Subscribe to Updates
Get the latest creative news from FooBar about art, design and business.
Author: roovari
ಕೋಣಾಜೆ : ನಿಟ್ಟೆ ವಿಶ್ವವಿದ್ಯಾನಿಲಯದ ಡಾ. ಕೆ.ಆರ್. ಶೆಟ್ಟಿ ತುಳು ಅಧ್ಯಯನ ಕೇಂದ್ರದಲ್ಲಿ ದಿನಾಂಕ 21 ಜೂನ್ 2025ರಂದು ಅಂಬುರುಹ ಯಕ್ಷಸದನ ಪ್ರತಿಷ್ಠಾನ ಬೊಟ್ಟಿಕೆರೆ (ರಿ.) ಮಂಜನಾಡಿ ಸಂಸ್ಥೆಯ ವತಿಯಿಂದ ಯಕ್ಷಗಾನ ಸವ್ಯಸಾಚಿ, ಅಭಿನವ ವಾಲ್ಮೀಕಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಸಂಸ್ಮರಣಾರ್ಥ ‘ಅಂಬುರುಹ ಯಕ್ಷಸದನ ಪ್ರಶಸ್ತಿ’ಯನ್ನು ತೆಂಕುತಿಟ್ಟು ಯಕ್ಷಗಾನ ರಂಗದ ಪ್ರಸಿದ್ಧ ಕಲಾವಿದ ರೆಂಜಾಳ ರಾಮಕೃಷ್ಣ ರಾವ್ ಇವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರದಾನ ಮಾಡಿದ ಖ್ಯಾತ ಯಕ್ಷಗಾನ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಮಾತನಾಡಿ “ಯಕ್ಷಗಾನವು ಇಂದು ಸಂಪತ್ಭರಿತವಾಗಿದೆ, ತಾಳಮದ್ದಳೆಯು ಕೂಡಾ ವೈಭವದಿಂದ ನಡೆಯುತ್ತಿದೆ. ಆದರೆ ಯಕ್ಷಗಾನ ಶ್ರೀಮಂತಗೊಂಡಿರುವುದು ಅದರ ಸರಳತೆಯಿಂದ ಹಾಗೂ ಹಿರಿಯ ಯಕ್ಷಗಾನ ಕಲಾವಿದರ ಬದ್ಧತೆ ಮತ್ತು ಪರಿಶ್ರಮದ ಫಲವಾಗಿ. ಹಿರಿಯ ಕಲಾವಿದರು ಪಾಲಿಸಿಕೊಂಡು ಬಂದ ಪರಂಪರೆಯನ್ನು ಕೆಡಿಸದೆ ಮುಂದುವರಿಸುವುದೇ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಯಕ್ಷಗಾನ ಕ್ಷೇತ್ರದಲ್ಲಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಕೊಡುಗೆ ಅಪಾರವಾಗಿದೆ. ಪೂಂಜರ ಕವಿತ್ವ ಓದಿನ ಸತ್ವವನ್ನು ಹೆಚ್ಚಿಸುತ್ತದೆ. ಪೂಂಜರ ನೆನಪಿನಲ್ಲಿ ರೆಂಜಾಳ ರಾಮಕೃಷ್ಣ ರಾವ್ ಇವರಿಗೆ…
