Author: roovari

ಬೆಂಗಳೂರು : ಬೇವಿನಹಳ್ಳಿಯ ‘ಜಿಗುರು’ ತಂಡದ ‘ಚಿಗುರು ರಂಗೋತ್ಸವ’ದಲ್ಲಿ ದಿನಾಂಕ 9ನೇ ಮಾರ್ಚ್ 2025ರಂದು ಬೆಂಗಳೂರಿನ ಪ್ರೆಸ್ಟೀಜ್ ಸೆಂಟರ್ ಆಫ್ ಪರ್ಫಾಮಿಂಗ್ ಆರ್ಟ್ಸ್ ಇಲ್ಲಿ ‘ರುಮುರುಮುರುಮು’ ಪೂರ್ವಿಕರ ನಾದ ‘ಜಂಗಮ ಕಲೆಕ್ಟಿವ್’ ತಂಡ ತನ್ನ ಮೊದಲ ಪ್ರದರ್ಶನ ನೀಡುತ್ತಿದೆ. ಶಿರಾ ಸೀಮೆಯ ‘ಬೇವಿನಹಳ್ಳಿ’ಯ ಅಪ್ರತಿಮ ಅರೆ ಮತ್ತು ನಾದಸ್ವರದ ಕಲಾವಿದರು ತಮ್ಮ ಕಲೆ ಮತ್ತು ಬದುಕಿನ ಅನುಭವಗಳನ್ನು ಬೆಸದುಕೊಂಡು ಕಟ್ಟಿರುವ ವಿಶೇಷ ಪ್ರಯೋಗ. ಹೊಸ ತಲೆಮಾರಿನ ಅನನ್ಯ ನಟಿ, ಬರಹಗಾರ್ತಿ, ಸಿನಿಮಾ ನಿರ್ದೇಶಕಿ ‘ ಶ್ರದ್ದಾ ರಾಜ್’ ಇವರು ತಿಂಗಳ ಕಾಲ ಬೇವಿನಹಳ್ಳಿಯಲ್ಲಿ ಇದ್ದು ವಿಭಿನ್ನ ಪ್ರಕ್ರಿಯೆಯಲ್ಲಿ ಈ ನಾಟಕವನ್ನು ಕಟ್ಟಿದ್ದಾರೆ. ತಳ ಸಮುದಾಯಗಳ ಕಲೆ ಮತ್ತು ಕಲಾವಿದರ ಜೊತೆಗಿನ ಒಡನಾಟವನ್ನು ಒಂದು ಸಾಂಸ್ಕೃತಿಕ ಚಳುವಳಿಯೆಂದು ಭಾವಿಸಿ ಜಂಗಮ ತಂಡ ಹಿಂದೆ ‘ಕೇರಿ ಹಾಡು’ ಪ್ರಯೋಗವನ್ನು ಮಾಡಿತ್ತು. ಚಂದ್ರಶೇಕರ್ ಇವರು ದಿಂಡಗೂರಿನ ‘ಸಾವಿತ್ರಿ ಬಾಫುಲೆ ಮಹಿಳಾ ಸ್ವಸಹಾಯ ತಂಡ’ಕ್ಕೆ ಅದನ್ನು ನಿರ್ದೇಶಿಸಿದ್ದರು. ಪ್ರಸ್ತುತ ಅರೆಯ ನಾದ ಮತ್ತು ಬದುಕಿನ ‘ರುಮುರುಮುರುಮು’ ಜಂಗಮ…

Read More

ನೋಯ್ಡ : ಉತ್ತರ ಭಾರತದ ಅಮಿಟಿ ವಿಶ್ವವಿದ್ಯಾನಿಲಯ ನೋಯ್ಡದಲ್ಲಿ ದಿನಾಂಕ 03 ಮಾರ್ಚ್ 2025ರಿಂದ 07 ಮಾರ್ಚ್ 2025ರವರೆಗೆ ನಡೆದ 38ನೇ ಅಖಿಲ ಭಾರತ ವಿಶ್ವವಿದ್ಯಾನಿಲಯಗಳ ಅಂತರ್ ವಿ.ವಿ. ರಾಷ್ಟ್ರೀಯ ಸಾಂಸ್ಕೃತಿಕ ಯುವಜನೋತ್ಸವದಲ್ಲಿ ಹಿಂದು ವಿದ್ಯಾದಾಯಿನಿ ಸಂಘ (ರಿ.) ಸುರತ್ಕಲ್‌ ಇದರ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜಿನ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ. ಮಂಗಳೂರು ವಿ.ವಿ.ಯನ್ನು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿ ಪ್ರಹಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದು, ನಿರ್ಮಿಕಾ ಎನ್. ಸುವರ್ಣ, ಭರತ್, ಜಿತಿನ್‌ ಜೆ. ಶೆಟ್ಟಿ, ಚಿರಾಗ್, ಜ್ಞಾನೇಶ್‌ ಎಲ್. ಶೆಟ್ಟಿ, ವೈಭವಿ, ಹಿತಾ ಉಮೇಶ್‌ ಇವರು ಭಾಗವಹಿಸಿದ್ದರು. ಹಿಮಾಂಗಿ ಡಿ. ಉಳ್ಳಾಲ್ ತಬ್ಲಾ ಸೋಲೋ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಸಾಂಸ್ಕೃತಿಕ, ಶೈಕ್ಷಣಿಕ, ಸಾಹಿತ್ಯ ಮತ್ತು ಕ್ರೀಡಾ ಕ್ಷೇತಗಳಲ್ಲಿ ನಿರಂತರವಾಗಿ ಅಭೂತ ಪೂರ್ವ ದಾಖಲೆಗಳನ್ನು ಗೋವಿಂದ ದಾಸ ಕಾಲೇಜಿನ ವಿದ್ಯಾರ್ಥಿಗಳು ನಿರ್ಮಿಸುತ್ತಿದ್ದು, ಅನೇಕ ಪ್ರತಿಷ್ಠಿತ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.

Read More

ಬೆಂಗಳೂರು : ಕ್ರಾನಿಕಲ್ಸ್ ಆಫ್ ಇಂಡಿಯಾ ಅಭಿನಯಿಸುವ ಗಣೇಶ್ ಮಂದಾರ್ತಿ ಇವರ ವಿನ್ಯಾಸ, ಸಂಗೀತ ಮತ್ತು ನಿರ್ದೇಶನದಲ್ಲಿ ‘ಶಿವೋಹಂ’ ನಾಟಕ ಪ್ರದರ್ಶನವನ್ನು ದಿನಾಂಕ 11 ಮಾರ್ಚ್ 2025ರಂದು ಸಂಜೆ 7-30 ಗಂಟೆಗೆ ಬೆಂಗಳೂರು ಜೆ.ಪಿ. ನಗರದ ರಂಗಶಂಕರದಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ 8867419347, 9845384528 ಮತ್ತು 9740145042 ಸಂಖ್ಯೆಯನ್ನು ಸಂಪರ್ಕಿಸಿರಿ. ನಾಟಕದ ಬಗ್ಗೆ : ಏಕ ಕಾಲಕ್ಕೆ ಇದೊಂದು ಪೌರಾಣಿಕ ಮತ್ತು ಸಾಮಾಜಿಕ ನಾಟಕ. ಇಲ್ಲಿ ಎರಡು ಕಥಾಹಂದರವಿದೆ. ಒಂದು ಶಿವನ ಪುರಾಣ ಕತೆಗಳದ್ದು ; ಇನ್ನೊಂದು – ಶಿವನ ಪಾತ್ರಧಾರಿಯ, ಊರಿನ ಕತೆ. ಶಿವ ನಮ್ಮ ನಾಡಿನ ಪುರಾತನ ಪ್ರತಿಮೆ, ಆತ ತಳಸಮುದಾಯದವರ ದೇವರು. ಶಿವನಿಗೆ ನಟಶೇಖರನೆಂಬ ಹೆಸರಿದೆ ಹಾಗೂ ಕಾಮನನ್ನೇ ಸುಡುವ ಯೋಗಿ – ಶಿವ ದಾಕ್ಷಾಯಿಣಿಯ ಹೆಣ ಹೊತ್ತು ತಿರುಗುವ ಕಡುಮೋಹಿ ಕೂಡ. ಆತ ಎರಡು extreme ( ಭವ-ಪರ )ಗಳಲ್ಲಿ ತೀವ್ರವಾಗಿ ಬದುಕುವವ. ಅವನ ಭವದ ಪರಿಪಾಟಲುಗಳ, ಪ್ರೇಮದ, ಕುಟುಂಬದ ಕತೆಗಳನ್ನಷ್ಟೇ ನಾವಿಲ್ಲಿ ಆರಿಸಿದ್ದೇವೆ. ಇಲ್ಲಿ…

Read More

ಪಣಜಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಮತ್ತು ಗೋವಾ ಕನ್ನಡ ಸಮಾಜ ಪಣಜಿ ಇವರ ಸಂಯುಕ್ತಾಶ್ರಯದಲ್ಲಿ ‘ಯಕ್ಷಶರಧಿ’ ಕಾರ್ಯಕ್ರಮವನ್ನು ದಿನಾಂಕ 09 ಮಾರ್ಚ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಪಣಜಿಯ ಮೆನೆಝೆಸ್ ಭ್ರಗಾಂಜ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಗೋವಾ ಬಂಟ್ಸ್ ಸಂಘದ ಕಾರ್ಯದರ್ಶಿ ಸುನಿಲ್ ಶೆಟ್ಟಿ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ‘ಯಕ್ಷಸಾಹಿತ್ಯ-ಸಾಂಗತ್ಯ’ ಎಂಬ ವಿಷಯದ ಬಗ್ಗೆ ಬೆಂಗಳೂರಿನ ಪುರೋಹಿತರು ಮತ್ತು ಅರ್ಥದಾರಿಗಳಾದ ಅಜಿತ ಕಾರಂತ ಟಿ.ವಿ. ಇವರಿಂದ ವಿಚಾರ ಸಂಕಿರಣ ನಡೆಯಲಿದೆ. ಹೊನ್ನವಳ್ಳಿಯ ಶ್ರೀ ವೆಂಕಟೇಶ್ವರ ಯಕ್ಷಗಾನ ಕಲಾ ಸಂಘ ಇವರಿಂದ ‘ಶರಸೇತು ಬಂಧನ’ ತಾಳಮದ್ದಲೆ ಹಾಗೂ ಹಳುವಳ್ಳಿ ಕಳಸದ ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷಗಾನ ಮಂಡಳಿ (ರಿ.) ಇವರಿಂದ ‘ಸುಧನ್ವಾರ್ಜುನ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

Read More

ವಿಟ್ಲ : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ವತಿಯಿಂದ ಸೂರಿಕುಮೇರು ಸಮೀಪದ ಬರಿಮಾರು ಶ್ರೀ ಮಹಾಮ್ಮಾಯಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಅಂಗವಾಗಿ ಅಗರಿ ಶ್ರೀನಿವಾಸ ಭಾಗವತ ವಿರಚಿತ ‘ಕದಂಬ ಕೌಶಿಕೆ’ ತಾಳಮದ್ದಳೆಯು ದಿನಾಂಕ 07 ಮಾರ್ಚ್ 2025ರಂದು ದೇವಸ್ಥಾನದ ಆವರಣದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಹೊಸಮೂಲೆ ಗಣೇಶ್ ಭಟ್, ಪದ್ಯಾಣ ಜಯರಾಮ್ ಭಟ್, ಮುರಳೀಧರ ಕಲ್ಲೂರಾಯ ಕುಂಜೂರು ಪಂಜ ಸಹಕರಿಸಿದರು. ಮುಮ್ಮೇಳದಲ್ಲಿ ಕಿಶೋರಿ ದುಗ್ಗಪ್ಪ ನಡುಗಲ್ಲು (ಕೌಶಿಕೆ), ಹರಿಣಾಕ್ಷಿ ಜೆ. ಶೆಟ್ಟಿ (ಶುಂಭಾಸುರ), ಶುಭಾ ಅಡಿಗ (ರಕ್ತಬೀಜಾಸುರ), ಶುಭಾ ಗಣೇಶ್ ಮತ್ತು ಭಾರತಿ ರೈ ಅರಿಯಡ್ಕ (ಚಂಡ ಮುಂಡರು) ಸಹಕರಿಸಿದರು. ಸತತ ಇಪ್ಪತ್ತು ವರ್ಷಗಳಿಂದ ತಾಳಮದ್ದಳೆಯ ಪ್ರಾಯೋಜಕರಾಗಿ ಸಹಕರಿಸಿದ ಬೊಳುವಾರು ಬಾಬುರಾಯ್ ಹೋಟೇಲಿನ ಮಾಲಕರಾದ ಶ್ರೀಮತಿ ಮತ್ತು ಶ್ರೀ ಶಿವಾನಂದ ಪ್ರಭು ಹಾಗೂ ಶ್ರೀ ದೇವಳದ ಧರ್ಮದರ್ಶಿಗಳಾದ ಶ್ರೀ ರಾಖೇಶ್ ಪ್ರಭು ದಂಪತಿಗಳನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಚಾಲಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ವಂದಿಸಿದರು.

