Author: roovari

ಉಡುಪಿ : ರಂಗಭೂಮಿ ಉಡುಪಿ ಸಂಸ್ಥೆಯು 60ರ ಸಂಭ್ರಮದಲ್ಲಿದ್ದು ಸಂಸ್ಥೆಯ ಸ್ಥಾಪಕ ಪ್ರಧಾನ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ 45 ವರ್ಷಗಳ ಕಾಲ ‘ರಂಗಭೂಮಿ’ಯನ್ನು ಕಟ್ಟಿ ಬೆಳೆಸಿದ ದಿ. ಕುತ್ಪಾಡಿ ಆನಂದ ಗಾಣಿಗರ ಸಂಸ್ಮರಣಾರ್ಥ ಆಯೋಜಿಸುವ ‘ರಂಗಭೂಮಿ ಆನಂದೋತ್ಸವ -2025 ’ ಕಾರ್ಯಕ್ರಮವು ದಿನಾಂಕ 04 ಮೇ 2025ರಂದು ಎಂ. ಜಿ. ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ‘ರಂಗಭೂಮಿ’ಯ ಆರಂಭದಿಂದ ಇಂದಿನವರೆಗೂ ನಿರಂತರವಾಗಿ ಸಲಹೆ, ಸಹಕಾರ, ಮಾರ್ಗದರ್ಶನ ನೀಡುತ್ತಾ ಮಣಿಪಾಲದ ಪೈ ಕುಟುಂಬದವರು ಸಂಸ್ಥೆಯನ್ನು ಬೆಳೆಸುತ್ತಾ ಬಂದಿದ್ದು, ಟಿ. ಅಶೋಕ್ ಪೈ ಅವರು ನಾಡಿನ ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ರಂಗಕ್ಕೆ ನೀಡಿರುವ ಕೊಡುಗೆಗಾಗಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರಾಯೋಜಿತ ‘ತಲ್ಲೂರು ಗಿರಿಜಾ ಶಿವರಾಮ ಶೆಟ್ಟಿ ಸಂಸ್ಕೃತಿ ಸಾಧಕ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು ಎಂದು ತಲ್ಲೂರು ಫ್ಯಾಮಿಲಿ ಟ್ರಸ್ಟ್ಇದರ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾಹಿತಿ ನೀಡಿದರು. ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಟಿ. ಶ್ಯಾಮ್ ಭಟ್ ಕಾರ್ಯಕ್ರಮ…

Read More

ಕಾಸರಗೋಡು : ಕಾಸರಗೋಡು ಜಿಲ್ಲೆಯ ಸಾಂಸ್ಕೃತಿಕ ಸಾಹಿತ್ಯಿಕ ಸಂಸ್ಥೆಯಾದ ರಂಗಚಿನ್ನಾರಿ ಕಳೆದ ಹಲವು ವರ್ಷಗಳಿಂದ ಕಾಸರಗೋಡಿನ ಹಿರಿಯ ಕಿರಿಯ ಪ್ರತಿಭೆಗಳಿಗೆ ನಗದು ಬಹುಮಾನ ಸಹಿತ ‘ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಸ್ಮರಣಾರ್ಥ ಪ್ರಶಸ್ತಿ’, ‘ರಂಗ ಚಿನ್ನಾರಿ ಪ್ರಶಸ್ತಿ’, ‘ರಂಗ ಚಿನ್ನಾರಿ ಯುವ ಪ್ರಶಸ್ತಿ’ ನೀಡಿ ಪ್ರತಿಭೆಗಳನ್ನು ಗೌರವಿಸಿದೆ. ಇದರಂತೆ 2024-25ನೇ ಸಾಲಿನ ಪ್ರಶಸ್ತಿಯನ್ನು ಘೋಷಿಸಲಾಗಿದೆ ಎಂದು ರಂಗ ಚಿನ್ನಾರಿಯ ನಿರ್ದೇಶಕರುಗಳಾದ ಕಾಸರಗೋಡು ಚಿನ್ನಾ, ಸತೀಶ್ಚಂದ್ರ ಭಂಡಾರಿ, ಸತ್ಯನಾರಾಯಣ ಕೆ. ಮತ್ತು ಮನೋಹರ ಶೆಟ್ಟಿ ತಿಳಿಸಿದ್ದಾರೆ. ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಸ್ಮರಣಾರ್ಥ ಪ್ರಶಸ್ತಿ ಹಾಗೂ ಹರಿರಾಯ ಕಾಮತ್, ಪ್ರೇಮಾ ಕಾಮತ್ ಸ್ಮರಣಾರ್ಥ ನಗದು ಬಹುಮಾನಕ್ಕೆ ಮಾಧವ ಪಾಟಾಳಿ ನೀರ್ಚಾಲು, ರಂಗ ಚಿನ್ನಾರಿ ಪ್ರಶಸ್ತಿ ಹಾಗೂ ಎನ್.ಆರ್. ಬೇಕಲ್ ಸ್ಮರಣಾರ್ಥ ನಗದು ಬಹುಮಾನಕ್ಕೆ ರಾಂ ಎಲ್ಲಂಗಳ ಮತ್ತು ಕುಂಚಿನಡ್ಕ ಶಕುಂತಲಾ ಕೃಷ್ಣ ಭಟ್, ರಂಗ ಚಿನ್ನಾರಿ ಯುವ ಪ್ರಶಸ್ತಿ ಹಾಗೂ ಕೆ. ದೇರಪ್ಪ ಸ್ಮರಣಾರ್ಥ ನಗದು ಬಹುಮಾನಕ್ಕೆ ಕಿರಣ್ ರಾಜ್ ಮತ್ತು ದೀಕ್ಷಾ…