ಮಂಗಳೂರು : ಕನ್ನಡ ಕರಾವಳಿ ಸುದ್ದಿ: ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದ ವತಿಯಿಂದ ಕೊಡ ಮಾಡುವ ‘ಕೆಂಪೇಗೌಡ ಪ್ರಶಸ್ತಿ’ಯನ್ನು ಪರಮ ಪೂಜ್ಯ ಡಾ. ನಿರ್ಮಲಾನಂದ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಕರ್ನಾಟಕ ಸರಕಾರದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಮಲ್ಲೇಶ್ವರಂ ಕ್ಷೇತ್ರದ ಶಾಸಕರಾದ ಶ್ರೀ ಡಾ. ಸಿ.ಎನ್. ಅಶ್ವತ್ ನಾರಾಯಣ್ ಇವರ ನೇತೃತ್ವದಲ್ಲಿ ಹಾಗೂ ಸಮಸ್ತ ಗಣ್ಯರ ಸಮ್ಮುಖದಲ್ಲಿ ನಡೆಯಲಿರುವ ನಾಡಪ್ರಭು ಕೆಂಪೇಗೌಡರ 516ನೇ ಜಯಂತ್ಯೋತ್ಸವದ ಅಂಗವಾಗಿ ಯಕ್ಷಗಾನ ಕ್ಷೇತ್ರದ ಹಿರಿಯ ಯಕ್ಷಗಾನ ಪ್ರಸಂಗಕರ್ತರು ನಿವೃತ್ತ ಶಿಕ್ಷಕರೂ ಯಕ್ಷ ಸಾಹಿತಿ ಅರ್ಥದಾರಿಗಳು ಯಕ್ಷಗಾನ ಕ್ಷೇತ್ರದ ದಿಗ್ಗಜರೂ ಆದ ಕಂದಾವರ ರಘರಾಮ ಶೆಟ್ಟಿಯವರಿಗೆ ದಿನಾಂಕ 27 ಜೂನ್ 2025ರಂದು ಅರಮನೆ ಮೈದಾನದಲ್ಲಿ ನೀಡಿ ಗೌರವಿಸಲಾಗುವುದು. ಕಂದಾವರ ರಘುರಾಮ ಶೆಟ್ಟರ ರಚನೆಗಳಲ್ಲಿ ರಂಗದೃಷ್ಠಿ ಸ್ಪುಟವಾಗಿದ್ದು, ಇಡಿಯ ಪ್ರದರ್ಶನದ ಚೌಕಟ್ಟು, ಹಾಡುವಿಕೆ, ರಸವೈವಿಧ್ಯ, ವೇಷಗಳ ಅವಕಾಶ, ಒಟ್ಟು ಸಮತೋಲ, ನಾಟಕೀಯ ನಡೆ ಇವುಗಳನ್ನು ಗಮನಿಸಿ ಇವರು ರಚನೆಗಳನ್ನು ನೀಡಿದ್ದಾರೆ. ಪಾತ್ರ ಚಿತ್ರಣ, ಸನ್ನಿವೇಶ ಚಿತ್ರಣಗಳಿಗೆ ಗಮನವಿತ್ತಿದ್ದಾರೆ. ಚೆಲುವೆ ಚಿತ್ರಾವತಿ, ಶೂದ್ರ…
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣ ರಾಜ ಪರಿಷತ್ತಿನ ಮಂದಿರದಲ್ಲಿ ಸ್ನೇಹ ಪ್ರಿಂಟರ್ಸ ಆಯೋಜಿಸಿದ್ದ ಮಹಾಮಹೋಪಧ್ಯಾಯ ಡಾ. ಎಸ್. ರಂಗನಾಥ್ ಅವರ ‘ಕರ್ನಾಟಕದ ಶತಾಯುಷಿಗಳು’ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 25 ಜೂನ್ 2025ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ವಾಂಸ ನಾಡೋಜ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ ಮಾತನಾಡಿ “ಸತ್ತವರ ಸಂಗದಲಿ ಹೊತ್ತು ಹೋಗುವುದೆನಗೆ” ಎಂಬ ಬಿ.