Author: roovari

ಕಾಸರಗೋಡು : ಶ್ರೀ ಪುರಂದರದಾಸ ಸಂಗೀತ ಕಲಾ ಮಂದಿರ ಎಸ್.ವಿ.ಟಿ. ರಸ್ತೆ, ಕಾಸರಗೋಡು ಈ ಸಂಸ್ಥೆಯ 22ನೇ ‘ದ್ವಿದಿನ ಸಂಕೀರ್ತನಾ ಆರಾಧನೋತ್ಸವ’ವು ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದ ವ್ಯಾಸ ಮಂಟಪದಲ್ಲಿ ದಿನಾಂಕ 14 ಮತ್ತು 15 ಫೆಬ್ರುವರಿ 2026ರಂದು ಹಮ್ಮಿಕೊಳ್ಳಲಾಗಿದೆ. ಭಾವೈಕ್ಯರಾದ ಸಂಗೀತ ವಿದ್ವಾನ್ ಶ್ರೀ ರಮಣ ಮಾಸ್ಟರ್ ಇವರ ಶುಭಾನುಗ್ರಹ ಹಾಗೂ ಶತಾಯುಷಿ ಮೃದಂಗ ವಿದ್ವಾನ್ ಬಾಬು ರೈ ಇವರ ಶುಭಾಶೀರ್ವಾದಗಳೊಂದಿಗೆ ಸಂಸ್ಥೆಯ ಸ್ಥಾಪಕರೂ ರೂವಾರಿಗಳೂ ಆದ ಕಲ್ಮಾಡಿ ಸದಾಶಿವ ಆಚಾರ್ಯ, ಕ್ಷೇತ್ರ ಸಮಿತಿ ಮುಖ್ಯಸ್ಥ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ಕನ್ನಡ ಭವನದ ರೂವಾರಿ ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಸಂಪ್ರಾರ್ಥಿಸಿ ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮ ಸಂಪನ್ನಗೊಳಿಸಿದರು. ಕಾರ್ಯಕ್ರಮದಲ್ಲಿ ಮನಮೋಹನ ಕೆರೆಮನೆ, ಪ್ರಜಿತ್, ಶ್ರೀಧರ್ ಭಟ್, ಬಾಲರಾಜ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಸಂಗೀತ ವಿದ್ವಾಂಸರುಗಳಿಂದ ಸಂಗೀತ ಕಾರ್ಯಕ್ರಮ ಚಾಲನೆಗೊಂಡಿತು.

Read More

ದುಬೈ : ಕಥಾಬಿಂದು ಪ್ರಕಾಶನ ಇದರ ವತಿಯಿಂದ ಸಂಸ್ಥಾಪಕರಾದ ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ‘ಕನ್ನಡ ಕಂಪು ಸರಣಿ -9’ ಕಾರ್ಯಕ್ರಮವು ದಿನಾಂಕ 18 ಫೆಬ್ರುವರಿ 2026ರಂದು ದುಬೈಯಲ್ಲಿ ಹಮ್ಮಿಕೊಳ್ಳಲಾಗಿದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ. ಶ್ರೀಮತಿ ಆಶಾ ದಿಲೀಪ್ ಸುಳ್ಯಮೆ ಇವರ ‘ಆಪ್ತ ಸಂಗಾತಿ’ ವ್ಯಕ್ತಿತ್ವ ವಿಕಸನ ಲೇಖನ, ರೇಖಾ ಸುರೇಶ್ ರಾವ್ ಇವರ ‘ಸುಷುಮ್ನ’ ಕವನ ಸಂಕಲನ ಹಾಗೂ ಹರಿಶ್ಚಂದ್ರ ಪಿ. ಸಾಲಿಯನ್ ಇವರ ‘ತುಳುನಾಡ ತುಳು ಗಾದೆಲು’ ಕೃತಿಗಳು ಬಿಡುಗಡೆಯಾಗಲಿವೆ. ವಿಕ್ಟರಿ ಗೋಡ್ಸನ್, ಆಶಾ, ಯುರೋ ಜಗದೀಶ್ ಪೈ. ಬೋಡರ ಶೋಭಾವತಿ, ಬಿಂದು ಗ್ಲಾರ್ಸನ್, ಗಂಗಾಧರ ಅಮೀನ್, ಗೀತಾ ಮಧುಕರ್, ಹರಿಶ್ಚಂದ್ರ ಪಿ. ಸಾಲಿಯನ್, ಕಲ್ಲಾರೆ ಚಿತ್ರಲೇಖ, ಲತಾ ಜಗದೀಶ, ಪಿ.ವಿ. ಪ್ರದೀಪ್ ಕುಮಾರ್, ಸಹನಾ ಮಧುಕರ್, ವಿಜಯ ಸಾಲಿಯಾನ್ ಇವರನ್ನು ಒಳಗೊಂಡ 25 ಜನರ ತಂಡ ಈ ಪ್ರವಾಸದಲ್ಲಿ ಇರುತ್ತಾರೆ. ಈ ಸಾಹಿತ್ಯ ಪ್ರವಾಸಕ್ಕೆ ಸಾಹಿತ್ಯ ಪರಿಚಾರಕರಾದ ಡಾ. ಕೊಳ್ಚಪ್ಪೆ ಗೋವಿಂದ…

