಲಿ ಘಟಕವನ್ನು ಸ್ಥಾಪಿಸಲಾಗುತ್ತಿದೆ. ಕಾಸರಗೋಡು ಕನ್ನಡ ಭವನದ ಕರ್ನಾಟಕ ರಾಜ್ಯ ಸಂಚಾಲಕರಾದ ಶ್ರೀ ಸಿದ್ರಾಮು ನಿಲಜಗಿ ನಾಮ ನಿರ್ದೇಶನ ಮಾಡಿದರು. ಇನ್ನೊರ್ವ ರಾಜ್ಯ ಸಂಚಾಲಕರಾದ ಡಾ. ಟಿ. ತ್ಯಾಗರಾಜ್ ಮೈಸೂರು ಹಾಗೂ ನಿರ್ದೇಶಕ ಸಿ. ವೈ. ಮೆಣಸಿನಕಾಯಿ ಅನುಮೋದಿಸಿದರು. ಸರ್ವಾನುಮತಿಯೊಂದಿಗೆ ಆಯ್ಕೆಯಾದ ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ಮನಗುತ್ತಿ ಇವರು ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಸಾರ್ವಜನಿಕ ವಾಚನಾಲಯ, ಕರ್ನಾಟಕದಿಂದ ಕಾಸರಗೋಡು ಪ್ರದೇಶಕ್ಕೆ ಆಗಮಿಸುವ ಸಾಹಿತ್ಯ ಸಾಂಸ್ಕೃತಿಕ ರಾಯಬಾರಿಗಳಿಗೆ ಕನ್ನಡ ಭವನದ “ಉಚಿತ ವಸತಿ ಸೌಕರ್ಯ” ಹಾಗೂ ರಜತ ಸಂಭ್ರಮ…
ಕಾಸರಗೋಡು : ಡಾ. ಎಂ.ಜಿ.ಆರ್. ಅರಸ್ ಇವರು ಸಂಸ್ಥಾಪಕ, ಪ್ರಧಾನ ಸಂಚಾಲಕರಾಗಿರುವ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಮೈಸೂರು ಇದರ ಕೇರಳ ಗಡಿನಾಡ ಘಟಕವಾದ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ 2001ರಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ ಕಾಸರಗೋಡು ಇದರ ಅಧ್ಯಕ್ಷರಾದ ಶಿವರಾಮ ಕಾಸರಗೋಡು ಇವರ ಅಧ್ಯಕ್ಷತೆಯಲ್ಲಿ ಗಡಿನಾಡು ಕಾಸರಗೋಡಿನಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಈಗಾಗಲೇ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನವನ್ನು ಆರು ಬಾರಿ ಕಾಸರಗೋಡು ಜಿಲ್ಲೆಯಾದ್ಯಂತ ಏರ್ಪಡಿಸಲಾಗಿದೆ. ಕಾಸರಗೋಡು ಕನ್ನಡ ಗ್ರಾಮದಲ್ಲಿ ದಿನಾಂಕ 27 ಮಾರ್ಚ್ 2025ರ ಗುರುವಾರದಂದು ಕಾಸರಗೋಡು ಜಿಲ್ಲಾ ಏಳನೇ ‘ಚುಟುಕು ಸಾಹಿತ್ಯ ಸಮ್ಮೇಳನ’ವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದಲ್ಲಿ ವಿ.ಕೆ.ಎಂ. ಕಲಾವಿದರು (ರಿ.) ಬೆಂಗಳೂರು ಇದರ ನೇತೃತ್ವದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಕನ್ನಡ ಗ್ರಾಮ ಕಾಸರಗೋಡು ಇದರ ಸಹಕಾರದಲ್ಲಿ ಕಾಸರಗೋಡು-ಬೆಂಗಳೂರು…
ಮಡಿಕೇರಿ : ಕೂಡವ ಮಕ್ಕಡ ಕೂಟದ 106ನೇ ಮತ್ತು ನಟ, ನಿರ್ದೇಶಕ, ನಿರ್ಮಾಪಕ, ಸಾಹಿತಿ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ರಚಿತ 11ನೇ ಪುಸ್ತಕ “ಗಮ್ಯ” ಇದರ ಲೋಕರ್ಪಣಾ ಸಮಾರಂಭವು ದಿನಾಂಕ 23 ಡಿಸೆಂಬರ್ 2024ರಂದು ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ಮಂಡೇಪಂಡ ಸುನಿಲ್ ಸುಬ್ರಮಣಿ ಮಾತನಾಡಿ “ಸಮಾಜದ ಸುಧಾರಣೆಯಲ್ಲಿ ಪುಸ್ತಕಗಳು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಪುಸ್ತಕಗಳು ಸಾಮಾಜಿಕ ಕಾಳಜಿಯೊಂದಿಗೆ ಉತ್ತಮ ಸಂದೇಶವನ್ನು ನೀಡಬೇಕು, ಲೋಕಾರ್ಪಣೆಗೊಳ್ಳುವ ಪುಸ್ತಕಗಳಿಗೆ ಹೆಚ್ಚಿನ ಪ್ರಚಾರ ನೀಡುವ ಮೂಲಕ ಓದುಗರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕು. ಅರ್ಜಿ ಹಾಕಿ ಯಾವುದೇ ಜಾತಿಯಲ್ಲಿ ಹುಟ್ಟಲು ಸಾಧ್ಯವಿಲ್ಲ, ಹುಟ್ಟಿದ ಮೇಲೆ ಜಾತಿಯ ಬಗ್ಗೆ ಸ್ವಾಭಿಮಾನ ಮತ್ತು ಅಭಿಮಾನವಿರಬೇಕು. ಹುಟ್ಟಿದ ಮಣ್ಣಿನ ಮೇಲೆ ಪ್ರೀತಿ ಇರಬೇಕು. ಕೊಡವರಾಗಿ ಹುಟ್ಟಿರುವ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಕೊಡಗಿನ ನೆಲ, ಜಲ ಹಾಗೂ ಸಂಸ್ಕೃತಿಯನ್ನು ಹೆಚ್ಚು ಪ್ರೀತಿಸುತ್ತಾರೆ. ಇವರ ಸಿನಿಮಾಗಳಲ್ಲಿ ಇದನ್ನು ಕಾಣಬಹುದಾಗಿದೆ. ಸಿನಿಮಾ ಕ್ಷೇತ್ರದೊಂದಿಗೆ ಸಾಹಿತ್ಯ ಕ್ಷೇತ್ರಕ್ಕೂ…
ಪ್ರತಿಯೊಬ್ಬ ವ್ಯಕ್ತಿಯ ಒಳಗೂ ಅದಮ್ಯವಾದ ಶಕ್ತಿಯನ್ನು ಅಡಗಿಸಿ ಪರಮಾತ್ಮ ಈ ಜಗತ್ತಿಗೆ ಕಳುಹಿಸುತ್ತಾನಂತೆ. ಆದರೆ ತನ್ನೊಳಗೆ ಅಡಗಿರುವ ಆ ಶಕ್ತಿಯ ಅರಿವನ್ನು ಮಾನವನು ತಿಳಿಯಬೇಕಾದರೆ ಬಹಳಷ್ಟು ಶ್ರಮವನ್ನು ಪಡಬೇಕಾಗುತ್ತದೆ. ಕೆಲವರು ಅದನ್ನು ಅರಿತುಕೊಂಡು ಬಹಳ ಶ್ರಮದಿಂದ ಅದನ್ನು ಹೊರಗೆ ತರುತ್ತಾರೆ. ಆದರೆ ಅಂತಹವರು ಈ ಸಮಾಜದಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ. ಅಂತಹವರಲ್ಲಿ ಒಬ್ಬರು ಈ ತುಳುನಾಡು ಕಂಡ ಅದ್ಭುತ ಪ್ರತಿಭಾವಂತ ಲಯನ್ ಎಂಜೆಎಫ್ ಕದ್ರಿ ನವನೀತ ಶೆಟ್ಟಿ. ತೌಳವ ನೆಲದ ಪೂರ್ಣ ಸತ್ವವನ್ನು ಮೈಗೂಡಿಸಿಕೊಂಡು ಬೆಳೆದು ಬಂದ ಶ್ರೀಯುತರು ಸರ್ವ ಕ್ಷೇತ್ರಗಳಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರೋರ್ವ ಮಹಾ ಮೇಧಾವಿ, ಪ್ರತಿಭೆಗಳ ಮಹಾ ಸಂಗಮ, ಉತ್ತಮ ನಿರೂಪಕ, ಸಮಾಜ ಸೇವಕ, ಸಂಘಟಕ, ತುಳು ಕನ್ನಡ ಸಾಹಿತಿ, ಕವಿ, ನಾಟಕಕಾರ, ಪ್ರಯೋಗಶೀಲ ನಿರ್ದೇಶಕ, ರಂಗನಟ, ಹವ್ಯಾಸಿ ಯಕ್ಷಗಾನ ಅರ್ಥಧಾರಿ, ಪ್ರಸಂಗಕರ್ತೃ, ಧಾರ್ಮಿಕ-ಸಾಂಸ್ಕೃತಿಕ-ಸಾಮಾಜಿಕ ಸಂಘಟಕ, ವೈವಿಧ್ಯಮಯ ಕ್ಷೇತ್ರಗಳ ನಿರೂಪಕ, ಟಿ.ವಿ. ಮಾಧ್ಯಮ ನಿರೂಪಕ, ರಾಷ್ಟ್ರೀಯ ಚಿಂತಕ ಹೀಗೇ ಮುಗಿಯಲಾರದ ಪಟ್ಟಿಯ ಮಹಾ ವ್ಯಕ್ತಿ! ಎಂತಹವರನ್ನೂ…
ವಿಶಿಷ್ಟ ಕಲೆಯಾದ ಜಾದೂವಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಜನರ ಮನದಲ್ಲಿ ರಾರಾಜಿಸುತ್ತಿರುವ ಪ್ರಸಿದ್ಧ ಜಾದೂಗಾರ ಶ್ರೀಯುತ ಕುದ್ರೋಳಿ ಗಣೇಶ್. ಈಗಾಗಲೇ ಶಾಸಕರನ್ನು ಮಾಯಮಾಡಿ, ತುಳುನಾಡು ಭೂತಕೋಲ ಜಾದೂ ಹಾಗೂ ತಮ್ಮ ಕ್ಲೋಸ್ಅಪ್ ಮ್ಯಾಜಿಕ್ ಮತ್ತು ಇಲ್ಯುಷನ್ ಗಳಿಂದ ಹೆಸರುವಾಸಿಯಾಗಿರುವ ಗಣೇಶ್ ಅವರು ಇದೀಗ ಮ್ಯಾಜಿಕ್ ಲೋಕದ ಇನ್ನೊಂದು ಮಜಲನ್ನು ಜಗತ್ತಿಗೆ ಪರಿಚಯಿಸುವ ಮೂಲಕ ವೀಕ್ಷಕರನ್ನು ಮಂತ್ರಮುಗ್ಧಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಾದೂಗಾರ ಕುದ್ರೋಳಿ ಗಣೇಶ್ ಇವರ ‘ಮೈಂಡ್ ಮಿಸ್ಟರಿ’ ಮೆಂಟಲಿಸಮ್ ಕಲಾಧಾರಿತ ನವೀನ ಪ್ರಯೋಗದ ಮೂರು ಪ್ರದರ್ಶನಗಳು ಡಿಸೆಂಬರ್ 21 ಹಾಗೂ 22 ರಂದು ಯಕ್ಷ ಕಲಾರಂಗದ ಐ. ವೈ. ಸಿ.