Author: roovari

ಸುರತ್ಕಲ್ : ಯಕ್ಷ ಅಭಿಮಾನಿ ಬಳಗ ಟ್ರಸ್ಟ್ (ರಿ), ಸುರತ್ಕಲ್ ಇದರ ದಶಮ ಸಂಭ್ರಮ ಕಾರ್ಯಕ್ರಮವು ದಿನಾಂಕ 04 ಅಕ್ಟೋಬರ್ 2025ರಂದು ಸುರತ್ಕಲ್ ಇಲ್ಲಿನ ವಿದ್ಯಾದಾಯಿನಿ ಪ್ರೌಢ ಶಾಲೆಯ ವಜ್ರ ಮಹೋತ್ಸವ ಸಭಾಂಗಣದಲ್ಲಿ ನಡೆಯಲಿದೆ. ನಾವು ಸಮಾನ ಮನಸ್ಕರು ಸೇರಿ 2016 ರಲ್ಲಿ ಸ್ಥಾಪಿಸಿದ “ಯಕ್ಷ ಅಭಿಮಾನಿ ಬಳಗ, ಸುರತ್ಕಲ್” ಎಂಬ ಯಕ್ಷಗಾನ ಪ್ರೇಮಿಗಳ ಸಂಘಟನೆಯ ಸದಸ್ಯರು. ಈ ಸಂಘಟನೆಯು ಹೃದಯದಿಂದ ಯಕ್ಷಗಾನವನ್ನು ಆಸ್ವಾದಿಸುವ, ಕಲೆಯ ಗೌರವವನ್ನು ಉಳಿಸಿ ಬೆಳೆಸುವ ದೃಷ್ಟಿಕೊನದಿಂದ ಸ್ಥಾಪಿತವಾಗಿದೆ. ಕಲೆಯ ಬೆಳವಣಿಗೆ ಹಾಗೂ ಸಂಸ್ಕೃತಿಯನ್ನು ಸಾರಲು ಪ್ರಾಮಾಣಿಕ ಪ್ರಾಯತ್ನಗಳನ್ನು ಮಾಡುತ್ತಿರುವ ನಮ್ಮ ಸಂಘಟನೆಯು ಕಳೆದ ಒಂದು ದಶಕದ ಕಾಲದಲ್ಲಿ ಹಲವಾರು ಯಶಸ್ವಿ ಯಕ್ಷಗಾನ ಕಾರ್ಯಕ್ರಮಗಳನ್ನುಹಮ್ಮಿಕೊಂಡಿದೆ. ಕಾರ್ಯಕ್ರಮಗಳ ಇತಿಹಾಸ: 2016ರಲ್ಲಿ “ಶ್ರೀ ದೇವಿ ಮಹಾತ್ಮೆ” ಎಂಬ ಯಕ್ಷಗಾನ ಪ್ರದರ್ಶನದೊಂದಿಗೆ ಸಂಘಟನೆಯ ಮೊದಲ ಹೆಜ್ಜೆ ಇಡಲಾಯಿತು. ಈ ಪ್ರದರ್ಶನವು ಜನಮನ ಗೆದ್ದು, ಯಕ್ಷಗಾನದ ಲೋಕದಲ್ಲಿ ನಮ್ಮ ಹೆಜ್ಜೆ ಗೆ ಘನತೆ ನೀಡಿತು. ಈ ಕಾರ್ಯಕ್ರಮದಲ್ಲಿ ಶ್ರೀ ಬಲಿಪ ನಾರಾಯಣ ಭಾಗವತರು,…

Read More

ಮಡಿಕೇರಿ : ಮಡಿಕೇರಿಯ ಹೊಸ ಬಡಾವಣೆಯ ಅಶೋಕ ಭವನದಲ್ಲಿ ಮೊಣ್ಣಂಡ ಶೋಭಾ ಸುಬ್ಬಯ್ಯನವರ ಪ್ರಾಯೋಜಕತ್ವದಲ್ಲಿ ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು ವತಿಯಿಂದ ದಿನಾಂಕ 28 ಸೆಪ್ಟೆಂಬರ್ 2025ರಂದು ‘ಕಾವ್ಯ ಕಮ್ಮಟ’ ನಡೆಯಿತು. ಹಿರಿಯ ಕವಯಿತ್ರಿ ಮೊಣ್ಣಂಡ ಶೋಭಾ ಸುಬ್ಬಯ್ಯಬವರು ಅಧ್ಯಕ್ಷತೆ ವಹಿಸಿದ್ದರು. ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು ಬಳಗದ ಸಂಸ್ಥಾಪಕರಾದ ವೈಲೇಶ ಪಿ.ಎಸ್. ಕೊಡಗು ಉದ್ಘಾಟನೆ ಮಾಡಿದರು. ಕನ್ನಡ ಸಿರಿ ಬಳಗದ ಅಧ್ಯಕ್ಷರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರು ಆದ ಬಿ.ಎಸ್. ಲೋಕೇಶ್ ಸಾಗರ್‌ರವರು ಪ್ರಸ್ತಾವಿಕ ನುಡಿಗಳನ್ನಾಡಿದರು. ಖ್ಯಾತ ಕವಿಗಳಾದ ಡಾ. ಜಯಪ್ಪ ಹೊನ್ನಾಳಿ ಮೈಸೂರು ಇವರು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಗಿರೀಶ್ ಎಸ್. ಕಿಗ್ಗಾಲು, ಪುಷ್ಪ ಡಿ.ಹೆಚ್. ಮಡಿಕೇರಿ. ಲೋಕೇಶ್ ಹೆಚ್.ಡಿ. ವಿರಾಜಪೇಟೆ, ಪುಷ್ಪ ಶಿವರಾಂ ರೈ, ಹೇಮಂತ್ ಪಾರೇರಾ, ಶಶಿಕಲಾ ಗಿರೀಶ್ ಕಿಗ್ಗಾಲು, ಶೋಭಾ ರಕ್ಷಿತ್ ಮಡಿಕೇರಿ, ವಿಜಯಶ್ರೀ ಅನಿಲ್ ಕೆದಿಲಾಯ ಕುಶಾಲನಗರ, ವಿನಯಾ ರಾಜಶೇಖರ್, ಲಲಿತಾ ಎಂ.ಕೆ., ಶರ್ಮಿಳಾ ರಮೇಶ್…

Read More

ಉಡುಪಿ : ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯ (ರಿ.) ಇದರ ವತಿಯಿಂದ ‘ವಿದ್ಯಾದಶಮಿ ಸಂಗೀತೋತ್ಸವ -2025’ವನ್ನು ದಿನಾಂಕ 02 ಅಕ್ಟೋಬರ್ 2025ರಂದು ಬೆಳಿಗ್ಗೆ 7-40 ಗಂಟೆಯಿಂದ ಕುಕ್ಕುದಕಟ್ಟೆಯಲ್ಲಿರುವ ಸರಿಗಮ ಭಾರತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 7-40 ಗಂಟೆಗೆ ಮಣಿಪಾಲದ ಹಿಂದುಸ್ತಾನಿ ಗಾಯಕ ಪಂಡಿತ್‌ ರವಿಕಿರಣ್‌ ಇವರ ಹಿಂದುಸ್ತಾನಿ ಗಾಯನ. 9-00 ಗಂಟೆಗೆ ವಿದುಷಿ ಸುರೇಖಾ ಭಟ್ ಇವರ ಕರ್ನಾಟಕ ಸಂಗೀತ ಹಾಡುಗಾರಿಕೆಗೆ ಪ್ರಮಥ್ ಭಾಗವತ್ ಇವರು ವಯೊಲಿನ್ ಮತ್ತು ಡಾ. ಬಾಲಚಂದ್ರ ಆಚಾರ್ ಮೃದಂಗ ಸಹಕಾರ ನೀಡಲಿದ್ದಾರೆ. 10-00 ಗಂಟೆಗೆ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಪಿಳ್ಳಾರಿ ಗೀತೆಗಳು, ಬೆಳಗ್ಗ 10-20ಕ್ಕೆ ಕಾರ್ಯಕ್ರಮದ ಉದ್ಘಾಟನೆಯಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌, ಹರಿಕೃಷ್ಣ ಪುನರೂರು, ಪ್ರದೀಪ್ ಕಲ್ಕೂರ, ಮಂಜುನಾಥ ಉಪಾಧ್ಯ ಅತಿಥಿಗಳಾಗಿ ಭಾಗವಹಿಸುವರು. ಈ ಸಂದರ್ಭದಲ್ಲಿ ಬಹುಮುಖ ಪ್ರತಿಭೆಗಳಾದ ಶಿಲ್ಪಾ ಜೋಶಿ, ಮಾನಸಿ ಸುಧೀರ್ ಇವರನ್ನು ಗೌರವಿಸಿ ಸನ್ಮಾನಿಸಲಾಗುವುದು. ಗಂಟೆ 11-45ರಿಂದ ತನ್ಮಯಿ ಉಪ್ಪಂಗಳ ಇವರ ಸಂಗೀತ ಕಛೇರಿಗೆ…

