Subscribe to Updates
Get the latest creative news from FooBar about art, design and business.
Author: roovari
ಕುಂದಾಪುರ : ಅರೆಹೊಳೆ ಪ್ರತಿಷ್ಠಾನವು ನಂದಗೋಕುಲ ರೆಪರ್ಟರಿಯನ್ನು ಆರಂಭಿಸುತ್ತಿದ್ದು, ಇದರ ಮೊದಲ ನಾಟಕ ಪ್ರದರ್ಶನ ಮತ್ತು ರಂಗಸವಾರಿಯ ಆರಂಭೋತ್ಸವವನ್ನು ಅರೆಹೊಳೆಯ ಡಾ. ಹಂದಟ್ಟು ಹರೀಶ್ ಹಂದೆ ರಂಗಮಂದಿರದಲ್ಲಿ ದಿನಾಂಕ 20-07-2024ರ ಶನಿವಾರದಂದು ಆಯೋಜಿಸಲಾಗಿದೆ. ಅಂದಿನ ಸಮಾರಂಭದಲ್ಲಿ ಬೈಂದೂರಿನ ಸುರಭಿ (ರಿ) ಇದರ ಅಧ್ಯಕ್ಷರಾದ ನಾಗರಾಜ ಯಡ್ತರೆ, ತೆಕ್ಕಟ್ಟೆಯ ಯಶಸ್ವಿ ಕಲಾವೃಂದದ ಕಾರ್ಯದರ್ಶಿ ವೆಂಕಟೇಶ್ ವೈದ್ಯ, ಮರವಂತೆಯ ಲೆಕ್ಕ ಪರಿಶೋಧಕ ಜತೀಂದ್ರ ಮರವಂತೆ, ಬೆಂಗಳೂರಿನ ರಂಗಪಯಣದ ಮುಖ್ಯಸ್ಥ ರಾಜ್ ಗುರು ಹೊಸಕೋಟೆ ಹಾಗೂ ರಂಗನಿರ್ದೇಶಕ ಅಮಿತ್ ಜೆ. ರೆಡ್ಡಿ ಭಾಗವಹಿಸಲಿದ್ದಾರೆ. ರೆಪರ್ಟರಿಯ ಮೊದಲ ನಿರ್ಮಾಣದ ತಿರುಗಾಟದ ನಾಟಕ ಅಮಿತ್ ಜೆ. ರೆಡ್ಡಿಯವರ ನಿರ್ದೇಶನದಲ್ಲಿ ಶೂದ್ರಕ ಕವಿಯ ‘ಮೃಚ್ಛಕಟಿಕ’ ಆಧಾರಿತ ‘ಅಡುಗೆ ಮನೆಯ ಆಟದ ಬಂಡಿ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ರೆಪರ್ಟರಿ ಮತ್ತು ರಂಗಶಿಕ್ಷಣ ಕೇಂದ್ರದ ನಿರ್ದೇಶಕಿ ಶ್ವೇತಾ ಅರೆಹೊಳೆ ತಿಳಿಸಿದ್ದಾರೆ.
