Author: roovari

ವಿಮರ್ಶಕರ ಬಗ್ಗೆ: ಡಾ. ರವಿಶಂಕರ ಜಿ.ಕೆ. ಡಾ.ರವಿಶಂಕರ ಜಿ.ಕೆ. ಪುತ್ತೂರು ತಾಲೂಕಿನ ಪಾಣಾಜೆಯವರಾಗಿದ್ದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು(ಸ್ವಾಯತ್ತ) ಇಲ್ಲಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ‘ಕನ್ನಡ ಸಾಹಿತ್ಯದಲ್ಲಿ ಪ್ರಾಣಿರೂಪಕಗಳು: ಅನ್ಯತೆಯ ಅನುಸಂಧಾನ’ ಎಂಬ ವಿಷಯದಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಹೆಚ್.ಡಿ. ಪದವಿಯನ್ನು ಪಡೆದಿರುವ ಇವರು ‘ಹವಿಗನ್ನಡದ ಅನನ್ಯ ಸಾಹಿತಿ ಡಾ.ಹರಿಕೃಷ್ಣ ಭರಣ್ಯ’, ‘ಅಂತಾರಾಷ್ಟ್ರೀಯ ಕೃಷಿ-ಅರ್ಥಶಾಸ್ತ್ರಜ್ಞ ಡಾ.ವಿಘ್ನೇಶ್ವರ ವರ್ಮುಡಿ’ ಕೃತಿಗಳನ್ನು ಬರೆದಿದ್ದಾರೆ. ಚಿಂತನ ಬಯಲು, ಅಭಿಜಾತ ಕನ್ನಡ, ವಿಶ್ವವಾಣಿ, ವಿಜಯಕರ್ನಾಟಕ, ಉದಯವಾಣಿ, ಸುಧಾ, ಮಂಗಳ, ಕಸ್ತೂರಿ, ಹಸಿರುವಾಸಿ, ಕಾರವಲ್‌ ಮುಂತಾದ ಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ವಾಸುದೇವ ನಾಡಿಗ್‌ ಕನ್ನಡ ಕಾವ್ಯ ಕ್ಷೇತ್ರಕ್ಕೆ ಚಿರಪರಿಚಿತವಾದ ಹೆಸರು. ʼವೃಷಭಾಚಲದ ಕನಸುʼ ಕವನ ಸಂಕಲನದ ಮೂಲಕ ಕಾವ್ಯ ಕೃಷಿ ಆರಂಭಿಸಿದ ವಾಸುದೇವ ನಾಡಿಗರು ʼಹೊಸ್ತಿಲು ಹಿಮಾಲಯದ ಮಧ್ಯೆʼ ʼಭವದ ಹಕ್ಕಿʼ ʼವಿರಕ್ತರ ಬಟ್ಟೆಗಳುʼ, ʼನಿನ್ನ ಧ್ಯಾನದ ಹಣತೆʼ, ʼಅಲೆ ತಾಕಿದರೆ ದಡʼ, ʼಅವನ ಕರವಸ್ತ್ರʼ ಮುಂತಾದ ಕವನಸಂಕಲನಗಳ ಮೂಲಕ ಗುರುತಿಸಿಕೊಂಡಿದ್ದಾರೆ.…