Read More

ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಎಂ.ಸಿ.ಸಿ. ಬ್ಯಾಂಕ್‌ ಲಿ. ಇದರ ಪ್ರಾಯೋಜಕತ್ವದಲ್ಲಿ ʼಕೊಂಕಣಿ ಸಾಹಿತ್ಯ ಸ್ಪರ್ಧೆʼ ಹೆಸರಿನಲ್ಲಿ ಕೊಂಕಣಿ ಕಾದಂಬರಿ ಹಾಗೂ ಕಿರು ನಾಟಕ ಬರೆಯುವ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು. ದೇಶದ ವಿವಿಧ ಕಡೆ ವಾಸವಿರುವ, ಕರ್ನಾಟಕ ಮೂಲದ ಕೊಂಕಣಿ ಜನರಿಗಾಗಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕೊಂಕಣಿ ಕಾದಂಬರಿ ಸ್ಪರ್ಧೆಯಲ್ಲಿ 5 ಕಾದಂಬರಿಗಳು ಹಾಗೂ ಕೊಂಕಣಿ ಕಿರು ನಾಟಕ ಬರೆಯುವ ಸ್ಪರ್ಧೆಯಲ್ಲಿ 3 ಕಿರು ನಾಟಕಗಳು ಸ್ಪರ್ಧೆಗೆ ಬಂದಿದ್ದವು. ಕಿರು ನಾಟಕ ಸ್ಪರ್ಧೆಯಲ್ಲಿ ಒಂದು ನಾಟಕವು ಈಗಾಗಲೇ ಪ್ರದರ್ಶನಗೊಂಡಿದ್ದರಿಂದ ಆ ನಾಟಕವನ್ನು ತಡೆಹಿಡಿಯಲಾಗಿದೆ.   ಸ್ಪರ್ಧಾ ವಿಜೇತರಿಗೆ ದಿನಾಂಕ 19 ಅಕ್ಟೋಬರ್ 2025ರಂದು ಬೆಳಿಗ್ಗೆ ಗಂಟೆ 10-30ಕ್ಕೆ ಹಂಪನ್‌ಕಟ್ಟೆಯ ಎಂ.ಸಿ.ಸಿ. ಬ್ಯಾಂಕ್‌ನ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು. ಕೊಂಕಣಿ  ಕಾದಂಬರಿ  ಸ್ಪರ್ಧಾ ವಿಜೇತರಿಗೆ   ಪ್ರಥಮ  ಬಹುಮಾನ ರೂ.25,000/-, ಸ್ಮರಣಿಕೆ ಹಾಗೂ ಪ್ರಮಾಣಪತ್ರ, ದ್ವಿತೀಯ ಬಹುಮಾನ ರೂ.15,000/- ಸ್ಮರಣಿಕೆ ಹಾಗೂ ಪ್ರಮಾಣಪತ್ರ, ತೃತೀಯ ಬಹುಮಾನ ರೂ.10,000/- ಸ್ಮರಣಿಕೆ ಹಾಗೂ ಪ್ರಮಾಣಪತ್ರವನ್ನು…

