Author: roovari

ಬೆಂಗಳೂರು: ಸ್ಪಷ್ಟ ಥಿಯೇಟರ್ ಪ್ರಸ್ತುತಪಡಿಸುವ ಗಿರೀಶ್ ಕಾರ್ನಾಡ್ ರವರ ‘ರಾಕ್ಷಸ ತಂಗಡಿ’ ನಾಟಕ ಪ್ರದರ್ಶನವು ನಿರ್ದೇಶಕ ಗಗನ್ ಪ್ರಸಾದ್ ರವರ ನಿರ್ದೇಶನದಲ್ಲಿ ದಿನಾಂಕ 13-05-2023 ರಂದು ಬೆಂಗಳೂರಿನ ಕಲಾಗ್ರಾಮದಲ್ಲಿ ಹಾಗೂ 17-06-2023 ರಂದು ರವೀಂದ್ರ ಕಲಾ ಕ್ಷೇತ್ರ ದಲ್ಲಿ ಪ್ರದರ್ಶನಗೊಳ್ಳಲಿದೆ ರಾಕ್ಷಸ ತಂಗಡಿ 1565 ರಲ್ಲಿ ಬಹಮನಿ ಸಾಮ್ರಾಜ್ಯದ ಡೆಕ್ಕನ್ ಸುಲ್ತಾನರು ಮತ್ತು ವಿಜಯನಗರ ಸಾಮ್ರಾಜ್ಯದ ನಡುವಿನ ‘ರಾಕ್ಷಸ ತಂಗಡಿ’ ಯುದ್ಧವನ್ನು ಸೆರೆಹಿಡಿಯುತ್ತದೆ. ಇದು ಭಾರತದ ರಾಜಕೀಯ ಮತ್ತು ಸಾಂಸ್ಕೃತಿಕ ನಕ್ಷೆಯ ಮೇಲೆ ಪ್ರಭಾವ ಬೀರಿತು. ಈಗಿನ ಬಿಜಾಪುರದಲ್ಲಿ ರಕ್ಕಸಗಿ ಮತ್ತು ತಂಗಡಗಿ ಎಂಬ ಎರಡು ಪ್ರದೇಶಗಳಲ್ಲಿ ಈ ಯುದ್ಧ ಪ್ರಾರಂಭವಾಯಿತು ಎಂದು ಇತಿಹಾಸ ಹೇಳುತ್ತದೆ. ಕೃಷ್ಣಾ ನದಿಯನ್ನು ಕೆಂಪು ಬಣ್ಣಕ್ಕೆ ತಿರುಗಿಸಿ ಹಂಪಿಯ ಸ್ಮಾರಕಗಳನ್ನು ಕೆಡವಿದ ನಂತರ ಈ ಯುದ್ಧವನ್ನು ಮರುಪರಿಶೀಲಿಸಿದಾಗ, ಕೈಗೊಂಬೆ ರಾಜ ಮತ್ತು ವಿಜಯನಗರದ ಶಾಸಕ ಅಳಿಯ ರಾಮರಾಯನ ಸಹೋದರರು ಅಸಹಾಯಕರಾಗಿ ಕಾಣುತ್ತಿದ್ದರೆ – ವಿಜಯನಗರವು ದ್ವಂಸಗೊಂಡಿದ್ದನ್ನು ನೋಡಬಹುದು ಮತ್ತು ಇದು ದೊರೆಗಳ ಗಗನಕ್ಕೇರುವ ಮಹತ್ವಾಕಾಂಕ್ಷೆಯ ನಡುವೆ;…