Read More

ಕನ್ನಡ ಲೇಖಕಿಯಾಗಿ ಸಮಾಜ ಸೇವಕಿಯಾಗಿ ಖ್ಯಾತಿ ಗಳಿಸಿರುವ ಸಿ. ಎನ್. ಜಯಲಕ್ಷ್ಮೀಯವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿಗೈದ ಖ್ಯಾತ ಬರಹಗಾರ್ತಿ. ಇವರ ಮೂರು ಕಾದಂಬರಿಗಳು ಮೂರು ಕಥಾ ಸಂಕಲನಗಳು, ಎರಡು ನಾಟಕಗಳು, ಏಳು ಮಕ್ಕಳ ಸಾಹಿತ್ಯ, ಜೀವನ ಚರಿತ್ರೆ ಸೇರಿದಂತೆ ಒಟ್ಟು ಹದಿನೇಳು ಕೃತಿಗಳನ್ನು ರಚಿಸಿ ಹೆಸರು ಪಡೆದಿದ್ದಾರೆ. ಅವರ ಕೃತಿಗಳು ಹೀಗಿವೆ – ಕಾದಂಬರಿಗಳು – ಗ್ರಾಮಲೀಲೆ (ಸಾಮಾಜಿಕ), ಶಪ್ತವಾಪಿ, ಗಂಗರಸರ ದುರ್ವಿನೀತ (ಐತಿಹಾಸಿಕ) ಕಥಾ ಸಂಕಲನಗಳು – ಶುಭದೃಷ್ಠಿ, ನಾರಿಯರ ಹಲವು ಮುಖಗಳು, ಅನಾಮಿಕ ಮತ್ತು ಇವರ ಕಥೆಗಳು ಮಕ್ಕಳ ಸಾಹಿತ್ಯ – ಸ್ನೇಹ ಸಾಮ್ರಾಜ್ಯ, ಚೋರನಲ್ಲ ದಂಗೆಕೋರ, ಕೋಳೂರು ಕೊಡಗೂಸು, ಸಮುದ್ರ ಮತ್ತು ಸಾಗರ ಸಂಗಮ, ಅಭಯಾರಣ್ಯದಲ್ಲಿ ಒಂದು ಅನುಭವ, ಮಹಾಭಾರತದಲ್ಲಿ ಪ್ರಾಣಿಗಳು ಜೀವನ ಚರಿತ್ರೆ – ರಾಜಾರಾಮ್ ಮೋಹನ ರಾಮ್ ಜನಪ್ರಿಯ ಜೈಮಿನಿ ಭಾರತದ ಗದ್ಯ ಕೃತಿ ಮತ್ತು ‘ದಶರಥ’ ಮತ್ತು ‘ದೇವಯನಿ’ ಎರಡು ನಾಟಕಗಳು ಜಯಲಕ್ಷ್ಮೀದೇವಿಯವರು ಅವರ ಎರಡೂ ನಾಟಕಗಳಲ್ಲಿ ನಟಿಯಾಗಿಯೂ ಗಣನೀಯ ಅಭಿನಯ…