Read More

06 ಏಪ್ರಿಲ್ 2023, ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಆಸಕ್ತ ಕಥೆಗಾರರಿಗೆ ಸಣ್ಣ ಕತೆಗಳನ್ನು ಬರೆದು ಕಳಿಸಲು ಆಹ್ವಾನಿಸಿತ್ತು. ಸುಮಾರು 400ಕ್ಕೂ ಹೆಚ್ಚು ಸಣ್ಣ ಕಥೆಗಳು ಬಂದಿದ್ದು, ಇದರಲ್ಲಿ ಮೊದಲ ಹಂತದಲ್ಲಿ 117 ಕಥೆಗಳನ್ನು ಆಯ್ಕೆ ಮಾಡಲಾಗಿದೆ. ಇದೀಗ ‘ನೂರಾರು ಲೇಖಕರ ನೂರಾರು ಕಥೆಗಳು’ ಎಂಬ ಕಥಾ ಸಂಕಲನ ಸಿದ್ಧವಾಗಿದೆ. ದಿನಾಂಕ 08-04-2023 ಶನಿವಾರ ಸಂಜೆ 5:00ಕ್ಕೆ ಸರಿಯಾಗಿ ಉಡುಪಿಯ ಪವನ್ ರೂಫ್ ಟಾಪ್ ಕಿದಿಯೂರು ಹೋಟೆಲ್ ನಲ್ಲಿ ಪ್ರಸಿದ್ಧ ಕಾದಂಬರಿಕಾರರು, ಸಾಹಿತಿಯಾದ ಗಿರೀಶ್ ರಾವ್ ಹತ್ತಾರ್ (ಜೋಗಿ) ಅವರು ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಇದರ ಗೌರವಾಧ್ಯಕ್ಷರಾದ ಉಡುಪಿ ವಿಶ್ವನಾಥ ಶೆಣೈಯವರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಪತ್ರಕರ್ತ ವಸಂತ ಗಿಳಿಯಾರುರವರು ಪುಸ್ತಕ ಪರಿಚಯ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುರೇಂದ್ರ ನಾಯಕ್ ಲೆಕ್ಕ ಪರಿಶೋಧಕರು, ಉಡುಪಿ ಮತ್ತು ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಅಧ್ಯಕ್ಷರಾದ ಪ್ರೊ. ಶಂಕರ್ ಇವರು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಮೊದಲು ಕಿರು ಪ್ರಹಸನವಿರುತ್ತದೆ.

Read More

06 ಏಪ್ರಿಲ್ 2023, ಪೆರ್ಲ: ಶಿವಾಂಜಲಿ ಕಲಾಕೇಂದ್ರ (ರಿ.) ಪೆರ್ಲ ಇದರ ನಿರ್ದೇಶಕಿ ವಿದುಷಿ ಕಾವ್ಯಾ ಭಟ್ ಇವರು ಏಪ್ರಿಲ್ 8 ಮತ್ತು 9ರಂದು ಎರಡು ದಿನಗಳ “ಭರತನಾಟ್ಯಂ ಕಾರ್ಯಾಗಾರ”ವನ್ನು ಅನ್ನಪೂರ್ಣ ಹಾಲ್, ಶ್ರೀ ದುರ್ಗಪರಮೇಶ್ವರಿ (ಉಳ್ಳಾಲ್ತಿ) ವಿಷ್ಣುಮೂರ್ತಿ ಕ್ಷೇತ್ರ, ಇಡಿಯಡ್ಕ, ಪೆರ್ಲದಲ್ಲಿ ಹಮ್ಮಿಕೊಂಡಿದ್ದಾರೆ. ನಾಟ್ಯಾರಾಧನಾ ಕಲಾಕೇಂದ್ರ ಉರ್ವದ ನಿರ್ದೇಶಕಿ ವಿದುಷಿ ಶ್ರೀಮತಿ ಸುಮಂಗಲಾ ರತ್ನಾಕರ್ ರಾವ್ ಇವರು ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ನೀಡಲಿದ್ದಾರೆ. ಇವರದೇ ಪರಿಕಲ್ಪನೆ, ರಚನೆ, ನೃತ್ಯ ಸಂಯೋಜನೆ ನಿರ್ದೇಶನದಲ್ಲಿ ವಿದ್ಯಾರ್ಥಿಗಳು ‘ಜತಿಸ್ವರ’, ‘ಪದ’ ಮತ್ತು ‘ಜಾವಳಿ’ಗಳ ತರಬೇತಿ ಪಡೆಯುತ್ತಿದ್ದಾರೆ. ವಿದುಷಿ ಸುಮಂಗಲಾ ರತ್ನಾಕರ್ ಇವರು ತಮ್ಮ ಏಳರ ಎಳವೆಯಿಂದಲೇ ಭರತನಾಟ್ಯಕ್ಕೆ ಪಾದಾರ್ಪಣೆ ಮಾಡಿ 40 ವರ್ಷಗಳಿಂದ ಈ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಇವರ ನಿರ್ದೇಶನದಲ್ಲಿ ನಡೆಯುವ ಮಂಗಳೂರಿನ ಉರ್ವದ ನಾಟ್ಯಾರಾಧನಾ ಕಲಾಕೇಂದ್ರ ಈಗ 30ನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಸಂಭ್ರಮದಲ್ಲಿದೆ. ನೃತ್ಯದಲ್ಲಿ ವಿದ್ವತ್ ಪದವಿಯನ್ನು ಪಡೆದ ಇವರು ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ಯಕ್ಷಗಾನ, ತಾಳಮದ್ದಲೆಯಲ್ಲಿ ನುರಿತ ಇವರು…