ಎಂ.ಶ್ರೀಯವರ ಮಾತನ್ನು ನೆನಪು ಮಾಡಿಕೊಂಡು, ಶತಾಯುಷಿಗಳು ಈ ನಾಡಿನ ಭವ್ಯ ಪರಂಪರೆಯ ಪ್ರತೀಕ. ಅವರು ಸ್ವಾರ್ಥವನ್ನು ಬಿಟ್ಟು ನಾಡಿನ ಹಿತವನ್ನು ಧ್ಯಾನಿಸಿದ್ದರಿಂದಲೇ ಅವರ ಬದುಕಿನ ನೂರು ವರ್ಷ ಸಾರ್ಥಕವಾಗಿದೆ ಮತ್ತು ದಾಖಲೆಗೆ ಅರ್ಹವಾಗಿದೆ. ರಂಗನಾಥ್ ಇವರು ಕೃತಿಯಲ್ಲಿ ಮಹತ್ವದ ಸಂಗತಿಗಳನ್ನು ದಾಖಲಿಸಿದ್ದಾರೆ. ಅವರಲ್ಲಿ ಹಲವರ ಜೊತೆಗೆ ತಮಗಿದ್ದ ಒಡನಾಟವನ್ನು ಮತ್ತು ರಸಪ್ರಸಂಗಗಳನ್ನು ನೆನಪು ಮಾಡಿಕೊಂಡರು. ಶತಾಯುಷಿಗಳಲ್ಲಿ ಒಬ್ಬರಾದ ಸರ್. ಎಂ. ವಿಶ್ವೇಶ್ವರಯ್ಯನವರು ಕಂಡ ಕನಸಾದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಈ ಕೃತಿ ಬಿಡುಗಡೆಯಾಗುತ್ತಿರುವುದು ಅರ್ಥಪೂರ್ಣವಾಗಿದೆ” ಎಂದು ತಿಳಿಸಿದರು. ಕೃತಿಯನ್ನು…
ಕಲ್ಲಡ್ಕ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ವತಿಯಿಂದ ಯಕ್ಷಧ್ರುವ-ಯಕ್ಷಶಿಕ್ಷಣ ‘ಯಕ್ಷಗಾನ ಶಿಕ್ಷಣ ಅಭಿಯಾನ’ವನ್ನು ದಿನಾಂಕ 24 ಜೂನ್ 2025ನೇ ಮಂಗಳವಾರದಂದು ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ಅತಿಥಿ ಅಭ್ಯಾಗತರಿಂದ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಲಾಯಿತು. ಭುವಿ ದೇವರ ಸ್ತುತಿಯನ್ನು ಹಾಡಿದಳು. ಈ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ್ ಮಾದವ ಶ್ರೀಮಾನ್ ಇವರ ಅಧ್ಯಕ್ಷೀಯ ನುಡಿಗಳಲ್ಲಿ “ಯಕ್ಷಗಾನವು ಶಿಕ್ಷಣದ ಜೊತೆ ಇರುವಂತಹ ಒಂದು ಕಲೆ. ಇದರಿಂದ ಮನಸ್ಸಿನ ಭಾವನೆಯು ಹತೋಟಿಯಲ್ಲಿರುತ್ತದೆ” ಎಂದು ಹೇಳಿದರು. ವೇದಿಕೆಯಲ್ಲಿ ಇನ್ನೋರ್ವ ಅತಿಥಿಯಾದ ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ವಿಟ್ಲ ಘಟಕದ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಇವರು “ಯಕ್ಷಗಾನವು ಒಂದು ಶಿಕ್ಷಣ. ಅದನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು” ಎಂದು ಶುಭ ಹಾರೈಸಿದರು. ಅತಿಥಿಯಾದ ಭಾಗವಹಿಸಿದ ನಿವೃತ್ತ ಉಪನ್ಯಾಸಕರು ವಿಟ್ಲ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀಯುತ ಪಿ. ಪೂವಪ್ಪ ಶೆಟ್ಟಿ ಇವರ ಹಿತನುಡಿಗಳಲ್ಲಿ ಯಕ್ಷಗಾನದಿಂದ ಮಾನಸಿಕ ಸಂತೋಷ…
ವಿಜಾಪುರ ಜಿಲ್ಲೆಯ ಬಾದಾಮಿ ತಾಲೂಕಿನ ಹುಲ್ಲಿಕೇರಿ ಗ್ರಾಮದಲ್ಲಿ 1945 ಜೂನ್ 26ರಂದು ಜನಿಸಿದ ಜಯಶ್ರೀ ಗುತ್ತಲ ಜನಪದ ಕ್ಷೇತ್ರದ ಗಾಯಕಿ – ಸಾಧಕಿ. ತಂದೆ ತಿರುಮಲ ದೇಶಪಾಂಡೆ ತಾಯಿ ಲಕ್ಷ್ಮೀ ಬಾಯಿ. ಹವ್ಯಾಸಿ ನಾಟಕ ಕಲಾವಿದರಾದ ತಂದೆ ವಾಸುದೇವ ವಿನೋದಿನಿ ನಾಟ್ಯ ಮಂಡಳಿಯ ಸ್ಥಾಪಕ ಸದಸ್ಯರು. ತಾಯಿ ಸಂಗೀತ ಕಲಾವಿದೆ. ಹಾಗಾಗಿ ಜಯಶ್ರೀ ಅವರು ಬಾಲ್ಯದಲ್ಲಿಯೇ ಕಲೆಯ ಬಗ್ಗೆ ವಿಶೇಷ ಮಮತೆಯನ್ನು ಬೆಳೆಸಿಕೊಂಡರು. ಸಂಗೀತದತ್ತ ವಿಶೇಷ ಪ್ರೀತಿಯನ್ನು ಹೊಂದಿದ್ದ ಜಯಶ್ರೀ ಅವರು ಪಂಡಿತ ಭೀಮಸೇನ್ ಜೋಶಿಯವರ ತಕ್ಕಂದಿರಾದ ಶಾಮಾಚಾರಿ ಜೋಶಿಯವರಲ್ಲಿ ಹಿಂದುಸ್ತಾನಿ ಸಂಗೀತವನ್ನು ಕಲಿತರು ಮುಂದೆ ಜಿ. ಆರ್. ನಿಂಬರಗಿ ಇವರಲ್ಲಿ ಸಂಗೀತ ಕಲಿಕೆ ಮುಂದುವರಿಸಿದರು. ಆಕಾಶವಾಣಿ ದೂರದರ್ಶನಗಳಲ್ಲಿ ಜೆ. ಸಿ. ಗುತ್ತಲ ಇವರ ಗಾಯನ, ಆಶುಭಾಷಣ, ಸಂದರ್ಶನಗಳು ಪ್ರಸಾರವಾಗಿದ್ದಲ್ಲದೆ ಹಲವೆಡೆ ಅವರ ಕಾರ್ಯಕ್ರಮಗಳು ನಡೆದವು. ಜಾನಪದ ಸಂಗೀತದ ಬಗ್ಗೆ ಹಲವಾರು ಲೇಖನಗಳನ್ನು ಬರೆದರು. ಅಂತೆಯೇ ಹರಿದಾಸ ಸಾಹಿತ್ಯ ಸುಧೆ, ಹರಿದಾಸರ ಅಪೂರ್ವ ಕೀರ್ತನೆಗಳ ಸಂಗ್ರಹ, ಜನಪದ ಗೀತೆಗುಚ್ಛ ಮುಂತಾದ ಕೃತಿಗಳೂ…
