Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ (ರಿ.) ಬೆಂಗಳೂರು, ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠ ಇದರ ಸಂಯುಕ್ತ ಆಶ್ರಯದಲ್ಲಿ ‘ವಿಶ್ವ ಬನ್ನಂಜೆ 90ರ ನಮನ’ ಸಮಾರಂಭವನ್ನು ದಿನಾಂಕ 04 ಅಕ್ಟೋಬರ್ 2025ರಂದು ಸಂಜೆ 4-30 ಗಂಟೆಗೆ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಇದರ ಅಧ್ಯಕ್ಷರಾದ ಮಲ್ಲೇಪುರಂ ಜಿ. ವೆಂಕಟೇಶ್ ಇವರಿಂದ ಪ್ರಸ್ತಾವನೆ ಮತ್ತು ಉಪನ್ಯಾಸಕ ಜಗದೀಶ ಶರ್ಮ ಸಂಪ ಮತ್ತು ಪ್ರಾಧ್ಯಾಪಕರಾದ ವಿದ್ವಾನ್ ಕೃಷ್ಣರಾಜ ಕುತ್ಪಾಡಿ ಇವರಿಂದ ಉಪನ್ಯಾಸ ನಡೆಯಲಿದೆ. ಶ್ರೀಮತಿ ಕವಿತಾ ಉಡುಪ ಮತ್ತು ಶ್ರೀಮತಿ ಸುಮಾ ಶಾಸ್ತ್ರಿಯರಿಂದ ಬನ್ನಂಜೆಯವರ ಹಾಡುಗಬ್ಬ ಹಾಗೂ ಸುಚೇಂದ್ರ ಪ್ರಸಾದ್ ಇವರ ನಿರ್ದೇಶನ ಮತ್ತು ಅಭಿನಯದಲ್ಲಿ ‘ನನ್ನ ಪಿತಾಮಹ’ ನಾಟಕ ಪ್ರದರ್ಶನಗೊಳ್ಳಲಿದೆ.
ಮಂಗಳೂರು : ಕೆ.ಎಸ್. ಉಪಾಧ್ಯಾಯ ಮೆಮೋರಿಯಲ್ ಟ್ರಸ್ಟ್ (ರಿ.) ಮತ್ತು ಸಂತ ಆಗ್ನೇಸ್ ಕಾಲೇಜು (ಸ್ವಾಯತ್ತ) ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕೃತಿಗಳ ಲೋಕಾರ್ಪಣೆ ಸಮಾರಂಭವನ್ನು ದಿನಾಂಕ 03 ಅಕ್ಟೋಬರ್ 2025ರಂದು ಸಂಜೆ 4-00 ಗಂಟೆಗೆ ಮಂಗಳೂರು ಸಂತ ಆಗ್ನೇಸ್ ಕಾಲೇಜು ಕ್ಯಾಂಪಸ್ ‘ಅವಿಲಾ ಹಾಲ್’ನಲ್ಲಿ ಹಮ್ಮಿಕೊಳ್ಳಲಾಗಿದೆ. ಡಾ. ಲೀಲಾ ಉಪಾಧ್ಯಾಯ ಸಂಪಾದಿಸಿರುವ ಶ್ರೀ ಕೆ.ಎಸ್. ಉಪಾಧ್ಯಾಯ ಅವರ ಎರಡು ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಸಂತ ಆಗ್ನೇಸ್ ಕಾಲೇಜಿನ ಪ್ರಾಂಶು ಪಾಲರಾದ ಸಿ.ಡಾ.ಎಂ. ವೆನಿಸ್ಸಾ ಎ.ಸಿ. ಇವರು ವಹಿಸಲಿದ್ದು, ಶಾರದಾ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ.ಬಿ. ಪುರಾಣಿಕ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿದ್ವಾಂಸರು ಮತ್ತು ಖ್ಯಾತ ಯಕ್ಷಗಾನ ಅರ್ಥಧಾರಿ ಡಾ. ಎಂ. ಪ್ರಭಾಕರ ಜೋಶಿ ಮತ್ತು ಡಾ. ರಾಮಮೋಹನ್ ರಾವ್ ಇವರು ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಹಿರಿಯ ವಕೀಲರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಕಾಧ್ಯಕ್ಷರಾದ ಶ್ರೀ ಎ.ಎಸ್.ಎನ್. ಹೆಬ್ಬಾರ್, ಹಿರಿಯ ಯಕ್ಷಗಾನ ಕಲಾವಿದರು…
ಮಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಮುಖ್ಯ ಪತ್ರಿಕೆ ನೀಡುವ ಪ್ರತಿಷ್ಠಿತ ‘ದೇವನಾಂ ಪ್ರಿಯ ಪ್ರಿಯದರ್ಶಿನಿ ಅಶೋಕ’ ಪ್ರಶಸ್ತಿಗೆ ರಿಪೋರ್ಟರ್ ಕರ್ನಾಟಕದ ಪ್ರಧಾನ ಸಂಪಾದಕ ಮಂಗಳೂರಿನ ಅಶೋಕ್ ಕಲ್ಲಡ್ಕ ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ, ಜನವಾಹಿನಿ, ಕೆನರಾ ಟೈಮ್ಸ್ ಭಾಗದಲ್ಲಿ ಉಪ ಸಂಪಾದಕ, ವರದಿಗಾರನಾಗಿ ಕಾರ್ಯನಿರ್ವಹಿಸಿದ ಅಶೋಕ್ ಕಲ್ಲಡ್ಕ ಅವರು 4 ವರ್ಷಗಳಿಂದ ರಿಪೋರ್ಟರ್ ಕರ್ನಾಟಕ ಮೀಡಿಯಾ ನೆಟ್ ವರ್ಕ್ ಸಂಸ್ಥೆ ಸ್ವಾಮ್ಯ, ‘ರಿಪೋರ್ಟರ್ ಕರ್ನಾಟಕ’ ಎಂಬ ಡಿಜಿಟಲ್ ಮೀಡಿಯಾ ನಡೆಸಿಕೊಂಡು ಬರುತ್ತಿದ್ದಾರೆ. ಪತ್ರಿಕಾ ರಂಗದಲ್ಲಿ ಅಶೋಕ್ ಕಲ್ಲಡ್ಕ ಅವರ ಸಾಧನೆಯನ್ನು ಗುರುತಿಸಿ ಅವರಿಗೆ ಈ ವರ್ಷದ ದೇವನಾಂ ಪ್ರಿಯ ಪ್ರಿಯದರ್ಶಿನಿ ಅಶೋಕ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಅಶೋಕ್ ಕಲ್ಲಡ್ಕ ಅವರಿಗೆ ಕರ್ನಾಟಕ ಮಾಧ್ಯಮ ರತ್ನ ಪ್ರಶಸ್ತಿಯು ಲಭಿಸಿದೆ. ರಾಯಚೂರಿನ ಮಸ್ಕಿಯ ಮುರುಘ ರಾಜೇಂದ್ರ ಕಲ್ಯಾಣ ಮಂಟಪದಲ್ಲಿ ಸೆ. 28ರಂದು ವಿಶ್ವ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪತ್ರಕರ್ತರ ಧ್ವನಿಯ ರಾಜ್ಯಾಧ್ಯಕ್ಷ ಬಂಗ ಮಲ್ಲಿಕಾರ್ಜುನ, ಮಸ್ಕಿ ತಾಲೂಕು ಅಧ್ಯಕ್ಷ ವಿರೂಪಾಕ್ಷ…
ಸಾಗರ : ‘ನೀನಾಸಂ’ ಸಂಸ್ಥೆಯು ಹೆಗ್ಗೋಡುವಿನಲ್ಲಿ ಅಕ್ಟೋಬರ್ 01 ರಿಂದ 05 ರವರೆಗೆ ‘ಕಲೆಗಳ ಸಂಗಡ ಮಾತುಕತೆ’ ಕಾರ್ಯಕ್ರಮ ಏರ್ಪಡಿಸಿದ್ದು, ರಂಗಭೂಮಿ, ಸಾಹಿತ್ಯ, ಸಿನಿಮಾ, ಚಿತ್ರಕಲೆ ಕಲಾಪಠ್ಯಗಳ ಪ್ರಸ್ತುತಿ ಮತ್ತು ಆ ಕುರಿತ ಚರ್ಚೆ ನಡೆಯಲಿದೆ. ಆರಂಭಿಕ ಗೋಷ್ಠಿಗೆ ಹರೀಶ್ ತ್ರಿವೇದಿ ಚಾಲನೆ ನೀಡಲಿದ್ದು, ಕೃಷ್ಣಮೂರ್ತಿ ಹನೂರು, ರಾಜೇಂದ್ರ ಚೆನ್ನಿ, ಜೆ. ಯು. ಮೋಹನ್, ಚುಕ್ಕಿ ನಂಜುಂಡಸ್ವಾಮಿ, ಹೇಮಲತಾ ಜೈನ್, ಗಜಾನನ ಶರ್ಮ, ಶಿವಾನಂದ ಕಳವೆ, ಅಕ್ಷರ ಕೆ. ವಿ., ಶ್ರೀರಾಮ ಭಟ್, ನಿತ್ಯಾನಂದ ಶೆಟ್ಟಿ, ಜಿ.