Read More

06 ಏಪ್ರಿಲ್ 2023, ಪುತ್ತೂರು: ಸನಾತನ ಸಂಪ್ರದಾಯದಲ್ಲಿ, ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಶ್ರೀರಾಮನು ಅಯೋಧ್ಯೆಯಲ್ಲಿ ಜನಿಸಿದನು ಎಂಬುದು ಹಿಂದೂ ಧರ್ಮದ ನಂಬಿಕೆ. ಈ ದಿನ ಶ್ರೀರಾಮನಿಗೆ ವಿಶೇಷವಾದ ಪೂಜೆ ಮತ್ತು ವೃತಗಳು ನಡೆಯುತ್ತವೆ. ರಾಮನವಮಿಯಂದು ವಿಶೇಷವಾಗಿ ದ್ವಾರಕ ಪ್ರತಿಷ್ಠಾನದ ವತಿಯಿಂದ ಪುತ್ತೂರು ಶ್ರೀ ಮೂಕಾಂಬಿಕಾ ಕಲ್ಬರಲ್ ಅಕಾಡೆಮಿಯ ನೃತ್ಯ ನಿರ್ದೇಶಕ ವಿದ್ವಾನ್ ದೀಪಕ್ ಕುಮಾರ್ ಮತ್ತು ಅವರ ಪತ್ನಿ ವಿದುಷಿ ಪ್ರೀತಿಕಲಾ ಅವರಿಂದ “ಸಂಪೂರ್ಣ ರಾಮಾಯಣ” ನೃತ್ಯ ರೂಪಕ ಕಾರ್ಯಕ್ರಮ ಮುಕ್ರಂಪಾಡಿ ಗೋಕುಲ ಬಡಾವಣೆಯ ‘ನಂದಗೋಕುಲ’ ವೇದಿಕೆಯಲ್ಲಿ ದಿನಾಂಕ 30-03-2023ರಂದು ನಡೆಯಿತು. ದ್ವಾರಕ ಪ್ರತಿಷ್ಠಾನದ ಶ್ರೀ ಗೋಪಾಲಕೃಷ್ಣ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಗೋಪಾಲಕೃಷ್ಣ ಭಟ್ ಇವರ ಮಾತೃಶ್ರೀ ಹಿರಿಯರಾದ ಲಕ್ಷ್ಮೀಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರತಿಷ್ಠಾನದಿಂದ ಅದ್ವಿತ್ ಕಲ್ಲೂರಾಯ ರಾಮನವಮಿಯ ಕುರಿತು ಮಾತನಾಡಿದರು. ಶ್ರೀ ಮೂಕಾಂಬಿಕಾ ಕಲ್ಬರಲ್ ಅಕಾಡೆಮಿಯ ಹಿರಿಯ ವಿದ್ಯಾರ್ಥಿನಿ ಅಪೂರ್ವ ಗೌರಿ ನೃತ್ಯ ಗುರುಗಳನ್ನು ಪರಿಚಯಿಸಿದರು. ಡಾ. ಸದಾಶಿವ ಭಟ್ ಪೆರ್ಲ ಮತ್ತು ಡಾ.ಪ್ರತಿಭಾ ಕಲ್ಲೂರಾಯ ನೃತ್ಯ…

