Subscribe to Updates
Get the latest creative news from FooBar about art, design and business.
Author: roovari
ಬೆಳಗಾವಿ : ರಂಗಸಂಪದ ಬೆಳಗಾವಿ ಮತ್ತು ರಂಗಶಂಕರ ಬೆಂಗಳೂರಿನ ಸಹಯೋಗದಲ್ಲಿ ಪ್ರಸ್ತುತ ಪಡಿಸುವ ‘ನಕ್ಷತ್ರ ಯಾತ್ರಿಕರು’ ನಾಟಕ ಪ್ರದರ್ಶನವನ್ನು ದಿನಾಂಕ 02 ನವೆಂಬರ್ 2025ರಂದು ಸಂಜೆ 6-30 ಗಂಟೆಗೆ ಬೆಳಗಾವಿಯ ಲೋಕಮಾನ್ಯ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಧ್ಯಾ ಎಸ್. ಇವರು ರಚಿರುವ ಈ ನಾಟಕಕ್ಕೆ ಸವಿತಾ ಭೈರಪ್ಪ ನಿರ್ದೇಶನ ಮಾಡಿದ್ದು, ಶ್ರೀಪತಿ ಮಂಜನಬೈಲು ಸಂಗೀತ ನೀಡಿರುತ್ತಾರೆ. ವಿನಯ ಕುಲಕರ್ಣಿ, ನಿರ್ಮಲಾ ಬಟ್ಟಲ, ಉಜ್ವಲಾ ಪವಾರ, ಪ್ರಸಾದ ಕಾರಜೋಳ, ಆರೂಷ ಕುಲಕರ್ಣಿ, ಯೋಗೇಶ ದೇಶಪಾಂಡೆ, ಚಿ. ವರದ ದೇಶಪಾಂಡೆ, ಮಂಜುನಾಥ ಕಲಾಲ, ಅರವಿಂದ ಪಾಟೀಲ, ಸ್ನೇಹಾ ಕುಲಕರ್ಣಿ, ಅರವಿಂದ ಕುಲಕರ್ಣಿ ಮುಂತಾದ ಕಲಾವಿದರು ನಟಿಸಿರುತ್ತಾರೆ. ನಕ್ಷತ್ರ ಯಾತ್ರಿಕರು, ಒಂದು ವಿಭಿನ್ನ ನಾಟಕ. ಉತ್ತರ ಕರ್ನಾಟಕದ ಕುಟುಂಬವೊಂದು ಬದುಕಿನ ದಾರಿ ಹುಡುಕಿಕೊಂಡು ಪಟ್ಟಣ ಸೇರುವದು. ಈ ಬದುಕಿಗೆ ನೆಮ್ಮದಿ ಅನ್ನುವದು ಇಂದಿಲ್ಲ ನಾಳೆ ಸಿಕ್ಕೇತು ಆನ್ನುವ ಆಶಾ ಭಾವನೆಯಿಂದಲೇ ಬದುಕು ಸಾಗಿಸುವ ಈ ಕುಟುಂಬಕ್ಕೆ, ಕೊನೆಗೆ ಅವರು ಅರಸುತ್ತಾ ಹೋದ ನೆಮ್ಮದಿ ಸಿಕ್ಕಿತೇ ಅನ್ನುವ…
ಬಳ್ಳಾರಿ : ಶ್ರೀ ಮಹಾದೇವ ಎಜುಕೇಷನ್, ಆರ್ಟ್ ಮತ್ತು ಕಲ್ಚರಲ್ ಟ್ರಸ್ಟ್ (ರಿ.) ಬಳ್ಳಾರಿ, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಸಂಘ (ರಿ.) ಜಿಲ್ಲಾ ಘಟಕ ಬಳ್ಳಾರಿ ಮತ್ತು ಅಖಿಲ ಕರ್ನಾಟಕ ಕನ್ನಡ ರಾಜ್ಯೋತ್ಸವ ಸಮಿತಿ ಬಳ್ಳಾರಿ ಇವರು ಜಂಟಿಯಾಗಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ 2025 ಪ್ರಯುಕ್ತ ಕವಿಗೋಷ್ಠಿಯನ್ನು ದಿನಾಂಕ 30 ನವೆಂಬರ್ 2025ರಂದು ಬೆಳಿಗ್ಗೆ 11-00 ಗಂಟೆಗೆ ಬಳ್ಳಾರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಕವಿತೆಯನ್ನು ನುಡಿ / ಯೂನಿಕೋಡ್ ನಲ್ಲಿ ಟೈಪ್ ಮಾಡಿ ವರ್ಡ್ ಫೈಲ್ ರೂಪದಲ್ಲಿ ಈ ಕೆಳಗಿನ ವಿವರಗಳೊಂದಿಗೆ ಕಳುಹಿಸಿ. ಪೂರ್ಣ ಹೆಸರು, ಹುದ್ದೆ, ಹುಟ್ಟಿದ ದಿನಾಂಕ / ವಯಸ್ಸು / ವಿಲಾಸ / ಇ-ಮೇಲ್ / ಮೊಬೈಲ್ ಸಂಖ್ಯೆ / ಒಂದು ಪಾಸ್ ಪೋರ್ಟ್ ಸೈಜ್ ಭಾವಚಿತ್ರ. ಕಳುಹಿಸಬೇಕಾದ ಇ-ಮೇಲ್ [email protected].
ಬೆಂಗಳೂರು : ಬೆಂಗಳೂರಿನ ಪ್ರವರ ಥಿಯೇಟರ್ ಪ್ರಸ್ತುತ ಪಡಿಸುವ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕವು ದಿನಾಂಕ 01 ನವೆಂಬರ್ 2025ರಂದು ಸಂಜೆ ಗಂಟೆ 7-00ಕ್ಕೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕದ ರಂಗರೂಪ ಕರಣಂ ಪವನ್ ಪ್ರಸಾದ್ ಮಾಡಿದ್ದು, ಸಂಗೀತ ಅಕ್ಷಯ್ ಭೊಂಸ್ಲೆ ಮತ್ತು ಬೆಳಕು ವಿನ್ಯಾಸ ಮಂಜು ನಾರಾಯಣ್ ನೀಡಿದ್ದು, ಹನು ರಾಮಸಂಜೀವ ಇವರು ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಮಹೇಶ್ ಎಸ್.ಪಿ., ಹನು ರಾಮಸಂಜೀವ, ನಾಗಶ್ರೀ ಪುಟ್ಟರಾಜು, ಸುಶಾಂತ್ ರಾಜ್ ಆರಾಧ್ಯ, ಋತ್ವಿಕ್ ಕೆ.ಸಿ., ಅಂಬಿಕಾ ಶೆಟ್ಟಿ, ಅಜಯ್ ಕುಮಾರ್, ಸಂಜೀವಿನಿ, ಚಂದನ್ ರಾಮಚಂದ್ರೇಗೌಡ, ಶ್ರೀನಾಥ್ ಎನ್., ಪ್ರವೀಣ್ ಭಟ್, ಚರಣ್ ಗೌಡ, ದಿಲೀಪ್ ಮಹದೇವ್, ಭರಣಿ ವಿನಾಯಕ್, ಲೇಖನ, ಹರ್ಷಿತಾ, ಯಶಸ್ವಿನಿ, ಮನ್ವಿತ್ ವಿನಯ್ ಕುಮಾರ್ ರಂಗದ ಮೇಲೆ ರಂಜಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9686869676 ಸಂಖ್ಯೆಯನ್ನು ಸಂಪರ್ಕಿಸಿರಿ.
