Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಬೆಂಗಳೂರಿನ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನ | ಮೇ 17

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಭರತನಾಟ್ಯ ವೈವಿಧ್ಯ
    Bharathanatya

    ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಭರತನಾಟ್ಯ ವೈವಿಧ್ಯ

    August 26, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ದಿನಾಂಕ 17 ಆಗಸ್ಟ್ 2024ರಂದು ಸನಾತನ ನಾಟ್ಯಾಲಯದ ನೃತ್ಯ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಭರತನಾಟ್ಯ ವೈವಿಧ್ಯ ‘ಸನಾತನ ನೃತ್ಯೋತ್ಸವ’ ಕಾರ್ಯಕ್ರಮ ನಡೆಯಿತು.

    ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾರ್ಕಳದ ಅಕ್ಷಯ ಗೋಖಲೆ ಇವರು ‘ಲಕ್ಷ್ಮೀಯೂ ಅವಳೇ ದುರ್ಗೆಯೂ ಅವಳೇ’ ಎಂಬ ವಿಷಯದ ಬಗ್ಗೆ ಮಾತನಾಡಿ “ಹೆಣ್ಣು ಎಂದರೆ ಹೆಂಡತಿ ಎಂದು ಜಗತ್ತಿನಲ್ಲಿ ಎಲ್ಲರೂ ಸ್ವೀಕರಿಸಿದರೆ, ಭಾರತದಲ್ಲಿ ಆಕೆಯನ್ನು ಗೃಹ್ಯಾಗ್ನಿ ಎನ್ನುವ ಧರ್ಮಾಗ್ನಿಯನ್ನು ತರುತ್ತಾಳೆ. ಮನೆಯ ಯಜಮಾನನನ್ನು ಗೃಹಸ್ಥನನ್ನಾಗಿ ಮಾಡುತ್ತಾಳೆ ಎಂದು ಭಾವಿಸಿರುವುದು ಭಾರತೀಯ ಸಮಾಜ. ದುರ್ಗೆಯನ್ನು ಜಗಜ್ಜನನಿ ಎಂದು ಕರೆಯುತ್ತೇವೆ. ಕಲಿಯುಗದಲ್ಲಿ ಭಾರತದ ಪ್ರತಿಯೊಂದು ಹೆಣ್ಣಿನಲ್ಲಿಯೂ ದುರ್ಗೆಯ ಅಂಶವಿದೆ. ಜ್ಞಾನ, ಕರುಣೆ, ಪ್ರೀತಿ, ವಿಶ್ವಾಸ ಜೊತೆಗೆ ಯಾವಾಗೆಲ್ಲ ರಾಕ್ಷಸರ ಸಂಹಾರದ ಸಮಯದಲ್ಲಿ ವಧಿಸುವ ದೇವಿಯ ರೂಪವನ್ನೂ ತಾಳುತ್ತಾಳೆ ಎಂಬುದನ್ನು ಮರೆಯಬಾರದು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂದರ್ಭದಲ್ಲಿ ಸಂಭ್ರಮಿಸುವ, ಸ್ವಾತಂತ್ರ್ಯ ತಂದುಕೊಡಲು ಶ್ರಮಿಸಿದವರನ್ನು ಗೌರವಿಸಲು ಸಿಕ್ಕಿದ ಅವಕಾಶವನ್ನು ತಿರಸ್ಕರಿಸಬಾರದು. ಜೊತೆಗೆ ಸಾಮಾಜಿಕವಾಗಿ ಹೆಣ್ಣು ಸಶಕ್ತವಾಗಿ ಎದ್ದುನಿಲ್ಲುವಂತೆ ಆಕೆಗೆ ಶಿಕ್ಷಣವನ್ನು ಕೊಡಬೇಕು. ಆ ಜವಾಬ್ದಾರಿಯನ್ನು ಮರೆಯಬಾರದು” ಎಂದು ಕಿವಿ ಮಾತು ಹೇಳಿ ದೇಶರಕ್ಷಣೆಯ ವಿಷಯಕ್ಕೆ ಬಂದಾಗ ಪತಿಗಿಂತ ದೇಶವೇ ಮೊದಲು ಎಂದು ಭಾವಿಸಿದ ಉಳ್ಳಾಲದ ರಾಣಿ ಅಬ್ಬಕ್ಕನ ಕಥೆಯೇ ನಮ್ಮ ಮುಂದಿದೆ” ಎಂದು ಹೇಳಿದರು.