Read More

ಮಂಗಳೂರು : ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ವಿದ್ಯಾರ್ಥಿಗಳಿಗಾಗಿ ‘ಕನ್ನಡದ ನಡಿಗೆ ಶಾಲೆಯ ಕಡೆಗೆ’ ಏಕದಿನ ಸಾಹಿತ್ಯ ಅಭಿಯಾನವು ದಿನಾಂಕ 10 ಫೆಬ್ರುವರಿ 2026ರಂದು ಮಂಗಳವಾರ ಮಂಗಳೂರಿನ ಪಳ್ನೀರು ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಮುಖೇನ ಕಾರ್ಯಕ್ರಮ ಆರಂಭವಾಯಿತು. ಶಿಕ್ಷಕರು, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಶ್ರೀಮತಿ ರೇಖಾ ಸುದೇಶ್ ರಾವ್ ಸ್ವಾಗತಿಸಿ, ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸಿಂತಿಯ ಡಿಸೋಜಾ ದೀಪ ಬೆಳಗಿಸಿ ಉದ್ಘಾಟನೆಗೈದರು. ಶ್ರೀ ಉಮೇಶ್ ರಾವ್ ಕುಂಬಳೆ ಕಾರ್ಯಾಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಘಟಕ ಪ್ರಸ್ತಾವನೆ ನುಡಿಗಳನ್ನಾಡಿದರು. ಕನ್ನಡ ಭವನ ಮತ್ತು ಗ್ರಂಥಾಲಯ ಕಾಸರಗೋಡು, ಇದರ ಸ್ಥಾಪಕ ಅಧ್ಯಕ್ಷರು ಡಾ. ವಾಮನ್ ರಾವ್ ಬೇಕಲ್ ಕನ್ನಡ ಸಾಹಿತ್ಯದ ಬಗ್ಗೆ ಒಲವು ಆಸಕ್ತಿ ಮೂಡಲು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಹಿತನುಡಿಗಳನಾಡಿದರು. ಶ್ರೀಮತಿ ಸಂಧ್ಯಾರಾಣಿ ಟೀಚರ್ ಕನ್ನಡ ಭವನ ಕಾಸರಗೋಡು ಸಂಚಾಲಕರು, ಸ್ಥಾಪಕರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಕ್ಷಕರು ಶ್ರೀಮತಿ ಲವೀನ ಅನಿಟ ಡಿಸೋಜಾ…

