Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಅರೆಹೊಳೆ ಪ್ರತಿಷ್ಠಾನ ಹಾಗೂ ನಂದಗೋಕುಲ, ಇವರು ಕಲಾಭಿ (ರಿ.), ಅಸ್ತಿತ್ವ (ರಿ.), ರೂವಾರಿ.com ಹಾಗೂ ಆಯನ ನಾಟಕದ ಮನೆ ಇವರ ಸಹಯೋಗದೊಂದಿಗೆ ಆಯೋಜಿಸುತ್ತಿರುವ 10ನೇ ವರ್ಷದ ‘ಅರೆಹೊಳೆ ನಾಟಕೋತ್ಸವ’ವು ದಿನಾಂಕ 27 ಮಾರ್ಚ್ 2025 ರಿಂದ 31 ಮಾರ್ಚ್ 2025ರವರೆಗೆ ನಡೆಯಲಿದ್ದು, ಈ ಸಂದರ್ಭ ಸಾರ್ವಜನಿಕರಿಗೆ ‘ನಾಟಕ ವಿಮರ್ಶಾ ಸ್ಪರ್ಧೆ’ಯನ್ನು ಆಯೋಜಿಸಲಾಗಿದೆ. ವಿಜೇತರಿಗೆ ಪ್ರಥಮ ಬಹುಮಾನ ರೂಪಾಯಿ 2500, ದ್ವಿತೀಯ ಬಹುಮಾನ ರೂಪಾಯಿ 1500, ತೃತೀಯ ಬಹುಮಾನ ರೂಪಾಯಿ 1000, ಹಾಗೂ ಎರಡು ಸಮಾಧಾನಕರ ಬಹುಮಾನವಾಗಿ ರೂಪಾಯಿ 500ನ್ನು ನೀಡಲಾಗುವುದು. ನಿಯಮಗಳು : ಸ್ಪರ್ಧೆಗೆ ವಯೋಮಿತಿ ಇಲ್ಲ, ವಿಮರ್ಶೆಯನ್ನು ಕನ್ನಡದಲ್ಲಿಯೇ ಬರೆಯಬೇಕು ಮತ್ತು 1200 ಪದಗಳ ಮಿತಿಯಲ್ಲಿರಬೇಕು, ಐದೂ ನಾಟಕಗಳನ್ನು ನೋಡಿ ವಿಮರ್ಶೆ ಬರೆಯಬೇಕು, ಮೊದಲ ದಿನ ಹೆಸರು ನೋಂದಾಯಿಸಿರಬೇಕು, ವಿಮರ್ಶೆಗಳನ್ನು 3 ಏಪ್ರಿಲ್ 2025ರ ಒಳಗಾಗಿ ಮೇಲ್ ಮೂಲಕ ಅಥವಾ what’s app ಮೂಲಕ ಕಳುಹಿಸಬೇಕು. ಬಹುಮಾನಿತ ವಿಮರ್ಶೆಗಳನ್ನು ರೂವಾರಿ.com ನಲ್ಲಿ ಪ್ರಕಟಿಸಲಾಗುವುದು. ಬಹುಮಾನಗಳ ವಿತರಣೆಯ ದಿನಾಂಕವನ್ನು…
ಮಂಗಳೂರು : ಅರೆಹೊಳೆ ಪ್ರತಿಷ್ಠಾನ ಹಾಗೂ ಕಲಾಭಿ (ರಿ.) ಮಂಗಳೂರು ಆಯೋಜಿಸುವ ಕಲಾಗ್ರಾಮ ಉದ್ಘಾಟನೆ, ವಿಶ್ವರಂಗಭೂಮಿ ದಿನಾಚರಣೆ, ಅರೆಹೊಳೆ ರಂಗಭೂಮಿ ಪ್ರಶಸ್ತಿ ಪ್ರದಾನ ಹಾಗೂ ಅರೆಹೊಳೆ ನಾಟಕೋತ್ಸವದ ಉದ್ಘಾಟನಾ ಸಮಾರಂಭವು ದಿನಾಂಕ 27 ಮಾರ್ಚ್ 2025 ರಂದು ನಡೆಯಲಿರುವುದು. ಅರೆಹೊಳೆ ನಾಟಕೋತ್ಸವವು ದಿನಾಂಕ ಮಾರ್ಚ್ 27 ರಿಂದ 31, 2025 ರ ವರೆಗೆ ಐದು ದಿನಗಳ ಪರ್ಯಂತ ಮಂಗಳೂರಿನ ಬೊಂದೆಲ್ – ಮೂಡುಶೆಡ್ಡೆ ರಸ್ತೆಯಲ್ಲಿರುವ ಕಲಾಗ್ರಾಮದಲ್ಲಿ ನಡೆಯಲಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡಬಿದಿರೆ ಇದರ ಮ್ಯಾನೇಜಿಂಗ್ ಟ್ರಸ್ಟಿಯಾದ ವಿವೇಕ್ ಎಮ್. ಆಳ್ವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಅರೆಹೊಳೆ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ತಾರನಾಥ್ ಗಟ್ಟಿ ಕಾಪಿಕಾಡ್, ರಂಗಭೂಮಿ ಹಾಗೂ ಸಿನೆಮಾ ನಿರ್ದೇಶಕರಾದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಇದರ ಸಹಾಯಕ ನಿರ್ದೇಶಕರಾದ ಬಿ. ರಾಜೇಶ್, ನಾಟಕಕಾರರಾದ…
ಬೆಂಗಳೂರು : ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ನಾಟ್ಯದರ್ಪಣ ಅರ್ಪಿಸುವ ‘ಮಥನ’ ನಾಟಕ ಪ್ರದರ್ಶನವನ್ನು ದಿನಾಂಕ 27 ಮಾರ್ಚ್ 2025ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ಉದಯಭಾನು ಕಲಾ ಸಂಘದಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್.ಎಸ್. ವೆಂಕಟೇಶ್ ಮೂರ್ತಿ ಇವರು ರಚಿಸಿರುವ ಈ ನಾಟಕವನ್ನು ಅಬ್ಬೂರು ಜಯತೀರ್ಥ ಇವರು ನಿರ್ದೇಶನ ಮಾಡಿರುತ್ತಾರೆ.
ಮಂಜೇಶ್ವರ : ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಗಿಳಿವಿಂಡು ಆಶ್ರಯದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಮಂಜೇಶ್ವರದ ಗಿಳಿವಿಂಡುವಿನಲ್ಲಿ ದಿನಾಂಕ 23 ಮಾರ್ಚ್ 2025ರಂದು ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಯವರ 142ನೇ ಜನ್ಮದಿನಾಚರಣೆ ಸಮಾರಂಭವು ನಡೆಯಿತು. ಈ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಹಿರಿಯ ಸಾಹಿತಿ, ಯಕ್ಷಗಾನ ಅರ್ಥಧಾರಿ ವೈದ್ಯ ಡಾ. ರಮಾನಂದ ಬನಾರಿ ಮಾತನಾಡುತ್ತಾ “ಗೋವಿಂದ ಪೈಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಮಹಾಚೇತನರಾಗಿದ್ದು, ಅವರ ನಿವಾಸ ಗಿಳಿವಿಂಡು ಆ ಮಟ್ಟದಲ್ಲಿ ಅಭಿವೃದ್ಧಿಗೊಳ್ಳಬೇಕಾದುದು ನಮ್ಮೆಲ್ಲರ ಹೊಣೆಯಾಗಿದೆ. ಬಹುಮುಖಿ ವ್ಯಕ್ತಿತ್ವದ ಪೈಗಳು ಎಂದಿಗೂ ಕನ್ನಡ ಸಹಿತ ದೇಶದ ಎಲ್ಲಾ ಸಾಹಿತ್ಯ ವಲಯಗಳಲ್ಲೂ ಅಸಾಮಾನ್ಯ ಕೊಡುಗೆ ನೀಡಿದ ಅಪೂರ್ವ ಮಹಾಪುರುಷರಾಗಿದ್ದರು. ರಾಷ್ಟ್ರಕವಿಯ ಕನಸುಗಳನ್ನು ಸಾಕಾರಗೊಳಿಸಲು, ಸಾಹಿತ್ತಿಕ ಮೌಲ್ಯಗಳನ್ನು ಹೊಸ ತಲೆಮಾರಿಗೆ ಹಸ್ತಾಂತರಿಸಲು ಪರಂಪರೆಗೆ ಧಕ್ಕೆ ಬಾರದಂತೆ ಆಧುನಿಕ ಕೌಶಲ್ಯಗಳಿಂದೊಡಗೂಡಿ ಸ್ಮಾರಕ ನಿವೇಶನವನ್ನು ಇನ್ನಷ್ಟು ಪ್ರವರ್ಧಮಾನಕ್ಕೆ ತರಬೇಕು” ಎಂದು ಹೇಳಿದರು. ಸಮಾರಂಭದಲ್ಲಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಕೊಡಮಾಡುವ…
ಕಾಸರಗೋಡಿನ ಸಾಧಕರನ್ನು ಹೊರಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ ಪ್ರಕಟಿಸಿದ ‘ಕನ್ನಡಿಯಲ್ಲಿ ಕನ್ನಡಿಗರು’ ಎಂಬ ಕೃತಿಯ ಎರಡು ಸಂಚಿಕೆಗಳು ಹಿರಿಯ ಕವಿ, ಸಂಘಟಕ ಡಾ. ರಮಾನಂದ ಬನಾರಿಯವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು. ಮೊದಲ ಸಂಚಿಕೆಯನ್ನು ಅವರೇ ಸಂಪಾದಿಸಿದ್ದು, ಎರಡನೇ ಸಂಚಿಕೆಯನ್ನು ಹಿರಿಯ ವಿದ್ವಾಂಸ ಡಾ. ವಸಂತಕುಮಾರ ಪೆರ್ಲರು ಸಂಪಾದಿಸಿದ್ದಾರೆ. ಕಾಸರಗೋಡಿನ ಕನ್ನಡಿಗರ ಬಹುಮುಖಿ ಸಾಧನೆಗಳನ್ನು ಪ್ರತಿಬಿಂಬಿಸುವುದರೊಂದಿಗೆ ಅವರ ಸಾಧನೆಗಳ ಹೆಗ್ಗುರುತುಗಳನ್ನು ದಾಖಲಿಸುವಲ್ಲಿ ಸಂಪಾದಕರಿಬ್ಬರೂ ಯಶಸ್ವಿಯಾಗಿದ್ದಾರೆ. ಆಡಳಿತಾತ್ಮಕವಾಗಿ ಹಿಂದುಳಿದ ಕಾಸರಗೋಡಿನಲ್ಲಿ ವಾಸಿಸುತ್ತಿರುವ ಭಾಷಾ ಅಲ್ಪಾ ಸಂಖ್ಯಾತರು ಇತ್ತ ಕೇರಳಕ್ಕೂ ಅತ್ತ ಕರ್ನಾಟಕಕ್ಕೂ ಸಲ್ಲದವರು. ಎರಡೂ ರಾಜ್ಯಗಳ ಸಾಹಿತ್ಯಕ ಸಾಂಸ್ಕೃತಿಕ ಕ್ಷೇತ್ರಗಳು ರಾಜಕೀಯ ಮಸಲತ್ತು, ಹಿಂಬಾಗಿಲ ಪ್ರವೇಶ, ಅರ್ಹರನ್ನು ಪದಚ್ಯುತಗೊಳಿಸುವ ತಂತ್ರಗಳು ಕಾಸರಗೋಡಿನವರನ್ನು ಮುಖ್ಯವಾಹಿನಿಯಿಂದ ದೂರ ಮಾಡುತ್ತಿವೆ. ಕಾಸರಗೋಡಿನವರ ಹಿಂಜರಿಕೆಯ ಮನಸ್ಥಿತಿಯೂ ಅವರ ಬೆಳವಣಿಗೆ ಕುಂಠಿತವಾಗಲು ಕಾರಣವಾಗಿದೆ ಎಂಬುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಆದರೆ ಕಾಸರಗೋಡಿನ ಸಾಧಕರ ಮೇಲೆ ಕವಿದ ಕತ್ತಲನ್ನು ಹೋಗಲಾಡಿಸಿ ಅವರ ಕಡೆಗೆ ಬೆಳಕನ್ನು ಬೀರಿರುವ ಈ ಸಂಚಿಕೆಗಳು ಕಾಸರಗೋಡಿನವರಿಗೆ ಸೂಕ್ತ ಪ್ರಾತಿನಿಧ್ಯ ಸಿಗದಿರುವ ಕೊರತೆಯನ್ನು…
