Subscribe to Updates
Get the latest creative news from FooBar about art, design and business.
Author: roovari
ಮೈಸೂರು : ಸಂಚಲನ ಮೈಸೂರು ಪ್ರಸ್ತುತಪಡಿಸುವ ಬಿ.ಎಂ.ಶ್ರೀ ರಚಿಸಿ ಡಾ.ಪಿ.ವಿ.ನಾರಾಯಣ ಹೊಸ ಕನ್ನಡಕ್ಕೆ ಅನುವಾದಿಸಿದ ‘ಅಶ್ವತ್ಥಾಮನ್’ ನಾಟಕದ ಪ್ರದರ್ಶನವು ದಿನಾಂಕ 05-08-2023 ರಂದು ಮೈಸೂರಿನ ರಂಗಮಂದಿರ ಆವರಣದ ಕಿರುರಂಗ ಮಂದಿರದಲ್ಲಿ ನಡೆಯಲಿದೆ. ಶಶಿಧರ ಅಡಪರ ರಂಗವಿನ್ಯಾಸವಿರುವ ಈ ನಾಟಕದ ರಂಗ ನಿರ್ವಹಣೆ ಮಹೇಶ್.ಸಿ ಇವರದ್ದು. ಹೆಚ್.ಕೆ.ವಿಶ್ವನಾಥ ರಂಗ ಪರಿಕರಗಳನ್ನು ಸಜ್ಜು ಗೊಳಿಸಿದ್ದು, ಕೃಷ್ಣ ಚೈತನ್ಯರ ಸಹಕಾರದೊಂದಿಗೆ ಧನಂಜಯ ಆರ್.ಸಿ ಈ ನಾಟಕಕ್ಕೆ ಸಂಗೀತ ನೀಡಲಿದ್ದಾರೆ. ಮಾನಸ ಮುಸ್ತಫಾ ವಸ್ತ್ರ ವಿನ್ಯಾಸ ಮಾಡಿದ್ದು, ಪ್ರತಿಭಾ ನಂದಕುಮಾರ ಪ್ರಸಾಧನ, ಮಧು ಮಳವಳ್ಳಿಯವರ ಪರಿಕಲ್ಪನೆ,ವಿನ್ಯಾಸ,ನಿರ್ದೇಶನ ಹಾಗೂ ಬೆಳಕಿನ ವಿನ್ಯಾಸವಿರುವ ಈ ನಾಟಕಕ್ಕೆ ಉಮಾಶ್ರೀ ಮಧುಮಳವಳ್ಳಿಯವರು ಸಹ ನಿರ್ದೇಶಕರಾಗಿ ಸಹಕರಿಸಿದ್ದಾರೆ. ‘ಅಶ್ವತ್ಥಾಮನ್’ ಗ್ರೀಕ್ ನ ಬರಹಗಾರ ಸಾಫೋಕ್ಲೀಸ್ನ ‘ಏಜಾಕ್ಸ್’ ಅಥವಾ ‘ಅಯಾಸ್’ ನಾಟಕದ ಕನ್ನಡ ರೂಪಾಂತರವೇ ‘ಅಶ್ವತ್ಥಾಮನ್’ ನಾಟಕ. ಪಾತ್ರಗಳು ಹಾಗೂ ಸನ್ನಿವೇಶಗಳ ಹೊರ ಆವರಣದ ಮಟ್ಟಿಗೆ ಇದು ನಿಜ. ಆದರೆ ನಾಟಕದ ಸತ್ತ್ವ ಅನುವಾದವೇ. ಪೌರುಷ-ಸ್ವಾಭಿಮಾನಗಳು ಒಂದು ಮಿತಿಯಲ್ಲಿದ್ದರೆ ಅವುಗಳ ಬಗ್ಗೆ ನಮ್ಮ ಸಂಪ್ರದಾಯ ಗೌರವಿಸುತ್ತದೆಯೇ…
