Author: roovari

ಉತ್ತರ ಕನ್ನಡ: ಸಂಸ್ಕಾರ ಭಾರತಿ ಉತ್ತರ ಕನ್ನಡ ಆಯೋಜಿಸುವ ಚಿತ್ರಕಲೆ ಹಾಗೂ ರಂಗೋಲಿ ಶಿಬಿರ, ರಾಜ್ಯ ಮಟ್ಟದ ವಿಶೇಷ ಕಲಾವಿದರದ ಪ್ರಾತ್ಯಕ್ಷಿಕೆ ಕಾರ್ಯಕ್ರಮವು ದಿನಾಂಕ 10 ಸೆಪ್ಟೆಂಬರ್ 2025ರ ಬುಧವಾರದಂದು ಗೋಕರ್ಣದ ಓಂ ಬೀಟ್ ರಸ್ತೆಯಲ್ಲಿರುವ ವೀರಶೈವ ಸಮುದಾಯ ಭವನ ಯಾತ್ರಿ ನಿವಾಸದಲ್ಲಿ ನಡೆಯಲಿದೆ. ಪ್ರಸಿದ್ಧ ಯಕಗಾನ ಕಲಾವಿದರು ಹಾಗೂ ಸಂಸ್ಕಾರ ಭಾರತಿ ಉತ್ತರ ಪ್ರಾಂತದ ಉಪಾಧ್ಯಕ್ಷರಾದ ಶ್ರೀ ಶಿವಾನಂದ ಹೆಗಡೆ ಕೆರೆಮನೆ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ತಬಲಾ ವಾದಕರಾದ ಶ್ರೀ ಸಂಜೀವ ಪೋತದಾರ ಹಾಗೂ ಡಾ. ಮಲ್ಲಿಕಾರ್ಜುನ ಮನ್ಸೂರ ರಾಷ್ಟ್ರೀಯ ಯುವ ಪುರಸ್ಕಾರ ಪುರಸ್ಕೃತ ಪ್ರಸಿದ್ಧ ಹಿಂದೂಸ್ತಾನಿ ಗಾಯಕರಾದ ಶ್ರೀ ವಿನಾಯಕ ಮುತ್ಮುರ್ಡು ಇವರನು ಸನ್ಮಾನಿಸಲಾಗುವುದು. ಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವವರು +91 72041 50918 / 9945152815 ಈ ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಾಯಿಸಬಹುದು. ಮೊದಲು ಹೆಸರು ನೋಂದಾಯಿಸಿದವರಿಗೆ ಮೊದಲ ಆದ್ಯತೆ. ಮಧ್ಯಾಹ್ನದ ಭೋಜನ ವ್ಯವಸ್ಥೆ ಹಾಗೂ ಕಾರ್ಯಕ್ರಮ ಮುಗಿದ ಸಂತರ ಪಾನೀಯ ವ್ಯವಸ್ಥೆ…

Read More

ಉಡುಪಿ : ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಗುಲ್ವಾಡಿ ಟಾಕೀಸ್, ಡಾ. ಜಿ. ಶಂಕರ್ ಮಹಿಳಾ ಪ್ರಥಮದರ್ಜೆ ಕಾಲೇಜು ಉಡುಪಿ, ಉಸಿರು ಅಧ್ಯಯನ ತರಬೇತಿ ಕೇಂದ್ರ ಕೋಟ ಇದರ ಸಂಯುಕ್ತ ಆಶ್ರಯದಲ್ಲಿ ಗುಲ್ವಾಡಿ ವೆಂಕಟರಾವ್‌ರವರ ಕನ್ನಡದ ಮೊದಲ ಸಾಮಾಜಿಕ ಕಾದಂಬರಿ ಇಂದಿರಾಬಾಯಿ ಕೃತಿಯಲ್ಲಿನ ಮಹಿಳಾ ಸಾಮಾಜಿಕ ಸ್ಥಿತ್ಯಂತರಗಳು ವಿಚಾರಗೋಷ್ಠಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ 13 ಸೆಪ್ಟೆಂಬರ್ 2025ರಂದು ಉಡುಪಿಯ ಪುರಭವನದಲ್ಲಿ ಬೆಳಿಗ್ಗೆ ಘಂಟೆ 9.30ರಿಂದ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾದ ಶ್ರೀ ನೀಲಾವರ ಸುರೇಂದ್ರ ಅಡಿಗ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇದರ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಹಿರಿಯ ಪೋಲೀಸ್ ಅಧಿಕಾರಿಗಳು, ಕವಿ, ಲೇಖಕಿ, ಅಂಕಣಕಾರರಾದ ಮತಿ ಧರಣಿದೇವಿ ಮಾಲಗತ್ತಿ ಇವರಿಗೆ ಗುಲ್ವಾಡಿ ವೆಂಕಟರಾವ್ ಪ್ರಶಸ್ತಿ ಹಾಗೂ ಕರ್ನಾಟಕ ಸರಕಾರದ ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು…