ಎಸ್. ಜಯದೇವ, ಸುಮನಸ ಕೌಜಲಗಿ, ವಿಕ್ರಮ್ ವಿಸಾಜಿ ಇತರರು ಪಾಲ್ಗೊಳ್ಳ ಲಿದ್ದಾರೆ. ನಿತ್ಯ ಸಂಜೆ 7ಕ್ಕೆ ನಾಟಕ ಪ್ರದರ್ಶನವಿದೆ ಎಂದು ಹೇಳಿಕೆ ತಿಳಿಸಿದೆ.
ಕದ್ರಿ ನೃತ್ಯ ವಿದ್ಯಾನಿಲಯದಲ್ಲಿ ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ಸಭೆ ಮಂಗಳೂರು : ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ (ರಿ.) ಇದರ ಸಭೆಯು ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ದಿನಾಂಕ 14 ಸೆಪ್ಟೆಂಬರ್ 2025ರಂದು ಮಂಗಳೂರಿನ ಕದ್ರಿ ನೃತ್ಯ ವಿದ್ಯಾನಿಲಯದಲ್ಲಿ ನಡೆಯಿತು. “ಭರತನಾಟ್ಯದ ಅಸಲಿಯತ್ತಾನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮೂಲಶೈಲಿಗೆ ಧಕ್ಕೆ ಬಾರದಂತೆ ಉಳಿಸಿ ಬೆಳೆಸಿಕೊಂಡು ಹೋಗುವ ಅಗತ್ಯವನ್ನು ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ಒತ್ತಿ ಹೇಳಿದೆ. ಭರತನಾಟ್ಯದ ಹೆಸರಿನಲ್ಲಿ ಸಾಂಪ್ರದಾಯಿಕ ಶೈಲಿಯನ್ನು ದೂರವಿಟ್ಟು ನಡೆಯುವ ಪ್ರದರ್ಶನಗಳು ಈ ಕಲೆಗೆ ಅವಮಾನವೆಂದು ಪರಿಷತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕಲಾವಿದರು ಭರತನಾಟ್ಯದ ಹೆಸರಿನಲ್ಲಿ ಪ್ರದರ್ಶನ ನೀಡುವಾಗ, ಮೂಲ ಶೈಲಿಗೆ ಧಕ್ಕೆ ಬಾರದಂತೆ ಅಚ್ಚುಕಟ್ಟಾಗಿ ನೃತ್ಯಿಸಬೇಕೆಂದು ಆಗ್ರಹಿಸಿದೆ. ಶಾಸ್ತ್ರೀಯ ನೃತ್ಯಗಳಲ್ಲಿ ಪ್ರಮುಖವಾದ ಭರತನಾಟ್ಯವು ತನ್ನದೇ ಆದ ಸಾಂಪ್ರದಾಯಿಕ ಚೌಕಟ್ಟನ್ನು ಹೊಂದಿದೆ. ಅದನ್ನು ಗುರುಮುಖೇನ ಶ್ರದ್ದೆಯಿಂದ ಕಲಿತು, ಅಡವುಗಳು, ಅಂಗಶುದ್ಧಿ, ಹಸ್ತ ವಿನ್ಯಾಸ ಮತ್ತು ಅಭಿನಯದಲ್ಲಿ ಶಿಸ್ತು ಪಾಲಿಸುವುದು ಕಡ್ಡಾಯವೆಂದು ಪರಿಷತ್ ತಿಳಿಸಿದೆ. ಇಂತಹ ಶ್ರೀಮಂತ ನೃತ್ಯಕಲೆ…