Read More

ಸಾಣೇಹಳ್ಳಿ : ಶ್ರೀ ಶಿವಕುಮಾರ ಕಲಾಸಂಘ (ರಿ.) ಮತ್ತು ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆ ಇದರ ವತಿಯಿಂದ ‘ಮಕ್ಕಳ ಹಬ್ಬ ಸಮಾರೋಪ’ ಸಮಾರಂಭವು ದಿನಾಂಕ 29 ಏಪ್ರಿಲ್ 2025ರಂದು ಸಾಣೇಹಳ್ಳಿಯ ಎಸ್.ಎಸ್. ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು “ಬೇರೆ ಬೇರೆ ಸ್ಥಳಗಳಿಂದ, ವಿಭಿನ್ನ ಸಂಸ್ಕೃತಿಯಿಂದ ಮಕ್ಕಳು ಸಾಣೇಹಳ್ಳಿಗೆ ಬಂದು ಇಲ್ಲಿ ಒಂದಾಗಿ ಶಿಬಿರದಲ್ಲಿ ಸಂತೋಷದಿಂದ ಭಾಗವಹಿಸಿದ್ದು ನಮಗೆ ಖುಷಿ ತಂದಿದೆ. ಈ ಶಿಬಿರದಲ್ಲಿ ಭಾಗವಹಿಸುವ ಮಕ್ಕಳಿಗೆ ಕಾಲ, ಕಾಯಕದ ಪ್ರಜ್ಞೆ ಬೆಳೆಯುವುದು. ಮಕ್ಕಳು ಸೃಷ್ಟಿ ಮಾಡಿಕೊಂಡು ಸುಳ್ಳು ಹೇಳಿ ಆತ್ಮವಂಚನೆ ಮಾಡಿಕೊಳ್ಳದೇ ಸತ್ಯವನ್ನು ಹೇಳಿ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವರು. ಆ ಮೂಲಕ ಗಟ್ಟಿತನ ಕಟ್ಟಿಕೊಟ್ಟಿದೆ. ಮಕ್ಕಳ ಮನಸ್ಸು ಹಸಿಗೋಡೆ ಇದ್ದ ಹಾಗೆ. ಅದಕ್ಕೆ ಏನೇ ಅಂಟಿಸಿದರೂ ತಕ್ಷಣ ಹಿಡಿದುಕೊಳ್ಳುತ್ತದೆ. ಹಾಗೆಯೇ ಏನೇ ವಿಷಯಗಳನ್ನು ಹೇಳಿದರು ತಕ್ಷಣ ಕಲಿಯುವರು. ಇಂತಹ ಮಕ್ಕಳಿಗೆ ಒಳ್ಳೆಯ ಸಂಸ್ಕೃತಿ, ಸಂಸ್ಕಾರಗಳನ್ನು ಬಿತ್ತಿದರೆ ಮನೆ ಆಸ್ತಿಯಾಗುವುದಷ್ಟೇ ಅಲ್ಲ; ರಾಷ್ಟ್ರದ ಆಸ್ತಿಯಾಗುವರು.…