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಹಾಗೂ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದ ನವರಾತ್ರಿ ಕಾರ್ಯಕ್ರಮದ ಅಂಗವಾಗಿ ದಿನಾಂಕ 29 ಸೆಪ್ಟೆಂಬರ್ 2025ರಂದು ಬೊಳುವಾರು ಶ್ರೀ ಸುಬ್ರಹ್ಮಣ್ಯ ನಗರದ ಮೈದಾನದಲ್ಲಿ ತಾಳಮದ್ದಳೆ ‘ಶ್ರೀ ಕೃಷ್ಣ ರಾಯಭಾರ’ ಎಂಬ ಆಖ್ಯಾನದೊಂದಿಗೆ ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಎಲ್.ಎನ್. ಭಟ್ ಬಟ್ಯಮೂಲೆ, ಕುಸುಮಾಕರ ಆಚಾರ್ಯ ಹಳೇನೇರಂಕಿ, ಆನಂದ ಸವಣೂರು, ರಾಮಕೃಷ್ಣ ಭಟ್ ಗುಂಡ್ಯಡ್ಕ ಹಾಗೂ ಚೆಂಡೆ, ಮದ್ದಲೆಗಳಲ್ಲಿ ಶಂಕರನಾರಾಯಣ ಭಟ್ ಬಟ್ಯಮೂಲೆ, ಅಚ್ಯುತ ಪಾಂಗಣ್ಣಾಯ, ಮಾಸ್ಟರ್ ಪರೀಕ್ಷಿತ್, ಕುಮಾರಿ ಶರಣ್ಯ ನೆತ್ತರಕೆರೆ, ಮಾಸ್ಟರ್ ಅನೀಶ್ ಕೃಷ್ಣ ಪುಣಚ, ಮಾಸ್ಟರ್ ಆದಿತ್ಯ ಕೃಷ್ಣ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ, ಭಾಸ್ಕರ ಶೆಟ್ಟಿ ಸಾಲ್ಮರ ಮತ್ತು ಸುಬ್ಬಪ್ಪ ಕೈಕಂಬ (ಶ್ರೀ ಕೃಷ್ಣ), ದುಗ್ಗಪ್ಪ ನಡುಗಲ್ಲು ಮತ್ತು ಪ್ರೇಮಲತಾ ರಾವ್ (ವಿದುರ), ಮಾಂಬಾಡಿ ವೇಣುಗೋಪಾಲ ಭಟ್ (ಧರ್ಮರಾಯ), ಗುಡ್ಡಪ್ಪ ಬಲ್ಯ (ಕೌರವ), ಕಿಶೋರಿ ದುಗ್ಗಪ್ಪ…

Read More

ಬಂಟ್ವಾಳ : ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ರಾಜಾಂಗಣದಲ್ಲಿ ದಿನಾಂಕ 27 ಸೆಪ್ಟೆಂಬರ್ 2025ರಂದು ಯಕ್ಷಕಲಾ ಪೊಳಲಿ ಇದರ 30ನೇ ವರ್ಷದ ಪ್ರಯುಕ್ತ ತ್ರಿಂಶತ್ ಸಂಭ್ರಮದ ‘ಪೊಳಲಿ ಯಕ್ಷೋತ್ಸವ’ವು ಪ್ರಶಸ್ತಿ ಪ್ರದಾನ, ಗೌರವಾರ್ಪಣೆ, ಸಮ್ಮಾನ, ಸಂಸ್ಮರಣೆ ಹಾಗೂ ಯಕ್ಷಗಾನ ಪ್ರದರ್ಶನದೊಂದಿಗೆ ನಡೆಯಿತು. ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದಜಿ ಇವರು ಆಶೀರ್ವಚನ ನೀಡಿದರು. ಯಕ್ಷಕಲಾ ಪೋಷಕ, ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ಇವರಿಗೆ ‘ಪೊಳಲಿ ಯಕ್ಷೋತ್ಸವ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಹಿರಿಯ ಕಲಾವಿದರಾದ ಭಾಸ್ಕರ ರೈ ಕುಕ್ಕುವಳ್ಳಿ, ಮಾಂಬಾಡಿ ಸುಬ್ರಹ್ಮಣ್ಯ ಭಟ್, ಅಡೂರು ಲಕ್ಷ್ಮೀನಾರಾಯಣ ರಾವ್, ಕೊಳ್ತಿಗೆ ನಾರಾಯಣ ಗೌಡ, ಉಬರಡ್ಕ ಉಮೇಶ್ ಶೆಟ್ಟಿ, ಜಬ್ಬಾರ್ ಸಮೋ ಸಂಪಾಜೆ, ಡಾ. ವಸಂತಕುಮಾರ ಪೆರ್ಲ, ಶಿವರಾಮ ಪಣಂಬೂರು, ಗಿರೀಶ್ ಹೆಗ್ಡೆ ಪುತ್ತೂರು, ಜಗದಾಭಿರಾಮ ಸ್ವಾಮಿ ಪಡುಬಿದ್ರೆ, ನಾ. ಕಾರಂತ ಪೆರಾಜೆ, ನಗ್ರಿ ಮಹಾಬಲ ರೈ, ಮಹಾಬಲೇಶ್ವರ ಭಟ್ ಭಾಗಮಂಡಲ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ಮಂಗಳೂರಿನ…