ಕಾರ್ಕಳ : ಕನ್ನಡ ರಾಜ್ಯೋತ್ಸವದ ಶುಭಾವಸರದಲ್ಲಿ ಕನ್ನಡ ಸಂಸ್ಕೃತಿಯ ಪ್ರಚಾರ ಹಾಗೂ ಓದುಗರಲ್ಲಿ ಪುಸ್ತಕಾಭಿರುಚಿ ಬೆಳೆಸುವ ಉದ್ದೇಶದಿಂದ ಕಾರ್ಕಳ ಹಾಗೂ ಮೂಡುಬಿದಿರೆಯಲ್ಲಿರುವ ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದ ವತಿಯಿಂದ ವಿಶೇಷ ರಿಯಾಯಿತಿಯಲ್ಲಿ ಪುಸ್ತಕಗಳ ಮಾರಾಟ ಮೇಳ ಆಯೋಜಿಸಲಾಗಿದೆ. ಈ ಮೇಳದಲ್ಲಿ ಸಾಹಿತ್ಯ, ಕಾದಂಬರಿ, ಪ್ರಬಂಧ, ಜೀವನ ಚರಿತ್ರೆ, ಮಕ್ಕಳ ಸಾಹಿತ್ಯ ಸೇರಿದಂತೆ ವಿವಿಧ ವಿಷಯಗಳ ನೂರಾರು ಪುಸ್ತಕಗಳು ವಿಶೇಷ ರಿಯಾಯಿತಿ ದರದಲ್ಲಿ ಲಭ್ಯವಿರಲಿವೆ. ಕನ್ನಡ ಸಾಹಿತ್ಯ ಕ್ಷೇತ್ರದ ಮಹನೀಯರ ಕೃತಿಗಳ ಜೊತೆಗೆ ಯುವ ಲೇಖಕರ ಹೊಸ ಕೃತಿಗಳು, ಹೊಸ ಪ್ರಕಾಶನಗಳು ಹಾಗೂ ಜನಪ್ರಿಯ ಪುಸ್ತಕಗಳು ಈ ಮೇಳದ ಆಕರ್ಷಣೆಯಾಗಿದೆ. ಶೇ.10ರಿಂದ ಶೇ.50ರವರೆಗೆ ರಿಯಾಯಿತಿ ಸಿಗಲಿದೆ. ಈ ವಿಶೇಷ ಮೇಳವು ನ. 1ರಿಂದ ನ.9ರವರೆಗೆ ನಡೆಯಲಿದ್ದು, ಪ್ರತಿದಿನ ಬೆಳಗ್ಗೆ ಸಮಯ 9ರಿಂದ ಸಂಜೆ ಸಮಯ 9ರವರೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. ಎಲ್ಲಾ ಪುಸ್ತಕ ಪ್ರೇಮಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಪ್ರಕಾಶಕರು ಕೋರಿದ್ದಾರೆ. ಕನ್ನಡದ ನಾಡು ನುಡಿ ಮತ್ತು ನಂಬಿಕೆಗೆ ಬೆಂಬಲವಾಗಿ ಪುಸ್ತಕ ಓದುವುದನ್ನು…
ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿ ಪ್ರೊ. ಬಿ.ಎ. ವಿವೇಕ್ ರೈ ವಿಚಾರ ವೇದಿಕೆಯಲ್ಲಿ ದಿನಾಂಕ 28 ಅಕ್ಟೋಬರ್ 2025ರಂದು ‘ಬಿತ್ತಿ’ ಗೋಡೆ ಬರಹದ ಉದ್ಘಾಟನಾ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಪತ್ರಿಕೆ ಅನಾವರಣಗೊಳಿಸಿ ಮಾತನಾಡಿದ ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಪಿ. “ಸಾಹಿತ್ಯದ ಅಭಿವ್ಯಕ್ತಿಗೆ ಗೋಡೆ ಬರಹ ಪತ್ರಿಕೆಗಳು ಪ್ರೇರಕವಾಗಿ ಕಾರ್ಯ ನಿರ್ವಹಿಸುತ್ತವೆ. ಹಸ್ತಪತ್ರಿಕೆಗಳ ಪರಂಪರೆ ನಮ್ಮಲ್ಲಿದ್ದು, ಹಿರಿಯ ಸಾಹಿತಿಗಳ ಮೊದಲ ರಚನೆಗಳಿಗೆ ಅವು ಮೊದಲ ಮೆಟ್ಟಲುಗಳಾಗಿದ್ದವು. ಸೃಜನಶೀಲ ಬರವಣಿಗೆ, ವರದಿಗಾರಿಕೆಯ ಕಲಿಕೆ, ಗೋಡೆ ಬರಹ ಉತ್ತಮ ವೇದಿಕೆ. ಶೀಘ್ರವಾಗಿ ಬದಲಾಗುತ್ತಿರುವ ಇಂದಿನ ತಂತ್ರ ಜ್ಞಾನದಲ್ಲಿಯೂ ಭಾವಗಳ ಅಭಿವ್ಯಕ್ತಿಯ ಮಾಧ್ಯಮವಾದ ಸಾಹಿತ್ಯಕ್ಕೆ ವಿಶೇಷ ಸ್ಥಾನವಿದ್ದು ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳು ನೂತನ ಅವಕಾಶಗಳ ಸಾಧ್ಯತೆಗಳನ್ನು ಕಂಡುಕೊಳ್ಳಬೇಕಾಗಿದೆ. ಕನ್ನಡ ವಿಭಾಗವನ್ನು ಕಟ್ಟಿದ ಎಸ್.ವಿ. ಪರಮೇಶ್ವರ ಭಟ್ಟರ ಪರಂಪರೆಯನ್ನು ಮುಂದುವರಿಸಿದ ಹಿರಿಯರಾದ ಪ್ರೊ. ಬಿ.ಎ. ವಿವೇಕ ರೈ ಮೊದಲಾದವರ ಕಾರ್ಯಗಳಿಂದ ಕನ್ನಡ ವಿಭಾಗ ಅನನ್ಯ…
ಉಡುಪಿ : ಶ್ರೀಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠ, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಉಡುಪಿ, ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ ಹಾಗೂ ದ್ಯುತಿಪರ್ವ ಯಕ್ಷ ಟ್ರಸ್ಟ್ ಕುಂದಾಪುರ ಇವರ ಸಂಯುಕ್ತ ಸಹಭಾಗಿತ್ವದಲ್ಲಿ ದಿನಾಂಕ 24 ಅಕ್ಟೋಬರ್ 2025ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಹಟ್ಟಿಯಂಗಡಿ ಶ್ರೀ ಸಿದ್ಧಿ ವಿನಾಯಕ ಪ್ರಸಾದಿತ ಯಕ್ಷಗಾನ ಮಂಡಳಿ ವತಿಯಿಂದ ಹಮ್ಮಿಕೊಂಡ ಐದು ದಿನಗಳ ಯಕ್ಷಗಾನ ಪ್ರದರ್ಶನ ‘ಯಕ್ಷ ಪಂಚಮಿ-2025’ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು. ಈ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು “ಯಕ್ಷಗಾನ ಕಲೆಗೆ ಉಡುಪಿಯ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ನೀಡುತ್ತಿರುವ ಕೊಡುಗೆ ಶ್ಲಾಘನೀಯ. ಇಂದಿನ ಪ್ರಶಸ್ತಿ ಪ್ರದಾನ ಯಕ್ಷ ಕಲೆಗೆ ವಿಶೇಷ ಉತ್ತೇಜನ ಕೊಟ್ಟ ಹಾಗೆ. ತಲ್ಲೂರು ಶಿವರಾಮ ಶೆಟ್ಟಿ ಎಂದರೆ ಯಕ್ಷಗಾನ ಎಂಬುವುದೇ ಅಲ್ಲಿ ಪ್ರಸಿದ್ದಿಯಾಗಿದೆ. ಯಕ್ಷಗಾನ ಕಲೆಗೆ ಅವರು ನೀಡುತ್ತಿರುವ ಉತ್ತೇಜನ ಪ್ರೋತ್ಸಾಹ ಹೀಗೆ ಮುಂದುವರೆಯಲಿ. ನಮ್ಮ ನಾಡಿನ ಹೆಮ್ಮೆಯ…