Read More

ಬೆಂಗಳೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಗೌರವ ಕಾರ್ಯದರ್ಶಿ ಶ್ರೀ ರಂಗನಾಥ ರಾವ್ ಇವರ ಸಹಸ್ರ ಚಂದ್ರ ದರ್ಶನ ಶಾಂತಿ ಅಂಗವಾಗಿ ಬೆಂಗಳೂರಿನ ಅಕ್ಷಯ ನಗರದ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ದಿನಾಂಕ 28 ಏಪ್ರಿಲ್ 2025ರಂದು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ತಾಳಮದ್ದಳೆ ಕಾರ್ಯಕ್ರಮವು ಹಟ್ಟಿಯಂಗಡಿ ರಾಮ ಭಟ್ಟ ವಿರಚಿತ ‘ಶರಸೇತು ಬಂಧ’ ಎಂಬ ಆಖ್ಯಾನದೊಂದಿಗೆ ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ವಿಷ್ಣು ಪ್ರಸಾದ್ ಕಲ್ಲೂರಾಯ ಹಾಗೂ ಚೆಂಡೆ, ಮದ್ದಲೆಗಳಲ್ಲಿ ಅಕ್ಷಯ್ ರಾವ್ ವಿಟ್ಲ ಮತ್ತು ಶಿಖಿನ್ ಶರ್ಮ ಶರವೂರು ಸಹಕರಿಸಿದರು. ಮುಮ್ಮೇಳದಲ್ಲಿ ಪ್ರೇಮಲತಾ ರಾವ್ (ಶ್ರೀರಾಮ), ಶುಭಾ ಅಡಿಗ (ಹನೂಮಂತ), ಕಿಶೋರಿ ದುಗ್ಗಪ್ಪ ನಡುಗಲ್ಲು (ಅರ್ಜುನ), ಶುಭಾ ಗಣೇಶ್ (ವೃದ್ಧ ವಿಪ್ರ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಪ್ರೇಮಲತಾ ರಂಗನಾಥ ರಾವ್ ದಂಪತಿಗಳು ಹಾಗೂ ಮಕ್ಕಳು ಕಲಾವಿದರಿಗೆ ಶಾಲು ಹೊದಿಸಿ ಸ್ಮರಣಿಕೆ ಇತ್ತು…

Read More

ಬೆಂಗಳೂರು : ಶ್ರೀ ರಾಮ ಕಲಾ ವೇದಿಕೆ ಪ್ರಸ್ತುತ ಪಡಿಸುವ ಬೆಂಗಳೂರು ಗೋಷ್ಠಿ ಬೈಠಕ್ ಭಾರತೀಯ ಶಾಸ್ತ್ರೀಯ ಸಂಗೀತ ಸಂಜೆ ಕಾರ್ಯಕ್ರಮವನ್ನು ದಿನಾಂಕ 04 ಮೇ 2025ರಂದು ಸಂಜೆ 5-30 ಗಂಟೆಗೆ ಬೆಂಗಳೂರಿನ ದೇವ ಕೃಪಾ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಚೈತನ್ಯ ಭಟ್ ಇವರ ಹಿಂದೂಸ್ಥಾನಿ ಹಾಡುಗಾರಿಕೆಗೆ ವಿಘ್ನೇಶ್ ಕಾಮತ್ ತಬಲಾ ಮತ್ತು ವಿಘ್ನೇಶ್ ಭಾಗವತ್ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.