Read More

06 ಏಪ್ರಿಲ್ 2023, ಮಂಗಳೂರು: ಸುರತ್ಕಲ್ ಗೋವಿಂದದಾಸ ಕಾಲೇಜು ವತಿಯಿಂದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ತೆಂಕು ತಿಟ್ಟು ಮತ್ತು ಬಡಗು ತಿಟ್ಟು ಯಕ್ಷಗಾನ ಸ್ಪರ್ಧೆ ‘ಯಕ್ಷಯಾನ 2023’. ಕಾರ್ಯಕ್ರಮ ಏಪ್ರಿಲ್ 7ರಿಂದ 10ರವರೆಗೆ ಕಾಲೇಜಿನ ಎಚ್.ಜಿ.ಕೆ. ರಾವ್ ರಂಗ ಮಂದಿರದ ಯಕ್ಷ ಕೇಸರಿ ಅಗರಿ ರಘುರಾಮ ಭಾಗವತ ವೇದಿಕೆಯಲ್ಲಿ ನಡೆಯಲಿದೆ ಎಂದು ಕಾಲೇಜಿನ ಪ್ರಿನ್ಸಿಪಾಲ್ ಪ್ರೊ.ಕೃಷ್ಣಮೂರ್ತಿ ಹೇಳಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಏಪ್ರಿಲ್ 7ರಂದು ಬೆಳಗ್ಗೆ 9ಕ್ಕೆ ಹಿಂದೂ ವಿದ್ಯಾದಾಯಿನಿ ಸಂಘದ ಅಧ್ಯಕ್ಷ ಜಯಚಂದ್ರ ಹತ್ವಾರ್ ಎಚ್‌. ಅಧ್ಯಕ್ಷತೆ ವಹಿಸಲಿದ್ದಾರೆ. ಸುರತ್ಕಲ್‌ನ ಇಡ್ಯಾ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಐ. ರಮಾನಂದ ಭಟ್‌ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಉದ್ಯಮಿ ಅಗರಿ ವೈ.ವಿ. ರತ್ನಾಕರ ರಾವ್, ಗೋವಿಂದ ದಾಸ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ.ರಮೇಶ್ ಕುಳಾಯಿ, ಪ್ರಿನ್ಸಿಪಾಲ್ ಲಕ್ಷ್ಮೀ ಪಿ., ಕಾಲೇಜಿನ ಅಲ್ಯುಮ್ನಿ ಅಸೋಸಿಯೇಶನ್ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ ಎಂದರು. ಏಪ್ರಿಲ್ 10ರಂದು ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಹಿಂದೂ…