ಮಂಗಳೂರು : ಸಂಗೀತ್ ಭಾರತಿ ಫೌಂಡೇಷನ್ (ರಿ.) ಪ್ರಸ್ತುತ ಪಡಿಸುವ ‘ವಿಹಂಗಮ’ ಕರ್ನಾಟಕ ಹಿಂದೂಸ್ತಾನಿ ಜುಗಲ್ ಬಂದಿ ಸಂಗೀತ ಕಾರ್ಯಕ್ರಮವನ್ನು ದಿನಾಂಕ 05 ಅಕ್ಟೋಬರ್ 2025ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಆಯೋಜಿಸಲಾಗಿದೆ. ವಿದ್ವಾನ್ ಮೈಸೂರು ಮಂಜುನಾಥ್ – ವಯೋಲಿನ್, ಉಸ್ತಾದ್ ರಫೀಕ್ ಖಾನ್ – ಸಿತಾರ್, ವಿದ್ವಾನ್ ತಿರುವಾರೂರ್ ಭಕ್ತವತ್ಸಲಂ – ಮೃದಂಗಂ ಹಾಗೂ ಓಜಸ್ ಅಧಿಯಾ – ತಬಲಾ ಇವರುಗಳು ಈ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.
ಉಡುಪಿ : ಪೂರ್ಣಪ್ರಜ್ಞ (ಸ್ವಾಯತ್ತ) ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಆಶ್ರಯದಲ್ಲಿ ಹಿಂದಿ ವಿಭಾಗದ ವತಿಯಿಂದ ‘ಹಿಂದಿ ದಿವಸ’ ಆಚರಣೆಯನ್ನು ದಿನಾಂಕ 27 ಸೆಪ್ಟೆಂಬರ್ 2025ರಂದು ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀಮತಿ ಕೃತಿಕಾ ಪಿ. ಶೆಣೈಯವರು ಭಾಷೆಯ ಉತ್ಪತ್ತಿ ಮತ್ತು ವಿಕಾಸದ ಕುರಿತು ಪ್ರೇರಣಾದಾಯಕವಾಗಿ ಮಾತನಾಡಿ, “ಭಾಷೆ ಮನುಷ್ಯನ ಜೀವನದಲ್ಲಿ ಅತೀವ ಪ್ರಮುಖ ಪಾತ್ರ ವಹಿಸುವುದನ್ನು ಸ್ಪಷ್ಟಪಡಿಸಿದರು. ಅವರು ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಭಾಷಾಜ್ಞಾನ ಅತ್ಯಂತ ಅವಶ್ಯಕವಾಗಿದ್ದು, ರಾಷ್ಟ್ರದ ಏಕತೆಯನ್ನು ಬಲಪಡಿಸುವಲ್ಲಿ ಭಾಷೆಯ ಮಹತ್ವ ಅನನ್ಯ” ಎಂದು ವಿವರಿಸಿದರು. ವಿಶೇಷವಾಗಿ ನಮ್ಮ ದೇಶದ ರಾಜ್ಯಭಾಷೆಯಾಗಿರುವ ಹಿಂದಿ ಭಾಷೆಯ ಕುರಿತು ವಿದ್ಯಾರ್ಥಿಗಳಲ್ಲಿ ಗೌರವ, ಅರಿವು ಮತ್ತು ಹೆಮ್ಮೆಯನ್ನು ಬೆಳೆಸುವಂತೆ ಕರೆ ನೀಡಿದರು. ಹಿಂದಿ ದಿವಸದ ಅಂಗವಾಗಿ ವಿವಿಧ ಸ್ಪರ್ಧೆಗಳು ಆಯೋಜಿಸಲ್ಪಟ್ಟಿದ್ದು, ವಿಜೇತರನ್ನು ಗೌರವಿಸಲು ಬಹುಮಾನ ವಿತರಣೆಯನ್ನು ಮುಖ್ಯ ಅತಿಥಿಗಳಿಂದ ನೆರವೇರಿಸಲಾಯಿತು. ಕಾರ್ಯಕ್ರಮಕ್ಕೆ ಹಿಂದಿ ವಿಭಾಗದ ಮುಖ್ಯಸ್ಥ ಡಾ. ಆನಂದ ರಾಯಮಾನೆ ಇವರು ಅಧ್ಯಕ್ಷತೆ ವಹಿಸಿದ್ದರು. ವಿಭಾಗದ ಅಧ್ಯಾಪಕಿ…