ಬೆಂಗಳೂರು: ಬೆಂಗಳೂರಿನ ರಂಗತಂತ್ರ ಅರ್ಪಿಸುವ ಟಿ.ಪಿ.ಕೈಲಾಸಂ ಇವರ ‘ಬಂಡ್ವಾಳ್ವಲ್ಲದ ಬಡಾಯಿ’ ನಾಟಕವು ದಿನಾಂಕ 29-07-2023 ರಂದು ಹಾಗೂ ಬಿ.ಆರ್. ಲಕ್ಷ್ಮಣರಾವ್ ಇವರ ‘ನನಗ್ಯಾಕೋ ಡೌಟು’ ನಾಟಕದ ಪ್ರದರ್ಶನವು ದಿನಾಂಕ 30-07-2023 ರಂದು ಬೆಂಗಳೂರಿನ ಬಸವನಗುಡಿಯ ವಾಡಿಯ ಸಭಾಂಗಣದಲ್ಲಿ ನಡೆಯಲಿದೆ. ‘ಬಂಡ್ವಾಳ್ವಲ್ಲದ ಬಡಾಯಿ’ ಉದ್ದಿನ ಮಣಿ, ಕಂಪೇರಿಟಿವ್ ಕೊಲೊರೊಲಿಗೆ, ಶ್ಯಾಡೋ ಆಫ್ ದ ಸನ್ comparative colorology, shadow of the sun, comparative colorology, shadow of the sun ಮುಂತಾದ ವಿಶಿಷ್ಟ ಪದ ಪ್ರಯೋಗಗಳು ಪ್ರಹಸನ ಪಿತಾಮಹ ಎಂದು ಖ್ಯಾತರಾಗಿರುವ ಟಿ.ಪಿ.ಕೈಲಾಸಂ ಅವರ ಟ್ರೇಡ್ ಮಾರ್ಕ್ ಎಂದರೆ ಉತ್ಪ್ರೇಕ್ಷೆಯಲ್ಲ. ವ್ಯವಸ್ಥೆಯನ್ನು ವ್ಯಂಗ್ಯ ಮಾಡಿ, ನಗುವಿನ ಬುಗ್ಗೆ ಹರಿಸುವ ಬಗೆ ಕೈಲಾಸಂರವರಿಗೆ ಸುಲಭವಾಗಿ ಕರಗತ. ಅದಕ್ಕೆ ಅಲ್ಲವೇ ಇವರನ್ನು tipycal ass ಅನ್ನುವುದು. ಇಂತಹ ಕೈಲಾಸಂರವರು 1945ರಲ್ಲಿ, ಒಬ್ಬ ಲಾಯರ್ ತನ್ನ ಬದುಕನ್ನ ಹೇಗೆಲ್ಲಾ ನಡೆಸಬಹುದು ಮತ್ತು ಅಂದಿನ ಸಾಮಾಜಿಕ ಸ್ಥಿತಿಗತಿಗಳು ಹೇಗಿದ್ದವು ಎಂಬುದನ್ನ ಉಡಾಫೆ ಮತ್ತು ವ್ಯಂಗ್ಯದ ಮೂಲಕ ಅದ್ಬುತವಾಗಿ…
ಮೈಸೂರು : ಮಂಡ್ಯ ರಮೇಶ್ ನೇತೃತ್ವದ ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ರಂಗಭೂಮಿಯಲ್ಲಿ ನಿರಂತರ ಕ್ರಿಯಾಶೀಲವಾಗಿದ್ದು ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ, ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ಸತತವಾಗಿ ಪ್ರಯತ್ನ ಶೀಲವಾಗಿದೆ. ತನ್ನ ಚಟುವಟಿಕೆಯ ಭಾಗವಾಗಿ ಕನ್ನಡ ಆಧುನಿಕ ರಂಗಭೂಮಿಗೆ ವಿಶೇಷ ಕೊಡುಗೆ ನೀಡಿದ ರಂಗ ಸಂಘಟಕ, ಚಿಂತಕ ಕೆ.