Read More

06 ಏಪ್ರಿಲ್ 2023, ಬ್ರಹ್ಮಾವರ: ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಇದರ 3ನೇ ದಿನದ ರಂಗೋತ್ಸವದಲ್ಲಿ ಹುಬಾಶಿಕ ಕೊರಗರ ಯುವ ಕಲಾವೇದಿಕೆ (ರಿ.) ಬಾರ್ಕೂರು ಇವರಿಂದ ಡೋಲು ವಾದನ-ಕುಣಿತ ಕಲಾಪ್ರಕಾರ ಸೋಮವಾರ 03-04-2023ರಂದು ಪ್ರದರ್ಶನಗೊಂಡಿತು. ನಂತರ ಅತಿಥಿಯಾಗಿ ರಥಬೀದಿ ಗೆಳೆಯರು ಉಡುಪಿ ಇದರ ನಾಟಕ ವಿಭಾಗದ ಸಂಚಾಲಕರಾದ ಸಂತೋಶ್ ಶೆಟ್ಟಿ ಹಿರಿಯಡ್ಕ ಜೊತೆಗಿದ್ದು ಮಾತನಾಡಿ ಬದುಕಿನ ಸತ್ಯವನ್ನ ಅನಾವರಣಗೊಳಿಸುವಲ್ಲಿ ರಂಗಭೂಮಿ ಯಾವತ್ತೂ ಪ್ರಭುತ್ವದ ವಿರೋಧಿ ಎಂದರು. ರಂಗಭೂಮಿಯ ಆಶಯಗಳಿಗೆ ಬದ್ಧವಾಗಿ ಕೆಲಸ ಮಾಡುವ ತಂಡಗಳಲ್ಲಿ ಮಂದಾರವೂ ಒಂದು ಎಂದು ಶ್ಲಾಘಿಸಿದರು.ಇದೇ ವೇಳೆ ಮಂದಾರ (ರಿ.)ದ ತಂಡದ ‘ಕೊಳ್ಳಿ’ ನಾಟಕಕ್ಕೆ ಸಂಗೀತ ನೀಡಿ ಪ್ರಶಸ್ತಿ ತಂದುಕೊಟ್ಟಿದ್ದಕ್ಕೆ ಹಾಗೂ ಸದಾ ಮಂದಾರದ ಜೊತೆಯಾಗಿದ್ದಕ್ಕೆ ಶ್ರೀ ವಾಸುದೇವ ಗಂಗೇರ ಇವರಿಗೆ ಮಂದಾರದ ಪರವಾಗಿ ರಂಗ ಗೌರವ ಸಲ್ಲಿಸಲಾಯಿತು. ತದನಂತರ ಮಂದಾರ ತಂಡವೇ ಅಭಿನಯಿಸಿದ ರೋಹಿತ್ ಎಸ್. ಬೈಕಾಡಿ ನಿರ್ದೇಶನದ ‘ದೂತ ಘಟೋತ್ಕಚ’ ನಾಟಕ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

Read More

06 ಏಪ್ರಿಲ್ 2023, ಮಂಗಳೂರು: ತುಳುವ ಸಿರಿ ಟ್ರಸ್ಟ್ (ರಿ.) ಕುಡ್ಲ ಮತ್ತು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನ ಕುತ್ತಾರು ಇವರ ಸಹಯೋಗದಲ್ಲಿ “ತುಳು ಹರಿಕಥಾ ಉಚ್ಚಯ -2023” ಏಪ್ರಿಲ್ 7 ರಿಂದ 11 ತಾರೀಕಿನವರೆಗೆ 5 ದಿನಗಳ ಕಾಲ ಕುತ್ತಾರು ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ. ತಾ. 07-04-2023 ಶುಕ್ರವಾರ ಸಂಜೆ ಗಂಟೆ 7-30 ಕ್ಕೆ ಶ್ರೀ ರಾಮಕೃಷ್ಣ ಪ್ರೌಢ ಶಾಲೆ ಹರೇಕಳದ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಕೆ. ರವೀಂದ್ರ ರೈ ಕಲ್ಲಿಮಾರ್ ಇವರಿಂದ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಮೂಕಾಂಬಿಕಾ ಕನ್ ಸ್ಟ್ರಕ್ಷನ್ ನ ಮಾಲಕರಾದ ಶ್ರೀ ಹರಿದಾಸ ಮಾಡೂರು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಾರೆ. ತದನಂತರ “ಅಮರ್ ಬೊಳ್ಳಿಲು” ಎಂಬ ಕಥಾ ಕೀರ್ತನೆಯನ್ನು ಕಲಾಸಾರಥಿ ತೋನ್ಸೆ ಪುಷ್ಕಳ ಕುಮಾರ್ ನಡೆಸಿ ಕೊಡುತ್ತಾರೆ. ತಾ. 08-04-2023 ಶನಿವಾರ ಸಂಜೆ ಗಂಟೆ 7-30ಕ್ಕೆ ಶ್ರೀ ವೈದ್ಯನಾಥೇಶ್ವರ ಭಜನಾ ಮಂದಿರದ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಅಂಚನ್ ಮುಖ್ಯ ಅತಿಥಿಯಾಗಿ ಆಗಮಿಸುತ್ತಾರೆ. “ಭಕುತೆ ದಾಮಾಜಿ ಪಂತೆ” ಎಂಬ…