Read More

ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಸಂಯೋಜಿಸಿ ಪ್ರಕಟಿಸಿದ “ನೂರಾರು ಕತೆಗಳು” ಕಥಾ ಸಂಕಲನದ ಕುರಿತು ಕನ್ನಡದ ಪ್ರಸಿದ್ಧ ಸಾಹಿತಿ,ವಿಮರ್ಶಕರಾದ ಡಾ.ಪಾರ್ವತಿ ಜಿ.ಐತಾಳ್ ಬರೆದ ವಿಮರ್ಶೆ ಇಲ್ಲಿದೆ… ಕೃತಿಯ ಹೆಸರು : ನೂರಾರು ಕತೆಗಳು ಸಂಪಾದಕರು : ಮರವಂತೆ ನಾಗರಾಜ ಹೆಬ್ಬಾರ್, ಪೂರ್ಣಿಮಾ ಜನಾರ್ದನ್, ರಾಜೇಶ್ ಭಟ್ ಪಣಿಯಾಡಿ ಪ್: ಎಸ್.ಎಲ್.ಎನ್. ಪಬ್ಲಿಕೇಷನ್ಸ್ ಬೆಂಗಳೂರು ಪ್ರ.ವರ್ಷ : 2022 ಪುಟಗಳು : 260 ಬೆಲೆ : ರೂ. 270 ಉಡುಪಿಯ ಪ್ರತಿಷ್ಠಿತ ಸಾಂಸ್ಕ್ರತಿಕ ಸಂಘಟನೆ ಸಂಸ್ಕೃತಿ ವಿಶ್ವ ಪ್ರತಿಷ್ಠಾನವು ಪ್ರಕಟಿಸಿ, ಇತ್ತೀಚೆಗೆ ಓದುಗರ ಕೈಸೇರಿದ ೧೧೭ ಮಿನಿ ಕಥೆಗಳ ಸಂಕಲನ ‘ನೂರಾರು ಕತೆಗಳು’. ಕೊರೋನಾ ಮಹಾಮಾರಿಯು ಮನುಷ್ಯ ಮನಸ್ಸುಗಳಿಗೆ ಮಂಕು ಬಡಿಸಿ, ಸಾವಿನ ಅಟ್ಟಹಾಸವು ಮಿತಿ ಮೀರಿ ಮನುಷ್ಯರನ್ನು ಕಂಗೆಡಿಸಿದ ಕಾಲದಲ್ಲಿ ಸಂಘಟನೆಯ ರೂವಾರಿಗಳು ಹಾಕಿಕೊಂಡ ಯೋಜನೆ ಇದು. ಹೊರಗೆಲ್ಲೂ ಸ್ವಚ್ಛಂದವಾಗಿ ಹೋಗಲಾರದೆ ಮನೆಗಳೊಳಗೆ ಬಂಧಿತರಾದ ಮಂದಿ ಒಂದಷ್ಟು ಕ್ರಿಯಾಶೀಲರಾಗಿ ಓದು ಮತ್ತು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸುವಂತಾಗಲಿ ಎಂಬ ಸದುದ್ದೇಶದಿಂದ ಹುಟ್ಟು ಹಾಕಿದ…

Read More

ಎಡನೀರು: ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ (ರಿ.) ಎಡನೀರು’ ಸಂಸ್ಥೆಯ ನೇತೃತ್ವದಲ್ಲಿ ಎಡನೀರಿನಲ್ಲಿ ಐದು ದಿನಗಳ ಕನ್ನಡ ಸಂಸ್ಕೃತಿ ಶಿಬಿರ ಯಶಸ್ವಿಯಾಗಿ ದಿನಾಂಕ 06-05-2023 ರಂದು ಸಮಾರೋಪ ಗೊಂಡಿತು. ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರ ಅಮೃತ ಹಸ್ತದಿಂದ ಶ್ರೀಮತಿ ಅನುಪಮಾ ರಾಘವೇಂದ್ರರ ‘ಗಾಲಿ ಕುರ್ಚಿಯಲಿ ಜೀವನ ಚಕ್ರ’ ಕೃತಿ ಬಿಡುಗಡೆಯೊಂದಿಗೆ ಸಮಾರೋಪ ಸಮಾರಂಭ ನಡೆಯಿತು. ಸಾಹಿತಿ ಶ್ರೀಮತಿ ರಾಜಶ್ರೀ ರೈ ಕೃತಿ ಪರಿಚಯ ಮಾಡಿ ರಾಘವೇಂದ್ರ ಭಟ್ ಉಡುಪುಮೂಲೆ ಕಾರ್ಯಕ್ರಮ ನಿರೂಪಿಸಿದರು.ಎಪ್ಪತ್ತೈದು ಮಕ್ಕಳು ಹಾಗೂ ಅವರ ಪೋಷಕರು ಉಪಸ್ಥಿತಿ ಯಲ್ಲಿ ನಡೆದ ಈ ಕಾರ್ಯಕ್ರಮವು ಶಿಬಿರಗೀತೆಯೊಂದಿಗೆ ಸಂಪನ್ನಗೊಂಡಿತು.