Read More

ಮಂಗಳೂರು : ವಿಶ್ವ ಕೊಂಕಣಿ ಕೇಂದ್ರವು ‘ವರ್ಧನಿ’ ಮತ್ತು ‘ಸಾಧನಾ ಬಳಗ’ ಸಹಕಾರದೊಂದಿಗೆ ಆಯೋಜಿಸಿದ ‘ನಿನಾದ’ ಮೂರು ದಿವಸಗಳ ಉಚಿತ ಮಕ್ಕಳ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 27 ಸೆಪ್ಟೆಂಬರ್ 2025ರಂದು ವಿಶ್ವಕೊಂಕಣಿ ಕೇಂದ್ರದಲ್ಲಿ ಜರುಗಿತು. ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ಡಿ. ರಮೇಶ ನಾಯಕ್ ನೆರೆದ ಅತಿಥಿ ಗಣ್ಯರನ್ನು ಸ್ವಾಗತಿಸುತ್ತಾ “ಸಂಗೀತ, ನೃತ್ಯ, ಭಾವಗೀತೆ, ಭಕ್ತಿಗೀತೆ ಹಾಗೂ ವಿವಿಧ ಕೌಶಲ್ಯ ಕಲೆಗಳ ಅಭ್ಯಾಸದಿಂದ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಹಾಯಕವಾಗುದುದು. ಅಲ್ಲದೇ ಮಕ್ಕಳು ಶಿಬಿರದ ಉತ್ತಮ ಪ್ರಯೋಜನ ಪಡೆದು ಶಿಬಿರದಲ್ಲಿ ಕಲಿತ ವಿದ್ಯೆಯನ್ನು ಜೀವನದಲ್ಲಿ ಅಳವಡಿಸಬೇಕು” ಎಂದು ಕಿವಿಮಾತು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸ್.ಡಿ.ಎಂ. ಕಾಲೇಜ್ ಆಫ್ ಬಿಸ್ನೆಸ್ ಮ್ಯಾನೇಜ್ ಮೆಂಟ್ ಪ್ರಾಂಶುಪಾಲರಾದ ಪ್ರೊ. ಅರುಣಾ ಕಾಮತ್ ರವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ “ಈಗಿನ ತಂತ್ರಜ್ನಾನ ಯುಗದಲ್ಲಿ ಇಂತಹ ಚಟುವಟಿಕೆ ಆಧಾರಿತ ಶಿಬಿರವು ಮಕ್ಕಳಿಗೆ ಅತೀ ಅಗತ್ಯವಾಗಿದೆ. ಇದರಿಂದ ಮಕ್ಕಳ ಮನೋಸಾಮರ್ಥ್ಯ ಹೆಚ್ಚುವುದಲ್ಲದೇ ಮೊಬೈಲ್ ಬಳಕೆಯಿಂದ ದೂರವಿರಬಹುದೆಂದು ತಿಳಿಸುತ್ತಾ ಶಿಬಿರವನ್ನು…

Read More

ಬೆಂಗಳೂರು : ಬಿ.ಕೆ.ಎಫ್. ಪ್ರಸ್ತುತ ಪಡಿಸುವ 20ನೇ ‘ಧ್ವನಿ’ ಸಂಗೀತ ಕಾರ್ಯಕ್ರಮವನ್ನು ದಿನಾಂಕ 04 ಮತ್ತು 05 ಅಕ್ಟೋಬರ್ 2025ರಂದು ಬೆಂಗಳೂರು ಕೆ.ಆರ್. ರೋಡಿನಲ್ಲಿರುವ ಬೆಂಗಳೂರು ಗಾಯನ ಸಮಾಜದಲ್ಲಿ ಆಯೋಜಿಸಲಾಗಿದೆ. ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಹಿಂದೂಸ್ತಾನಿ ಸಂಗೀತ ಉತ್ಸವ -2025 ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ದಿನಾಂಕ 04 ಅಕ್ಟೋಬರ್ 2025ರಂದು ಸಂಜೆ 5-00 ಗಂಟೆಗೆ ವಿದುಷಿ ಆರತಿ ಅಂಕಲಿಕರ ಮತ್ತು ವಿದುಷಿ ಮಂಜೂಷ ಪಾಟೀಲ್ ಇವರ ಜುಗಲ್ ಬಂದಿ ಹಾಡುಗಾರಿಕೆಗೆ ಪಂಡಿತ್ ರವೀಂದ್ರ ಯವಾಗಲ್ ತಬಲಾ ಮತ್ತು ಪಂಡಿತ್ ವ್ಯಾಸಮೂರ್ತಿ ಕಟ್ಟಿ ಇವರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. ವಿದುಷಿ ಎನ್. ರಾಜಾಂ ಇವರಿಗೆ ‘ಬಿ.ಕೆ.ಎಫ್. ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಪ್ರಶಸ್ತಿಯನ್ನು ನೀಡಲಾಗುವುದು. 8-00 ಗಂಟೆಗೆ ವಿದುಷಿ ಎನ್. ರಾಜಾಂ, ವಿದುಷಿ ಸಂಗೀತ ಶಂಕರ್, ರಾಗಿಣಿ ಮತ್ತು ನಂದಿನಿ ಶಂಕರ್ ಇವರಿಂದ ‘ವಯೋಲಿನ್ ಟ್ರಿಯೋ’ಗೆ ಪಂಡಿತ್ ಶುಭ ಮಹಾರಾಜ್ ಮತ್ತು ಪಂಡಿತ್ ಅಭಿಷೇಕ್ ಮಿಶ್ರಾ ಇವರು ತಬಲಾದಲ್ಲಿ ಸಹಕರಿಸಲಿದ್ದಾರೆ. ದಿನಾಂಕ…

