Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ‘ಸೀತಾ ಪರಿತ್ಯಾಗ’ ತಾಳಮದ್ದಳೆ ಕಾರ್ಯಕ್ರಮವನ್ನು ದಿನಾಂಕ 02 ನವೆಂಬರ್ 2025ರಂದು ಮಧ್ಯಾಹ್ನ 3-30 ಗಂಟೆಗೆ ಬೆಂಗಳೂರಿನ ನಾಗರಭಾವಿ ಇಲ್ಲಿರುವ ಕೆ.ಆರ್.ಇ.ಡಿ.ಎಲ್. ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ. ಜಗದೀಶ ಹೊಸಬಾಳೆ ಮತ್ತು ವಿನಾಯಕ ವಾಜಗದ್ದೆ ಇವರು ಸಂಯೋಜನೆ ಮಾಡಿದ್ದು, ಹಿಮ್ಮೇಳದಲ್ಲಿ ಕೇಶವ ಹೆಡಗೆ ಕೊಳಗಿ ಮತ್ತು ಎ.ಪಿ. ಫಾಟಕ್ ಕಾರ್ಕಳ ಹಾಗೂ ಮುಮ್ಮೇಳದಲ್ಲಿ ಸರ್ಪಂಗಳ ಈಶ್ವರ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ವಾಸುದೇವ ರಂಗಾ ಭಟ್ ಮಧೂರು ಮತ್ತು ವಿ. ಗಣಪತಿ ಭಟ್ ಸಂಕದಗುಂಡಿ ಇವರುಗಳು ಸಹಕರಿಸಲಿದ್ದಾರೆ.
ಬೆಂಗಳೂರು : ರಂಗಪಯಣ (ರಿ.) ಇದರ ವತಿಯಿಂದ ‘ರಂಗಪಯಣ ನಾಟಕೋತ್ಸವ -2025’ವನ್ನು ದಿನಾಂಕ 03 ನವೆಂಬರ್ 2025ರಿಂದ 07 ನವೆಂಬರ್ 2025ರವರೆಗೆ ಪ್ರತಿದಿನ ಸಂಜೆ 6-00 ಗಂಟೆಗೆ ಬೆಂಗಳೂರಿನ ಮಲ್ಲತ್ತಳ್ಳಿ ಸಮುಚ್ಚಯ ಭವನ ಕಲಾಗ್ರಾಮದಲ್ಲಿ ಆಯೋಜಿಸಲಾಗಿದೆ. ದಿನಾಂಕ 03 ನವೆಂಬರ್ 2025ರಂದು ಉದ್ಘಾಟನಾ ಸಮಾರಂಭದ ಬಳಿಕ ರಾಜ್ ಗುರು ಇವರ ವಿನ್ಯಾಸ, ಸಂಗೀತ ಮತ್ತು ನಿರ್ದೇಶನದಲ್ಲಿ ‘ಹೆಸರೆ ಇಲ್ಲದವರು’, ದಿನಾಂಕ 04 ನವೆಂಬರ್ 2025ರಂದು ‘ಬದುಕು ಕಳಿಸಿದ ಬೇಂದ್ರೆ’ ದ.ರಾ. ಬೇಂದ್ರೆ ಅವರ ರಚನೆಯ ಹಾಡುಗಳ ಹಬ್ಬ ಮತ್ತು ರಾಜ್ ಗುರು ಇವರ ವಿನ್ಯಾಸ, ಸಂಗೀತ ಮತ್ತು ನಿರ್ದೇಶನದಲ್ಲಿ ‘ಭೂಮಿ’, ದಿನಾಂಕ 05 ನವೆಂಬರ್ 2025ರಂದು ಕುವೆಂಪು ಅವರ ರಚನೆಯ ಹಾಡುಗಳ ಗುಚ್ಛ ‘ಪುಟ್ಟಪ್ಪನ ಪದ್ಯಗಳು’ ಮತ್ತು ಮೈಮ್ ರಮೇಶ್ ರಂಗಾಯಣ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮೈಸೂರಿನ ಜಿ.ಪಿ.ಐ.ಇ.ಆರ್. ರಂಗತಂಡ ಅಭಿನಯಿಸುವ ಆಂಟನ್ ಚೆಕಾವ್ ರ ‘ವಾರ್ಡ್ ನಂ 6’, ದಿನಾಂಕ 06 ನವೆಂಬರ್ 2025ರಂದು ಆದಿಮೂಲ ರಂಗ ತಂಡದಿಂದ…