ಸುರತ್ಕಲ್ : ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ಕರ್ನಾಟಕ ಗಮಕ ಕಲಾ ಪರಿಷತ್ತು ದ.ಕ. ಜಿಲ್ಲೆ, ಕರ್ನಾಟಕ ಗಮಕ ಕಲಾ ಪರಿಷತ್ತು ಮಂಗಳೂರು ಮತ್ತು ಗೋವಿಂದ ದಾಸ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆದ 9ನೇ ದಕ್ಷಿಣ ಕನ್ನಡ ಜಿಲ್ಲಾ ಗಮಕ ಸಮ್ಮೇಳನದ ಸಮಾರೋಪ ಸಮಾರಂಭವು ದಿನಾಂಕ 13-07-2024ರಂದು ಸುರತ್ಕಲ್ ಇಲ್ಲಿನ ಗೋವಿಂದ ದಾಸ ಕಾಲೇಜಿನ ಆವರಣದಲ್ಲಿ ನಡೆಯಿತು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕನ್ನಡ ಸಾಹಿತ್ಯ ಪರಿಷತ್ ಇದರ ಮಾಜಿ ಅಧ್ಯಕ್ಷ ಹಾಗೂ ಧರ್ಮದರ್ಶಿಯಾದ ಹರಿಕೃಷ್ಣ ಪುನರೂರು ಮಾತನಾಡಿ “ಗಮಕ ಕಲೆಯ ಮೂಲಕ ಭಾರತೀಯ ಪುರಾಣ ಪರಂಪರೆಯನ್ನು ತಿಳಿದುಕೊಂಡು ಅದರಲ್ಲಿರುವ ಉನ್ನತ ಅಂಶಗಳನ್ನು ಮತ್ತು ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿದೆ. ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಗಮಕ ಕಲೆಯನ್ನು ಸರ್ವರೂ ಪ್ರೋತ್ಸಾಹಿಸಿ ಮುಂದಿನ ಜನಾಂಗಕ್ಕೆ ಧಾರೆಯೆರೆಯಬೇಕು.” ಎಂದು ನುಡಿದರು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ “ಗಮಕಿಗಳು ತಮ್ಮ ಗಮಕ ವಾಚನಗಳ ಮೂಲಕ ಆಧ್ಯಾತ್ಮ ಚಿಂತನೆಯತ್ತ…
ಮಂಗಳೂರು : ಮಂಗಳೂರಿನ ಶಕ್ತಿನಗರದಲ್ಲಿರುವ ಕಲಾಂಗಣದಲ್ಲಿ ಕಲಾಕುಲ್ ನಾಟಕ ರೆಪರ್ಟರಿಯ ಡಿಪ್ಲೊಮಾ ಪದವಿ ಪ್ರದಾನ ಸಮಾರಂಭವು ದಿನಾಂಕ 14-07-2024ರಂದು ನಡೆಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನಮಾಡಿ ಮಾತನಾಡಿದ ಕೊಂಕಣಿ ರಂಗಕರ್ಮಿ ಜಾಸ್ಮಿನ್ ವಾಸ್ “ಕೊಂಕಣಿ ನಾಟಕ ರಂಗದಲ್ಲಿ ದೊರೆತ ಅವಕಾಶವನ್ನು ಉಪಯೋಗಿಸಿ ಮತ್ತು ಶಿಸ್ತಿನಿಂದ ಅಭ್ಯಾಸ ಮಾಡಿ ನೀವು ರಂಗಭೂಮಿಯ ಪದವಿ ಪಡೆದಿದ್ದೀರಿ. ನಿಮಗೆ ದೊರೆತ ತರಬೇತಿಯನ್ನು ಇತರರಿಗೂ ನೀಡಿ. ಕಲಾವಿದರಿಗೆ ಕೊಂಬು ಬರಬಾರದು. ಇದರಿಂದ ವ್ಯಕ್ತಿ ಮತ್ತು ಕಲೆಯ ಬೆಳವಣಿಗೆ ಕುಂಠಿತವಾಗುತ್ತದೆ. ನಿಮ್ಮಿಂದ ಕೊಂಕಣಿ ಕಲಾಲೋಕಕ್ಕೆ ಒಳಿತಾಗಲಿ.’’ ಎಂದು ಶುಭ ಹಾರೈಸಿದರು. ಡಾರ್ವಿನ್ ಆಲ್ವಾರಿಸ್ ವಾಮಂಜೂರು, ಜೊಯ್ಸನ್ ಡಿಸೋಜ ತಲಪಾಡಿ, ವಾರ್ಷಿತಾ ಫ್ಲೊರಾ ಕುಲಶೇಖರ, ವೆನಿಶಾ ಸಲ್ಡಾನ್ಹಾ ಗುರುಪುರ ಹಾಗೂ ವಿನ್ಸನ್ ಮತಾಯಸ್ ಕಿರೆಂ ಇವರು ವರ್ಷದ ರಂಗ ತರಬೇತಿ ಮುಗಿಸಿ ಡಿಪ್ಲೊಮಾ ಸ್ವೀಕರಿಸಿದರು. ಹಾಗೂ ತಮ್ಮ ಕಲಿಕಾ ಅನುಭವಗಳನ್ನು ಹಂಚಿಕೊಂಡರು. ವೆನಿಶಾ ಸಲ್ಡಾನ್ಹಾ ವಾರ್ಷಿಕ ವರದಿಯನ್ನು ಮಂಡಿಸಿದರು. ಕಲಾಕುಲ್ ಆಡಳಿತಾಧಿಕಾರಿ ಅರುಣ್ ರಾಜ್ ರೊಡ್ರಿಗಸ್ ಕಲಾಕುಲ್ ಆರಂಭ ಹಾಗೂ…
ಕಿನ್ನಿಗೋಳಿ : ಯುಗಪುರುಷ ಕಿನ್ನಿಗೋಳಿ ಹಾಗೂ ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಇದರ ದ. ಕ. ಜಿಲ್ಲಾ ತಾಲೂಕು ಘಟಕ ಮೂಡುಬಿದಿರೆ ಸಹಯೋಗದಲ್ಲಿ ‘ವಾಯ್ಸ್ ಆಫ್ ಆರಾಧನ’ ಇದರ ಪ್ರತಿಭೆಗಳಿಂದ ಜಾನಪದ, ಸಾಂಸ್ಕೃತಿಕ ವೈಭವ ಹಾಗೂ ಆಟಿಡೊಂಜಿ ದಿನ ಕಾರ್ಯಕ್ರಮವು ದಿನಾಂಕ 14-07-2024 ರಂದು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಯುಗಪುರುಷ ಕಿನ್ನಿಗೋಳಿ ಇದರ ಸಂಪಾದಕ ಭುವನಾಭಿರಾಮ ಉಡುಪ ಮಾತನಾಡಿ “ತುಳುನಾಡಿನ ಸಂಸ್ಕೃತಿ, ಆಚರಣೆಗಳು, ಆಚಾರ ವಿಚಾರಗಳು, ಸಂಪ್ರದಾಯಗಳು ಮರೆಯುವ ಹಂತದಲ್ಲಿದ್ದು ಅದನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಪರಿಷತ್ ಕಾರ್ಯಕ್ರಮ ಆಯೋಜನೆ ಮಾಡಿ ಉತ್ತಮ ಕೆಲಸ ಕಾರ್ಯ ಮಾಡುತ್ತಿದೆ.” ಎಂದು ಹೇಳಿದರು. ಮೂಡುಬಿದಿರೆ ತಾಲೂಕು ಅಧ್ಯಕ್ಷೆ ಪದ್ಮಶ್ರೀ ಭಟ್ ನಿಡೋಡಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದ. ಕ. ಜಿಲ್ಲಾ ಕನ್ನಡ ಜಾನಪದ ಪರಿಷತ್ ಇದರ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಕೊಡಿಯಾಲ್ಬೈಲ್, ಮಾಜಿ ಕ. ಸಾ. ಪ. ಅಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು, ರಾಜೇಶ್,…
ಮಂಗಳೂರು : ಮಂಗಳೂರಿನ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ನವೀಕೃತ ಸಾಹಿತ್ಯ ಸದನದ ಉದ್ಘಾಟನಾ ಸಮಾರಂಭವು ದಿನಾಂಕ 13-07-2024ರಂದು ಮಂಗಳೂರಿನ ಉರ್ವಸ್ಟೋರ್ ಇಲ್ಲಿ ನಡೆಯಿತು. ಕ. ಲೇ. ವಾ. ಸಂಘ, ಮಂಗಳೂರು ಇದರ ಅಧ್ಯಕ್ಷರಾದ ಡಾ. ಜ್ಯೋತಿ ಚೇಳಾಯ್ರು ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮ ಹಾಗೂ ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಮಾನ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ ಡಿ. ವೇದವ್ಯಾಸ ಕಾಮತ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾದ ಮಮತಾ ಗಟ್ಟಿ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಶ್ರೀನಾಥ ಎಂ.ಪಿ, ಸುರತ್ಕಲ್ಲಿನ ಎಂ. ಆರ್. ಪಿ. ಎಲ್. ಇದರ ಅಧಿಕಾರಿಯಾದ ಮೀನಾಕ್ಷಿ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀ…
ಬಂಟ್ವಾಳ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ವತಿಯಿಂದ ವಿಟ್ಲ ಘಟಕದ ಸಹಭಾಗಿತ್ವದಲ್ಲಿ ಯಕ್ಷಧ್ರುವ-ಯಕ್ಷಶಿಕ್ಷಣ ಯೋಜನೆಯ ಯಕ್ಷಗಾನ ನಾಟ್ಯ ತರಬೇತಿ ಅಭಿಯಾನದ ಉಚಿತ ಯಕ್ಷಗಾನ ತರಗತಿಯು ದಿನಾಂಕ 11/07/2024ರಂದು ಬಂಟ್ವಾಳ ತಾಲೂಕಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕೇಪು ಇಲ್ಲಿ ಉದ್ಘಾಟನೆಗೊಂಡಿತು. ಯಕ್ಷಗಾನ ಶಿಕ್ಷಕರಾದ ಶ್ರೀ ಗಣೇಶ ಕುಂದಲಕೋಡಿ ದೀಪ ಬೆಳಗಿಸುವುದರ ಮೂಲಕ ಯಕ್ಷಗಾನ ತರಗತಿಗೆ ಚಾಲನೆ ನೀಡಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ವೆಂಕಟ ರಾಘವೇಂದ್ರ ಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿಟ್ಲ ಘಟಕದ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಪ್ರಧಾನ ಕಾರ್ಯದರ್ಶಿ ಶ್ರೀ ಪೂವಪ್ಪ ಶೆಟ್ಟಿ ಅಳಿಕೆ, ಶ್ರೀ ಉಳ್ಳಾಲ್ತಿ ಸೇವಾ ಟ್ರಸ್ಟ್ (ರಿ.) ಕೇಪು ಇದರ ಅಧ್ಯಕ್ಷರಾದ ಶ್ರೀ ಪ್ರಭಾಕರ ಶೆಟ್ಟಿ ಪಡಿಬಾಗಿಲು, ವಿಟ್ಲ ಘಟಕದ ಪ್ರಧಾನ ಸಂಚಾಲಕರಾದ ಶ್ರೀ ಅರವಿಂದ ರೈ ಮೂರ್ಜೆಬೆಟ್ಟು, ಸಂಘಟನಾ ಕಾರ್ಯದರ್ಶಿ ಶ್ರೀ ಭಾಸ್ಕರ ಶೆಟ್ಟಿ ವೀರಕಂಭ,…
ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದಿಂದ ನಡೆಯುತ್ತಿರುವ ವಿನೂತನ ಕಾರ್ಯಕ್ರಮ “ಮನೆಯೇ ಗ್ರಂಥಾಲಯ” ಇದರ ಸುವರ್ಣ ಸಂಭ್ರಮವು ಉಡುಪಿಯ ಗಾಂಧಿ ಆಸ್ಪತ್ರೆಯಲ್ಲಿ ದಿನಾಂಕ 15-07- 2024ರಂದು ನಡೆಯಿತು. ಕನ್ನಡದ ಪ್ರಸಿದ್ಧ ವಿಮರ್ಶಕ ಪ್ರೊ. ಮುರುಳೀಧರ ಉಪಾಧ್ಯ ಹಿರಿಯಡ್ಕ ಅವರು ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಹರಿಶ್ಚಂದ್ರ ಅವರಿಗೆ ಪುಸ್ತಕಗಳನ್ನು ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು “ಆಸ್ಪತ್ರೆಗಳಲ್ಲಿ ಗ್ರಂಥಾಲಯ ಮಾಡುವ ಮೂಲಕ ರೋಗಿಗಳ ಸ್ವಸ್ಥ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ. ರೋಗಿಗಳ ಮನಸ್ಥಿತಿಗೆ ಅನುಗುಣವಾಗಿ ವಿವಿಧ ರೀತಿಯ ಆರೋಗ್ಯಕ್ಕೆ, ಸಮಾಜಕ್ಕೆ ಹಾಗೂ ಪರಿಸರಕ್ಕೆ ಸಂಬಂಧಿಸಿದ ವಿವಿಧ ಬಗೆಯ ಪುಸ್ತಕಗಳು ಲಭ್ಯವಾಗಲಿ.” ಎಂದು ಆಶಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಹರಿಶ್ಚಂದ್ರ ಇವರನ್ನು ಕ. ಸಾ. ಪ. ಉಡುಪಿ ತಾಲೂಕು ಘಟಕದ ವತಿಯಿಂದ ಗೌರವಿಸಲಾಯಿತು . ಉಡುಪಿ ಕರಾವಳಿಯ ಭಾರತೀಯ ವೈದ್ಯಕೀಯ ಸಂಘ ಇದರ ಅಧ್ಯಕ್ಷೆಯಾದ ಡಾ. ರಾಜಲಕ್ಷ್ಮೀ,…
ಕಾರ್ಕಳ : ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕದ ಪದಾಧಿಕಾರಿಗಳ ಸಭೆಯು ಪ್ರಕಾಶ್ ಹೋಟೆಲ್ ಇದರ ಸಭಾಂಗಣದಲ್ಲಿ ದಿನಾಂಕ 13-07-2024ರಂದು ನಡೆಯಿತು. ‘ಸಾಹಿತ್ಯದ ಖುಷಿ ಸಾವಯವ ಕೃಷಿ’ ಎಂಬ ಶೀರ್ಷಿಕೆಯಡಿ ಈ ವರ್ಷದ ಸಾಹಿತ್ಯದ ಸರಣಿ ಕಾರ್ಯಕ್ರಮವನ್ನು ಕಾರ್ಕಳ ತಾಲೂಕಿನ ಶಾಲಾ ಕಾಲೇಜುಗಳಲ್ಲಿ ಸಾಹಿತ್ಯ ನಂದನ, ತಾಲೂಕಿನ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಸಾಹಿತ್ಯ ಚಂದನ, ತಾಲೂಕಿನ ವಿವಿಧ ಸಂಘ ಸಂಸ್ಥೆಗಳಲ್ಲಿ ಸಾಹಿತ್ಯ ಸಂಭ್ರಮ, ತಾಲೂಕಿನ ಹಿರಿಯ ಸಾಹಿತ್ಯ ಸಾಧಕರಿಗೆ ಸನ್ಮಾನ ಸಾಹಿತ್ಯ ಸಿರಿ, ತಾಲೂಕಿನ ಬರಹಗಾರ ಸಮ್ಮೇಳನ ಸಾಹಿತ್ಯ ಸೌರಭ ಹೀಗೆ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ‘ಇಳೆಯ ತುಂಬ ಮುಂಗಾರು ಮಳೆ’ ಶೀರ್ಷಿಕೆಯಲ್ಲಿ ಕ.ಸಾ.ಪ. ಸದಸ್ಯರ ಕವಿಗೋಷ್ಠಿ ನಡೆಯಲಿದ್ದು, ಗೋಷ್ಠಿ ಅಧ್ಯಕ್ಷತೆಯನ್ನು ಲೇಖಕಿ ಮಿತ್ರ ಪ್ರಭಾ ಹೆಗ್ಡೆ ವಹಿಸಲಿದ್ದಾರೆ. ಸಭೆಯಲ್ಲಿ ಶಿವಸುಬ್ರಹ್ಮಣ್ಯ ಜಿ. ಭಟ್, ದೇವುದಾಸ್ ನಾಯಕ್, ಆರ್. ರಮೇಶ್ ಪ್ರಭು, ಆಶೀಶ್ ಶೆಟ್ಟಿ, ಡಾ. ಸುಮತಿ ಪಿ., ಸುಲೋಚನಾ ಬಿ.ವಿ., ಮಾಲತಿ ಜಿ. ಪೈ, ಲಕ್ಷ್ಮೀ ಹೆಗಡೆ, ಶೈಲಜಾ…