Read More

ಒಂದು ಹಗಲ ‘ಬೆಳೆಸಿರಿ’ : ಲಲಿತಕಲೆಗಳ ಸಂಗಮ ಆಡಳಿತ ರೀತಿ , ಶಿಕ್ಷಣ ನೀತಿ , ಹಾಗೂ ಮತೀಯ ಒತ್ತಡಗಳು ಭಾರತೀಯ ಕಲೆಗಳನ್ನು ಹ್ರಾಸಗೊಳಿಸುತ್ತ ಬಂದಿವೆ . ಕುಣಿಯುವ ಹಾಡುವ ಸ್ವಾತಂತ್ರ್ಯ ಲಕ್ಷಾಂತರ ವರ್ಷಗಳಿಂದ ಮನರಂಜನೆಯನ್ನೂ ಆರೋಗ್ಯವನ್ನೂ ಕೊಡುತ್ತ ಬಂದಿದ್ದು ಸಹಜವಾಗಿಯೇ ಅಳವಟ್ಟಿರುವಾಗ ಅದೆಲ್ಲ ಈಗ ಅಗತ್ಯ ಇಲ್ಲವೆಂಬ ವಾದವೂ ಹೆಚ್ಚಾಗುತ್ತಿದೆ . ಸಾಮಾಜಿಕ ಜಾಲ ತಾಣಗಳ ಮೂಲಕ ಅತ್ಯುತ್ತಮಗಳನ್ನು ಆಸ್ವಾದಿಸುವುದು ವೈಯಕ್ತಿಕ . ಹಾಗೇ ಸಾರ್ವಜನಿಕದಲ್ಲಿ ಈ ಕಲೆಗಳನ್ನು ಒಪ್ಪಿ ಸ್ವೀಕರಿಸಿ ದೈಹಿಕ ಮಾನಸಿಕ ಆರೋಗ್ಯ ಸಂಪಾದಿಸುವುದು ಸಾಧ್ಯವೆ ? ಎಂಬ ಚಿಂತನೆ ಮೊನ್ನೆ ಮೇ ತಿಂಗಳ ಏಳನೇ ತಾರೀಕಿನಂದು ನಡೆದದ್ದು ಬಾಯಿಕಟ್ಟೆಯ ಅಯ್ಯಪ್ಪ ಮಂದಿರದ ವಠಾರದಲ್ಲಿ . ಜಿಲ್ಲಾ ಕನ್ನಡ ಲೇಖಕರ ಸಂಘ ಕಾಸರಗೋಡು , ತಪಸ್ಯ ಕಲಾಸಾಹಿತ್ಯ ವೇದಿಕೆ ಹಾಗೂ ಬೆಂಗಳೂರಿನ ಶಂ ಪಾ ಪ್ರತಿಷ್ಠಾನಗಳು “ಬೆಳೆಸಿರಿ” ಅಂಕಿತದಲ್ಲಿ ಈ ಕಾರ್ಯಕ್ರಮವನ್ನು ದಿನಾಂಕ 7-05-2023 ರಂದು ನಿರ್ವಹಿಸಿದುವು . ಪ್ರತಿಭಾವಂತ ಮಕ್ಕಳು ಭಾಗವಹಿಸಿದರು . ಭರತನಾಟ್ಯ ,…