ಪ್ರೊ. ವೆಂಕಟರಮಣ ಭಟ್ ಸಾಹಿತ್ಯ ಲೋಕದಲ್ಲಿ ವಿ. ಬಿ. ಮೊಳೆಯಾರ ಎಂದು ಪ್ರಸಿದ್ಧಿ ಪಡೆದಿದ್ದಾರೆ. ಕಾಸರಗೋಡು ಜಿಲ್ಲೆಯ ನೀರ್ಚಾಲು ಸಮೀಪದ ಮೊಳೆಯಾರು ಮನೆತನದಲ್ಲಿ 1936ರ ಜೂನ್ 26ರಂದು ಜನಿಸಿದ ಇವರ ತಂದೆ ಶಂಕರನಾರಾಯಣ ಭಟ್ಟ ಹಾಗೂ ತಾಯಿ ಪರಮೇಶ್ವರಿ. ಸಂಸ್ಕೃತ ಹಾಗೂ ಕನ್ನಡ ಭಾಷಾ ವಿದ್ವಾಂಸರಾದ ತಂದೆ ಶಂಕರನಾರಾಯಣ ಭಟ್ಟರಿಂದ ಪ್ರಭಾವಿತರಾಗಿ ಬೆಳೆದ ಮೊಳೆಯಾರ ಅವರು ಬಾಲ್ಯದಿಂದಲೇ ಸಾಹಿತ್ಯದತ್ತ ಒಲವು ಬೆಳೆಸಿಕೊಂಡಿದ್ದರು. ಛಂದೋಬದ್ಧವಾದ ಕವಿತೆಗಳನ್ನು ರಚಿಸಿದ್ದರು. ಮಂಗಳೂರಿನಲ್ಲಿ ವಿದ್ಯಾಭ್ಯಾಸವನ್ನು ಆರಂಭಿಸಿ ನಂತರ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಿಂದ ಬಿ. ಎ. ಆನರ್ಸ್ ಮತ್ತು ಎಂ. ಎ. ಪದವಿಯನ್ನು ಚಿನ್ನದ ಪದಕದೊಂದಿಗೆ ಗಳಿಸಿದರು. ಮದರಾಸಿನಲ್ಲಿ ವೃತ್ತಿಯನ್ನು ಆರಂಭಿಸಿ ನಂತರ ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದರು. ಕಾವ್ಯ ಬರಹ, ಚಿಂತನ ಬರಹಗಳು, ನಗೆ ಬರಹಗಳು, ನಾಟಕ ರಚನೆ, ವ್ಯಕ್ತಿ ಚಿತ್ರ ರಚನೆಗಳು ಹೀಗೆ ಸಾಹಿತ್ಯ ಕೃಷಿ ಮಾಡಿರುವ ವಿ. ಬಿ. ಮೊಳೆಯಾರರದ್ದು ಚಟುವಟಿಕೆಯಿಂದ ಸದಾ ಕಾರ್ಯ ಪ್ರವೃತ್ತಗಾಗಿದ್ದ ವ್ಯಕ್ತಿತ್ವ.…
ಬೆಂಗಳೂರು : ಕರ್ನಾಟಕ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಕವಿ ಡಾ. ಪ್ರವೀಣರಾಜ್ ಎಸ್. ರಾವ್ ಇವರ “ನದಿ ತಟದ ವೃಕ್ಷ” ಕವನ ಸಂಕಲನವು ದಿನಾಂಕ 08 ಜೂನ್ 2025 ರಂದು ಲೋಕಾರ್ಪಣೆಗೊಂಡಿತು. ಕಾರ್ಯಕ್ರಮದ ಉದ್ಘಾಟನೆಯು ಸೇರಿದ ಎಲ್ಲಾ ಕವಿಗಳು ವೃಕ್ಷಗಳಿಗೆ ನೀರೆರೆಯುವ ಮೂಲಕ ನೆರವೇರಿಸಿದರು. “ನದಿ ತಟದ ವೃಕ್ಷ” ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಿದ ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ ಇದರ ಅಧ್ಯಕ್ಷರಾದ ಶ್ರೀ ಎಂ. ಪ್ರಕಾಶಮೂರ್ತಿಯವರು ಮಾತನಾಡಿ “ಕವನದಲ್ಲಿ ಆಧುನಿಕ ಯುಗದ ಆಕರ್ಷಣೆಗೆ ಒಳಗಾಗಿ ನಾವು ನಮ್ಮ ನೆಲ, ಜಲ, ಆಕಾಶವನ್ನು ನಿರ್ಲಕ್ಷ್ಯ ಮಾಡುತ್ತಿರುವ ಬಗೆಗೆ ಮಾರ್ಮಿಕವಾಗಿ ಕವಿಗಳು ಈ ಕವನ ಸಂಕಲನದಲ್ಲಿ ಚಿತ್ರಿಸಿರುತ್ತಾರೆ ಹಾಗೆಯೇ ಪರಿಸರದ ಬಗ್ಗೆ ಒಳ್ಳೆಯ ಸಂದೇಶವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ಕವನಗಳು ಮತ್ತೆ ಮತ್ತೆ ಅವರ ಲೇಖನಿಯಿಂದ ಬರಲಿ” ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದ ಆರ್. ಆರ್. ನಗರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಉದಂತ…
ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದ ಡಾ. ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2024-25 ಸಾಲಿನ ‘ಯಕ್ಷ ಮಂಗಳ ಪ್ರಶಸ್ತಿ’ ಪ್ರದಾನ ಸಮಾರಂಭವು ಮಂಗಳೂರು ವಿ. ವಿ. ಯಲ್ಲಿನ ಡಾ. ಯು. ಆರ್. ರಾವ್ ಸಭಾಂಗಣದಲ್ಲಿ ದಿನಾಂಕ 27 ಜೂನ್ 2025ರಂದು ಬೆಳಗ್ಗೆ 10.30 ಕ್ಕೆ ನಡೆಯಲಿದೆ. ಮಂಗಳೂರು ವಿ. ವಿ. ಇದರ ಕುಲಪತಿಗಳಾದ ಪ್ರೊ. ಪಿ. ಎಲ್. ಧರ್ಮ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಯಕ್ಷಗಾನ ರಂಗದ ಹಿರಿಯ ಅರ್ಥಧಾರಿ ಹಾಗೂ ವಿದ್ವಾಂಸರಾಗಿರುವ ಡಾ. ರಮಾನಂದ ಬನಾರಿ ಕಾಸರಗೋಡು, ಹಿರಿಯ ಯಕ್ಷಗಾನ ಕಲಾವಿದ ಹಾಗೂ ವಿದ್ವಾಂಸರಾದ ಪ್ರೊ. ಎಂ. ಎಲ್ ಸಾಮಗ, ತೆಂಕುತಿಟ್ಟು ಯಕ್ಷಗಾನದ ಹಿರಿಯ ಬಣ್ಣದ ವೇಷಧಾರಿ ಸದಾಶಿವ ಶೆಟ್ಟಿಗಾರ್ ಸಿದ್ದಕಟ್ಟೆ ಇವರಿಗೆ ‘ಯಕ್ಷ ಮಂಗಳ ಪ್ರಶಸ್ತಿ’ ಹಾಗೂ ಲೇಖಕ, ಪತ್ರಕರ್ತ ಹಾಸ್ಯಗಾರರಾದ ಶಿರಸಿಯ ಅಶೋಕ ಇವರ ‘ದಶರೂಪಕಗಳ ದಶಾವತಾರ’ ಕೃತಿಗೆ ‘ಯಕ್ಷ ಮಂಗಳ ಕೃತಿ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.…
ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಪಡೀಲ್ ಅಮೃತ ಕಾಲೇಜ್ ಸಹಯೋಗದಲ್ಲಿ ಆಯೋಜಿಸಿರುವ ತುಳು ನಾಟಕ ಕಾರ್ಯಾಗಾರದ ಉದ್ಘಾಟನಾ ಸಮರಂಭವು ದಿನಾಂಕ 24 ಜೂನ್ 2025ರ ಮಂಗಳವಾರದಂದು ಪಡೀಲ್ ನಲ್ಲಿರುವ ಅಮೃತ ಕಾಲೇಜ್ ನಲ್ಲಿ ನಡೆಯಿತು. ಕಾರ್ಯಾಗಾರವನ್ನು ಉದ್ಘಾಟಿಸಿದ ಹಿರಿಯ ನಿರ್ದೇಶಕ ತಮ್ಮ ಲಕ್ಷ್ಮಣ ಮಾತನಾಡಿ “ತುಳು ನಾಟಕ ಪರಂಪರೆಯಲ್ಲಿ ಶಿಕ್ಷಕರ ಹಾಗೂ ಶಿಕ್ಷಣ ಸಂಸ್ಥೆಗಳ ಪಾತ್ರ ಬಹಳ ಮಹತ್ವದ್ದು. ಪಂಜೆ ಮಂಗೇಶರಾಯರ ಕಾರಣದಿಂದಾಗಿ ಶತಮಾನಗಳ ಹಿಂದೆಯೇ ಶಾಲೆಗಳಲ್ಲಿ ನಾಟಕ ಪ್ರದರ್ಶನ ಆರಂಭವಾಗಿತ್ತು. ವಿದ್ಯಾರ್ಥಿಗಳು ತುಳು ನಾಟಕಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡು ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಶಾಲೆಯಿಂದಲೇ ತುಳು ನಾಟಕಗಳ ಬೆಳವಣಿಗೆ ಆರಂಭಗೊಂಡು ಅದು ಈಗ ವೃತ್ತಿಪರವಾಗಿ ಬೆಳವಣಿಗೆ ಹೊಂದಿದೆ. ಅದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಯುವ ಪೀಳಿಗೆಯ ಮೇಲಿದೆ” ಎಂದರು. ಮುಖ್ಯ ಅತಿಥಿಯಾಗಿದ್ದ ನಟ ಪ್ರಭಾಕರ ಮಾತನಾಡಿ “ನಾಟಕದ ಮೂಲಕ ಸ್ನೇಹ, ಪ್ರೀತಿ, ಸಾಮರಸ್ಯವನ್ನು ಮೂಡಿಸಬೇಕು” ಎಂದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್…
ಮಂಗಳೂರು : ಆಷಾಢ ಮಾಸದ ಪ್ರಯುಕ್ತ ‘ಕಾಳಿದಾಸಕಾವ್ಯ – ಕಥಾಸಪ್ತಾಹಃ’ ಕಾರ್ಯಕ್ರಮವು ದಿನಾಂಕ 26 ಜೂನ್ 2025ರಿಂದ ಸಂಜೆ 7-00 ಗಂಟೆಗೆ ಪ್ರಾರಂಭವಾಗಲಿದೆ. ಕಾಳಿದಾಸ ವಿರಚಿತ ಅಮೂಲ್ಯ ಕೃತಿಗಳಾದ ಅಭಿಜ್ಞಾನಶಾಕುಂತಲ, ವಿಕ್ರಮೋರ್ವಶೀಯ, ಮಾಲವಿಕಾಗ್ನಿಮಿತ್ರ, ಕುಮಾರಸಂಭವ, ರಘುವಂಶ, ಮೇಘದೂತ, ಋತುಸಂಹಾರ ಹೀಗೆ ಏಳೂ ಕಾವ್ಯಗಳ ಬಗ್ಗೆ ನಾಡಿನ ಖ್ಯಾತ ವಿದ್ವಾಂಸರು ಕಾವ್ಯದ ಕಥೆಯನ್ನು ಅದ್ಭುತ ವಾಗ್ಝರಿಯ ಮೂಲಕ ತೆರೆದಿಡಲಿದ್ದಾರೆ. ಲಿಂಕ್ ಪಡೆಯಲು 9449047372 ಸಂಖ್ಯೆಗೆ ವಾಟ್ಸಾಪ್ ಮೂಲಕ ಹೆಸರು ಕಳಿಸಿ. ಆಸಕ್ತರಿಗೆ ನೀವೂ ಲಿಂಕ್ ಕಲಿಸಬಹುದು.