ವಿ. ಸುಬ್ಬಣ್ಣ ಅವರ ಸ್ಮರಣಾರ್ಥ ‘ಸುಬ್ಬಣ್ಣ ಸ್ಮರಣೆ’ ಕಾರ್ಯಕ್ರಮವನ್ನು ಪ್ರತಿವರ್ಷ ಜುಲೈ ತಿಂಗಳಲ್ಲಿ ನಡೆಸುತ್ತಾ ಬಂದಿದ್ದು, 20232ನೇ ಸಾಲಿನ ನಟನದ ಜುಲೈ ತಿಂಗಳ ಎಲ್ಲಾ ಕಾರ್ಯಕ್ರಮಗಳನ್ನು ಸುಬ್ಬಣ್ಣರ ಸ್ಮರಣೆಗೆ ಅರ್ಪಿಸಿದೆ. ಜುಲೈ 01ರಿಂದ ಆರಂಭವಾಗಿ ಪ್ರತಿ ವಾರಾಂತ್ಯಗಳಲ್ಲಿ ವಿವಿಧ ನಾಟಕಗಳ ಪ್ರದರ್ಶನ, ರಂಗ ಕಾರ್ಯಾಗಾರ ನಡೆದಿದ್ದು, 2023ರ ಸುಬ್ಬಣ್ಣ ಸ್ಮರಣೆಯ ಕಡೆಯ ಕಾರ್ಯಕ್ರಮವಾಗಿ ಜುಲೈ 30ರಂದು ಬೆಳಗ್ಗೆ 10ಕ್ಕೆ ಸರಿಯಾಗಿ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ‘ರಂಗಶಿಕ್ಷಣ; ವರ್ತಮಾನ ಮತ್ತು ಭವಿಷ್ಯದ ಅವಕಾಶಗಳು’ ಎಂಬ ವಿಷಯದ ಕುರಿತು ರಂಗಚರ್ಚೆಯನ್ನು ಆಯೋಜನೆ ಮಾಡಲಾಗಿದೆ. ಈ ರಂಗಚರ್ಚೆಯಲ್ಲಿ ಹಿರಿಯ ರಂಗಕರ್ಮಿ, ನಿವೃತ್ತ…
ಬೆಂಗಳೂರು : ಶಾಸ್ತ್ರೀಯ ನೃತ್ಯ ಕ್ಷೇತ್ರ ಬಹಳ ವಿಸ್ತಾರವಾಗಿ ಬೆಳೆಯುತ್ತಿದೆ. ಸಹಜವಾಗಿಯೇ ರಂಗಪ್ರವೇಶಗಳೂ ಮೇಲಿಂದ ಮೇಲೆ ಆಗುತ್ತಿರುತ್ತವೆ. ಆದರೆ ಎಲ್ಲೋ ಒಂದು ಕಡೆ ಈ ರಂಗಪ್ರವೇಶಗಳು ಏಕತಾನತೆಯಿಂದ ಕೂಡಿರುತ್ತವೆ ಎಂಬ ಅಸಮಾಧಾನ ಕೂಡ ಕೇಳಿಬರುತ್ತಿರುತ್ತದೆ. ಹಾಗೆಂದು ತೀರಾ ನಿರಾಸೆಗೊಳ್ಳುವ ಅವಶ್ಯಕತೆ ಖಂಡಿತ ಇಲ್ಲ. ಆಗಾಗೊಮ್ಮೊಮ್ಮೆ ವಿಶೇಷ ವಿನ್ಯಾಸದ ರಂಗಪ್ರವೇಶಗಳೂ ವೇದಿಕೆಗೆ ಬರುತ್ತಾ ಭರವಸೆಯನ್ನು ಮೂಡಿಸುತ್ತವೆ. ಅಂತಹ ಒಂದು ರಂಗಪ್ರವೇಶ ಈಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು. ಮೈಸೂರಿನ ಶ್ರೀ ದುರ್ಗಾ ನೃತ್ಯ ಅಕಾಡೆಮಿಯ ಕಲಾನಿರ್ದೇಶಕಿ, ಗುರು ಶ್ರೀಮತಿ ಶ್ರೀವಿದ್ಯಾ ಶಶಿಧರ್, ತಮ್ಮ ಪ್ರತಿಭಾವಂತ ಶಿಷ್ಯೆ ಶ್ರೀಮತಿ ಪ್ರಣತಿ ಎಸ್. ವಾಟಾಳ್ ಅವರ ರಂಗಪ್ರವೇಶ ಕಾರ್ಯಕ್ರಮವು ದಿನಾಂಕ 