Read More

ಕೋಟ : ಮಣೂರು ಪಡುಕೆರೆ ಶಾಲಾ ಆವರಣದಲ್ಲಿ ದಿನಾಂಕ 08 ಫೆಬ್ರವರಿ 2026ರಂದು ಇಂಡಿಕಾ ಕಲಾ ಬಳಗ ಆಯೋಜಿಸಿದ ‘ಸಂಭ್ರಮ-2026’ ಕಾರ್ಯಕ್ರಮದಡಿಯಲ್ಲಿ ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಇವರಿಂದ ‘ಗಾನ ವೈಭವ’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇಂಡಿಕಾ ಕಲಾ ಬಳಗದ ಅಧ್ಯಕ್ಷರಾದ ಜಯರಾಮ ಶೆಟ್ಟಿ ಇವರು ಮಾತನಾಡಿ “ಗಣಪತಿ ಸ್ತುತಿಯೊಂದಿಗೆ ಆರಂಭಿಸಲಾಗುವ ಗಾನ ವೈಭವ ಸಾಂಸ್ಕೃತಿಕ ಕಾರ್ಯಕ್ರಮದ ಆರಂಭಕ್ಕೆ ಅತ್ಯಂತ ಸೂಕ್ತ. ಪ್ರತಿಭಾನ್ವಿತ ತಂಡದ ಗಾನ ವೈಭವ ಕಾರ್ಯಕ್ರಮದ ಕಳೆಗಟ್ಟಿತು. ತಂಡದ ಪ್ರಶಾಂತ್ ಪಡುಕೆರೆ ಚುರುಕುತನದಿಂದಲೇ ಯಕ್ಷಗಾನ, ಭಜನೆ ಇತ್ಯಾದಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾ ಪ್ರಬುದ್ಧ ಕಲಾವಿದರೆನಿಸಿಕೊಂಡಿದ್ದಾರೆ. ಅವರನ್ನು ಗೌರವಿಸುವುದು ನಮ್ಮ ಕರ್ತವ್ಯ” ಎಂದು ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಪ್ರಶಾಂತ್ ಪಡುಕೆರೆ ಇವರನ್ನು ಗೌರವಿಸಲಾಯಿತು. ಪಂಚಮಿ ವೈದ್ಯ, ಸುದೀಪ ಉರಾಳ, ರಾಹುಲ್ ಅಮೀನ್, ಕಿಶನ್ ಪೂಜಾರಿ, ಪವನ್ ಆಚಾರ್, ಪರಿಣಿತ ವೈದ್ಯ ಇವರುಗಳು ಉಪಸ್ಥಿತರಿದ್ದರು.

Read More

ಮಂಗಳೂರು : ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಇದರ ವತಿಯಿಂದ ‘ಸಂಗೀತ ನೃತ್ಯ ವಿಚಾರ ಸಂಕಿರಣ ಸಂಭ್ರಮ-2026’ ಕಾರ್ಯಕ್ರಮವನ್ನು ದಿನಾಂಕ 14 ಫೆಬ್ರವರಿ 2025ರಂದು ಬೆಳಗ್ಗೆ 10-00 ಗಂಟೆಗೆ ಮಂಗಳೂರಿನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ವಿಚಾರ ಸಂಕಿರಣವನ್ನು ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ ಶಾಸ್ತ್ರೀಯ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ನಿಕಟಪೂರ್ವ ಯೋಜನಾ ನಿರ್ದೇಶಕ ಪ್ರೊ. ಬೋಳಾರ ಶಿವರಾಮ ಶೆಟ್ಟಿ ಉದ್ಘಾಟಿಸಲಿದ್ದು, ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷೆ ಶ್ರೀಮತಿ ಶುಭ ಧನಂಜಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ. ಸಹಾಯಕ ನಿರ್ದೇಶಕ ರಾಜೇಶ ಜಿ., ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಭಾಗವಹಿಸಲಿದ್ದಾರೆ. ವಿಚಾರ ಸಂಕಿರಣ ಗೋಷ್ಠಿಯಲ್ಲಿ ಭಾಗವಹಿಸುವ ಸಂಶೋಧಕರು ತಮ್ಮ ಪಿಎಚ್‌ಡಿ ಪದವಿಯ ಸಂಶೋಧನೆಯ ವಿಷಯವನ್ನು ಮಂಡಿಸಲಿದ್ದಾರೆ. ಕರ್ನಾಟಕ ಸಂಗೀತ ಗೋಷ್ಠಿ, ಭರತನಾಟ್ಯ…