Read More

ಮಂಗಳೂರು : ಇದೇ ನವೆಂಬರ್ ತಿಂಗಳಿನಲ್ಲಿ 40ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ, ವಿಶ್ವದ ಪ್ರಮುಖ ಕೊಂಕಣಿ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ಇದರ ನೂತನ ಆಡಳಿತ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ದಿನಾಂಕ 28 ಸೆಪ್ಟೆಂಬರ್ 2025ರಂದು ನಡೆದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆಗೊಂಡ ಸದಸ್ಯರು ನಂತರ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು. ಸಾಂಸ್ಕೃತಿಕ ಮುಖಂಡ, ಹಲವಾರು ಬೃಹತ್ ಕಾರ್ಯಕ್ರಮಗಳ ರೂವಾರಿ ಹಾಗೂ ಮಂಗಳೂರಿನ ಪ್ರಸಿದ್ಧ ಉದ್ಯಮಿ ಲುವಿಸ್ ಜೆ. ಪಿಂಟೊ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಕಾರ್ಯದರ್ಶಿಯಾಗಿ ಕವಿ ರೊನಾಲ್ಡ್ ಕ್ರಾಸ್ತಾ ಮತ್ತು ಖಜಾಂಚಿಯಾಗಿ ಗಾಯಕ ಸುನಿಲ್ ಮೊಂತೆರೊ ಕಾರ್ಯ ನಿರ್ವಹಿಸಲಿದ್ದಾರೆ. ಇತರೆ ಪದಾಧಿಕಾರಿಗಳ ಹೆಸರುಗಳು ಇಂತಿವೆ: ಸಂಘಟಕ – ಸ್ಟ್ಯಾನಿ ಆಲ್ವಾರಿಸ್, ಉಪಾಧ್ಯಕ್ಷ -ನವೀನ್ ಲೋಬೊ, ಜತೆ ಕಾರ್ಯದರ್ಶಿ – ಕಿಶೋರ್ ಫೆರ್ನಾಂಡಿಸ್, ಸಾರ್ವಜನಿಕ ಸಂಪರ್ಕಾಧಿಕಾರಿ – ವಿಕ್ಟರ್ ಮತಾಯಸ್, ನಾಟಕ -ಅರುಣ್ ರಾಜ್ ರೊಡ್ರಿಗಸ್, ನಾಚ್ ಸೊಭಾಣ್ – ರಾಹುಲ್ ಪಿಂಟೊ, ಸುಮೇಳ್ – ರೈನಾ ಸಿಕ್ವೇರಾ ಹಾಗೂ ಸದಸ್ಯರಾಗಿ ಕೇರನ್ಮಾಡ್ತಾ, ಎಲ್ರೊನ್ ರೊಡ್ರಿಗಸ್,…

Read More

ಬೆಂಗಳೂರು : ಅನ್ವೇಷಣೆ ಸಾಂಸ್ಕೃತಿಕ ಅಕಾಡೆಮಿ (ರಿ) ಇದರ ವತಿಯಿಂದ ನೀಡುವ ‘ರಂಗಭೂಮಿ ರತ್ನ ರಾಜ್ಯೋತ್ಸವ ಪ್ರಶಸ್ತಿ’ಗೆ ಬಾಗಲಕೋಟೆಯ ಡಾ. ಮಹಂತೇಶ್ ಬಸಪ್ಪ ಇವರು ಆಯ್ಕೆಯಾಗಿದ್ದಾರೆ. ಇವರು ರಂಗಭೂಮಿ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಘೋಷಿಸಿದೆ. ದಿನಾಂಕ 30 ನವೆಂಬರ್ 2025ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

Read More