ಬೆಂಗಳೂರು : ಕಲ್ಪತರು ಸಾಹಿತ್ಯ ಕಲಾ ಟ್ರಸ್ಟ್ ಬೆಂಗಳೂರು ಮತ್ತು ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ (ರಿ.) ಕಮತಗಿ ಇವರ ಸಹಕಾರದೊಂದಿಗೆ ‘ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ’ವನ್ನು ದಿನಾಂಕ 02 ನವೆಂಬರ್ 2025 ಭಾನುವಾರ ಮಧ್ಯಾಹ್ನ 2-30 ಗಂಟೆಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕವಿಗೋಷ್ಠಿ ಗಾಯನ, ಭರತನಾಟ್ಯ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ನಿರ್ದೇಶಕರಾದ ಡಾ. ಸತೀಶ್ ಕುಮಾರ್ ಎಸ್. ಹೊಸಮನಿ ಇವರು ವಹಿಸಲಿದ್ದು, ಖ್ಯಾತ ವಿಮರ್ಶಕರಾದ ಡಾ. ಬೈರಮಂಗಲ ರಾಮೇಗೌಡ ಇವರು ಉದ್ಘಾಟನೆ ಮಾಡಲಿದ್ದಾರೆ. ಸಾಹಿತಿ ಶೈಲೇಶ್ ಕಾಕೋಳು ಇವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಆರ್. ಅಂಬುಜಾಕ್ಷಿ ಬಿರೇಶ್, ಜಕ್ಕೂರು ನಾಗರಾಜು, ರುದ್ರಪ್ಪ ಮತ್ತು ಜಯಕುಮಾರ್ ಇವರಿಂದ ಗಾಯನ ಹಾಗೂ ಶ್ರೀಮತಿ ರಮ್ಯಾ ಚಲುವಮೂರ್ತಿ ಇವರ ಶ್ರೀ ರಾಗ ಭೈರವ ನೃತ್ಯ ಕೇಂದ್ರದ ಹಾಗೂ ವಿದುಷಿ ಚೈತ್ರ ವೆಂಕಟೇಶ್ ಇವರ ಆನಂದ ನರ್ತನ ಕಲಾ ಶಾಲೆಯ…
ಮಂಗಳೂರು: ‘ರಂಗ ಚಾವಡಿ’ ಮಂಗಳೂರು ಸಾಹಿತ್ಯಕ ಸಾಂಸ್ಕೃ ತಿಕ ಸಂಘಟನೆ ಮತ್ತು ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಶನ್ ಸುರತ್ಕಲ್ ಆಶ್ರಯದಲ್ಲಿ ರಂಗು ರಂಗಿನ ರಂಗೋತ್ಸವ, ರಂಗಚಾವಡಿ ಬೆಳ್ಳಿಹಬ್ಬದ ಸಂಭ್ರಮ ದಿನಾಂಕ 09 ನವೆಂಬರ್ 2025ರಂದು ಸಂಜೆ ಘಂಟೆ 4.30ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಲಿದೆ. ಸಮಾರಂಭದಲ್ಲಿ 2025ರ ಸಾಲಿನ ರಂಗಚಾವಡಿ ಪ್ರಶಸ್ತಿಗೆ ಆಯ್ಕೆಯಾಗಿರುವ ಕುಸೇಲ್ದರಸೆ ನವೀನ್ ಡಿ. ಪಡೀಲ್ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ವಿ. ಕೆ. ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಕೆ. ಅಜಿತ್ಕುಮಾರ್ ರೈ ಮಾಲಾಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಪ್ರಮುಖರಾದ ಡಾ. ಸಂಜೀವ ದಂಡೆಕೇರಿ, ಅನಿಲ್ ಶೆಟ್ಟಿ ತೇವು ಸೂರಿಂಜೆ, ಗಿರೀಶ್ ಎಂ. ಶೆಟ್ಟಿ ಕಟೀಲು, ಕಿಶೋರ್ ಡಿ. ಶೆಟ್ಟಿ, ಭವಾನಿ ಶಂಕರ್ ಡಿ. ಶೆಟ್ಟಿ, ಚಂದ್ರಶೇಖರ ಮಾಡ ಕುದ್ರಾಡಿಗುತ್ತು, ವೇಣುಗೋಪಾಲ್ ಶೆಟ್ಟಿ,…