Read More

ಕಾಸರಗೋಡು : ಕರ್ನಾಟಕ ಹಾಗೂ ಕೇರಳದ ಜಾದೂ ರಂಗದ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡಿದ್ದ, ನಾರ್ತ ಮಲಬಾರ್ ಮ್ಯಾಜಿಕ್ ಫೌಂಡೇಶನ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿದ್ದ ಹಿರಿಯ ಜಾದೂಗಾರ ಪ್ರೊ. ಮಾಧವರವರು (73 ವರ್ಷ) ದಿನಾಂಕ 13 ಫೆಬ್ರವರಿ 2026ರಂದು ಬೆಳಗ್ಗೆ ನಿಧನರಾಗಿದ್ದಾರೆ. ನಾರ್ತ್ ಮಲಬಾರ್ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿ ವೃತ್ತಿ ನಿರ್ವಹಿಸಿದ್ದ ಪ್ರೊ. ಮಾಧವರು ಜಾದೂ ಕಲೆಯಲ್ಲಿ ವೃತ್ತಿಪರ ಜಾದೂಗಾರರನ್ನು ಮೀರಿಸುವ ಪರಿಣಿತಿಯನ್ನು ಹೊಂದಿದ್ದರು. 15 ಕಲಾವಿದರ ‘ಮಾಯ ರಂಜಿನಿ’ ತಂಡವನ್ನು ಕಟ್ಟಿ, ಅಪಾರ ಪ್ರಮಾಣದ ಇಲ್ಲ್ಯುಷನ್ ಜಾದೂ ಸಾಮಾಗ್ರಿಗಳನ್ನು ಬಳಸಿ ಕರ್ನಾಟಕ ಹಾಗೂ ಕೇರಳದ ವಿವಿಧೆಡೆ ಸುಮಾರು ಐದು ದಶಕಗಳ ಕಾಲ ಸಾವಿರಾರು ಪ್ರದರ್ಶನಗಳನ್ನು ನೀಡಿದ್ದಾರೆ. ಉತ್ತಮ ವಾಗ್ಮಿಯಾಗಿ, ಜಾದೂ ಕ್ಷೇತ್ರದ ಅಪಾರ ಅನುಭವ ಹಾಗೂ ಜ್ಞಾನವನ್ನು ಹೊಂದಿದ್ದ ಪ್ರೊ. ಮಾಧವರು ನಾರ್ತ್ ಮಲಬಾರ ಮ್ಯಾಜಿಕ್ ಫೌಂಡೇಷನ್ ಸಂಘಟನೆಯ ಮೂಲಕ ಜಾದೂ ಕ್ಷೇತ್ರದ ಉನ್ನತಿಗೆ ಶ್ರಮಿಸಿದ್ದರು. ಮಂಗಳೂರಿನ ಜಾದೂ ಸಂಘಟನೆ ಮಂಗಳಾ ಮ್ಯಾಜಿಕ್ ಸರ್ಕಲ್ ಇದರ ಸ್ಥಾಪಕ ಸದಸ್ಯರಾಗಿದ್ದರು.…