Read More

ತೆಕ್ಕಟ್ಟೆ: ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಆಶ್ರಯದಲ್ಲಿ ಮಹಮದ್ ಗೌಸ್ ಸಾರಥ್ಯದ ಯಕ್ಷ ಸೌರಭ ಪ್ರವಾಸಿ ಯಕ್ಷಗಾನ ಮೇಳ ಕುಂದಾಪುರ ತಂಡದ ಯಕ್ಷಗಾನ ಪ್ರದರ್ಶನ ದಿನಾಂಕ 02 ಸೆಪ್ಟೆಂಬರ್ 2025ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಶ್ರೀ ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷರಾದ ಹೆರಿಯ ಮಾಸ್ಟರ್ ಮಾತನಾಡಿ “ನಿರಂತರ ಹಲವು ವರ್ಷಗಳಿಂದ ಜಾತಿ, ಧರ್ಮ, ಬೇಧ ತೊರೆದು ಕೇವಲ ಕಲೆಯನ್ನೇ ಆರಾಧಿಸುತ್ತಾ, ಮಳೆಗಾಲದಲ್ಲಿ ಕಲಾವಿದರಿಗೆ ನೂರಾರು ಅವಕಾಶಗಳನ್ನು ಕಲ್ಪಿಸಿಕೊಡುತ್ತಾ ಶ್ರೇಷ್ಠರಾದವರು ಮಹಮದ್ ಗೌಸ್. ಅನೇಕ ನಿಂದನೆಗಳನ್ನು ಸಹಿಸಿಕೊಳ್ಳುತ್ತಾ ಮತ್ತೆ ಮತ್ತೆ ಎಚ್ಚೆತ್ತು ಕಲಾವಿದರಿಗಾಗಿ ವಂತಿಗೆ ಎತ್ತುತ್ತಾ ತನ್ನಲ್ಲಿರುವ ಕಲೆಯ ತುಡಿತವನ್ನು ಎತ್ತಿಹಿಡಿದವರು. ಇವರು ತನಗಾಗಿ ಏನೂ ಮಾಡಿಕೊಂಡಿರದ ಕಲಾ ತಪಸ್ವಿ” ಎಂದು ಪ್ರಶಂಸನೀಯ ಮಾತುಗಳನ್ನಾಡಿದರು. ಪ್ರಸಿದ್ಧ ಯಕ್ಷಗಾನದ ಅರ್ಥಧಾರಿ ಸತೀಶ್ ಶೆಟ್ಟಿ ಮೂಡಬಗೆ ಮಾತನಾಡಿ “ಪ್ರಸಂಗದಲ್ಲಿ ಹೆಚ್ಚು ಪಾತ್ರವನ್ನು ರಂಗದಲ್ಲಿ ತಂದು ಕಥೆಯ ಔಚಿತ್ಯವನ್ನು ಜನರಿಗೆ ಮನಮುಟ್ಟುವಂತೆ ಮಾಡುವ ಮೂಲಕ ಸಂಸ್ಥೆಯನ್ನು ಬೆಳೆಸಿದವರು ಗೌಸ್. ವ್ಯವಹಾರದ ದೃಷ್ಠಿಯಿಂದಲೇ ಈ…