Read More

ಮಂಗಳೂರು : ಕರಾವಳಿ ಲೇಖಕಿಯರ-ವಾಚಕಿಯರ (ಕಲೇವಾ) ಸಂಘದ ನೇತೃತ್ವದಲ್ಲಿ ಸಾಹಿತ್ಯ ಸದನದಲ್ಲಿ ದಿನಾಂಕ 26 ಏಪ್ರಿಲ್ 2025ರಂದು ನಡೆದ ಸಮಾರಂಭದಲ್ಲಿ ಯಶೋದಾ ಜೆನ್ನಿ ಸ್ಮೃತಿಸಂಚಯ ಪ್ರಾಯೋಜಿತ ಸಣ್ಣಕಥಾ ಸಂಕಲನ ಸ್ಪರ್ಧೆಯ ಬಹುಮಾನವನ್ನು ಪ್ರದಾನ ಮಾಡಲಾಯಿತು. ಗೀತಾ ಕುಂದಾಪುರ ಅವರ ‘ಪಾಂಚಾಲಿಯಾಗಲಾರೆ’ ಸಣ್ಣ ಕಥಾ ಸಂಕಲನಕ್ಕೆ ಈ ಬಹುಮಾನ ಬಂದಿದ್ದು, ಅದನ್ನು ಪ್ರದಾನ ಮಾಡಲಾಯಿತು. ಅಕ್ಷತರಾಜ್ ಪೆರ್ಲ ಇವರ ‘ರಾಜೀ ಪ್ರಸಂಗ’ ನಾಟಕಕ್ಕೆ ನಾಟಕ ರಚನಾ ಹಸ್ತಪ್ರತಿಯ ಬಹುಮಾನ ನೀಡಲಾಯಿತು. ‘ಕಲೇವಾ’ ಸಂಘದ ಅಧ್ಯಕ್ಷೆ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಇಂದಿರಾ ಹಾಲಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ‘ದಶಕದ ಸಣ್ಣ ಕತೆಗಳಲ್ಲಿ ಸ್ತ್ರೀ ಪ್ರತಿನಿಧೀಕರಣ’ ವಿಷಯದ ಬಗ್ಗೆ ಗುಲಾಬಿ ಪೂಜಾರಿ ಮಾತನಾಡಿದರು. ಧರ್ಮದರ್ಶಿ ಹರಿಕೃಷ್ಣ ಪುನರೂರು ವೇದಿಕೆಯಲ್ಲಿದ್ದರು.

Read More

ಕಾಸರಗೋಡು : ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ ಇದರ ಆಶ್ರಯದಲ್ಲಿ ಶ್ರೀಮತಿ ವಿಜಯಲಕ್ಷ್ಮೀ ಶ್ಯಾನುಭೋಗ್ ಇವರ ‘ವ್ಯೂಹ’ ಕಥಾ ಸಂಕಲನ ಬಿಡುಗಡೆ ಸಮಾರಂಭವನ್ನು ದಿನಾಂಕ 02 ಮೇ 2025ರಂದು ಅಪರಾಹ್ನ 2-30 ಗಂಟೆಗೆ ಬಾಯಿಕಟ್ಟೆ ಶ್ರೀ ಅಯ್ಯಪ್ಪ ಮಂದಿರದ ಸಭಾಗೃಹದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭವನ್ನು ಹಿರಿಯ ಸಾಹಿತಿ ಡಾ. ರಮಾನಂದ ಬನಾರಿ ಇವರು ಉದ್ಘಾಟಿಸಲಿದ್ದು, ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಪಾರ್ವತಿ ಜಿ. ಐತಾಳ್ ಇವರು ಕೃತಿ ಬಿಡುಗಡೆಗೊಳಿಸಲಿರುವರು. ಹಿರಿಯ ಪತ್ರಕರ್ತರಾದ ಮಲಾರ್ ಜಯರಾಮ ರೈ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಾಹಿತಿ ಆಶಾ ದಿಲೀಪ್ ಸುಳ್ಯಮೆ ಇವರು ಕೃತಿ ಪರಿಚಯ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯರು ಹಾಗೂ ವಿದ್ಯಾರ್ಥಿಗಳಿಂದ ಸ್ವರಚಿತ ಕಥಾ ವಾಚನ ಪ್ರಸ್ತುತಗೊಳ್ಳಲಿದೆ.