23-07-2023ರಂದು ನಡೆಯಿತು. ಗುರುವಾಗಿ ಶ್ರೀವಿದ್ಯಾ ಅವರಿಗೂ ಇದು ರಂಗಪ್ರವೇಶವೇ. ಏಕೆಂದರೆ ಅವರ ಮಾರ್ಗದರ್ಶನದ ಮೊದಲ ರಂಗಪ್ರವೇಶ ಇದು. ಆದರೆ ಪ್ರದರ್ಶನದ ಒಟ್ಟಂದವನ್ನು ಕಂಡಾಗ, ಪಾಂಡಿತ್ಯಪೂರ್ಣ ಗುರುಗಳ ಮಾರ್ಗದರ್ಶನದಲ್ಲಿ ಅನುಭವೀ ನರ್ತಕಿಯೊಬ್ಬಳ ಪ್ರದರ್ಶನದಂತಿತ್ತು ಅಂದಿನ ಕಾರ್ಯಕ್ರಮ. ಮೂರು ಹೊಸಬಗೆಯ ವಿಭಿನ್ನ ಕೃತಿಗಳನ್ನು ಹೊರತುಪಡಿಸಿದರೆ, ಮಿಕ್ಕೆಲ್ಲ ಬಂಧಗಳೂ…
ಪುತ್ತೂರು: ಭರತನಾಟ್ಯ ಕಲಾವಿದೆಯಾಗಿರುವ ಲೇಖಕಿ ನರಿಮೊಗರು ಗ್ರಾಮದ ಶ್ರೀಮತಿ ಅಪರ್ಣಾ ಕೊಡೆಂಕಿರಿ ಅವರು ತುಳು ಲಿಪಿಯಲ್ಲಿ ಬರೆದ ಪ್ರಪ್ರಥಮ ಭಗವದ್ಗೀತೆ ಪುಸ್ತಕವನ್ನು ದಿನಾಂಕ 10-07-2023ರಂದು ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಬಿಡುಗಡೆಗೊಳಿಸಿದರು. ಮೂಲತಃ ನೃತ್ಯ ವಿದುಷಿ ಆಗಿರುವ ಶ್ರೀಮತಿ ಅಪರ್ಣಾ ಕೊಡೆಂಕಿರಿ ಇವರು ತುಳು ಭಾಷೆಯ ಮೇಲಿನ ಪ್ರೀತಿ, ಅಕ್ಕರೆಯನ್ನು ಭಗವದ್ಗೀತೆ ಅನುವಾದದ ಮೂಲಕ ತುಳುನಾಡಿನ ಜನತೆಗೆ ಸಮರ್ಪಿಸಿದ್ದಾರೆ. ಇದರಲ್ಲಿ ತುಳು ಲಿಪಿಯ ವರ್ಣಮಾಲೆಯ ಸಹಿತ ಸಂಪೂರ್ಣ ಭಗವದ್ಗೀತೆಯನ್ನು ತುಳು ಹಾಗೂ ಕನ್ನಡದಲ್ಲಿ ಅಕ್ಕಪಕ್ಕದ ಪುಟಗಳಲ್ಲಿ ಸುಲಭವಾಗಿ ಹೊಂದಿಸಿ ನೋಡುವಂತೆ ನೀಡಲಾಗಿದೆ. ಎಡಪುಟದಲ್ಲಿ ತುಳುವಿನಲ್ಲೇ ಅರ್ಥ ಸಹಿತ ಶ್ಲೋಕ, ಬಲಪುಟದಲ್ಲಿ ಕನ್ನಡದಲ್ಲಿ ಶ್ಲೋಕ ಹಾಗೂ ಕನ್ನಡ ಲಿಪಿಯಲ್ಲಿ ಬರೆದ ತುಳು ಭಾಷಾರ್ಥ ನೀಡಲಾಗಿದೆ. ತುಳು ಲಿಪಿ ಕಲಿಯುವವರಿಗೆ ಭಗವದ್ಗೀತೆಯಿಂದಲೇ ಪ್ರಾರಂಭಿಸುವ ಅವಕಾಶ, ಲಿಪಿ ಬಲ್ಲವರಿಗೆ ತುಳುವಿನಲ್ಲೇ ಓದುವ ಅವಕಾಶವನ್ನು ಅಪರ್ಣಾ ಮಾಡಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹಾಗೂ ವೇದವ್ಯಾಸ ಸಂಶೋಧನಾ ಕೇಂದ್ರದ ನಿರ್ದೇಶಕ ಆನಂದತೀರ್ಥ ಸಗ್ರಿ…