Read More

ಉಪ್ಪಿನಂಗಡಿ : ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ ಉಪ್ಪಿನಂಗಡಿ ಇದರ ಸುವರ್ಣ ಮಹೋತ್ಸವದ ಅಂಗವಾಗಿ ಉಪ್ಪಿನಂಗಡಿ ರಾಮನಗರದ ಶ್ರೀ ಶಾರದಾ ಕಲಾ ಮಂಟಪದಲ್ಲಿ ‘ಶ್ರೀ ಮಹಾಭಾರತ ಸರಣಿ ಸುವರ್ಣ ಶತಕ ತಾಳಮದ್ದಳೆ’ ಕಾರ್ಯಕ್ರಮದ ವೇದಿಕೆಯಲ್ಲಿ ದಿನಾಂಕ 07 ಸೆಪ್ಟೆಂಬರ್ 2025ರಂದು ಹರಿಹರ ಪಲ್ಲತಡ್ಕ ದಿ‌‌. ನೀಲಾವತಿ ಮತ್ತು ಪದ್ಮನಾಭ ಕೊಂಬೋಟು ದಂಪತಿಯ ಸಂಸ್ಮರಣಾ ಸಮಾರಂಭ ನಡೆಯಿತು. ಈ ಸಮಾರಂಭ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿಯವರು ಮಾತನಾಡಿ “ಸಮಾಜದ ಬೇರೆ ಬೇರೆ ರಂಗಗಳಲ್ಲಿ ತಮ್ಮಿಂದಾದ ಕೊಡುಗೆ ನೀಡಿ ಗತಿಸಿ ಹೋದ ಹಿರಿಯರನ್ನು ಎಂದಿಗೂ ಮರೆಯಲಾಗದು. ಕನಿಷ್ಠಪಕ್ಷ ಅವರ ಕುಟುಂಬದವರಿಗಾದರೂ ಅದು ನೆನಪಿರಬೇಕು. ಅದರಲ್ಲೂ ಯಕ್ಷಗಾನದಂತಹ ಶ್ರೇಷ್ಠ ಕಲೆಗಾಗಿ ಶ್ರಮಿಸಿದ ಸಾಧಕರಿಗೆ ಇಡೀ ಸಮಾಜವೇ ಒಂದು ಕುಟುಂಬ. ಅಂಥವರ ನೆನಪಿಂದ ಉಳಿದವರ ಬದುಕು ಸ್ಮರಣೀಯವಾಗುತ್ತದೆ; ಅದುವೇ ಮುಂದಿನವರಿಗೆ ಮಾದರಿಯಾಗಬಲ್ಲುದು” ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಹಿರಿಯ ಅರ್ಥಧಾರಿ ಗೋಪಾಲ…

Read More

ಬೆಂಗಳೂರು : ಶಾಂಡಿಲ್ಯಾ ಐ.ಎನ್.ಸಿ. ಪಸ್ತುತ ಪಡಿಸುವ ‘ಕನ್ನಡ ನಾಟಕೋತ್ಸವ’ ಸಮಾರಂಭವನ್ನು ದಿನಾಂಕ 13 ಸೆಪ್ಟೆಂಬರ್ 2025ರಂದು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಆಯೋಜಿಸಲಾಗಿದೆ. ಸಂಜೆ 4-30 ಗಂಟೆಗೆ ಬೆಂಗಳೂರು ಥಿಯೇಟರ್ ಕಲೆಕ್ಟಿವ್ ಪ್ರಸ್ತುತ ಪಡಿಸುವ ಎ.ಆರ್. ಗರ್ನಿ ಅವರ ‘ಲವ್ ಲೆಟರ್ಸ್’ ನಿನ್ನ ಪ್ರೀತಿಯ ನಾನು! ನಾಟಕವು ಪ್ರದರ್ಶನಗೊಳ್ಳಲಿದೆ. ನಾಟಕದ ವಿನ್ಯಾಸ ಜಿ. ಜಯಂತ್ ಮತ್ತು ನಿಶಾಂತ್ ಗುರುಮೂರ್ತಿ ಅವರದ್ದು. ನಾಟಕದ ರೂಪಾಂತರ ಮತ್ತು ನಿರ್ದೇಶನ ವೆಂಕಟೇಶ್ ಪ್ರಸಾದ್ ಅವರದ್ದು. ಪ್ರಧಾನ ಭೂಮಿಕೆಯಲ್ಲಿ ರಂಗಭೂಮಿ, ಸಿನಿಮಾ ಕಲಾವಿದ ಕಿಶೋರ್ ಕುಮಾರ್ ಹಾಗೂ ನಿರೂಪಕಿ, ನಟಿ ಸಿರಿ ರವಿಕುಮಾ‌ರ್ ಅಭಿನಯಿಸಲಿದ್ದಾರೆ. ರಂಗಾಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊ. 72595 37777, 94804 68327 ಮತ್ತು 98455 95505 ಸಂಪರ್ಕಿಸಿರಿ.