ಮಂಗಳೂರು : ಉರ್ವ ಮಾರ್ಕೆಟ್ ಸುಲ್ತಾನ್ ಬತ್ತೇರಿ ರಸ್ತೆಯಲ್ಲಿರುವ ಯುವ ವೇದಿಕೆ ಟ್ರಸ್ಟ್ (ರಿ.) ಮತ್ತು ಅಶೋಕನಗರದ ಗೋಕುಲದಲ್ಲಿರುವ ದ್ರಾವಿಡ ಬ್ರಾಹ್ಮಣರ ಎಸೋಸಿಯೇಶನ್ (ರಿ.) ಇವರ ಯುವ ವೇದಿಕೆ ಇದರ ಜಂಟಿ ಆಶ್ರಯದಲ್ಲಿ ‘ಆಷಾಢ ಶ್ರಾವ್ಯ’ದ ಪ್ರಯುಕ್ತ ಯಕ್ಷಗಾನ ತಾಳಮದ್ದಳೆಯು ದಿನಾಂಕ 21-07-2024ರಂದು ಮಧ್ಯಾಹ್ನ 2-30ಕ್ಕೆ ಮಂಗಳೂರಿನ ಅಶೋಕನಗರದ ಗೋಕುಲ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಕವಿ ತಿರುಮಲ ವಿರಚಿತ ‘ಭಾರ್ಗವ ರಾಮ’ ಪ್ರಸಂಗದ ತಾಳಮದ್ದಳೆಯ ಹಿಮ್ಮೇಳದಲ್ಲಿ ಶ್ರೀ ರವಿಚಂದ್ರ ಕನ್ನಡಿಕಟ್ಟೆ, ಶ್ರೀ ಕೃಷ್ಣ ಪ್ರಕಾಶ್ ಉಳಿತ್ತಾಯ ಮತ್ತು ಶ್ರೀ ಮುರಾರಿ ಕಡಂಬಳಿತ್ತಾಯ ಹಾಗೂ ಮುಮ್ಮೇಳದಲ್ಲಿ ಶ್ರೀ ಸೂರಿಕುಮೇರಿ ಗೋವಿಂದ ಭಟ್, ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್, ಶ್ರೀ ಮಧೂರು ವಾಸುದೇವ ರಂಗ ಭಟ್ ಮತ್ತು ವಿದ್ವಾನ್ ಶ್ರೀ ಸುಂಕದಗುಂಡಿ ಗಣಪತಿ ಭಟ್ ಭಾಗವಹಿಸಲಿರುವರು.
ಮಂಗಳೂರು : ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಸಾಹಿತ್ಯ ಪರ ಅಮೃತ ಪ್ರಕಾಶ ಪತ್ರಿಕೆ ಇದೀಗ 11ನೇ ವರುಷದ ಸಂಭ್ರಮದಲ್ಲಿದೆ. ಈಗಾಗಲೇ ಹಿರಿಯ ಕಿರಿಯ ಸಾಹಿತಿಗಳ ಕೃತಿಗಳನ್ನು ಪತ್ರಿಕೆ ವತಿಯಿಂದ ಸರಣಿ ಕೃತಿ ಬಿಡುಗಡೆ ಕಾರ್ಯಕ್ರಮದಡಿ 41 ಕೃತಿಗಳು ಬಿಡುಗಡೆಗೊಂಡಿವೆ. ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಸಾಹಿತ್ಯ ಅಭಿರುಚಿವೆನ್ನುವ ವಿನೂತನ ಕಾರ್ಯಾಕ್ರಮ ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಸೇರಿದಂತೆ ಈಗಾಗಲೇ 101 ಯಶಸ್ವಿ ಕಾರ್ಯಯಕ್ರಮ ಮಾಡಿದೆ. ಈ ಕಾರ್ಯರಕ್ರಮ ನಿರಂತರ ಈ ವರುಷವೂ ನಡೆಯಲಿದೆ. ಹಿರಿಯ ಕಿರಿಯ ಸಾಹಿತಿಗಳ ಮನೆಗೆ ತೆರಳಿ, ಗುರುತಿಸಿ, ಗೌರವಿಸುವ ಕಾರ್ಯಕ ನಿರಂತರ ಹತ್ತು ವರುಷದಿಂದ ನಡೆಯುತ್ತಾ ಬಂದಿದೆ. ರಾಜ್ಯ ಮಟ್ಟದ ಲೇಖನ, ಕವನ, ಚುಟುಕು ಸ್ಪರ್ಧೆ ಮಾಡಿ ಬಹುಮಾನ ನೀಡುತ್ತಾ ಬಂದಿದೆ. ಇದೀಗ ಅಮೃತ ಪ್ರಕಾಶ ಪತ್ರಿಕೆ 11 ವರುಷ ಸವಿ ಸಂಭ್ರಮದ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯ ಕ್ರಮ ಮಂಗಳೂರು ಪತ್ರಿಕಾ ಭವನದಲ್ಲಿ ದಿನಾಂಕ 22-07-2024ರಂದು ಬೆಳಗ್ಗೆ 10-30ಕ್ಕೆ ಬಿಡುಗಡೆಗೊಳ್ಳಲಿದೆ. ಕಾರ್ಯಈಕ್ರಮದ ಅಧ್ಯಕ್ಷತೆಯನ್ನು…