ಮೂಲ್ಕಿ : ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ವ್ಯಾಸಮಹರ್ಷಿ ವೇದಪಾಠ ಶಾಲೆಯಲ್ಲಿ ಮಧ್ವ ಸಿದ್ಧಾಂತ ತಂತ್ರಸಾರದ ತಾಳೆಗರಿಯ ಮೂಲ ಪಠ್ಯವನ್ನು ವಿಶೇಷ ತಂತ್ರಜ್ಞಾನದ ಮೂಲಕ ಪುಸ್ತಕದಲ್ಲಿ ಪ್ರಕಟಿಸುವ ಮೂಲಕ ಮಾಧ್ವ ತಂತ್ರಸಾರದಿಂದ ಅರ್ಚಿತ ದೇವಾಲಯಗಳಿಗೆ ನೀಡುವ ಧ್ಯೇಯದಿಂದ ‘ಮೆಮೆರಾಂಡಮ್ ಆಫ್ ಅಂಡರ್ ಸ್ಟ್ಯಾಂಡಿಂಗ್’ ಕಾರ್ಯಕ್ರಮ ದಿನಾಂಕ 24-07-2023ರಂದು ನಡೆಯಿತು. ಅಮೆರಿಕಾದಲ್ಲಿ ವಿಜ್ಞಾನಿಯಾಗಿದ್ದು, ಪ್ರಸ್ತುತ ಬೆಂಗಳೂರಿನ ತಾರಾ ಪ್ರಕಾಶನ ಮುಖ್ಯಸ್ಥ ಪ್ರೊ.ಮುಕುಂದ್ ಅವರು ಈ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಾ “ಸನಾತನ ಭಾರತೀಯ ಜ್ಞಾನ ಭಂಡಾರಗಳು ತಾಳೆಗರಿಯಲ್ಲಿ ಅಡಕವಾಗಿದ್ದು, ಅವುಗಳನ್ನು ಅಧ್ಯಯನಕಾರರು ಮತ್ತು ಯುವ ಪೀಳಿಗೆಗೆ ನಿಸ್ವಾರ್ಥವಾಗಿ ಮುಟ್ಟಿಸುವ ಕಾರ್ಯ ಅಗತ್ಯವಿದೆ. ತಾಳೆಗರಿಯಲ್ಲಿ ಬರವಣಿಗೆಯು ಕೊರೆದು ಮಾಡಲ್ಪಟ್ಟಿದ್ದು, ಸುಮಾರು ಸಾವಿರ ವರ್ಷ ಪುರಾತನವಾದ ತಾಳೆಗರಿಗಳು ಶಿಥಿಲವಾಗಿ, ಪುಡಿಯಾಗುವ ಕಾರಣ ವಿಶೇಷ ಕಾಂತೀಯ ತಂತ್ರಜ್ಞಾನದ ಮೂಲಕ ವಿವಿಧ ಆಯಾಮಗಳಲ್ಲಿ ಅವುಗಳ ಪಡಿಯಚ್ಚು ಪಡೆದು ವಿದ್ವಾಂಸರಿಂದ ಅಧ್ಯಯನ ನಡೆಸಿದ ಬಳಿಕ ಮುದ್ರಿಸಲಾಗುತ್ತದೆ. ಭಾರತೀಯ ತಾಳೆಗರಿಗಳು ಕೇವಲ ಶಾಸ್ತ್ರಕ್ಕೆ ಸೀಮಿತವಾಗದೆ ವಿಜ್ಞಾನ ತಂತ್ರಜ್ಞಾನ ಹಾಗೂ ವೈದ್ಯಕೀಯ ಅಗಾಧ…