Read More

ಅದು ಇಂಜಿನಿಯರುಗಳು ಆಡಿದ ನಾಟಕ. ರಾಜ್ಯದ ವಿವಿಧೆಡೆಯಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ಇಂಜಿನಿಯರುಗಳೇ ಪ್ರದರ್ಶಿಸಿದ ನಾಟಕವದು. ರಂಗಾಸಕ್ತರು ಕಲೆಯೊಂದಿಗೆ ಜೀವಿಸುವ ಆಶಯದೊಂದಿಗೆ 2018ರಲ್ಲಿ ಕಟ್ಟಿಕೊಂಡಿದ್ದೇ ‘ಕಲಾವಿಲಾಸಿ’ ತಂಡ. ಕನ್ನಡ ಕಲಾ ರಂಗದ ಶ್ರೀಮಂತಿಕೆಗೆ ಪೂರಕವಾಗುವಂತೆ ಕನ್ನಡತನವನ್ನು ಬಿಂಬಿಸುವ ಕೆಲಸ ಮಾಡುವ ಗುರಿ ಕಲಾವಿಲಾಸಿ ತಂಡದ್ದು. ಈಗಾಗಲೇ ‘ಮಾನಸಪುತ್ರ’ ಹಾಗೂ’ ಚಿಗರಿಗಂಗಳ ಚೆಲುವೆ’ ನಾಟಕಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿರುವ ಈ ತಂಡದ ಹೊಸ ನಾಟಕ ಚಂಪಾ (ಚಂದ್ರಶೇಖರ ಪಾಟೀಲ) ಅವರ ಮೂರು ನಾಟಕಗಳನ್ನು ಸೇರಿಸಿ ‘ಅಸಂಗತಗಳು’ ಎಂಬ ಶೀರ್ಷಿಕೆಯೊಂದಿಗೆ ರಂಗಕ್ಕೆ ತಂದಿದ್ದು ಗಮನಾರ್ಹ. ಜೊತೆಗೆ ಚಂಪಾ ಅವರ ಅಸಂಗತ ನಾಟಕಗಳನ್ನು ಮತ್ತೆ ಪ್ರದರ್ಶಿಸಿದ್ದು ಅಭಿನಂದನೀಯ (ಈ ನಾಟಕ ಬೆಂಗಳೂರಿನ ಹನುಮಂತನಗರದ ಕೆ.ಎಚ್‌. ಕಲಾಸೌಧದಲ್ಲಿ ಎಪ್ರಿಲ್ 23ರಂದು ಪ್ರದರ್ಶನ ಕಂಡಿತು). 1967-680 ಚಂಪಾ ಅವರು ರಚಿಸಿದ ಈ ನಾಟಕಗಳ ಕುರಿತು ಅವರು ಹೇಳಿದ್ದು ಹೀಗೆ- “ಯಾವುದೋ ಒಂದು ಸಾಹಿತ್ಯದ ಪ್ರಕಾರ ಎಂದೂ ‘ಮುಗಿದುಹೋದ ಅಧ್ಯಾಯ’ ಆಗುವುದಿಲ್ಲ. ನವೋದಯ, ನವ್ಯ, ಪ್ರಗತಿಶೀಲ, ಅಸಂಗತ, ಬಂಡಾಯ ಇವುಗಳೆಲ್ಲವೂ ಮತ್ತೆ…

Read More

ತುಮಕೂರು : ತುಮಕೂರು ತಾಲ್ಲೂಕಿನ ಮೆಳೇಹಳ್ಳಿಯ ಡಮರುಗ ರಂಗ ಸಂಪನ್ಮೂಲ ಕೇಂದ್ರವು ಆಯೋಜಿಸಿದ್ದ 18ನೇ ವರ್ಷದ ಚಿಣ್ಣರ ಬಣ್ಣದ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 06-05-2023ನೇ ಶನಿವಾರ ವಿ. ರಾಮಮೂರ್ತಿ ರಂಗಸ್ಥಳದಲ್ಲಿ ನೆರವೇರಿತು. ಅತಿಥಿಯಾಗಿ ಭಾಗವಹಿಸಿದ ಜಿ.ಎಂ.ಹೆಚ್.ಪಿ.ಎಸ್. ಕೋರಾ ಇದರ ಮುಖ್ಯ ಶಿಕ್ಷಕರಾದ ಶ್ರೀ ಮಧುಸೂಧನ್ ರಾವ್ ಮಾತನಾಡುತ್ತಾ “ಶಾಲೆಯಲ್ಲಿ ಒಂದು ವರ್ಷ ಪೂರ್ತಿ ಮಾಡಲಾಗದ ಕಾರ್ಯವನ್ನು ಒಂದು ತಿಂಗಳ ಶಿಬಿರ ಮಾಡಿ ಬಿಡುತ್ತದೆ. ಇದು ಉತ್ಪ್ರೇಕ್ಷೆಯಲ್ಲ. ನನ್ನ ಶಾಲೆಯ ಮಕ್ಕಳು ಶಿಬಿರದಲ್ಲಿದ್ದಾರೆ ಅವರ ಬದಲಾವಣೆಯನ್ನು ಕಂಡು ನಾನು ಹೇಳುತ್ತಿದ್ದೇನೆ. ಮಕ್ಕಳು ಬಹುಮುಖಿಯಾಗಿ ವಿಕಾಸಗೊಳ್ಳಲು ಇಂತಹ ಶಿಬಿರಗಳು ಬೇಕು” ಎಂದು ಅಭಿಪ್ರಾಯಪಟ್ಟರು. ಸಮಾರಂಭದಲ್ಲಿ ಸಾಹಿತಿಗಳಾದ ಪ್ರಕಾಶ್ ನಾಡಿಗ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧಕ್ಷರಾದ ಸಿದ್ದರಾಮಯ್ಯ, ನಿವೃತ್ತ ಪ್ರಾಂಶುಪಾಲರಾದ ಕುಮಾರಸ್ವಾಮಿ ಹಾಗೂ ತುಮಕೂರಿನ ಉಪನಿರ್ದೇಶಕ ಕಚೇರಿಯ ಡಿ.ವೈ.ಎಸ್.ಪಿ. ರಂಗಧಾಮಯ್ಯ ಉಪಸ್ಥಿತರಿದ್ದರು. ನಂತರ ಸುಮಾರು ಐವತ್ತು ಮಕ್ಕಳು ಮೆಳೇಹಳ್ಳಿ ದೇವರಾಜ್ ನಿರ್ದೇಶನದಲ್ಲಿ ಕುವೆಂಪುರವರ ‘ನನ್ನ ಗೋಪಾಲ’ ನಾಟಕ ಪ್ರಯೋಗಿಸಿದರು. ಕಾಡಿನ ಸೌಂದರ್ಯ, ಪ್ರಾಣಿ-ಪಕ್ಷಿಗಳ…

Read More

ಬೆಂಗಳೂರು: ಸ್ಪಿನಿಂಗ್ ಟ್ರೀ ಥಿಯೇಟರ್ ಕಂಪನಿ ಪ್ರಸ್ತುತ ಪಡಿಸುವ ಶಕೀಲ್ ಅಹ್ಮದ ನಿರ್ದೇಶನದ ‘ಅನಾಮಿಕನ ಸಾವು’ ನಾಟಕದ ಪ್ರದರ್ಶನವು ಇದೇ ಬರುವ ದಿನಾಂಕ 11-05-2023ರಂದು ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್ ನಲ್ಲಿ ನಡೆಯಲಿದೆ. ನಾಟಕದ ಆಶಯ ಒಂದು ಕಾಗದ, ಒಂದು ಗುರುತಿನ ಚೀಟಿ, ನಮ್ಮ ಇರುವಿಕೆಯನ್ನೇ ನಿರ್ಧರಿಸುವಂತಾದರೆ? ನಮ್ಮ ಅಸ್ತಿತ್ವವನ್ನೇ ಅಲುಗಾಡಿಸುವಂತಾದರೆ? ಹಾಗಾಗಿದ್ದಲ್ಲಿ, ನಾವು ಹುಟ್ಟಿದ್ದು-ಬೆಳೆದದ್ದು-ಬದುಕಿದ್ದು ಸುಳ್ಳೆ? ನಮ್ಮ ನರಗಳಲ್ಲಿ ಹರಿಯುವ ರಕ್ತ ಸುಳ್ಳೆ? ನಮ್ಮ ಸಾಕಿಸಲುಹಿದ ಈ ನೆಲ ಸುಳ್ಳೆ? ಹೀಗೆಯೇ, ಹುಟ್ಟಿದ ನೆಲದಿಂದಲೇ ನೆಲೆ ಕಳೆದುಕೊಳ್ಳಬೇಕಾಗಿ ಬಂದಾಗ, ತನ್ನ ಅಸ್ತಿತ್ವಕ್ಕಾಗಿ ಒದ್ದಾಡುವವನ ಕಥೆ ಇದು. ತಮ್ಮ ಹೆಸರು ಮತ್ತು ಬದುಕೆಂಬ ಎರಡು ದಂಡೆಯ ನಡುವಿರುವ ಅಸ್ತಿತ್ವವೆಂಬ ತೂಗುಯ್ಯಾಲೆಯಲ್ಲಿ ತಮ್ಮನ್ನು ತಾವು ಹುಡುಕುತ್ತಿರುವವರ, ನೆಲೆ ಕಾಣಬಯಸುವವರ ಕಥೆ ಅಥೊಲ್ ಫುಗಾರ್ಡ ದಕ್ಷಿಣ ಆಫ್ರಿಕಾದ ನಟ ಮತ್ತು ನಿರ್ದೇಶಕರಾದ ಅಥೊಲ್ ಫುಗಾರ್ಡ ಅವರು ತಮ್ಮದೇ ಆದ ವಿಶಿಷ್ಟ ನಾಟಕೀಯ ಅಭಿವ್ಯಕ್ತಿಯಿಂದಾಗಿ ಪ್ರಪಂಚದಾದ್ಯಂತ ಹೆಸರುವಾಸಿಯಾದ ನಾಟಕಕಾರರೂ ಹೌದು. ರಂಗಭೂಮಿಯನ್ನು ಪ್ರತಿರೋಧದ ಮಾಧ್ಯಮವಾಗಿ ಬಳಸಿಕೊಂಡ ಫುಗಾರ್ಡ…