ಕಾಸರಗೋಡು : ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯ, ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಮತ್ತು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಹ್ಮಣ್ಯ ದೇವಸ್ಥಾನದ ಸಾಂಸ್ಕೃತಿಕ ಸಮಿತಿಯ ಜಂಟಿ ಆಶ್ರಯದಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಸಮಿತಿಯ ಸಹಕಾರದಲ್ಲಿ ಕಾಸರಗೋಡಿನ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ಕ್ಷೇತ್ರದಲ್ಲಿ ದಿನಾಂಕ 27 ಸೆಪ್ಟೆಂಬರ್ 2025ರಂದು ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವದ ಕಾಸರಗೋಡು ದಸರಾ ಕವಿಗೋಷ್ಠಿ ನಡೆಯಿತು. ಈ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಕೊಳ್ಚಪ್ಪೆ ಗೋವಿಂದ ಭಟ್ “ಕಾಸರಗೋಡಿನಲ್ಲಿ ಕನ್ನಡ ಭಾಷೆ ಉಳಿಯಬೇಕಾದರೆ ಭವಿಷ್ಯಕ್ಕಾಗಿ ಕನ್ನಡ ಜಾಗೃತಿ ಆಗಲೇಬೇಕು. ಎಳೆಯ ಮಕ್ಕಳಲ್ಲಿ ಕನ್ನಡ ಪರವಾದ ಮನೋಭಾವ ಬೆಳೆಸಬೇಕು” ಎಂದು ಹೇಳಿದರು. ಗಝಲ್ ಕವಿ ಡಾ. ಸುರೇಶ್ ನೆಗಳಗುಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ “ನವರಾತ್ರಿಯ ಒಂಭತ್ತು ಬಣ್ಣಗಳಲ್ಲಿ ಸಂತೋಷ, ಶಾಂತಿ, ಪ್ರೀತಿ, ಆಧ್ಯಾತ್ಮಿಕತೆಯಿಂದ ನಾಡಹಬ್ಬವಾಗಿದೆ.…
ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.), ಚಿರಂತನ ಚ್ಯಾರಿಟೇಬಲ್ ಟ್ರಸ್ಟ್, ನಾಗರಿಕ ಸಲಹಾ ಸಮಿತಿ (ರಿ.) ಸುರತ್ಕಲ್ ಮತ್ತು ಸಪ್ತಕ ಬೆಂಗಳೂರು ಈ ಸಂಸ್ಥೆಗಳು ಜೊತೆಯಾಗಿ ಸಂಯೋಜಿಸುವ ‘ಭೈರಪ್ಪ ನಮನ’ ಕಾರ್ಯಕ್ರಮವನ್ನು ದಿನಾಂಕ 04 ಅಕ್ಟೋಬರ್ 2025ರಂದು ಸಂಜೆ 5-00 ಗಂಟೆಗೆ ಸುರತ್ಕಲ್ ನಾಗಬನ ರೋಡ್ ಇಲ್ಲಿರುವ ಅನುಪಲ್ಲವಿಯಲ್ಲಿ ಆಯೋಜಿಸಲಾಗಿದೆ. ಕುಮಾರಿ ನೀಹಾರಿಕ ದೇರಾಜೆ ಸುರತ್ಕಲ್ ಇವರ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನಕ್ಕೆ ತಬಲಾ ಪಡುಬಿದ್ರೆ ಶ್ರೀವತ್ಸ ಶರ್ಮ ಮತ್ತು ಮಂಗಳೂರಿನ ಕುಮಾರಿ ಮೇಧಾ ಭಟ್ ಸಂವಾದಿನಿಯಲ್ಲಿ ಸಾಥ್ ನೀಡಲಿದ್ದಾರೆ. ಡಾ. ಗಿರೀಶ್ ಭಟ್ ಅಜಕ್ಕಳ ಇವರಿಂದ ನುಡಿ ನಮನ ಹಾಗೂ ಕಿರಣ್ ಹೆಗಡೆ ಮಗೆಗಾರ ಇವರ ಬಾನ್ಸುರಿ ವಾದನಕ್ಕೆ ಭಾರವಿ ದೇರಾಜೆ ಇವರು ತಬಲಾ ಸಾಥ್ ನೀಡಲಿದ್ದಾರೆ.