ಸಭಾಂಗಣ, ಉಡುಪಿಯಲ್ಲಿ ಜರಗಿತು. ಸಮಾಜದ ಪ್ರಮುಖರಾದ ಪ್ರಮೋದ್ ಮಧ್ವರಾಜ್, ರಘುಪತಿ ಭಟ್, ಲಾಲಾಜಿ ಮೆಂಡನ್ ಹಾಗೂ ಉದ್ಯಮಿಗಳು, ವೈದ್ಯರು, ಇಂಜಿನಿಯರ್ ಗಳು, ಕಲಾಸಕ್ತರ ಸಮ್ಮುಖದಲ್ಲಿ ನಡೆದ ಈ ಚೊಚ್ಚಲ ಕಾರ್ಯಕ್ರಮ ಎಲ್ಲರನ್ನು ನಿಬ್ಬೆರುಗಾಗಿಸಿದ್ದು ‘ಮೈಂಡ್ ಮಿಸ್ಟರಿ’ಯ ಯಶಸ್ಸಿಗೆ ಸಾಕ್ಷಿಯಾಗಿದೆ. ‘ಮೈಂಡ್ ಮಿಸ್ಟರಿ – ಸುಪ್ತ ಮನಸ್ಸಿನ ಅನಾವರಣ’ – ಈ ವಿಶೇಷ…
ಕಾಸರಗೋಡು : ಸಂಘಟಕ ಕಲಾವಿದ, ಕನ್ನಡ ಮುಂದಾಳು ಶ್ರೀ ರವಿ ತೀರಣ್ಣನವರ್ ಇವರನ್ನು ಕೇರಳ ರಾಜ್ಯದ ಕಾಸರಗೋಡು ಕನ್ನಡ ಭವನದ ಹಾವೇರಿ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಕೇರಳ ರಾಜ್ಯದ ಕಾಸರಗೋಡು ಕನ್ನಡ ಭವನದ ರಜತ ಸಂಭ್ರಮ ವರ್ಷವಾದ 2025ರಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕನ್ನಡ ಪರ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಸದುದ್ದೇಶದಿಂದ ಎಲ್ಲಾ ಜಿಲ್ಲೆಗಳಲ್ಲಿ ಘಟಕಗಳನ್ನು ಸ್ಥಾಪಿಸಲಾಗುತ್ತದೆ. ಕಾಸರಗೋಡು ಕನ್ನಡ ಭವನದ ಕರ್ನಾಟಕ ರಾಜ್ಯ ಸಂಚಾಲಕರಾದ ಡಾ. ಟಿ. ತ್ಯಾಗರಾಜ್ ಮೈಸೂರು ನಾಮನಿರ್ದೇಶನ ಮಾಡಿದರು. ಕನ್ನಡ ಭವನ ನಿರ್ದೇಶಕರಾದ ಡಾ. ಕೊಲಚಪ್ಪೆ ಗೋವಿಂದ ಭಟ್ ಅನುಮೋದಿಸಿದರು. ಸರ್ವಾನುಮತಿಯೊಂದಿಗೆ ಆಯ್ಕೆಯಾದ ಶ್ರೀ ರವಿ ತಿರುಕಣ್ಣನವರ ಇವರು ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಸಾರ್ವಜನಿಕ ವಾಚನಾಲಯ ಕಾಸರಗೋಡು ಪ್ರದೇಶಕ್ಕೆ ಕರ್ನಾಟಕದಿಂದ ಆಗಮಿಸುವ, ಸಾಹಿತ್ಯ, ಸಾಂಸ್ಕೃತಿಕ ರಾಯಬಾರಿಗಳಿಗೆ ‘ಉಚಿತ ವಸತಿ ಸೌಕರ್ಯ” ಹಾಗೂ ಕನ್ನಡ ಭವನ ರಜತ ಸಂಭ್ರಮ ವಿಶೇಷ ಕಾರ್ಯಕ್ರಮ ಸಂಘಟನೆ, “ಮನೆಗೊಂದು ಗ್ರಂಥಾಲಯ -…