Read More

ಮಂಗಳೂರು: “ಜನರಲ್ಲಿ ಕಲಾಭಿರುಚಿ ಬೆಳೆಸಬೇಕಿದೆ” – ಚೇತನಾ ದತ್ತಾತ್ರೇಯ ಪ್ರಚಲಿತ ವಿದ್ಯಮಾನದಲ್ಲಿ ಮಾನವೀಯ ಸಂಸ್ಕೃತಿಕ ಮೌಲ್ಯಗಳು ಕುಸಿಯುತ್ತಿರುವ ಈ ಸಂದರ್ಭದಲ್ಲಿ ಜನರಲ್ಲಿ ಅಭಿರುಚಿ ಕಲಾಸಕ್ತಿ ಬೆಳೆಸುವ ಕಾರ್ಯಕ್ರಮಗಳು ಹೆಚ್ಚಾಗಬೇಕಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ)ಬೆಂಗಳೂರು ಇದರ ರಾಜ್ಯ ಸಹ ಸಂಚಾಲಕಿ ಚೇತನ ದತ್ತಾತ್ರೇಯ ಅಭಿಪ್ರಾಯ ಪಟ್ಟರು ಅವರು ಇತ್ತೀಚೆಗೆ ಭರತಾಂಜಲಿ ಕೊಟ್ಟಾರ ಮಂಗಳೂರು ಇವರು ವಿಪ್ರವೇದಿಕೆ (ರಿ)ಕೊಟ್ಟಾರ ಇವರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಬೆನಕ ಸಭಾಭವನ ಕೋಡಿಕಲ್ ಇಲ್ಲಿ ಹಮ್ಮಿಕೊಂಡಿರುವ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ ಕಾಸರಗೋಡು ಇವರ ಬೊಂಬೆಯಾಟ ಪ್ರದರ್ಶನವನ್ನು ಉದ್ಘಾಟಿಸಿದರು. ಮನುಷ್ಯ ಇಂದು ಒತ್ತಡದ ನಡುವೆ ಬದುಕುವಂತಾಗಿದೆ ಬದುಕಿನ ಜಂಜಾಟದಲ್ಲಿ ಸಂಬಂಧ ಮೌಲ್ಯಗಳು ದೂರವಾಗುತ್ತಿವೆ. ಕಳಚುತ್ತಿರುವ ಸಂಬಂಧಗಳ ಕೊಂಡಿಯನ್ನು ಭಾರತೀಯ ಪುರಾತನ ಲಲಿತ ಕಲೆಗಳಿಂದ ಬೆಳೆಸಲು ಸಾಧ್ಯವಿದೆ. ಯಕ್ಷಗಾನ ಬೊಂಬೆ ಆಟವು ಇಂದು ಅಳಿವಿನ ಅಂಚಿನಲ್ಲಿದೆ ಇಂತಹ ಸಾಧಕ ಕಲೆಯನ್ನು ಪ್ರೋತ್ಸಾಹಿಸಬೇಕಾದ್ದು ಪ್ರತಿಯೊಬ್ಬರ ಕರ್ತವ್ಯ ಎಂದರು. ತನ್ನ…