Read More

05 ಏಪ್ರಿಲ್ 2023, ಮುಡಿಪು: ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಇವರು ಮಂಗಳೂರು ವಿಶ್ವವಿದ್ಯಾಲಯದ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಸಂಯೋಜನೆಯಲ್ಲಿ ನಿನಾದ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಪಾವಂಜೆ ನಿನಾದ ರಂಗಮಂದಿರದಲ್ಲಿ ನಡೆದ ‘ಭಾರತದ ಸಂತ ಸತ್ವ ಶೋಧ-ನಿನಾದ ನಂದಿನಿಗೊಂದು ಸುತ್ತು-ನಿನಾದ ನೆನಪು” ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ “ನಾರಾಯಣ ಗುರುಗಳು ಕಂಡ ಮನುಷ್ಯ ಧರ್ಮದ ತತ್ವ ತುಳುನಾಡಿನ ಮಣ್ಣಿನಲ್ಲಿದೆ. ಅದರೊಳಗೆ ಭಾರತದ ಸಂತ ಸತ್ವ ಅಡಗಿದೆ. ಕರಾವಳಿ ಕರ್ನಾಟಕ ದೈವ ದೇವರುಗಳ ನೆಲೆ. ಇಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕೊಡುವ ಆಯುರ್ವೇದ ಸತ್ವ ಋಷಿ ಪರಂಪರೆ ಮತ್ತು ಕೃಷಿ ಪರಂಪರೆಯಿಂದ ಪಕ್ವಗೊಂಡಿದೆ” ಎಂದರು. ಉದ್ಯಮಿ ಕಡಂಬೋಡಿ ಮಹಾಬಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮೂಲ್ಕಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ ‘ಶಾಂತಿಯ ಕ್ರಾಂತಿ-ನಾರಾಯಣ ಗುರು’ ಎಂಬ ವಿಷಯವಾಗಿ ಉಪನ್ಯಾಸ ನೀಡಿದರು. ಓರಿಯಂಟಲ್ ವಿಮಾ ಕಂಪನಿಯ ಪ್ರಬಂಧಕ ಯಾದವ…

Read More

05 ಏಪ್ರಿಲ್ 2023, ಮಂಗಳೂರು: ಸನಾತನ ನಾಟ್ಯಾಲಯ, ಮಂಗಳೂರು ಇದರ 40ನೇ ವರ್ಷಾಚರಣೆ ಪ್ರಯುಕ್ತ ದಿನಾಂಕ 09-04-2023 ಭಾನುವಾರ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಈ ಕೆಳಗಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಂಜೆ 5-30ಕ್ಕೆ ಶ್ರೀ ದೇವಿ ಭಜನಾ ಮಂದಿರ ಮೂಡುಶೆಡ್ಡೆ ಇವರಿಂದ “ಕುಣಿತ ಭಜನೆ”, 6-15ಕ್ಕೆ ಬಾಲ ವಾಗ್ಮಿ ಹಾರಿಕಾ ಮಂಜುನಾಥ್ ಬೆಂಗಳೂರು ಇವರಿಂದ “ರಾಷ್ಟ್ರ-ಧರ್ಮ ಜಾಗೃತಿ ಸಂದೇಶ” ಹಾಗೂ 7-00ಕ್ಕೆ ನಲ್ವತ್ತರ ಸಂಭ್ರಮದ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಭಾರತನಾಟ್ಯ ಕಾರ್ಯಕ್ರಮ ವೈವಿಧ್ಯ ನಡೆಯಲಿದೆ. ಕಲಾಭಿಮಾನಿಗಳಿಗೆ ಈ ಕಾರ್ಯಕ್ರಮಕ್ಕೆ ಸನಾತನ ನಾಟ್ಯಾಲಯದ ನಿರ್ದೇಶಕರಾದ ಶ್ರೀ ಚಂದ್ರಶೇಖರ್ ಕೆ. ಶೆಟ್ಟಿ, ನೃತ್ಯ ಗುರುಗಳಾದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಹಾಗೂ ವಿದುಷಿ ಶ್ರೀಲತಾ ನಾಗರಾಜ್ ಇವರು ಪ್ರೀತಿಪೂರ್ವಕ ಸ್ವಾಗತವನ್ನು ಕೋರಿದ್ದಾರೆ.