ಉಡುಪಿ : ರಂಗಭೂಮಿ ಉಡುಪಿ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಸಹಯೋಗದಲ್ಲಿ ‘ವಿಶ್ವ ರಂಗಭೂಮಿ ದಿನಾಚರಣೆ’, ‘ವಿಶ್ವ ರಂಗಭೂಮಿ ಸನ್ಮಾನ’ ಹಾಗೂ ‘ಅಂಬಾತನಯ ಮುದ್ರಾಡಿ ಸಂಸ್ಮರಣಾ ಪುಸ್ತಕ ಪ್ರಶಸ್ತಿ ಪ್ರದಾನ’ ಸಮಾರಂಭವು ದಿನಾಂಕ 27 ಮಾರ್ಚ್ 2025ರಂದು ಸಂಜೆ ಘಂಟೆ 5.00ರಿಂದ ಉಡುಪಿಯ ಎಂ. ಜಿ. ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಈ ಕುರಿತು ಮಾಹಿತಿ ನೀಡಿದ ರಂಗಭೂಮಿಯ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟಿ “ರಂಗಭೂಮಿಯ ಗೌರವಾಧ್ಯಕ್ಷರಾದ ಡಾ. ಎಚ್.ಎಸ್. ಬಲ್ಲಾಳ್ ಇವರ ಅಧ್ಯಕ್ಷತೆಯಲ್ಲಿ ಅಂದು ಸಂಜೆ ಘಂಟೆ 6.00ರಿಂದ ನಡೆಯುವ ಕಾರ್ಯಕ್ರಮದಲ್ಲಿ ಸಾಹಿತಿ ಎಚ್. ಗೋಪಾಲ ಭಟ್ಟ (ಕು.ಗೋ.) ಇವರಿಗೆ ‘ವಿಶ್ವ ರಂಗಭೂಮಿ ಪ್ರಶಸ್ತಿ’ ಮತ್ತು ಲೇಖಕ ಎನ್. ಸಿ. ಮಹೇಶ್ ಇವರಿಗೆ ‘ಅಂಬಾತನಯ ಮುದ್ರಾಡಿ ಸಂಸ್ಮರಣಾ ಪುಸ್ತಕ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ.…
ಉಪ್ಪಿನಕುದ್ರು : “ಪ್ರತಿಭೆ ನಿಮ್ಮದು ವೇದಿಕೆ ನಮ್ಮದು” 2025 ಕಾರ್ಯಕ್ರಮದಡಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಸತತ 105ನೇ ತಿಂಗಳ ಕಾರ್ಯಕ್ರಮ ದಿನಾಂಕ 23 ಮಾರ್ಚ್ 2025ರಂದು ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ವಿಷ್ಣು ಸಹಸ್ರನಾಮದೊಂದಿಗೆ ಆರಂಭವಾಯಿತು. ಶ್ರೀಮತಿ ವಸಂತಿ ಆರ್. ಪಂಡಿತ್ ಪ್ರಾರ್ಥಿಸಿದರು. ವೇದಿಕೆಯಲ್ಲಿ ಡಾ. ರಮಾಕಾಂತ್ ಶೆಣೈ, ಪುಷ್ಪರಾಜ್, ವಸಂತಿ ಆರ್. ಪಂಡಿತ್, ಗಿರೀಶ್ ಪೈ ಹಾಗೂ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ರವರು ಉಪಸ್ಥಿತರಿದ್ದರು. ಮೈಸೂರಿನ ಡಾ. ರಮಾಕಾಂತ್ ಶೆಣೈ ಹಾಗೂ ಕುಂದಾಪುರದ ದೀಕ್ಷಾ ಪೈ, ಪ್ರೇಕ್ಷಾ ಪೈ ಸಹೋದರಿಯರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ನಂತರ ಡಾ. ರಮಾಕಾಂತ್ ಶೆಣೈಯವರು ‘ವಿಷ್ಣು ಸಹಸ್ರನಾಮ’ದ ಬಗ್ಗೆ ಪ್ರವಚನ ನೀಡಿ ಅದರ ಮಹತ್ವ ವಿವರಿಸಿದರು. ದೀಕ್ಷಾ ಪೈ ಹಾಗೂ ಪ್ರೇಕ್ಷಾ ಪೈ ಸಹೋದರಿಯರು ಭಕ್ತಿ ಸಂಗೀತ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿದರು. ಶ್ರೀಮತಿ ರಶ್ಮಿರಾಜ್, ಕುಂದಾಪುರ ಇವರು ಕಾರ್ಯಕ್ರಮ ನಿರೂಪಿಸಿದರು.