Read More

ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಉಡುಪಿ ತಾಲೂಕು ಘಟಕ ಹಾಗೂ ಎಂಜಿಎಂ ಕಾಲೇಜು ಉಡುಪಿ ಸಹಕಾರದೊಂದಿಗೆ ಮೇ 8 ಸೋಮವಾರದಂದು ಎಂಜಿಎಂ ಕಾಲೇಜಿನಲ್ಲಿ ಪುಳಿಮಾರು ಎಂ. ಕೃಷ್ಣ ಶೆಟ್ಟಿ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಶ್ರೀ ಕೆ .ಜಯಪ್ರಕಾಶ್ ರಾವ್ ಉಪನ್ಯಾಸ ನೀಡುತ್ತಾ “ವ್ಯಕ್ತಿಯಲ್ಲಿರುವ ಶಕ್ತಿಯನ್ನು ಗುರುತಿಸುವ ಕೆಲಸ ಮಾಡಬೇಕೆಂದು ಅಬ್ದುಲ್ ಕಲಾಂ ಯಾವಾಗಲೂ ಹೇಳುತ್ತಿದ್ದರು. ಅವರೊಂದಿಗಿನ ಏಳು ವರ್ಷದ ಒಡನಾಟಗಳನ್ನು ನೆನಪಿಸಿಕೊಳ್ಳುತ್ತಾ ರಾಕೆಟ್ ತಂತ್ರಜ್ಞಾನದ ಮೇರು ವ್ಯಕ್ತಿ ಕಲಾಂ, ಅತ್ಯಂತ ಸರಳ ವ್ಯಕ್ತಿತ್ವದ ಅವರು ಹೊಸ ತಂತ್ರಜ್ಞಾನಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಸರಳ ಜೀವನವನ್ನು ನಡೆಸುತ್ತಾ ನಮಗೆಲ್ಲರಿಗೂ ಮಾದರಿಯಾಗಿದ್ದರು” ಎಂದರು. ಕಾಲೇಜು ಪ್ರಾಂಶುಪಾಲ ಲಕ್ಷ್ಮೀನಾರಾಯಣ ಕಾರಂತ್ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಯನ್ನಾಡಿದರು. ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಪುಳಿಮಾರು ಎಂ. ಕೃಷ್ಣ ಶೆಟ್ಟಿ ಸ್ಮಾರಕ ದತ್ತಿ ದಾನಿಗಳಾದ ಭವಾನಿ ವಿ. ಶೆಟ್ಟಿ,…

Read More

ಉಡುಪಿ : ರಾಗ ಧನ ಉಡುಪಿ (ರಿ.) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ‘ರಾಗರತ್ನಮಾಲಿಕೆ -12’ನೆಯ ಗೃಹ ಸಂಗೀತ ಕಛೇರಿ ಉಡುಪಿಯ ಶ್ರೀ ಕೆ. ದಿನೇಶ್ ಅಮ್ಮಣ್ಣಾಯ ಇವರ ಆತಿಥ್ಯ ಹಾಗೂ ಸಹ ಪ್ರಯೋಜಕತ್ವದಲ್ಲಿ ದಿನಾಂಕ 12-05-2023ರಂದು ಸಂಜೆ 4-30ಕ್ಕೆ ಅವರ ಸ್ವಗೃಹ ‘ಉಷಾ ನಿಲಯ’ದಲ್ಲಿ ನಡೆಯಲಿದೆ. ಮೈಸೂರಿನ ಶ್ರೀ ಎ. ಚಂದನ ಕುಮಾರ್ ಕೊಳಲು ವಾದನದಲ್ಲಿ, ಮತ್ತೂರು ಶ್ರೀನಿಧಿ ವಯೊಲಿನ್ ನಲ್ಲಿ, ಮೃದಂಗದಲ್ಲಿ ಶ್ರೀ ಅನಿರುದ್ಧ್ ಎಸ್. ಭಟ್ ಹಾಗೂ ಶ್ರೀ ಸುನಾದ ಆನೂರು ಖಂಜೀರದಲ್ಲಿ ಈ ಕಛೇರಿಯನ್ನು ನಡೆಸಿಕೊಡಲಿರುವರು. ಶ್ರೀಮತಿ ಮತ್ತು ಶ್ರೀ ದಿನೇಶ್ ಅಮ್ಮಣ್ಣಾಯ ಈ ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸ್ವಾಗತ ಬಯಸಿದ್ದಾರೆ.

Read More