ಸಾಣೇಹಳ್ಳಿ : ಶ್ರೀ ಶಿವಕುಮಾರ ಕಲಾಸಂಘ ಸಾಣೇಹಳ್ಳಿ, ದೆಹಲಿಯ ಸಂಸ್ಕೃತಿ ಸಚಿವಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ತರಳಬಾಳು ಶಾಖಾಮಠ ಸಾಣೇಹಳ್ಳಿಯ ಶ್ರೀ ಶಿವಕುಮಾರ ಬಯಲು ರಂಗಮಂದಿರದಲ್ಲಿ ‘ರಾಷ್ಟ್ರೀಯ ನಾಟಕೋತ್ಸವ’ವನ್ನು ದಿನಾಂಕ 02ರಿಂದ 07 ನವೆಂಬರ್ 2025ರವರೆಗೆ ಆಯೋಜಿಸಲಾಗಿದೆ. ಕನ್ನಡ ರಾಜ್ಯೋತ್ಸವ, ವಿಚಾರ ಮಾಲಿಕೆ, ವಿಚಾರ ಸಂಕಿರಣ, ವಚನಗೀತೆ, ನೃತ್ಯ ರೂಪಕ, ಕೃತಿಗಳ ಲೋಕಾರ್ಪಣೆ, ಉಪನ್ಯಾಸ, ಆಶೀರ್ವಚನ, ನಾಟಕ ಪ್ರದರ್ಶನ, ಶ್ರೀ ಶಿವಕುಮಾರ ಪ್ರಶಸ್ತಿ ಪ್ರದಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ದಿನಾಂಕ 02 ನವೆಂಬರ್ 2025ರಂದು ಸಂಜೆ 6-00 ಗಂಟೆಗೆ ರಾಜ್ಯ ಸಚಿವರಾದ ವಿ. ಸೋಮಣ್ಣ ಇವರಿಂದ ರಾಷ್ಟ್ರೀಯ ನಾಟಕೋತ್ಸವ, ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಇವರಿಂದ ಶಿವಸಂಚಾರ ನಾಟಕ ಮತ್ತು ಚಲನಚಿತ್ರ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಇವರಿಂದ ಕನ್ನಡ ರಾಜ್ಯೋತ್ಸವದ ಉದ್ಘಾಟನೆ ನಡೆಯಲಿದೆ. ‘ಶಿವಸಂಚಾರ -25ರ ಕೈಪಿಡಿ’, ‘ಕಾಯಕ ಕಲೆಯಾದಾಗ’, ‘ಅಂತರಂಗದ ಬೆಳಕು’ ಕೃತಿಗಳ ಲೋಕಾರ್ಪಣೆ, ಶ್ರೀ…
ಬೆಂಗಳೂರು : ಸ್ಪಷ್ಟ ಥಿಯೇಟರ್ ಪ್ರಸ್ತುತ ಪಡಿಸುವ ಗಗನ್ ಪ್ರಸಾದ್ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಆಷಾಢದ ಒಂದು ದಿನ’ ನಾಟಕ ಪ್ರದರ್ಶನವನ್ನು ದಿನಾಂಕ 01 ನವೆಂಬರ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರು ಬಸವನಗುಡಿ ಎನ್.ಆರ್. ಕಾಲೋನಿಯಲ್ಲಿರುವ ಡಾ. ಸಿ. ಅಶ್ವಥ್ ಕಲಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಡಾ. ಬೇಲೂರು ರಘುನಂದನ್ ಸಂಗೀತ ಸಾಹಿತ್ಯ ನೀಡಿದ್ದು, ಶರತ್ ಮಂಜಿತ್ತಾಯ ಸಂಗೀತ ನಿರ್ದೇಶನ ಹಾಗೂ ಭರತಾಂಜಲಿ ನಾಟ್ಯ ಶಾಲೆಯ ವಿ. ಭುವನ ಪ್ರಸಾದ್ ನೃತ್ಯ ಸಂಯೋಜನೆ ಮಾಡಿರುತ್ತಾರೆ.
ಬೆಂಗಳೂರು : ‘ಥೇಮಾ’ ಥಿಯೇಟರ್ ಅರ್ಪಿಸುವ ಕಾರ್ಯಕ್ರಮ ‘ನಾಟಕ ಓದು’ ಶಿವಕುಮಾರ್ ಮಾವಲಿಯವರ ಹೊಚ್ಚ ಹೊಸ ಕನ್ನಡ ನಾಟಕ ‘ಪ್ರೈವೆಸಿ ಸೆಟ್ಟಿಂಗ್ಸ್’ ದಿನಾಂಕ 02 ನವೆಂಬರ್ 2025ರಂದು ಸಂಜೆ 6-00 ಗಂಟೆಗೆ ವಿಜಯನಗರ ಬಿಂಬದ ಸರಳಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9845734967 ಸಂಖ್ಯೆಯನ್ನು ಸಂಪರ್ಕಿಸಿರಿ.