Read More

ರಾಗ ಧನ ಸಂಸ್ಥೆಯ ಆಶ್ರಯದಲ್ಲಿ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ದಿನಾಂಕ 06 ಫೆಬ್ರವರಿ 2026ರಂದು ಆಯೋಜಿಸಲಾಗಿರುವ ಶ್ರೀ ಪುರಂದರದಾಸರು ಹಾಗೂ ಸಂಗೀತ ತ್ರಿಮೂರ್ತಿ ಉತ್ಸವದ ಮೊದಲ ದಿನದಂದು ಚೆನ್ನೆಯ ಹೆಸರಾಂತ ಕಲಾವಿದರಾದ ಸಾಯಿ ವಿಶ್ಲೇಶ್ ಇವರು ಪ್ರಧಾನ ಕಛೇರಿಯನ್ನು ನೀಡಿದರು. ಇದಕ್ಕೂ ಮುನ್ನ ನಡೆದ ಪೂರ್ವಭಾವಿ ಕಛೇರಿಯನ್ನು ನಡೆಸಿಕೊಟ್ಟವರು ಮಂಗಳೂರಿನ ಆರೋಹಣಂ ಸಂಸ್ಥೆಯ ನಿರ್ದೇಶಕ ಹಾಗೂ ಸಂಗೀತ ಗುರುಗಳಾದ ಡಾ. ಅನೀಶ್ ಭಟ್ ಇವರ ಶಿಷ್ಯೆಯರಾದ ಶ್ರೀವರದ ಪಿ., ಸುಮನ ಕೆ. ಹಾಗೂ ಚಿನ್ಮಯಿ ವಿ.ಭಟ್. ತಮ್ಮ ಹಾಡುಗಾರಿಕೆಯಲ್ಲಿ ಮಾಯಾ ಮಾಳವಗೌಳ ರಾಗದ ಕೃತಿಗೆ ಸ್ವರ ಪ್ರಸ್ತಾರ ಮಾಡಿ ಅಚ್ಚುಕಟ್ಟಾಗಿ ಪ್ರಸ್ತುತಪಡಿಸಿದರು. ಮುಂದೆ ಕಾಪಿ ರಾಗಾಲಾಪನೆ ‘ಇಂತ ಸೌಖ್ಯ’ ಕೃತಿಗೆ ಸುಂದರವಾದ ಅನಾವರಣವನ್ನು ಮಾಡಿ ಶ್ರೋತೃಗಳಿಗೆ ಉಣ ಬಡಿಸಿದರು. ಮುಂದೆ ‘ರಾಮನಾಮ ಪಾಯಸಕ್ಕೆ’ ದೇವರ ನಾಮದೊಂದಿಗೆ ಕಚೇರಿ ಸಂಪನ್ನಗೊಂಡಿತು. ಧನಶ್ರೀ ಶಬರಾಯ ವಯೊಲಿನ್‌ನಲ್ಲಿ ಹಾಗೂ ಮೃದಂಗದಲ್ಲಿ ಡಾ. ಬಾಲಚಂದ್ರ ಆಚಾರ್ ಉತ್ತಮವಾಗಿ ಸಹಕಾರ ನೀಡಿದರು. ಆ ಬಳಿಕ…