ಶ್ರೀಮಂಗಲ : ಕೊಡವ ಭಾಷೆಯ ಪ್ರತಿಷ್ಠಿತ ಸಾಹಿತ್ಯ ಸಂಸ್ಥೆಯಾದ ‘ಕೊಡವ ತಕ್ಕ್ ಎಳ್ತ್ ಕಾರಡ ಕೂಟ’ವು ತನ್ನ ಮಾಸಿಕ ಕಾರ್ಯಕ್ರಮ ಯೋಜನೆಯಡಿ ವಿಶೇಷವಾದ ಕವಿಗೋಷ್ಠಿ ನಡೆಸುವ ಉದ್ದೇಶದಿಂದ ‘ಕನ್ಯಾರ್ ಕವನ ವಾಚನ ಗೋಷ್ಠಿ’ ನಡೆಸಲು ಉದ್ದೇಶಿಸಿದ್ದು, ಕವಿಗಳಿಂದ ಕವನ ಆಹ್ವಾನಿಸಲಾಗಿದೆ. ಕವಿಗಳು ಕೊಡವ ಕ್ಯಾಲೆಂಡರಿನ ‘ಕನ್ಯಾರ್’ ತಿಂಗಳಿಗೆ (ಸೆ.16 ರಿಂದ ಅ.16 ರವರೆಗಿನ ಅವಧಿಯ) ಸಂಬಂಧಿಸಿದ ವಸ್ತು ವಿಷಯವನ್ನಾಧರಿಸಿ ಕವನ ಬರೆದು ವಾಚಿಸುವ ವಿನೂತನ ಗೋಷ್ಠಿಯನ್ನು ನಡೆಸುತ್ತಿದ್ದು, ಕವಿಗಳು ಕನ್ಯಾರ್ ತಿಂಗಳಿನ ವಿಶೇಷತೆಯನ್ನಾಧರಿಸಿ ಬರೆದ ಕೊಡವ ಕವನವನ್ನು ದಿನಾಂಕ 10 ಅಕ್ಟೋಬರ್ 2025ರ ಒಳಗೆ ಕೊಡವ ತಕ್ಕ್ ಎಳ್ತ್ ಕಾರಡ ಕೂಟದ ಕಛೇರಿಗೆ ತಲುಪಿಸಬಹುದು. ಅಥವಾ 9880584732 / 9448326014 / 9449998789 ಸಂಖ್ಯೆಗಳಿಗೆ ವಾಟ್ಸಾಪ್ ಮೂಲಕ ಕಳುಹಿಸಬಹುದು. ಮೊದಲು ಬಂದ 40 ಕವನಗಳನ್ನು ಗೋಷ್ಠಿಯಲ್ಲಿ ವಾಚಿಸಲು ಅವಕಾಶ ನೀಡುವುದರೊಂದಿಗೆ ಕವನಗಳನ್ನು ಪುಸ್ತಕ ಮುದ್ರಿಸಿ ಪ್ರಕಟಿಸಲಾಗುವುದು. ರಾಜ್ಯಮಟ್ಟದ ಈ ಕನ್ಯಾರ್ ಕವಿಗೋಷ್ಠಿಗೆ ಜಾತಿ, ಧರ್ಮದ ನಿರ್ಬಂಧವಿಲ್ಲದೆ ಕೊಡವ ಭಾಷೆಯಲ್ಲಿ ‘ಕನ್ಯಾರ್’ ತಿಂಗಳ…