ಪುತ್ತೂರು : ಕಳೆದ ಮೂರು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆಯನ್ನು ಸಲ್ಲಿಸಿ, ಸಾವಿರಾರು ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿ, ಇದೀಗ ನಿವೃತ್ತಿಗೊಂಡು ಸಮಾಜಮುಖಿಯಾಗಿ ತನ್ನನ್ನು ತಾನು ತೊಡಗಿಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲೂ ಅಪಾರ ಖ್ಯಾತಿಯನ್ನು ಪಡೆದ ಶಿಕ್ಷಣ ತಜ್ಞ, ಉತ್ತಮ ವಾಗ್ಮಿಗಳಾಗಿರುವ ಬಿ.ವಿ. ಸೂರ್ಯನಾರಾಯಣ ಇವರ ‘ಪದ ಪಲ್ಲವಿ’ ಕವನ ಸಂಕಲನ ದಿನಾಂಕ 22 ಡಿಸೆಂಬರ್ 2024ರಂದು ಪುತ್ತೂರಿನ ಮಂಜಲ್ಪಡ್ಪು ಸುಧಾನ ವಿದ್ಯಾ ಸಂಸ್ಥೆಯ ಎಡ್ವರ್ಡ್ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡಿತು. ಸುಧಾನ ವಿದ್ಯಾ ಸಂಸ್ಥೆಯ ಮುಖ್ಯಸ್ಥರಾದ ರೆ. ವಿಜಯ ಹಾರ್ವಿನ್ ಇವರು ಅಧ್ಯಕ್ಷತೆ ವಹಿಸಿದ್ದ ಈ ಸಮಾರಂಭದಲ್ಲಿ ಸಾಹಿತಿಗಳಾದ ಡಾ. ನರೇಂದ್ರ ರೈ ದೇರ್ಲ ಇವರು ಕೃತಿ ಲೋಕಾರ್ಪಣೆ ಮಾಡಿದರು. ಡಾ. ರಾಜೇಶ್ ಬೆಜ್ಜಂಗಳ ಕೃತಿಯ ಕುರಿತು ಮಾತನಾಡಿ, ಶ್ರೀಮತಿ ಸುನೀತಾ ಕಾರ್ಯಕ್ರಮದ ನಿರೂಪಣೆಗೈದರು. ವಿ.ಬಿ. ಸೂರ್ಯನಾರಾಯಣ ಇವರ ಕೃತಿಯಿಂದ ಆಯ್ದ ಕೆಲವು ಹಾಡುಗಳನ್ನು ಡಾ. ಪವಿತ್ರ ರೂಪೇಶ್, ಶ್ರೀಮತಿ ಅಪರ್ಣಾ ನಿಟಿಲಾಪುರ, ಶ್ರೀಮತಿ ರಮಾ ಹೆಬ್ಬಾರ್, ಪ್ರೊ. ದತ್ತಾತ್ರೇಯ…
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ‘ಬಹುವಚನಂ’ನ ಪದ್ಮಿನಿ ಸಭಾಭವನದಲ್ಲಿ ದಿನಾಂಕ 22 ಡಿಸೆಂಬರ್ 2024ರ ಸಂಜೆ ಸಂಪನ್ನಗೊಂಡ ಹಿಂದೂಸ್ಥಾನೀ ಶಾಸ್ತ್ರೀಯ ಬಾನ್ಸುರಿ ವಾದನವು ಪ್ರೇಕ್ಷಕರಾಗಿ ಬಂದ ಸಂಗೀತಾಸ್ವಾದಕರನ್ನು ಸುಮಾರು ಎರಡು ಗಂಟೆಗಳ ಕಾಲ – ಒಂದರ್ಥದಲ್ಲಿ – ಸೆರೆಹಿಡಿದಿಟ್ಟಿತು. ಕಲೆಯೇ ಕಲಾವಿದನ ಉಸಿರು! ಹಾಗೆ ನೋಡಿದರೆ ಶ್ರುತಿಪ್ರಧಾನವಾಗಿರುವ ಹಾಡುವಿಕೆಯೋ ಗಾಳಿವಾದ್ಯದ ನುಡಿಸಾಣಿಕೆಯೋ ಉಸಿರಿನ ಮೇಲಿನ ಹತೋಟಿಯನ್ನೇ ಅವಲಂಬಿಸಿರುವುದು ಸುಸ್ಪಷ್ಟ. ಆ ದೃಷ್ಟಿಯಲ್ಲಿ, ಹಾಡುಗಾರಿಕೆಯಾಗಲಿ, ಗಾಳಿವಾದ್ಯ ವಾದನವಾಗಲಿ ಪ್ರಾಣಾಯಾಮವೇ ಆಗಿದೆ. ಕಲಾವಿದ ಕಿರಣ್ ಹೆಗ್ಡೆ ತಮ್ಮ ಬಾನ್ಸುರಿ ವಾದನದ ಮೂಲಕ ‘ಪ್ರಾಣಾಯಾಮ’ ಮಾಡಿ ಸೇರಿದ್ದ ಸಂಗೀತಾಸ್ವಾದಕರಿಗೆಲ್ಲ ‘ಸಂಗೀತ ಯೋಗ’ವನ್ನೊದಗಿಸಿದರು. ಅವರ ‘ನಾದ ತಾದಾತ್ಮ್ಯ’ವಂತೂ ಅದ್ಭುತ ! ತಾವು ಧ್ಯಾನಸ್ಥರಾದುದಲ್ಲದೆ ನೆರೆದಿದ್ದ ಅಷ್ಟೂ ಪ್ರೇಕ್ಷಕರನ್ನು ಧ್ಯಾನಸ್ಥರಾಗುವಂತೆ ಮಾಡಿದರು. ಆಸ್ವಾದಕರನ್ನೆಲ್ಲ ತನ್ನ ಬಾನ್ಸುರಿಯ ಸ್ವರದೊಂದಿಗೆ ಬೆಸೆದರು. ತಾವು ಬೆವೆತರೂ ಕಲಾಸ್ವಾದಕರಿಗೆ ತಂಪನ್ನೇ ಹಂಚಿದರು. ಪ್ರೇಕ್ಷಕರನ್ನೆಲ್ಲ ತಮ್ಮ ‘ರಾಗ’ದ ಮಾಲೆಯಲ್ಲಿ ಪೋಣಿಸಿದರು. ಬಾನ್ಸುರಿ ಮತ್ತು ತಬಲಾ ‘ದ್ವೈತ’ವನ್ನು ಪ್ರತಿನಿಧಿಸಿದರೂ ಅವು ಸೃಷ್ಟಿಸಿದ ಸಂಗೀತತತ್ತ್ವವು ‘ಅದ್ವೈತ’ವೇ ಸರಿ. ತಬಲಾವಾದನವು…
ಮಂಗಳೂರು : ಮಂಗಳೂರಿನ ಉರ್ವದ ಹೆಸಾರಂತ ಭರತನಾಟ್ಯ ಸಂಸ್ಥೆ ನಾಟ್ಯಾರಾಧನಾ ಕಲಾ ಕೇಂದ್ರದ ‘ತ್ರಿಂಶೋತ್ಸವದ ಸಮಾರೋಪ ಸಮಾರಂಭ’ವನ್ನು ದಿನಾಂಕ 27 ಡಿಸೆಂಬರ್ 2024 ಮತ್ತು 28 ಡಿಸೆಂಬರ್ 2024ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದೆ. ನಾಟ್ಯಾರಾಧನಾ ಕಲಾ ಕೇಂದ್ರ ಟ್ರಸ್ಟ್ (ರಿ.) ಉರ್ವ ಮಂಗಳೂರು, ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ ಹಾಗೂ ನಾಟ್ಯಾರಾಧನಾ ತ್ರಿಂಶೋತ್ಸವ ವಿದ್ಯಾರ್ಥಿ ಸಮಿತಿಯ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ. ದಿನಾಂಕ 27 ಡಿಸೆಂಬರ್ 2024ರಂದು ಸಂಜೆ 5-00 ಗಂಟೆಗೆ ಸಮಾರೋಪ ಸಮಾರಂಭವನ್ನು ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವರು ಉದ್ಘಾಟಿಸಲಿದ್ದಾರೆ. ಅನನ್ಯ ಕಲ್ಚರಲ್ ಅಕಾಡೆಮಿ ಬೆಂಗಳೂರು ಮತ್ತು ಡಾ. ಶ್ರೀಧರ ಅಕ್ಕಿಹೆಬ್ಬಾಳು ಕಾವೇರಿ ನಾಟ್ಯಯೋಗ ಯು.