ಬೆಂಗಳೂರು : ಜತಿನ್ ಅಕಾಡಮಿ ಆಫ್ ಡ್ಯಾನ್ಸ್ (ರಿ.) ಪ್ರಸ್ತುತ ಪಡಿಸುವ ವಿದುಷಿ ಶ್ರೀಮತಿ ಅರ್ಚನಾ ಪುಣ್ಯೇಷ್ ಇವರ ಶಿಷ್ಯೆಯಾದ ಕುಮಾರಿ ಪ್ರಜ್ಞಾ.ಪಿ.ಶರ್ಮ ಇವರ ಭರತನಾಟ್ಯ ರಂಗಪ್ರವೇಶವು ದಿನಾಂಕ 29-07-2023ರ ಸಂಜೆ 5.30ಕ್ಕೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ತೆಲುಗು ವಿಜ್ಞಾನ ಸಮಿತಿಯ ಶ್ರೀ ಕೃಷ್ಣದೇವರಾಯ ಕಲಾ ಮಂದಿರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಗೌರವ ಅತಿಥಿಯಾಗಿ ಚಾವ್ಯ ನೃತ್ಯ ನಿಕೇತನದ ನಿರ್ದೇಶಕಿಯಾದ ರಾಜ್ಯೋತ್ಸವ ಹಾಗೂ ಶಾಂತಲಾ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಕಲಾಶ್ರೀ ಶ್ರೀಮತಿ ಸುನಂದ ದೇವಿ ಹಾಗೂ ಮುಖ್ಯ ಅತಿಥಿಗಳಾಗಿ ಅಂಧ ನೃತ್ಯ ಕಲಾವಿದರ ಮಾರ್ಗದರ್ಶಕಿ, ನೃತ್ಯ ಶಿಕ್ಷಕಿ ಮತ್ತು ಸಂಯೋಜಕಿ, ಭರತನಾಟ್ಯ ಮತ್ತು ಕಥಕ್ ಕಲಾವಿದೆಯಾದ ಕರ್ನಾಟಕ ಕಲಾಶ್ರೀ ಡಾ. ಸುಪರ್ಣಾ ವೆಂಕಟೇಶ್, ಕಲಾಯೋಗಿ ಪ್ರತಿಷ್ಠಾನದ ಅಧ್ಯಕ್ಷರು ಮತ್ತು ಕಲಾವಿದರ ಸಂಘದ ಯುವ ಬರಹಗಾರ ಹಾಗೂ ಕಲಾ ವಿಮರ್ಶಕ ಶ್ರೀ.ಎಸ್.ನಂಜುಂಡ ರಾವ್, ಬೆಂಗಳೂರಿನ ಐ.ಸಿ.ಸಿ.ಆರ್. ದಕ್ಷಿಣ ವಲಯ ಕಚೇರಿಯ ವಲಯ ನಿರ್ದೇಶಕರರಾದ ಶ್ರೀ.ಕೆ.ಅಯ್ಯನಾರ್, ಕಲಬುರ್ಗಿಯ ಎಸ್.ಎಂ.ಎನ್.ಕೆ.ಎಸ್.ಇದರ ಭರತನಾಟ್ಯ ಕಲಾವಿದರಾದ ವಿದ್ವಾನ್ ಶ್ರೀ.ಮಂಜುನಾಥ್ ಎನ್…
ಮಂಗಳೂರು: ಸನಾತನ ನಾಟ್ಯಾಲಯ ಮಂಗಳೂರು ಆಯೋಜಿಸುವ 2022ನೇ ಸಾಲಿನ ಭರತನಾಟ್ಯದ ವಿದ್ವತ್ ಅಂತಿಮ ಪರೀಕ್ಷೆಯನ್ನು ಪೂರೈಸಿದ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ‘ಸನಾತನ ನೃತ್ಯ ಪ್ರೇರಣಾ’ ದಿನಾಂಕ 29-07-2023ರ ಶನಿವಾರ ಸಂಜೆ 5.30ಕ್ಕೆ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಅಧ್ಯಕ್ಷರಾದ ಪಟ್ಲ ಶ್ರೀ ಸತೀಶ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಲಿರುವ ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಹಿರಿಯ ಶಾಖಾಧಿಕಾರಿಯಾದ ಶ್ರೀ ಎಲ್.ದಿವಾಕರ್ ಹಾಗೂ ಉಡುಪಿ ಮಣಿಪಾಲದ ಹೆಜ್ಜೆ ಗೆಜ್ಜೆಯ ನೃತ್ಯ ಗುರುಗಳಾದ ವಿದುಷಿ ಯಶ ರಾಮಕೃಷ್ಣ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿದ್ವತ್ ಅಂತಿಮ ಪರೀಕ್ಷೆಯನ್ನು ಪೂರೈಸಿದ ವಿದುಷಿ ಅಮೃತಾ.ವಿ, ಅನನ್ಯಾ ಕುಂಡಂತ್ತಾಯ, ಅಪೂರ್ವ ಅಲೆವೂರಾಯ, ನಾಗರಶ್ಮಿ, ತುಳಸಿ, ಸಾಹಿತ್ಯ ಸುರೇಶ್, ರೀನಾ ಕಿಶೋರ್ ಹಾಗೂ ರಿಯಾ ಕಿಶೋರ್ ಇವರನ್ನು ಅಭಿನಂದಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
ಮೂಡುಬಿದಿರೆ : ಶ್ರೀ ಯಕ್ಷದೇಗುಲ ಕಾಂತಾವರ (ರಿ.)ದ ಇಪ್ಪತ್ತೊಂದನೇ ವಾರ್ಷಿಕ ‘ಯಕ್ಷೋಲ್ಲಾಸ 2023’ ಕಾರ್ಯಕ್ರಮವು ಶ್ರೀ ಕ್ಷೇತ್ರ ಕಾಂತಾವರದಲ್ಲಿ ದಿನಾಂಕ 23-07-2023ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಂತಾವರ ಧರ್ಮದರ್ಶಿ ಡಾ. ಜೀವಂಧರ ಬಲ್ಲಾಳ್ ಮಾತನಾಡುತ್ತಾ “ಕಷ್ಟ ಕಾಲದಲ್ಲಿ ಜೀವನಕ್ಕಾಗಿ ಯಕ್ಷಗಾನವನ್ನು ನಂಬಿ ಬದುಕು ಸಾಗಿದ ಅದೆಷ್ಟೋ ಕಲಾವಿದರು ಈಗಿಲ್ಲ. ಆದರೂ ಅವರು ಉಳಿಸಿದ ಈ ಯಕ್ಷಗಾನ ಇಂದಿಗೂ ಶ್ರೀಮಂತವಾಗಿದೆ. ಪುತ್ತೂರು ಶ್ರೀಧರ ಭಂಡಾರಿ ತಂಬಾ ಕಷ್ಟದಿಂದ ನಮ್ಮೂರಿನ ಸ್ವಂತ ಮೇಳ ಮಾಡಿಕೊಂಡು ನಷ್ಟ ಹೊಂದಿದಾಗ ಮತ್ತೆ ಮಾತೃ ಸಂಸ್ಥೆ ಧರ್ಮಸ್ಥಳ ಮೇಳಕ್ಕೆ ಹೋಗು. ಅಲ್ಲಿ ನಿನ್ನ ಸ್ಥಾನ ಇನ್ನೂ ಖಾಲಿ ಇದೆ ಎಂದು ಹೇಳಿ ಕಳುಹಿಸಿದವನೇ ನಾನು. ಶ್ರೀಧರ ಭಂಡಾರಿಯಿಂದಾಗಿ ನಮ್ಮ ಕ್ಷೇತ್ರಕ್ಕೂ ತುಂಬಾ ಹೆಸರು ಬರುವಂತಾಯಿತು.” ಎಂದು ಹೇಳಿದರು. ವರ್ಕಾಡಿ ತಾರಾನಾಥ ಬಲ್ಯಾಯರಿಗೆ ‘ಪುತ್ತೂರು ಶ್ರೀ ಶ್ರೀಧರ ಭಂಡಾರಿ ಸಂಸ್ಕರಣಾ ಪ್ರಶಸ್ತಿ’ ಹಾಗೂ ವೇಣೂರು ಶ್ರೀ ಸದಾಶಿವ ಕುಲಾಲ್ ಅವರಿಗೆ ‘ಬಾಯಾರು ಪ್ರಕಾಶ್ಚಂದ್ರ ರಾವ್ ಸಂಸ್ಕರಣಾ ಪ್ರಶಸ್ತಿ’…
76ನೆಯ ಸ್ವಾತಂತ್ರೋತ್ಸವದ ಪ್ರಯುಕ್ತ ಸಾಹಿತ್ಯ ಗಂಗಾ ಧಾರವಾಡ ಮತ್ತು ಗೋಲ್ಡನ್ ಗ್ಲೋಬ್ ಟ್ರಸ್ಟ್ ದೆಹಲಿ ಇವರ ಸಹಯೋಗದಲ್ಲಿ ರಾಜ್ಯಮಟ್ಟದ ಗೀತಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ. ಮೊದಲ ಬಹುಮಾನ ರೂ.3000/-, ಎರಡನೆಯ ಬಹುಮಾನ ರೂ.2000/-, ಮೂರನೆಯ ಬಹುಮಾನ ರೂ.1000/- ಮತ್ತು ಎರಡು ಮೆಚ್ಚುಗೆ ಬಹುಮಾನ ರೂ.500/- ನಗದು ಮತ್ತು ಡಿಜಿಟಲ್ ಪ್ರಶಸ್ತಿ ಪತ್ರ ನೀಡಲಾಗುವುದು. ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಡಿಜಿಟಲ್ ಪ್ರಮಾಣ ಪತ್ರ ನೀಡಲಾಗುವುದು, ಸ್ಪರ್ಧೆಯ ನಿಯಮಗಳು – * 18-45 ವರ್ಷದೊಳಗಿನ ಉದಯೋನ್ಮುಖ ಗಾಯಕ ಮತ್ತು ಗಾಯಕಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. * ಭಾವಗೀತೆ, ದೇಶಭಕ್ತಿಗೀತೆ ಮತ್ತು ಶಾಸ್ತ್ರೀಯ ಸಂಗೀತಕ್ಕೆ ಸಂಬಂಧಿಸಿದ ಗೀತೆಗಳನ್ನು ಮಾತ್ರ ಸ್ಪರ್ಧೆಗೆ ಸ್ವೀಕರಿಸಲಾಗುವುದು. * ಗಾಯಕ ಮತ್ತು ಗಾಯಕಿಯರು ತಾವು ಹಾಡಿದ ಒಂದು ಹಾಡನ್ನು ವಿಡಿಯೋ ಮಾಡಿ ಕಳುಹಿಸಬೇಕು. * ಗಾಯಕ ಮತ್ತು ಗಾಯಕಿಯರು ತಮ್ಮ ಪರಿಚಯ, ಒಂದು ಫೋಟೋ, ವಯೋಮಿತಿ ತಿಳಿಸುವ ಒಂದು ದಾಖಲೆ ಮತ್ತು ಗೀತ ರಚನಾಕಾರರ ಪರಿಚಯವನ್ನು ಪ್ರತ್ಯೇಕವಾಗಿ ಕಳುಹಿಸಬೇಕು. * ಹಾಡು ಕಳುಹಿಸಲು…