ಪೆರಿಯ : ಬೇಕಲ್ನ ಗೋಕುಲಂ ಗೋಶಾಲೆಯಲ್ಲಿ ನಡೆಯುತ್ತಿರುವ ಐದನೇ ದೀಪಾವಳಿ ಸಂಗೀತ ಉತ್ಸವದ ಸಮಾರೋಪ ಸಮಾರಂಭವು ದಿನಾಂಕ 01 ನವೆಂಬರ್ 2025ರಂದು ಜರುಗಲಿದೆ. ಬೆಳಿಗ್ಗೆ, ಎಲ್ಲಾ ಸಂಗೀತಗಾರರು ಸಂಗೀತ ಜಗತ್ತಿನ ಮೂವರು ಶ್ರೇಷ್ಠರಾದ ತ್ಯಾಗರಾಜ ಸ್ವಾಮಿ, ಮುತ್ತು ಸ್ವಾಮಿ ದೀಕ್ಷಿತರ್ ಮತ್ತು ಶ್ಯಾಮ ಶಾಸ್ತ್ರಿ ಇವರ ಸ್ಮರಣಾರ್ಥ ಮೂರು ಸಂಯೋಜನೆಗಳನ್ನು ಹಾಡಲಿದ್ದಾರೆ, ನಂತರ ವೈಷ್ಣವಿ ಆನಂದ್, ಕಲಾಂಬಿಕಾ ಸಹೋದರಿಯರು ಮತ್ತು ಮೂಜಿಕುಲಂ ಹರಿಕೃಷ್ಣನ್ ಮತ್ತು ರಾಘವ್ ಕೃಷ್ಣನ್ ಇವರಿಂದ ಮ್ಯಾಂಡೋಲಿನ್ ನುಡಿಸುವ ಸಂಗೀತ ಕಚೇರಿ ನಡೆಯಲಿದೆ. ಸಂಗೀತೋತ್ಸವದ ಸಮಾರೋಪ ದಿನದಂದು, ಗೋಶಾಲೆಯ ನಂದಿ ಮಂಟಪದಲ್ಲಿ ಖ್ಯಾತ ನೃತ್ಯಗಾರ್ತಿ ಪದ್ಮವಿಭೂಷಣ ಡಾ. ಪದ್ಮಾ ಸುಬ್ರಹ್ಮಣ್ಯಂ ಇವರ ಭರತನಾಟ್ಯ ಪ್ರದರ್ಶನಗೊಳ್ಳಲಿದೆ. ಡೋಲು ಮಾಂತ್ರಿಕ ಶಿವಮಣಿ ‘ಶಿವ ತರಂಗಂ’ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಸರಣಿ ಪ್ರಶಸ್ತಿಯನ್ನು ಇಂದು ಪ್ರದಾನ ಮಾಡಲಾಗುತ್ತಿದ್ದು, ಈ ವರ್ಷದ ಗೋಶಾಲ ಪರಂಪರಾ ‘ವಿಭೂಷಣ’ ಪ್ರಶಸ್ತಿ ಟಿ.ವಿ. ಗೋಪಾಲಕೃಷ್ಣನ್ ಇವರಿಗೆ, ಪರಂಪರಾ ‘ಶ್ರೀ’ ಪ್ರಶಸ್ತಿ ಡ್ರಮ್ ಶಿವಮಣಿ ಇವರಿಗೆ, ಪರಂಪರಾ ‘ಗುರುರತ್ನ’ ಪ್ರಶಸ್ತಿ ಅನಂತ…
ಮಂಗಳೂರು : ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ವಿಶ್ವ ಕೊಂಕಣಿ ವಾರ್ಷಿಕ ಪುರಸ್ಕಾರ ಪ್ರದಾನ ಸಮಾರಂಭವು ದಿನಾಂಕ 1 ನವೆಂಬರ್ 2025ರಂದು ನಡೆಯಲಿದೆ. ಸಮಾತಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸುವ ಕೇರಳ ರಾಜ್ಯ ಉಚ್ಚ ನ್ಯಾಯಾಲಯದ ಜಸ್ಟಿಸ್ ನಗರೇಶ ಇವರು ಪುರಸ್ಕಾರ ಪ್ರದಾನ ಮಾಡಲಿದ್ದು, ಮಹಾ ಪೋಷಕ ಶ್ರೀ ಟಿ. ವಿ. ಮೋಹನದಾಸ ಪೈ ಆಶಯ ಭಾಷಣ ನೀಡಲಿದ್ದಾರೆ. ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಿದ ಹಿರಿಯರನ್ನು ಗೌರವಿಸಲು ಸ್ಥಾಪಿಸಲಾದ ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ಧಿ ಸಮ್ಮಾನ ಪ್ರಶಸ್ತಿಯು ಹಿರಿಯ ಕೊಂಕಣಿ ಸಾಹಿತಿ, ಹೋರಾಟಗಾರ ಶ್ರೀ ಪುಂಡಳೀಕ ಎನ್.ನಾಯಕ್ ಇವರ ಅಪಾರ ಕೊಡುಗೆಯನ್ನು ಪರಿಗಣಿಸಿ ಪ್ರದಾನ ಮಾಡಲಾಗುವುದು. ಈ ರ್ಷದ ಅತ್ಯುತ್ತಮ ಕೊಂಕಣಿ ಕವಿತಾ ಕೃತಿಗೆ ನೀಡಲಾಗುವ ಶ್ರೀಮತಿ ವಿಮಲಾ ವಿ. ಪೈವಿಶ್ವ ಕೊಂಕಣಿ ಕವಿತಾ ಕೃತಿ ಪುರಸ್ಕಾರ-೨೦೨೫ ಕೊಂಕಣಿ ಕವಿ ಶಶಿಕಾಂತ ಪೂನಾಜಿ ಇವರ “ಗುಠೆಣಿ” ಯೆಂಬ ಕವಿತಾ ಕೃತಿಗೆ ನೀಡಲಾಗುವುದು.…
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಸಮಿತಿಯಿಂದ ವಿನೂತನ ಕಾರ್ಯಕ್ರಮ ‘ಮಾಸದ ಸಂವಾದ ಸರಣಿ’ ಕಾರ್ಯಕ್ರಮದ ಮೊದಲ ಎಸಳು ದಿನಾಂಕ 29 ಅಕ್ಟೋಬರ್ 2025ರಂದು ಶಾರದಾ ಕಾಲೇಜಿನಲ್ಲಿ ನಡೆಯಿತು. ಕ.ಸಾ.ಪ. ಮಂಗಳೂರು ತಾಲೂಕು ಸಮಿತಿಯ ಪದಾಧಿಕಾರಿಯಾದ, ದಕ್ಷಿಣ ಕನ್ನಡದ ಸಾಂಸ್ಕೃತಿಕ ಜಗತ್ತಿಗೆ ಚಿರಪರಿಚಿತೆ, ಶಿಕ್ಷಕಿ, ‘ರೂವಾರಿ’ ಅಂತರ್ಜಾಲ ಪತ್ರಿಕೆಯ ನಿರ್ದೇಶಕಿ, ಸಾಧಕಿ ಶ್ರೀಮತಿ ರತ್ನಾವತಿ ಜೆ. ಬೈಕಾಡಿಯವರೊಂದಿಗೆ ಸಂವಾದವನ್ನು ಏರ್ಪಡಿಸಲಾಗಿತ್ತು. ಅವರ ಸಾಧಕ ಜೀವನ ಗಾಥೆಯ ಅನಾವರಣವನ್ನು ಪರಿಷತ್ತಿನ ಮಹಿಳಾ ಪ್ರತಿನಿಧಿ ಡಾ. ಮೀನಾಕ್ಷಿ ರಾಮಚಂದ್ರ ಮಾಡಿಕೊಟ್ಟರು. ರತ್ನಾವತಿಯವರ ಬದುಕಿಗೆ ಪೂರ್ಣ ಅರ್ಥವನ್ನು ನೀಡಿ ಶೈಕ್ಷಣಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಬೆಳೆಸಿದ ಅವರ ಪತಿ ಜನಾರ್ದನ ಬೈಕಾಡಿಯವರ ನಿಸ್ಪೃಹ ಬದುಕಿನ ಪರಿಚಯವನ್ನೂ ನೀಡಿ, ಓರ್ವ ಸಾಧಕ ಪುರುಷನ ಹಿಂದೆ ಓರ್ವ ಮಹಿಳೆ ಇರುತ್ತಾಳೆ. ಆದರೆ ಇಲ್ಲಿ ರತ್ನಾವತಿಯವರಂತಹ ಸಾಧಕಿ ಮಹಿಳೆಯ ಹಿಂದೆ ಇದ್ದವರು ಅವರ ಪತಿ ಶ್ರೀ ಜನಾರ್ದನ ಬೈಕಾಡಿಯವರು. ಅವರಿಬ್ಬರ ದಾಂಪತ್ಯವೆಂದರೆ ಬಹಳ ಅಪರೂಪವೆನಿಸಿದ…