Read More

ಆಡಿ ಬಾ ನನ್ನ ಕಂದ ಅಂಗಾಲ ತೊಳೆದೇನ..| ತೆಂಗಿನ ಕಾಯಿ ತಿಳಿನೀರ, ತೆಂಗಿನ ಕಾಯಿ ತಿಳಿನೀರ ತಕ್ಕೊಂಡು ಬಂಗಾರ ಮಾರಿ ತೊಳೆದೇನ..||  ಎಂಬ ಹಾಡು ಯಾರಿಗೆ ತಾನೇ ನೆನಪಿಲ್ಲ?. ಇದನ್ನ ಎಂದಾದರೂ ಮರೆಯಲು ಸಾಧ್ಯವೇ.? ಈ ಜನಪದ, ಬಾಲ ಸಾಹಿತ್ಯದ ಶಕ್ತಿ ಅಂಥದು. ಈ ಬಾಲ ಸಾಹಿತ್ಯ ಎನ್ನುವುದು ಬಹು ವಿಶಾಲವಾದ ಸಾಗರ , ಹೇರಳವಾದ ವ್ಯಾಪ್ತಿಯನ್ನು ಹೊಂದಿದೆ. ಚಿಕ್ಕಪುಟ್ಟ ಮಕ್ಕಳ ಬುದ್ಧಿಮಟ್ಟಕ್ಕೆ ಇಳಿದು ಕವಿಗಳು , ಸಾಹಿತಿಗಳು ಮಕ್ಕಳ ಸದಭಿರುಚಿಗೆ ತಕ್ಕಂತೆ ಪ್ರಮುಖವಾಗಿ ಆದಿಪ್ರಾಸ , ಮಧ್ಯಪ್ರಾಸ , ಅಂತ್ಯಪ್ರಾಸ ಪದಗಳ ಬಳಕೆ ಮಾಡಿ ಮಕ್ಕಳ ಪದ್ಯ ರಚಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಶ್ರೀಮತಿ ಗೀತಾ ಎನ್. ಮಲ್ಲನಗೌಡರ್ ಮಾಡಿದ ಪ್ರಯತ್ನ ತುಂಬಾ ಮೆಚ್ಚುವಂತಹದು. ಈ ಪ್ರಯತ್ನದ ಫಲವೇ ಇಂದು ಲೋಕಾರ್ಪಣೆಗೊಂಡ “ಹಾರುವ ಹಕ್ಕಿ” ಎಂಬ ಶಿಶು ಗೀತೆಗಳ ಸಂಕಲನ. ಇಂತಹ ಒಂದು ಕೃತಿಯನ್ನು ಕವಯಿತ್ರಿ ಕನ್ನಡ ಸಾರಸತ್ವ ಲೋಕಕ್ಕೆ ಓದಲು ಕಾಣಿಕೆಯಾಗಿ ನೀಡಿದ್ದು ತುಂಬಾ ಸಂತಸದಾಯಕ ಹಾಗೂ ಹೆಮ್ಮೆಯ ವಿಚಾರ.…