Read More

ಉಡುಪಿ : ಅಂಬಲಪಾಡಿಯ ನಿವಾಸಿ ಸಾಹಿತಿ ವಸಂತಿ ಶೆಟ್ಟಿ ಬ್ರಹ್ಮಾವರ ಇವರು ಕನ್ನಡ ಮತ್ತು ತುಳು ಬರಹಗಾರ್ತಿಯಾಗಿ ಪ್ರಸಿದ್ಧಿ ಪಡೆದವರು. ಬಿ.ಎಡ್. ಹಾಗೂ ಪತ್ರಿಕೋದ್ಯಮದಲ್ಲಿ ಡಿಪ್ಲೋಮೋ ಪದವಿ ಪಡೆದಿರುವ ವಸಂತಿ ಶೆಟ್ಟಿಯವರು ಸುಮಾರು 15ಕ್ಕೂ ಹೆಚ್ಚು ಕನ್ನಡ ಮತ್ತು ತುಳು ಭಾಷೆಯಲ್ಲಿ ಕೃತಿಗಳನ್ನು ರಚಿಸಿರುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿದ್ದು ಪ್ರಸ್ತುತ ಸ್ವಯಂ ನಿವೃತ್ತಿ ಪಡೆದಿದ್ದು, ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಸುಮಾರು 30 ವರ್ಷಗಳಿಂದ ಕಲಾವಿದೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉಡುಪಿ ಜಿಲ್ಲಾ ಲೇಖಕಿಯರ ಸಂಘದ ಸ್ಥಾಪಕ ಅಧ್ಯಕ್ಷರಾಗಿ, ಜಿಲ್ಲಾ ಕೇಂದ್ರ ಗ್ರಂಥಾಲಯದ ಪ್ರಾಧಿಕಾರದ ಉಪಾಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದಲ್ಲಿ ಎರಡು ಬಾರಿ ಅಧ್ಯಕ್ಷರಾಗಿ ಹಲವು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕವಿ ಸಮ್ಮೇಳನಗಳಲ್ಲಿ ಇವರು ಭಾಗವಹಿಸಿರುತ್ತಾರೆ. ಉಡುಪಿ ನಗರಸಭೆಯಲ್ಲಿ ಮೂರು ಬಾರಿ ಚುನಾಯಿತ ಪ್ರತಿನಿಧಿಯಾಗಿ ಆಯ್ಕೆಗೊಂಡಿರುತ್ತಾರೆ. ಇವರು ಕನ್ನಡ ನಾಡು ನುಡಿ, ಸಂಸ್ಕೃತಿ, ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಉಡುಪಿ ಜಿಲ್ಲಾ ‘ರಾಜ್ಯೋತ್ಸವ ಪ್ರಶಸ್ತಿ’, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ,…

Read More

ಕಲೆ ಎಲ್ಲರಿಗೂ ಒಲಿಯೋದಿಲ್ಲ. ದೈವದತ್ತ ಪ್ರತಿಭೆಯದು. ಸಾಧಿಸಿದವರಿಗೆ ಸಿದ್ಧಿಸುತ್ತದೆ. ಇಂತಹ ಸಾಧಕರಲ್ಲಿ ಒಬ್ಬರು ಶ್ರೀಲತಾ ದೇವದತ್ತ ಪ್ರಭು. ಕೇರಳದ ಕಣ್ಣೂರಿನ ತಲಶ್ಶೇರಿಯಲ್ಲಿ ಶ್ರೀ ಹರಿದಾಸ ಶೆಣೈ ಮತ್ತು ಶ್ರೀಮತಿ ಶೋಭಾ ಶೆಣೈ ದಂಪತಿಯ ಸುಪುತ್ರಿ ಈಕೆ. ಇವರ ಮನೆ ಕಲೆಯ ಬೀಡಾಗಿತ್ತು. ತಂದೆ ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿ, ಪ್ರವೃತ್ತಿಯಲ್ಲಿ ತಬಲಾ ಕಲಾವಿದ. ಮನೆಯಲ್ಲಿ ತಬಲಾ ತರಗತಿಗಳು ನಡೆಯುತ್ತಿದ್ದವು. ತಬಲಾದ ಮಧುರ ನಿನಾದ ಎಲ್ಲರ ಕಿವಿಯ ಮೇಲೆ ನಿರಂತರ ಬೀಳುತ್ತಲೇ ಇತ್ತು. ಆದ್ದರಿಂದ ಎಳವೆಯಲ್ಲಿ ಶ್ರೀಲತಾರಿಗೂ ತಬಲಾದಲ್ಲಿ ವಿಪರೀತ ಆಸಕ್ತಿ ಹುಟ್ಟಿಕೊಂಡಿತು. ಬೇರೆ ಸಂಗೀತ ಪರಿಕರಗಳನ್ನು ಎಲ್ಲರೂ ನುಡಿಸುತ್ತಾರೆ, ಆದರೆ ಆ ಕಾಲಘಟ್ಟದಲ್ಲಿ ಕೇರಳದಲ್ಲಿ ತಬಲಾ ನುಡಿಸುವ ಮಹಿಳೆಯರ ಸಂಖ್ಯೆ ಬೆರಳೆಣಿಕೆಯಷ್ಟೂ ಇರಲಿಲ್ಲ. ಶ್ರೀಲತಾರ ಆಸಕ್ತಿಗೆ ತಂದೆಯ ಪ್ರೋತ್ಸಾಹವು ಜೊತೆಯಾದಾಗ ಶ್ರೀಲತಾ ತಬಲಾ ವಾದನವನ್ನೇ ಆಯ್ಕೆ ಮಾಡಿಕೊಂಡು ಜವಾಬ್ದಾರಿಯುತವಾಗಿ ಅಭ್ಯಾಸ ಮುಂದುವರಿಸಿಕೊಂಡು ಹೋದರು. ಆ ಸಮಯದಲ್ಲಿ ಕೇರಳದಲ್ಲಿ ಶಾಸ್ತ್ರೀಯ ಸಂಗೀತಕ್ಕೆ ಮಾತ್ರ ಪರೀಕ್ಷೆಗಳು ನಡೆಯುತ್ತಿದ್ದು, ಸಂಗೀತ ಪರಿಕರಗಳ ಅಭ್ಯಾಸ ಮಾಡಿದರೂ ಅದಕ್ಕೆ ಪರೀಕ್ಷೆಗಳು…