Read More

ಮಂಗಳೂರು : ಹಳೆ ತಲೆಮಾರಿನ ಅರ್ಥಧಾರಿ, ಶಿಕ್ಷಕ ಮತ್ತು ಶಂಭೂರು ಗ್ರಾಮದ ಪಟೇಲ ದಿ. ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ಅವರ ಪುತ್ರ ಹವ್ಯಾಸಿ ಯಕ್ಷಗಾನ ಕಲಾವಿದ, ನಿವೃತ್ತ ಭೂಮಾಪನ ಅಧಿಕಾರಿ ದಿ. ಬೊಂಡಾಲ ರಾಮಣ್ಣ ಶೆಟ್ಟರ ಹೆಸರಿನಲ್ಲಿ ನೀಡಲಾಗುವ ‘ಬೊಂಡಾಲ ಪ್ರಶಸ್ತಿ’ಗೆ ಕಟೀಲು ಮೇಳದ ಹಿರಿಯ ವೇಷಧಾರಿ ಲಕ್ಷ್ಮಣ ಶೆಟ್ಟಿ ತಾರೆಮಾರ್ ಆಯ್ಕೆಯಾಗಿದ್ದಾರೆ. ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಟೀಲು ಮೇಳದಲ್ಲಿ ಸೇವೆಸಲ್ಲಿಸಿದ ಕಲಾವಿದರಿಗಾಗಿಯೇ ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಇವರು ನೀಡುತ್ತಿರುವ ವಾರ್ಷಿಕ ಪ್ರಶಸ್ತಿಗೆ ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸಂಚಾಲಕರಾಗಿರುವ ಆಯ್ಕೆಸಮಿತಿ 2025-26ನೇ ಸಾಲಿಗೆ ಲಕ್ಷ್ಮಣ ಶೆಟ್ಟರ ಹೆಸರನ್ನು ಶಿಫಾರಸು ಮಾಡಿದೆ. ಪ್ರಶಸ್ತಿಯು ರೂ.10,000/- ನಗದು, ಶಾಲು, ಸ್ಮರಣಿಕೆ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ ಲಕ್ಷ್ಮಣ ಶೆಟ್ಟಿ ತಾರೆಮಾರ್ : ತೆಂಕುತಿಟ್ಟು ಯಕ್ಷಗಾನ ರಂಗದ ಪ್ರತಿಭಾನ್ವಿತ ಕಲಾವಿದರಾದ ಲಕ್ಷ್ಮಣ ಶೆಟ್ಟಿಯವರು ಬೆಳ್ತಂಗಡಿ ತಾಲೂಕಿನ ತಾರೆಮಾರಿನಲ್ಲಿ…

Read More

ಮಂಗಳೂರು : ಸಂಗೀತ ಪರಿಷತ್ ಸಂಸ್ಥೆಯು ಸ್ಥಾಪನೆಯಾದ ಆರಂಭದ ಹಂತದಲ್ಲಿ ಹಲವು ಮನೆ ಮನೆಗಳಲ್ಲಿ ಸಂಗೀತ ಕಛೇರಿಯನ್ನು ಹಮ್ಮಿಕೊಂಡು ಬರುತ್ತಿತ್ತು. ಕರ್ನಾಟಕ ಸಂಗೀತವನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಳಿಸಿ ಬೆಳೆಸುವ ಮಹತ್ತರ ಆಶಯದೊಂದಿಗೆ ಕಲಾಭಿಮಾನಿಗಳಿಗೆ ಸಂಗೀತವನ್ನು ನೀಡುವುದರೊಂದಿಗೆ ಸಂಸ್ಥೆಯ ಪರಿಚಯ, ಕಲಾಭಿಮಾನಿಗಳ ಪರಿಚಯ, ಕಲಾವಿದರ ಪರಿಚಯ ಹೀಗೆ ಒಂದು ಕುಟುಂಬದಂತೆ ಕಾರ್ಯಕ್ರಮಗಳು ನಡೆಯುತ್ತಿದ್ದವು. ಸಂಸ್ಥೆಯು ಬೆಳೆಯುತ್ತಿದ್ದಂತೆ ದೊಡ್ಡ ದೊಡ್ಡ ಪ್ರಮಾಣದ ಕಾರ್ಯಕ್ರಮಗಳು ಆರಂಭವಾಯಿತು. ಗೃಹ ಸಂಗೀತವು ಸಭಾಭವನಕ್ಕೆ ಸ್ಥಳಾಂತರಗೂಂಡಿತು. 2013 ಅಕ್ಟೋಬರ್ 18ರಂದು ನಾವು ಕಲಾವಿದರೂ ಹಾಗೂ ಕಲಾಭಿಮಾನಿಗಳೊಂದಿಗೆ ದೂರದ ಊರುಗಳಿಗೆ ತೆರಳಿ (ಶೃಂಗೇರಿ) ಒಂದು ದಿನದ ಪ್ರವಾಸ (ಸಂಗೀತ ಯಾತ್ರಾ) ಅಲ್ಲಿಯ ಸಭಾದ ಜೊತೆಯಲ್ಲಿ ಕಛೇರಿ ಹೀಗೆ ವಿಭಿನ್ನ ಯೋಜನೆಯನ್ನು ಆರಂಭಿಸಲಾಯಿತು. ಸುಬ್ರಹ್ಮಣ್ಯದಲ್ಲೂ ಕಾರ್ಯಕ್ರಮ ಆಯೋಜಿಸಿತ್ತು. ಇದೀಗ ನಮ್ಮ ಸದಸ್ಯರು, ಕಲಾಭಿಮಾನಿಗಳು ಹಾಗೂ ಕಲಾಪೋಷಕರ ಆಸ್ಥೆಯಂತೆ ಈ ಯೋಜನೆಯ ಪುನರಾರಂಭ ಇದೇ ಬರುವ ದಿನಾಂಕ 14 ಫೆಬ್ರುವರಿ 2026ರ ಶನಿವಾರ ವಾಮಂಜೂರಿನ ಚರ್ಚ್ ಮುಂಭಾಗ ಮೆಂಡೋನ್ಸ ಗಾರ್ಡನ್ ಗ್ಲೋಬಲ್…

Read More

ಕಿನ್ನಿಗೋಳಿ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕದ ವತಿಯಿಂದ ಖ್ಯಾತ ಸಾಹಿತಿ ಡಾ. ಬಿ. ಜನಾರ್ದನ ಭಟ್ ಬರೆದ ‘ತುಳುನಾಡಿನ ಬೆರ್ಮರು’ ಕೃತಿಯ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮವು ದಿನಾಂಕ 15 ಫೆಬ್ರವರಿ 2026ರಂದು ಸಂಜೆ ಗಂಟೆ 3-45ಕ್ಕೆ ಸಚ್ಚೇರಿಪೇಟೆ ಸೇತುವೆ ಬಳಿಯ ಶಾಂಭವಿ ನದಿ ತಟದಲ್ಲಿರುವ ಆಳಗುಂಡಿ ಬ್ರಹ್ಮಸ್ಥಾನದಲ್ಲಿ ನಡೆಯಲಿದೆ. ಕೆ.ಎಲ್. ಕುಂಡಂತಾಯ, ಪೊಸ್ರಾಲು ರಾಘವೇಂದ್ರ ಭಟ್ ಪೊಸ್ರಾಲು, ಜಗದೀಶ ಶೆಟ್ಟಿ ನಡಿಗುತ್ತು, ಕೆ. ಸತ್ಯಶಂಕರ ಶೆಟ್ಟಿ ಇವರುಗಳು ಭಾಗವಹಿಸಲಿದ್ದಾರೆ. ತುಳುನಾಡಿನ ಪ್ರಧಾನ ಆರಾಧ್ಯ ದೈವವಾದ ಬೆರ್ಮೆರ್ ಎಂದರೆ ಯಾರು ಎನ್ನುವ ವಿಚಾರ ವಿದ್ವಾಂಸರಿಂದ ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸಲ್ಪಡುತ್ತಿದೆ. ಬೆರ್ಮೆರ ಯಾರು ಎಂಬ ಚರ್ಚೆಗೆ ಹೊಸ ದಿಕ್ಕನ್ನು ತೋರಿಸಿದ ಡಾ. ಬಿ. ಜನಾರ್ದನ ಭಟ್ಟರು ಎರಡು ಬಗೆಯ ಬೆರ್ಮರನ್ನು ಗುರುತಿಸಿದ್ದಾರೆ. ಶಾಲಿವಾಹನನು ತುಳುನಾಡಿನ ಸಾತವಾಹನ ಅರಸನೆಂಬ ಗೋವಿಂದ ಪೈಗಳ ಸೂಚನೆಯನ್ನು ವಿಸ್ತರಿಸಿ ಶಾಸ್ತಾವು ಅಥವಾ ಶಾಸ್ತಾರನೆ ಭೂತ ಬ್ರಹ್ಮ ಎಂಬ ವಾದವನ್ನು ಹೊಸದಾಗಿ…

Read More