Read More

ಉಡುಪಿ : ತಿಂಗಳೆ ಪ್ರತಿಷ್ಠಾನ ಮತ್ತು ಸಂಜೀವ ಶಿಷ್ಯ ವೃಂದ ಇದರ ವತಿಯಿಂದ ‘ಸಂಜೀವ ಯಕ್ಷ ಜೀವ-ಭಾವ’ ಸಮಾರಂಭವನ್ನು ದಿನಾಂಕ 12 ಸೆಪ್ಟೆಂಬರ್ 2025ರಂದು ಸಂಜೆ 3-00 ಗಂಟೆಗೆ ಉಡುಪಿ ಕುಂಜಿಬೆಟ್ಟುವಿನಲ್ಲಿರುವ ಯಕ್ಷಗಾನ ಕಲಾರಂಗ ಇನ್ಫೋಸಿಸ್ ಪ್ರತಿಷ್ಠಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದ ಉದ್ಘಾಟನೆಯನ್ನು ಯಕ್ಷ ಸಂಘಟಕ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ ಇವರು ಮಾಡಲಿದ್ದು, ಡಾ. ಗಿರಿಜಾ ಇವರು ಅಧ್ಯಕ್ಷತೆ ವಹಿಸಲಿದ್ದು, ಉಡುಪಿ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಇವರು ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. 3-30 ಗಂಟೆಗೆ ಗುರು ಬನ್ನಂಜೆ ಸಂಜೀವ ಸುವರ್ಣ ಇವರಿಂದ ಪಾರಂಪರಿಕ ಯಕ್ಷಗಾನ ನೃತ್ಯ ಪ್ರದರ್ಶನ ನಡೆಯಲಿದೆ. ಕರ್ಣಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ‘ನಮ್ಮ ಸಂಜೀವ’ ಗೋಷ್ಠಿಗಳು ಪ್ರಸ್ತುತಗೊಳ್ಳಲಿವೆ. ಸಂಜೆ 5-00 ಗಂಟೆಗೆ ಮಾಜಿ ಲೋಕ ಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಇವರು ಅಭಿನಂದನಾ ಭಾಷಣ…

Read More

ಬೆಂಗಳೂರು : ಸಂಚಲನ ಮೈಸೂರು (ರಿ.) ಮೈಸೂರು ಮತ್ತು ಗಂಧರ್ವ ಸಾಂಸ್ಕೃತಿಕ ಕಲಾವೇದಿಕೆ (ರಿ.) ಇದರ ವತಿಯಿಂದ ಒಡನಾಡಿ ಬಂಧು ಸಿಜಿಕೆ – 75 ‘ಮಾಸದ ನೆನೆಪು ಸರಣಿ ಕಾರ್ಯಕ್ರಮ 03’ವನ್ನು ದಿನಾಂಕ 11 ಸೆಪ್ಟೆಂಬರ್ 2025ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಆಯೋಜಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಬಲವಂತ ರಾವ್ ಪಾಟೀಲ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಚಲನ ಮೈಸೂರು ರಂಗ ತಂಡ ಅಭಿನಯಿಸುವ ಡಾ. ಚಂದ್ರಶೇಖರ ಕಂಬಾರರ ‘ಹರಕೆಯ ಕುರಿ’ ನಾಟಕ ದೀಪಕ್ ಮೈಸೂರು ಇವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.

Read More

ಹೈದರಾಬಾದ್ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ವತಿಯಿಂದ ಹೈದರಾಬಾದ್ ಘಟಕದ ಉದ್ಘಾಟನಾ ಸಮಾರಂಭವನ್ನು ದಿನಾಂಕ 10 ಸೆಪ್ಟೆಂಬರ್ 2025ರಂದು ಸಂಜೆ 6-00 ಗಂಟೆಗೆ ಹೈದರಾಬಾದ್ ಬಾಗಲಿಂಗಂಪಳ್ಳಿಯ ಸುಂದರಯ್ಯ ಕಲಾನಿಲಯದಲ್ಲಿ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಭಾಗವತ ಪಟ್ಲ ಸತೀಶ ಶೆಟ್ಟಿಯವರಿಗೆ ‘ಯಕ್ಷ ಕಾಮಧೇನು’ ಬಿರುದು ಪ್ರದಾನ ಮಾಡಲಾಗುವುದು.