Read More

ಜೀವನದ ಪ್ರತಿಯೊಂದು ಖುಷಿಯಿಂದ ಅನುಭವಿಸುವ ನೋವು ನಲಿವುಗಳ ಸಮ್ಮಿಶ್ರಣದ ಹೂರಣವನ್ನು ನಗುನಗುತ್ತ ಸ್ವೀಕರಿಸುವ ಬಹುಮುಖ ಪ್ರತಿಭೆ, ಅದ್ಭುತ ವಾಕ್ ಚಾತುರ್ಯದ, ಸದಾ ಹಸನ್ಮುಖಿ, ಬಟ್ಟಲು ಕಂಗಳ ಚೆಲುವೆ, ಮಧುರ ಕಂಠದ ಡಾ. ಪ್ರತಿಭಾ ರೈ. ಕಳೆದ ಸುಮಾರು 12 ವರ್ಷಗಳ ಆತ್ಮೀಯತೆ ಹೊಂದಿದ ನಾವು, ನಮ್ಮ ಸಂಘದ ಹಲವು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುವುದು ಶ್ಲಾಘನೀಯ.ಬಾಗಿದವನು ಮಾಗುತ್ತಾನೆ ಮಾಗಿದವನು ಬೀಗುವುದಿಲ್ಲ ಎಂಬಂತೆ ನಿಸ್ವಾರ್ಥ ನೇರ ನುಡಿಗಳ ಹಾಸ್ಯ ಪ್ರಜ್ಞೆಯ ವ್ಯಕ್ತಿತ್ವ ಮತ್ತು ಇವರ ಅಪ್ರತಿಮ ಹಾಡುಗಾರಿಕೆ ಎಂಥವರನ್ನೂ ಮಂತ್ರಮುಗ್ಧಗೊಳಿಸಿ ಅವರ ಹತ್ತಿರ ಸೆಳೆಯುತ್ತದೆ. ಬೈಂದೂರಿನ ಭಾಸ್ಕರ್ ಶೆಟ್ಟಿ ಮತ್ತು ಚಂದ್ರಿಕಾ ಶೆಟ್ಟಿ ದಂಪತಿಗಳ ಜೇಷ್ಠ ಪುತ್ರಿಯಾಗಿ 1978ರಲ್ಲಿ ಜನಿಸಿದ ಪ್ರತಿಭಾ ಶೆಟ್ಟಿ, 2005ರಲ್ಲಿ ಡಾ. ಸುಭಾಶ್ಚಂದ್ರ ರೈಯವರನ್ನು ವಿವಾಹವಾದರು. ಪ್ರಾಥಮಿಕ, ಪ್ರೌಢ, ಪದವಿ ಶಿಕ್ಷಣವನ್ನು ಹುಟ್ಟೂರಿನಲ್ಲೇ ಮುಗಿಸಿಕೊಂಡು ಬಿ. ಎ. ಎಂ. ಎಸ್. ಪದವಿಯನ್ನು ಶಿವಮೊಗ್ಗದಲ್ಲಿ ಪಡೆದು ಸ್ನೇಹಿತೆಯಂತೆ ಸೇವೆ ಮಾಡುವ ಮೂಲಕ ಸಾವಿರಾರು ರೋಗಿಗಳಿಗೆ ಅಚ್ಚುಮೆಚ್ಚಿನ ವೈದ್ಯೆ ಎಂಬುದನ್ನು ಸಾಬೀತುಪಡಿಸಿದ್ದರು. ಬಾಲ್ಯದಿಂದಲೇ…