ಪೆರಿಯ : ಬೇಕಲದ ಗೋಕುಲಂ ಗೋಶಾಲೆಯಲ್ಲಿ ಪರಂಪರಾ ವಿದ್ಯಾಪೀಠದ ಅಡಿಯಲ್ಲಿ ನಡೆಯುತ್ತಿರುವ ಐದನೇಯ ದೀಪಾವಳಿ ಸಂಗೀತೋತ್ಸವದ ಹತ್ತನೇ ದಿನ ಸಂಜೆ ದೀಪ ಪ್ರಭೆಯಲ್ಲಿ ಶ್ರುತಿಸಾಗರ್ ಅವರ ಕೊಳಲು ಕಛೇರಿ ಅತ್ಯಂತ ಸುಶ್ರಾವ್ಯವಾಗಿತ್ತು. ತಮ್ಮ ವಿಶಿಷ್ಟ ಶೈಲಿಯಿಂದ ಪ್ರೇಕ್ಷಕರನ್ನು ಬೆರಗುಗೊಳಿಸುವ ಶ್ರುತಿಸಾಗರ್ ಇವರು ತೋಡಿ ರಾಗದಲ್ಲಿ ‘ಶ್ರೀಕೃಷ್ಣ ಭಜಮಾನ ಸಾ’ ಎಂಬ ಕೃತಿಯನ್ನು ವಾಚಿಸಿದರು. ಪಕ್ಕ ವಾದ್ಯದಲ್ಲಿ ಕೇಶವ ಮೋಹನ್ ಕುಮಾರ್ ಪಿಟೀಲು, ಬಾಂಬೆ ಗಣೇಶ್ ಮೃದಂಗ, ಶ್ರೀಜಿತ್ ವೆಳ್ಳತ್ತೂರು ಘದಂ, ಪಯ್ಯನ್ನೂರು ಗೋವಿಂದ ಪ್ರಸಾದ್ ಮುಖಶಂಕು ನುಡಿಸಿದರು. ದೀಪಾವಳಿ ಸಂಗೀತೋತ್ಸವದ ಹನ್ನೊಂದನೇ ದಿನ ದಿನಾಂಕ 30 ಅಕ್ಟೋಬರ್ 2025ರಂದು ಗೋಶಾಲಾ ನಂದಿ ಮಂಟಪದಲ್ಲಿ ವಿದ್ಯಾ ಕಲ್ಯಾಣರಾಮನ್ ಇವರಿಂದ ಸಂಗೀತ ಕಛೇರಿ, ಅನಂತಕೃಷ್ಣನ್ ಮತ್ತು ಶ್ರೇಯಾ ಅನಂತ್ ಇವರಿಂದ ಪಿಟೀಲು ಕಛೇರಿ, ಸುಕನ್ಯಾ ರಾಮ್ ಗೋಪಾಲ್ ಇವರಿಂದ ಘಟ ತರಂಗ ಕಛೇರಿ, ರೋಹಿಣಿ ಶ್ರೀನಾಥ್ ಮತ್ತು ಶ್ರುತಿ ಕನ್ನನ್ ಬಾಲಕೃಷ್ಣನ್ ಮತ್ತು ರಮಣವೇ ಬಾಲಕೃಷ್ಣನ್ ಇವರಿಂದ ಸಂಗೀತ ಕಛೇರಿ ನಡೆಯಿತು. ಸುಕನ್ಯಾ ರಾಮ್…
ಮೂಡುಬಿದಿರೆ : ಕಾಂತಾವರ ಕನ್ನಡ ಸಂಘದ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್ ಪ್ರಾಯೋಜಕತ್ವದ 2025ರ ಸಾಲಿನ ಪ್ರತಿಷ್ಠಿತ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಮೈಸೂರಿನ ಡಾ. ಡಿ. ಎ. ಶಂಕರ್ ಅವರ ‘ಇರುವೆಯಂತೆ ನನ್ನೊಡನೆ’ ಎಂಬ ಹಸ್ತಪ್ರತಿಯು ಗೆದ್ದುಕೊಂಡಿದೆ. ಎಂದು ಸಂಘದ ಅಧ್ಯಕ್ಷರಾದ ಡಾ. ನಾ. ಮೊಗಸಾಲೆಯವರು ಘೋಷಿಸಿದ್ದಾರೆ. ಈ ಸಾಲಿನ ಸ್ಪರ್ಧೆಗೆ ಒಟ್ಟು 28ಹಸ್ತಪ್ರತಿಗಳು ಬಂದಿದ್ದು ಪ್ರಸಿದ್ಧ ವಿಮರ್ಶಕರಾದ ಬೆಳಗೋಡು ರಮೇಶ ಭಟ್ (ವಿಭಾವರಿ ಭಟ್) ಮತ್ತು ಹೊಸ ಪೀಳಿಗೆಯ ವಿಮರ್ಶಕರಾದ ವಿಕಾಸ ಹೊಸಮನಿ ಹಾವೇರಿ ಹಾಗೂ ಡಾ. ಸುಭಾಷ್ ಪಟ್ಟಾಜೆ, ಕಾಸರಗೋಡು ಅವರು ನೀಡಿದ ಅಂಕಗಳ ಆಧಾರದಲ್ಲಿ ಈ ಪ್ರಶಸ್ತಿಗಳನ್ನು ನಿರ್ಣಯಿಸಲಾಗಿದೆ. 1979ರಲ್ಲಿ ನಂದಳಿಕೆಯ ವರಕವಿ ಮುದ್ದಣನ ಹೆಸರಿನಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಯು ಹತ್ತು ಸಾವಿರದ ಗೌರವ ಸಂಭಾವನೆ, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದ್ದು ಪ್ರಶಸ್ತಿ ಪ್ರದಾನ ಸಮಾರಂಭವು 2026ರ ಫೆಬ್ರವರಿ ತಿಂಗಳಲ್ಲಿ ಪ್ರಶಸ್ತಿಯ ಪ್ರಾಯೋಜಕರಾದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಅವರ ನೇತೃತ್ವದಲ್ಲಿ ನೆರವೇರಲಿರುವುದು ಎಂದು ಸಂಘದ ಪ್ರಧಾನ…
ಬಿ.ಸಿ. ರೋಡ್ : ಶ್ರೀ ದೇವಿ ನೃತ್ಯಾರಾಧನಾ ಕಲಾ ಕೇಂದ್ರ (ರಿ.) ಪುತ್ತೂರು ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ಪ್ರಸ್ತುತ ಪಡಿಸುವ ‘ನೃತ್ಯ ಧಾರಾ’ ಮತ್ತು ‘ಕಲಾನಯನ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 01 ನವೆಂಬರ್ 2025 ರಂದು ಸಂಜೆ 3-30 ಗಂಟೆಗೆ ಬಂಟ್ವಾಳ ಬಿ.ಸಿ. ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ನೃತ್ಯ ಗುರುಗಳಾದ ವಿದುಷಿ ನಯನ ವಿ. ರೈ ಇವರು ವಹಿಸಲಿದ್ದು, ಪುತ್ತೂರಿನ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕರು ಮತ್ತು ಪುರಾತತ್ವ ಸಂಶೋಧಕರಾದ ಡಾ. ವೈ. ಉಮಾನಾಥ ಶೆಣೈ ಇವರಿಗೆ ‘ಕಲಾನಯನ’ ಪ್ರಶಸ್ತಿ ಪ್ರದಾನ ಮತ್ತು ಖ್ಯಾತ ಬೆಳಕು ವಿನ್ಯಾಸಕಾರರಾದ ಪೃಥ್ವಿನ್ ಕೆ. ಉಡುಪ ಇವರನ್ನು