ಧಾರವಾಡ : ಅಭಿನಯ ಭಾರತಿ (ರಿ.) ಧಾರವಾಡ ಹಾಗೂ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ, ಅಭಿನಯ ಭಾರತಿ ರಂಗಪ್ರಶಸ್ತಿ ಪ್ರದಾನ ಹಾಗೂ ದಿ. ಪಿ.ಆರ್. ಮಳಗಿ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 27 ಮಾರ್ಚ್ 2025ರಂದು ಧಾರವಾಡದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಬೆಳಿಗ್ಗೆ 10-30 ಗಂಟೆಗೆ ಆಯೋಜಿಸಲಾಗಿದೆ. ಹಿರಿಯ ರಂಗ ಸಂಸ್ಥೆ ಅಭಿನಯ ಭಾರತಿಯು ಕಳೆದ ನಾಲ್ಕು ದಶಕಗಳಿಂದ ತನ್ನ ವಿವಿಧ ರಂಗ ಚಟುವಟಿಕೆಗಳ ಮೂಲಕ ಸಂಸ್ಕೃತಿ ಪ್ರಿಯರ ಮನಸ್ಸನ್ನು ಉಲ್ಲಸಿತಗೊಳಿಸಿದೆ. 1996ರಿಂದ ಈ ಮೂರು ದಶಕಗಳುದ್ದಕ್ಕೂ ಪ್ರತಿ ವರ್ಷ ಮಾರ್ಚ್ 27ರಂದು ‘ವಿಶ್ವ ರಂಗಭೂಮಿ’ ದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತ ಪ್ರತಿ ವರ್ಷವೂ ರಂಗ ಪ್ರಪಂಚದ ವಿಶಿಷ್ಟ ಸಾಧಕರಿಗೆ ‘ಅಭಿನಯ ಭಾರತಿ ರಂಗ ಪ್ರಶಸ್ತಿ’ಯನ್ನು ನಗದು ಪುರಸ್ಕಾರ ಹಾಗೂ ನಟರಾಜ ವಿಗ್ರಹ ನೀಡಿ ಫಲಪುಷ್ಪದೊಂದಿಗೆ ಗೌರವಿಸುವ ಮೂಲಕ ಜನ ಮೆಚ್ಚುಗೆ ಪಡೆದಿದೆ. ಈ ಸಲ ಅಭಿನಯ…
ಸುಳ್ಯ : ಸುಳ್ಯದ ಚಂದನ ಸಾಹಿತ್ಯ ವೇದಿಕೆಯ 20ನೇ ವಾರ್ಷಿಕೋತ್ಸವ ಸಮಾರಂಭವು ದಿನಾಂಕ 23 ಮಾರ್ಚ್ 2025ರಂದು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಯಂದಲ್ಲಿ ಸಾಹಿತಿ, ಅಂಕಣಕಾರ, ಪತ್ರಕರ್ತ ವಿರಾಜ್ ಅಡೂರು ಇವರನ್ನು ಸಾಹಿತಿ ಎಚ್. ಭೀಮ್. ರಾವ್ ವಾಸ್ಟರ್ ಕೋಡಿಹಾಳ ನೇತೃತ್ವದಲ್ಲಿ ಅವರ ಸಾಹಿತ್ಯ ಕ್ಷೇತ್ರದ ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿ ಪ್ರದಾನಿಸಲಾಯಿತು. ವಿರಾಜ್ ಅಡೂರು ಇವರು ಸಾಹಿತ್ಯ, ಸಂಘಟನೆ, ಸಾಮಾಜಿಕ ಮುಖಂಡರಾಗಿದ್ದು, ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಬೆಂಗಳೂರಿನ ‘ಸ್ಪಂದನ ಸಿರಿ’ ವೇದಿಕೆಯ ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಚಂದನ ಸಾಹಿತ್ಯ’ವೇದಿಕೆಯ ಅಧ್ಯಕ್ಷ ಎಚ್. ಭೀಮ್. ರಾವ್ ವಾಸ್ಟರ್ ಕೋಡಿಹಾಳ, ಅಜ್ಜಾವರ ಚೈತನ್ಯ ಸೇವಾಶ್ರಮದ ಶ್ರೀ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ, ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ, ಮೋಹನ ನಂಗಾರು, ಚೆನ್ನಕೇಶವ ಜಾಲ್ಸೂರು, ಪಿ ವೆಂಕಟೇಶ್ ಬಾಗೇವಾಡ, ನವೀನ್ ಚಾತುಬಾಯಿ, ಸಲೀಂ ಅನಾರ್ಕಲಿ ಮೊದಲಾದವರು ಭಾಗವಹಿಸಿದ್ದರು.
ತೆಂಕನಿಡಿಯೂರು : ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಆಂತರಿಕ ಗುಣಮಟ್ಟ ಭರವಸಾ ಕೋಶ, ಡಾ. ಪಾದೂರು ಗುರುರಾಜ್ ಭಟ್ ಮೆಮೋರಿಯಲ್ ಟ್ರಸ್ಟ್ ಉಡುಪಿ ಹಾಗೂ ಇತಿಹಾಸ ವಿಭಾಗ ಸಂಯುಕ್ತವಾಗಿ ಆಯೋಜಿಸುತ್ತಿರುವ ಡಾ. ಪಾದೂರು ಗುರುರಾಜ್ ಭಟ್ ಜನ್ಮ ಶತಮಾನೋತ್ಸವ -2025 ಪ್ರಯುಕ್ತ ವಿಶ್ವ ವಿದ್ಯಾನಿಲಯ ಮಟ್ಟದ ಒಂದು ದಿನದ ವಿಚಾರ ಸಂಕಿರಣವನ್ನು ದಿನಾಂಕ 28 ಮಾರ್ಚ್ 2025ರಂದು ಪೂರ್ವಾಹ್ನ 10-00 ಗಂಟೆಗೆ ಕಾಲೇಜಿನ ಆಡಿಯೋ ವಿಶ್ಯುವಲ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ವಿಚಾರ ಸಂಕಿರಣವು 10-00 ಗಂಟೆಗೆ ಉದ್ಘಾಟನೆಗೊಳ್ಳಲಿದ್ದು, ‘ತುಳುನಾಡಿನ ದೇವಾಲಯಗಳ ವಾಸ್ತುಶಿಲ್ಪ’ ಎಂಬ ವಿಷಯದ ಬಗ್ಗೆ ಮೂಡಬಿದರೆ ಶ್ರೀ ಧವಳ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಇವರಿಂದ ಉಪನ್ಯಾಸ ನಡೆಯಲಿದೆ. ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ನಿತ್ಯಾನಂದ ವಿ. ಗಾಂವಕರ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ‘ತುಳುನಾಡಿನ ಶಾಸನಗಳು’ ಎಂಬ ವಿಷಯದ ಬಗ್ಗೆ ಉಡುಪಿ…