Read More

ಮೊದಲನೋಟದಲ್ಲಿ ಆಕೆಯನ್ನು ನೋಡಿದಾಗ ಅವರೊಬ್ಬ ಬಹು ದೊಡ್ಡ ಸಾಧಕಿ- ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿದ ದೊಡ್ದ ನೃತ್ಯಗುರು ಎಂದು ತಿಳಿಯುವುದೇ ಇಲ್ಲ. ಮಮತೆಯ ತಾಯಿಯಂಥ ಆರ್ದ್ರ ಮುಖಭಾವ. ಮುಗ್ಧ ನಗು. ಯಾವ ಹಮ್ಮು-ಬಿಮ್ಮುಗಳಿರದ ಅತ್ಯಂತ ಸರಳ ಸ್ವಭಾವದ, ಬಹುಮುಖ ವ್ಯಕ್ತಿತ್ವದ, ಆಳವಾದ ಅನುಭವ-ಪಾಂಡಿತ್ಯ ಹೊಂದಿದ ಇವರೇ ನೃತ್ಯಕ್ಷೇತ್ರದ ದಿಗ್ಗಜ ನಾಟ್ಯಗುರು ಶ್ರೀಮತಿ ರಾಧಾ ಶ್ರೀಧರ್. ಕಲಾಸೇವೆಗೆ, ದೇಶದ ಅತ್ಯುನ್ನತ ಪುರಸ್ಕಾರ- ಕೇಂದ್ರ ಸಂಗೀತ – ನಾಟಕ ಅಕಾಡೆಮಿಯ ಪ್ರಶಸ್ತಿ, ಶಾಂತಲಾ ಪ್ರಶಸ್ತಿ, ನಾದನಿಧಿ ಮುಂತಾದ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಕುಟದಲ್ಲಿ ಧರಿಸಿದ ರಾಧಾ ಶ್ರೀಧರ್ ಅವರ ಸಾಧನೆ ಅಪಾರ. ನೂರಾರು ಉತ್ತಮ ನೃತ್ಯಕಲಾವಿದರನ್ನು ನಾಟ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಇವರ ಅಸಂಖ್ಯಾತ ಶಿಷ್ಯರು ಇಂದು ವಿಶ್ವದ ಉದ್ದಗಲಕ್ಕೂ ಹರಡಿ ಹೋಗಿದ್ದಾರೆ. ನಾಲ್ಕು ಪೀಳಿಗೆಯನ್ನು ಬೆಳೆಸಿದ ನೃತ್ಯ ಸಂತತಿ ಇವರದು. ಹೆಣ್ಣುಮಕ್ಕಳಿಗೆ ಬಹಳ ದಿಗ್ಬಂಧನವಿದ್ದ, ಅಷ್ಟಾಗಿ ಸ್ವಾತಂತ್ರ್ಯವಿರದ ಕಾಲದಲ್ಲಿ ರಾಧಾ ಅವರು ಪದವೀಧರೆಯಾಗಿ, ನೃತ್ಯ-ಮೃದಂಗ-ಗಾಯನಗಳಲ್ಲಿ ಅಮಿತ ಆಸಕ್ತಿಯಿಂದ ಪರಿಶ್ರಮಿಸಿ ಪರಿಪೂರ್ಣ ಕಲಾವಿದೆಯಾಗಿ ಸಮಗ್ರ ಬೆಳವಣಿಗೆ…

Read More