ಸನ್ಮಾನಿಲಾಗುವುದು. ಸಂಸ್ಥೆಯ ವಿದ್ಯಾರ್ಥಿಗಳಿಂದ ಪ್ರಸ್ತುತಗೊಳ್ಳುವ ‘ನೃತ್ಯ ಧಾರಾ’ ಭರತನಾಟ್ಯಕ್ಕೆ ನಟುವಾಂಗದಲ್ಲಿ ವಿದುಷಿ ರೋಹಿಣಿ ಉದಯ್, ಹಾಡುಗಾರಿಕೆಯಲ್ಲಿ ಶರತ್ ಮಂಗಳೂರು ಮತ್ತು ವಿದುಷಿ ಗಾನ ಪಿಲಿಂಜ, ಮೃದಂಗದಲ್ಲಿ ವಿದ್ವಾನ್ ಬಾಲಚಂದ್ರ ಭಾಗವತ್ ಉಡುಪಿ, ಕೊಳಲಿನಲ್ಲಿ ವಿದ್ವಾನ್…
ಬಂಟ್ವಾಳ : ಬಿ.ಸಿ. ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ದಿನಾಂಕ 26 ಅಕ್ಟೋಬರ್ 2025ರಂದು ಗುರು ವಿದುಷಿ ಶ್ರೀಮತಿ ವಿದ್ಯಾ ಮನೋಜ್ ಇವರ ನಿರ್ದೇಶನದಲ್ಲಿ ಕಲ್ಲಡ್ಕದ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ (ರಿ) ಇವರಿಂದ ಭರತನಾಟ್ಯ ಮಾರ್ಗಂ ಕಾರ್ಯಕ್ರಮ ಸಂಪನ್ನಗೊಂಡಿತು. 2001ರಲ್ಲಿ ವಿದ್ಯಾ ಮನೋಜ್ ಇವರ ನಿರ್ದೇಶನದಲ್ಲಿ ಪ್ರಾರಂಭವಾದ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ ಸಂಸ್ಥೆಯು ಇದೀಗ 25ನೇ ವರ್ಷಕ್ಕೆ ಪಾದಾರ್ಪಣೆಯನ್ನು ಮಾಡುತ್ತಿದೆ. ಈ ನಿಟ್ಟಿನಲ್ಲಿ ‘ರಜತ ಕಲಾಯಾನ’ ಎಂಬ ಶೀರ್ಷಿಕೆಯೊಂದಿಗೆ ವರ್ಷಪೂರ್ತಿ ವಿವಿಧ ಭರತನಾಟ್ಯ ಸಂಬಂಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಯನ್ನು ಹೊಂದಿದೆ. ರಜಿತ ಕಲಾಯಾನದ ಮೊದಲ ಕಾರ್ಯಕ್ರಮ ಈ ಸಂಸ್ಥೆಯಿಂದ ವಿದ್ವತ್ ಪದವಿ ಪಡೆದಿರುವ 20 ವಿದ್ಯಾರ್ಥಿನಿಯರಿಂದ ಭರತನಾಟ್ಯ ಮಾರ್ಗಂ ಕಾರ್ಯಕ್ರಮ ನಡೆಯಿತು. ವಿವಿಧ ಉನ್ನತ ಹುದ್ದೆಗಳಲ್ಲಿ ಹಾಗೂ ವಿದ್ಯಾಭ್ಯಾಸದಲ್ಲಿ ನಿರತರಾಗಿರುವ ಈ ಸಂಸ್ಥೆಯ ಹೆಮ್ಮೆಯ ವಿದುಷಿಯರನ್ನು ಒಂದೇ ಸೂರಿನಡಿಯಲ್ಲಿ ತಂದು ಅತ್ಯುತ್ತಮ ಭರತನಾಟ್ಯದ ಮಾರ್ಗಬಂಧದಲ್ಲಿ ಬರುವಂತಹ ನೃತ್ಯಬಂಧಗಳನ್ನು ಸಮರ್ಥವಾಗಿ ನಡೆಸಿರುವುದು ಇದರ ವಿಶೇಷತೆ ಹಾಗೂ ಹೆಗ್ಗಳಿಕೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಚಕ್ರಪಾಣಿ ನೃತ್ಯಕಲಾ…