Read More

ಕಾರ್ಕಳ : ನಿಟ್ಟೆ (ಪರಿಗಣಿತ ವಿಶ್ವವಿದ್ಯಾಲಯ) ಮತ್ತು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯ ಇದರ ಸಹಯೋಗದೊಂದಿಗೆ ಆಯೋಜಿಸಿದ ಆಹ್ವಾನಿತ ತಂಡಗಳ ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ದಿನಾಂಕ 12 ಏಪ್ರಿಲ್ 2025 ರಂದು ನಿಟ್ಟೆಯಲ್ಲಿ ನಡೆಯಿತು. ನಿಟ್ಟೆಯ ಎನ್.ಎಮ್.ಎ.ಎಮ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ನಿರಂಜನ್ ಎನ್. ಚಿಪ್ಳೂಣ್ಕರ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಸಿದ್ಧ ಯಕ್ಷಗಾನ ಕಲಾವಿದ ಹಾಗೂ ವಿದ್ವಾಂಸರಾದ ವಾಸುದೇವ ರಂಗ ಭಟ್ಟ ಮಾತನಾಡಿ “ಕೇವಲ ಕ್ಷೇತ್ರಗಳ ಆಶ್ರಯದಿಂದ ಹೊರಡುವ ಮೇಳಗಳಲ್ಲಿ ಒಮ್ಮೊಮ್ಮೆ ಕಲೆಯಿಂದ ಭಕ್ತಿ ಹೆಚ್ಚು ಮೇಲೈಸಿದರೂ, ಇಂಥ ಪ್ರಯತ್ನಗಳಿಂದ ಕಲೆಯ ಸತ್ವ ಉಳಿಸುವುದು ಸಾಧ್ಯ. ಕಲೆಯಲ್ಲಿ ಪ್ರತಿಷ್ಠಿತ ಸ್ಥಾನ ತಲುಪಿದ ಕಲಾವಿದನಿಗೆ ತನ್ನ ತಿರುಗಾಟದ ಮೇಳ ಅಥವಾ ಕ್ಷೇತ್ರದ ನಿರ್ದೇಶನವನ್ನು ಮೀರುವುದಕ್ಕೆ ಹೆಚ್ಚಾಗಿ ಆಸ್ಪದವಿರುವುದಿಲ್ಲ. ಮೇಳದ ಯಾಜಮಾನ್ಯ ಹೊಂದಿದವರಿಗೆ ಕ್ಷೇತ್ರದ ಭಕ್ತರ ಭಾವನೆ ಗಮನದಲ್ಲಿಟ್ಟುಕೊಳ್ಳಬೇಕಾದ ಅನಿವಾರ್ಯತೆಯಿದೆ” ಎಂದರು. ಯಕ್ಷಗಾನದ ಹಾಸ್ಯ ಲೋಕವನ್ನು ಶ್ರೀಮಂತಗೊಳಿಸಿದ ಬಂಟ್ವಾಳ ಜಯರಾಮ ಆಚಾರ್ಯರು ಕಲಾರಸಿಕರ ಹೃದಯದಲ್ಲಿ ಸದಾ ಬದುಕಿರುವ…

Read More

ಕುಂದಾಪುರ :ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿ ಆಯೋಜಿಸಿದ ಇಪ್ಪತ್ತು ದಿನಗಳ ಯಕ್ಷಗಾನ ತರಬೇತಿ ಶಿಬಿರ ‘ನಲಿ–ಕುಣಿ 2025’ ಇದರ ಸಮಾರೋಪ ಸಮಾರಂಭ ಹಾಗೂ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವು ದಿನಾಂಕ 03 ಮೇ 2025ರ ಶನಿವಾರ ಸಂಜೆ ಗಂಟೆ 4.30ರಿಂದ ಗುಂಡ್ಮಿ-ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ನಡೆಯಲಿದೆ. ಶ್ರೀ ಶ್ರೀ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮಿಗಳು ಬಾಳ್ಳುದ್ರು ಮಠ ಇವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿ ಇದರ ಅಧ್ಯಕ್ಷರಾದ ಶ್ರೀ ಆನಂದ ಸಿ. ಕುಂದರ್ ವಹಿಸಲಿರುವರು. ಸಮಾರಂಭದಲ್ಲಿ ಅತಿಥಿಗಳಾಗಿ ಕುಂದಾಪುರ ಕ್ಷೇತ್ರದ ಶಾಸಕರಾದ ಶ್ರೀ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ ಗಂಟಹೊಳೆ, ಓ. ಎನ್‌. ಜಿ. ಸಿ ಗೋವಾ ಇದರ ನಿವೃತ್ತ ಮಹಾ ಪ್ರಬಂಧಕರಾದ ಶ್ರೀ ಬನ್ನಾಡಿ ನಾರಾಯಣ ಆಚಾರ್, ಲೆಕ್ಕಪತ್ರ ಪರಿಶೋಧಕರಾದ ಶ್ರೀ ಜತೀಂದ್ರ ಮರವಂತೆ ಹಾಗೂ “ನಲಿ–ಕುಣಿ” ಶಿಬಿರದ ನಿರ್ದೇಶಕರಾದ ಪ್ರಾಚಾರ್ಯ ಶ್ರೀ ಕೆ. ಸದಾನಂದ ಐತಾಳ ಭಾಗವಹಿಸಲಿದ್ದಾರೆ.…

Read More