    ಅತಿಥಿಗಳಾಗಿ ಭಾಗವಹಿಸಿದ ಸಂಜೀವಿನಿ ಹೋಲಿಸ್ಟಿಕ್‌ ವೆಲ್‌ನೆಸ್‌ ಸೆಂಟರ್‌ನ ರೇವತಿ ಸನಿಲ್‌, “ಭಾರತ ದೇಶವು ವಿಭಿನ್ನತೆಯಲ್ಲಿ ಏಕತೆಯನ್ನು ಸೂಚಿಸುವ ದೇಶದ ಮಹತ್ವವನ್ನು ಅರಿಯಬೇಕು” ಎಂದು ಹೇಳಿದರು. ಅಲ್ಲದೆ ಸ್ವಾತಂತ್ರ್ಯ ಉತ್ಸವದ ಸಂದರ್ಭದಲ್ಲಿ ನಾಟ್ಯಾಲಯದ ವಿದ್ಯಾರ್ಥನಿಯರಿಗೆ ಶುಭಾಶಯಗಳನ್ನು ಕೋರಿದರು. ಸನಾತನ ನಾಟ್ಯಾಲಯದ ನಿರ್ದೇಶಕರಾದ ಚಂದ್ರಶೇಖರ ಕೆ. ಶೆಟ್ಟಿ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.

    ಸನಾತನ ನಾಟ್ಯಾಲಯದಲ್ಲಿ ಭರತನಾಟ್ಯ ಕಲಿತು 2020-21ನೇ ಸಾಲಿನಲ್ಲಿ ಜೂನಿಯರ್‌, ಸೀನಿಯರ್‌ ಮತ್ತು ವಿದ್ವತ್‌ ಪರೀಕ್ಷೆ ಬರೆದ ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಈ ವಿದ್ಯಾರ್ಥಿನಿಯರ ಪಟ್ಟಿಯನ್ನು ವಿಜಿತಾ ಶೆಟ್ಟಿ ಮತ್ತು ವಿದುಷಿ ಛಾಯಶ್ರೀ ವಾಚಿಸಿದರು. ಬಳಿಕ ನಾಟ್ಯಗುರು ವಿದುಷಿ ಶಾರದಾಮಣಿ ಶೇಖರ್‌ ಮತ್ತು ವಿದುಷಿ ಶ್ರೀಲತಾ ನಾಗರಾಜ್‌ ನಿರ್ದೇಶನದಲ್ಲಿ ಸನಾತನ ನಾಟ್ಯಾಲಯದ ವಿದ್ಯಾರ್ಥಿನಿಯರು ಭರತನಾಟ್ಯ ಕಾರ್ಯಕ್ರಮ ಪ್ರಸ್ತುತಪಡಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಸಂತ ಅಲೋಶಿಯಸ್ ಪರಿಗಣಿತ ವಿ. ವಿ. ಯಲ್ಲಿ ಸುಲೋಚನಾ ಪಚ್ಚಿನಡ್ಕ ಇವರ ಕೃತಿಗಳ ಲೋಕಾರ್ಪಣೆ 
    Next Article ಸುಬ್ಬಯ್ಯಕಟ್ಟೆ ಬಿ. ಎ. ಮಹಮ್ಮದ್ ಸ್ಮಾರಕ ಮಂದಿರದಲ್ಲಿ ಗಮಕ ಶ್ರಾವಣ ಕಾರ್ಯಕ್ರಮ
    roovari

    Comments are closed.

    Related Posts

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025

    ಮಾಣಿಕ್ಯ ಪ್ರಕಾಶನದ 2025ನೇ ಸಾಲಿನ ರಾಜ್ಯಮಟ್ಟದ ವಿವಿಧ ದತ್ತಿ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನ

    May 10, 2025

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.