Read More

ಕ್ಷೇತ್ರವೋ ಜೀವವೋ ಇಳೆಯ ಪಾವಿತ್ರ್ಯತೆಯ ಪ್ರಶ್ನೆ ಮ್ಲಾನವದನ ತಾಯಿಯ ಕಣ್ಣಹನಿ ತೆರೆದ ಕನ್ನಡಿಯಂತಿತ್ತು ಏಕೆ ತಾಯೇ ಖಿನ್ನಳಾದೆ ? ಮತ್ತೊಮ್ಮೆ ಪ್ರಶ್ನೆ ಮಾಡಿದೆ ! ಏನ ಹೇಳಲಿ ಮಗೂ,,,,, ಗದ್ಗದಿತ ಧ್ವನಿಗೆ ಹಕ್ಕಿಗಳೂ ಮೌನ ಎನ್ನೊಡಲ ಬಗೆದಿರುವೆಯಾ ಕಂದ ? ಮರು ಪ್ರಶ್ನೆಗೆ ಅವಾಕ್ಕಾದೆ ಹೇಗೆ ? ಪೊರೆವ ಒಡಲನು ಬಗೆವುದೇ ? ಪಾಪಿಷ್ಟನಾಗಲೊಲ್ಲೆ ! ಅಯ್ಯೋ ಮರುಳೇ ನೀ ಯಾವ ಲೋಕದವನು ? ಭವಿತವ್ಯದ ಕವಳ ಬರಿದಾಗಿದೆ ಯಾರದೋ ಪಾಲಾಗಿದೆ ಹಸಿರು ಕೆಂಪಾಗಿ ಕೆಸರು ಕಪ್ಪಾಗಿ ಬಸಿರೆಲ್ಲವೂ ಕಸದ ಕುಪ್ಪೆಗಳಾಗಿವೆ ಕಾಣದಾದೆಯಾ ? ಬಾನ ಚುಂಬಿಸುವ ಇಮಾರತು ಪಾತಾಳ ಕೂಪದ ಭಂಡಾರ ಕಾಣು ಬಂಡೆಗಳ ಧೂಳು ಹಸಿರೆಲೆಗಳ ಭಸ್ಮ ಮೇರು ಮಲೆಯ ಬಯಲಿನಲಿ ನರ್ತಿಸುವುದು ಜಲಜೆಯರಲ್ಲವೋ ದಾಯಾದಿ ಹಣದ ದಿಬ್ಬಣಗಳು ಕಾಣದಾದೆಯಾ ಮರುಳೇ ? ಹೊಸಿಲು ದಾಟಿ ಬಾ ಕಂದ ಉದರದಲಿ ಏನೆಲ್ಲಾ ಅಡಗಿದೆ ಛಿದ್ರ ದೇಹ ಸೀಳಿದ ಗರ್ಭ ಹೊಸಕಿದ, ಹೆಣ್ಣು ಭ್ರೂಣಗಳು ಅಕಾಲ ಮರ್ತ್ಯದ ರುದ್ರ ಲೋಕ…

Read More

ಪುತ್ತೂರು : ಗೆಜ್ಜೆಗಿರಿಯ ಶ್ರೀ ಆದಿ ಧೂಮಾವತಿ ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಇದರ ವತಿಯಿಂದ ‘ಶ್ರೀ ದೇವಿ ಮಹಾತ್ಮೆ’ ಹಾಗೂ ‘ಕೋಟಿ ಚೆನ್ನಯ’ ಪ್ರಸಂಗವನ್ನು ಸಮರ್ಥವಾಗಿ ಪ್ರದರ್ಶಿಸಬಲ್ಲ ಸಮರ್ಥ್ಯದ ಮಾನದಂಡದಲ್ಲಿ ಕಟ್ಟಲ್ಪಟ್ಟ ನಮ್ಮ ಅಭಿಮಾನದ ಶ್ರೀ ಗೆಜ್ಜೆಗಿರಿ ಮೇಳವು ಮುಂದಿನ 2025-26ನೇ ಸಾಲಿನ ತಿರುಗಾಟದಲ್ಲಿ ಸೇವಾರ್ಥಿಗಳ ಇಚ್ಛಾನುಸಾರ, ಆಯ್ಕೆಯ ಯಾವುದೇ ಪೌರಾಣಿಕ ಹಾಗೂ ಐತಿಹಾಸಿಕ ಪ್ರಸಂಗಗಳನ್ನು ಕನ್ನಡ ಅಥವಾ ತುಳು ಭಾಷೆಗಳಲ್ಲಿ ಸಮರ್ಥವಾಗಿ ಪ್ರದರ್ಶನ ನೀಡಲಿದೆ. ನಮ್ಮ ಮೇಳದಲ್ಲಿ ಪ್ರದರ್ಶನಗೊಳ್ಳಲಿರುವ ನೂತನ ಪ್ರಸಂಗಗಳ ವಿವರ ಅತೀ ಶೀಘ್ರದಲ್ಲಿ ಪ್ರಕಟಿಸುವವರಿದ್ದು, ಯಕ್ಷಗಾನಭಿಮಾನಿಗಳಾದ ತಮ್ಮೆಲ್ಲರ ಸಂಪೂರ್ಣ ಸಹಕಾರವನ್ನು ಬಯಸುತ್ತೇವೆ.

Read More