Read More

05 ಏಪ್ರಿಲ್ 2023, ಬಂಟ್ವಾಳ: ಹಂಪಿ ಕನ್ನಡ ವಿವಿಯ ನಿವೃತ್ತ ಕುಲಪತಿ ಡಾ. ಬಿ.ಎ.ವಿವೇಕ ರೈ ಅವರು ದಿನಾಂಕ 02-04-2023ರಂದು ರವಿವಾರ ಬಿ.ಸಿ.ರೋಡು ಬಳಿಯ ಏರ್ಯ ಬೀಡಿನಲ್ಲಿ ಏರ್ಯ ಆಳ್ವ ಫೌಂಡೇಶನ್ ಆಶ್ರಯದಲ್ಲಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರ ಕೃತಿಗಳಲ್ಲಿ ಮುಖ್ಯವಾದವುಗಳನ್ನು ಮಥಿಸುವ ಮತ್ತು ಏರ್ಯರ ಕವನಗಳನ್ನು ಹಾಡುವ “ಏರ್ಯ ಸಾಹಿತ್ಯ ಸಂಭ್ರಮ”ವನ್ನು ಉದ್ಘಾಟಿಸಿ, “ಜನಪದ, ಸಾಹಿತ್ಯ, ಸಂಘಟನೆ ಹೀಗೆ ಸರ್ವ ಕ್ಷೇತ್ರದಲ್ಲೂ ತೊಡಗಿಕೊಂಡ ಸಾಹಿತಿ ಏರ್ಯ ಅವರು ಮಾನವತಾವಾದದ ಇಡೀ ರೂಪವಾಗಿದ್ದು, ಸಾಹಿತ್ಯ ಕೃಷಿಯನ್ನು ತನ್ನ ಬದುಕಿನ ಜೀವಧಾತುವಾಗಿ ಬಳಸಿಕೊಂಡಿದ್ದರು. ಮುಂದಿನ ಮೂರು ವರ್ಷಗಳಲ್ಲಿ ಅವರ ಜನ್ಮ ಶತಮಾನೋತ್ಸವ ಆಚರಿಸುವ ಸುಸಂದರ್ಭವಿದ್ದು, ಆ ವೇಳೆ ಏರ್ಯರ ಸಮಗ್ರ ಸಾಹಿತ್ಯ ಸಂಪುಟವನ್ನು ಹೊರತರುವ ಕೆಲಸವಾಗಬೇಕು” ಎಂದು ಹೇಳಿದರು. ಭೋಜನ ಪೂರ್ವದಲ್ಲಿ ಹಿರಿಯರಾದ ಡಾ. ತಾಳ್ತಜೆ ವಸಂತ ಕುಮಾರ್ ಇವರಿಂದ ಕೃತಿ “ಸ್ನೇಹ ತಂತು”, “ರಾಮಶ್ವಮೇಧದ ರಸತರಂಗಗಳು” ಕೃತಿ ಡಾ. ನಾ. ದಾಮೋದರ ಶೆಟ್ಟಿಯವರಿಂದ, “ಮುಳಿಯ ತಿಮ್ಮಪ್ಪಯ್ಯ ಹಾಗೂ ಪಾತ್ರಗಳು ಚಿತ್ರಿಸಿದ ಸೇಡಿಯಾಪು”…

Read More