ಎಸ್.ಎ. ಇವರ ಸಹಯೋಗದಲ್ಲಿ ನಾಟ್ಯಾರಾಧನಾದ ನಿರ್ದೇಶಕಿ ಗುರು ವಿದುಷಿ ಸುಮಂಗಲಾ ರತ್ನಾಕರ ರಾವ್ ಮಂಗಳೂರು ವಿರಚಿತ ಸಂಗೀತ ಮತ್ತು ನೃತ್ಯ ನಿರ್ದೇಶಿತ ಕನ್ನಡ ಭಾಷಾ ಭರತನಾಟ್ಯ ಮಾರ್ಗದ ಧ್ವನಿ ಮುದ್ರಣ ‘ನೃತ್ಯಾಮೃತ’ವನ್ನು ಮೂಡಬಿದ್ರೆಯ ಧನಲಕ್ಷ್ಮೀ ಕ್ಯಾಶೂಸ್…
ಚನ್ನಪಟ್ಟಣ : ಚನ್ನಪಟ್ಟಣದ ಸಿಂಗರಾಜಪುರದಲ್ಲಿರುವ ಸಿಂ.ಲಿಂ. ನಾಗರಾಜು ಪ್ರತಿಷ್ಠಾನ ಟ್ರಸ್ಟ್ (ನೋಂ) ಇವರು ಮಹಾಕವಿ ಕುವೆಂಪು ಜನ್ಮದಿನದಂದು ಆಯೋಜಿಸಿರುವ ಬೆಂಗಳೂರಿನ ಪ್ರವರ ಥಿಯೇಟರ್ ಪ್ರಸ್ತುತ ಪಡಿಸುವ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕವು ದಿನಾಂಕ 29 ಡಿಸೆಂಬರ್ 2024ರಂದು ಸಂಜೆ ಗಂಟೆ 6-00ಕ್ಕೆ ಚನ್ನಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕದ ನಿರ್ವಹಣೆ ಸಚಿನ್ ಹೆಚ್. ಶೆಟ್ಟಿ ಮಾಡಿದ್ದು, ಸಂಗೀತ ಅಕ್ಷಯ್ ಭೊಂಸ್ಲೆ ಮತ್ತು ಬೆಳಕಿನ ವಿನ್ಯಾಸ ಮಂಜು ನಾರಾಯಣ್ ನೀಡಿದ್ದು, ಹನು ರಾಮಸಂಜೀವ ಇವರು ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಶಂಭೂಗೌಡ ನಾಗವಾರ 9880012881 ಮತ್ತು ಆದರ್ಶ ಕುಮಾರ್ ಎಸ್.ಎನ್. 9945968639 ಸಂಪರ್ಕಿಸಿರಿ. ಪ್ರವೇಶ ದರ ರೂ.100/- ಆಗಿರುತ್ತದೆ. ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಅಣ್ಣನ ನೆನಪು’ ಕೃತಿಯು ಮಹಾಕವಿ ಕುವೆಂಪು ಇವರ ಜೀವನದ ಹಲವು ಮಹತ್ವದ ಅಧ್ಯಾಯಗಳನ್ನು ಒಳಗೊಂಡಿದೆ. ಒಂದರ್ಥದಲ್ಲಿ ತೇಜಸ್ವಿಯವರು ಹುಟ್ಟಿದಲ್ಲಿಂದ ಇಲ್ಲಿಯವರೆಗಿನ ಕುವೆಂಪುರವರ…